ಒಟ್ಟು 8888 ಕಡೆಗಳಲ್ಲಿ , 133 ದಾಸರು , 4838 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೆ ಶ್ರೀ ಮಹಾಲಕ್ಷ್ಮಿದೇವಿಯೆ ಬೇಡುತಿರ್ಪೆವು ಪಸಾರಸಾಕ್ಷಿಯೆ ಸರ್ಪವೇಣಿಯೆನಾರಿಯೆ ವೈಯ್ಯಾರಿಯೆ ಶ್ರೀಹರಿ ಸಹಿತದಿ ಅ.ಪಯಜÕನಾಮಕ ಹರಿಯ ರಾಣಿಯಜÕ ಇಂದಿರಾಹಿರಣ್ಯಹರಿಣಿಸುಜÕರಾದ ಜನರ ಪೊರೆವೆಸತ್ಯಾಶ್ರಿ ನಿತ್ಯಾಶ್ರೀ ಸುಗಂಧಿ ಸುಂದರಿ 1ಪ್ರಾಜÕಸುಖಾ ಸುಗಂಧಿ ಸುಂದರಿವಿದ್ಯಾ ಶ್ರೀ ಸುಶೀಲದೇವಿಸುಜÕರಾದ ಜನರೊಳಿರಿಸುತಕ್ಷಣ ಈಕ್ಷಿಸು ಸುಲಕ್ಷಣ ದೇವಿಯೆ 2ಶಾಂತಿಮಾಯೆಕೃತಿಯೆಇಂದಿರೆಶಾಂತಚಿತ್ತದಿ ಧ್ಯಾನಿಸುವರಾ ನಿ-ರಂತರದಿ ಪೊರೆವೆ ಜಯಮಂಗಳೆ ಉತ್ತುಂಗಳೆ ಶೃಂಗಾರ ರೂಪಳೆ 3ನಗುತ ನಗುತ ಬಾರೆ ಬೇಗನಗಧರನ ಸನ್ನಿಧಿಗೆ ಈಗಖಗವಾಹನನ ಮಡದಿ ನಿನ್ನಅಡಿಗಳ ಪೂಜಿಪೆ ಸಡಗರದಿಂದಲಿ 4ಪರಿಮಳೋದಕದಿಂದ ನಿನ್ನಚರಣಗಳನು ತೊಳೆದು ದಿವ್ಯವರಮಣಿಯ ಪೀಠದಲಿ ಕೂಡಿಸಿಪರಿಪರಿ ಪುಷ್ಪದಿ ಪೂಜಿಸಿ ನಲಿಯುವೆ 5ಹರಿಯರಾಣಿ ನಿನಗೆ ದಿವ್ಯಹರಿದ್ರಾಕುಂಕುಮಾಕ್ಷತೆಗಳಿಂದವರಕಲ್ಹಾರಪೂವ್ಗಳಿಂದಲಿಸುರಗಿ ಶಾವಂತಿಗಿ ತುರುಬಿಗೆ ಮುಡಿಸುವೆ 6ಎಣ್ಣೂರಿಗೆ ಹೋಳಿಗೆಯು ಕಡಬುಸಣ್ಣನಕ್ಕಿ ಶಾಲ್ಯನ್ನಗಳುಇನ್ನು ಬಗೆ ಬಗೆಯ ಭಕ್ಷಂಗಳನೂಸ್ವರ್ಣ ಪಾತ್ರೆಗಳಲ್ಲಿ ಇರಿಸುತ ನಲಿವರು 7ಕ್ಷೀರಘೃತದಧ್ಯಾನ್ನ ಮಂಡಿಗೆಶಾವಿಗೆ ಪರಮಾನ್ನಗಳನುಶ್ರೀರಮೇಶನಿಗರ್ಪಿಸೆನುತಬೇಡುವೆ ಪಾಡುವೆ ಕೊಂಡಾಡುತ ನಲಿಯುವೆ 8ಮುದ್ದು ಮಹಾಲಕ್ಷ್ಮಿ ನಿನಗೆಇಡಲಿ ದೋಸೆಗಳ ಸಹಿತಪದ್ಮನಾಭನಿಗರ್ಪಿಸೆನುತಶ್ರದ್ಧೆಯಿಂ ನಮಿಸುತ್ತಾ ಬೇಡುತಲಿರುವರು 9ಗಂಗಾಜನಕನರಸಿ ನಿನಗೆಮಂಗಳಾರುತಿಗಳ ಮಾಡಿಹಿಂಗಿಸುವೆ ಪಾಪಗಳೆನುತಾವಂದಿಸಿ ಸಾಷ್ಟಾಂಗದಿಂ ಚಂದದಿ ಪ್ರಾರ್ಥಿಪೆ 10ಕರ್ಪೂರದ ಅಡಿಕೆ ವೀಳ್ಯಅರ್ಪಿಸುತಲಿ ನಿನ್ನ ಪೂಜಿಸಿಮುಪ್ಪುರಾಂತಕ ಕಮಲನಾಭವಿಠ್ಠಲ ವಿಠ್ಠಲ ವಿಠ್ಠಲನರಸಿಯೆ 11
--------------
ನಿಡಗುರುಕಿ ಜೀವೂಬಾಯಿ
ಬಾರೆ ಸುಬುದ್ಧಿ ನಿನ್ನ ಕಾಣದೆ ಇರಲಾರೆ ಕಾಣೆ ಸಖಿ ಜಾಣೆ ಪ್ರವೀಣೆ ಪ.ಮಾರನ ಶರಗಣ ದಾರುಣ ನೀಗವ್ವನಾರಿ ನಾರೀಮಣಿ ಕಾಳಾಹಿವೇಣಿತೋರೆ ನಿನ್ನಧರದಸಾರಸುಧೆಯೆನಗೆಚಾರುಹಿತಾನಂದ ಕಾರಣ ನೀರೆ1ಮಂದಗಮನೆ ಕೇಳೆ ಇಂದಿಗೆ ನಿನ್ನರವಿಂದಶರನಿಟ್ಟಧ್ವರ್ಯ ಕುಚದ್ವಂದ್ವವಹೊಂದಲು ಬಂದಿಹ ಅವನೊಳುಹಿಂದುಮುಂದಾಡಲಿ ಬೇಡೆನಿಂದುಮಾತಾಡೆ2ಪಂಕಜಗಂಧಿ ಮುದಾಂಕಿತಳೆ ನಿನ್ನಸೋಂಕಲು ಪ್ರಸನ್ವೆಂಕಟೇಶಭೋಂಕನೆ ಬಂದಿಹ ಚಿಂತಾಯಕ ಹೃದಯಪರಿಯಂಕದಿ ಸುಖಿಸೇಳೇಣಾಂಕ ಮುಖಿ 3
--------------
ಪ್ರಸನ್ನವೆಂಕಟದಾಸರು
ಬಾರೈ ರಂಗ ಬಾರೈ ಕೃಷ್ಣ ಬಾರೈ ದೇವ ಕೃಷ್ಣತೋರೈ ನಿನ್ನಯ ಚಾರುಚರಣವತೋಯಜಾಕ್ಷಪಘಲು ಘಲುರೆನ್ನುತ ರುಳಿಗೆಜ್ಜೆಯನಿಟ್ಟು ಬಾರೈ ದೇವ ಕೃಷ್ಣಕುಣಿಕುಣಿಯುತ ಬಾ ಕುಂತಿಸುತರಪ್ರಿಯ ಬಾರೈ ದೇವ ಕೃಷ್ಣಥಳಥಳಿಸುವ ಪೀತಾಂಬರ ಹೊಳೆಯುತ ಬಾರೈ ದೇವ ಕೃಷ್ಣನಡುವಿಲಿ ಹೊಳೆಯುತ ಪಟ್ಟೆವಲ್ಲಿಯು ಬಾರೈ ದೇವ ಕೃಷ್ಣ 1ಕಂಕಣ ಕರಭೂಷಣಗಳು ಹೊಳೆಯುತ ಬಾರೈ ದೇವ ಕೃಷ್ಣಪಂಕಜನಾಭಪಾರ್ಥಸಖನೆ ಕೃಷ್ಣ ಬಾರೈ ದೇವ ಕೃಷ್ಣಶಂಖ ಚಕ್ರಗಳ ಧರಿಸುತ ಮುದದಲಿ ಬಾರೈ ದೇವ ಕೃಷ್ಣಶಂಕಿಸದೆಲೆ ಬಾ ಬಿಂಕವ ತೊರೆದು ಬಾರೈ ದೇವ ಕೃಷ್ಣ 2ಮುಂಗುರುಳಲಿ ಮುತ್ತಿನರಳೆಲೆ ಹೊಳೆಯುತಬಾರೈ ದೇವ ಕೃಷ್ಣಶೃಂಗಾರದ ಕಿರೀಟವು ಹೊಳೆಯುತಬಾರೈ ದೇವ ಕೃಷ್ಣಸುಂದರ ಕಸ್ತೂರಿ ತಿಲಕವು ಹೊಳೆಯುತಬಾರೈ ದೇವ ಕೃಷ್ಣಕಂಧರದಲಿ ಶೋಭಿಪ ಪದಕಗಳಿಂದಬಾರೈ ದೇವ ಕೃಷ್ಣ 3ಪೊಂಗೊಳಲೂದುತ ಹೆಂಗಳರೊಡನೆಬಾರೈ ದೇವ ಕೃಷ್ಣಮಂಗಳ ಮಹಿಮ ವಿಹಂಗವಾಹನ ಕೃಷ್ಣಬಾರೈ ದೇವ ಕೃಷ್ಣಅಂಗಳದೊಳಗಾಡುತ ನಲಿಯುತ ಬಲು ಚಂದದಿಬಾರೈ ದೇವ ಕೃಷ್ಣಇಂದಿರೆಯರಸನೆ ವಂದಿಸಿ ಬೇಡುವೆ ಬಾರೈ ದೇವ ಕೃಷ್ಣ 4ಕಿಲಿಕಿಲಿನಗುತಲಿ ಕುಣಿಕುಣಿಯುತಬೇಗ ಬಾರೈ ದೇವ ಕೃಷ್ಣಕನಕಾಭರಣಗಳಿಂದೊಪ್ಪುತ ಬೇಗ ಬಾರೈದೇವ ಕೃಷ್ಣನಲಿನಲಿಯುತ ಬಾ ಮಣಿಯುತ ಬೇಡುವೆಬಾರೈ ದೇವ ಕೃಷ್ಣದಣಿಸದೆ ಕಮಲನಾಭವಿಠ್ಠಲ ಬೇಗ ಬಾರೈ ದೇವ ಕೃಷ್ಣ 5
--------------
ನಿಡಗುರುಕಿ ಜೀವೂಬಾಯಿ
ಬಾರೊ ಮುನಿಸೇತಕೆಭಾವಜನಯ್ಯಪಮಾವನಳಿಯನೆ ಬಾರೊ ಭಾವತನಯನೆ ಬಾರೊ |ಮಾವನ ಮಡದಿಯ ಮಗಳ ಸೊಸೆಯಗಂಡ1ಅತ್ತಿಗೆಮೈದುನನೆ ಬಾರೊ ಅತ್ತಿಗೆಯ ಮಗಳಗಂಡ|ಮತ್ತೆ ಮೇಲೆ ಅತ್ತಿಗೆಯ ಪುತ್ರಿಯ ಮುದ್ದಾಡುತ 2ಅಂಬುಜನಯನನೆ ಬಾರೊ ಆದಿಮೂಲನೆ ಬಾರೊ |ಕಂಬದಿಂದೊಡೆದು ಬಂದ ಪುರಂದರವಿಠಲಯ್ಯ 3
--------------
ಪುರಂದರದಾಸರು
ಬಾರೋ ದೇವ ದೇವನೇ ಭಾವಜಾರಿಪ್ರಿಯನೆಬಾರೊ ಮನೆಗೆ ಶ್ರೀನಿವಾಸನೆ ಪಬಾರೊ ಭಾಮೆ ರುಕ್ಮಿಣೀಶಬಾರೋಯೋಗಿಹೃದಯವಾಸಬಾರೊ ಭಕ್ತಜನರ ಪೋಷನೇ 1ನಂದ ಗೋಪ ತನಯಗೋಪ-ವೃಂದದೊಳಗೆ ಕುಣಿದು ಮೆರೆದುಮಂದರೋದ್ಧರಮದನಜನಕನೇ2ಅಂದಿಗೆ ಕಾಲ್ಗೆಜ್ಜೆ ನಾದ-ದಿಂದ ಕುಣಿದು ನೆರೆದು ನಲಿದುಸುಂದರಾಂಗ ಶುಭಕರಾಂಗನೇ 3ಸರಿಗೆ ನಾಗಮುರಿಗೆ ಮುತ್ತಿನಸರಗಳ್ಹೊಳಯೆ ಉರದಿ ಲಕ್ಷ್ಮಿಜರಿಪೀತಾಂಬರ ಧಾರಿ ಶೌರಿಯೇ 4ಕೋಟಿ ಸೂರ್ಯಕಾಂತಿ ಮುಖಲ-ಲಾಟ ಕಸ್ತೂರಿ ತಿಲಕ ಶಿರದಿ ಕಿ-ರೀಟ ಧರಿಸಿ ಮೆರೆವ ದೇವನೇ 5ಮುರಳಿ ನುಡಿಸಿ ತರುಣಿಯರನುಮರುಳು ಮಾಡಿ ತುರುಕರುಗಳಪೊರೆದಕಮಲನಾಭವಿಠ್ಠಲನೆ6
--------------
ನಿಡಗುರುಕಿ ಜೀವೂಬಾಯಿ
ಬಾರೋ ವಾರಣವದನಾ ತ್ರೈಲೋಕ್ಯ ಸನ್ಮೋಹನತೋರೋ ಕಾರುಣ್ಯ ಸದಾನಂದಾ ಪಮಾರಹರನ ಪರಿವಾರಕಧೀಶನೆನಾರಿ ಗಿರಿಜೆ ಸುಕುಮಾರನೆ ಧೀರನೆ ಅ.ಪಪೊಡಮಡುವೆನು ನಿನ್ನಯಾ ಚರಣಕ್ಕೆ ದೇವಾಎಡಬಿಡದೀಗಲೆನ್ನಯಾತೊಡರ್ಕಿ ಅಡವಿಯ ಕಡಿಕಡಿದಡಸುತಕಡುಬಡವಗೆ ತಡವಿಡದ್ವರ ಕೊಡುವಂತೆ 1ಝಗಝಗಿಸುವ ಪೀಠದಿ ಮಂಡಿಸಿಕೊಂಡುಸೊಗಸೊ ಸಾಗಿ ಊಟದೀಬಗೆಬಗೆ ಭಕ್ಷವ ತೆಗೆತೆಗೆದು ಮೊಗೆವಂತೆಮೃಗದೃಗಯುಗವರ ನಗೆಮೊಗ ಸುಗುಣನೆ 2ಫಣಿಶಾಯಿ ಗೋವಿಂದನಾ ದಾಸರ ವಂದ್ಯತ್ರಿನಯನಮೂರ್ತಿ ನಂದನಾಕಣುದಣಿ ನೋಡುವೆಮಣಿಗಣಭೂಷಣಝಣಝಣ ಕುಣಿಂiÀುುತ ಗುಣಮಣಿ ಗಣಪತಿ 3
--------------
ಗೋವಿಂದದಾಸ
ಬಾರೋ ವೆಂಕಟಗಿರಿನಾಥ| ದಯ-ದೋರೈ ಭಕುತರ ಪ್ರೀತ ಪ.ಮಾರಪಿತ ಗುಣಹಾರ ಮಂದರ-ಧಾರ ದೈತ್ಯಸಂಹಾರ ಸುಜನೋದ್ಧಾರ ಮಮಹೃದಯಾರವಿಂದಕೆಬಾರೋ ಕೃಪೆದೋರೋ ವೆಂಕಟ ಅ.ಪ.ವೃಷಭಾಸುರನೊಳು ಕಾದಿ ಸಾ-ಹಸವ ಮೆರೆಸಿದ ವಿನೋದಿವಶಗೈದು ದೈತ್ಯನ ಶಿರವ ಕತ್ತ-ರಿಸುತಲಿ ನೀನಿತ್ತೆ ವರವವಸುಧೆಯೊಳಗಿಹ ಸುಜನರನು ಮ-ನ್ನಿಸುತಲಿಷ್ಟವನಿತ್ತು ಕರುಣಾ-ರಸದಿ ಸಲಹುವ ಬಿಸಜನಾಭ ಶ್ರೀ-ವೃಷಭಾಚಲವೊಡೆಯ ವೆಂಕಟ 1ಅಂಜನೆಯೆಂಬಳ ತಪಕೆ ಭಕ್ತ-ಸಂಜೀವನೆಂಬ ಶಪಥಕೆರಂಜಿಪ ಪದವಿತ್ತೆ ಮುದದಿ ಖಿಲ-ಭಂಜನಮೂರ್ತಿ ಕರುಣದಿ|ಮಂಜುಳಾಂಗ ಶ್ರೀರಂಗ ಸುರವರಕಂಜಭವವಿನುತಾದಿ ಮಾಯಾ-ರಂಜಿತಾಂಘ್ರಿ ಸರೋರುಹದ್ವಯಅಂಜನಾಚಲವೊಡೆಯ ವೆಂಕಟ 2ಶೇಷನ ಮೊರೆಯ ತಾಕೇಳಿಬಲುತೋಷವ ಮನಸಿನೊಳ್ತಾಳಿದೋಷರಹಿತನೆಂದೆನಿಸಿ ಕರು-ಣಾಶರಧಿಯ ತಾನೆ ಧರಿಸಿಶ್ರೀಶಹರಿಸರ್ವೇಶ ನತಜನ-ಪೋಷ ದುರ್ಜನನಾಶ ರವಿಶತ-ಭಾಸ ಕೌಸ್ತುಭಭೂಷವರಶ್ರೀ-ಶೇಷಾಚಲವಾಸ ವೆಂಕಟ 3ಮಾಧವವಿಪ್ರ ವಿರಹದಿ ಭ್ರಷ್ಟಹೊಲತಿಗಳನು ಸೇರ್ದ ಮುದದಿಸಾದರದಲಿ ನಿನ್ನ ಬಳಿಗೆ ಬರೆನೀ ದಯಾನಿಧಿ ಕಂಡು ಅವಗೆಶೋಧಿಸುತ ಪಾಪಗಳೆಲ್ಲವಛೇದಿ ಬಿಸುಡುತನಿಂದುವೆಂಕಟ-ಭೂಧರದ ನೆಲೆಯಾದ ನಾದವಿ-ಭೇದಬಿಂದು ಕಲಾದಿಮೂರುತಿ 4ಧನಪತಿಯೊಳು ತಾನು ಸಾಲಕೊಂಡಘನಕೀರ್ತಿಯಿಂದ ಶ್ರೀಲೋಲವನಿತೆ ಪದ್ಮಾವತಿಪ್ರೀತ ಭಕ್ತ-ಜನಸುರಧೇನು ಶ್ರೀನಾಥವನಧಿಶಯನ ಮುರಾರಿಹರಿಚಿ-ಧ್ವನಿನಿಭಾಂಗ ಸುಶೀಲ ಕೋಮಲವನಜನಾಭನೀಯೆನ್ನ ಕೃಪೆಯೊಳ-ಗನುದಿನದಿ ಕಾಯೊ ಕೃಪಾಕರ 5ಛಪ್ಪನ್ನೈವತ್ತಾರು ದೇಶದಿಂದಕಪ್ಪವಗೊಂಬ ಸರ್ವೇಶಅಪ್ಪ ಹೋಳಿಗೆಯನ್ನುಮಾರಿಹಣ-ಒಪ್ಪಿಸಿಕೊಂಬ ಉದಾರಿಸರ್ಪಶಯನ ಕಂದರ್ಪಪಿತ ಭಜಿ-ಸಿರ್ಪವರ ಸಲಹಿರ್ಪ ಕುಜನರದರ್ಪಹರಿಸುತ ಕಪ್ಪಕಾಣಿಕೆಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6ಚಾರುಚರಣತೀರ್ಥವೀಂಟಿ ನಿನ್ನೊ-ಳ್ಸಾರಿ ಬರುವ ಪುಣ್ಯಕೋಟಿಸೇರಿದೆ ಕೊಡು ಮನೋರಥವ ಲಕ್ಷ್ಮೀ-ನಾರಾಯಣನೆನ್ನೊಳ್ದಯವತೋರುನಿರತಸಮೀರಭವ ವರ-ದಾರವಿಂದದಳಾಕ್ಷ ತಿರುಪತಿವೀರ ವೆಂಕಟರಮಣ ಮದ್ಬಹು-ಭಾರನಿನ್ನದು ಪಾಲಿಸೆನ್ನನು7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಿದಿಗೆಯ ದಿವಸ(ಹನುಮಂತನನ್ನು ಕುರಿತು)ಸಮನಸನಾಗಿ ತೋರುವನಲ್ಲೆ ನೀರೆ ಪ.ಧನ್ಯನಾಗಿರುವ ದೊರೆಯ ಧರಿಸುತ್ತಚೆನ್ನಿಗನಾಗಿ ತೋರುವನಲ್ಲೆ ಈತ 1ಪಟ್ಟೆಕಂಬಿಯ ನಿರುದುಟ್ಟುಕೊಂಡಿರುವಕಟ್ಟಿದುತ್ತರೀಯ ಭೂಷಣದಿಂದ ಮೆರೆವ 2ಸೋಮಾರ್ಕಶಿಖಿಯಂತಿರುವುದು ತ್ರಿನಾಮರಾಮಣೀಯಕ ಮನೋಹರ ಪೂರ್ಣಕಾಮ 3ವೀರವೈಷ್ಣವ ಮುದ್ದು ಮೋಹನಕಾಯಭೂರಿಭೂಷಣಭುಜಬಲ ಹರಿಪ್ರಿಯ 4ರೂಪನೋಡಲು ಕಾಮರೂಪನಂತಿರುವಚಾಪಲ ಪ್ರೌಢ ಚಿದ್ರೂಪನಂತಿರುವ 5ಬಾಲವ ನೆಗಹಿ ಕಾಲೂರಿ ಶೋಭಿಸುವನೀಲದುಂಗುರದ ಹಸ್ತವ ನೀಡಿ ಮೆರೆವ 6ಗೆಜ್ಜೆ ಕಾಲುಂಗರ ಪದಕಕಟ್ಟಾಣಿಸಜ್ಜನನಾಗಿ ತೋರುವನು ನಿಧಾನಿ 7ಊರ್ವಶಿ :ತರುಣಿ ಕೇಳೀತನೆ ದೊರೆಮುಖ್ಯಪ್ರಾಣವರನಿಗಮಾಗಮ ಶಾಸ್ತ್ರಪ್ರವೀಣ1ಮಾಯವಾದಿಗಳ ಮಾರ್ಗವ ಖಂಡಿಸಿದವಾಯುಕುಮಾರ ವಂದಿತ ಜನವರದರಂಭೆ : ದಿಟವಾಯ್ತು ಪೇಳ್ದ ಮಾತಾದರು ಜಾಣೆಚಟುಳ ಹನುಮನ ಉತ್ಕಟರೂಪ ಕಾಣೆ 1ವಾಮನನಾದ ಕಾರಣವೇನೆ ಪೇಳೆನಾ ಮನಸೋತೆ ಎಂತುಂಟೊ ಹರಿಲೀಲೆ 2ಊರ್ವಶಿ : ನಾಗವೇಣಿ ನೀ ಕೇಳೆ ನಾಗವೈರಿಯೊಳುಸಾಗಿತು ಸೇವೆಯೆಂಬುದು ಮನಸಿನೊಳು 1ವಾದವ ಮಾಡಿ ವಿನೋದದಿ ಹರಿಯಪಾದಸೇವೆಗೆ ಮನನಾದ ಕೇಳಿದೆಯೊ 2ವೀರ ವೇಷವನಿದ ಕಂಡು ಶ್ರೀಹರಿಯದೂರವಾದನೋ ಎಂದು ಮನದೊಳು ನಿಜವು 3ತೋರಲು ಬೇಗದಿ ದೊರೆ ಹನುಮಂತಭೂರಿಭೂಷಣ ಸುಂದರ ರೂಪವಾಂತ 4ಇಂದಿನ ಸೇವೆಯೆನ್ನಿಂದತಿ ದಯದಿಮಂದರಧರಿಸಿಕೊಳ್ವುದು ಎಂದು ಭರದಿ 5ಒಯ್ಯನೆ ಪೇಳುತ್ತ ವಯ್ಯಾರದಿಂದಕೈಯನು ನೀಡಿ ಸಾನಂದದಿ ಬಂದ 6ಕಂತುಪಿತನು ಹನುಮಂತ ಮಾನಸಕೆಸಂತಸ ತಾಳಿ ಆನಂತನು ದಿಟಕೆ 7ಏರುತ ಹನುಮನಭೂರಿವೈಭವದಿಸ್ವಾರಿಯು ಪೊರಟ ಸಾಕಾರವ ಮುದದಿ 8ತೋರಿಸಿ ಭಕ್ತರಘೋರದುರಿತವಸೂರೆಗೊಳ್ಳುವನು ವಿಚಾರಿಸಿ ನಿಜವ 9ಹದನವಿದೀಗೆಲೆ ಬಿದಿಗೆಯ ದಿನದಿಮದನಜನಕನು ಮೈದೋರುವ ಮುದದಿ 10ಪ್ರತಿದಿನದಂತೆ ಶ್ರೀಪತಿ ದಯದಿಂದಅತಿಶಯ ಮಂಟಪದೊಳು ನಲವಿಂದ 11ಎಂತು ನಾ ವರ್ಣಿಪೆ ಕಂತುಜನಕನಅಂತ್ಯರಹಿತ ಗುಣಾನಂಮಹಿಮನ 12ಏಕಾಂತದಿ ಲೋಕೈಕನಾಯಕನುಶ್ರೀಕರವಾಗಿ ನಿಂದನು ನಿತ್ಯಸುಖನು 13* * *ರಂಭೆ : ಇವನತಿಜಾಣನಮ್ಮಾ ಇವನ್ಯಾರಮ್ಮಾ ಪ.ಇವನತಿಜಾಣ ಲಕ್ಷ್ಮೀಧವನಿಗಿಂತಲು ಮುಂದೆತವಕದಿ ಬರುವತ್ತಿತ್ತವರನ್ನು ನೋಡದೆ 1ಅಂದಣವೇರಿ ಮತ್ತೊಂದ ತಾ ನೋಡದೆಒಂದೇ ಮನದಿ ಬೇಗ ಮುಂದೆ ಬರುವನಮ್ಮಾ 2ಬಾಲಬ್ರಹ್ಮಚಾರಿ ಶಿಲೆಯಂತಿರುವನುಅಲೋಚಿಸಲಿವ ಮೂಲಪುರುಷನಮ್ಮಾ 3ಪುಟ್ಟನಾದರು ಜಗಜಟ್ಟಿಯಂತಿರುವನುದಿಟ್ಟನಿವನವನ ಮುಟ್ಟಿ ನೋಡಮ್ಮ 4ಊರ್ವಶಿ :ನಾರೀ ಇವನೀಗಹೊಂತಕಾರಿಲೋಕಕ್ಕಾಧಾರಿಪ.ಕೊಬ್ಬಿದ ದೈತ್ಯರಿಗೀತನೆಕಾಲಹಬ್ಬುವದಾತ್ಮಕ್ಕೀತನೆ ಮೂಲಉಬ್ಬುವ ಹರಿಯೆಂದರೆ ಮೈಯೆಲ್ಲಒಬ್ಬನಿಗಾದರೂ ಬಗ್ಗುವನಲ್ಲ 1ಎಲ್ಲಿರುವನುಹರಿಅಲ್ಲಿಹನೀತಬಲ್ಲಿದನಾರಾಯಣಗಿವ ದೂತಖುಲ್ಲರ ಮನಕತಿ ಝಲ್ಲೆನುವಾತಸುಲ್ಲಭನೆಯಿವ ಮುಂದಿನ ಧಾತ 2ಭೇದವಿಲ್ಲೆಂಬುದವರಿಗೆಯಿವ ತುಂಟಮೇದಿನಿಬಾಧಕರಿಗೆ ಯಿವ ಕಂಟಆದಿ ಮೂರುತಿ ಕೇಶವನಿಗೆಬಂಟಮಾಧವಭಕ್ತರಿಗೀತನೆ ನೆಂಟ 3ದುರಿತಾರಣ್ಯದಹನ ನಿರ್ಲೇಪವರವೆಂಕಟಪತಿಯಿದಿರೊಳಗಿಪ್ಪಪರಮಾತ್ಮನ ಪರತತ್ತ್ವ ಸ್ವರೂಪಮರೆಮಾತೇನಿವ ದೊರೆ ಹನುಮಪ್ಪ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಿಂದುಮಾಧವರಮಾಧವಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಬಿಂದುಮಾಧವಸುಬಂಧು ದೀನಭವ|ಬಂಧತರಣ ಗೋವಿಂದ ಶ್ರೀ ಕೃಷ್ಣ1ಮಂದರಾದ್ರಿಧರಕುಂದರದನಮಹಾ |ಸುಂದರಸಿರಿಹೃನ್ಮಂದಿರ ವಾಸಾ2ಕದ್ದಿಕಾರ ಸುರವೃಂದ ಸುಪೂಜಿತ |ಇದ್ದಿ ದೇವ ಕಚವೃಂದ ಸಮೇತಾ3ನಂದ ನಂದನ ಸುಸಿಂಧುರ ವರದ ಮು-ಕುಂದಗೋಪಿಕಾ ವೃಂದ ವಿಹಾರಾ4ಮಲ್ಲಿಖೇಡ ಸ್ಥಳ ಹೊಳೆ ಕಾಗಿಣಿ ಥಡಿಬಳಿಗೆ ರಾಯರು ಕುಳಿತಲ್ಲಿರುವ5ಪಂಕಜಾಕ್ಷ ಮೀನಕೇತು ಜನಕ ಗರು-ಡಾಂಕಶಶಿಧ್ವಜ ಶಂಕರಪ್ರಿಯ ಹರಿ6
--------------
ಜಕ್ಕಪ್ಪಯ್ಯನವರು
ಬುದ್ಧಿ ಧೃತಿಯೆಂಬ ನಾರೇರು ಶ್ರೀಮುದ್ದು ಕೃಷ್ಣನ ಒಲಿಸಿಕೊಂಡರು ಪ.ಅಕ್ಕ ಬುದ್ಧಿವಂತೆ ತಂಗಿಗೆ ಬಲುನಿಕ್ಕರದಲಿ ಹಿತವಾಡಿದಳುಚಿಕ್ಕವಳೆಂದಂಜದೆÉ ಧೃತಿಯು ತಮ್ಮಕ್ಕನೊಳು ಬಡಿದಾಡಿದಳು 1ಕಟ್ಟಲೆ ಮೀರಿ ಮಾತಾಡದಿರೆ ತಂಗಿಸಿಟ್ಟು ಬರುತಿದೆ ಕಾಡದಿರೆಕಟ್ಟಲೆ ಮೀರಿ ಮೊದಲೆ ನವೆದೆ ನಿನ್ನಕಟ್ಟಿನೊಳಗೆ ಸಿಕ್ಕಿ ಬಲು ದಣಿದೆ 2ಒಗತನ ದಾರದೆ ಸಣ್ಣವಳೆ ನೀಜಗಳಕ್ಕೆ ನಿಂತೆ ದೊಡ್ಡೆದೆಯವಳೆನಗೆಗೇಡು ಮಾಡಿಕೊಂಡೆಲೆಯಕ್ಕ ನಿನಗೊಗತನ ನನ್ನಿಂದ ತಗಲಕ್ಕ 3ಹರಿನಿನಗೆ ದಕ್ಕಿದನೆಂದು ಉಣ್ಣದುರಿಯಬೇಡೆಲೆ ತಂಗಿ ಹೋಗಿಂದುಅರಸ ದಕ್ಕುವನೆ ಇನ್ನಾರಿಗೆ ಅಕ್ಕಕಿರುಕುಳು ಮಾತ್ಯಾಕೆ ಹಿರಿಯಳಿಗೆ 4ನನ್ನ ಹಿರಿಯತನ ಕೆಣಕಿದ್ಯಲ್ಲೆನನ್ನ ಕಣ್ಣ ಮುಂದೆ ನಿನ್ನೆ ಬಂದವಳೆಹುಣ್ಣಿಮೆ ಚಂದ್ರ ದಿನಕೆ ಹಿರಿಯ ಜಗಮನ್ನಣೆಗೆ ಬಾಲಚಂದ್ರನಲ್ಲೆ 5ಪಟ್ಟ ನನ್ನದು ಮೊನ್ನೆ ಬಂದವಳೆ ನಿನ್ನದಿಟ್ಟತನವನೇನ ಹೇಳಲೆಕೃಷ್ಣ ನಿನಗೆ ದೂರನಲ್ಲೆ ಅಕ್ಕ ಹರಿಯಗುಟ್ಟಿನ ಮೋಹವೆ ನನಗೆ ಅಕ್ಕ 6ತಂಗಿ ಮನವ ನೋಯಿಸ್ಯಾಡದಿರೆ ಶ್ರೀರಂಗನೆನಗೆರವು ಮಾಡದಿರೆಮಂಗಳ ಮಹಿಮ ಮುರಾರಿಯ ಅರ್ಧಾಂಗಿಯೆ ನಾ ನಿನಗೆ ಸರಿಯೆ 7ಹಿರಿಯ ಕಿರಿಯಳಲ್ಲ ಸರಿ ಹೇಳೆಹರಿಗೆರವಿನ ಮಾತಿಲ್ಲಖರೆಕೇಳೆಪರಮಪುರುಷ ವಾಸುದೇವನೆ ಕೊಟ್ಟವರಕೆಂದು ತಪ್ಪದೆ ಕಾವನೆ 8ಕನ್ಯೆ ಲಕ್ಷುಮಿಯ ರಮಣನೆ ಸ್ವಾಮಿತನ್ನ ನಂಬಿದವರ ಹೊರೆವನೆಪುಣ್ಯ ಗೋಪೀಜನಜಾರನೆ ಪ್ರಸನ್ನವೆಂಕಟಪತಿ ಧೀರನೆ 9
--------------
ಪ್ರಸನ್ನವೆಂಕಟದಾಸರು
ಬುದ್ಧಿಯ ಪೇಳೇ ಗೋಪಮ್ಮ ನಿನ್ನಮುದ್ದು ಮಗನ ಲೂಟಿ ಘನವಾದುದಮ್ಮ ಪಸದ್ದು ಇಲ್ಲದ ಹಾಗೆ ಬಂದಾನೆಕದ್ದು ಬೆಣ್ಣೆಯನೆಲ್ಲ ತಿಂದಾನೆಎದ್ದೊಮ್ಮೆ ನೋಡಿ ನಾ ಗದ್ದಲ ಮಾಡಲುಸದ್ದು ಮಾಡದೆ ಕೃಷ್ಣ ಹದ್ದನೇರುತ ಪೋದ 1ಜಲಜ ಗಂಧಿನಿಯರು ಕೂಡೀ ನಾವುಜಲದೊಳಾಡುವುದನ್ನು ನೋಡೀಜಲಜನಾಭನು ಮರದ ತಲೆಯ ಮೇಲ್ಕಟ್ಟಿದಸುಲಿದಿಟ್ಟ ಸೀರೆಯ ಬಲರಾಮನನುಜ 2ಹಾಲ ಮಾರಲು ಪೋದ ಮಗಳಾ ಕಂಡುಮೇಲೆ ಬೀಳುತ ಮಾಡೆ ಜಗಳಾಶಾಲೆಯ ಸುಲಿದು ಬತ್ತಲೆ ನಿಲ್ಲಿಸಿದನುಮೂರ್ಲೋಕದೊಡೆಂiÀುಶ್ರೀಲೋಲಗೋವಿಂದ 3
--------------
ಗೋವಿಂದದಾಸ
ಬೇಡವೆನ್ನೆ ನೀನು ಗೋಪಮ್ಮ ಪಕಾಡುವ ಕೃಷ್ಣಗೆ ಕರೆದು ಬುದ್ಧಿಯ ಹೇಳೆ ಅ.ಪಎಣ್ಣೆ ಮಂಡೆಯಲಿ ಬಣ್ಣದ ಬಚ್ಚಲೊಳಗಿರೆ |ಬಣ್ಣಿಸಿ ಆಟಕಾಳಿ ಹಚ್ಚುವೆನೆನುತಲಿ ||ಬೆನ್ನು ಒರಸಲು ಬಂದ-ಬೆದರೇಳ್ವರ |ಮುನ್ನ ತಕೈಸಿಕೊಂಡ-ಗೋಪಮ್ಮ ನಿನ್ನ |ಚಿಣ್ಣಸಿರಿಗೇಡಿಯು ಎನ್ನ ನಾಚಿಕೆಗೊಂಡ1ನೆಲುವಿಗೆ ಹಾಲ ಏರಿಸುವಳ ಕೈವಿಡಿದು |ಕಿಲಿಕಿಲಿ ಕಿವಿಮಾತ ಹೇಳುವೆ ಎನುತಲಿ ||ಕಲೆಯನಿಕ್ಕಿದ ಗಲ್ಲಕೆ-ಮೇಲ್ಮಲಕಿನ |ತಳಕಿಕ್ಕಿ ಕೆಡಹಲಿಕೆ-ಕೆಳಗೆ ಬಿದ್ದು |ಬಳಲಿ ಬಂದೆವೆ ನಿಮ್ಮ ಬಳಿಗೆ ಗೋಪಮ್ಮ 2ಮನೆಮನೆಯೊಳು ದಂಪತಿಗಳಿದ್ದ ಮಂಚ-|ವನು ನಡು ಬೀದಿಯೊಳ್ ಹಾಕಿ ಕಲೆವನೆ ಕೃಷ್ಣ ||ಮನು ಮಥನಯ್ಯ ಕಾಣೆ-ಈತನು ಮಹಾ |ಮುನಿಗಳ ಮನಕೆ ನಿಲುಕದಿಪ್ಪಗೆ-ಮೂಲೋಕಕೆ |ಘನಮಹಿಮ ನಮ್ಮ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಬೇಡುವೆ ನಿನ್ನನು ಜೋಡಿಸಿ ಕರಗಳ |ಕೂಡಲೆ ವರಗಳ | ನೀಡುವದೀಶನೆ ಪನಂದನ ಕಂದ ಮುಕುಂದ ಮುರಾರೆ |ಸುಂದರ ಶುಭಕರ | ಮಂದರೋದ್ಧಾರ 1ಶಂಕರ ಹಿತನೇ ಪಂಕಜನಾಭನೇ |ವೆಂಕಟರಮಣನೆ | ಶಂಖಚಕ್ರಧರನೇ 2ಸುರನರಕಿನ್ನರ| ತುಂಬುರ ನಾರದರ್ |ಪರಿಪರಿಯಲಿ ನಿನ್ನ | ಸ್ಮರಿಸುತಲಿಹರೂ 3ಅಸುರರ ಬಾಧೆಯೊಳ್ | ಸುರರೆಲ್ಲ ಭಜಿಸಲು |ಕುಶಲದಿ ಭಕ್ತರ|ಪೊರೆದೆ | ಗೋವಿಂದನೇ 4
--------------
ಗೋವಿಂದದಾಸ
ಬೇವ ಬೆಲ್ಲದೊಳಿಡಲೇನು ಫಲಹಾವಿಗೆ ಹಾಲೆರೆದೇನು ಫಲ ? ಪ.ಕುಟಿಲವ ಬಿಡದಲೆ ಕುಜನರು ಮಂತ್ರವಪಠನೆಯ ಮಾಡಿದರೇನು ಫಲ?ಸಟೆಯನ್ನಾಡುವ ಮನುಜರು ಮನದಲಿವಿಠಲನ ನೆನೆದರೆ ಏನು ಫಲ ? 1ಮಾತಾ - ಷತೃಗಳ ಬಳಲಿಸುವಾತನುಯಾತ್ರೆಯ ಮಾಡಿದರೇನು ಫಲ ?ಘಾತಕತನವನು ಬಿಡದೆ ನಿರಂತರನೀತಿಯನೋದಿದರೇನು ಫಲ ? 2ಕಪಟತನದಲಿ - ಕಾಡುವರೆಲ್ಲರುಜಪಗಳ ಮಾಡಿದರೇನು ಫಲ ?ಕುಪಿತ ಬುದ್ಧಿಯನು ಬಿಡದೆ ನಿರಂತರಉಪವಾಸ ಮಾಡಿದರೇನು ಫಲ ? 3ಪತಿಗಳ ನಿಂದಿಸಿ ಬೊಗಳುವ ಸತಿಯರುವ್ರತಗಳ ಮಾಡಿದರೇನು ಫಲ ?ಅತಿಥಿಗಳೆಯಡೆಯಲಿ ಭೇದವ ಮಾಡಿ ಸದ್ಗತಿಯನು ಬಯಸಿದರೇನು ಫಲ ? 4ಹೀನ ಗುಣಂಗಳ ಬಿಡದೆ ನದಿಯೊಳುಸ್ನಾನವ ಮಾಡಿದರೇನು ಫಲ ?ಜಾÕನಿ ಪುರಂದರವಿಠಲನ ನೆನೆಯದೆಮೌನವ ಮಾಡಿದರೇನು ಫಲ? 5
--------------
ಪುರಂದರದಾಸರು
ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ಪ.ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿ 1ನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ 2ಕರ್ಪರಭಾಂಡಕಂದರ್ಪಹರೆನ್ನಿಸರ್ಪಭೂಷಣ ಸುಖದರ್ಪಣನೆನ್ನಿ 3ಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ 4ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿ5ಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ 6ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆವರ್ಧಕನೆನ್ನಿ 7ಶರಣು ಸುರಾರ್ಚಿತ ಚರಣನೆ ಎನ್ನಿಶರಣಾಗತರಾಭರಣನು ಎನ್ನಿ 8ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿ 9ದಕ್ಷಯಜÕವೀಕ್ಷಕನೆನ್ನಿಪಕ್ಷಿಗಮನ ಭಟರಕ್ಷಕನೆನ್ನಿ 10ಈಪರಿನೆನೆದರೆ ಪಾಪದೂರೆನ್ನಿಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ 11
--------------
ಪ್ರಸನ್ನವೆಂಕಟದಾಸರು