ಒಟ್ಟು 41 ಕಡೆಗಳಲ್ಲಿ , 26 ದಾಸರು , 39 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿಹರಿಮಧ್ಯೆ ಹರಿಗಮನೆ ಪ ಹರಿಯ ನಂದನ ಸಖನೆನಿಪ ಅಹೋಬಲದಹರಿಯ ನೀ ತಂದು ತೋರೆ ಅ ಎರವಿನ ತಲೆಯವನಣ್ಣನಯ್ಯನಪರಮ ಸಖನ ಸುತನಹಿರಿಯಣ್ಣನಯ್ಯನ ಮೊಮ್ಮನ ಮಾವನತಂದೊಟ್ಟಿದನ ಹಗೆಯಗುರುವಿನ ಮುಂದೆ ಮುಂದಿಹ ಬಾಹನಕಿರಿಯ ಮಗನ ರಾಣಿಯದುರುಳತನದಿ ಸೆಳೆದುಕೊಂಡನ ಕೊಂದನತರಳೆ ನೀ ತಂದು ತೋರೆ 1 ಸೋಮನ ಜನಕನ ಸತಿಯ ಧರಿಸಿದನರೋಮ ಕೋಟಿಯೊಳಿಟ್ಟಹನಕಾಮಿನಿ ಸತಿಯ ಕಂದನ ತಮ್ಮಗೊಲಿದನಭಾಮೆ ನೀ ತಂದು ತೋರೆ 2 ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯಪಥದೊಳು ತಿರುಗಿದನ ಅತಿಶಯ ನರಹರಿ ವಾಮನ ರೂಪಿನಪಿತನ ಮೋಹದ ರಾಣಿಯ ಹತ ಮಾಡಿ ಸತ್ಯಕ್ಕೆ ನಿಂತು ನಗವ ಹೊತ್ತುಪತಿವ್ರತೆಯರ ಭಂಗಿಸಿಕ್ಷಿತಿಯೊಳು ರಾಹುತನಾದ ಬಾಡದಾದಿಕೇಶವನ ತಂದು ತೋರೆ3
--------------
ಕನಕದಾಸ
ದಾಸರಿಗೆ ದುರಿತದೋರದುಶೇಷಾಧೀಶ ಶ್ರೀ ಶ್ರೀನಿವಾಸನದ್ವೇಷಖಳ ಮೋಳಿಗೆಯ ನಿ:ಶೇಷವೆನಿಸಿ ನಿಜಜನರ ವರ್ಧಿಪನ ಸುರಾಧಿಪನ ಸುಪ್ರತಾಪನ ಪ.ಅವನಿಯ ಕೊಂಡಿಳಿದವನ ಕೊಂದವನಿ ತಂದ ವನಜಭವ ಸನಕಾದ್ಯರಿಗೊಲಿದನಕುವರ ತನ್ನವರಿದ್ದಾಟವಿಯಲಿದ್ದವನ ಭಯವ ನಿವಾರಿಸಿ ಕುವರಗೆ ವರದನ ಪೊರೆದನ ಮೆರೆದನ 1ವಿಧಿಪದಕರ್ತರ ಗುರುಸುಖತೀರ್ಥರಹೃದಯ ಮಂಗಳ ಮಾನಸದ ಮರಾಳನಪದಸೋಂಕಿಸಿ ಪಾರಾಕಿಯನು ತ್ವರಿಯದಿಸುದತಿಯ ಮಾಡಿದುದರಿಯಾಘಹಾರಿಯ ಅರಿದಾರಿಯಮುರಾರಿಯ 2ಕಿರುಗೆಜ್ಜೆ ನೂಪುರ ವರಜಾಂಬೂನದಾಂಬರದಾಮಕೌಸ್ತುಭಸಿರಿವತ್ಸ ಕೇಯೂರಹಾರ ಕರವಲಯಕುಂಡಲಮಣಿಮಕುಟಾಭರಣಭೂಷಿತ ಘನಗಾತ್ರನಬ್ಜನೇತ್ರನ ಮಾಕಳತ್ರನ ಖಗಪತ್ರನ3ಸಿರಿದೊರೆತಿರೆ ಬೆರೆತಿರದೆ ಆ ಹರಿಶರಣರವೆರೆಸಿ ಗರ್ವಜರಿದು ಶ್ರೀಹರಿಯಗುರುನಿರೂಪದಪರಿಅರಿದೆಡರದರಿದುಅರಿಅರುವರಿಗಂಜದಿಹ ಅಳುಕದಿಹ ದೃಢದಲ್ಲಿಹ ಮುಕ್ತನಾಗಿಹ4ಪಂಚಬೇಧ ವಿವರ ತಿಳಿದು ತತ್ವ ಜಪಿಸಿಪಂಚರಾತ್ರಾಗಮ ತಂತ್ರಸಾರಾರ್ಥಗಳಿಂಮಿಂಚುವ ಭಕ್ತಿ ಪಥದಲಿ ನಿಜಾಯುವಹಿಂಚುಮಾಡುವ ಭವಾರ್ಣವವನೀಸಾಡುವ ಕಡೆಗೋಡುವನಲಿದಾಡುವ 5ವೆಂಕಟೇಶನ ನಾಮ ಪಾಡಿಕೊಂಡಾಡುವವೆಂಕಟೇಶನಾಕೃತಿ ನೋಡೊಲೆದಾಡುವವೆಂಕಟೇಶನ ಕಥಾಮೃತಕೇಳಿಬಾಳುವವೆಂಕಟೇಶನ ಚರಣವೆ ಶರಣೆನುವ ಕಾರಣೆನುವ ಪೂರಣೆನುವ 6ಮೊದಲೆ ಸ್ವಾಮಿ ಪುಷ್ಕರಣಿ ಶ್ರೀವರಾಹನಸದಮಲ ಸುವಿಮಾನ ಶ್ರೀನಿವಾಸನಇದೀಗೆ ಭೂವೈಕುಂಠವೆನಿಪಾನತರಾದರ ಪ್ರಸನ್ವೆಂಕಟೇಶನ ಕಾಣುವ ಶಮಮಾಣುವ ಕೊಬ್ಬಿಕುಣಿವ 7
--------------
ಪ್ರಸನ್ನವೆಂಕಟದಾಸರು
ದೇವರನ್ನು ಹಸೆಗೆ ಕರೆದ ಪದಗಳುವೇದ ಉದ್ಧರಿಸೀದಾ ಮತ್ಸ್ಯಾವತಾರನೇ |ಆದಿತ್ಯಾರಿಗೊಲಿದಮೃತ ನೀಡಿದನೇ ||ಮೇದಿನಿಯನು ಪೊತ್ತ ವರಹವತಾರನೆ |ಆ ದೈತ್ಯನಳಿದು ಪ್ರಹ್ಲಾದಗೊಲಿದನೇ ||ಭೂ ದೇವಾ ರೂಪೀ ಹಸಿಗೇಳೂ 1ಭೃಗು ಕುಲೋದ್ಭವನೇ ಭೀಷ್ಮನ ಬೆಳಸಿದನೇ |ನಗಜ ರಮಣನ ಕಾರ್ಮೂಕ ಮುರಿದವನೇ ||ಹಗೆಯನಳಿದು ಪಾಂಚಜನ್ಯ ಘಳಿಸಿದನೆ |ಇಗಡ ದೈತ್ಯರ ಬುದ್ಧಿ ಭೇದ ಮಾಡಿದನೇ ||ಅಗಣಿತಮಹಿಮಾ ಹಸಿಗೇಳೂ 2ಕುದರೀಯೇರಿ ಕುಜನರಾ ಕುಲ ತರಿದವನೇ |ಬುಧರಗೋಸುಗ ಹತ್ತಾವತಾರವಾದವನೇ ||ಸುದರೂಶನ ಶಂಖ ಗದ ಜಲಜ ಧರನೇ |ವಿಧಿಪಿತಶ್ರೀ ರಮಣ ಪ್ರಾಣೇಶ ವಿಠ್ಠಲನೆ ||ಸುಧಿಗಡಲಾಲಯನೆ ಹಸಿಗೇಳೂ 3
--------------
ಪ್ರಾಣೇಶದಾಸರು
ನೀ ಕೊಡೆ ನಾ ಬಿಡೆ ಕೇಳಯ್ಯ-ಹರಿ-|ಗೋಕುಲಪತಿಗೋವಿಂದಯ್ಯಪನೋಡುವೆ ನಿನ್ನನು ಪಾಡುವೆ ಗುಣಗಳ |ಕಾಡುವೆ ಬೇಡುವೆ ನಾಡೊಳಗೆ ||ಮೋಡಿಯ ಬಿಡು ಕೊಡು ಮೊದಲಿಗೆ ಬಡ್ಡಿಯ |ಕಾಡೊಳು ತುರುಗಳ ಕಾಯ್ದರಸನೆಹರಿ1ಎಂಟಕ್ಷರವಿವೆ ದ್ವಯಸಾಕ್ಷಿಗಳಿವೆ |ಗಂಟಿಗೆ ಮೋಸವೆ ದಾಸರಿಗೆ ||ಎಂಟುಂಟೆನಿಸುವೆ ಬಂಟರ ಬಾಯಲಿ |ತುಂಟತನವ ಬಿಡು ತುಡುಗರರಸೆ 2ಅಪ್ಪನೆ ಅಯ್ಯನೆ ಅಮರರಿಗೊಲಿದನೆ |ಸರ್ಪನೆ ಮೇಲೆ ಮಲಗಿಪ್ಪವನೆ |ಒಪ್ಪಿಸಿಕೊಟ್ಟರೆಪುರಂದರವಿಠಲನೆ |ಒಪ್ಪವ ತೋರುವೆ ಒಡೆಯನಿಗೆ 3
--------------
ಪುರಂದರದಾಸರು
ರಾಮ ಶ್ರೀರಾಮ ಸೀತಾರಾಮ ಶ್ರೀರಾಮರಾಮನೆ ರವಿಕುಲಸೋಮಶ್ರೀರಾಮಪರಾಮ ರಾಮ ರಘುರಾಮನೆ ದಶರಥರಾಮನೆ ಗುಣಗಣಧಾಮನೆ ಶ್ರೀರಘು ಅ.ಪಕೌಸಲ್ಯಾದೇವಿಯ ಕಂದನೆ ರಾಮಕೌಶಿಕಯಜÕವ ಕಾಯ್ದ ಶ್ರೀರಾಮಹಿಂಸಿಸಿದ ತಾಟಕಿಯನು ಕೊಂದರಾಮಧ್ವಂಸಮಾಡಿದೆ ಶಿವಧನು ಮುರಿದುರಾಮಸಂಶಯವಿಲ್ಲದೆ ಸೀತೆಕರವಪಿಡಿದುತನ್ನಂಶದ ಪರಶುರಾಮನಿಗೊಲಿದನೆ ಶ್ರೀ 1ದಶರಥರಾಮ ನೀನರಸನಾಗೆನಲುಅಸುರಾವೇಶದಿ ಕೈಕೆ ವರವ ಯಾಚಿಸಲುಎಸೆವ ಸಿಂಹಾಸನ ತೊರೆದು ಪೊರಮಾಡಲುಶಶಿಮುಖಿಸೀತಾಲಕ್ಷ್ಮಣರ ಕೂಡಿ ಬರಲುಭರತಗೆ ಪಾದುಕೆ ಕೊಡುತಲಿ ಕಳುಹಿಸಿಗುಹನ ಮನ್ನಿಸಿ ವನರಾಜ್ಯದೊಳ್ ಮೆರೆದೆ 2ವನದೊಳುಮಾಯಾಮೃಗವ ಕಂಡು ಸತಿಯುಮನದಿ ಚಿಂತಿಸಿರಾಮ ತೆರಳೆ ರಕ್ಕಸನುವನಜಾಕ್ಷಿ ಸೀತೆಯ ಕಳವಿನಿಂ ತರಲುವನವನಚರಿಸಿ ಪುಡುಕೆ ಕಂಡು ಕಪಿವರನುಶರಧಿಲಂಘಿಸಿ ಸೀತೆಯನು ಕಂಡು ಹನುಮನುಕುರುಹು ಪಡೆದು ಲಂಕೆ ದಹಿಸುತ ಬರಲು 3ಸೇತುಬಂಧನ ಮಾಡಿ ಕಪಿಗಳ ಕೂಡಿನೀತಿ ಪೇಳಿದ ವಿಭೀಷಣಗಭಯ ನೀಡಿಭೂತ ರಾವಣನ ದಶಶಿರವ ಚಂಡಾಡಿಸೀತಾಸಹಿತ ರಾಮ ಪುಷ್ಪಕವನೇರಿಆತುರದಿಂದಿಹ ಭರತನಿಗ್ವಾರ್ತೆಯಪ್ರೀತಿಲಿ ಕಳುಹಿದ ಶ್ರಿ ರಘುರಾಮ 4ಬಂದ ಶ್ರೀರಾಮಚಂದ್ರ ಬಹುಪ್ರೀತಿಯಿಂದಛಂದದಿಂ ಭರತನ ಮನ್ನಿಸಿ ಮುದದಿಂದಕುಂದಣಮಯದ ಸಿಂಹಾಸನ ಚಂದ-ದಿಂದಲೇರುತ ರಾಮ ನಸುನಗೆಯಿಂದಇಂದಿರಾಸೀತಾ ಸಹಿತ ಅಯೋಧ್ಯದಿಬಂದು ಪೊರೆವ ಕಮಲನಾಭ ವಿಠ್ಠಲನು 5
--------------
ನಿಡಗುರುಕಿ ಜೀವೂಬಾಯಿ
ಶ್ರೀ ನರಸಿಂಹ ಸ್ತೋತ್ರ11ವಂದಿಸು ನರಹರಿಯ ಮನವೆ ವಂದಿಸು ನರಹರಿಯವಂದ್ಯವಂದ್ಯನು ಬಹು ಸುಂದರ ಸುಖಮಯಇಂದಿರರಸ ಅರವಿಂದ ಸುನಾಭನ ವಂದಿಸು ನರಹರಿಯ ಪಸಿಂಧುಸಂಚರ ಬಹು ಸುಂದರ ಗಿರಿಧರತಂದನು ವಸುಧೆಯ ಕಂದನ ಕಾಯ್ದ ಪುರಂದರವರದ ಮುನೀಂದ್ರ ಕುಮಾರ ಕಪೀಂದ್ರಗÉ ಒಲಿದಮರೇಂದ್ರಗೆ ಬೋಧಿಸಿನಿಂದ ದಿಗಂಬರಕುಂಭಿಣಿಸುರನುತಮಂದರಗಿರಿ ಎತ್ತಿ ಸಿಂಧುವಿಂದಲಿ ಬಂದುಅಂಧ ಮೂಢರ ತನ್ನ ಅಂದ ಮೋಹದಿಕಟ್ಟಿದಾನ್ತ ಸುರರಿಗೆಲ್ಲ ಚಂದ ಸುಧೆಯನಿತ್ತಇಂದಿರಾಕಾಂತನನಂತ ಸುಗುಣಗಳಚಿಂತಿಸಿ ಯೋಗ್ಯದಿ ಕಂದದ ಪ್ರೇಮದಿವಂದಿಸು ನರಹರಿಯ 1ವೇದಾಂತರ್ಗತಬಾದರಾಯಣಹರಿಪಾದಾರಾಧಕಮೋದಸುತೀರ್ಥರಪಾದಾವಲಂಬಕ ಸಾಧು ಸುಮೇಧರಹೃದಯಾಕಾಶದಿ ಪದುಮದ ಮೂಲದಿಸದಮಲಾತ್ಮನಾದಿತ್ಯನುಪೋಲುವಿಧವಿಧಭಾಸದಿ ಪದೆ ಪದೆ ನೋಡುತವಿಧಿಯ ತಾತನ ಬಹುಮೋದಸುಗುಣಗಳಮುದದಲಿ ಚಿಂತಿಪಕೋವಿದಹಿರಿಯರಪಾದಸುಪಾಂಶುವ ನಿಯಮದಿ ಪೊಂದಿ ನೀಪದುಮೇಶನ ನಿನ್ನ ಹೃದಯದಿ ಚಿಂತಿಸಿವಂದಿಸು ನರಹರಿಯ 3ನಿಜಸುಖಮಾರ್ಗದಿ ಭಜಕ ಬಾಲಕ ಪೋಗೆಅರ್ಜಿತ ದ್ವೇಷದಿ ಮೂರ್ಜಗ ಶತ್ರುಗಜಾದಿಗಳಿಂ ಹೆಜ್ಜೆಜ್ಜೆಗೆ ಬಾಧಿಸೆಧೂರ್ಜಟಸೇವ್ಯ ಜನಾರ್ಧನ ನರಹರಿಗರ್ಜಿಪ ವದನನು ಸಜ್ಜನಪಾಲಕಅಜಸುರರೆಲ್ಲರು ತೇಜೋಮಯ ಅತಿಜ್ವಲಿಸುವ ನಖದಿಂ ದುರ್ಜನ ರಾಜನಜೋಜ್ಜೆಯ ಛೇದಿಸಿ ಭಜಕಗೆ ವರವಿತ್ತುಸೃಜ್ಯಾಸೃಜ್ಯರ ಪ್ರಾಜÕನ ಮರೆಯದೆವಂದಿಸು ನರಹರಿಯ 3ಸೃಷ್ಟ್ಯಾಧೀಶನದೃಷ್ಟನಾಗಿರುತಿಹಸೃಷ್ಟಾಸೃಷ್ಟ ಪ್ರವಿಷ್ಟಾಸೃಷ್ಟನುಶಿಷ್ಟರ ಇಷ್ಟ ಸುದೃಷ್ಟಿಯ ಬೀರುತಶಿಷ್ಟರ ಬಹು ವಿಧ ಕಷ್ಟಗಳಳಿದುಅಭೀಷ್ಟಗಳೀವನು ದುಷ್ಟರ ಶಿಕ್ಷಿಪಭ್ರಷ್ಟಜನರಿಗಿವ ಸ್ಪಷ್ಟನಾಗುವನಲ್ಲಶ್ರೇಷ್ಠೋತ್ತಮಪರಮೇಷ್ಠಿಜನಕನಿವಕಾಷ್ಟಾಗ್ನಿಯವೊಲ್ ಅದೃಷ್ಟಾದೃಷ್ಟನುದುಷ್ಟದೂರ ವಾಸಿಷ್ಠ ಶ್ರೀ ಕೃಷ್ಣನುತಿಷ್ಟನು ನಿನ್ನೊಳುತ್ಕøಷ್ಟನೆಂದರಿತುವಂದಿಸು ನರಹರಿಯ 4ಸರಿಪರರಿಲ್ಲದ ಸಿರಿಯರಸನಚಾರುಚರಣಾರಾಧನ ಪರಸುಖವೀವುದುಸಿರಿದೊರೆ ಸುಹೃದನು ಸಿರಿಸಹ ಮೆರೆಯುತಅರಿತ ಸುಜನರನು ಪೊರೆವನು ದಯದಿಮೊರೆಯನು ಲಾಲಿಸಿ ಪೊರೆದನು ಗರ್ಭವಮರೆತು ನಾರಾ ಎಂದ ನರಸುರಗೊಲಿದನುಪೊರೆದನು ದಯದಿ ನರಾಧಮ ಎನ್ನನುಕರಿವರ ದ್ರೌಪದಿವರದ ವಿಖ್ಯಾತನುಸರಸಿಜಭವತಾತ ಪ್ರಸನ್ನ ಶ್ರೀನಿವಾಸಪೊರೆವನು ನೆನೆವರ ಸಿರಿಭೂದೊರೆಯೆಂದುವಂದಿಸು ನರಹರಿಯ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ನಾಮಕಲ್ ಹನುಮಂತ68ಹನುಮಂತನಪಾದವನಜಕೆ ಶರಣುಪಹನುಮಂತನಪಾದವನಜಕ್ಕೆ ಎರಗಲುಅನಿಷ್ಟಗಳಳಿದು ಇಷ್ಟಾರ್ಥಗಳೀವ ಅ ಪಇನಸುತಗೊಲಿದನು ಹನುಮ ಆದುದರಿಂದಇನಕುಲತಿಲಕನು ತಾನೂ ಪಾಲಿಸಿದ1ಅನಿಮಿಷರಲಿ ಇವ ಪ್ರಥಮನಾಗಿಹ - ಭಾವಿವನರುಹಾಸನ ಜಗತ್ ಪ್ರಾಣಜೀವೋತ್ತಮ2ನಾಮಗಿರೀಶ ಶ್ರೀ ಪ್ರಸನ್ನ ಶ್ರೀನಿವಾಸನ್ನನಮಗೆಲ್ಲ ಒಲಿಸಲು ನಾಮಶಿಲದಿ ನಿಂತ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪ್ರಣವನಾರಾಯಣ ಕೃಷ್ಣ ಆಗಮನ ಸ್ತೋತ್ರ45ಬಾರೋ ಬಂದಿರೋ ಶ್ರೀಶ | ಶ್ರೀಧರಾ ಸಮೇತ ಬಂದಿರೋ ಈಶ ||ವಿಭುವೇ ಗುಣಾರ್ಣವ ಅಮಿತ ಪೌರುಷ ಸ್ವವಶ | ಅಮಿತಾರ್ಕ ಕಾಶ ||ಸರಸಿಜಾಸನ ಶಿವ ವಿಷಾದಿ ಅಮರವಂದ್ಯನೆಪರಮಭಾಗವತೇಷ್ಟ ಚಿಂತಾಮಣಿಯೇ ಜಯ ಜಯಶರಣು ಪಾಲಿಪ ಪ್ರಭುವೇ ನಾರಾಯಣನೇ ಕೃಷ್ಣನೇ || ಬಾರೋ|| ಪಪ್ರಣವಾಷ್ಠಾಕ್ಷರ ದಿವ್ಯ | ಆರುಅಕ್ಷರಮಂತ್ರ ಸುಪ್ರತಿಪಾದ್ಯವಿಶ್ವಾದಿ ಎಂಟು ರೂಪಚಿನ್ಮಯಕಾಯ|ಅರಿದರಧೃತಹಸ್ತಹಸ್ತವರದಅಭಯ| ಜಯ ಜಯತುಜೀಯಶ್ರೀಧರಾ ಸಮೇತನಾಗಿಹ ಪ್ರೋದ್ಯ ಪೂಷ ಸ್ವಕಾಂತಿ ತೇಜನೇಕೃದ್ಧವೀರ ಮಹಾದ್ಯುಸಹಸ್ರ ಉಲ್ಕ ನಿಜ ಸಚ್ಛಕ್ತ ಲೀಲೆಯಿಂಸರ್ವದಾ ಸರ್ವತ್ರ ಸರ್ವರೋಳ್ ಇದ್ದು ನಿಯಮಿಪ ವಿಭುವೇ ಪರತರ|ಕೃಷ್ಣರಾಮ ನೃಸಿಂಹ ವರಹನೇ ವಿಷ್ಣುವೇ ಪರಂಜ್ಯೋತಿ ಪರಂಬ್ರಹ್ಮ |ವಾಸುದೇವನೆ ಏಕದಶ ಶತಾನಂತರೂಪನಿರ್ದೋಷಗುಣನಿಧೇ |ಎನ್ನ ಪಾಲಿಪ ಪ್ರಭುವೇ ಶ್ರೀಶನೇ ವೇದಹನುಮಶಿವಾದಿ ವಂದ್ಯನೇ || ಬಾರೋ 1ಪ್ರಚುರಅಮಿತ ಆನಂದ ಅವಿಕಾರ ಚಿನ್ಮಯ ಸರ್ವಚೇಷ್ಟಕಕರ್ತಚೇತನಾಚರ ಸರ್ವವಶಿ ಜಗದ್ಭರ್ತಾ ಸೌಂದರ್ಯಸಾರನೆಇಂದ್ರಮಣಿ ದ್ಯುತಿವಂತ ಸೌಭಾಗ್ಯದಾತ |ಚಕ್ರಧರವರ ಅಭಯಹಸ್ತನೇ ಅಜಿತಅಜಜಗದೇಕವಂದ್ಯನೆಉರುದಯಾನಿಧೆ ಭೈಷ್ಮೀ ಸತ್ಯಾರೊಡನೆ ಬಂದು ನಿಂತಿದ್ದಿಲ್ಲಿಪರಮಲಾಭವು ಎನಗೆ ಸುಹೃದನೆ ಭೀಮದ್ರೌಪದಿ ಪಾಂಡವ ಪ್ರಿಯವಿದುರಗೊಲಿದನೆ ದೇವಕೀಸುತ ಸರ್ವಾಭೀಷ್ಟಪ್ರದ ಉದಾರನೆಉತ್ತರಾಸುಧಾಮಉದ್ಧವಗೋಪಿಜನ ಅಕ್ರೂರ ವರದನೇಹಲಧರಾನುಜ ಸುಭದ್ರೆ ಅಣ್ಣ ಷಣ್ಮಹಿಷಿರಮಣನೆ ಶರಣು ಸಂತತ || ಬಾರೋ 2ಸ್ವಾಮಿವೇಂಕಟರಮಣ | ಕುಲದೇವ ಸರ್ವೋತ್ತಮನೆ ಭಕ್ತಪ್ರಸನ್ನಪದ್ಮಾವತೀಶ ಕರುಣಿ ಪಾಲಿಸೋ ಎನ್ನ | ಶ್ರೀವತ್ಸ ಅರಿದರಾಅಭಯವರಕರ ಘನ್ನ | ಅಮಲೇಂದು ವದನಂ ||ಮುಗುಳುನಗೆ ಕಾರುಣ್ಯ ನೋಟವು ಜಗವನಳೆದ ತೀರ್ಥಪದಯುಗತಿರುಮಲೇಶ ಮದ್ಗೇಹನಿಲಯನೆ ರಂಗ ವರದ | ಲಕ್ಷ್ಮೀನೃಸಿಂಹನೆಪೂರ್ಣ ಪ್ರಮತಿಗಳಿಂದ ಪೂಜಿತ ಬೆಣ್ಣೆ ನರ್ತನ ಕೃಷ್ಣರಾಮನೇಇನನಿಗಮಿತ ಸ್ವಕಾಂತಿ ತೇಜನೇ ಕರ್ಣಕುಂಡಲೋಜ್ವಲ ಕಿರೀಟಿಯೆ |ಅನ್ನವಾಹನತಾತಪ್ರಸನ್ನ ಶ್ರೀನಿವಾಸನೆ ಪೂರ್ಣಕಾಮನೇ |ಘನದಯಾಂಬುಧೇ ದೇವ ದೇವಶಿಖಾಮಣಿಯೆ ಬಾ ||ಬಾರೋ ಬಂದಿರೋ ಶ್ರೀಶ|| 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಿಠಲ ಹೃಷಿಕೇಶನೆ ನತಜನಪೋಷ ವಾಸುಕೀಶಯನಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವಾಸವನುತ ರಜಿತೇಶ ನಮಿತಪದಕ್ಲೇಶಹರಣ ಜಗದೀಶ ಜನಾರ್ದನಅ.ಪನೀರೊಳಿಳಿದು ಮತ್ಸ್ಯಾವತಾರದಿಂದಲಿನಲಿದುಘೋರತಮನ ಗೆಲಿದುಚಾರುವೇದವ ತಂದೆ ಧೀರ ಕಮಠನಾದಿಕೇಸರಿಯಾಕಾರವನೇತಾಳಿಸಾರಿ ಕಂಬದಿ ಮೈದೋರುತ ತರಳಗೆಧೀರನ ಸೀಳಿದೆನಾರಮೃಗೇಶನೆ1ಬಲಿಯೊಳ್ ದಾನವ ಬೇಡಿ ನೆಲನಈರಡಿಮಾಡಿಛಲದಿ ಬಂಧಿಸಿ ಬಲಿಯ ತಲೆಯ ಮೆಟ್ಟಿದೆ ವಾಮನಾಛಲದಭಾರ್ಗವರಾಮ ಧರಣಿಜೆಗೊಲಿದನೆರಘುರಾಮ ಕೊಳಲನುಡಿಸಿ ಗೋವುಗಳೊಡನಾಡಿದೆತ್ರಿಪುರನ ಸತಿಯರ ವ್ರತವ ಪರಿಹರಿಸಿದಕಪಟಮೋಹನರೂಪನಿಪುಣಾ ಬೌದ್ಧಾವತಾರಕಪಟದೀ ಹಯವೇರಿ ಬಂದಾ ನಿಪುಣಕಲ್ಕ್ಯಾವತಾರೀ ಗುಪಿತದಿ ಸರ್ವಾ ವ್ಯಾಪಕನೆನಿಸಿದೆಕಪಟನಾಟಕಗೋವಿಂದದಾಸನ ಪ್ರಿಯಾ3
--------------
ಗೋವಿಂದದಾಸ