ಒಟ್ಟು 46 ಕಡೆಗಳಲ್ಲಿ , 20 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ379ಇಂದೀಗ ಹರಿದಿನವು ಏಕಾದಶಿಯೆಂದುಶೋಭಿಪ ದಿನವುಪಚಂದಾದಿ ವಿಷ್ಣುಸಾಯುಜ್ಯ ಹೊಂದುವುದಕ್ಕೆಅಂದವಾಗಿಹ ದಿನ ಸಂದೇಹವಿಲ್ಲವುಅ.ಪಶರಧಿಮಥಿಸೆ ಸುಧೆಯೂ ಬರಲು ಕಂಡುದುರುಳರೊಯ್ಯಲೂ ಹರಿಯೂಸರ್ವರಿಗುಪವಾಸವೆಂದು ತಾನ್ ಸೆಳೆದನುವರವಿತ್ತ ಮಾಸಕ್ಕೆ ಎರಡೇಕಾದಶಿಯೆಂದೂ1ದಶಮಿ ಒಂದಶನಾಗೈದೂ ಏಕಾದಶಿ ದಿವಸುಪವಾಸವಿರ್ದುಕುಸುಮನಾಭನ ಪೂಜೆಗೈದು ತೀರ್ಥವಗೊಂಡುನಿಶೆಯೊಳ್ ಜಾಗರವಿದ್ದು ಹರಿಕಥೆ ಕೇಳ್ವುದೂ2ವೀಳ್ಯ ಭೋಜನ ಪಾನವೂ ಈ ದಿನರತಿಕೇಳಿನಿದ್ರೆಯು ವಜ್ರ್ಯವೂಖೂಳನಾದರೆ ಯಮನಾಳೊಳ್ ಪಿಡಿದೊಯ್ದುಗೋಳುಗುಡಿಸುವ ಹೇಳಲಸಾಧ್ಯವು3ಅಶನಕ್ಕೆ ಬಿಸಿ ಮಳಲು ತಿನಿಸೀ ವೀಳ್ಯವ್ಯಸನ ಪಾನಕೆ ಉಕ್ಕಂ ತರಸಿ ಬಾಯ್ಗೆರಸಿಮುಳ್ಳು ಹಾಸಿಗೆ ಮೇಲೆ ಮಲಗೆಂದು ಹೊ-ರಳಿಸಿ ಉರಿಕಂಭ ಧರಿಸೆಂಬರ್ಸತಿಪುರುಷರಿಗೆ4ಧ್ರ್ರುವ ಹರಿಶ್ಚಂದ್ರ ಪ್ರಹ್ಲಾದ ತನ್ನಭುವನಕಟ್ಟಳೆಯೊಳ್ ರುಕ್ಮಾಂಗದಭವಹರವ್ರತಗೈದು ಹರಿಪಾದ ಸೇರ್ವರುಭುವನದಿ ಸರ್ವರಿಗ್ಯೋಗ್ಯವೀ ವ್ರತವೂ5ದ್ವಾದಶಿ ವ್ರತವೆಂಬುದು ಶ್ರೇಷ್ಠವು ಬೇಗಸಾಧಿಸಿ ಪಾರಣೆಗೈವುದೂಮೇದಿನಿಯೊಳಂಬರೀಷ ನೀ ವ್ರತಗೈದೂಆದಿಮೂರುತಿ ಗೋವಿಂದನ ಪಾದಸೇರ್ದನೂ6<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಶ್ರೀ ಪ್ರಸನ್ನ ರಘೂತ್ತಮ ತೀರ್ಥರ ಚರಿತ್ರೆ122ಶ್ರೀ ರಘೂತ್ತಮರಂಘ್ರಿ ರಾಜೀವಯುಗ್ಮದಲಿಶಿರಬಾಗಿ ಶರಣಾದೆ ಧನ್ಯನಾದೆಶ್ರೀರಾಮಚಂದ್ರನ ಪೂರ್ಣಾನುಗ್ರಹ ಪೂರ್ಣಪಾತ್ರರು ಎಮ್ಮ ಪಾಲಿಸುವ ಕರುಣಾಳು ಪಶ್ರೀ ಹಂಸ ಲಕ್ಷ್ಮೀಶ ಪರಮಾತ್ಮ ಸರ್ವೇಶಬ್ರಹ್ಮ ಸನಕಾದಿಗಳ ಗುರುಪರಂಪರೆಯಬ್ರಹ್ಮಪದ ಐದುವ ಶ್ರೀ ಆನಂದತೀರ್ಥರನೀರ್ರುಹ ಚರಣಂಗಳಲ್ಲಿ ಶರಣಾದೆ 1ಪಂಕೇರುಹನಾಭ ನರಹರಿಮಾಧವಅಕ್ಷೋಭ್ಯ ಜಯತೀರ್ಥ ವಿದ್ಯಾಧಿರಾಜವಾಗ್ವಜ್ರ ರಾಜೇಂದ್ರ ಕವಿವರ ಕವೀಂದ್ರವಾಗೀಶಶ್ರೀ ರಾಮಚಂದ್ರರಿಗೆ ಶರಣು2ಶ್ರೀ ರಾಮಚಂದ್ರರ ಕರಜರು ಈರ್ವರಿಗೂಎರಡನೇಯವರು ವಿದ್ಯಾನಿಧಿಯಹಸ್ತಅರವಿಂದೋತ್ಪನ್ನ ರಘುನಾಥರಿಗೆ ನಮೋ ಎಂಬೆಸೂರಿವರ ರಘುವರ್ಯರಲ್ಲಿ ಶರಣಾದೆ 3ರಘುವರ್ಯ ಗುರುರಾಜ ಕರಕಮಲ ಸಂಜಾತರಘೂತ್ತಮ ತೀರ್ಥರ ಚರಣಕಾನಮಿಪೆಅಗಣಿತಗುಣಾಂಬುಧಿ ಅಘದೂರ ರಘುಪತಿಯಹೃದ್ಗುಹಾ ಒಳಹೊರಗೆ ಕಾಂಬುವಧೀರ 4ರಾಮಚಂದ್ರಾಚಾರ್ಯ ನಾಮ ಬಾಲಕನುಬ್ರಹ್ಮಚಾರಿಯು ಧೃಢÀವ್ರತನು ಹರಿಭಕ್ತಸುಮನೋಹರಮೂರ್ತೇ ಗುಣಗುಣಾಲಂಕೃತನುಈ ಮಹಾವೇದಾಂತ ಪೀಠಕ್ಕೆ ಅರ್ಹ 5ತಮ್ಮ ಮಠ ಶಿಷ್ಯರಲು ಮಾಧ್ವ ಸಜ್ಜನರಲ್ಲೂಸುಮಹಾಪಂಡಿತರು ಇರುತಿದ್ದರೂನುಈ ಮಹಾ ಪುರುಷ ಬಾಲನೇ ತಕ್ಕವನೆಂದುನೇಮಿಸಿದರು ಪೀಠಕ್ಕೆ ರಘುವರ್ಯ ಗುರುವು 6ರಘೂತ್ತಮತೀರ್ಥ ನಾಮದಿ ತುರೀಯಾಶ್ರಮರಘುವರ್ಯರೀ ರಾಮಚಂದ್ರಗೆ ಇತ್ತುರಾಘವನ ಪೂಜಾದಿ ಸಂಸ್ಥಾನ ಅಧಿಕಾರನಿಗಮಾಂತ ಗುರುಗಳು ನಿಯಮನ ಮಾಡಿದರು 8ವೇದವೇದಾಂತ ಸಚ್ಛಾಸ್ತ್ರ ಪಂಡಿತನುವಿದ್ಯಾರ್ಥಿ ಬಹುಮಂದಿಗೆ ಪಾಠ ಪೇಳುವವಿದ್ವಾಂಸ ಓರ್ವನ್ನ ರಘುವರ್ಯ ತೀರ್ಥರುವಿದ್ಯೆಕಲಿಸಲು ಏರ್ಪಾಡು ಮಾಡಿದರು9ಶೇಷಪ್ಪನಾಯಕರ ಮಕ್ಕಳು ಈರ್ವರಲಿಜ್ಯೇಷ್ಠ ಪುತ್ರನು ವಿದ್ವಾಂಸರಲಿ ಪ್ರಮುಖಶಿಷ್ಯರೂ ಬಹು ಜನರು ಈತನಿಗೆ ಉಂಟುಭೂಷಣವೆಂದೆನಿಸಿದನು ಮಾಧ್ವ ಸಮೂಹಕ್ಕೆ 10ಸಾವಿರದ ನಾನ್ನೂರು ಎಪ್ಪತ್ತ ಒಂಭತ್ತುಸಂವತ್ಸರದಲಿ ಶಾಲಿವಾಹನದಿದಿವಸ ತದಿಗೆ ಕೃಷ್ಣ ಜ್ಯೇಷ್ಠ ಪಿಂಗಳದಿಶ್ರೀವರನಪುರಕೆ ತೆರಳಿದರು ರಘುವರ್ಯರು 11ದಯಾಳು ರಘುವರ್ಯರು ಸಮಾಧಿಸ್ಥರಾಗಲುಬಾಲ್ಯಾವಸ್ಥೆಯಲಿ ಇದ್ದ ರಘೂತ್ತಮರುವಿದ್ಯಾವ್ಯಾಸಂಗಗುರುನಿಯಮನದಂತೇಯೆಗೈಯಲಿ ಪೋದರು ಆ ವಿದ್ವಾಂಸನಲ್ಲಿ 12ಮಣೂರು ಎಂದ್ಹೆಸರುಉಳ್ಳಆ ಊರಲ್ಲಿಘನವಿದ್ವನ್ಮಣಿಯಲ್ಲಿ ಕಲಿಯುವಾಗಧನವಂತ ಊರುನಾಯಕರಘೂತ್ತಮರಲ್ಲಿಬಿನ್ನೈಸಿದ ಭೋಜನಕೆ ಬರಬೇಕೆಂದು 13ಸ್ವಾಮಿಗಳಿಗೆ ಪಾಠ ಹೇಳುವ ವಿಪ್ರನೂಆ ಮನೆಯಲಿ ಊಟಕ್ಕೆ ಬಂದಿದ್ದನೇಮ ಆಹ್ನೀಕ ಮುಗಿಸಿ ಬರಲಿಕ್ಕೇತಾಮಸವು ಆಯಿತು ವಿಲಂಬವು ಸ್ವಲ್ಪ 14ಸ್ವಾಮಿಗಳ ಬಾಲ್ಯತ್ವ ವಿದ್ಯಾರ್ಥಿತ್ವವುಆ ಮನೆಯಲಿ ಗೃಹಸ್ಥನನ್ನೂ ವಿಪ್ರನನ್ನೂ ಮೋಹಿಸಿತುತಮ್ಮ ಯೋಗ್ಯತೆ ಸ್ಥಾನ ಮರೆತು ಗರ್ವದಿವಿಪ್ರಸ್ವಾಮಿಗಳ ಲೆಕ್ಕಿಸದೆ ಕುಳಿತನು ಭೋಜನಕೆ 15ಅಂದು ರಾತ್ರಿಸ್ವಪ್ನದಲಿ ರಘುವರ್ಯ ಗುರುಗಳುಬಂದು ಪೇಳಿದರ್ತಮ್ಮ ಪ್ರೇಮಿಶಿಷ್ಯರಿಗೆಇಂದಿನಾರಭ್ಯ ಪಾಠವ ನಿಲಿಸು ವಿಪ್ರನಲಿಕುಂದುಇಲ್ಲದೆ ಹೇಳುವೆ ನೀನೇವೆ16ಈ ರೀತಿ ಸ್ವಪ್ನವು ಆಗೇ ರಘೂತ್ತಮರುವಿಪ್ರನಲಿ ಪಾಠಕ್ಕೆ ಪೋಗುವುದು ತೊರೆದುಆ ಪಂಡಿತವರ್ಯರಿಗಿಂತ ಉತ್ತಮ ರೀತಿತಾಪೇಳಿದರು ಪಾಠ ಮಠದಿ ಶಿಷ್ಯರಿಗೆ 17ಗುರುಗಳಲಿಹರಿಇಷ್ಟ ಗುರುದ್ವಾರ ಒಲಿವನುಗುರುಅನುಗ್ರಹ ಇದ್ದರೇಹರಿಅನುಗ್ರಹಗುರುಪ್ರಸಾದವ ಪಡೆದ ಶ್ರೀ ರಘೂತ್ತಮರಿಗೆಶಾಸ್ತ್ರ ಜ್ಞಾನವು ಪ್ರಜ್ವಲಿಸಿತು ಪೂರ್ಣದಲಿ 18ಜಾತಾಪರೋಕ್ಷಿಗಳು ದೇವತಾಂಶರಿಗೇವೆಜ್ಞಾತವಾಗುವ ಪದ ವಾಕ್ಯದ ತಾತ್ಪರ್ಯಈ ದೇವತಾಂಶ ಶ್ರೀ ರಘೂತ್ತಮ ಗುರುವರರುಸಂದೇಹವಿಲ್ಲದೆ ತಿಳಿದು ಬೋಧಿಸಿದರು 19ತನ್ನಲ್ಲಿ ವ್ಯಾಸಂಗ ಪೂರೈಸದ ಬಾಲಏನು ಪಾಠವ ಹೇಳೇ ಶಕ್ತನೆಂದರಿಯೆಕಾಣದೆ ಮರೆಯಾಗಿ ನಿಂತು ಆವಿಪ್ರಶ್ರವಣ ಮಾಡಿದ ಗುರುಗಳು ಬೋಧಿಸುವುದು 20ಸಂದಿಗ್ಧÀ್ದವಾಗಿ ತನಗಿದ್ದ ವಿಷಯಗಳನ್ನೂಅದ್ಭ್ಬುತ ರೀತಿಯಲಿ ಅನಾಯಾಸವಾಗಿಅತಿವಿಶದದಿ ರಘೂತ್ತಮರು ಪೇಳಲುಕೇಳಿಬಂದು ಮುಂದೆ ನಿಂತು ನಮಿಸಿದನುವಿಪ್ರ21ತಾನು ಮಾಡಿದ ಉದಾಸೀನ ಅಪರಾಧಗಳಘನದಯದಿ ಕ್ಷಮಿಸಬೇಕೆಂದು ಬೇಡುತ್ತತನು ದಂಡವತ್ ಭುವಿಯಲಿ ಬಿದ್ದು ನಮಿಸಿದನುದೀನದಯಾಳುಗುರುಅಭಯನೀಡಿದರು22ದಿಗ್ವಿಜಯ ಮಾಡುತ್ತ ಅಲ್ಲಲ್ಲಿ ದುರ್ಮತದುರ್ವಾದಿಗಳನ್ನು ಖಂಡಿಸಿ ಸಿದ್ಧಾಂತತತ್ವಬೋಧಿಸಿ ಜಗತ್ ಪ್ರಖ್ಯಾತರಾದರುಶಾಶ್ವತ ನಿಜಸುಖ ಮಾರ್ಗದರ್ಶಕರು 23ರಘುವರ್ಯ ಗುರುಗಳು ನೇರಲ್ಲು ಸ್ವಪ್ನದಲುರಘೂತ್ತಸಮರಿಗೆ ಪೇಳಿದ ಪ್ರಕಾರದಿಗ್ವಿಜಯ ಸಮಯದಿ ಸಂಸ್ಥಾನಕ್ಕೆ ಭೂಷಣಬಗೆಬಗೆ ವಸ್ತು ಪರಿವಾರ ಸೇರಿಸಿದರು 24ವೇದಾಂತ ಸಾಮ್ರಾಜ್ಯ ರಾಜಗುರುರಾಜರುಹಸ್ತಿಘೋಟಕ ಕೊಂಬು ವಾದ್ಯಮೇಳಗಳುಸುತ್ತಲೂ ವಿದ್ವಜ್ಜನ ವೇದಘೋಷದ ಮಧ್ಯಮುತ್ತು ಪಲ್ಲಕ್ಕಿಯೊಳು ಕುಳಿತರು ದೇವರ ಸಹ 25ಪೋದ ಕಡೆಗಳಲಿ ದಿಗ್ವಿಜಯ ರಾಮಾರ್ಚನೆವಿದ್ವಜ್ಜನ ಸಭೆ ವಾಕ್ಯಾರ್ಥ ಪಾಠಸಿದ್ಧಾಂತ ಸ್ಥಾಪನೆ ದುರ್ಮತ ನಿರಾಸವುಸಾಧು ಸಜ್ಜನರ ಉದ್ಧಾರ ಪ್ರತಿದಿನವು 26ಬಾದರಾಯಣನಿರ್ಣೀತ ರೀತಿಯಲಿಮಧ್ವರಾಯರು ಬರೆದ ಗ್ರಂಥಗಳಿಗೆಅದ್ಬುತ ಟೀಕೆ ಜಯತೀರ್ಥರು ಮಾಡಿಹರುಸದ್ಭಾವ ಬೋಧವು ರಘೂತ್ತಮರ ರಚನೆ 27ಟೀಕಾ ಭಾವಬೋಧರು ಎಂದು ಪ್ರಖ್ಯಾತರಘೂತ್ತಮರ ಎಲ್ಲೆಲ್ಲೂ ವಿದ್ವಜ್ಜನರುನಗರಪಟ್ಟಣ ಗ್ರಾಮ ನಾಯಕರು ಪ್ರಮುಖರುಸ್ವಾಗತ ಅರ್ಪಿಸಿ ಪೂಜಿಸಿದರು ಮುದದಿ 28ಪುಟ್ಟಿದಾರಭ್ಯಹರಿಪಾದಕಮಲದಿ ಮನಇಟ್ಟು ರಘುವರ್ಯರು ಕೊಟ್ಟ ಸಂಸ್ಥಾನಪಟ್ಟ ಆಳಿ ಸರ್ವೋತ್ತಮನನ್ನ ಸೇವಿಸಿಶ್ರೇಷ್ಠತಮ ಸುಖಪ್ರದಮಾರ್ಗತೋರಿಹರು29ಹದಿನೈದು ನೂರು ಹದಿನೇಳು ಶಕ ಮನ್ಮಥಶುದ್ಧ ಏಕಾದಶಿ ಪೌಷ್ಯದಲಿ ಹರಿಯಪಾದಸೇರಿದರು ಸಂಸ್ಥಾನ ಆಡಳಿತವೇದವ್ಯಾಸ ತೀರ್ಥರು ಮಾಡಲಿಕೆ ಬಿಟ್ಟು 30ಮತ್ತೊಂದು ಅಂಶದಲಿ ವೃಂದಾವನದೊಳುಹತ್ತಾವತಾರಹರಿದ್ಯಾನಪರರಿಹರುಭಕ್ತರು ಅಲ್ಲಲ್ಲಿ ಅರ್ಚಿಸಿ ಸೇವಿಸುವಮೃತ್ತಿಕೆಯಲ್ಲು ಸಹ ಇದ್ದು ಪಾಲಿಪರು 31ವೃಂದಾವನ ತಿರುಕೋಯಿಲೂರ್ ಮಣಂಪೂಂಡಿಎಂದು ಕರೆಯಲ್ಪಡುವ ಗ್ರಾಮದಲಿ ಇಹುದುಇಂದುಶೇಖರ ಚಾಪದಿಂದ ಉದಿಸಿದ ಪುಣ್ಯನದಿಯು ಹರಿಯುತ್ತೆ ಮಜ್ಜನವು ಅಘಹರವು 32ಮಂದಜಾಸನಮೊದಲಾದ ಸುರವೃಂದವಂದಿತ ರಮಾಪತಿಯು ರಘೂತ್ತಮಾಂತಸ್ಥವೃಂದಾವನದಿಗುರುಹರಿಭಕ್ತಿ ಪೂರ್ವಕದಿಬಂದು ಸೇವಿಪರಿಗೆ ವಾಂಛಿತÀಗಳೀವ 33ಗಾಳಿ ಬಿಸಿಲು ಮಳೆ ಮಂಜುಗಳ ಲೆಕ್ಕಿಸದೆಮಾಲೋಲನ ಧ್ಯಾನಿಸುತ ವೃಂದಾವನದೊಳುಕುಳಿತಿಹರುಪರಮಕಾರುಣಿಕಈ ಗುರುಗಳುಪಾಲಿಸುತಿಹರು ಎಮ್ಮಅನುಗಾಲದಯದಿ34ವೃಂದಾವನ ದರ್ಶನ ತೀರ್ಥ ನಮಸ್ಕಾರಪ್ರದಕ್ಷಿಣೆ ಅರ್ಚನೆ ಹಸ್ತೋದಕವಂದನೆ ಸೇವಾದಿಗಳ ಮಾಳ್ಪ ಸಜ್ಜನರಕುಂದುಕೊರತೆಗಳಳಿವ ಇಷ್ಟಾರ್ಥ ಪ್ರದರು35ಪಿಲ್ಲಿ ಶೂನ್ಯಾದಿ ವಾಮಾಚಾರ ಪೀಡೆಗಳುಗಾಳಿದುಷ್ಟಗ್ರಹ ಪೈಶಾಚಾದಿಗಳುಕಳವಳಿಕೆ ಬುದ್ದಿಭ್ರಮೆ ವ್ಯಾಧಿದಾರಿದ್ರ್ಯಾದಿಎಲ್ಲ ದೋಷಗಳನ್ನ ಪರಿಹರಿಸುವರು 36ಸವೈರಾಗ್ಯ ಜ್ಞಾನವ ಭಕುತಿ ಅಪರೋಕ್ಷವಸೇವಿಪ ಯೋಗ್ಯರಿಗೆ ಒದಗಿಸಿ ಉದ್ಧರಿಸಿಸರ್ವವಿಧದಲು ಭಾಗ್ಯ ಆಯುಷ್ಯ ಆರೋಗ್ಯಈವರು ಭಕ್ತಯಲಿ ಸ್ಮರಿಸಿ ವಂದಿಪರ್ಗೆ 37ಉತ್ತಮ ತರಗತಿ ದೇವತಾಂಶರು ಇವರುಮಧ್ವಮತದುಗಾಬ್ಧಿ ಪೂರ್ಣಚಂದ್ರಹತ್ತು ತಿಂಗಳು ಹೊತ್ತು ಹೆತ್ತ ಉತ್ತಮ ಸಾಧ್ವಿಮಾತೆಯ ಭಾಗ್ಯ ಏನೆಂಬೆ ಇಂಥವರ 38ಸೂರಿಸುರವರ ಶ್ರೀ ರಘೂತ್ತಮರ ಚರಣದಲಿಶರಣಾದೆ ಎನ್ನಯ ಎನ್ನಸೇರಿದವರಪರಿಪರಿ ಪೀಡೆಗಳ ಪಾಪಗಳ ಅಳಿದುಕಾರುಣ್ಯ ಔದರ್ಯದಿ ಪಾಲಿಸುವರು 39ಸರಿದ್ವರ ಪಿನಾಕಿನಿಯಲಿ ಕೇಶವ ಜಗವಈರಡಿಯಲಿ ಅಳೆವ ತ್ರಿವಿಕ್ರಮನು ಶಿರಿಯುಇರುತಿಹರು ಹನುಮ ಶಿವಸ್ಕಂಧ ತೀರಗಳಲಿಶರಣೆಂಬೆ ಇವರೆಲ್ಲರ್ಗು ಶ್ರೀ ರಘೂತ್ತಮರಿಗೂ 40ಕಮಲಭವಪಿತ `ಶ್ರೀ ಪ್ರಸನ್ನ ಶ್ರೀನಿವಾಸ 'ಕಮಲಾಯುತವಿಶ್ವರೂಪತ್ರಿವಿಕ್ರಮಗೂಭೀಮ ಶಿವಸ್ಕಂಧರಿಗು ಪ್ರಿಯತಮ ರಘೂತ್ತಮರಈ ಮಂಗಳ ಚರಿತ ಶ್ರೀ ಕೃಷ್ಣಾರ್ಪಿತವು 41 ಪ|| ಇತಿ ಶ್ರೀ ರಘೂತ್ತಮ ತೀರ್ಥ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವ್ಯಾಸರಾಜ ನರ್ತನ ಗೋಪಾಲಕೃಷ್ಣ ಸ್ತೋತ್ರ26ರಾಜಗರು ಶ್ರೀವ್ಯಾಸರಾಜರ ಭಾಗ್ಯಕ್ಕೆಈ ಜಗದಿ ಎಣೆಯುಂಟೆ ಅರಸಿನೋಡೆ ||ರಾಜೀವೇಕ್ಷಣ ಜ್ಞಾನಾನಂದ ಬಲಪೂರ್ಣ |ರಾಜ ಗೋಪಾಲ ಶ್ರೀ ಕೃಷ್ಣನು ಕುಣಿದ ಪಏನು ಯತ್ನಿಸಿದರೂ ತೆರೆಯಲಿಕ್ಕಾಗದ |ಸ್ವರ್ಣಮಂಜೂಷದೊಳು ಮೂರ್ತಿಗಳ್ ||ಮುನಿವರ ವ್ಯಾಸರು ಸ್ಪರ್ಶಿಸೆ ತೆರೆಯಿತು |ಕೃಷ್ಣಜ್ವಲಿಸಿದ ಭೈಷ್ಮೀ ಸತ್ಯಾ ಸಮೇತ 1ಭಕ್ತ ವಾತ್ಸಲ್ಯದಿ ಸರಿಮಿಗಿಲು ಇಲ್ಲವು |ಭಕ್ತವತ್ಸಲ ಶ್ರೀಯಃ ಪತಿಗೆ ಎಲ್ಲೂ ||ಭಕ್ತಾಗ್ರೇಸರುತರಳಪ್ರಹ್ಲಾದನಿಗೆ |ಎದುರಾರು ಉಳ್ಳರೈಧರೆಯ ಮ್ಯಾಲೆ 2ಬಾಲಕಸ್ತುತಿಸಿದ್ದು ನರಹರಿ ಹರುಷದಿ |ಕೇಳಿದನು ಆನಂದದಿ ತಾನರ್ತಿಸಲು |ಅಲ್ಲ ಸಮಯ ಆಗ ಎಂದು ಈಗ ಪ್ರಹ್ಲಾದ |ಇಳೆಯಲಿ ಮುನಿವ್ಯಾಸ ಎಂದು ತಾ ನಲಿದ 3ಸುಳಿಯುವ ಯುವ ಕರ್ಮದಿಂ ಕೌರವರೊಡೆ ಇದ್ದ |ಬಾಲ್ಹಿಕರಾಯನು ಭಕ್ತಿ ಕುಂದದ ಮನದಿ ||ಮಾಲೋಲನ ಲೀಲಾ ಮೆಚ್ಚಿತಾ ಭೀಮನ್ನ ತಾ ಒಲಿಸಿಕೊಂಡುಬಾಲಯತಿವ್ಯಾಸನಾಗಿ ಬಂದಿಹನೆಂದು ಹರಿಕುಣಿದ 4ಸೂರಿಜನ ಪ್ರಾಪ್ಯಗಘೃಣಿ ಆದಿತ್ಯಸೂರ್ಯನು |ವಿರಾಜಸುವ ಸೂರ್ಯ ದೇವಾಂಶ ಬ್ರಹ್ಮಣ್ಯ ||ತೀರ್ಥರಕರಅರವಿಂದೋತ್ಪನ್ನ ಈ |ಸೂರಿವರ್ಯ ವ್ಯಾಸರಾಯರು ಎಂದು ನರ್ತಿಸಿದ 5ಶಿಂಶುಮಾರನ ಪುಚ್ಛಾಶ್ರಿತ ಸ್ಥಿರ ಸ್ಥಾನದಿಂ |ಅಂಶದಲಿ ಜನಿಸಿ ಶ್ರೀಮಧ್ವಸಚ್ಛಾಸ್ತ್ರ ||ಅಸಮ ಕೋವಿದರೆನಿಪ ಶ್ರೀಪಾದ ರಾಜರÀಲಿ |ವ್ಯಾಸಂಗ ಮಾಳ್ಪ ಸಂಧೀ ಎಂದು ಹರಿಕುಣಿದ 6ಸಾರಾತ್ಮ ಸುಖಮಯಶ್ರುತಿವೇದ್ಯ ಮಹದಾದಿ |ಚರಾಚರ ಜಗತ್ಕರ್ತಪರಮಪೂರುಷನು ||ಮೂರಡಿ ಬೇಡಿದ ಮುರಳೀಧರ ಶ್ರೀಮನ್ನ್ನಾರಾಯಣ ಸರ್ವವಂದÀ್ಯನೇ ಸ್ವಾಮಿ 7ಈ ರೀತಿ ಹೊಗಳುವ ಸರಿಗಮ ಪದನಿ |ಸ್ವರಗಳಿಂ ಕೃಷ್ಣನ್ನ ಶ್ರೀ ವ್ಯಾಸರಾಜ ||ಪರಮಭಾಗವತಮಹಾತ್ಮರು ಕೀರ್ತಿಸೆ |ಶ್ರೀ ಕೃಷ್ಣ ಧಿಕ್ತೈ ಎಂದೆÉನುತ ಕುಣಿದ 8ಈ ಪದ್ಯಗತಿಯಲ್ಲಿ ಧಿಕ್ತೈ ಧ್ವನಿಸೂಚಿಸುತೆ |ಶಿಪಿವಿಷ್ಟ ವಿಶ್ವರೂಪ ಮುರಳೀಪಾಣಿಯನ್ನ |ಶುಭತಮಗುಣಕಥನ ಶ್ರವಣದಿಂ ಲಭ್ಯವು |ಶ್ರೀಭಾಗವತಾಷ್ಟಮ ದಶಮ ಏಕಾದಶದಿ 9ಅಖಿಲೇಷ್ಟದಾತಾ ಇಂದಿರೇಶ ಚಾರ್ವಾಂಗನು |ರುಕ್ಮಿಣಿ ಸತ್ಯಾಯುಕ್ಅಭಯವರದ ||ಶಂಖಾರಿಹಸ್ತಹಿರಣ್ಮಣಿ ನಿಭ ಕೃಷ್ಣ |ಜಗದೇಕ ವಂದ್ಯನು ಮುದದಿ ತಾಕುಣಿದ 10ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸ |ನರಸಿಂಹ ಪರಂಬ್ರಹ್ಮ ನಮೋವರಾಹ||ನಾರಾಯಣವಾಸುದೇವಸಂಕರುಷಣ |ಪರಂಜ್ಯೋತಿ ಪ್ರದ್ಯುಮ್ನ ಅನಿರುದ್ಧಪಾಹಿ11
--------------
ಪ್ರಸನ್ನ ಶ್ರೀನಿವಾಸದಾಸರು
ಸತ್ಸಂಗವಿಡಿದು ಸರ್ವೋತ್ತಮನೆ ಗತಿಯೆಂದುನೆಚ್ಚಿ ಅರ್ಚಿಸು ಗಡ ಮನುಜ ಪ.ವಿರಹ ಶಬ್ದಗಳ ಮೈಯ್ಯೊಲಿದೊಲಿದುಕೇಳಿಸತಿಯರ ಧ್ವನಿಗೆ ಮಗುಳೆ ಮೋಹಿಸುತಹರಿಣ ಘಂಟಾರವಕೆ ಬಲೆ ಬೀಳುವಂತಾಗದಿರುಹರಿಕಥೆಯಕೇಳಿಬಾಳು1ಅರಿಯದರ್ಭಕನು ಕೆಂಡವ ಮುಟ್ಟಿ ಅಳುವಂತೆಪರಸ್ತ್ರೀಯ ಸರಸಕೊಳಗಾಗಿನರಕದೊಳು ಬೀಳ್ವ ಪಾಮರನೆ ಹರಿಚರಣಾಬ್ಜಸ್ಪರುಶ ದೊರಕುವುದೆಂತೊ ನಿನಗೆ 2ದೀಪ ಕಾಶಕೆ ಪತಂಗವು ಕೆಡೆವ ಪರಿಯು ಸಲ್ಲಾಪವು ಪರಸತಿಯರೊಡನೆಶ್ರೀಪತಿಯ ಮೂರುತಿಯ ಕಂಡೆರಗು ಮೂಢಮತಿಪಾಪ ಬುದ್ಧಿಗಳನ್ನುಜರಿದು3ಶಸ್ತ್ರ್ತಧಾರೆಯ ಮಧುವ ಬಯಸುವಂತನ್ಯೋತ್ತಮ ಸ್ತ್ರೀಯರಧರಸುಧೆಬಯಸಿಚಿತ್ತವ್ಯಸ್ತವ ಮಾಣದೊಮ್ಮೆಗಾದರೆಹರಿಭಕ್ತಿರಸವೀಂಟಿ ಸುಖಿಯಾಗು 4ವನಜವನವಂ ಬಿಟ್ಟು ಅಳಿವೃಂದ ಚಂಪಕದನನೆಗೈದಿ ಪ್ರಾಣ ಬಿಡುವಂತೆವನಿತೆಯರ ವಾಸನೆಯೆ ನಿರಯದೌತಣವೆಂದುವನಜಾಕ್ಷ ನಿರ್ಮಾಲ್ಯ ಸೂಡು 5ಇಂತೆಂಬ ಪಂಚಭೌತಿಕದೇಹದಾಸೆಯೊಳುಸಂತತದಿಲಂಪಟನೀನಾಗಿಅಂತ್ಯದೊಳುಜರೆಕಾಡುವಾಗ ಕಫ ವಾತವೆಮುಂತಾದ ವ್ಯಥೆ ಬೆನ್ನ ಬಿಡವು 6ಭಸ್ಮಕ್ರಿಮಿಕೀಟವಾಗಿ ಪೋಪ ಕಾಯಕೆ ನಂಬಿವಿಸ್ಮರಣೆ ಬೇಡ ಹರಿಪದಕೆಕಶ್ಮಲಾನ್ವಿತವಾದ ಯೋನಿಗಳ ಬರವರಿತುವಿಸ್ಮರಣೆ ಬೇಡ ಹರಿಪದಕೆ 7ಬಲ್ಲಿದರ ಸಿರಿಯ ಸೈರಿಸಲಾರೆನೆಂದೆಂಬಕ್ಷುಲ್ಲಕರ ನುಡಿಯನಾಡದಿರುಎಲ್ಲಿ ಭಾಗವತರ ನಿಕೇತನಾಜೆÕಯ ಕೇಳೆಅಲ್ಲಿ ಮಧುಕರವೃತ್ತಿತಾಳು8ಹರಿದಾಸರ ವಿಲಾಸವೆ ಎನ್ನ ಸಿರಿಯೆಂದುಹರಿದಾಸರಡಿಗೆ ಮಗುಳೆರಗಿಹರಿದಾಡುವ ಮನಕೆ ಸೆರಯಿಕ್ಕಿ ಹರಿಯನೆ ನೆನೆದುಹರುಷ ಪುಳಕಿತನಾಗಿ ಬಾಳು 9ದಶಇಂದ್ರಿಯಂಗಳಿಗೆ ವಶವಾಗದಿರು ಏಕಾದಶಿ ವ್ರತಕೆ ವಿಮುಖವಾಗದಿರುದಶಶಿರಾರಿಯ ನಾಮದಶನವೆಭುಂಜಿಸುದಿಶೆಯರಿತೂ ಕಾಣನಾಗದಿರು 10ಪದ್ಮನಾಭನ ಪಾದಪದ್ಮವೆ ಗತಿಯೆಂದುಪದ್ಮಜನ ಪದಕೆ ಪೋಗುವನಪದ್ಧತಿಯವಿಡಿದುವರಪದ್ಮಪತಿ ವಾಸ ತ್ರೈಸದ್ಮನಿಗೆ ಉದ್ಯೋಗಮಾಡು11ಕಡು ಬಂಧುಬಳಗ ಸತಿಸುತರುಂಟು ವೃತ್ತಿಯೊಳುಕಡಿಮಿಲ್ಲವೆಂಬ ಪಾಶವನುಕಡಿದು ಕಡಲೊಡೆಯನೆ ಸಲಹೆಂದು ಗರ್ಜಿಸಲುಕಡೆಹಾಯಿಸಬಲ್ಲದಿದು ನಿನಗೆ 12ಆವಾಗೆ ಜಗಕೆ ಸರ್ವೋತ್ತಮನೆ ಹರಿಯೆಂದುಜೀವೋತ್ತಮನೆ ವಾಯುವೆಂದುಭಾವಶುದ್ಧಿಗಳಿಂದ ಬಯಲುಡಂಬಕಬಿಟ್ಟುಜೀವಿಸಲು ಸ್ವರೂಪ ಸುಖವಾಹುದು 13ವರಊಧ್ರ್ವಪುಂಡ್ರಹರಿಮುದ್ರೆಯನಲಂಕರಿಸುಶಿರಿ ತುಲಸಿ ಪದ್ಮಸರ ಧರಿಸುಸ್ಮರನ ಶರಕಂಜದರಿಯಾರುವರ್ಗವನೊದೆದುಹರಿದು ಬಹ ದುರಿತಗಳ ಸದೆದು 14ಏಸುಜನ್ಮದಿ ಬಂದು ನೊಂದೆ ಭವಾಟವಿಯೊಳುಮೋಸ ಹೋಗದಿರಿನ್ನು ತಿಳಿದುಬೇಸರದೆ ಉರಗಾದ್ರಿವರದ ಪ್ರಸನ್ವೆಂಕಟೇಶನಂಘ್ರಿಯ ಬಿಡದೆ ಭಜಿಸು 15
--------------
ಪ್ರಸನ್ನವೆಂಕಟದಾಸರು
ಸ್ವಾಮಿ ಮುಖ್ಯಪ್ರಾಣ-ನೀ-ಮಲೆವರ ಗಂಟಲಗಾಣ ಪಸಕಲ ವಿದ್ಯಾ ಪ್ರವೀಣ-ನೀ-ಹಿಡಿದೆಯೋ ರಾಮರಚರಣಅ.ಪಏಕಾದಶೀಯ ರುದ್ರ-ನೀ-ಹಿಡಿದೆಯೊ ರಾಮರ ಮುದ್ರಾಸೇತುವೆಗಟ್ಟಿ ಸಮುದ್ರ-ನೀ-ಹಾರಿದೆಯೋ ಬಲಭದ್ರ 1ಸಂಜೀವಿನಿ ಪರ್ವತವನ್ನು-ಅಂಜದೆ ತಂದೆಯೊ ನೀನು |ಅಂಜನೆತನುಸಂಭವನು-ನಿನ್ನ-ಬೇಡಿಕೊಂಬೆನೋ ನಾನು2ವೈಕುಂಠಸ್ಥಳದಿಂದ ಬಂದು-ಪಂಪಾಕ್ಷೇತ್ರದಿನಿಂದು|ಯಂತ್ರೋದ್ಧಾರಕನೆಂದು-ಪುರಂದರ ವಿಠಲನೆ ಸಲಹೆಂದು 3
--------------
ಪುರಂದರದಾಸರು
ಹರಿದಿನದಲಿ ಉಂಡ ನರರಿಗೆ -ಘೋರ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನರಕ ತಪ್ಪದು ಎಂದುಶ್ರುತಿಸಾರುತಲಿದೆಪ.ಗೋವ ಕೊಂದ ಪಾಪ, ಸಾವಿರ ವಿಪ್ರರ |ಜೀವಹತ್ಯದ ಮಾಡಿದ ಪಾಪವು ||ಭಾವಜನಯ್ಯನ ದಿನದಲುಂಡವರಿಗೆ |ಕೀವಿನೊಳಗೆ ಹಾಕಿ ಕುದಿಸುವ ಯಮನು 1ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿಗಳು |ಅಂದಿನ ಅನ್ನವು ನಾಯ ಮಾಂಸ ||ಮಂದರಧರನ ದಿನದಲುಂಡವರನು |ಹಂದಿಯ ಸುಡುವಂತೆ ಸುಡುವನು ಯಮನು 2ಅನ್ನ -ಉದಕ ತಾಂಬೂಲ - ದರ್ಪಣಗಳು |ಚೆನ್ನವಸ್ತ್ರಗಳೆಲ್ಲ ವರ್ಜಿತವು ||ತನ್ನ ಸತಿಯ ಸಂಗ ಮಾಡುವ ಮನುಜನ |ಬೆನ್ನಲಿ ಕರುಳ ಉಚ್ಚಿಸುವನು ಯಮನು 3ಜಾವದಜಾಗರಕ್ರತು ನಾಲ್ಕು ಸಾವಿರ |ಜಾವ ನಾಲ್ಕರ ಫಲಕೆ ಮಿತಿಯಿಲ್ಲವು ||ದೇವದೇವನ ದಿನದಿ ನಿದ್ರೆಗೈದರೆ ಹುರಿ - |ಗಾವಿಲಿಯೊಳು ಹಾಕಿ ಹುರಿಯುವ ಯಮನು 4ಇಂತು ಏಕಾದಶಿ ಉಪವಾಸಜಾಗರ |ಸಂತತ ಕ್ಷೀರಾಬ್ಧಿಶಯನನ ಪೂಜೆ ||ಸಂತೋಷದಿಂದಲಿ ಮಾಡಿದ ಜನರಿಗ - |ನಂತ ಫಲವನೀವ ಪುರಂದರವಿಠಲ 5
--------------
ಪುರಂದರದಾಸರು
ಹಲವು ಜನ್ಮದಲ್ಲಿ ಹರಿಯ ನೆನೆಯಲಿಲ್ಲಕಲಿಗಳು ಆಗಿ ನೀ ಕೆಡಬೇಡ ಮನುಜ 1ನೀಚಜಾತಿಯಲಿ ಪುಟ್ಟಿ ಅಧಮನಾಗಿರಬೇಡಭಜಿಸು ಭಕ್ತಿಗಳಿಂದ ಮಹಾಮಹಿಮ ಕೃಷ್ಣರ 2ನಂದ ಭದ್ರಾ ಜಯರಿಕ್ತ ಪೂರ್ಣ ವೆಂಬೊಚೆಂದುಳ್ಳ ತಿಥಿಯಲ್ಲಿಘೃತನವನೀತದಧಿಕ್ಷೀರ3ನಂದದಿ ಸಕ್ಕರೆಘೃತನವನೀತದಧಿಕ್ಷೀರದಿಂದಲಿ ಅರ್ಚಿಸಿ ಸುಕೃತವಪಡಿ4ಶಯನಾದಿಗಳಿಂದ ಶಾಖಾದಿ ಫಲವ್ರತಭಯದಿಂದ ಮಾಡೋರೆ ಸತತ 5ಅದರಿಂದ ಚಾತುರ್ಮಾಸ ನಾಲ್ಕು ತಿಂಗಳುಉಳಿದಿನ ಬಂತಲ್ಲ ಭವನ ಪಾವಕ(?) ಭೀತಿ 6ಆಷಾಢÀ ಶುದ್ಧ ಏಕಾದಶಿ ಮೊದಲಾಗಿಕಾರ್ತಿಕ ಶುದ್ಧ ದ್ವಾದಶಿ ಪರಿಯಂತ್ರ 7ಶ್ರೀಕಾಂತ ಯೋಗನಿದ್ರೆಲಿ ತಾ ಪವಳಿಸಿಈಕ್ಷಿಸುತಿರುವೋನೆ ಭಕ್ತರ 8ಹರಿಮಲಗ್ಯಾನೆ ಎಂದು ಅಜ್ಞಾನದಲಿ ನೀವ್ ಕೆಡಬೇಡಿಪರಿಪರಿಕಲ್ಪೋಕ್ತದ ಪ್ರಕಾರದ ವ್ರತಗಳ ಮಾಡಿ9ಸ್ನಾನ ಸಂಧ್ಯಾವಂದನೆಯ ಕಾಲಕಾಲದಲಿ ಮಾಡಿಮನದಲ್ಲಿ ವಾಮನನ ನೆನದು ಸುಕೃತವಪಡಿ10ಅತಿಥಿಗಳ ಮನ್ನಿಸಿ ಅನಾಚಾರಗಳ ಬಿಡಿಸತಿಸುತರನೆ ಒಡಗೂಡಿ ವಿಹಿತವ್ರತಗಳ ಮಾಡಿ 11ಆಷಾಡಮಾಸದಲಿ ಶಾಕ ಹದ್ದಿನ ಮಾಂಸಭೂಷಣ ಶ್ರಾವಣದಲಿದಧಿನಾಯಿಶ್ಲೇಷ್ಮ12ಭಾದ್ರಪದ ಮಾಸದಲಿ ಪಾಲು ಸುರಾಪಾನ ಆಶ್ವೀಜಕಾರ್ತೀಕ ಮಾಸದಲಿ ಚಿತ್ರಕ್ರಿಮಿರಾಶಿದ್ವಿದಳಬಹುಬೀಜ13ಮಾಸನಿಷಿದ್ಧ ವಸ್ತುವನು ಕುದಿಸಿ ಬೇಯಿಸಿದರೆಅಸ್ತ್ರವನು ದೇವರ ಅಂಗದೊಳಿಟ್ಟಂತೆ 14ಮಾಸನಿಷಿದ್ಧ ವಸ್ತುವನು ದೇವರಿಗೆ ಸಮರ್ಪಿಸಿದರೆಬಹುಕಲ್ಪ ನರಕದೊಳದ್ದುವಿರಿ ಪಿತೃಗಳ 15ಧರ್ಮಜರು ನಾರದರು ಸ್ತುತಿ ಮಾಡುತಿರುವೋರುಧರ್ಮರಾದರ ಸಂವಾದ ಚಾತುರ್ಮಾಸದ ಸಂಕಲ್ಪ 16ಈ ಕಥೆ ವ್ರತವನೆಲ್ಲ ಅರಿತು ಯೋಚಿಸಿದವರಿಗೆಬೇಕೆಂಬೊ ಮುಕ್ತಿಯನು ಕೊಡುವ ಹಯವದನ 17
--------------
ವಾದಿರಾಜ