ಒಟ್ಟು 581 ಕಡೆಗಳಲ್ಲಿ , 86 ದಾಸರು , 506 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆವೆ ದಾನವನು ನೋಡಿರೋ | ಅವನವೇ ದಾನವನು ಪ ದಾವನು ಸಾಕುವ ದೇವರ ಮರೆದು | ಅವಿವೇಕತನದಲಿ ಜೀವಿಸುತಿಹಾ ಅ.ಪ ವಿಷಯದ ಸಂಭ್ರಮದಾ ಸ್ಥಿರಪಟ್ಟಾ | ವಸುಧಿಲಿ ಬಗದಾವಾ | ಆಶನ ವ್ಯಸನದೊಳು ಪಶುವಿನ ಪರಿಯಲಿ | ನಿಶಿದಿನ ಗಳೆವುತ ದೆಶೆಗೆಟ್ಟು ಹೋದಾ 1 ಸಾಧು ಸಂಗಕ ದೂರಾ ಶ್ರವಣದ | ಹಾದಿಗೆಂದಿಗೆ ಬಾರಾ | ಸಾಧಿಸಿ ಕುವಿದ್ಯಾವಾದಾ ಆಟಗಳನು | ಸಾದರ ನೋಡುತಾ ತಾ ದಿನಗಳೆವಾ 2 ಗುರು ಮಹಿಪತಿ ಬೋಧಾ ನಂದನು | ಸಾರಿದನಾ ಹಿತವಾದಾ | ಹರಿನಾಮಾವೆಂದಿಗೆ ಸ್ಮರಿಸು ಮುಖದೊಳು | ನರದೇಹವೆಂಬುದು ಬಾರದು ನೋಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆಡಣ್ಣ ನೀನಾಡಣ್ಣ ಅನುಭವದಾಟ ಆಡಣ್ಣ ಪ ರೂಢಿಯೋಳ್ಹರಿಯ ಗಾಢಮಹಿಮೆ ಕೊಂಡಾಡುವರೊಡನಾಟ ಅ.ಪ ಅಳುವರ ಕಂಡರೆ ಅತ್ತಂತೆ ಕಾಣೋ ನಗುವರ ಕಂಡರೆ ನಕ್ಕಂತೆ ಕಾಣೋ ಅಳುವ ನಗುವರಲಿ ಸಿಲುಕಿ ಸಿಲುಕದೆ ನಿ ನ್ನೊಳಗೆ ಮಾಧವನ ತಿಳಿದು ಆನಂದದಿ 1 ಅವರನು ಕಂಡರೆ ಅವರಂತೆ ಇವರನು ಕಂಡರೆ ಇವರಂತೆ ಅವರಿವರಿಗೊಂದೆಸವನೆತೋರಿ ಸಿರಿ ಪಾದ ಮನಭವನದಿಟ್ಟ್ಹಿಗ್ಗುತ 2 ವಾಸನೆ ಪ್ರಥಮ ನಾಶನ ಮಾಡೊ ದಾಸರ ಕಂಡರೆ ಸೇವೆಯ ಮಾಡೋ ಆಶಪಾಶ ನೀಗಿ ಶ್ರೀಶ ಶ್ರೀರಾಮನ ದಾಸನಾಗಿ ನಿಜ ಮುಕ್ತಿಯ ಕೂಡೊ 3
--------------
ರಾಮದಾಸರು
ಆತ್ಮನಿವೇದನೆ ಇಂತು ಮರುಳಾದೆನು ಬಲು ಭ್ರಾಂತಿಗೊಳಗಾದೆನು ಲಕ್ಷ್ಮೀಕಾಂತಾ ಸರ್ವಾಂತರ್ಯಾಮಿ ಪ. ಕಾಮಪಾಶಕೆ ಶಿಲ್ಕಿದೆನು ಬಾಯಾರಿ ಬಳಲಿದೆನು ಹೀನ ಮತವೆನ್ನದೆ ಆಶಕೆ ಗುರಿಯಾದೆ 1 ನಾನು ನನ್ನದು ಎಂದೆ ಧರ್ಮಾಂಧಳಾದೆ ಮೆರೆದೆ ಗುರುಹಿರಿಯರಿಗೆ ಎರಗದೆ ಹರಿನಿನ್ನ ಮರೆದೆ 2 ಹಿಂದೇ ಸುಜನ್ಮಗಳು ಬಂದು ಪೋದವು ಮುಂದಿನ ಗತಿಯು ಎನಗೆ ತಿಳಿಯದು ಬಂಧನದೊಳು ಸಿಗಿಬಿದ್ದೆನು ಬಂದೆನ್ನ ಕಾಯೊ ಕಾಳಿಮರ್ಧನಕೃಷ್ಣಾ 3
--------------
ಕಳಸದ ಸುಂದರಮ್ಮ
ಆತ್ಮನಿವೇದನೆ ಏನಿದು ಎನ್ನಯ ಬಾಳು-ನರಹರೀ ಪ ಶ್ರೀನಿಧಿಯನು ಮನಮನೆಯೊಳು ನಿಲಿಸದಾ ಅ.ಪ. ಕಳೆಯಿತು ಆಯು-ಕಳೆಯಿತು ಕಾಯೊ ಬೆಳೆಯಿತು ಆಶೆ-ಉಳಿಯಿತು ಸಾಧನ 1 ಹೊಟ್ಟೆಗೆ ಹಾಕೇ-ಪುಟ್ಟಿದು ದಾಯ್ತೇ ಪೊಟ್ಟೆಯ ತುಂಬವೆ-ದುಷ್ಟ ಮೃಗಂಗಳು2 ಇಲ್ಲವು ತಾ ಹರಿ-ಎಲ್ಲವೂ ನೀನೇನೆ ಇಲ್ಲವು ಯಾಕೇ-ಎಲ್ಲ ಕಾಲದಿ ಸುಖ 3 ಪುಟ್ಟವುದೇ ಜಗ-ಪುಟ್ಟಿಸ ನಿಲ್ಲದೇ ಭ್ರಷ್ಠರ ಮತವಿದು-ಅಷ್ಟಕರ್ತನ ಬಿಡೆ 4 ಮಾನವಾ ತನುವಾ-ಬಾಹೋದೆ ದುರ್ಲಭ ಮಾನದ ಶ್ರೀ ಕೃಷ್ಣ ವಿಠಲನ ತೋರದಿಹ5
--------------
ಕೃಷ್ಣವಿಠಲದಾಸರು
ಆತ್ಮನಿವೇದನೆ ಯಾವಾಗಲೂ ನಿನ್ನ ಸೇವೆಯೊಳಿರುವಂತೆ ಕಾವುದೆನ್ನಯ ನಿಜದೀ ಕೃಪಾನಿಧೇ ಈ ಪರಿಯಿಂದನಾ ಭಾರಿ ಭವದಿ ನೊಂದೆ ತೋರೋ ನಿನ್ನಯ ಚರಣಾ ನಾರಾಯಣ ಪ ಆಶಾಪಾಶದಲಿ ನಾ ಘಾಸಿಯಾದೆನು ದೇವಾ ವಾಸನೆಯೊಳು ತೊಳಲಿ ಬಹು ಬಳಲಿ ವಾಸುದೇವನೆ ನಿನ್ನ ಪಾದದೊಳಗೆನ್ನಯ ಬೇಸರದಲೆ ರಕ್ಷಿಸೋ ನಿಜಪಾಲಿಸೋ 1 ನೀರಮೇಲಿನ ಗುಳ್ಳೆಯಂತೆ ತೋರುವ ಕಾಯ ಸೇರಿ ನಂಬಿದೆ ಭರದಿ ಬಹು ವಿಧದಿ ದೂರನಾದೆನು ನಿಜದರಿವುನಾನರಿಯದೇ ಸೇರಿಸೊ ನಿಜ ಸುಖದಿ ಪ್ರಬೋಧದಿ 2 ನಂಬಿದವರ ಕಾಯ್ವ ಸಂಭ್ರಮ ಪೊತ್ತವ ಶಂಭು ಶಂಕರ ಪ್ರಿಯನೇ ಸರ್ವೇಶನೇ ಇಂಬು ದೋರೆನ್ನಾ ಚಿದಂಬರ ನಿಜಪದ ನಂಬಿ ನಿಲ್ಲುವ ತೆರದಿ ಸದೃಢದೀ 3 ತತ್ವಮಸಿ ಮಹಾ ವಾಕ್ಯವ ಶೋಧಿಸಿ ನಿಸ್ತರಿಸುವ ಭವವಾ ಉಪಾಯವಾ ಚಿತ್ತಚೈತನ್ಯವಾಗಿ ನಿತ್ಯಶಾಂತಿಸ್ವಸುಖ ಸತ್ಯ ಸದ್ಗುರು ಸ್ವಾನಂದಾ ಸಹಜಾನಂದಾ4 ಕಡಹದಾ ಮರನೇರಿ ಮಡುವಾ ಧುಮ್ಮಿಕೃಇದ್ಯೋ ಪಿಡಿದು ಕಾಳಿಂಗನಾ ಹೆಡೆ ಕುಳಿದು ಕುಣಿದ್ಯೋ ಸಡಗರದಿಂದಲಿ ಮಾತೆಯ ತೊಡೆಯ ಮೇಲೆ ಬಂದು ಕುಳಿತೆ5 ದುರುಳ ದುಷ್ಟರ ಶಿರವ ಶರದಿಂದಾ ಕಡಿದೆಯೊ ಶರಣ ಬಂದ ದೀನರನು ಸಲಹಿದೆಯೊ ಪರಮ ಪುರುಷನೇ ನಿನ್ನ ಸ್ಮರಣೆಯೊಳಿರಿಸೆನ್ನಾ 6 ಅನ್ಯಾಯದಲಿ ಕುರುಪತಿಯ ಮಡುಹಿದೆಯೊ ಕರ್ಣನ ಕಂಠವ ಕತ್ತರಿಸಿದೆಯೊ ಧನ್ಯಧರ್ಮಾರ್ಜುನರ ಶಿರವಾ ಸನ್ಮತದಿಂದಲಿ ಕಾಯ್ದೆ 7 ಪುಂಡಲೀಕನ ಭಕ್ತಿಗೆ ಮೆಚ್ಚಿ ಪಂಡರಪುರದಲ್ಲಿ ನಿಂತೆನಿ ಹೆಚ್ಚಿ ತಂಡತಂಡದಲ್ಲಿ ಬರುವ ಹಿಂಡುಭಕ್ತರುಗಳ ಕೂಡುವ 8 ಕಂತು ನಾರಾಯಣ ಶಾಂತಿ ಪದದಲಿ ವಿಶ್ರಾಂತಿಯ ಕೊಟ್ಟಿನ್ನಾ ಭ್ರಾಂತಿಗಳನೆಲ್ಲ ತೋರಿಸಿ ಸಂತ ಸಂಗದೊಳಿರಿಸೆನ್ನಾ 9
--------------
ಶಾಂತಿಬಾಯಿ
ಆನಂದಮಯನಾದೆ ನಾನು ದಿವ್ಯ ಜ್ಞಾನಾಮೃತವನುಂಡು ಪೇಳಲಿನ್ನೇನು ಪ ಶರೀರ ಭ್ರಾಂತಿಗಳನೆಲ್ಲ ಕಳೆದು ಕರ್ಮ ದುರಿತ ಸಂಸಾರ ಆಶಾಪಾಶವಳಿದು ನರನೊಳಗೆ ನರನಾಗಿ ಸುಳಿದು ಸರ್ವ ಪರಿಪೂರ್ಣ ಭರಿತ ತಾನೆಂಬುದು ತಿಳಿದು 1 ಗುರುಕಟಾಕ್ಷದ ನೆಲೆ ನೋಡಿ ತಿರುಗಿ ಬರುವ ಹೋಗುವ ಭ್ರಮೆಗಳನೀಡಾಡಿ ಶರಣರ ಸ್ತೋಮದಿ ಕೂಡಿ ಭವ ಶರಧಿಯ ದಾಟಿ ಹಂಸಾತ್ಮಕನೊಳಾಡಿ ಆನಂದ 2 ಗುರುಚರಣಗಳ ಧ್ಯಾನಿಸುತಾ ಒಡನೆ ಎರಕವಾದಂತೆ ಬೇರೂರಿತು ಚಿತ್ತಾ ವರವಿಮಲಾನಂದ ಗುರುದತ್ತಾತ್ತೇಯನ ಕರುಣಾಸಮುದ್ರದೊಳ್ಬೆರೆದು ನಲಿವುತ್ತಾ ಆನಂದ 3
--------------
ಭಟಕಳ ಅಪ್ಪಯ್ಯ
ಆನೆಂತು ತುತಿಪೆ ನಿನ್ನಾ ಶ್ರೀ ಗುರು ರನ್ನಾ ಆನೆಂತು ತುತಿಪೆ ನಿನ್ನಾ ಪ ಆನೆಂತು ತುತಿಪೆ ಪಂಚಾನನಸುತ ಪವ ಮಾನ ಹನುಮ ಭೀಮ ಆನಂದತೀರ್ಥನೆ ಅ.ಪ. ಸನಕನಂದನ ಸನತಕುಮಾರಾದಿ ಮುನಿಗಳು ಹರಿ ದರುಶನವ ಮಾಡುವೆವೆಂದು ಘನಹರುಷದಿ ಮೋಕ್ಷವನು ಕುರಿತು ಬಂದೊ ಡನೆ ಬಾಗಿಲಲಿ ನಿಲ್ಲೆನಲು ಜಯ ವಿಜಯ ರನ ನೋಡಿ ಎರಡೊಂದು ಜನುಮದಲಿ ಕ್ರೂರ ಸಿರಿ ವನಜಾಕ್ಷರಗೋಸ್ಕರಾ ಅವತರಸಿ ಗುಣಪೂರ್ಣ ಗುರು ಸಮೀರಾ ಸೇವಿಪೆನೆಂದಾ ಕ್ಷಣದಿ ಜನಿಸಿ ವಾನರಾ ರೂಪಿಲಿ ಭುವ ವನದೊಳು ಮೆರೆದೆ ಅಸಮಶೂರಾ ಹರಿಹರಾ 1 ಕೋತಿ ಕಟಕಮಾಡಿ ಜಾತರಹಿತ ಹರಿ ಗೇ ತಲೆಬಾಗಿ ಸುಪ್ರೀತಿಯಿಂದಲಿ ರವಿ ಜಾತನ ಸಲಹಿ ಅತೀ ತೀವ್ರದಿಂದಲಿ ವಾತವೇಗದಿ ವನಧಿಯ ತಡಿಲ್ಲದೆ ದಾಟಿ ಮಾತೆಗುಂಗುರವಿತ್ತ ಶೋಕತರುಗಳ ಭೀತಿ ಬಡದಲೆ ಕಿತ್ತಿ ರೋಮ ಬಳ ವ್ರಾತವೆಲ್ಲವ ನುಗ್ಗೊತ್ತೀ ಲಂಕಾಪುರ ಜಾತವೇದಸಗೆ ಇತ್ತೀ ಹನುಮಶಿರಿ ನಾಥನಿಗೆರಗಿ ಪಡೆದ ಬಹುಕೀರ್ತಿ 2 ದುರುಳ ಕಲ್ಯಾದ್ಯರು ಊರ್ವಿಯೊಳ್ಪುಟ್ಟಿ ಸಂ ಚರಿಸುತ್ತ ಇರಲಾಗಿ ಮರುತದೇವನು ಅವ ತರಿಸಿ ಅವನಿಯೊಳು ದುರಿಯೋಧನುಣಲಿತ್ತ ಗರಳವ ಭುಂಜಿಸಿ ಅರಗಿನ ಸದನದಿ ಪುರೋಚನಾದಿಗಳನ್ನು ಉರುಹಿ ಏಕಚಕ್ರಾ ಪುರದಲ್ಲಿದ್ದ ಬಕಾಸುರನ ಸದೆದು ಭೂಮಿ ಸುರವೇಷವನೆ ಧರಿಸೀ ಪಾಂಚಾಲಿ ಸ್ವಯಂ ವರ ಪತಿಕರಿಸಿ ಮಗಧದೇಶ ದರಸನ ಸಂಹರಿಸೀ ರಾಜಸೂಯಜ್ಞ ಹರಿಗೆ ಅರ್ಪಿಸಿದಿ ಮೆರೆಸೀ 3 ಭಕುತಳಾದ ಇಂದುಮುಖಿ ದ್ರೌಪದಿಗೆ ಸೌಗಂ ಧಿಕವ ತರುವೆನೆಂದು ವೃಕೋದರ ಪೋಗಲು ಅಕುಟಿಲ ಹನುಮಂತನನು ಅವಲೋಕಿಸ್ಯಂ ಜಿಕೆಯಿಂದ ನಿಂದು ಮಾರಕಜನರಿಗೆ ಮೋ ಕುಪಥ ಖಳರನೊರಿಸಿ ನೀ ಸಖಿಗೆ ಪೂವಿತ್ತು ಗುರುಕುಮಾರನಸ್ತ್ರಕ ಳುಕದೆ ಯುದ್ಧವ ಮಾಡಿದೆ ದುಶ್ಯಾಸನ ರಕುತ ವೆರಿಸಿ ಕುಡಿದೆ ಉಭಯಗಳ ರ ಥಿಕರ ಬಲವಕರೆದೆ ಭಯದಲಿ ಉ ದಕದಲಿರ್ದ ದುರ್ಯೋಧನನೂರು ಕಡಿದೆ 4 ಭೀಮ ಭಯಂಕರ ಕಾಮಕೋಟಿ ಚಲ್ವ ಧೀಮಂತಜನ ಮನೋಪ್ರೇಮ ಪಾವನ ಗುಣ ಸ್ತೋಮ ಸರ್ವಾಧಾರ ಭ್ರಾಮಕಜನ ವನ ಧೂಮಕೇತುವೆ ಸರ್ವಾಸೀಮ ಸೌಖ್ಯ ಪೂರ್ಣ ಸಾಮಜ ಹರಿಗುರು ರೋಮ ಕೋಟೇಶ್ವರ ಶ್ರೀಮಾನ್ಯ ಭಕುತಲ ಲಾಮ ಭವ್ಯ ಚರಿತಾ ಸೋಮಕುಲ ಸೋಮ ಸುಖ ಭರಿತಾ ಭಕುತ ಪ್ರೀತಾ ಕಾಯ ಹಿತದಿಂದ ನಿರುತಾ 5 ಮಣಿಮಂತನೆಂಬವನಿಯೊಳು ಪುಟ್ಟಿ ವೇ ನನ ಮತ ಪಿಡಿದು ಜೀವನೆ ಪರಮಾತ್ಮನೆಂ ದೆನುತ ಸ್ಥಾಪಿಸಿ ಪಣೆಗಣ್ಣೆನ್ವರದಿಂದ ಅನಿಮಿಷರೆಲ್ಲರು ವನಜಜಗುಸುರಲು ಮುನಿಗಳು ಸಹ ನಾರಾಯಣನ ಪದಕೆ ದಂಡ ಪ್ರಣಾಮವ ಮಾಡಿ ಸ್ತೋತ್ರವಿನಯದಿ ಗೈಯೆ ಅನಿಲನ ಅವಲೋಕಿಸಿ ಪೇಳಲು ಹರಿ ಮನ ಭಾವವನು ಗ್ರಹಿಸಿ ಮಧ್ಯಗೇಹ ಮನೆಯೊಳಗವತರಿಸಿ ಮೆರೆದೆ ಗುರು ಅನುಗಾಲದಲಿ ನಿನ್ನ ಗುಣಗಳಾಶ್ರೈಸೀ 6 ವಾಸುದೇವನೆಂಬ ಭೂಸುರನಾಮದಿ ಲೇಸಾಗಿ ಚರಿಸಿ ಸಂತೋಷ ಭರಿತರಾಗಿ ಸಂ ನ್ಯಾಸಾಚ್ಯುತ ಪ್ರೇಕ್ಷರಾ ಕರಸರಸಿಜ ದೀ ಸಂತೋಷದಿ ಕೊಂಡು ಆಶÀಂಕರರÀ ಭಾಷ್ಯ ದೂಷಿಸೆ ಗರುಗಳುಲ್ಲಾಸ ಸನ್ಮುಖದಲಿ ವಿ ಶೇಷದಿಂದಲಿ ವಿರಚಿಸುವುದೆನಲು ಉ ಲ್ಲಾಸದಿಂದಲಿ ಕೇಳಿ ಆಕ್ಷಣದಿ ಸಂ ತೋಷ ಮನದಲಿ ತಾಳಿ ಮೋಹಕವ ಪರಿಹ ಆಶೆ ಪೂರೈಸಿದ ಘನನಿನ್ನ ಲೀಲೆ 7 ತರಳತನದಲಿ ಬದರಿಗೈದಿ ಪಾರಾ ಶರ ನಾರಾಯಣನ ಸಂದರುಶನ ಕೊಂಡು ತೀ ವರದಿಂದ ಹರಿತತ್ವ ನಿರ್ಣಯ ಶಾಸ್ತ್ರವ ವಿರಚಿಸುವುದಕಿನ್ನು ವರವ ಪಡೆದು ಬಂದು ದುರುಳ ಭಾಷ್ಯಗಳೆಂಬ ಗರಳ ತರುಗಳ ಮುರಿದಿಕ್ಕಿ ನೀ ಮೂವ ತ್ತೆರಡೈದು ಗ್ರಂಥಗಳ ನಿರ್ಮಿಸಿ ವಿಬು ಧರಿಗೆಲ್ಲ ಪೇಳಿ ವ್ಯಾಳ ಭೂಷಣದೇವ ಪರನೆಂಬ ಯುಕುತಿಜಾಲ ಹರಿದು ಹರಿ ಪರ ಶ್ರೀ ಬೊಮ್ಮಾದ್ಯರೆ ಗುರುಗಳೆಂದೆನಲು 8 ನಮೋ ನಮೋ ಸಮೀರನೆ ನಮೋ ಶ್ರೀ ಮುಖ್ಯಪ್ರಾಣ ನಮೋ ನಮೋ ದಯಾಸಿಂಧು ನಮೋ ಭಕ್ತಜನ ಬಂಧು ನಮೋ ನಮೋ ಗುಣಶೀಲ ನಮೋ ಭಾರತಿಲೋಲ ನಮೋ ನಮೋ ಭವ್ಯಾಂಗ ನಮೋ ಅರಿಗಜಸಿಂಗ ನಮೋ ನಮೋ ಜಗದ್ವ್ಯಾಪ್ತ ನಮಿತಜನರಾಪ್ತ ನಮೋ ನಮೋ ಸುಖತೀರ್ಥ ನಮೋ ಮೂರ್ಲೋಕದ ಕರ್ತ ನಮೋ ಗುರುಕುಲ ತಿಲಕ ಪಾಲಿಸು ಎನ್ನ ತಮಹರದೂರಶೋಕ ಸಜ್ಜನರಿಗೆ ಅಮಿತ ಮೋದದಾಯಕ ಶ್ರೀಭೂ ದುರ್ಗಾ ರಮಣ ಜಗನ್ನಾಥವಿಠಲ ಭಕ್ತಾಧಿಕಾ 9
--------------
ಜಗನ್ನಾಥದಾಸರು
ಆಮಿತ ಮಹಿಮೋಪೇತ ವಿಠಲ ಸಲಹೋ ಪ. ವಿಮಲಮತಿ ಇತ್ತಿವಗೆ ಕಾಮಿತಾರ್ಥವನೇಅ.ಪ. ತೈಜಸನೆ ನೀನಾಗಿ ನಿಜಯಾರ್ಯನುಗ್ರಹವಯೋಜಿಸಿಹೆ ಸ್ವಪ್ನದಲಿ ಕಾರುಣ್ಯಮೂರ್ತೇಭ್ರಾಜಿಷ್ಣು ಸುಜ್ಞಾನ | ವೈರಾಗ್ಯ ಭಾಗ್ಯಗಳಮಾಜದಲೆ ಕರುಣಿಸೆಂದಾನಮಿಪೆ ಹರಿಯೇ 1 ಹೇ ಸದಾಶಿವ ವಂದ್ಯ | ಕ್ಲೇಶತೋಷಗಳಲ್ಲಿಭಾಸಿಸಲಿ ತವನಾಮ | ಮೀಸಲದ ಮನದೀ |ಆಶುಗತಿಮತ ಪೊಂದಿ | ದಾಸದೀಕ್ಷಾಕಾಂಕ್ಷಿವಾಸವಾನುಜ ಇವನ | ದಾಸನೆಂದೆನಿಸೋ 2 ಭವ ಉತ್ತರಿಪಸದ್ವಿದ್ಯ ಪಾಲಿಪುದು ಮಧ್ವಾಂತರಾತ್ಮಾ 3 ಹರಿಗುರೂ ಸದ್ಭಕ್ತಿ | ದುರ್ವಿಷಯನಾಸಕ್ತಿಎರಡು ಮೂರ್ಭೇದಗಳ | ಅರಿವ ನೀನಿತ್ತೂತರತಮದ ಸುಜ್ಞಾನ | ಕರುಣಿಸುವುದೆಂದೆನುತಕರಿವರದ ಭಿನ್ನವಿಪೆ ಪ್ರಾರ್ಥನೆಯ ಸಲಿಸೋ 4 ಕಾಯ ಬೇಕೋ 5
--------------
ಗುರುಗೋವಿಂದವಿಠಲರು
ಆರಿಗಾರೋ ಕೃಷ್ಣ ಶೂರಕುಮಾರನೆಪ. ಆರಿಗಾರೋ ನಿನ್ನ ಹೊರತು ಪೊರೆವರೆನ್ನಶೂರ ಮಾರಜನಕ ಅಕ್ರೂರವರದ ದೊರೆಯೆಅ.ಪ. ಸತಿಸುತರು ಹಿತರೇನೊ ಮತಿಭ್ರಾಂತಿಬಡಿಸುವರುಗತಿ ಯಾರೊ ಮುಂದೆ ಗರುಡವಾಹನ ದೇವ1 ಆಶಪಾಶದಿ ಸಿಲುಕಿ ಘಾಸಿಪಟ್ಟೆನೊ ಬಹಳವಾಸುದೇವನೆ ನಿನ್ನ ದಾಸನೆಂದೆನಿಸಯ್ಯ 2 ಕಾಯ ಉ-ಪಾಯ ಯಾವುದೊ ಮುಂದೆ ರಾಯ ಹಯವದನ 3
--------------
ವಾದಿರಾಜ
ಆಶಾ ಪಾಶದಲಿ ಬಿದ್ದು ಘಾಸಿಯಾಯಿತು ಜೀವ ವಾಸುದೇವನೆ ನಿಮ್ಮ ಆಶೆಗೆನ್ನ ಮನವಿಲ್ಲ ಪ ಮಡದಿಯಾಗಲು ಮತ್ತೆ ಮನೆಯಾ ಮಾಡುವದಾಶಾ ಒಡಗೂಡಲದು ಮಕ್ಕಳಾಗುವಾಶಾ ಬಿಡದೆ ಕುಟುಂಬ ಪೋಷಣೆಯಾಗುವಾದಾಶಾ ಕಡಲ ಶಯನಾ ನಿಮ್ಮ ಆಶೆಗೆನ್ನ ಮನವಿಲ್ಲ 1 ಅನ್ನವಾಗಲು ವಸ್ತ್ರ ಅಲಂಕಾರದಾಶಾ ಇನ್ನು ಮಕ್ಕಳ ಮುಂಜಿ ಮದುವಿಯಾಶಾ ತನ್ನ ನೆಂಟರಸರಿಯಾ ಮಾಡುವದಾಶಾ ಪನ್ನಗಾಶನವಾಹನಾಶೆಗೇ ಮನವಿಲ್ಲ 2 ನಡೆವಕಾಲಕೆ ದೊಡ್ಡ ಕುದುರೆ ಏರುವದಾಶಾ ಅಡರಲು ರಥದಿಂದ ಆಂದಣಾಶಾ ಕಡಿಗೆ ತೀರದ ಹೊನ್ನು ಹಣದ ಸಂಗ್ರಹದಾಶಾ ಪೊಡವಿಧರನೇ ನಿಮ್ಮ ಆಶೆಗೆ ಮನವಿಲ್ಲ 3 ಒಂದೊದಗಲು ಮತ್ತೆ ಒಂದು ಬಯಸುದಾಶಾ ಎಂದಿಗೇ ಸರಿಯದು ವಿಷಯದಾಶಾ ಕುಂದಿದ ತನುವಿನ ಬಲವಾಗುವದಾಶಾ ಇಂದಿರೇಶನ ಆಶೆಗೆನ್ನ ಮನವಿಲ್ಲ 4 ಆಶೆಯೆಂಬಾ ನದಿಯ ಸುಳಿಯ ಬಿಡಿಸಿ ನಿಜ ದಾಸರಾ ಸಂಗ ಮನವ ತಿದ್ದೀ ಲೇಸಾಗಿ ಮಹಿಪತಿ ಸುತ ಪ್ರಭು ಭಕುತಿಯಾ ಆಶೆ ಹೆಚ್ಚಿಸಿ ಎನ್ನ ದಯದಿ ಪಾಲಿಸೋ ದೇವಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆಶೆಯ ಬಿಡಿಸಿದ್ಯೋ ಎನ್ನಾ ಮುಂದೆ ವಾಸವಾಗದಂತೆ ಕಾಯೋ ಮೋಹನ್ನಾ ವಾಸುದೇವನೆ ನಿನ್ನ ಸ್ಮರಣೆಯೊಳಗೆ ಮನ ಸೂಸದಂತೆ ಸ್ಥಿರ ನಿಜದಲ್ಲಿ ನಿಲಿಸಯ್ಯಾ ಪ ಬೆಂಬಿಡದೆಲೆ ನಿಜದರಿವನ್ನು ಕೊಡುವಾ ಕುಂಭಿಣಿಯೊಳಗೆಲ್ಲಾ ನೀನಲ್ಲದೆ ಎನ್ನಾ ನಂಬಿಗೆ ಕೊಡುವವರ್ಯಾರೋ ನಾರಾಯಣಾ 1 ಬೆಂದೆನು ನಾ ಭವದೊಳಗೆ ಎನ್ನಾ ತಂದೆ ನೀ ಕಾಯೋ ನಿಜಪದದೊಳಗೆ ಹಿಂದಿನ ಪ್ರಾರಬ್ಧ ಬವಣೆಯ ತೀರಿಸಿ ಮುಂದೆ ನೀ ಸಲಹೊ ಪರಮಪುರುಷನೆ ಹರಿ 2 ವಾಸನೆ ಬಂಧವೇ ಜೀವಾ ನಿ ರ್ವಾಸನೆಯನು ಕೊಟ್ಟು ಸಲಹೊ ಮಾಧವಾ ಶೇಷಶಯನನೆ ನಿಜ ಧ್ಯಾನದೊಳಿರಿಸೆನ್ನಾ ಆಶೆಯನು ಸಲಿಸಯ್ಯಾ ಮುರಾರಿ 3 ಅನಂತ ಮಹಿಮಾ ಮೇಘಶ್ಯಾಮಾ ನಿಶ್ಚಿಂತ ನಿಜ ಶಾಂತಿ ಸ್ವಸುಖವೀವಾ ನಂತಪರಾಧವ ಕ್ಷಮಿಸೆನ್ನಾ ಗುರುವೇ 4
--------------
ಶಾಂತಿಬಾಯಿ
ಆಶ್ರಮ ಧರ್ಮ ನಾಲ್ಕು ಉಪದ್ರಆಶ್ರಮ ಧರ್ಮ ಬಿಡೆ ಅವ ಪಟ್ಟ ಬದ್ಧ ಪ ಬ್ರಹ್ಮಚಾರಿಯು ಆಗೆ ಕರ್ಮದ ಉಪದ್ರಬ್ರಹ್ಮಚರ್ಯವು ಹೋಗೆ ಸ್ತ್ರೀಯ ಉಪದ್ರಸುಮ್ಮಗೆ ವಾನಪ್ರಸ್ಥನಾಗೆ ಬೆಂಕಿ ಉಪದ್ರಹಮ್ಮಳಿದು ಸಂನ್ಯಾಸಿಯಾಗೆ ಸ್ನಾನದುಪದ್ರ 1 ಗೃಹಸ್ಥನಾಗೆ ವ್ರತಗಳ ಉಪದ್ರಸತತ ಸಂಧ್ಯಾ ಜಪತಪದ ಉಪದ್ರಮಿತಿ ಇಲ್ಲದ ನಾನಾ ಕರ್ಮಗಳ ಉಪದ್ರಸತತ ಶುಚಿ ಅಶುಚಿ ಎಂಬುದರ ಉಪದ್ರ 2 ಆವ ಆಶ್ರಮದಲಿರೆ ಆವುದೊಂದು ಉಪದ್ರಆವ ಆಶ್ರಮದಿ ಉಪದ್ರವೇ ಅದು ಹೋಗದುಆವಾಶ್ರಮಗಳಿಗೆ ಬೇರೆ ಇರೆ ಸುಖಿಯಿಹದೇವ ಚಿದಾನಂದ ಮಹ ಸರ್ವಮಹೋಪದ್ರವ ಪರಿಹಾರವಯ್ಯ 3
--------------
ಚಿದಾನಂದ ಅವಧೂತರು
ಇಕ್ಕೊ ಇಲ್ಲೆ ಹರಿ ಇದ್ದಾನೆ | ಸಿಕ್ಕುವಾ ಸದ್ಗುರು ಕರುಣದಲಿ ಧ್ರುವ ಆದಿ ಅನಾದಿಯ ಹಾದಿ ವಿಡಿದು | ಸಾಧಿಸಿ ನೋಡಿರಯ್ಯ ಸಜ್ಜನರು | ವೇದಾಂತದ ಸುಸಾರವಿದು | ಭೇದಿಸಿದವರಿಗೆ ಭಿನ್ನವಿಲ್ಲ 1 ತನ್ನೊಳಗಾಗಿರಲಿಕ್ಕೆ ಭಿನ್ನವ್ಯಾಕೆ | ಚೆನ್ನಾಗಿ ನೋಡುವದು ಉನ್ಮನದಲಿ | ಇನ್ನೊಬ್ಬರಿಗೆ ತಾ ತಿಳಿಯದು | ಧನ್ಯವಾದರು ಅನುಭವಿಗಳು2 ಸೆರಗು ಸಿಲ್ಕಲಿಲ್ಲ ನಾಲ್ಕರಲಿ | ಅರಹು ಆಗಲಿಲ್ಲ ಆರರಲಿ | ಪೂರಿಸಲಿಲ್ಲ ಭಾವ ಮೂರಾಗಲಿ | ತೋರಿದ ಸದ್ಗುರು ಎನ್ನೊಳಗೆ 3 ಮೋಸಹೋಯಿತು ಜಗ ವೇಷದಲಿ | ವಾಸತಿಳಿಯದೆ ವಾಸುದೇವನ | ಕಾಸಿನ ಆಶೆಗೆ ದಾಸರಾಗಿ | ಘಾಸಿ ಆಯಿತು ಭವಪಾಶದಲಿ 4 ಸಣ್ಣದೊಡ್ಡದರೊಳು ಸಾಕ್ಷವಾಗಿ | ಬಣ್ಣ ಬಣ್ಣದಲಿ ತಾ ಭಾಸುತಿಹ್ಯ | ಕಣ್ಣಾರೆ ಕಂಡು ಗುರು ಕೃಪೆಯಿಂದ | ಧನ್ಯವಾದ ಮೂಢ ಮಹಿಪತಿಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದನಾ ಬೇಡಿದವನಲ್ಲಾ ಬುಧರಂತರ್ಯಾಮಿ ಲಕುಮಿನಲ್ಲ ಪ ಪಾಪ ಕಾರ್ಯದ ಪಾಪ ವ್ಯಾಪಿಸಿ ದೇಹದಿ ಲೋಪಗೈಸೋದು ಸತ್ಕರ್ಮ ದೀಪ ನೀನಾಗಿರೆ ಉಪದೇಶಿಸೀ ಭವ ಕೂಪದಿಂದೆತ್ತೆಂದು ಬೇಡಿದೆನಲ್ಲದೆ 1 ವಿಷಯದೊಳ್ ಸಂಚರಿಪ ದೋಷಕಾರಿ ಮನ ಆಶೆಯೊಳು ಪೊಕ್ಕು ನಾಶಗೈಪೋದೆನ್ನ ವಿಶೇಷ ಸಾಧನಗಳ ನೀ ಪೋಷಿಸು ಎಂದು ಬೇಡಿದೆನಲ್ಲದೇ 2 ಸುಧೆ ತಂದ ವಿಜಯ ರಾಮಚಂದ್ರವಿಠಲ ನಿನ ಗೆದುರ್ಯಾರೊ ಪೇಳುವರು ಮುದದಿಂದ ಕೃಷ್ಣಾರ್ಯರೊಳು ಬೇಡಿದೆನಲ್ಲದೇ 3
--------------
ವಿಜಯ ರಾಮಚಂದ್ರವಿಠಲ
ಇದು ಎಲ್ಲಾ ಇದು ಎಲ್ಲಾ ಏನಾರೆಂಬುದ ಬಲ್ಲ್ಯಾ ಪ ತನುವಿದು ಮೊದಲಿಗೆ ನಿನ್ನದಲ್ಲಾ || ತನು ಸಂಬಂಧದ ಗುರುತು ಬಿಡಲಿಲ್ಲಾ 1 ನಿಜವೆನುತಲಿ ಆಶೆಯ ಕಚ್ಚಿ ಅಜಹರಿಹರರಾದರು ಕೇಳೇ ಹುಚ್ಚಿ 2 ಗುರುಭವತಾರಕನ ನಿಜವಾದ ಭಕ್ತಾ | ಅರಿತು ಆದನು ಜೀವನ್ಮುಕ್ತಾ 3
--------------
ಭಾವತರಕರು