ಒಟ್ಟು 246 ಕಡೆಗಳಲ್ಲಿ , 68 ದಾಸರು , 233 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉರುಟಣೆ ಪದ ಜಯ ಜಯ ರಾಮ ಜಯಜಯ ಜಯ ನಮ್ಮ ಜಾನಕೀ ರಮಣಗೇ ಪ ಇಂದಿರಾದೇವಿ ರಮಣಿ ಶರಣ್ಯಮಂದರ ಗಿರಿಧರ ಶರಣ್ಯಕಂದನ ನುಡಿ ಕೇಳಿ ಕಂಬದಿಂದಲಿ ಬಂದಸಿಂಧು ಶಯನ ಸಲಹುವಾದೆನ್ನ 1 ಗುರು ವಿಜಯದಾಸರ ಚರಣಾಸರಸಿರುಹವ ಮನದೊಳಾಗಿರಿಸಿಹರಿ ಸರ್ವೋತ್ತಮ ಮಂಗಳ ಚರಿತೆಯವಿರಚಿಸುವೆನು ಸುಜನರು ಕೇಳಿ 2 ಮುತ್ತೈದೆರೆಲ್ಲಾ ಬೇಗಾದಿ ಬಂದುಅರ್ತಿಯಿಂದಲಿ ಶೃಂಗಾರವಾಗಿಚಿತ್ತಜನಯ್ಯನ ಉರುಟಣೆ ಎನುತಾಲಿಮತ್ತ ಗಮನೇರು ಬಂದರಾಗಾ 3 ಸರಸ್ವತಿ ಭಾರತಿ ಮೊದಲಾದಸರಸಿಜ ಮುಖಿಯರೆಲ್ಲಾರು ನೆರೆದುಸರಸ ಉರುಟಣಿಯ ಮೊಡಬೇಕೆನುತಾಲಿಕರೆಸಿದರಾಗ ಮುತ್ತೈದೆರಾಗ 4 ಹೇಮಮಯದ ಮಂಟಪದೊಳಗೆಪ್ರೇಮದಿಂದಲಿ ಹಾಸಿಕೆ ಹಾಕಿಸೋಮವದನನ ಗುಣವ ಕೊಂಡಾಡುತಕಾಮಿನಿಯರು ಕರೆದಾರು ಹಸೆಗೇ 5 ಕೌಸಲ್ಯಾದೇವಿ ತನಯಾನೆ ಕೇಳುಹರ್ಷದಾಯಕ ರಕ್ಷಕನೇಳುಹಂಸವಾಹನನಯ್ಯನೆ ಹಸೆಗೆ ಏಳೇಳೆಂದುಹಂಸಗಮನೆಯರು ಕರೆದರು ಹಸೆಗೆ 6 ನಿಗಮವ ತಂದಾ ಮಚ್ಚ್ಯಾನೇಳುನಗವ ಬೆನ್ನಿಲಿ ಪೊತ್ತ ಕೂರ್ಮನೇಳುಜಗವನುದ್ಧರಿಸಿದ ವರಹ ಮೂರುತಿ ಏಳುಮೃಗ ನರ ರೂಪ ಹರಿಗೇಳೆಂದಾರು 7 ಸುರನದಿಯ ಪಡೆದ ವಾಮನನೇಳುಪರಶುರಾಮ ಮೂರುತಿ ಏಳುಶರಧಿಯ ದಾಟಿ ಸೀತೆಯ ತಂದಶಿರಿ ರಾಮಕೃಷ್ಣ ಹಸೆಗೇಳೆಂದರು 8 ವ್ರತವನಳಿದ ಬೌದ್ಧನೇಳುಅತಿಬಲ ರಾಹುತನೇಳುಪೃಥಿವಿಗೊಡೆಯ ರಾಮನೇಳೆಂದುಅತಿ ಚಮತ್ಕಾರದಿ ಕರೆದರಾಗ 9 ಇಂತು ಬಗೆಯಾಲಿ ತುತಿಸಿ ಕರೆಯೇಕಂತುಜನಕನು ಹರುಷದಾಲೆದ್ದುಕಾಂತೆ ಕೈ ಪಿಡಿದು ನಡೆ ತರಲಾಗಲುನಿಂತಾರು ನಾರಿಯರೆಲ್ಲರಾಗ 10 ಎತ್ತಿಕೊಂಬುವದು ರಾಘವ ನಿಮ್ಮಪತ್ನಿಯ ನಡೆಸಲಾಗದು ಕೇಳಿನೀ ಪೃಥ್ವೀಶನಾದರೆ ನಮಗೇನೆನುತಾಲಿಸುತ್ತು ಕಟ್ಟಿದರು ವಾಮಾಕ್ಷಿಯರು 11 ಮಂಗಳಾಂಗಿಯನು ಎತ್ತಿಕೊಂಡು ರಾಮಹಿಂಗಾದೆ ದ್ವಾರದಲ್ಲಿಗೆ ಬರಲುಮಂಗಳದೇವಿಯ ಹೆಸರು ಹೇಳೆನುತಾಲಿಅಂಗನೆಯರು ಅಡ್ಡಗಟ್ಟಿದರಾಗಾ 12 ನಾಳೆ ಹೇಳುವೆನು ಇವಳ ಹೆಸರುತಾಳಲಾರೆನು ಭಾರವು ಎನಲುಶ್ರೀ ಲಕ್ಷ್ಮೀದೇವಿಯ ಹೆಸರು ಹೇಳಿದೆ ಬಿಡೆವೆಂದುಬಾಲೆಯರೆಲ್ಲಾರು ಇಟ್ಟರು ಕದವಾ 13 ಪುತ್ಥಳಿ ಗೊಂಬೆ ಹೆಸರು ಹೇಳೆನೆ ರಘು-ನಾಥಾನು ಎಂದಾಳು ಜಾನಕೀ 14 ಅಂಗಜನಯ್ಯಾ ಸತಿಯು ಸೀತೆಯ ಸಹಿತರಂಗು ಮಾಣಿಕದ ಹಾಸಿಕೆಯ ಮೇಲೆಶೃಂಗಾರದಿಂದಾಲಿ ಬಂದು ಕುಳ್ಳಿರಲಾಗಸುರರೆಲ್ಲಾ ಹಿಗ್ಗಿ ಕರೆದರು ಪೂ ಮಳೆಯಾ 15 ಸಾಸಿರ ನಾಮದ ಒಡೆಯ ಬಂದಾಶೇಷಶಯನಾ ಮೂರುತಿ ಬಂದಾಭಾಸುರಾಂಗನೆ ಸೀತೆ ಆಳಿದಾ ರವಿಕುಲಾ-ಧೀಶ ಬಂದಾನು ಎಂದಾರು ಕೇಳೆ 16 ವಾನರಾಧೀಶನೊಡೆಯಾ ಬಂದಾದಾನವಾಂತಕ ರಾಘವ ಬಂದಾ ಶ್ರೀ-ಜಾನಕೀದೇವಿ ಪ್ರಾಣದೊಲ್ಲಭ ಜಗ-ತ್ರಾಣ ಬಂದಾನು ಎಂದಾರು ಕೇಳೆ 17 ಸತ್ಯ ಸಂಕಲ್ಪ ಶ್ರೀ ಹರಿಯು ಬಂದಾಭೃತ್ಯ ಪಾಲಕ ದೊರೆಯು ಬಂದಾಮಿತ್ರೆ ಜಾನಕಿದೇವಿ ಪ್ರಾಣದೊಲ್ಲಭ ಸ-ರ್ವೋತ್ತಮ ಬಂದನೆಂದಾರು ಕೇಳೇ 18 ಸುಗ್ರೀವನ ಪರಿಪಾಲಕ ಬಂದಾ ಕ-ರಿಗ್ರಾಹ ಸಂಹಾರಿಕ ಬಂದಾವ್ಯಾಘ್ರ ಚರ್ಮಾಂಬರ ಸಖ ಸುಂದರವಿಗ್ರಹ ಬಂದಾ ಎಂದಾರು ಕೇಳೇ 19 ಇಂದ್ರನ್ನ ಪರಿಪಾಲಕ ಬಂದಾಚಂದ್ರನ್ನ ಪ್ರಭೆಯಾ ಸೋಲಿಪ ಬಂದಾಇಂದುವದನೆ ಸೀತೆ ಪ್ರಾಣದೊಲ್ಲಭ ರಾಮ-ಚಂದ್ರ ಬಂದನೆಂದಾರು ಕೇಳೇ 20 ಚಂದನ ಗಂಧೆಯರು ಎಲ್ಲಾರು ಕೂಡಿಗಂಧ ಕುಂಕುಮ ಅರಿಷಿಣ ಕಲಿಸಿಇಂದುವದನೆ ಸೀತೆಯ ಕೈ ಒಳಗಿಟ್ಟು ಶ್ರೀರಾಮ-ಚಂದ್ರಗೆ ಹಚ್ಚಿಸಿರೆಂದರಾಗ 21 ವಾರಿಜೋದ್ಭವ ಮೊದಲಾದವರುತಾರತಮ್ಯದಿಂದಾಲಿ ಕುಳಿತುವಾರಿಜಾಮುಖಿ ಸೀತೆ ನುಡಿಯೆಂದೆನುತಾಲಿಸಾರಿದರಾಗ ಸಂದಣಿಯರೆಲ್ಲಾ 22 ವಾಕು ಕೇಳಬೇಕೆಂದುಜಲಜ ಸಂಭವನು ನುಡಿದಾನು ನಗುತಾ 23 ಕಂಜವದನೆ ಜಾನಕೀದೇವಿಅಂಜಲಾಗ ನಿಮ್ಮ ಪುರುಷಾರಿಗೆಕುಂಜರ ವರದಾ ದಾಕ್ಷಿಣ್ಯ ಬ್ಯಾಡೆಂದುಅಂಜಾದೆ ನುಡಿದಾರು ನಸುನಗುತಾ 24 ದೋಷ ವರ್ಜಿತನೇ ಹರಿ ನಿಮ್ಮದೂಷಣೆ ಮಾಡಿದಳೆನ ಬ್ಯಾಡಿಮೋಸದಿಂದಲಿ ಬಲು ದೈತ್ಯರ ಕೊಂದ ಜಗ-ದೀಶ ನಿಮ್ಮ ಮುಖವಾ ತೋರೆಂದಾಳು 25 ದೇವಿ ಹಸ್ತದೊಳು ಅರಿಶಿನವ ಪಿಡಿದುಭಾವಜನಯ್ಯನ ನುಡಿದಾರಾಗದೇವರ ದೇವೋತ್ತಮ ಶಿಖಾಮಣಿದೇವಾ ನಿಮ್ಮಯ ಮುಖವಾ ತೋರೆಂದಾಳು 26 ಭಸ್ಮಾಸುರನ ಕೊಂದಾ ಬಹು ಶೂರನಾರಿಕಂಸನಳಿದಾ ಧೀರ ಅಸುರ ಹಿರಣ್ಯಕನಅಸುವ ಹೀರಿದ ದೊಡ್ಡಅಸುರಾಂತಕ ಮುಖವಾ ತೋರೆಂದಾಳು 27 ವಾಲಿಯ ಸಿಟ್ಟಿನಿಂದಾಲಿ ಕೊಂದುಕಾಲ ಯಮನಾನಸುವ ಯುಕ್ತಿಯಿಂದಾಭಳಿರೆ ಮಧುಕೈಟಭರ ಕೊಂದಾಕಾಲಾಂತಕ ಮುಖವ ತೋರೆಂದಾಳು 28 ಶ್ರೀನಾಥ ದ್ವಾರಕಾಪುರ ಮಾಡಿಆ ನಂದಿ ಗೋಮಂತಾ ಗಿರಿಗೊಲಿದೆವಾನರಾಧೀಶನಾ ಬಲು ಕೊಂಡಾಡುತ್ತದಾನವಾಂತಕಾ ಮುಖವಾ ತೋರೆಂದಾಳು 29 ಅರಿಶಿನವಾನು ಹಚ್ಚಿದಳು ಸೀತೆಅರಸನ ಫಣೆಗೆ ಕುಂಕುಮವಾ ಹಚ್ಚಿಸರಸದಿ ವದನಕ್ಕೆ ಗಂಧವಾ ಹಚ್ಚಲುಸುರರೆಲ್ಲಾ ನಕ್ಕಾರು ಕೈ ಹೊಡೆದು 30 ಪತಿ ಮೊದಲಾಗಿ ಚಪ್ಪಾಳೆನಿಟ್ಟುಹರಸಿದರಾಗ ಜಾನಕಿದೇವಿಶಿರಿಯು ಗೆದ್ದಳು ಅಯೋಧ್ಯದಅರಸು ಸೋತನೆಂದು ನಗುತೆ 31 ಬಾಹುಗಳಿಗೆ ಗಂಧವಾ ಹಚ್ಚಿಸಿಮ್ಯಾಲೆ ಪರಿಮಳಾ ಪೂಸಿದಳುಶ್ರೀ ಹರಿಯ ಚರಣಾವ ಪಾಲಿಸಬೇಕೆನುತಲಿಸರಸಾದಿಂದಾಲಿ ನುಡಿದಾಳು ಜಾನಕೀ 32 ಪಾಷಾಣ ಪೆಣ್ಣಾ ಮಾಡಿದಾ ಚರಣಶೇಷನಾ ಮ್ಯಾಲೆ ಮಲಗಿದ ಚರಣಭಾಸುರಾಂಗಿ ನಿನ್ನ ಲೀಲೆಯಾ ತೋರಿದಾಶೇಷಶಯನ ಚರಣಾ ಪಾಲಿಸೆಂದಾಳು 33 ಆಕಾಶಗಂಗೆಯ ಪಡೆದಾ ಚರಣಾಶಕಟನ ಮುರಿದೊಟ್ಟಿದ ಚರಣಾಭಕುತ ಜನರ ಸೇವೆ ಕೊಂಬ ಚರಣರಕ್ಕಸ ದಲ್ಲಣ ಚರಣಾವ ಪಾಲಿಸೆಂದಾಳು 34 ಅಂಕುಶದೊಜ್ರ ರೇಖೆಯ ಚರಣಾಕುಂಕುಮಾಂಕಿತ ರಾಶಿಯ ಚರಣಾಬಿಂಕದಿಂದ ಕುರುಪತಿಯ ಕೆಡಹಿದ ಬಿರು-ದಾಂಕ ನಿನ್ನಯ ಚರಣಾ ಪಾಲಿಸೆಂದಾಳು 36 ನಸುನಗುತ ಹರಿ ಚರಣ ವೀಕ್ಷಿಸಿಶಶಿಮುಖಿ ಸೀತೆ ಆನಂದದಿಂದಾಮಿಸಣಿಯಂತೊಪ್ಪುವ ಅರಿಶಿನೆಣ್ಣೆಯಾಎಸೆವ ಪಾದಕ್ಕೆ ಹಚ್ಚಿದಳಾಗ 37 ಪಾದ ಪದ್ಮಕ್ಕೆ ಎರಗಿಪಾಲಿಸಬೇಕೆಂದಾಳು ಅಂಗನೆ 38 ಕರಗಳ ಪಿಡಿದೆತ್ತಿದನು ರಾಮಾಹರಸಿದ ಮುತ್ತೈದಾಗೆಂದುಪರಮ ಪತಿವ್ರತೆಯೆನಿಸು ಎನುತಾಲಿಹರಿ ಹರಸೀದಾನು ಹರುಷದಲ್ಲಾಗ 39 ಅಂಡಜವಾಹ ಭಗವಂತನುಹೆಂಡತಿಯ ಮುಖವ ನೋಡೆನುತಲಿಗಂಡು ಮಕ್ಕಳ ಘನವಾಗಿ ಪಡೆಯೆಂದುಪುಂಡರೀಕಾಕ್ಷ ಹರಸಿದನಾಗ 40 ಮಂದಗಮನಿಯ ಕುಳ್ಳಿರಿಸಿಇಂದಿರೇಶ ಮುಂಗುರಳಾ ತಿದ್ದಿಎಂದೆಂದಿಗೆ ಅಗಲದಿರೆಂದು ರಾಮ-ಚಂದ್ರಾನು ಹರಸಿದನಾಗ 41 ಭೂಲೋಕದೊಡೆಯ ರಾಘವರಾಯನಶ್ರೀಲತಾಂಗಿಯ ಕುಳ್ಳಿರಿಸಿದನುಬಾಲಕಿಯರೆಲ್ಲಾರು ಗಲಿಬಿಲಿ ಮಾಡಾದಿರೆಂದುಫಾಲಾಲೋಚಾನು ನುಡಿದನು ನಗುತ 42 ಕಂತುಜನಕ ರಾಘವಾ ನಿಮ್ಮಾಪಂಥ ಸಲ್ಲಾದು ಜಾನಕಿಯೊಡನೆಯಂತ್ರವಾಹಕ ಶ್ರೀರಾಮ ಏಳೇಳೆಂದುಕಾಂತೆಯರೆಲ್ಲರು ನುಡಿದಾರು ನಗುತಾ 43 ಭಾಗೀರಥಿ ಪಾರ್ವತಿದೇವಿಬೇಗದಿ ಅರಿಷಿನ ಕೈಲಿ ಕಲಿಸಿಸಾಗರ ಶಯ್ಯನ ಕೈಯೊಳಗಿಟ್ಟುಬಾಗಿ ಸೀತೆಯ ಮುಖಕೆ ಹಚ್ಚೆಂದಾರು 44 ನಿಂದಲ್ಲಿ ನಿಲ್ಲಾದೆ ಚಂಚಳೆ ಲಕ್ಷ್ಮೀಬಂಧು ಬಳಗವನಗಲಿಸುವ ತರಳೆತಂದೆ ಮಕ್ಕಳೊಳಗೆ ಕದನವ ನಿಡುವಂಥಮಂದಹಾಸೆ ಮುಖವ ತೋರೆಂದಾನು ರಾಮಾ 45 ಅಣ್ಣನ ವಂಚಿಸಿ ಬೇಡಿದವಳೇಮನ್ನೆ ಮನ್ನೆಯರಾ ಕಳಿಸಿದವಳೇಚೆನ್ನಾಗಿ ಮನೆಯೋಳಿದ್ದು ಪೋಗುತಚೆನ್ನಾಯಿತೆ ಮುಖವ ತೋರೆಂದಾನು 46 ಭಾಷೆಯನು ಕೊಟ್ಟು ತಪ್ಪಿಸುವಳೆಕಾಸುವೀಸಾಕೆ ವತ್ತಿ ಬೀಳುವಳೆಹೇಸಿಕಿಲ್ಲದೆ ಕುಲಹೀನನ ಮನೆಯೊಳುವಾಸವಾಗಿರುವಾ ಮುಖವ ತೋರೆಂದಾನು 47 ರಾಮಚಂದ್ರಾನು ಅರಿಶಿನ ಗಂಧವಭೂಮಿಜಳಿಗೆ ಹಚ್ಚಿದನಾಗಾಸಾಮಜಗಮನೆಯ ಹಣೆಗೆ ಕುಂಕುಮ ಹಚ್ಚಿಪ್ರೇಮದಿ ಪರಿಮಳ ಪೂಸಿದಾನು 48 ಕುಸುಮ ದಂಡೆಯ ಮಾಡಿದರುಬಾಸಿಂಗವನು ಕಟ್ಟಿದಾರುಭೂಸುರರೆಲ್ಲರು ಮಂತ್ರಾಕ್ಷತೆ ತಳಿದು ನಿ-ರ್ದೋಷನಾಗೆಂದು ಹರಸಿದರು 49 ಇಂದುಮುಖಿಯರೆಲ್ಲಾರು ಕೂಡಿನಂದದಿ ಜಾನಕಿಗೆ ವೀಳ್ಯವನಿತ್ತುಅಂದಮಾಣಿಕದ ಅಕ್ಷತೆಗಳ ತಳಿದುಮಂದರೋದ್ಧರನ ಹರಿಸಿದರು 50 ದೇವಿಯನ್ನೆತ್ತಿಕೊಂಡು ರಾಮದೇವರ ಮನೆಗೆ ಬಾಹೋದು ಕಂಡುಭಾವುಕರೆಲ್ಲಾ ಹೆಸರು ಪೇಳೆಂದೆನುತದೇವಿ ರಘುನಾಥನೆಂದು ಪೇಳಿದಳಾಗ 51 ಇಂದುಮುಖಿಯರೆಲ್ಲಾರು ಕೂಡಿಇಂದಿರೇಶಾನೆ ಹೆಸರು ಪೇಳೆನಲುಎಂದಾ ಮೇಲೆ ಜಾನಕಿಯೆಂತೆಂದುಮಂದರಧರನು ನುಡಿದನಾಗ 52 ಸತಿಪತಿಯರಿಬ್ಬರು ಕೂಡಿಅತಿಶಯದಲಿ ನಮಸ್ಕರಿಸಿದಾರುಕ್ಷಿತಿಯ ಸುರರಿಗೆ ಲೀಲೆಯ ತೋರಿದ ದೇವಾಪತಿತ ಪಾವನ್ನ ಎನ್ನ ಸಲಹು ಎಂದಾನು 53 ಈ ಕಥೆಯನು ಆದರದಿಂದಾ ಬರೆದು ಹೇ-ಳಿ ಕೇಳುವ ಜನರಾಶ್ರೀಕಾಂತನೊಲಿದು ಕರುಣಿಸುವ ತಾ ಸಿದ್ಧನೇಮದಿಂದಾ ಪಾಡಿರಿ ಜನರು 54 ಕುರುಡಾನು ಈ ಕಥೆಯಾನು ಕೇಳಿದರೆಕರುಣದಿಂದಾಲಿ ಕಂಗಳ ಬರಿಸುವಶರಣವತ್ಸಲ ತನ್ನ ಶರಣರೊಳಿಟ್ಟುಪರಿಪಾಲಿಸುವನು ಶತಸಿದ್ಧ 55 ಸಿರಿ ಒದಗುವದುದಾರ ಇಲ್ಲದ ಬ್ರಹ್ಮಚಾರಿ ತಾ ಕೇಳಲುನಾರಿಯ ಸಹಿತೆ ವಾಸಿಸುವನು 56 ಉದ್ಯೋಗ ಇಲ್ಲದವನು ಕೇಳಿದರೆಸದ್ಯ ಐಶ್ವರ್ಯ ಒದಗುವದು ಸಿದ್ಧಮುದ್ದು ಸುತರಿಲ್ಲದ ಸ್ತ್ರೀಯು ಕೇಳಲುಬುದ್ಧಿವಂತ ಸುತರಾಗುವರು ಸಿದ್ಧ 57 ಮೂರ್ತಿ 58 ಕಮಲ ಧರಿಸಿಪ್ಪಪಾವನ ಮೂರುತಿ ಹೃದಯಾದಲ್ಲಿದೇವಿ ಸಹಿತವಾಗಿ ಕಾವನು ಕರುಣಾದಿನೀವೆಲ್ಲಾರು ತಿಳಿರಿ ಜನರು 59 ಜಾಹ್ನವಿ ಜನಕನುಜಯ ಜಯವೆಂದು ಮಂಗಳವ ಪಾಡೇ 60
--------------
ಮೋಹನದಾಸರು
ಎಂತು ಮರೆಯಬಹುದು ನಿಮ್ಮ ಹೇಳು ಗುರುರಾಯ | ಅಂತರಂಗದೀ ನೆನೆದು ಪಡೆಯಬೇಕು ಸುಖಾಶ್ರಯಾ ಪ ತಂದೆ ನೀನೇ ತಾಯಿ ನೀನೇ ಬಂಧು ಬಳಗ ನೀನೇ | ಹೊಂದಿ ಹರುಷಬಡುವಗತಿಯ ಗುರು ದೈವ ನೀನೇ 1 ತಂದು ಜಠರದಲ್ಲಿ ಜನುಮ ಉಣಿಸಿ ಉಡಿಸಿ ಬೆಳೆಸೀ | ಛಂದದಿಂದಲಿ ಹೊರೆವೆಯಿನ್ನು ಬೇಡಿದನು ಸಲಿಸಿ 2 ಮರೆಯಲಿಕ್ಕೆ ದೇಶಗ್ರಾಮ ವೃತ್ತಿಗೃಹಗಳಲ್ಲಾ | ಕಾಯ ಸುಖದ ದ್ರವ್ಯ ಧನವಲ್ಲಾ3 ಮರಹು ಮರಸಿ ಅರವ್ಹಿಲಿರಿಸಿ ಇರಹು ಘನವನರಸಿ | ಗುರು ಮಹಿಪತಿ ಸ್ವಾಮಿ ಕಾಯಿದೇ ಕಂದನುದ್ಧರಿಸಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂದಿಗೆ ಶ್ರೀಹರಿಯಾ ಮಾತಿಲಿ ಕಾಲವು ಕಳೆದಲ್ಲಿ ಘನವೇನಿಲ್ಲಯ್ಯ ಪ ಸ್ಥಳಕುಲ ಮೋದಿಸಿ ತಾಂಡವಮೂರ್ತಿಯ ಕುಲನೆನಿಸಿ ಮಾರ್ಗದಲಿ ಕುಲನೆಲೆ ತಿಳಿದು ಕಾಣುತಹೋಗುವ ನೆನೆಗಳ್ಳರ ಕೂಡೆ ಚಲೊ ಚಲೊ ಬೋಧಿಗೆ ಒಳಗಾಗಿ ಮಧುರಸ ಚಂಚಲ ನತಿ------ದು ಭಲ ಭಲ ಎನಿಸಿಕೊ ಬೇಗನೆ ಪರಮ ಭಕ್ತರ ಒಳಗೆಂದೂ 1 ಸರಸರ ಮಾರ್ಗದ ಸರಳಿಯ ತಿಳಿದಾ ಶರಣರ ನೆಲೆಗಾಣೊ ನೆರೆಹೊರೆಲಿರುವರ ಕರಕರಿಗಳುಯೆಂಬ ಕಲ್ಮಿಷ-----ಕಾಣೊ ಹರಿಗುರು ಕರುಣಾದಿ ಅಂತರಂಗದಿ ಅರಿತಿರುವರ ಕೂಡೋ ಪರಿ ಪರಿಯಲಿ ಆ ಭಂಡಾರದ ಗುರುಭಾರವು ನೀನೋಡೊ 2 ಮನಘನ ಕಾಂತಿಯ ಮಹಿಮೆಯ ತಿಳಿದಾ ಮರ್ಮಜ್ಞರ ಬೆರಿಯೊ ದಿನ ದಿನ ಸಂಭ್ರಮವನು ಅಘಸರಿಸಿ ದೃಢಭವವು ಪಿಡಿಯೊ ತನುವನು------ದ್ರಿಸಿ ತಾರಕ ಜಪಿಸಿ ಧನ್ಯನಾಗೊ ಇನ್ನೂ ದೀನಜನ ರಕ್ಷಕ ಧೀರ 'ಹೆನ್ನೆ ವಿಠ್ಠಲನ’ ಧಿಟ್ಟದಿ ಸ್ಮರಿಸಿನ್ನು 3
--------------
ಹೆನ್ನೆರಂಗದಾಸರು
ಎನ್ನ ಕಂಗಳಿಗೆ ತೋರೊ ಶ್ರೀಕೃಷ್ಣಪ. ಕರಿಯ ಮೊರೆ ಲಾಲಿಸಿದಿ ಬೇಗನೆನೆರೆದ ಸಭೆಯಲಿ ದ್ರೌಪದಿಗೆ ಅಭಯವನಿತ್ತಿ ಅಡವಿಅರಣ್ಯದಿ ಅಹಲ್ಯೆಯ ಸಲಹಿದಿಮುಚುಕುಂದನ ರಕ್ಷಿಸಿದಿ 1 ಸೂರ್ಯನುದಿಸುತ ಅಂತ್ಯಕಾಲದಿಶರತಲ್ಪದಲಿ ಅವಗೆ ತೋರಿದಿಶರಣು ಕಾಳೀಪಣೆಯ ಮೇಲಿಟ್ಟ ಮುದ್ದುಚರಣವ ತೋರೊ ರಂಗನಾಥ 2 ಪುಟ್ಟ ಪ್ರಹ್ಲಾದನ ಸಲಹಿದಿಪಟ್ಟವನು ವಿಭೀಷಣನಿಗೆ ಸ[ಲಿಸಿ]ದಿನೆಟ್ಟನಡವಿಲಿ ಬಂದ ಧ್ರುವನಆದರಿಸಿ ಕಾಯ್ದಿ ರಂಗನಾಥ 3 ಘನವಾಗಿ ಕ್ಷೀರಾಬ್ಧಿಯಲಿ ನಿಂತಿಉನ್ನಂತವಾಗಿದ್ದ ಸತ್ಯಲೋಕವನಾಳಿದಿ ಪ್ರಸನ್ನನಾಗಿಕ್ಷ್ವಾಕು ಕಾಯಗೆಒಲಿದ ಪಾದವ ತೋರೊ ರಂಗನಾಥ 4 ಎಷ್ಟು ಹೇಳಲಿ ನಿಮ್ಮ ಮಹಿಮೆಯಸೃಷ್ಟಿಸ್ಥಿತಿಲಯವನ್ನು ಅಳೆದೀ ಪುಟ್ಟ ಪಾದವ ಎನ್ನ ಮನದಲಿಇಟ್ಟು ದಯಮಾಡೊ ಶ್ರೀಕೃಷ್ಣ ರಂಗನಾಥ 5 ದÀಕ್ಷಿಣಮುಖವಾಗಿ ಪವಡಿಸಿದಿ ದೇವಶಿಖಾಮಣಿ ಏಳೈ ಬಂದ ಭಕ್ತರಿ-ಗೆಲ್ಲ ಅಭಯ ಹಸ್ತವ ಕೊಡುವಿರಾಜೀವನೇತ್ರ ಹಯವದನ[ರಂಗನಾಥ] 6
--------------
ವಾದಿರಾಜ
ಎನ್ನಾಗಮವ ಹೀಗಾಯಿತೊ ದೇವ ಇನ್ನು ನೀ ಎನ್ನನು ಸಲಹುವ ಬಗೆಯಂತೊ ಪ ಸಕ್ಕರಿ ತಾಯೆಂದು ಸಂತಿಗೆ ಕಳುಹಲು ತಕ್ಕಡಿ ಲಶುನವ ತಂದ ತರಳನಂತೆ 1 ಪರಮ ನಿರ್ಮಲವಾದ ತುಲಸಿ ತಾಯೆನೆ ದುಷ್ಟ ತುರುಚಿಯನೆ ತಂದ ತರಳನಂತೆ 2 ಮಸಿಯ ಒರೆಸಿಕೊಂಡು ಬಾಯೆನ್ನೆ ಶಿಶು ತಾನೆ ಕೆಸರು ಪೂಸಿಕೊಂಡು ಬಂದ ತರಳನಂತೆ3 ಕಳುಹಿದಾ ಪಿರಿಯರು ಹಳಿಯಲಿ ಚಿಂತಿಲ್ಲ ಗೆಳೆಯಾರು ನಗುವ ಚಿಂತೆಯೆ ಘನವೆಲೊ ದೇವ4 ಆಪುತ ಪ್ರಿಯ ಬಂಧು ವ್ಯಾಪಕ ನೀನೆಂದು ಜ್ಞಾಪಕಗೊಳಿಸಿದೆ ವಾಸುದೇವವಿಠಲ 5
--------------
ವ್ಯಾಸತತ್ವಜ್ಞದಾಸರು
ಏನಬೇಡಲಿ ನಿನ್ನ ನಾ ಬಯಸಿ ಸ್ವಾಮಿ ಐಹಿಕ ಸುಖ ನಿಖಿಲ ಪುಸಿಯಾಗಿ ಪ ವನಿತೆಯನು ಬೇಡಲೆ ತನಗೆ ಅಲ್ಲದೆ ಮತ್ತೆ ಮನೆತುಂಬ ಮರಿಮಾಡಿ ತಿನಿಸಿಗ್ಹಾಕೆಂದು ಅನುಗಾಲ ಬೆನ್ನ್ಹತ್ತಿ ತಿನುತಿಹ್ಯಳು ಹರಿದ್ಹರಿದು ಬಿನುಗರಲಿ ಬಿನುಗೆನಿಸಿ ಘನತೆಯನು ಕೆಡಿಸಿ 1 ಘನವೆಂದು ನಂಬಿ ನಾ ಧನವನಾಪೇಕ್ಷಿಸಲೆ ಸನುಮತದಿ ಒತ್ತಟ್ಟಕ್ಷಣ ಕೂಡ್ರಗೊಡದೆ ದಣಿವಿಕಿಲ್ಲದೆ ದುಡಿಸಿ ಅಣುಮಾತ್ರ ಸುಖಕೊಡದೆ ಚಿನುಮಯಾತ್ಮನೆ ನಿನ್ನ ನೆನವೆ ಮರೆಸುವುದು 2 ಭೂಮಿಯನು ಬೇಡಲೆ ಸ್ವಾಮಿಯಂತೆ ಸೇವೆಗೊಂಡು ತಾಮಸದಿ ನೂಕಿ ಬಲು ಪಾಮರೆನಿಸುವುದು ಸ್ವಾಮಿಯೆನ್ನಯ ಸಕಲ ಕಾಮಿತ ಕಡಿದು ನಿಮ್ಮ ನಾಮಬಲ ಕರುಣಿಸು ಶ್ರೀರಾಮ ಪ್ರಭುತಂದೆ3
--------------
ರಾಮದಾಸರು
ಏನಯ್ಯ ವಾರಿಜನಯನಾ | ಎನ್ನನುದ್ದರಿಸಲಾರೆಯಾ | ದೀನಾನಾಥ ದಯಾಂಬುಧಿಯಂಬಾ | ಶ್ರೀನಾಮದ ಬಿರುದಿನ ಮಹಾಮಹಿಮನಾ ಪ ಪಾತಕ | ತಾ ಮೊದಲಿಗೆ ಇಲ್ಲವೋ ಎನುತಾ | ಆ ಮಹಾಶೃತಿ ಸಾರುತಲಿರೆ ದುಷ್ಕ್ರತ | ನಾ ಮಾಡಿದ ಘನವಾಯಿತೇ ದೇವಾ1 ಗಜಗಣಿಕಾ ಅಜಮಿಳನಹಲ್ಯಾ | ವೃಜಗೋವಳ ವ್ಯಾಧರ ಮೊದಲು | ಭಜನಿಯಿರಲಿ ಇರದಿರಲಿ ಸನಾತನ | ನಿಜಪದದೋರಿದ ಪರಮ ಉದಾರಾ2 ನೀನೇ ಗತಿ ಎಂದಾನತೆ ನಾದೆ | ಇನ್ನೇನು ನೋಡುವಿ ಅಂತವಾ | ನ್ಯೊನವಾರಿಸದೆವೆ ತಾರಿಸು ಪಾಮರ | ವಣನವನನು ಗುರು ಮಹಿಪತಿ ಸ್ವಾಮಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಾಯ್ತು ಹರಿಪಾದ ನೆನೆವಲ್ಲಿ ಮನವೆ ದೀನನೆ ನಿನ್ನ ಬಾಯಿಗ್ಹುಣ್ಣ್ಹುಟ್ಟಿತೇನೋ ಪ ನಿಷ್ಠೆಯಿಂ ಕೈತಾಳವಿಟ್ಟು ಉಲ್ಲಾಸದಿ ಕಷ್ಟಹರನಂಘ್ರಿ ಮನಮುಟ್ಟಿ ಪಾಡುವಲ್ಲಿ ಕೆಟ್ಟಾಸೆಯಿಂ ಪರರಲ್ಹೊಟ್ಟ್ಹೊಟ್ಟ್ಹೊಡಕೊಂಡು ಬೇಡ್ದ ಪೆಟ್ಟಿಗೆ ಕರವರೆಡು ಮುರಿದಿರುವವೇನೋ 1 ವನಜನಾಭನ ದಿವ್ಯ ವನರುಹಂಘ್ರಿಯ ಚರಿತ ಘನವಾಗಿ ಪೊಗಳುತ ಕುಣಿದಾಡವಲ್ಲಿ ಮೊಣಕಾಲು ಕೀಲ್ಮುರಿದು ನೆಲಕಿ ಬಿದ್ದಿಹ್ಯವೆ 2 ನೀಲಶಾಮನ ವಿಮಲಲೀಲೆಗಳು ಶೀಲಮನದಾಲಸಾನಂದೊಳು ಲೋಲ್ಯಾಡವಲ್ಲಿ ಹಾಳು ಸಂಸಾರದ ಗೋಳಾಟ ಕೇಳಿ ಕೇಳಿ ಶೂಲೆಯೆದ್ದೆರಡು ಕಿವಿ ಕಿವುಡಾದವೇನು 3 ಸಾಗರನಿಲಯನ ನೀಗದ ಮಹಿಮೆಗಳ ಜಾಗರದಿಂ ಪಾಡಿ ಭವರೋಗ ಗೆಲಿವಲ್ಲಿ ಸೋಗಿನ ಸೂಳೆಸುದ್ದಿ ರಾಗದ್ಹಾಡ್ಹ್ಯಾಡಿ ಭವ ಜಿಹ್ವೆ ಕಳಕೊಂಡಿದ್ಯೇನೋ 4 ದಾಸನುದಾಸರ ವಾಸದಿಗೂಡಿಯನು ಮೇಷನು ವಿಚಾರದಿಂ ಶ್ರೀಶನ ಚರಣ ಧ್ಯಾಸದೊಳಗಿರ್ದು ಯಮಪಾಶವನು ಗೆಲಿದು ದಯ ಭೂಷ ಶ್ರೀರಾಮನ ಮುಕ್ತಿ ಪಡಿವಲ್ಲಿ 5
--------------
ರಾಮದಾಸರು
ಏನು ಕಾರಣ ಹರಿಯೆ ಅನುಮಾನಿಸಿದಿ ದೊರೆಯೆ ಘನವಲ್ಲ ನಿನಗಿದು ತೆರೆದ ಬೀಗ ಜೋಡಿಸುವುದು ಪ ವದನದಿಂದಲಿ ನಿನ್ನ ಮಹಿಮೆ ಪೊಗಳಲರಿಯದೆ ಸದನದಿ ಅನ್ಯರ ಪಾಡುತ್ತಿದ್ದೆನೇನೋ 1 ಪಾಡದಿದ್ದರೆ ನಾನೊಬ್ಬ ನೋಡಿ ಬಂದದ್ದೇನೊ ನಿನಗೆ ಬೇಡಿಕೊಂಬೆನೊ ಬಾಯ ಬೀಗ ತÉಗೆಸೊ ಹರಿಯೆ 2 ವೇದ ಪೊಗಳಲರಿಯದ ವಿಜಯ ರಾಮಚಂದ್ರವಿಠಲನ್ನ ಮೋದಮಯ ದೇವ 3
--------------
ವಿಜಯ ರಾಮಚಂದ್ರವಿಠಲ
ಏನು ಮಾಡಲಿ ವಿಠಲ ಏನು ತಿಳಿಯದು ವಿಠಲ ಏನಿತ್ತು ಮೆಚ್ಚಿಸಲಿ ವಿಠಲಾ ಪ. ಜ್ಞಾನ ಮೊದಲೇ ಇಲ್ಲ ಧ್ಯಾನ ಮಾಡುವುದರಿಯೆ ನೀನಾಗೆ ವಲಿದೆನ್ನ ಸಲಹಯ್ಯ ವಿಠಲಯ್ಯ ಅ.ಪ. ತಂದೆತಾಯಿಯು ನೀನೆ ಬಂಧು ಬಳಗವು ನೀನೆ ತಂದವನುಭವದಲ್ಲಿ ಎನ್ನ ನೀನೆ ಮುಂದೆ ಪೊರೆವವ ನೀನೆ ಹಿಂದೆ ಪೊರೆದವ ನೀನೆ ಇಂದು ಪೊರೆಯುವನು ನೀನೇ ಒಂದರಿಯೆ ತವ ಪದದ್ವಂದ್ವವೆ ಗತಿ ಎಂದು ಇಂದು ಚರಣದಿ ಬಿದ್ದೆ ಪೊರೆಯಯ್ಯ ವಿಠಲಯ್ಯ 1 ಹಿಂದಿನಾ ಭಕ್ತರನು ಪೊರೆದ ಕೀರುತಿ ನೋಡೆ ಒಂದು ನಿಜವೆಂದರಿಯೆ ವಿಠಲಾ ಇಂದೆನ್ನ ಕರಪಿಡಿದ ಮುಂದಕ್ಕೆ ಕರೆದು ನೀ ಒಂದು ಮಾತನಾಡೆ ವಿಠಲಾ ಅಂದಿನಾ ಭಕ್ತವತ್ಸಲನೆಂಬ ಕೀರ್ತಿ ನಿಜ ವೆಂದು ತಿಳಿಯುತಲಿ ಆನಂದಿಸುವೆ ವಿಠಲಯ್ಯ 2 ಸಿರಿವಂತರಿಗೆ ವಲಿವ ಬಿರುದೊಂದು ಘನವೆ ಕೇಳ್ ಪರಿ ವಿಠಲಾ ಪರಿಪರಿಯಲಿ ನಿನ್ನ ಚರಣ ಪಿಡಿದಾಲ್ಪರಿಯೆ ಥರವೆ ಗರುವಿಕೆ ಪೇಳು ವಿಠಲಾ ತೆರದು ನೋಡದೆ ನೇತ್ರ ಕರದಭಯ ಪೇಳದಲೆ ಪರಿ ಕರುಣೆಗೆ ಸರಿಯೆ ಪೇಳ್ ವಿಠಲಯ್ಯ3 ಹಿಂದೆ ಕೆಲವರ ಕಾಯ್ದುದೊಂದೆ ಕೀರ್ತಿಯು ಜಗದಿ ಮಂದಿ ಹೊಗಳುವರದನೆ ಮತ್ತೆ ಮತ್ತೆ ಇಂದು ಮುಂದೆ ಅಂಥ ಬಂದ ಭಕ್ತರು ಇಲ್ಲೆ ಇಂದಿಲ್ಲವೇ ನಿನಗೆ ಆ ಶಕ್ತೀ ಇಂದಿನವರಲಿ ಅಂಥ ಭಕುತಿ ಇಲ್ಲವೆ ಪೇಳು ಇಂದಿರೇಶನೆ ಎನಗೆ ವಲಿಯದಿಹೆ ವಿಠಲಯ್ಯ 4 ಅಂತರಂಗದಿ ನಿಂತು ಶಾಂತತ್ವ ಕೊಡುವುದಕೆ ಚಿಂತೆ ಏತಕೆ ಪೇಳು ವಿಠಲಾ ಸಂತತದಿ ನಿನಧ್ಯಾನ ಚಿಂತನೆಯ ಕೊಡು ಎನಗೆ ಚಿಂತಿತಾರ್ಥಪ್ರದನೆ ವಿಠಲಾ ಕಂತುಪಿತ ಗೋಪಾಲಕೃಷ್ಣವಿಠ್ಠಲ ಗುರುಗ ಕರ ಪಿಡಿದು 5
--------------
ಅಂಬಾಬಾಯಿ
ಏನೆಲೆ ಸಖಿ ವಾನರ ಮುಖಿ ನೀನು ಒಳ ಒಳಗೆ ಮಾಡಿದ ಯೋಚನೆ ಪ ಹಳೆಯ ಜೌಳಿಗಳು ಘಳಿಲನೆ ತಂದಿಟ್ಟು ಘನವ ಪೇಳಿಕೊಂಬೆ 1 ಭಕ್ಷ್ಯ ಭೋಜ್ಯ ನಿನ್ನ ಕುಕ್ಷಿ ತುಂಬಿದಾರು ಲಕ್ಷ್ಯವಿಲ್ಲದೆ ನಮ್ಮಾ- ನಾಕ್ಷೇಪಿಸುತ್ತಿರುವೆ 2 ಹಪ್ಪಳಾವು ಹತ್ತು ಹೋಳಿಗೆ ಇಪ್ಪತ್ತು ತಪ್ಲೇಲಿ ತಿಳಿ ತುಪ್ಪ ತಪ್ಪದೆ ಮಾಯವಾಯ್ತು 3 ಬಡವರಮ್ಮ ನಾವು ಬಡಿವಾರವೆಮಗಿಲ್ಲ ನಡುಬೀದಿಗೆ ಕಾಲ- ಚಾಚದಿರತ್ತಿಗೆ 4 ಜಲಜಾಕ್ಷ ಗುರುರಾಮ | ವಿ- ಠಲನಾ ಸ್ಮರಿಸುತ್ತಾ ಕಲಹಕಾರಿ ನೀನು ಎಲೆಯ ನೋಡಿವುಣ್ಣೆ 5
--------------
ಗುರುರಾಮವಿಠಲ
ಏಳು ಏಳು ಏಳು ಲೋಕದ ಒಡಿಯನೆ | ಏಳು ಗೋವಳರಾಯ ಗೋಪೇರಿಗತಿ ಪ್ರಿಯಾ | ಅಪ್ರಾಕೃತ ಕಾಯಾ ಸುರಮುನಿ ಗೇಯಾ | ಏಳು ಗೋಪಾಲಕೃಷ್ಣ ಪ ಪುರಂದರನ ದಿಶೆಯಲ್ಲಿ ಗರುಡಾಗ್ರಜನು ಬರಲು | ಶರಧಿ ತೆರೆ ತಗ್ಗಿದವು ಉರಗ ಪೆಡೆ ಪಸರಿಸಿದಾ | ಹರಿದು ಪೋಯಿತು | ಕಾಳ | ಸುರ ವೈರಿಗಳು ಅಡಗಲು | ಅರಳಿದವು ಅರವಿಂದ | ಝಂಕರಿಸಿ ಶುಕಪಿಕ ಮೃಗಾದಿ ಯೆ-| ಕರುಣಾಳುಗಳ ದೇವನೆ 1 ಮೇರೆ ತಪ್ಪಿ ಬಂದಾ ರಥಸಹಿತ ಭಾಸ್ಕರನು ದಿಶದಿಶೆಗೆ ಕಿರಣಗಳ | ಹರಹಿಕೊಳುತಾ | ಹರಿ ಗುರುವೆ ಪೇಳಲಳವೆ | ಕಲಿಸಿ ಮಂದಿರದೊಳಗೆ ಎಳೆಬಾಳೆ | ಶೃಂಗರಿಸಿದರು ಅರವಿಂದನಾಭ ಚೆಲುವ 2 ಪರಮ ಮಂಗಳವಾದ ದ್ವಾರ ದ್ವಾರಗಳಿಗೆ | ವಿರಚಿಸಿತು ಕಳಿತೆ ತೋರಣ ಕನ್ನಡಿ ಮಲಕು | ಭರದಿಂದಲಿ ಬಿಗಿದು ಮೇಲ್ಕಟ್ಟು ಚಿತ್ತರದ ಗೊಂಬೆ | ಪರಿಚಾರವು ವಪ್ಪಲು | ಹಿರಿದು ಹೂವಿನ ಮಾಲೆ ಕಟ್ಟಿದವು | ಮಕರವು ತುರ ತೊ ಗರು ಪೊಗಳು ಕಾದೋದಕವು ತಂದಿರೆ | ಅರಸಾದ ಆದಿದೈವ3 ಪರಮ ಭಾಗವತರು ಬತ್ತೀಸರಾಗದಲಿ | ಸ್ವರಮಂಡಲಾ ತಾಳ ತಂಬೂರಿ ಕಿನ್ನುರಿಗ ಸರವೇಣಿ ನಾನಾ ಗೀತ | ಪರಿ ಪರಿ ಕೊಂಡಾಡುತಿರಲು | ಕುಣಿಯುತಿದೆ ಸುರನಿಕರ ಪರಿಪಾಲಿಕ 4 ಸುರ ನರೋರಗ ಯಕ್ಷಗರುಡ ಸಿದ್ಧ ವಿದ್ಯಾ | ಕಿನ್ನರ ಸಾಮ | ಪರಮೇಷ್ಟಿ ವಾಲಗಕೆ ಬಂದು ಎ- ದುರು ನಿಂದು ತುತಿಪನಾಹಕೊ ಭರಿತಾಭರಣವಿಟ್ಟು | ಸರಸ್ವತಿ ಭಾರತಿ ಗಿರಿಜೆ ಸುರನಾರಿಯರು ತಮ್ಮ | ಹರಿವಾಣ | ದಾರುತಿಯ ಪಿಡಿದು ನಿಂದೈಧಾರೆ ಶರಣಾಗತ ವತ್ಸಲಾ 5 ಕರಿ ತುರಗ ರಥಪಾಯದಳವು ದಟ್ಟಡಿಯಾಗಿ | ನೆರದಿದೆ ಸಭೆಯಲಿ ಸಪ್ತಾಂಗದವರುಂಟು | ಅರಿ ಶಂಖಗದಾ ಪದುಮಖೇಟ ನಂದನ ಮುಸಲಾ | ಪರಶು ನೇಗಲ ಸುಶಕ್ತಿ ಪರಿಪರಿಯ ದಿವ್ಯಾಯುಧವ ತಮತಮಗೆ | ಧರಿಸಿ ಸಂತೋಷದಲಿ ದಾತಾರ ನಿನ್ನಯ ಬರುವ ಹಾರೈಸಿ | ವೈರಿಗಳು ನೋಡುತಲಿ ಹಾರೆ ಕುರುವಂಶ ವಿನಾಶಕಾ 6 ಸುರಿಗೆ ಪಾರಿಜಾತದ ಮಲ್ಲಿಗೆ | ಸುರವನ್ನೆ ಬಕುಳ ಪಾರಿ ಭದ್ರ ಸಂಪಿಗೆ | ಮರುಗ ಮಲ್ಲಿ ಜಾಜಿ ಕಾಂಜಿ ಶಾವಂತಿಗೆ ಕರವೀರ ನಂದಾವರ್ತ | ಅರಗುಂದ ಕುಂತಾತಸಿದವನ ಮುಡಿವಾಳ | ಈರವಂತಿಕೆ ಕೇತಿಕಾ ಸರ್ವ ಕುಸುಮಗಳಿಗೆ | ಶಿರೋರತನವಾದ ಎಳದುಳಸಿ ಹಾರಗಳಿಗೆ | ಅರಿಗಳ ಮಸ್ತಕಾಂಕುಶಾ7 ಚರಣದಂದಿಗೆ ಪೆಂಡೆ ಪೊಂಗೆಜ್ಜಿ ಮಣಿಮಯದ | ಸರಪಳಿಯು ತೊಡೆದು ಬಿರುದಾವಳಿಗಳು ಪೀತಾಂ | ಕಾಂಚಿ ದಾಮಾ | ಸರಿಗೆ ನ್ಯಾವಳಹಾರ ತುಳಸಿ ಕೌಸ್ತಭ ಪದÀಕ | ಸಿರಿವತ್ಸ ಕನಕಕುಂಡಲ ನೊಸಲ ಮೃಗನಾಭಿ | ಕರದಾಭೂಷ ಫಣಿಮಕುಟ ಧರಿಪಾ ದೇವಿ ನಿನ್ನ | ದರುಶನ ಭಕ್ತರಿಗೆ ಲಾಭಾ 8 ಸಿರಿ ಏಳಲೀಸಳೊ ಹತ್ತವತಾರವನು ಧರಿಸಿದ ದಣವಿಕಿಯ | ಕರಿ ಕಾಯಲಿ ಬಂದ ಭರದ ಉನ್ನತವು | ರಣದೊಳಗೆ ಪಾರ್ಥನ್ನ ರಥದ ತುರುಗವ ನಡಿಸಿದ ಲಜ್ಜೆಯ | ಸುರತ ಕ್ರೀಡೆಯಲಿ ಸ್ತ್ರೀಯರೋಳಾದಂಜಿಕಿಯೊ | ವರವ ಕೊಡು ಎಂದು ಬಂದು ಮಮ ಭಕ್ತರ ಭಯವೊ | ಸಿರಿ ವಿಜಯವಿಠ್ಠಲ ಉಡುಪಿಯ ಕೃಷ್ಣ ನಿನಗೆ | ದರಿಲ್ಲವೆಂಬೊ ಘನವೊ9
--------------
ವಿಜಯದಾಸ
ಒಲವಿಲ್ಲವೆನ್ನಬಹುದೇ ನೀರೆ ನಿನ್ನಲ್ಲಿ ಚೆಲುವ ವೇಲಾಪುರದ ಚೆನ್ನಿಗನಿರವ ನೋಡಿ ಪ ತರಳೆ ನಿನ್ನಯ ಮೋಹ ವಿರಹದಿರವದ ಬಗೆಯ ಸ್ಮರನರಳ ಸರಳುಗಳ ಉರವಣಿಯ ಘನವಾ ಪರೆಯದಿಂ ಮೋದಕದಿ ಬಿಂದುಗಳು ಮೊಳಗೆ ಕ ಸ್ತುರಿ ತಿಲಕ ಮಸುಳಿಸಲು ಬಂದ ಗುಣಮಣಿಯೇ 1 ನೀಲಜೀಮೂತಸನ್ನಿಭದೋರೆದುರುಬಿನ ಮೇಲೆ ಸುತ್ತಿದ ಬೆಂಮುರಿ ಜಾರೆಗುರುಳೂ ಭಾಳದಿಂ ಪರೆಯೆ ಕಡುತವಕದಿಂದೆನ್ನ ನುಡಿ ಗೇಳುತಲೆ ಬಂದನಿದೆ ನೋಡೆ ಗುಣಮಣಿಯೇ 2 ಸೋಗೆ ಮುಡಿಯಳೆ ನಿನ್ನ ಕಾಂಬೆನೆಂದರ್ಥಿಯಲಿ ರಾಗ ಮಿಗೆ ವೈಕುಂಠ ವಿಠಲನಾಥ ತಾನಾದ ಬೇಗದಿಂ ನೆರೆದು ಸುಖಿಯಾಗು ಪೆಣ್ಮಣಿಯೆ 3
--------------
ಬೇಲೂರು ವೈಕುಂಠದಾಸರು
ಓ ಎನ್ನಬಾರದೆ ಓಂಕಾರ ಪ್ರತಿಪಾದ್ಯ ಪ ಕರಿರಾಜ ಕರೆಯಲು ತ್ವರಿತದಿಂದಲಿ ಬಂದು ಪೊರೆಯಲು ನಿನಗವ ಮರಿಮಗನೇನೋ 1 ಅಂದು ಅಜಾಮಿಳ ಕಂದನ ಕರೆಯಲು ಬಂದು ಸಲಹಿದೆ ಬಂಧು ನೀನವಗೇನೋ 2 ಕರುಣಾಸಾಗರ ದೊರೆ ಶ್ರೀದವಿಠ್ಠಲ ಕರವ ಮುಗಿದು ಕೂಗೆ ಬರದಿರೆ ಘನವೇನೋ 3
--------------
ಶ್ರೀದವಿಠಲರು
ಕಟಕಟಾ ಕಂಡೆವಲ್ಲಾ ಕುಟಿಲವರ್ತನ ಕೆಲಕೆಲವು ಈ ಕಲಿಯುಗದೀ ಪ ಮಳೆಯಿಲ್ಲ ಬಂದರಿಳೆ ಬೆಳೆಯದು ಬೆಳೆಯೆ ಧರಣಿ ಹುಲಿಸಿಲ್ಲ ಹುಲಿಸಾದರಿಲ್ಲಾ ಪ್ರಜೆಗೇ ಸಲುವಕೋರಲ್ಪವನು ಬಿಡರು ರಾಜರುಗಳ ಹಾ ವಳಿಯಲುಳುಹಿಲ್ಲ ಇನ್ನೆಂತು ಕೃಷಿಕರಿಗೇ 1 ಧನವಗಳಿಸಿಯೆ ಪಡುವುದನ್ಯಾಯವೇ ಮೊದಲು ಮನವರಿತು ಪಾತಕಂಗಳ ಮಾಡುತಿಹರೂ ಇನಿತು ಗಳಿಸಿದ ಕೃತ್ಯದರ್ಥಕ್ಕೆ ಚೋರರು ಜನಪರೊಡೆಯರು ಬಯಲಮಮತೆಗಳ ಬಿಡರೂ 2 ಕಕ್ಕುಲತೆ ಪರನಿಂದೆ ರಾ ಕ್ಷಸಕೃತ್ಯ ಹಿಂಸೆ ಮತ್ಸರ ಅನಾಚಾರಾ ಕುಹಕ ಕುಟಿಲ ಕುಮದ ಸ್ವಾಮಿದ್ರೋಹ ವಸುಮತಿಯ ಸುರರ ವಧೆ ಘನವಾಯಿತಲ್ಲಾ 3 ತೊಡುವೊಡವೆಗಳ ಬೇಡಲೊಡನೆರಡು ಕಂಗಳಲಿ ಕಿಡಿಸೂಸಿ ಬಾಯಿ ನೊರೆಸುತ್ತಿ ಘರ್ಜಿಸುತಾ ಜಡಿವ ಕೋಪದಿ ಮಧುಪರಂತೆ ಜರೆವೀ ಬಾಯಿ ಬಡುಕರೇ ಮೇದಿನಿಗೆ ಹೊರೆಯಾದರಲ್ಲಾ 4 ರಸನಬಿಡುವರು ಕಸವಪಿಡಿವರೊರೆಯನು ಪಿಡಿದು ಬಿಸುಡುವರಲಗ ಪರುಸವನು ಬಿಟ್ಟು ಕಲ್ಲಾ ಒಸೆದು ಬಿಡುವರು ಶ್ರೀ ವೈಕುಂಠಕೇಶವನಿರಲು ನುಸಿ ದೈವಗಳ ಭಜಿಸಿ ಹಸಗೆಡುತಲಿಹರೂ 5
--------------
ಬೇಲೂರು ವೈಕುಂಠದಾಸರು