ಒಟ್ಟು 19445 ಕಡೆಗಳಲ್ಲಿ , 133 ದಾಸರು , 8422 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಜನೆಯೊಂದೇ ಸಾಲದೇ ರಂಗಯ್ಯನ ಭಜನೆಯೊಂದೇ ಸಾಲದೇ ಪ ಅನುದಿನ ಸ್ಮರಿಸಲು ಭಜಕರ ದುರಿತವ ತರಿಯುವ ಪರಿಯ ಅ.ಪ. ಹಿಂದೆ ನೋಡಜಮಿಳ ತರಳ ಪ್ರಲ್ಹಾದರ ಚಂದದಿ ಮೆರೆದ ಗೋಪಾಲ ಬಾಲಕರ ವೃಂದಾವನದೊಳಿದ್ದ ಗೋಪಸೇವಕರ 1 ಕೋಮಲೆ ದ್ರೌಪದಿ ಸಭೆಯೊಳು ಸ್ಮರಿಸಲು ಭಾಮೆಗಕ್ಷಯವಿತ್ತ ಕ್ರೂರ ರಕ್ಷಕನ ಪ್ರೇಮದಿ ಅಹÀಲ್ಯೇ ಶಿಲೆಯೊಳು ಭಜಿಸಲು ಸ್ವಾಮಿ ತಾನೊಲಿದು ಮುಕ್ತಿಯ ಕೊಟ್ಟ ಹರಿಯ 2 ದಶರಥನಲಿ ಬಂದು ದಶಕಂಠನನು ಕೊಂದು ವಸುಮತಿಯನು ಪೊರೆದ ಶ್ರೀ ಹರಿಯ ಪಶÀುಪತಿ ಸಖನಾದ ಪನ್ನಗಶಯನನಅಸುರರ ತರಿದ ಶ್ರೀ ಚನ್ನಕೇಶವನ 3
--------------
ಕರ್ಕಿ ಕೇಶವದಾಸ
ಭಜರೇ ಧೀಮಂತಂ ಮಾನಸ ಪ ಭಜ ಹನುಮಂತಂ ನಿರುಪಮ ಶಾಂತಂ ಮ ಹಿಜಾನಾಯಕ ಸೇವಾಸಕ್ತಂ ಅ.ಪ ಪವನ ಕುಮಾರಂ ವಾನರವೀರಂ ತವ ಭಯಂಕರಂ ಅಕ್ಷ ಸಂಹಾರಂ ರಾವಣಗರ್ವವಿಭಂಜನ ಶೂರ ಅ ಭವ ಸಹೋದರ ಪ್ರಾಣ ದಾತಾರಂ 1 ಸಕಲ ಮಂತ್ರ ತಂತ್ರಾಗಮ ನಿಪುಣಂ ಸಕಲ ಕಲಾ ಸದ್ಗುಣ ಗಣ ಪೂರ್ಣಂ ರಾಮಾಯಣ ಮಹಾಮಾಲಾಭರಣಂ ಶ್ರೀ ಮರಕತಮಕುಟ ವಿರಾಜಿತಕರಂ 2 ಪಾಪವಿದೂರಂ ವಜ್ರಶರೀರಂ ಸೀತಾ ಮಾನಸಾನಂದ ಸಮೀರಂ ತಾರಕ ಮಂತ್ರೋಪಾಸನ ಚತುರಂ ಮಾಂಗಿರಿರಂಗ ಸೇವಾಪರಮಮರಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಜರೇ ಶ್ರೀರಾಮಂ ಮಾನಸ ಪ ನಿರ್ಜಿತಕಾಮಂ ನಯನಾಭಿರಾಮಂ ಅ.ಪ ನಿರುಪಮ ಶಾಂತಂ ಮಹಿಜಾಕಾಂತಂ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಜಿಪೇನೆ ನಿನ್ನ ಭಕುತಿಯಿತ್ತು ಪೊರೆ ಎಮ್ಮಾ ಪ ಭಾರ ನಿನ್ನದು ಭರತರಾಯನ ಪ್ರೀತಿ ವಿಷಯಳೆ ಅ.ಪ. ಬಂದ ಕಾರ್ಯವಾಗುವಂತೆ ಮಾಡೆನಿನ್ನ ದ್ವಂದ್ವಕೆ ನಮಿಪೆ ಅನ್ಯರ ಬೇಡೇಬನ್ನ ಬಡುತಿಹ ಧಮ್ಮ ಭಕುತನ ನೋಡೆ ಸುಜ್ಞಾನವಿತ್ತು ಕರಪಿಡಿದು ಕಾಪಾಡೆ 1 ತರಳನ ಮತಿಯನ್ನು ಸರಳಮಾಡಿ ಉರುಳಿಸು ಸುಧೆಯಾಂಬುಧಿಯೊಳಗೆನ್ನ ಗರಳವಾಗಿದೆ ಮನವೆಲ್ಲಾ...ಪಾಶಾದಿ ಸುತ್ತಿ ಇನ್ನು ಅರಳಿಸಿದೆ ಮೋಹಸತಿಯೊಡನೆ ಪಾದಾ 2 ದಾಸಾನಿಗೆ ನಿನ್ನ ದಾಸನಾಗುವದೆಂಬೊ ಆಶಾಪುಟ್ಟಿದ್ದಕ್ಕೆ ದಾಸನ ಮಾಡಿಕೊ ಉದಾಶಿಸದೆ ಏಸು ಮಾತುಗಳಾಡಿದರೂ ಕಾಸು ಬಾಳದು ಸಾಸಿರ ಮಾತಿಗೆ ಒಂದೇ ತಂದೆವರದಗೋಪಾಲವಿಠ್ಠಲನತೋರೆ 3
--------------
ತಂದೆವರದಗೋಪಾಲವಿಠಲರು
ಭಜಿಸಬಾರದೆ ಮನವೆ ಭಜಿಸಬಾರದೆ ಭಜಿಸಲಿಕ್ಕೆ ಭಾವದಿಂದ ನಿಜವಾ ಗೊಲಿವ ಹರಿ ಮುಕುಂದ ಧ್ರುವ ನಿಜವಬಿಟ್ಟು ದಣವದ್ಯಾಕೆ ತ್ರಿಜಗಪತಿಗೊಂದಿಸದೆ ತಾನು ಭಜನ ಮುಖ್ಯವೆಂದು ಸುಜನರೆಲ್ಲ ಪೇಳುತಿರಲಿಕ್ಕಾಗಿ 1 ಪ್ರೀತಿಯಿಂದರ್ಜುನ ನೋಡಿ ಗೀತೆಯಲ್ಲಿ ಶ್ರೀಕೃಷ್ಣತಾನು ನೀತಿಹಿತವ ಭಕ್ತಿಯೋಗದಲ್ಲಿ ಸಾರತಿರಲಿಕ್ಕಾಗಿ 2 ಪ್ರಕಟಭಾವಕೊಲಿದ ನೋಡಿ ಅಖಿಲದೊಳು ಸುಲಭದಿಂದ ಭಕುತಿ ಸುಖವನಿತ್ತು ಸಲಹುತಿಹ್ಯ ಮಹಿಪತಿಸ್ವಾಮಿಗಿನ್ನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಜಿಸಬಾರದೆ ಹರಿಯ [ಮನವೇ] ಭಜಕರಕ್ಷಕ ದೊರೆಯ ಪ. ಗಜಪತಿ ವರದನ ತ್ರಿಜಗಜ್ಜನಕನ ಅಜಮಿಳ ವರದನ ವಿಜಯನ ಸಖನಾಅ.ಪ. ಕಾಮಕ್ರೋಧವ ಸುಟ್ಟು [ಶ್ರೀರಾಮನೋಳ್ ಮನನೆಟ್ಟು] ನೇಮಧರ್ಮದಿ ಬುದ್ಧಿಯನಿಟ್ಟು ತಾಮಸ ಬುದ್ಧಿಯ ಬಿಟ್ಟು 1 ಸತ್ಯಮಾರ್ಗವ ಬಿಡದೆ ದುಷ್ಕøತ್ಯದೊಳ್ ಮನಗೊಡದೆ ಸತ್ವಗುಣಭರಿತ ಜರಾಮೃತ್ಯುರಹಿತ ನಿತ್ಯತೃಪ್ತನನೀಂ 2 ನ್ಮಂದಿರದೊಳಗಾನಂದದಿ ನೆಲಸಿರುವಂದವ ಮರೆಯದಿನ್ನು 3 ಪರಮಾಚಾರ್ಯರುಗಳ ನಾಮಸ್ಮರಣೆಯ ಸೌಭಾಗ್ಯದಲಿ ವರಗುರುಗಳ ಘನ ಕರುಣಾಕಟಾಕ್ಷದಿ ಸಿರಿವರನ ನೆಲೆಯರಿವತನಕ 4 ವಾತಾತ್ಮಜ ಸಂಸೇವಿತೆಯ ಭೂಜಾತೆಯ ಜನಕಸುತೆಯ ಸೀತೆಯ ನಿಮಿಕುಲಪೂತೆಯ ತ್ರಿಜಗನ್ಮಾತೆಯ ಶುಭಗುಣಯುತೆಯ [ನಿಗೆ] 5 ತರುಣಿ ಕುಲಾಂಬುಧಿ ಸೋಮರಾಮ ತ್ರಿಭುವನ ಮೋಹನ ಶ್ಯಾಮ ವರದ ಶೇಷಾಚಲಧಾಮನ ಸತ್ಯವಿಕ್ರಮ ರಘುರಾಮನ ನೀ 6
--------------
ನಂಜನಗೂಡು ತಿರುಮಲಾಂಬಾ
ಭಜಿಸಿ ಕೆಟ್ಟವರು ಉಂಟೇ ಭೂಕಾಂತನ ಭಜಿಸಲಾರದೆ ಕೆಟ್ಟರು ಪ ಕುಜನರ ಕಾಲನ ಚರಣವ ನೆನೆದರೆ ಸುಜನರ ಪಾಪವ ಕ್ಷಮಿಸುವ ಪರಿಯ ಅ.ಪ. ತರಳ ಧೃವನಿಗೊಲಿದೊ ಸ್ವರಾಜ್ಯವ ಸರಸದಿ ಪಾಲಿಸಿದ ದುರುಳ ರಕ್ಕಸನು ಕಂದನನು ಪೀಡಿಸುವಾಗ ನರಸಿಂಗ ರೂಪದಿ ಪೊರೆದ ಶ್ರೀ ಹರಿಯ 1 ನಿಜ ಭಕ್ತಗೊಲಿದವನ ಅವಳಗಕ್ಷಯವಿತ್ತ ಪರಿಯ 2 ಸುಗ್ರೀವನಿಗೊಲಿದೂ ವಾನರ ಭೂಪ ವಾಲಿಯನೂ ತರಿದೂ ಪೊರೆದ ಕೇಶವನ 3
--------------
ಕರ್ಕಿ ಕೇಶವದಾಸ
ಭಜಿಸಿ ಧನ್ಯನಾದೆ ನಾನು ಭುಜಗಶಯನನಂಘ್ರಿಯನ್ನು ಪ ಕುಸುಮ ತರಲು ಸರಸಿಧುಮುಕಿ ಮೊಸಳೆಬಾಯಿಗೆ ಸಿಲುಕಿ ಕರಿಯು ಕಂಟಕ ಗೆಲಿದು ಅಸಮಸೌಖ್ಯ ಪೊಂದಿದ್ದು ಕೇಳಿ 1 ಪಾಪಿ ಕುರುಪನೋಲಗದಲ್ಲಿ ದ್ರೌಪದಿಗೊದಗಿಬರಲು ಭಂಗ ಆಪತ್ತು ಗೆಲಿದಳೆಂಬುದ ಕೇಳಿ 2 ಇಳೆಯೊಳ್ಪತಿಯ ಶಾಪದಿಂದ ಶಿಲೆಯ ರೂಪದಿ ಬಿದ್ದ ಯುವತಿ ಗೊಲಿದು ಪಾವನಾಂಗಿಯೆನಿಸಿ ಕುಲಕೆ ತಂದ ಸುದ್ದಿ ಕೇಳಿ 3 ತ್ಯಜಿಸಿ ತನ್ನ ಬ್ರಹ್ಮಕುಲವ ಕುಜಕುಲದ ನಾರಿಗೆ ಕೆಟ್ಟ ಅಜಮಿಳನ ಅಂತ್ಯಕ್ಕೆ ಒದಗಿ ನಿಜಪದವಿ ನೀಡಿದ್ದು ಕೇಳಿ 4 ಅಂಬುಧಿನಿಲಯ ಅಸಮ ಮಹಿಮ ಕಂಬುಕಂಧರಮಿತ್ರ ಭಕುತ ಬೆಂಬಲ ಶ್ರೀರಾಮ ಪ್ರಭುವೆ ನಿನ್ನ ನಂಬಿದವರ ಸಂಭ್ರಮ ಕೇಳಿ 5
--------------
ರಾಮದಾಸರು
ಭಜಿಸಿ ಬದುಕಿರೋ _ ಭರದಿ ಸುಜನ ರೆನಿಸಿರೋ ಪ ಸುಜನ ರಾಜ ರಾಘವೇಂದ್ರರಾ ಅ.ಪ ಸುಜನ ಮಲಿನ ಕಳಿಯಲು ಒಲಿದು ಭವಿಯೊಳು _ ಬಂದ ಅಲವ ಮಹಿಮರ 1 ವೇಧ ದೂತರ _ ಪ್ರಹ್ಲಾದರೆಂಬರ ಸಾಧು ಸೇವ್ಯರ _ ದುರ್ಬೋಧೆ ಕಳಿವರ 2 ನಾರಸಿಂಹನ ಕರುಣ ಸೂರೆ ಪಡದಿಹ ಭಾರಿ ಭಕ್ತರ ದೇವರ್ಷಿ ಛಾತ್ರರ 3 ವ್ಯಾಸರಾಯರ _ ಶ್ರೀನಿವಾಸ ಯಜಕರ ಶೇಷದೇವರ ಆವೇಶ ಯುಕ್ತರ 4 ರಾಜ ಗುರುಗಳು ಕವಿರಾಜ ಮಾನ್ಯರು ನೈಜ ತೇಜರು ನಿವ್ರ್ಯಾಜ ಪ್ರೇಮರು 5 ಹರಿಯ ತರಿಸಿದಾ ಮುರಹರನ ಕುಣಿಸಿ ದಾ ಮುರವ ಹರಿಸಿದಾ ಧೊರೆಗೆ ಹರುಷ ಸುರಿಸಿದಾ 6 ಮಾನವಂತರಾ ಬಹುಜ್ಞಾನವಂತರಾ ದಾನ ಶೀಲರಾ ಅನುಮಾನ ರಹಿತರ 7 ಭ್ರಾಂತಿ ವಾದವ ವಿಶ್ರಾಂತಿ ಗೊಳಿಸಿದ ಶಾಂತಿ ಸಾಗರ ವೇದಾಂತ ಭಾಸ್ಕರ 8 ಶ್ರೀ ಸುಧೀಂದ್ರರ ವಿಶ್ವಾಸ ಪುತ್ರರ ದೋಷದೂರರ _ ಗುರು ದೋಷ ಕಳಿವರ 9 ಮಂತ್ರ ಸಿದ್ಧರು ಬಹು ಗ್ರಂಥ ಕರ್ತರು ತಂತ್ರ ಮಲ್ಲರು ಹರಿ ಮಂತ್ರಿ ಸಚಿವರು 10 ಭವ ರೋಗ ವೈದ್ಯರ ರಾಗ ರಹಿತರ ವೈರಾಗ್ಯ ಭಾಗ್ಯರ 11 ವಾದಿ ಭೀಕರ ಶ್ರೀವಿಜೀಂದ್ರ ಪೌತ್ರರ ನಿತ್ಯ ಮಿಂದು ಮೀಯ್ವರ 12 ತರ್ಕದಿಂದಲು ಹರಿಯು ಶಕ್ತಿಯಿಂದಲು ಯುಕ್ತಿಯಿಂದಲು ಒಲಿಯ ಭಕ್ತಿ ಇಲ್ಲದೆ 13 ಶ್ರೀಶ ದಾಸರ ಪದ ಪಾಂಶು ಧರಿಸದೆ ದೇಶ ತಿರುಗಲು ಬರಿಘಾಸಿ ಸಿದ್ಧವು 14 ಭಕ್ತರೊಲಿಯದೆ ನಿಜ ಭಕ್ತಿ ಸಿಕ್ಕದು ಪಕ್ವವಾಗದೆ ಭಕ್ತಿ ದಕ್ಕ ಶ್ರೀ ಹರಿ 15 ಇವರ ಮಂತ್ರವ ಭಕ್ತ ಜವದಿ ಜಪಿಸಲು ಅವಗೆ ಕರಗತ ಸಿದ್ಧ ಭವದಿ ವಾಂಛಿತ 16 ಶ್ರೀನಿವಾಸನ ಭಕ್ತ ಶ್ರೇಣಿ ಸೇರುವ 17 ಅಲ್ಪ ಸೇವೆಯೆ ಮೇರು ಕಲ್ಪ ವಾಹುದೊ ಕಾಕು ಸ್ವಲ್ಪ ತಟ್ಟದೊ 18 ನಿಖಿಳ ಯಾತ್ರೆಯಾ ಫಲ ಭಕ್ತ ಪಡೆಯುವ ಸಂದೇಹ ಸಲ್ಲದೊ 19 ಪುತ್ರ ನೀಡುವ ಸಂಪತ್ತು ದೊರಕಿಪ ವೃತ್ತಿ ಕಲ್ಪಿಪ ಆಪತ್ತು ಕಳಿಯುವ 20 ರಾಮ ನರಹರಿ ಕೃಷ್ಣ ಬಾದರಾಯಣ ದಿವಿಜ ಸ್ತೋಮ ವೆಲ್ಲವು 21 ಸೇರಿ ಇವರಿಗೆ ಕೀರ್ತಿ ಸೂರೆ ಕೊಡುತಿರೆ ಪಾರವಿಲ್ಲವು ಸತ್ಯ ಮಹಿಮೆ ಗೆಂಬುವೆ 22 ಕರ್ಣ ವಿದಿತರು ವಿಘ್ನ ಕಳಿವರು ಶ್ರೀ ಸತ್ಯ ಸಂಧರು 23 ಗುರುವು ಒಲಿದರೆ ತಾ ಹರಿಯು ಒಲಿಯುವ ಗುರುವು ಮುನಿದರೆ ಯಾರು ಪೊರೆವರಿಲ್ಲವೊ 24 ಶುದ್ಧ ಭಕ್ತಿಲಿ ಈ ಪದವ ಪಠಿಸಲು ಸಿಧ್ಧಿ ಸತ್ಯವು ಸರ್ವತ್ರ ವಿಜಯವು25 ಸಾರಿ ಸಾರುವೆ ಕೇಳಿ ಕ್ರೂರ ಕಲಿಯಲಿ ದೂರ ಸಾಧನೆ ಇವರ ಸೇರ ದಿರ್ಪಗೆ26 ಜಿಷ್ಣು ಸೂತ ಶ್ರೀ ಕೃಷ್ಣ ವಿಠಲನ ಶ್ರೇಷ್ಟ ಭಕ್ತರ ಶ್ರೀ ರಾಘವೇಂದ್ರರ27
--------------
ಕೃಷ್ಣವಿಠಲದಾಸರು
ಭಜಿಸಿ ಬದುಕೆಲೋ ಮಾನವ ಶ್ರೀಹರಿನಾಮ ತಾರಕಮಂತ್ರವ ಪ. ದುರಿತಕೋಟಿಗಳಂ ಪರಿಹರಿಸಿ ನಿಜಪದ ಸರಸೀರುಹದೊಳಗಿರಿಸಿ ಪೊರೆವನ 1 ದುರ್ಜನ ನಿಂದೆಗೆ ಲಜ್ಜಿತನಾಗದೆ ದುರ್ಜನ ದಮನನ ಧ್ಯಾನದೇ ನೀಂ 2 ಪೊಗಳಲು ಹಿಗ್ಗದೆ ತೆಗಳಲು ತಗ್ಗದೆ ಬಗೆಕುಂದದೆ ಸಮ್ಮೋದದೇ ನೀಂ 3 ಅಷ್ಟಮದಂಗಳ ಕಟ್ಟುತೆ ದೃಢದಿ ದೃಷ್ಟಿನಿಲ್ಲಿಸಿ ನಿಷ್ಠೆಯೋಳ್ ನೀಂ4 ದೋಷರಹಿತ ಶ್ರೀಶೇಷಗಿರೀಶನ ದಾಸರವಾಸನೆನ್ನಿಸಿ ಸಂತತಂ 5
--------------
ನಂಜನಗೂಡು ತಿರುಮಲಾಂಬಾ
ಭಜಿಸಿರೊ ಬಿಡದೆ ವಿರಾಜಮಾನರಾಗಿ ನಿತ್ಯ ಕುಜನರೊಳಾಡದಲೆ ನಿಜ ಭಕುತಿಯಿಂದ ಭುಜಬಲವುಳ್ಳ ಪರಜರಟ್ಟುವ ದಿ ಗ್ವಿಜಯ ಸತ್ಯಪೂರ್ಣರ ಸುಜನರೊಂದಾಗಿಪ ಭರದಿಂದ ಬಂದು ನಿಂದು ನಿರೀಕ್ಷಿಸಿ ನಿರ್ಮಳ ಕರಯುಗಳ ಮುಗಿದು ಶಿರವಾನಿಲ್ಲದೆ ಧರಣಿಯಾ ಮ್ಯಾಲೊಂದು ತೀವರ ಸಾಷ್ಟಾಂಗ ನಮ ಸ್ಕರಿಸಿ ಕೊಂಡಾಡಿ ನಿಂದಿರಲಾನರರಿಗೆಲ್ಲ ಪರಿಹರವೊ ಬಂದರಘಳಿಗೆಯಲಿ ದುರುಳರಿಗಾಯ್ತು ಮರಿಯದೆ ಚೆನ್ನಾಗಿ1 ನೆರೆನಂಬಿ ನಿಮ್ಮಯ ಗೋತುರ ಸಹಿತಕ್ಕೆ ಜ್ಞಾನಾಂ ಕುರವಾಗುವುದು ಇದು ಉರುಕಾಲ ಸಿದ್ಧವೆನ್ನಿ ತರತಮ್ಯ ತತ್ವ ತಾತ್ಪರಿಯ ವಿಧ ತಿಳಿದು ಸುರರು ಮೆಚ್ಚುತಲಿರೆ ಮುರರಿಪು ಚತುರ್ದಶ ಧರಣಿಗೆ ಪರನೆಂದು ಬಿರಿದನು ಎತ್ತಿ ಡಂಗುರವ ಹೊಯಿಸಿ ಡಿಂಗರರಿಗೆ ಸಚ್ಛಾಸ್ತ್ರ ಕೊಡುವ ಯತಿಶಿರೋಮಣಿ ಕರ್ನಾ 2 ಪಾದಾಂಬುಜಾತ ಕೃಷ್ಣಾ ತನು ಭವಸರಿತ ನಿವಾಸಾ ದಿವಿಜೇಶನಾಯುಧ ಕವಚದಿಂದಲಿ ತನ್ನವರನ ಪೊರೆದೆತ್ತಿ ನವವಿಧ ಬಗೆ ತೋರಿ ತವಕದಿ ಕೋಲುಪುರ ಪವಿತುರ ಸ್ಥಳದಲ್ಲಿ ರವಿಯಂತೆ ಪೊಳವರು ಭವದೋಷ ಕಳೆವುತಾ ಕವಿಗಳ ಮನೋಹರ ವಿಜಯವಿಠ್ಠಲನ ಶ್ರವಣ ಮನನ ಧ್ಯಾನವನು ಬಲ್ಲವರಾ3
--------------
ವಿಜಯದಾಸ
ಭಜಿಸಿರೊ ಭವಭಂಜನ ಹರಿಯಾ ರಜತ ಪೀಠ ಪುರದಿ ರಾಜಿಪ ದೊರೆಯಾ ಪ. ಮುಷ್ಟಿ ಪೃಥುಕವನ್ನು ಕೊಟ್ಟ ಕುಚೇಲಗೆ ಶ್ರೇಷ್ಠ ಭಾಗ್ಯವನಿತ್ತ ಸಿರಿವರನಾ ಅಷ್ಟಮಠೀಯರು ಮುಟ್ಟಿ ಪೂಜಿಸುವಂಥ ವಿಠಲನಿಂದ ಸರ್ವಾಭೀಷ್ಟವ ಪಡೆಯಿರಿ 1 ಯುಕ್ತಿಯನರಿಯದ ಭಕ್ತರಿಗಿಹಪರ ಭುಕ್ತಿ ಮುಕ್ತಿದನೆಂಬ ಬಹು ಬಿರುದಾ ವ್ಯಕ್ತ ಮಾಡುತ ಕಡು ರಿಕ್ತಜನರ ರಕ್ಷಾ ಸಕ್ತನಾಗಿಹ ಭೈಷ್ಮೀನಕ್ತ ಮಾನಸನನ್ನು 2 ನಿತ್ಯ ಮಧ್ವ ಸರಸಿಯೊಳಗೆ ಮಿಂದು ಉರಗ ಗಿರೀಶ ಸತ್ಯ ವರನ ಮೂರ್ತಿಯ ಕಂಡು ಸುರವರ ಪ್ರಾರ್ಥನೆಯ ವರ ಪ್ರಸಾದವನುಂಡು 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಜಿಸು ಮನವೆ ಶ್ರೀ ರಂಗಯ್ಯನಾ ಪ ಇಂದಿರಾ ನನರವಿಂದ ಭ್ರಮರನಾ| ಮಂದರ ನಗಧರ ನಂದ ನಂದನನಾ1 ಫುಲ್ಲನಯನ ಸಿರಿವಲ್ಲಭ ದೇವನಾ| ಮಲ್ಲ ಚಾಣೂರರಿಪು ಸಲ್ಲಲಿತಾಂಗನಾ 2 ಪನ್ನಗ ಶಯನಾ| ಸನ್ನುತ ಮಹಿಪತಿ ಚಿನ್ನನೊಡೆಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಜಿಸು ಮಾನಸ ತ್ರಿಜಗದರಸ ಪ. ನಿಜಭಜಕ ಜನಾಶ್ರಯ ಸುಜನಬಾಂಧವ ಅಜಮುಖಾರ್ಚಿತ ಪಾದಪಂಕಜ ಅಜಾಮಿಳವರದನಂಘ್ರಿಯ ಅ.ಪ. ಪವನನಂದನ ಸೇವ್ಯನ ಪದ್ಮಾಕ್ಷನ ಪಾವನಗುಣಶೀಲನ ಪರಮಾತ್ಮನ ಪತಿತಪಾವನ ನಾಮನ ಅಪಾರ ಮಹಿಮನ ಸುರನರೋರುಗ ನಮಿತ ಚರಣನ ತರಣಿವಂಶಾಬ್ಧಿ ಚಂದ್ರಮನ ಪುರವೈರಿ ಪ್ರಿಯಸಖನ ಪರಂತಪ ರಾಘವೇಂದ್ರನ 1 ವಿಕ್ರಮನ ಭಯನಾಶನ ಕಾಕುತ್ಸ್ಧಕುಲದೀಪನ ಸುಗುಣಾ ರಾಮನ ಪಾಕಾರಿವಿನುತ ಸಾಕೇತನಿಲಯನ ರಾಕೇಂದುನಿಭಾಸ್ಯ ಶ್ರೀ ವರನ ಲೋಕಮೋಹನ ಮೇಘ ಶ್ಯಾಮನ ವೈಕುಂಠಪತಿ ಲಕ್ಷ್ಮೀಶ ಕೇಶವನ2 ಪಾಲಲೋಚನನ ಪಂಕಜಾಸನ ಪಾಕಾರಿಮುಖ ನಮಿತ ಚರಣನ ಶ್ರೀಲೋಲ ಶೇಷಾಚಲನಿಲಯ ಶ್ರೀವೇಂಕಟನ3
--------------
ನಂಜನಗೂಡು ತಿರುಮಲಾಂಬಾ
ಭಜಿಸುವರ ಭಾಗ್ಯವೆ ಭಾಗ್ಯ ಭುವನದಲಿತ್ರಿಜಗದೊಡೆಯನು ರಾಮಕೃಷ್ಣ ರೂಪಿನಲಿರಲು ಪಶ್ರುತಿ 'ಧಿತ ನಿಯಮಗಳ ಮಾಡಿ ತದನಂತರದಿಶತಸಹಸ್ರರಿಗೊರೆದು ಕಾವ್ಯ ಪಾಠವನುಶ್ರುತಿಗಗೋಚರ ಕೃಷ್ಣ ಪಾದಪೂಜೆಯ ನಿತ್ಯಜಿತಮನಸ್ಕದಿ ರಚಿಸಿ ನಲಿವ ಮೂರ್ತಿಯನು 1ವೇದಾಂತ ಶಾಸ್ತ್ರವನು ವೇದ'ತ್ತುಗಳಿಂಗೆವಾದಗುಟ್ಟದ ತೆರದಲುಪದೇಶಗೈದುವೇದಶಾಸ್ತ್ರಾರ್ಥವನು ಸಾದರದಿ ಸಕಲರಿಗೆಬೋಧಿಸುವ ಸಂಸಾರಸಾಗರೋತ್ತಾರರನು2ರಾಮಾವತಾರದಲಿ ರಾಮನೆಂದೇ ನಾಮವಾಮೇಲೆ ದ್ವಾಪರದಿ ರಾಮ ಕೃಷ್ಣರೆಂದುನಾಮವೆರಡವರಿಂಗೆ ತನುವೆರಡು ಬಳಿಕೀಗರಾಮಕೃಷ್ಣನಾಮದಲಿ ಕಲಿಯುÀಗದಿ ಜನಿಸಿರಲು 3ಅವತಾರವೆಂಬುದುಪಚಾರವಲ್ಲಿದು ಕೇಳಿಭವನ ಪ್ರತಿಬಿಂಬ ಶ್ರೀ ಶಂಕರಾಚಾರ್ಯಭವದೂರ ಗುರುಮೂರ್ತಿ ಕೃತ ಗ್ರಂಥ ವ್ಯಾಖ್ಯಾನಕಿವರೆಂದು ಆನಂದ ಘನ ಸ್ವಪ್ನವಾಗಿರಲು 4ಅಜನ ಭಜನೆಯಲಜನು ತ್ರಿಜಗರಕ್ಷಾರ್ಥದಲಿಅಜನ ಪೌತ್ರತ್ವದಲಿ ನಿಜಸತಿಯ ನೆವದಿತ್ರಿಜಗ ಕಂಟಕ ರಾವಣನ ಮುರಿದು ಭಜಕರಿಗೆಅಜ ಪದ' ಮೊದಲಾಗಿ ಕೊಟ್ಟ ರಾಮನನು 5ಭೂ'ು ಭಾರವನಿಳುಹಲೆಂದು ನೇಮವ ಧರಿಸಿರಾಮನನುಜನು ತಾನು ಕೃಷ್ಣನೆಂದೆನಿಸಿಭೀಮ ಘಲುಗುಣ ಧರ್ಮ ಮುಖದಿ ಕೌರವ ಪಡೆಯಭೂ'ುಯಲಿ ನೆಲೆಗೊಳಿಸಿದಮಲ ಮೂರ್ತಿಯನು 6ಧರೆಗಧಿಕವೆಂದೆಂಬ ದೃಷದಪುರದಲಿ ನಿಂದುಶರಣಾಗತರ ಸಲ' ಮ'ಮೆಗಳ ಮೆರೆದುತಿರುಪತಿಯ ವೆಂಕಟನ ಪ್ರತಿಬಿಂಬ ಗುರುವರ್ಯಪರವಾಸುದೇವ ಶ್ರೀ ರಾಮಕೃಷ್ಣಾರ್ಯರನು 7ಓಂ ಪುಣ್ಯಾಯ ನಮಃ
--------------
ತಿಮ್ಮಪ್ಪದಾಸರು