ಹೇ ದಯಾಸಾಗರ ಸ್ವಾಮಿ ವೇದ
ಮಾಧವ ಮುಕುಂದ ಮನುಮುನಿ ಪ್ರೇಮಿ ಪ
ವೇದಗೋಚರ ಸಾಧುಸನ್ನುತ
ನಾದಪ್ರಿಯ ಭವಬಾಧೆರಹಿತ ಭೇದಹರ ಜಗ
ಪಾದ ಭಜಿಸುವೆ ಪಾಲಿಸೆನ್ನ ಅ.ಪ
ಮದಗಜ ಮುದದಿಂದ ಪೊರೆದಿ ಪ್ರಭುವೆ
ಮದಗಜಗಮನೆಯ ಮಾನದಿಂ ಕಾಯ್ದೆ
ಪದುಮವದನೆಶಾಪ ಕಳೆದೆ ಕರುಣಿ
ಸದಮಲಬಾಲನ ತಪಕೆ ನೀನೊಲಿದಿ
ಸುದಯಹೃದಯ ಸುಸದನಪಾಲ್ಸಿದಿ
ಸದಮಲಾಂಗನೆ ಪದುಮವದನ
ಮುದದಿ ನಿಮ್ಮಡಿ ಪದುಮಗಳು ಎ
ನ್ಹøದಯ ಮಂದಿರದಿರಿಸಿ ರಕ್ಷಿಸು 1
ಗರುಡಂಗೆ ವರಮೋಕ್ಷ ನೀಡ್ದಿ ನಿನ್ನ
ಸ್ಮರಿಪರಿಗೆ ದರುಶನಕೊಡುತಲಿ ನಡೆದಿ
ತರುಣಿಯ ಎಂಜಲ ಸವಿದಿ ವನ
ಚರನಿಗೆ ವಶನಾಗಿ ಅಭಯ ಪಾಲಿಸಿದಿ
ಭರದಿ ದಕ್ಷಿಣಶರಧಿ ಹೂಳಿಸಿ
ಮೆರೆವ ಲಂಕಾಪುರವ ಮುತ್ತಿದಿ
ದುರುಳರ್ಹಾವಳಿ ದೂರಮಾಡಿ
ಧರೆಯ ಭಾರವ ನಿಳುಹಿದಯ್ಯ 2
ನುಡಿಸಿದರೆನ್ನಿಂದಲಾವ ವಚನ
ನುಡಿಸಿದ ಬಳಿಕದನು ನಡೆಸಿಕೊಡಭವ
ನುಡಿಯಂತೆ ನಡೆಯೆನಗೆ ಸ್ಥಿರವ ಕೊಟ್ಟೆ
ನ್ನೊಡಲೊಳಗದಂತೆಯಿರು ಅನುದಿನವು
ಪೊಡವಿ ಮೂರನು ಒಡಲೊಳಿಟ್ಟಿಡೆ
ಬಿಡದೆ ಆಳುವ ಒಡೆಯ ಶ್ರೀರಾಮ
ದೃಢದಿ ನಿಮ್ಮಯ ಅಡಿಯ ನಂಬಿದೆ
ಬಿಡಿಸು ಎನ್ನಯ ಮಂದಜ್ಞಾನವ 3