ಒಟ್ಟು 8092 ಕಡೆಗಳಲ್ಲಿ , 130 ದಾಸರು , 4966 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆಯರಸನಾಡಿದ ಆಟನೋಡಿ|ನಲಿದಾಡಿ| ಬಂದರಜಮುಖ್ಯರೋಡಿ|ಬಹುಜನ ಕೂಡಿ ಪ ಅರುಣ ತಳದಿರಂಜಿಪ ದ್ವಯ|ಚರಣದಿಂದ ಕಾಳಿ ಅಹಿ| ವರನಸಿರವ ಮೆಟ್ಟಿಸೂರ್ಯ|ಕಿರಣದಂತೆ ಪೊಳೆವಾ| ಸ್ಪುರಣಗೆಜ್ಜಯ ಝಣ ಝಣ|ಝಣಕು ಝಣಕೆಂಬ ತೆರದಿಂದ| ಕರುಣ ಧಿಗಿ ಧಿಗಿಯೆಂದು|ವಾರುಣದಲಿ ಕುಣಿಯೇ 1 ವೀಣೆಯಲಿತಾಸರಿಗ ಮಪಧನಿ|ಸೆಂಬಮೆಟ್ಟಿಕೆಯೊಳ| ತ್ರಾಣದಿಂದ ಝಿಂ ಝಿಂ ಝಿಂ ಝಿಂ ಕೆನಿಪ ದ್ವನಿಯಗಳನು| ಮಾಣುತಲಿ ಸಿರಿರಾಗ ಘನಮಲಾಹರ ಮೊದಲು| ವಾಣಿಪತಿಸುತ ಪಾಡಿದ ನಾನಾ ರಾಗದಲಿ 2 ಅಂಬುಜಾಕ್ಷಪ್ರಿಯನಾದ|ಅಂಬುಜಭವ ಪದ ಕರ್ತ| ಕುಂಭಿಯೊಳಹಸ್ತಿನಿಕು|ರಂಬಾರಿ ಕೋಟಿ ದ್ವನಿ| ವೆಂಬಂತೆ ಕಹಳೆಗಳು|ತುಂಬಿ ಪೂರೈಸಿದನು| ಭುಂ ಭುಂ ಭುಂ ಭುಂ|ಭುಂ ಮೆಂದು ಗಂಭೀರ ಸಪರದಿ 3 ತತ್ತಥೈಯ್ಯಾ ಥೈಯ್ಯಾ ಥರಿಕೆಂದು|ಧತ್ತೆರಿಕುಥಲಿ| ಒತ್ತಿ ಖಿಣಿ ಖಿಣಿ ಖಿಣಿಲೆಂಬ|ಮೊತ್ತತಾಳು ವಿಡಿದು| ಮತ್ತ ಏಕತಾಳ ಝಂಪೆ|ತಾಳ ಅಟ್ಟತಾಳಗಳು| ಉತ್ತುಮದಾ ಕರದಿ ಹರ ಅರ್ಥಿಯಲಿ ನಿಂದಾ 4 ಇಂದೀವರಜ ಮದ್ಯಸ್ಥಲ ಒಂದು ನೆಗೆದು ಜವದಿಂದಾ| ದಂ ದಂ ದಂ ದಂ ದಮುಕೆಂದು|ಛಂದದಿ ಮುಟ್ಟಿದನು| ಧಿಂಧಿಂಧಿಂಧಿಂಧಿಮಿಕೆಂದು|ದುಂಧುಂಪೊಡದರು ಸುರರು| ತಂದೆ ಮಹಿಪತಿ ನಂದನ ವಂದ್ಯನೊಲುವಂತೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದಿರೆಯರಸನೆ ಬಾರೊ ಇಂದುವದನನೆ ಬಾರೊಕಂದರ್ಪನ ತಂದೆ ಬಾರೊ ಮಂದರಧÀರ ಬಾರಯ್ಯ ಪ. ಮೇದಿನಿ ತಂದ ಸಚ್ಚರಿತ್ರನೆ ಬಾರೊಅಚ್ಚ ನರಸಿಂಹ ಬಾರೊ ಹೆಚ್ಚಿದ ವಾಮನ ಬಾರೊಕೊಚ್ಚಿ ನೃಪರತರಿದ ಸಚ್ಚಿದಾನಂದ ಬಾರಯ್ಯ 1 ವಾಸುದೇವ ಬಾರಯ್ಯ 2 ಇಂಗಿತವರಿತು ಬಾರೊ ಇಂಗಡಲರಸನೆ ಬಾರೊತುಂಗಗುಣಗಣ ಬಾರೊ ಸಂಗೀತಪ್ರಿಯ ಬಾರೊಉಂಗುರಗಳಿಂದೊಪ್ಪುವ ಅಂಗುಳಿಯ ಸನ್ನೆಯಿಂದಪೊಂಗೊಳಲೂದುವ ಚೆಲ್ವ ಮಂಗಳಮೂರುತಿ ಬಾರಯ್ಯ 3 ಕುಂಡಲ ಮೂರ್ತಿ ಬಾರೊಕುಂಕುಮಶೋಭಿತ ಲಕ್ಷ್ಮಿ ಅಂಕಿತ ವಕ್ಷನೆ ಬಾರೊಕೊಂಕಿದ ಕುರುಳ ಚೆಲ್ವ ಬಿಂಕವ ಬಿಟ್ಟು ಬಾರಯ್ಯ
--------------
ವಾದಿರಾಜ
ಇಂದಿರೆಯೊಡನೆ ನಿಲಯಕೆ ಬಂದಾ ಪ ಬೃಂದಾವನಾಂಚನನು ಶರ ದಿಂದುವದನ ಮುನಿವೃಂದ ನುತಚರಿತ ಅ.ಪ ಗಜ ತುರಗ ಪತಾಕ ತು ತ್ತೂರಿ ವರ ಛತ್ರಿ ಚಾಮರ ತಾಳ ಮೇಳ ಬಿರುದಾವಳಿ ಸಹಿತದಿ ಪೌರಬೀದಿಯಲಿ ಮೆರೆಯುತ ಶೌರಿಯು 1 ಪಾರಿಜಾತ ಸುಜಾತ ಮಲ್ಲಿಕಾ ಚಾರು ಮಾಲತೀಹಾರ ತುಳಸೀ ಹಾರವನರ್ಪಿಸಿ ನೀರಜನಾಭನಿಗೆ ನಾರಿಜನರು ಆರತಿಯನು ಬೆಳಗಿರೆ 2 ವೇದಘೋಷ ಜಯಘೋಷ ಜನರ ಸಂ ತೋಷ ಧ್ವನಿಯು ತುಂಬಿತು ಗಗನ ಯಾದವ ವಂಶ ಪ್ರಸನ್ನನು ಎಮ್ಮವ ನಾದನಿಂದು ಹಿರಿದಾಯಿತು ಜನುಮವು 3
--------------
ವಿದ್ಯಾಪ್ರಸನ್ನತೀರ್ಥರು
ಇಂದಿರೇಶ ನಿನ್ನ ಚರಣದ್ವಂಧ್ವವನ್ನು ಬಿಡೆನೊ ಕರುಣಾ ನೊಂದಿರುವೆನೊ ಮನದಿ ಬಹಳ ಹಿಂದುಮುಂದು ತೋರದಿಹುದು ಬಂಧು ಬಳಗವೆಲ್ಲ ನೀನೆ ಎಂದಿಹೆನೊ ಅರವಿಂದಲೋಚನ ಅ.ಪ ಊರು ಊರು ಸುತ್ತಿ ದಣಿದು ಸಾರರಹಿತ ಶಾಸ್ತ್ರಗಳ ವಿ ಕಾಲ ಕಳೆದೆನೋ ಉದಾರಚರಿತ ಭೂರಿ ಕರಣದಿಂದ ನಿನ್ನ ಚಾರುಚರಣ ಸೇವೆ ರುಚಿಯು ತೋರಿ ಮನಕೆ ಸಂತಸದಿ ಮುರಾರಿ ಎನಗೆ ಗತಿಯೆನುತಲಿ 1 ದುರಿತ ಸ್ತೋಮಗಳಲಿ ಮುಳುಗಿ ಬಳಲಿದೆನೊ ನಿಸ್ಸೀಮ ಮಹಿಮ ನಾಮಸ್ಮರಣ ಮಾತ್ರದಿಂದ ಪಾಮರ ಜನರುಗಳ ಯೋಗ ಕ್ಷೇಮ ವಹಿಸಿ ಪೊರೆಯುವಂಥ ಕಾಮಧೇನು ನೀನೆಂದರಿತು 2 ಮಾತಿನಲ್ಲಿ ಮಲ್ಲರೆಂದು ಖ್ಯಾತಿ ಪಡೆದ ಜನಗಳಿರಲು ಯಾತರವನು ಇವನು ಎನ್ನದಿರು ದೂತ ಪ್ರಸನ್ನನೇ ಸೋತು ವಿವಿಧ ಕಾರ್ಯಗಳಲಿ ಆತುರದಲಿ ನಿನ್ನ ಪರಮ ಪ್ರೀತಿಯ ಪಡೆಯುವುದೇ ದೊಡ್ಡ ನೀತಿಯೆಂದು ಅರಿತು ಸತತ 3
--------------
ವಿದ್ಯಾಪ್ರಸನ್ನತೀರ್ಥರು
ಇಂದಿರೇಶ ಭಾಗವತ ಎಂದು ಬರುವನು ಇಲ್ಲೆ ಮಂದಸೂನನುನಮಗೆ ಮುಂದೆ ಗತಿಯೇನುದ್ಧವಾಒಂದು ಕಾರ್ಯವು ಬಾರದಂದಿನಾದಿಈಶ ಸುರಸುಂದರನು ಪೋದನಲ್ಲೋ ಉದ್ಧವಾ ಪ ಪತಿ ಸುತರ ಪರಿಚರಿಸುತಿಹ ನಮ್ಮಮರುಳು ಮಾಡಿದನುದ್ಧವಾ 1 ತೊರೆದು ಮನೆ ಧನಗಳನೆ ಬರಲು ಬಳಿಯಲಿ ಭಾಳತರಲಿ ಮಾಡಿದನುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 2 ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆತುರುಬಿನೊಳಗಿಟ್ಟುದ್ಧವಾಸರಸ ಸೌಂದರ್ಯಕ್ಕೆ ಮರುಳಾದನಿವನೆಂದುಗರುವ ಮಾಡಿದೆವುದ್ಧವಾಅಂತು ನಮ್ಮನು ಬಿಟ್ಟು ಮರೆಯಾಗಿ ರೋಧಿಸಲುಭರದಿ ಬಂದನುದ್ಧವಾ 3 ಕೋಲು ಕುದುರೆಯನೇರಿ ಬಾಲಕರಕೂಡಿ ತಾ ಕೇಳಿ ಮಾಡಿದನುದ್ಧವಾಲೀಲೆ ಚತುರರ ಸದೃಶ ಬಾಲೆಯರಕೂಡಿ ತಾ ಕೋಲನಾಡಿದನುದ್ಧವಾ4 ದಧಿ ಬೆಣ್ಣೆ ನಮ್ಮಾಲಯದೊಳುತಿಂದು ಭಾಳ ಮೋಹಿಸಿದನುದ್ಧವಾ 5 ಗರಳ ಹರಿಸಿನುದ್ಧವಾಉರಿಯ ನುಂಗುತ ಮುಖದಿ ಬೆರಳೊಂದುಹತ್ತೊಂದು ವರುಷ ಇಲ್ಲಿದ್ದುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 6 ಒಂದಿನಾದರೂ ಒಮ್ಮೆ ಮನದಿ ಗೋಕುಲದವರಇಂದು ಸ್ಮರಿಪನೆ ಉದ್ಧವಾಚಂದ್ರ ವದನೇರ ಸ್ನೇಹ ಕೂಡಿ ಪುರದೊಳು ನಮ್ಮನಿಂದು ಮರೆತನೆ ಉದ್ಧವಾ 7 ಬಂದು ಬಳಗವ ಬಿಟ್ಟು ಮಧುರೆಗೆಲ್ಲರುನಿನ್ನ ಹಿಂದೆ ಬರುವೆವೊ ಉದ್ಧವಾಕಂದರ್ಪ ಪಿತನಿವನ ಸ್ಮರಿಸುತಲೆ ದೇಹದಿಪ್ರಾಣವೊಂದೇ ಉಳಿದಿಹುದುದ್ಧವಾ8 ಪರಮ ವೈಕುಂಠನು ಸರತಿಯಲೆ ತೋರಿಸುತಮರುಳು ಮಾಡಿದನುದ್ಧವಾಗಿರಿಗಿರಿ ಝರಿಯೊಳಗೆ ಚರಿಸಿ ಚಿನ್ನದ ಚರಯಗುರುತು ಮಾಡಿದನುದ್ಧವಾಅರಿಯಲಿಲ್ಲವೋ ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 9
--------------
ಇಂದಿರೇಶರು
ಇಂದಿರೇಶನೆ ಸುಂದರಾಂಗನೆ ಮಂದಹಾಸದಿಂದ ಬೇಗ ಬಂದು ರಕ್ಷಿಸೈ 1 ಮರೆಯಬೇಡವೊ ಸಿರಿಯ ಅರಸನೆ ಪೊರೆಯದಂತೆ ಮರೆಯಬಹುದೆ ಸಿರಿಯನಾಥನೆ 2 ರಂಗ ರಮಣನೆ ಭುಜಂಗಶಯನನೆ ಮಂಗಳಾಂಗ ನಿನ್ನ ಕರುಣಾಪಾಂಗ ಬೇಡುವೆ 3 ಮಾರಜನಕನೆ ಉದಾರಚರಿತನೆ ಭಾರವೇನೊ ದೀನಜನರುದ್ಧಾರ ಮಾಡುವುದು 4 ನಾಮಗಿರೀಶನೆ ನಿಸ್ಸೀಮ ಮಹಿಮನೆ ಪ್ರೇಮವಿಟ್ಟು ಪಾಲಿಸೆನ್ನ ಸ್ವಾಮಿ ನರಹರೆ 5
--------------
ವಿದ್ಯಾರತ್ನಾಕರತೀರ್ಥರು
ಇಂದೀವರಭಾಸಂ ಪ ಬೃಂದಾರಕ ಗಣಾನಂದ ವಿಲಾಸಂ ಅ.ಪ ಅಷ್ಟತೀರ್ಥಲಸದಷ್ಟ ಶೈಲಪರಿ ಶಿಷ್ಟ ಶಿಖರಿ ವಿಹಾರಂ ಪರಮೇಷ್ಠಿ ಸಮರ್ಚಿತ ಮಷ್ಟ ಸಿದ್ಧಿದಾತಾರ ಮುದಾರಂ 1 ಅಂಬುಜಭವಪಿತಮಂಬುಜ ಪತ್ರ ವಿ ಡಂಬಿ ನಯನಯುಗಳಂ ಜಂಭನಿಸೂದನ ಡಂಭರಹಿತ ಘಟ ಸಂಭವನುತ ಚರಣಾಂಬುಜ ಯುಗಳಂ 2 ನಂದೋಪವರ ಕರುಣಂ ಮಂದಹಾಸ ವಿಜಿತೇಂದು ಕಿರಣಮತಿ ಸುಂದರಾಂಗಮಾನಂದ ವಿತರಣಂ 3 ಕಲಮಧುರಸ್ವನಚಲಿತ ಹೃದಯ ಗೋ ಕುಲ ಮೋಹನ ವೇಣುನಿನಾದಂ ಲಲನಾಜನ ಸÀಂಮಿಳಿತ ವಿನೋದಂ 4 ಕರುಣಾಯತ ನಿಜವೇಷಂ ಹರಿಣಾರಿ ಮಹೀಧರಣಾಲಯ ಶ್ರೀ ವರದಾನತಪದಶರಣ ಸುಪೋಷಂ 5
--------------
ವೆಂಕಟವರದಾರ್ಯರು
ಇಂದು ಆರುತಿ ತಂದು ಬೆಳಗಿರೆ ಸಿಂಧುರಾಜನ ಕುವರಿಗೆ ನಾಭನ ಮಡದಿಗೆ ಪ ಸಿಂಧು ನೋಡುತ ಕೃಷ್ಣಗೆ ನಂದಗೋಪಕುಮಾರಗೆ 1 ಎಲ್ಲದೇಶ ದೊಳೆಲ್ಲ ಕಾಲದೊಳೆಲ್ಲ ಸುರರೊಳು ಕೃಷ್ಣಗೆ ಇಲ್ಲ ಸಮರೆಂತೆಂಬುದನು ಜಗಕೆಲ್ಲ ತೋರಿದ ದೇವಿಗೆ 2 ವಾರವಾರದಿ ಚಾರುಪದಯುಗ ಸಾರಿಭಜಿಸುವ ಜನರಿಗೆ ಆ- ಪಾರ ಸೌಖ್ಯಗಳೀವ ಕಾರ್ಪರ ನಾರಸಿಂಹನ ರಾಣಿಗೆ3
--------------
ಕಾರ್ಪರ ನರಹರಿದಾಸರು
ಇಂದು ಇಂದು ಇಲ್ಲಿ ಚಂದ್ರವದನೆ ಇಂದಿರಾದೇ'ಗಂಡುಗಲಿಯ ವೇಶತಾಳಿ ಗೆಂಡಾಸುರನ ಕೊಂದು ನಗುತಅ.ಪಜಗದೀಶನ ಮಡದಿಯಂತೆ ಮಗಗೆ ನಾಲ್ಕು ಮುಖಗಳಂತೆಮಗನ ಮಗ ಬೈರಾಗಿಯಂತೆ ಅಗಜೆ ಅವಗೆ ಒಲಿದಳಂತೆ 1ಹರಿಯ ಹೃದಯದಲ್ಲಿ ಸದಾ ಅಗಲದೆ ತಾ ಇರುಳಂತೆಆದಿಮಾಯಾ ಶಕ್ತಿಯಾಗಿ ಜಗದ ವ್ಯಾಪಾರ ಮಾಡುವಳಂತೆ 2ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರಸೇವೆಸಾಟಿಇಲ್ಲದೆ ಮೂಡಿ ಪೂರ್ಣ ನೋಟದಿಂದ ಸುಖಿಪಳಂತೆ 3ಛಕ್ರಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿನಿಂತುಚಿತ್ತಚರಿತನಾದ ಹರಿಯ ನಿತ್ಯ ಸೇವೆ ಮಾಡುವಳಂತೆ4ಗಂಡ ಹೆಂಡಿರ ಜಗಳವಂತೆ ಕೊಲ್ಹಾಪುರದಿ ಇರುವಳಂತೆಗಂಡ ವೈಕುಂಠ ಮಂದಿರಬಿಟ್ಟು ವೆಂಕಟಗಿರಿಯಲಿ ಇರುವನಂತೆ5'ೀರಪುರುಷ ವೇಷವಂತೆ ಕ್ರೂರ ದೈತ್ಯನ ಸೀಳಿದಳಂತೆಯಾರಿಗು ಗೊತ್ತಾಗದಂತೆ ರಾತ್ರಿ ಊರೊಳಗೆ ಬರುವಳಂತೆ 6ಭಾರತಹುಣ್ಣಿಮೆ ಜಾತ್ರಿಯಂತೆ ಭಾರಿಜನರು ಕೂಡುವರಂತೆಭಾರಿ ಡೊಳ್ಳು ಹೊಡಿವರಂತೆ ಭೂಪತಿ'ಠ್ಠಲ ನಗುವನಂತೆ 7ಹನುಮಂತದೇವರು
--------------
ಭೂಪತಿ ವಿಠಲರು
ಇದು ಥರವೇ ಥರವೇ ದೇವಾ ಥರವೇ ನಿನ್ನವರ ವಂಚಿಸಿ ನೀ ಮರೆಯಲ್ಲಿ ಇರುವುದು ಥರವೆ ಪ. ಪರಿಪರಿಯಲಿ ಸ್ತುತಿಗೈಯುತಲಿ ನಿನ್ನ ಪರಮ ಮಂಗಳ ಪಾದಗಾಣದೆ ಮರುಗುತಿರುವಾ ವರ ಭಕುತರಿಗೆ ಕರುಣದೋರದೆ ಇರುವೆ ವೆಂಕಟ ಅ.ಪ. ಅಜಭವಾದಿಗಳು ಸ್ತುತಿಸಿ ಪೂಜಿಸಿದ ಪಾದ ತ್ರಿಜಗವಂದಿತ ಕೃಷ್ಣ ನಿನ್ನಪಾದ ಭಜನೆಯನು ಮಾಡುತ ನಿನ್ನ ತ್ಯಜಿಸದನುದಿನ ಸುಜನರೆಲ್ಲರು ಸ್ತುತಿಸಿ ಪಾಡುತಿರೇ ತ್ರಿಜಗ ಪೂಜಿತನಾಗಿ ಭಕುತರ ಭಜನೆ ನಿನಗರಿವಿಲ್ಲೇ ದೇವನೆ ಸ್ವಜನರನು ಪಾಲಿಸುವ ಬಿರುದನು ತ್ಯಜಿಸುವರೆ ಸಿರಿಯರಸ ವೆಂಕಟ 1 ಮಚ್ಛಕೂರ್ಮವರಾಹನಾಗಿ ದೈತ್ಯರ ಸ್ವಚ್ಛಭಕುತರ ಸಲಹೆ ಸಂಹರಿಸಿ ಅಚ್ಛಪ್ರಲ್ಹಾದನಿಗೊಲಿದ ನರಹರಿಯಾಗಿ ಅಚ್ಛವಾಮನನಾಗಿ ಬಲಿಯತಲೆಯತುಳಿದು ಸ್ವಚ್ಛಗಂಗೆಯ ಇಂಬಿಡದೇ ದುಷ್ಟ ರಾಜರನಳಿದ ಭಾರ್ಗವ ದುಷ್ಟ ತಾಟಕಿ ಸಂಹರಿಸಿದನೆ ಕೃಷ್ಣರೂಪದಿ ಗೋಪೆರಿಗ್ವಲಿದನೆ ಉತ್ಕøಷ್ಟ ಬೌದ್ಧ ಕಲ್ಕಿ ವೆಂಕಟ 2 ಪರಮಪುರುಷ ಬಾ ವರದ ಮೂರುತಿ ಬಾ ಪರಿಪರಿ ಸ್ತುತಿಸಿ ವಂದಿಪೆ ಸಿರಿವರದ ಬಾ ಶರಧಿಶಯನ ನಿನ್ನ ಚರಣ ಸ್ಮರಣೆಯೀಯೆ ಶರಣಾಗತ ರಕ್ಷಾಮಣಿ ಬೇಗ ಬಾ ಸಿರಿಗೆ ಪೇಳದೆ ಬಂದು ಕರಿಯ ಪೊರೆದ ದೊರೆ ಶ್ರೀ ಶ್ರೀನಿವಾಸ ಬಾ ಗರುಡ ಗಮನನೆ ಶರಣಜನರನು ಮರೆಯದಲಿ ನೀ ಕರುಣ ವೆಂಕಟ 3
--------------
ಸರಸ್ವತಿ ಬಾಯಿ
ಇಂದು ಧರಿಯೊಳು ಬ್ರಹ್ಮಾನಂದವನು ತುಂಬಿ ತುಳುಕತಿಹ್ಯಾನಂದಮಯ ಕಾಯದೊಳು ಕೌತುಕವು ನಾದಬಿಂದು ಕಳಿಯಲಿ ಸ್ತುತಿಸಲೆನ್ನಳವಲ್ಲ ಕ್ಷಿತಿಯೊಳು ಘನಮಹಿಮೆ ಅತಿಹರುಷವನು ದೋರುತಿಹ್ಯ ಸದ್ಗತಿ ಸುಖವು ಗುರುದಾಸರು 1 ಓಂಕಾರ ಮೊದಲಾದ ಶ್ರುತಿವೇದ ಘೋಷಗಳು ಧಿಮಿಧಿಮಿಸುವ ಮಹಾಶಬ್ದಗಳು ವಾದ್ಯಗಳು ಕೇಳುವದು ನೀದೃಶ್ಯೆಲಿ ಗರ್ಜಿಸುವ ಭೃಂಗಿಶಂಖನಾದ ಧ್ವನಿಯಗಳು ಭೋರಿಡುವ ಭೇರಿ ಮೃದಂಗ ವೇಣಿಯಗಳು ಚಿಣಿ ಚಿಣಿ ತಂತ್ರ ಮೊದಲಾದ ಸಂಕಾರಗಳು ಕೇಳಿ ಪಾವನವಾದೆನು 2 ಬೆರೆದು ನೋಡಲು ಅಂತರಾತ್ಮದೊಳು ಪ್ರಭೆಯಗಳು ಥಳಥಳಿಸುವಾ ಮಹಾತೇಜಗಳು ಪುಂಜಗಳು ಹೇಳಲಿನ್ನೇನದ ಹೊಳವಗಳು ಸುಳವಗಳು ನೋಡುವದು ಅನಿಮಿಷದಲಿ ರವಿ ಶಶಿ ತಾರೆಗಳು ಸೂಸುತಿಹ್ಯ ಕಿರಣಗಳು ಭಾಸಿಸುವ ನಾನಾವರ್ಣಗಳು ಛಾಯಗಳು ಬೆರಗಾದೆÀನಿಂದ 3 ವರ್ತಿಸುತ್ತಲಿಹ ಪ್ರವೃತ್ತಿ ನಿವೃತ್ತಿಗಳು ಅಂತರಾತ್ಮದ ವಾಯುಸ್ತುತಿಯಗಳು ಗತಿಯಗಳು ತಿಳಿವದೀ ಪ್ರಣಮ್ಯಲಿ ಸೂಸುತಿಹ ಶ್ವಾಸವುಚ್ಛ್ವಾಸನಿಯ ಭಾಸಿಗಳು ಶೋಭಿಸುವ ಜೀವನದ ಮಂತ್ರ ಸರ ಮಾಲೆಗಳು ಪಾವನವಾದೆನು 4 ಕರದ್ವಯಂ ಮುಗಿದು ವರಗುರುಚರಣಕಮಲಕಿ ನ್ನೆರಗಿ ಪರಮಾನಂದ ಹರುಷದಿ ಶಿರಸದಿ ಶ್ರೀಗುರುಮೂರ್ತಿಯ ನೆನೆವೆನು ಸದ್ಭಾವದಿಂದ ಸದ್ಗುರು ಪಾದಮಂಪಿಡಿದು ಸದ್ಬ್ರಹ್ಮರಸದೊಳು ಮುಳುಗಿ ಸದ್ಭಕ್ತಿಯಲಿ ಸದ್ಗತಿ ಸಾಧನವು ಸಾಧಿಸಿಹ್ಯ ಮಹಿಪತಿಯು ] ಶ್ರೀ ಗುರುಕೃಪೆಯಲಿನ್ನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಂದ ಕಂದ ಮುಕ್ಕುಂದನಾ| ಬಂದು ವದಗಿಹ ಬಹಳ ಪುಣ್ಯದಿ ಛಂದವಾಯಿತು ಚಲುವನಂಘ್ರಿಯ ಪ ಬಲಿಗೆ ಭೂಮಿಯ ಬೇಡಿ ಹೆಜ್ಜೆಯಾ| ಅಳತೆಯರಡಲಿ ಅಡಗಿಸಿ| ನಳಿನ ಜಾಂಡಕ ಸಖವ ಸೋಂಕಿಸಿ| ಸುರನದಿ ಪಡೆದ ನಂಘ್ರಿಯಾ 1 ಶಿಲೆಯು ಆಗಿರೆ ಶಾಪದಲಿ ಸೋಂ| ಕಲು ನಿಜಾಂಗದ ಕಾಣಿಸಿ| ನಲಿದು ಕಾಳೀಂದಿಯೊಳುರುಗನಾ| ತಲೆಯಳಾಟದಿ ತುಳಿದ ನಂಘ್ರಿಯಾ 2 ಮುನಿಜನ ಹೃದಯ ಮನೆಯ ದೀಪವು| ಯನಿಪ ಶ್ರೀದೇವಿ ಯರಸನಾ| ಮನದಿಗುರುವರ ಮಹಿಪತಿ ಪ್ರಭು| ನೆನೆವವರೊಳಗೆ ನೆಲೆಸಿಹನ ಪದ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ನಮ್ಮ ಮನಿಲ್ಯಾನಂದೋಬ್ರಹ್ಮಾ ತಂದೆ ಸದ್ಗುರು ದಯ ಏನೆಂದ್ಹೇಳಲಿ ಸಂಭ್ರಮ ಧ್ರುವ ಹರುಷ ತುಂಬೇದ ಬಹಳ ತೆರವಿಲ್ಲೆಳ್ಳಷ್ಟು ಸ್ಥಳ ಸಿರಿಯನಾಳ್ವ ದಯಾಳ ಹರಿ ಬಂದಾನೆ ಕೃಪಾಳ 1 ಸೂಸುತಲಿ ಸಂತೋಷ ಪಸರಿಸ್ಯದ ಉಲ್ಹಾಸ ಭಾಸುತಾನೆ ಸರ್ವೇಶ ಭಾಸ್ಕರ ಕೋಟಿ ಪ್ರಕಾಶ 2 ಪ್ರಾಣಕಾಗೇದ ಪ್ರಸ್ತ ಮನಕಾಗೇದ ತಾಂ ಸ್ವಸ್ತ ಸಅನುಭವದ ಸುವಸ್ತ ಖೂನಾಗಿ ಬಂದು ಸಾಭ್ಯಸ್ತ 3 ಹೇಳಲಿಕ್ಕಳವಲ್ಲ ಹೊಳವ ಸುಖದ ಸೊಲ್ಲ ತಿಳಿದ ಮಹಿಮೆ ಬಲ್ಲ ಸುಳವು ಸೂಕ್ಷ್ಮವೆಲ್ಲ 4 ಕರ್ತುತಾಂ ದಯಮಾಡಿ ಅರ್ತು ಬಂದೊಡಮೂಡಿಆರ್ಥಿಯಿಂದೆವೆ ನೋಡಿ ಬೆರ್ತು ಮಹಿಪತಿಕೂಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಮ್ಮನಿಲಿ ಬ್ರಹ್ಮಾನಂದ ತಂದೆ ಸದ್ಗುರು ಸ್ವಾಮಿ ಕೃಪೆಯಿಂದ ಧ್ರುವ ವಸ್ತುದಯ ಬೀರುವಾನಂದ ಪ್ರಸ್ತ ಹಸ್ತ ಬಂದವರಿಗೆ ಸಾಧ್ಯಸ್ತ ಪ್ರಸ್ತ ಉಂಟಾಗಿದೆ ನೋಡಿ ಸಮಸ್ತ ಸ್ವಸ್ತ ಚಿತ್ತಲುಣಬೇಕು ಪ್ರಶಸ್ತ 1 ಉಂಬುದಕನುಮಾನ ಮಾಡಬ್ಯಾಡಿ ಕೊಂಬುದೆಲ್ಲ ಬಾಯಿದೆರೆದು ಬೇಡಿ ತುಂಬಿತುಳುಕುತಲ್ಯಾನಂದ ನೋಡಿ ಅಂಬುಜಾಕ್ಷನ ಸುಖಾಶ್ರಯ ಮಾಡಿ 2 ಸ್ವಾನುಭವದ ಪ್ರಸ್ತ ಸರ್ವಕಾಲ ತಾನೆ ತಾನಾಗಿ ದೋರುತದಚಲ ದೀನಮಹಿಪತಿಗಾನಂದ ಸುಕಾಲ ಭಾನುಕೋಟಿತೇಜ ದಾಸಾನುಕೂಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನೋಡಿದೆ ಗೋವಿಂದನಾ ಸರ್ವ ಸುಂದರಸಾರ ವೆಂಕಟ ರಮಣನಾ ಪ ಭಾಗೀರಥಿಯ ಪೆತ್ತವನಾ ಭವ ರೋಗವ ಕಳೆವ ರಾಜೀವನೇತ್ರನಾ ಸಾಗರದೊಳಗೆ ಒಪ್ಪುವನಾ ಭಕ್ತ ಕೂಗಲು ನಿಲ್ಲದೆ ಒದಗಿ ಬರುವನಾ1 ನಿಲ್ಲದೆಳಿಪಿಗೆ ಪೊಳೆದನಾ ಗೋ ಪಾಲಕರಿಗೆ ವೈಕುಂಠ ತೋರಿದನಾ ನೀಲಾದೇವಿಗೆ ಬಲಿದವನಾ ಭೂ ಪಾಲಗೆ ಮೆಚ್ಚಿ ಸತ್ವರವನಿತ್ತವನಾ2 ವಿಶ್ವ ಮಂಗಳದಾಯಕನಾ ಅಹಿ ವಿಷ್ಟಕಸೇನರಿಂದ ಪೂಜೆಗೊಂಬುವನಾ ವಿಶ್ವರೂಪ ವಿಲಕ್ಷಣನಾ ಸರ್ವ ವಿಶ್ವ ಪರಿಪಾಲ ಪ್ರಣತಾರ್ತಿ ಹÀರನ3 ಸುರ ಶಿರೋಮಣಿ ಸದ್ಗುಣನಾ ಸು ದರಶನ ಶಂಖ ಭಜಕರಿಗೆ ಕೊಟ್ಟವನಾ ನಿರುತ ಆನಂದ ಭರಿತನಾ ದಿವ್ಯ ಮಿರುಗುವಾಭರಣದಿಂದಲಿ ನಿಂದಿಹನಾ 4 ಶಾಮವರ್ಣ ಚತುರ್ಭುಜನಾ ನಿಜ ಕಾಮಿನಿ ಸಂಗಡ ನಲಿದಾಡುವನಾ ಹೇಮ ಗಿರಿಯಲಿದ್ದವನಾ ದೇವ ಸ್ವಾಮಿ ತೀರ್ಥವಾಸ ವಿಜಯವಿಠ್ಠಲನಾ5
--------------
ವಿಜಯದಾಸ