ಒಟ್ಟು 37 ಕಡೆಗಳಲ್ಲಿ , 21 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಕರ್ತ ನಾನಲ್ಲೆಂದು ಹಿರಿಯರಾಡಿದ ಮಾತು ಅರಿ ಜೀವೋಪಿ ಕರ್ತನೆಂಬ ವಿರೋಧ ಪ ಸಿರಿ ಅರಸ ತತ್ವೇಶರ ಕೈಯೊಳು ಚರಿಪಾಧೀನ ಜೀವನಲ್ಲವೆ ಪರಮ ನಿಷ್ಕ್ರಿಯ ನಾ ಹೀನ ಮನವೆ ಅ.ಪ ಜಲಾಗ್ನಿ ಸ್ತಂಭ ಜಪ ಕಲಿತ ಮಾತ್ರಕೆ ಪ್ರಾಣಿ ನಿಲಬಹುದೆ ಅನಲ ಜ್ವಾಲೆಯೊಳು ಮ್ಯಾಲೆ ಸುಖದಾಸೆಯಿಂದ ಹಲವು ಕರ್ಮಾಚರಿಸಿ ಗೆಲಬಹುದೆ ನಿಲಯ ಹರಿಕರ್ತನೆಂದ ನುಡಿಗೆ 1 ಬಿಡಿಬಾಯ ಮಾತಿಗೆ ಪೊಡವಿಪ ಒಪ್ಪುವುದಾದರೆ ಪಡುವದ್ಯಾಕೆ ತದ್ಧಿತಪಃ ಪ್ರಮಾಣ ಬಿಡುವುಧ್ಯಾಗೆ ಶ್ರುತಿ ಸ್ಮøತಿ ಹರಿ ಆಜ್ಞೆ ಕಾಯ ಏಕವಾಗೋ ತನಕ 2 ಜ್ಞಾನೇಚ್ಛಾಕ್ರಿಯ ಶಕ್ತಿ ಮಿನುಗುವ ಜೀವಕ್ಕೆ ನಿತ್ಯ ಸ್ವಭಾವದಲ್ಲೆ ಜ್ಞಾನಿಗೆ ಕೊಡುವ ಯಥೇಷ್ಟಾಚರಣೆ ಏನೇನು ಕೂಡದು ಶ್ರವಣಾಧಿಕಾರಿಗೆ 3 ನಾನು ನನ್ನದು ಎಂಬ ಜ್ಞಾನ ಅನುಗಾಲ ಇರಲಾಗಿ ನೀನು ನಿನ್ನದು ಎಂಬ ವಂಚನೆಯಲ್ಲವೆ ಹೀನ ಬಿಡದು ಇದರಿಂದ ಅನುಮಾನ ಮಾಡಸಲ್ಲ ತನ್ನ ಕ್ರಿಯ ಅನ್ಯಕ್ರಿಯದಂತಾಗೋತನಕ ಮನವೆ 4 ಜ್ಞಾತಾಜ್ಞಾತ ಕರ್ಮದೊಳು ಜ್ಞಾತಾನುಷ್ಠಾನ ವಿಶೇಷ ಪೀತನಾಹ ಶ್ರೀಶ ತಾನು ಕರ್ಮ ನಿಷ್ಪಲವಲ್ಲವು ಜ್ಞಾತ ವಿಜಯ ರಾಮಚಂದ್ರವಿಠಲ 5
--------------
ವಿಜಯ ರಾಮಚಂದ್ರವಿಠಲ
ಮಾಯೆಯನ್ನು ಗೆದ್ದೆನೆಂದು ಮುರುಕಿ ಮುರುಕಿ ಕಿರುಚುವಮೂರ್ಖನವನಮಂದಮತಿಯನೇನ ಹೇಳಲಿರಾಯರಾದ ಮೂರು ಮಂದಿ ಮೊರೆಯ ಹೊಕ್ಕಿಹರು ಬಗಳಮಾಯೆಯನ್ನು ಗೆದ್ದೆನೆನಲು ಲಜ್ಜೆಯಿಲ್ಲವೆಪಮೋಡದಾ ಮಿಂಚಿನಂತೆ ಮೋಹಕವೆ ಬೆಳಗುತಿರಲುಗೂಢವಿಹ ಮುನಿಯು ತಪಿಸಿ ಮುಳುಗಿಹೋದರುರೂಢಿಯಲ್ಲ ಮೋಹನದಿ ಮುಳುಗಿ ತೇಲಲು ಆ-ರೂಢ ಆರಕ್ಷಕರುದಯದಲಾದರು1ತಾನದಾರು ತಾನದೆಲ್ಲಿ ತನ್ನ ಸ್ಥಳವು ಎತ್ತಲುತಾನು ನಾನು ಎಂಬುದಕ್ಕೆಠಾವುಇಲ್ಲವುತಾನು ಗೆದ್ದೆ ಗೆದ್ದೆನೆಂದು ಹೇಳಿಯಾಡೆಏನು ರೂಪು ನಾಮಕ್ರಿಯೆ ಜೀವ ಶಿವರು ಮಾಯೆಯು2ತಾನೆ ಸಾಕ್ಷಿಯಾಗಿ ಪ್ರಪಂಚ ನಾಶವಾಗಿಏನೇನುವಾಸನೆಹುಟ್ಟದಾಗಿಯುತಾನು ಜಗವು ಸರ್ವವಾಗಿ ಸರ್ವಜಗವುತಾನೆಯಾಗಿ ತಾನೆ ಚಿದಾನಂದ ಬಗಳೆ ತಾನಾದರಲ್ಲದೆ3
--------------
ಚಿದಾನಂದ ಅವಧೂತರು
ಮೋರೆಯ ಕಾಂತಿಗೆ ಹಚ್ಚಿರೋ ಕಿಚ್ಚಾಮರುಳಾಗುತಿರುತಿಹನವ ಹುಚ್ಚಾಪಯೋನಿಯ ಮುಖ ನೋಡೆ ಎಲ್ಲಕೆಹೇಸಿಕೆತಾನೆ ರಕ್ತವ ನಿತ್ಯತವಿಸುತಿಹುದುಏನೇನು ಶುಚಿಯಲ್ಲ ಇಂತು ವಿವೇಕವಿಲ್ಲಏನು ಕಾರಣ ಮೋಹ ಪಡುವರೋ1ನರಕಾಣುವ ಪೂರಿತವದು ಭಗವದುಭರದಿ ದುರ್ಗಂಧವಾಸನೆಬಹುದುಸರಸಿಜೋದ್ಭವನಾಗಲಿ ಶಿವನೆ ತಾನಾದರಾಗಲಿಮರುಳೆ ಪುನಃ ಜನ್ಮಕೆ ತಾರದೆ ಬಿಡುವುದೇ2ಚಕ್ರಿ ಖಂಡವು ಆಸ್ತಿ ಚದುರಸ್ತಿರೊಪಾಗಿಕರ್ಮವೆಂಬುದಕೆ ಸ್ಥಾನವಾಗಿಹುದುನಿರ್ಮಳ ಚಿದಾನಂದ ವಸ್ತುವ ತಿಳಿಗೊಡದಧರ್ಮದಾ ಪಥದಲ್ಲಿ ಕೆಡಹುತಿಹುದು3
--------------
ಚಿದಾನಂದ ಅವಧೂತರು
ಯೋಗಿಯ ನಡತೆ ಲೋಕಕ್ಕೆ ವಿರುದ್ಧಆಗಲೆಂದೇ ಮೂಡುತಿರಲವನೇ ಗೆದ್ದಪಸ್ನಾನವೆಂಬುದು ಇಲ್ಲ ಸಂಧ್ಯಾದಿ ಮೊದಲಿಲ್ಲಹೀನ ಶೀಲತ್ವವದು ಇರುತಿಹುದುಏನೇನು ಶುಚಿಯಿಲ್ಲ ಜಾತಿ ಸಂಕರವೆಲ್ಲತಾನು ಪಿಶಾಚಿಯಂತಿಹನುಯೋಗಿ1ಕಂಡಲ್ಲಿಯೆ ಉಂಬ ಕಂಡ ಕಡೆಯೆತ್ತಿಂಬಹೆಂಟೆ ಹುಡಿಯನ್ನದಲೆ ಮಲಗಿಕೊಂಬಭಂಡ ನಡತೆಯ ನಡೆದು ಭ್ರಷ್ಟನಾಗಿ ಕಾಣಿಸುತಉಂಡ ಬಾಯಿಯ ತಾನು ತೊಳೆಯದಿಹಯೋಗಿ2ದೇಹಸ್ಥಿತಿಯನು ನೋಡೆ ಮಣ್ಣಿಹುದು ಗೇಣುದ್ದಊಹಿಸಲು ತಲೆಯಲ್ಲ ಜಡೆಗಟ್ಟಿ ಬಿದ್ದಿಹುದುದೇಹಪರವಶನಾಗಿಉನ್ಮತ್ತಸ್ಥಿತಿಯಾಗಿದೇಹಿ ಚಿದಾನಂದಗುರುತಾನಾದಯೋಗಿ3
--------------
ಚಿದಾನಂದ ಅವಧೂತರು
ಶ್ರೀ ವೇದನಾಯಕಿ - ಭವಾನಿ83ವೇದನಾಯಕಿಆದರದಲಿ ನಿನ್ನಾರಾಧಿಪ ಭಕ್ತರಸಾದರದಲಿ ಸದಾ ಕಾಯ್ವ ಉದಾರಿ ಪಅಮೃತ ಸರಿತ ಕಾವೇರಿ ಭವಾನಿಸುಮ್ಮನೋಹರ ಸಂಗಮ ಕ್ಷೇತ್ರದಲ್ಲಿಅಮಲ ಸ್ಪಟಿಕ ನಿಭ ಕಾಂತಿಮಾನ್ ಈಶಸಮೇತ ವಿರಾಜಿಪ ಸುಮನಸನುತೆ -- ಮನ್ಮಾತೆ ನಮಸ್ತೆ 1ಸ್ನಾನ ಸಂಧ್ಯಾ ಜಪ ಸೇವೆ ಅರ್ಚನೆಗಳುಏನೇನು ಮಾಡದೆ ಹೀನ ಕರ್ಮದಿ ರತಎನ್ನ ಮನ್ನಿಸಿ ಬಹುದಯದಿ ಸದಾ ನೀಘನತರ ಪಾಲಿಸೆ ಮೀನಲೋಚನೆ -- ಮನ್ಮಾತೆ ಕೃಪಾಕರಿ 2ವೇಧನ ಪಿತ ಜಗ ಜನ್ಮಾದಿ ಕಾರಣಆದಿಕೇಶವ ಶ್ರೀ ಸುಂದರೀ ರಮಣ ಪ್ರ -ಮೋದಿ ಗೋಪಾಲ ಪ್ರಸನ್ನ ಶ್ರೀನಿವಾಸಶ್ರೀದನ ಕಾಣಿಸೆ ಖೇಶ ವಲ್ಲೀಶನ ಮಾತೆ -- ಮನ್ಮಾತೆ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಗುರುರಘುಪತಿಏನೇನು ಭಯವಿಲ್ಲ ನಮಗೆಪವಮಾನ ಸೇವಕಗುರುರಘುಪತಿಯ ದಯವಿರೆ ಪಜೋಡು ಕರ್ಮದಿ ಬಿದ್ದು ಕೇಡು ಲಾಭಕೆ ಸಿಲ್ಕಿಮಾಡಿದ್ದೆ ಮಾಡುತ ಮೂಢನಾಗಿರೂಢಿವಳಗೆ ತಿರಿಗ್ಯಾಡುವ ಅಜ್ಞಾನಿಕೋಡಗನ್ನ ಸಿಂಹ ಮಾಡಿದ ಗುರುವಿರೆ1ಆವಾನು ದಯಮಾಡೆ ದೇವನು ವಲಿವನುಅವನ ನಂಬಲು ದೇವಗಣಾಕಾವಲಿಗಳಾಗಿ ಕಾವದು ಅಂತಕೋವಿಂದಾಗ್ರಣಿಗುರುರಘುಪತಿ ದಯವಿರೆ 2ಕರವೆಂಬೊ ಲೇಖನ ದ್ವಾರದಿಂದ ನಮ್ಮಶಿರಿ ಗೋವಿಂದ ವಿಠಲರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದುತಿರುಗುವಗುರುಕೃಪೆ ನೆರಳಿರೆ 3
--------------
ಸಿರಿಗೋವಿಂದವಿಠಲ