ಒಟ್ಟು 6003 ಕಡೆಗಳಲ್ಲಿ , 130 ದಾಸರು , 3822 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ- ಸಿಂಧುಶಯನ ವನದಿಂದ ಇಂದಿರೇಶ ಮುದದಿಂದ ಮೌನಿಮುನಿ- ವೃಂದದಿಂದ ಸ್ತುತಿವಂದನೆಗೊಳ್ಳುತ1 ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು ಕಾಸಿಗೆ ಮಾರುವ ರೊಟ್ಟಿ ದಾಸರ ಕೂಡಿ ಜಗಜಟ್ಟಿ ಬಹು ದೇಶವ ತಿರುಗುವ ಶೆಟ್ಟಿ ದೂಷಣಾರಿ ಪಾದಾಶ್ರಿತಜನರಭಿ- ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ2 ದೊಡ್ಡವನೈ ಮಹಾರಾಯ ಹಳೆ ದುಡ್ಡಿಗೆ ನೀಡುವ ಕೈಯ ಅಡ್ಡಿಗೈದರೆ ಬಿಡನಯ್ಯ ಇವ ಬಡ್ಡಿಕೇಳುವ ತಿಮ್ಮಯ್ಯ ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ3 ತಿರುಪತಿಗೆ ಪ್ರತಿಯಾಗಿ ಪಡು ತಿರುಪತಿಯೆಂದಿಹ ಯೋಗಿ ಮೆರಸುವನೈ ಸ್ಥಿರವಾಗಿ ಶ್ರೀ ವರ ವೆಂಕಟ ಲೇಸಾಗಿ ಶರಣರು ಏನೆಂದು ಸಂತೋಷಿಪ ಕರುಣಾಕರ ಚಪ್ಪರ ಶ್ರೀನಿವಾಸನು4 ಈ ಪರಿಯಲಿ ಒಲಿದಿಪ್ಪಾ ಬಹು ಕಾಪಟ್ಯರಿಗೆ ತಾನೊಪ್ಪನಮ್ಮ ಗೋಪಾಲಕ ಜಗದಪ್ಪ ಶ್ರೀಪರಮಾತ್ಮ ನಾನಾಪರಿ ವಿಭವದಿ ಗೋಪುರದಲಿ ತಾ ವ್ಯಾಪಿಸಿ ನಿಂದನು5 ರಂಭೆ : ನಾರೀವರ್ಯಾರಮ್ಮ ನೋಡಲು ಸಾರಹೃದಯರಮ್ಮ ತೋರಣಛತ್ರಚಾಮರ ಬಿರುದುಗಳಿಂದ ಭೂರಿ ವಿಭವದಿಂದ ಸಾರಿಬರುವರಮ್ಮ1 ಕರದಿ ಕಲಶವಿಹುದು ಶಾಲಿನ ನಿರಿ ಮುಂದಿರುತಿಹುದು ಬೆರಳಿನೊಳುಂಗುರು ವರ ದ್ವಾದಶನಾಮ ಧರಿಸಿ ಸಮಂತ್ರೋಚ್ಚರಿಸುತ ಬರುವರು2 ಮಂದಿಗಳೊಡ್ಡಿನಲಿ ಬರುವರು ಮಂದಸ್ಮಿತದಲಿ ಚಂದದಿ ಜನಗಳ ಸಂದಣಿ ಮಧ್ಯದಿ ಇಂದಿರೆಯರಸನ ಧ್ಯಾನದಿ ಬರುವರು3 ಹಿಂಗದೆ ಬರುತಿಲ್ಲಿ ಮನಸಿನ ಇಂಗಿತವರಿತಿಲ್ಲಿ ಬಂಗಾರದ ಭೂಷಣಸಮುದಾಯದಿ ಅಂಗಜಪಿತನಿಗೆ ಶೃಂಗಾರಗೈವರು4 ವಿಪ್ರೋತ್ತಮರ ಗುಣ- ಕೆಂತು ಸೈರಣೆಯಾಂತು ನಾನಿರಲಿ ಚಿಂತಿತಾರ್ಥವನೀವ ಲಕ್ಷ್ಮೀ- ಸಂತಸದಿ ಪೂಜಾದಿ ಸತತಿ- ಯಾಂತಕೊಂಡಿಹೇಕಾಂತಭಕ್ತರು1 ಕೀರ್ತಿಯನು ಧರಿಸಿ ಮ- ತಾವೆಂದು ಧರ್ಮವನು ಪಾಲಿಸಿ ಸಿಂಧುಶಯನನ ಚಾರುಚರಣ- ದ್ವಂದ್ವಕಾನತರಾಗಿ ಲೋಕದಿ ವಂದ್ಯರೆನಿಸಿಯಾನಂದ ಪರರಿವ- ರೆಂದು ಶ್ರೀಗೋವಿಂದ ನಡೆಸುವ2 ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ ವಾದಗೈವ ಕುವಾದಿಗಳ ಮನ- ಭೇದಿಸುತ ನಿಜವಾದ ಮಾರ್ಗವ ಸಾಧುಗಳಿಂದ ದೃಢವಾದ ಮಾತಿದು3 ಮೇಗರೆಡಂಭಮಾತಲ್ಲ ಧನಿಯ ಕು- ಗೊಂಬರೆ ಎಲ್ಲ ಸಂತಸ ಸಂಭ್ರಮದಿ ವೇದ್ಯಾಂಬುನಿಧಿಯಲಿ ತುಂಬಿರುವರೀ ಕುಂಭಿನಿಯೊಳು ಜ- ಸಂಬಡುವುದು ವಾಸಿಷ್ಠಗೋತ್ರಜ- ರೆಂಬ ವಿಪ್ರಕದಂಬಪೂಜ್ಯರು4 ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1 ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ ಮಹಾಲೀಲೆ2 ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ ಲೀಲೆಯ ನಾನರಿಯೆ3 ಫಾಲೇಂದು ಕುಂದದ ವರ್ಣಕೋಲು ಚಾಮರಗಳ ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು4 ಚಂಡವೈಶ್ವಾನರನ ತೇಜಾಖಂಡದಿಂದೋರಂತೆ ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ5 ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ ಆದಿನಾರಾಯಣ ಮದುಸೂದನನೆ ಮುದದಿ6 ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು ನಾದಿನಿ ಕೇಳಿದರ ಪರಿಯನೀ ದಯದಿಂದುಸುರು7 ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ- ದೇವನಾಗಮನವೆಲ್ಲನೂ ದೀವಟಿಗೆ ಸೇವೆಯೆಂದು ಪೇಳುವರು ಭಾವುಕರು ಮನದೊಳಂದು1 ಸಾಯನವನು ಸುರಿದು ಸಾವಿರ ಸಾಲದು ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ3 ದೈತ್ಯವಿನಾಶನ ಜಯಜಯ ಜಾಹ್ನವಿತಾತ ಜಯಜಯ ಜಗದಾತ ಆಶ್ರಿತ ಸುರಭೂಜ ತೋರುತ ಒಲಿದು4 * * * ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ- ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ1 ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2 ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ- ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ3 ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ- ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ4 ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5 ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ- ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ6 ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ- ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ7 ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ- ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ8 ನಿತ್ಯ ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ9 ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ10 ನೋಡೆ ತಂಗಿ ನಮ್ಮ ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ11 ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ- ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12
--------------
ತುಪಾಕಿ ವೆಂಕಟರಮಣಾಚಾರ್ಯ
ಋಗ್ವೇದ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ ಋಗ್ವಿನುತ ನೀನಾಗಿ | ಈಕೆಯನು ಪೊರೆಯೋ ಅ.ಪ. ವೇದಾಧಿಕಾರವನು | ನೀ ದಯದಿ ತ್ಯಜಿಸದೆಮೋದದಿಂ ತೋರಿ | ಋಗ್ವೇದ ವಾಚಿಸಿದೇ |ಮೋದ ಮುನಿ ಮತದಲ್ಲಿ | ಸಾಧಿಸಿವಳಲಿ ದೀಕ್ಷೆಭೇದ ಪಂಚಕ ತಿಳಿಸಿ | ಉದ್ಧರಿಸೊ ಇವಳಾ 1 ಹರಿದಾಸ್ಯ ಕಷ್ಟವೆನೆ | ಹಿರಿಯರ ಮತವಿಹುದುತರಳೆ ಆದ ಕಾಂಕ್ಷಿಪಳು | ಪೂರ್ವ ಪುಣ್ಯದಲೀಮುರವೈರಿ ನೀನಾಗಿ ಕರುಣಿಸುತ ತವದಾಸ್ಯಪರಿಹರಿಸು ಭವನೋವ | ಕಾರುಣ್ಯಮೂರ್ತೇ 2 ಭವ | ಮೋಚನವ ಗೈಯ್ಯೋ 3 ಲೌಕಿಕವು ವೈದಿಕವು | ಸಕಲವರ್ಣಾತ್ಮಕನೆವಾಕು ಸಕಲವು ತವ ಆ | ಲೌಕಿಕದ ಮಹಿಮಾವಾಕಾಗಿ ವರ್ತಿಸುತ | ಬೇಕಾದ ವರ ನೀಡಿನೋಕ ನೀಯನೆ ಕಾಯೊ | ಈಕೆಯನು ಹರಿಯೇ 4 ಭಾವಿ ಮರುತರ ಪ್ರೀಯ | ಆವಾವ ಕಾಲಕ್ಕುದೇವ ತವ ಸ್ಮøತಿಯಿತ್ತು | ಕಾವುದೀಕೆಯನೂನೋವು ಸುಖಗಳ ಸಮತೆ | ಭಾವದಲಿ ಅನುಭವಿಪಭಾವ ಕೊಡುವುದು ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಋಣವ ಮಾಡ್ದಧಮಗುಸುರಲೆುಲ್ಲ ನೀತಿಯಮನು ಮುಖ್ಯಸ್ಮøತಿಕರ್ತರೂ ಪಕಣುಗೆಟ್ಟಿನೀ ದೋಷ ಕಡಲೊಳಗೆ ಮುಳುಗಿ ಮುಂದಣ ಗತಿಯದೇನೆನಗೆ ಕರುಣಿಸೈ ಗುರುವೆ ಅ.ಪಹೇಮಾದ್ರಿ ಮಾಧ'ೀಯಾದಿ ಪ್ರಾಯಶ್ಚಿತ್ತ ನೇಮ 'ಧಿ ಕಾಂಡಗೆಗಳೊಳೂಕಾಮದಿಂದಲಿ ಮಹಾಪಾತಕಗಳನು ಮಾಡಿದೀ ಮಹಾ ತಂಡಗಳೊಳೂಭೂ'ು ಗೋ ದ್ವಿಜರಾಜ ಸ್ತ್ರೀ ದ್ರೋ'ಗಳೊಳು ಪರಭಾ'ುನೀಗಾ'ುಗಳೊಳೂತಾಮಸಾಧಮರೊಳಧರ್ಮನೆನಿಸಿಹೆನೆಂದೇ ಮರಳಿ ಮರಳಿ ಪೇಳಿಹುದಲ್ಲವೆ ಗುರುವೆ 1ಹದಿನೆಂಟು ಬಗೆ ಮಹಾ ಪೌರಾಣ ಕಥೆಗಳೊಳಗಧಮನೀ ಋಣವಂತನೆವದರುತಿವೆಯುಪಪುರಾಣಂಗಳಷ್ಟಾದಶಗಳಧಮನೀ ಋಣವಂತನೆಒದಗಿದೀ ಸಂಖ್ಯೆಯುಪಸ್ಮøತಿಗಳೊಳಗೂ ಪೇಳ್ವುದಧಮನೀ ಋಣವಂತನೆಸದಯತನ ಪುಟ್ಟದಾುತೀ ಪತಿತ 'ಷಯದಲಿಹದನೆನಂಮುಂದೆ ಮುಳುಗಿದೆನೆಲ್ಲೊ ಗುರುವೆ 2ಮೂರು ಮತ್ತೈದಾ ಭೇದ ಋಣ 'ದ್ದರೆಯು ತೀರುವರೆ ಮಾರ್ಗಗಳಿವೆತೀರದಿದ್ದರು ಜನುಮಗೊಡುವವಲ್ಲದೆ ವೃದ್ಧಿಸಿರಿ ಬೆಳೆಯದೆ ನಿಂತಿವೆಆರು ಬಗೆುಂ ಬಡ್ಡಿ ನುಡಿಯದಿದ್ದರು ದಿನವು'ುೀರಲಿದಕೊದಗುತಲಿವೆದಾರಿಯ ನನಗೀಪರಿಯ ಧನ ಋಣವ ದೈವಹೇರಿ ತಳವಳಿದೆನೈರಕ್ಷಿಸೈ ಗುರುವೆ 3ಕಾಶಿಗೈದುವರಾಗದಡ'ಯೊಳಿರುವರಾಗದೀಶ ಭಜನೆಯ ಗಣಿಸದೂುೀಷಣೆಗಳನು ಬಿಟ್ಟು ಸನ್ಯಾಸವನು ಮಾಡಲೀಸದೆ ತನವನರಸದೂದೇಶದೇಶವ ತಿರುಗೆ ತೀರ್ಥಗಳೊಳ್ಮಿಂದರೂಲೇಶ ಮಾತ್ರವು ಸವೆಯದೂಈ ಶರೀರವು ಬೀಳೆ ಕ್ರಮವಾಗಿ ತೊತ್ತು ಸತಿದಾಸಸುತ ಕತ್ತೆಭವಗೊಡುವದೈ ಗುರುವೆ 4ಋಣವು ಮಾಡಿದ ಪತಿತನುಂಬ ಪಂಕ್ತಿಯೊಳು ಜನರುಣಲಾಗದುಂಡರವನೂತನಯ ಪೌತ್ರರು ಸ'ತ ಪತಿತನಪ್ಪನು ನಿಮಂತ್ರಣಗೈಸೆ ಧನ ಋಣಿಯನೂಎಣಿಸಲಾ ಕಲ್ಪನರಕವು ಪಿತೃಗಳಿಗೆ ಕರ್ತನನುಭ'ಪ ನರಕಗಳನೂಎನುತ ಭೀಷ್ಮಾಚಾರ್ಯರುಸುರಿದರು ಧರ್ಮನಂದನಗೆ ಭಾರತ ಶಾಂತಿಪರ್ವದೊಳು ಗುರುವೆ 5ತಲೆಯೋಡ ಪಿಡಿದು ಚಂಡಾಲಗೇರಿಯಲಾದರಳುತ ಕೊಟ್ಟ ಪರಧನವಸಲಿಸದೆ ಕೆಟ್ಟು ಬಂದೆನು ಭಿಕ್ಷಗೊಡಿಯೆಂದುಹಲವು ನಿಂದ್ಯದ್ರವ್ಯವಾಅಳುಕದೆ ತಂದು ಜೀವನಗೈಯ್ದುದರಿಂದುಸಲೆಗೈದು ತಂದ ಋಣವಾಕಳಿವ ನವನರಕಗಳೆಂದು ಹರಿಶ್ಚಂದ್ರ 'ಭುತಿಳು'ದರು ದುರ್ಮನ ಬಿಡದಲ್ಲೊ ಗುರುವೆ 6ಸುತನ ಮಾರಿದ ದೋಷ ಸತಿಯ ಮಾರಿದ ದೋಷಪಿತೃ ಮಾತೃಹತ್ಯ ದೋಷಾಪತಿತನಾಗುವ ದೋಷ ಪತ್ರವನು ಬರದು ತನುಪತನವಾಗುವ 'ಶೇಷಯತನದಿಂದ ಮಾಡ್ದ ಪುಣ್ಯವು ಪೋಪದೋಷ ಪರಸುತ ಭೃತ್ಯನಪ್ಪ ದೋಷಜೊತೆಗೂಡಿ ಗಣಿಸದೆ ಸಾಲವನು ಮಾಡಿದೀಪತಿತನನು ನರಕಕಿಳುಹುವದೆಲ್ಲೊ ಗುರುವೆ 7ನಿತ್ಯಕರ್ಮವ ಮಾಡುವಧಿಕಾರ ಮೊದಲಿಲ್ಲಸತ್ತ ಸೂತಕಕಧಿಕವೂಹೆತ್ತ ತಾು ತಂದೆಗಳ ಮೃತ ದಿನದಿ ಪಿಂಡಗಳನಿತ್ತರವರನುಸಿರವೂಸತ್ತರೂ ಬಿಡದೆ ಬೆಂಬತ್ತಿ ಪೈಶಾಚದಂತೊತ್ತುವದೇಳೇಳು ಭವವೂಇತ್ತಲ್ಲದೆ ಬಡ್ಡಿಸಹ ಮೌಲ್ಯವನು ಪೋಗದೆತ್ತ ಹೋಗಲಿ ಯೇನಮಾಡಲೈ ಗುರುವೇ 8ವರುಷ ಸಾ'ರವಾದರೆಯು ಋಣದ ಮ'ಮೆಯನುಬರೆಯುವದಸಾಧ್ಯ ಗುರುವೆಪರಮ ಋಣಿಗಳು ಸ್ಮøತಿ ಪುರಾಣೇತಿಹಾಸಗಳೊಳರುಪುತಿಹರಿಂತು ಗುರುವೆಹರತು ಋಣಗತ್ತಲೆಯು ನಿನ್ನ ಪದಗಾಬಂತೆಕರುಣಿಸೈ ಬೇಗ ಗುರುವೆಮರೆಯೊಕ್ಕೆ ನಾನು ತಿಮ್ಮದಾಸ ಚಿಕ್ಕನಾಗಪುರವರನಿಲಯ ವಾಸುದೇವಾರ್ಯ ಸದ್ಗುರುವೆ 9
--------------
ತಿಮ್ಮಪ್ಪದಾಸರು
ಎ. ಬಿಡಿ ಹಾಡುಗಳು ವಿತ್ತ ವಿಚಾರ ವಿತ್ತವೇ ಸರ್ವ ಪ್ರಮತ್ತಮರ್ಥದಾ ಪ ವಿತ್ತವಿಲ್ಲದಿರೆ ಭಿತ್ತಿವರ ಬೊಂಬೆಯಂತೆ ಅ.ಪ. ವಿತ್ತವಿರಲು ಪ್ರಾಥರುತ್ಥಾಯ ಸ್ನಾನವುವಿತ್ತದಿಂದಲಿ ಮಾಗಳಾರ್ಥಿಗಳುವಿತ್ತದಿಂದಲಿ ಪತ್ನಿ ಪುತ್ರರು ಸ್ವಾಧೀನಾವಿತ್ತ ಹೀನಾಮೂಲ ವಸ್ತಿ ಮಾಡುವನು 1 ವಿತ್ತದಿಂದಲಿ ಪುರಾಣೋಕ್ತ ವ್ರತಗಳಗ್ನಿಹೋತ್ರಶ್ವಮೇಧಾನ್ನ ಸತ್ರಗಳುವಿತ್ತದಿಂದಲಿ ಮಧ್ಯಾನ್ಹೊತ್ತಿಲೀ ಬಹುಜನಾತಿಥ್ಯವು ಹರಿಪೂಜೆ ನರ್ತನಾ ತತಿಗಳು 2 ವಿತ್ತದೊಳಗೆ ಹರಿಪತ್ನಿಯೂ ಕುಣಿಯುವಳುವಿತ್ತದಿಂದಲಿ ಮಹಾಪತ್ತು ನಾಶಾವಿತ್ತದಿಂದಲಿ ಸುವಿರಕ್ತಿ ಭಕ್ತಿ ಜ್ಞಪ್ತಿವಿತ್ತಮಿಂದಿರೇಶ ನೊಕ್ತ್ರ ತೋರಿಸುವನು 3
--------------
ಇಂದಿರೇಶರು
ಎಚ್ಚತ್ತಿರಬೇಕು ಮಾ ಧ್ರುವ ಎಚ್ಚತ್ತಿರಬೇಕು ನೆಚ್ಚಿ ನಿಜಘನ 1 ರಚ್ಚಿಗೆ ಬಾರದೆ ಬಚ್ಚಿಟ್ಟು ನಿಜಘನ 2 ಕಚ್ಚಿ ಕೈ ಬಾಯಿಲೆ ಹುಚ್ಚಿಟ್ಟು ಹೋಗದೆ 3 ಕಚ್ಚಿಕಿಡದೆ ನೀನು ಕಾಂಚನದಾಶೆಗೆ 4 ನೆಚ್ಚಿಕೊಂಡಿರಬ್ಯಾಡಿ ವ್ಯಚ್ಚಾಗು ಬದುಕಿಗೆ 5 ತುಚ್ಛರ ಮಾತಿಗೆ ನೆಚ್ಚಿ ನಡಿಯದೆ 6 ಮತ್ಸರಕೆ ನೀವು ಹುಚ್ಚಾಗಿ ಹೋಗದೆ 7 ಅಚ್ಯುತ ಭಕ್ತಿಗೆ 8 ಸಚ್ಚಿದಾನಂದನ ನಿಶ್ಚಲರಿಯಲಿಕ್ಕೆ 9 ಎಚ್ಚರಿಸಿದ ಗುರುಪಾದ ನಿಶ್ಚೈಸಲು 10 ಸೂಚಿಸಿ ಹೇಳಿದ ಗುರುದಾಸಮಹಿಪತಿ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಚ್ಚರಿಲ್ಲೀ ಮನಕೆ ಯೋಚಿಸಿ ನೋಡದು ಚಿದ್ಫನಕೆ ಧ್ರುವ ನುಡಿದವು ಪರಮಾರ್ಥ ನಡೆಯೊಳಗಿಲ್ಲದೆ ನುಡಿದರ್ಥ ಹಿಡಿದು ವಿಷಯದ ಸ್ವಾರ್ಥಬಡುವುದು ಶ್ರಮತಾನೆ ವ್ಯರ್ಥ 1 ಓದುದು ವೇದಾಂತ ಭೇದಿಸಿ ತಿಳಿಯದೆ ಅದರಂತ ವಾದ ಮಾಡುದು ಭ್ರಾಂತ ಸಾಧಿಸಿ ನೋಡದು ತನ್ನೊಳು ತಾ 2 ಜನಕೇಳುದು ಬುದ್ದಿ ತನಗ ಮಾಡಿಕೊಳ್ಳದು ಸಿದ್ಧಿ ಕಾಣದ್ಹೇಳುದು ಸುದ್ಧಿ ಜ್ಞಾನಕ ಬಾರದು ತಾ ತಿದ್ದಿ 3 ತೊಟ್ಟು ಉತ್ತಮ ವೇಷ ಮುಟ್ಟಿಗಾಣದೆ ಸ್ವಪ್ರಕಾಶ ತುಟ್ಟಿಲಿ ಜಗದೀಶ ಗುಟ್ಟಿಲಿ ಬಲಿವದು ಧನದಾಶೆ 4 ಎಚ್ಚರಿಸಿತು ಖೂನ ನಿಶ್ಚಲ ಮಹಿಪತಿಗೆ ಗುರುಜ್ಞಾನ ಹುಚ್ಚುಗೊಂಡಿತು ಮನ ನೆಚ್ಚಿ ನಿಜಾನಂದದ ಘನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಣಿಸಿಕೊ ನಿನ್ನೊಳಗಣ ದೋಷಗಣವಾಗಣಿಸು ಪರರೊಳಿಪ್ಪ ಶುಭಕರ ಗುಣವಾ ಪಪರರ ಬಾಗಿಲ ಕಾಯ್ದು ಪರಿಪರಿ ನುತಿಗೈದುಕರಗಿಸಿ ಮನವ ಬೋಧಿಸಿ ತತ್ವವಾಪಿರಿದಾಗಿಯವರ 'ತ್ತಾದಿಗಳೊಳು ಮನ'ರಿಸಿ 1ದೊರೆಯದಿರೆ ಪರಸತಿ ಪರಧನ ಪರರನ್ನಪರನಾಗಿ ಪರಿಪರಿಯುಪಚಾರಗೈದವರಪರ[ವಶ]ವ ಪಡೆದಿರುತವರೊಳು ದೋಷವೆರಸಿದ ಗುಣಗಳನರಸಿ ಕೆಡುವೆಯಾಕೆ 2ನಿನ್ನೊಳುದಿಸಿದ ಸದ್ಗುಣ ನಿನ್ನ ಭೂಸಿಯುನ್ನತನೆನಿಸಿಯೆ ರಕ್ಷಿಪುದೂನಿನ್ನೊಳಗಣ ದುರ್ಗುಣ ನಿನ್ನುವ ದೂಸಿಕಣ್ಣುಗೆಡಿಸಿ ಕೊಂದು ಕೂಗುವದದರಿಂದಾ3ಮೂಳ ಹೆಮ್ಮೆಯ ಬಿಡು ತಾಳುಖೂಳವಾದವ ಸುಡು ಹರುಷ ಬಿಡುಶೀಲತನವ ಹೂಡು ಬಾಳುವದನು ನೋಡುನಾಳೆ ತಾನಿರುವದೊ ಬೀಳುವದೋ ಗೂಡು 4ಪರರ ನಿಂದಿಸಿ ದೋಷ ಪಿರಿದಾಗಲಾಯಷ್ಯಕಿರಿದಾಗಿಯೂ ಕರ್ಮ ಸೂಕರ ಜನ್ಮಗೊಡದೆ ತೊಲಗಿ ಪೋಗುವುದರಿಂದಾ 5ವರಜನ್ಮಾಂತರದೆ ಸದ್ಗುಣ ಲೇಶ'ರಲದನೆ ಗಣಿಸುತ 'ಗ್ಗಲುಕರಗಿ ನಿನ್ನಯ ದೋಷ 'ರಿದುಮ್ಮಳವ ಪಡೆದಿರುವೆ ಸುಖ ಮತ್ತೆ ಪರಗತಿ ಪಡೆಯುವೆ 6ಗುರುವಾಸುದೇವಾರ್ಯ ಚರಣದೊಲವ ಪಡೆಯುವರೆಪರಗುಣಗಳ ಗಣಿಸು ಕಂಡ್ಯಾಕರುಣದಿಂ ಚಿಕನಾಗಪುರಪತಿ ವೆಂಕಟಗಿರಿವಾಸ ಸನ್ನಿಧಿ ದೊರೆಯುವದಿದರಿಂದಾ 7
--------------
ತಿಮ್ಮಪ್ಪದಾಸರು
ಎಂತಹದೋ ನಿನ್ನ ಸಂದುರಶನಾ | ಕಂತುವಿನ ಜನಕ ಉಡಪಿ ಕೃಷ್ಣರಾಯಾ ಪ ಓದನ ತಿಂದೆ | ಪರರ ದ್ರವ್ಯದ ತಂದೆ | ಪರ ಸತಿಯರಿಗೆ ನೊಂದೆ | ಗುರು ಹಿರಿಯರ ನಿಂದೆ | ಹಿರದಾಗಾಡಿದೆ ಮುಂದೆ | ಬರುತಿಪ್ಪ ಪಾಪದಿಂದೆ | ಪರಿಯಾಗಿ ಈ ಬಂದೆ | ಅರುಹು ತೊರದೆ ಬಂದೆ | ಕರುಣಿಸು ಜಗದ ತಂದೆ 1 ಸುಜನರ ಗುಣವ ಹಳಿದೆ | ಕುಜನರ ಸಂಗದಲಿ ಬೆಳಿದೆ | ಭಜನೆಗೆÀಟ್ಟು ಸುಳಿದೆ | ಪ್ರಜರನು ಪೊಗಳಿದೆ | ವೃಜ ಪುಣ್ಯಕೋಶ ಕಳಿದೆ | ಋಜುಮಾರ್ಗವ ತೊರದುಳಿದೆ | ರಜನಿಚರ ಮತಿಗಳಿದೆ | ವಿಜಯ ವಾರ್ತೆಗೆ ಮುಳಿದೆ | ತ್ರಿಜಗಪತಿ ಕೇಳಿದೆ 2 ಹರಿವಾಸರವ ಬಿಟ್ಟೆ | ದುರುಳರಿಗೆ ಧನ ಕೊಟ್ಟೆ | ಹರಿಭಕ್ತರ ತೊರೆದು ಕೆಟ್ಟೆ | ಹರಿಶ್ರವಣ ಬಚ್ಚಿಟ್ಟೆ | ಪರಮ ವ್ರತವ ಮೆಟ್ಟೆ | ಹರುಷದಲ್ಲಿಗೆ ಮನಮುಟ್ಟಿ | ಬಟ್ಟೆ | ವಿರಕುತಿಯನು ಬಿಟ್ಟೆ | ದುರಿತಕ್ಕೆ ಗುರುತಿಟ್ಟೆ | ಬಟ್ಟೆ 3 ಜ್ಞಾನವೆಂಬೋದೇ ಇಲ್ಲಾ | ಏನು ಪೇಳಲಿ ಸೊಲ್ಲಾ | ನೀನೆಂಬೋದಿಲ್ಲವಲ್ಲಾ | ಹಾನಿ ವೃದ್ದಿಗಳೆಲ್ಲಾ | ನಾನುಂಟೆ ಎಲ್ಲ ಸಲ್ಲಾ | ದಾನಾದೆ ಸತತ ಖುಲ್ಲಾ | ತಾ ನುಡಿಗೆ ಸೋತು ಚಿಲ್ಲಿ | ರಾನಡತಿ ಸಿರಿನಲ್ಲಾ | ನಾ ನಡದೆ ನೀ ಬಲ್ಲಾ | ದೇ ನೋಡು ಪ್ರತಿ ಮಲ್ಲಾ 4 ಅಪರಾಧಿ ನಾನಯ್ಯ | ಅಪವಾದದವನಯ್ಯ | ಕೃಪಣದಿಂದೆನ್ನ ಕಾಯಾ | ಉಪಜಯವಾಯಿತು ಪ್ರೀಯಾ | ಸ್ವಪನದಿ ಪುಣ್ಯ ಸಹಾಯಾ | ಲಪಮಾಡಲಿಲ್ಲ ಜೀಯಾ | ಕೃಪೆಯಲ್ಲಿ ಪಿಡಿ ಕೈಯಾ | ವಿಜಯವಿಠ್ಠಲರೇಯಾ | ಗುಪುತವಾದುದುಪಾಯಾ | ತಪಸಿಗಳ ಮನೋಜಯಾ 5
--------------
ವಿಜಯದಾಸ
ಎಂತಹುದೊ ನಿನ್ನಯ ಭಕುತಿ ಎನಗೆ - ಶ್ರೀ-ಕಾಂತ ನಿನ್ನಯ ಒಲುಮೆಯಿಲ್ಲದ ಮೂಢಾತ್ಮನಿಗೆ ಪ ಸುಕೃತ ಫಲವು ಮೊದಲಿನಿತಿಲ್ಲಇಂದು ಬಂದಡೆ ಒಳ್ಳೆ ಮತಿಯ ಕೊಡಲಿಲ್ಲಸಂದ ವಯಸನು ತಿಳಿದು ಕುಂದುತಿದೆ ಎನ್ನ ಮನ-ದಂಧಕಾರವ ಬಿಡಿಸಿ ಹೊಂದಿಸು ಜ್ಞಾನವನು 1 ವೇದಶಾಸ್ತ್ರ ಶಬ್ದ ತರ್ಕ ಮೀಮಾಂಸೆಗಳಓದಿದವನಲ್ಲ ನಿನ್ನಯ ಭಕುತಿಗಧಿಕವಾದ ಇನ್ನೊಂದೇನನುಸುರುವೆನು ನಾ ಮುನ್ನ ಸಂ-ಪಾದಿಸುವ ಭಕುತಿ ಇನ್ನೆಂತಿಹುದೊ ದೇವ 2 ಇಂದು ಪರಿಯಂತರವುಭ್ರಷ್ಟನಾಗಿ ಪರರ ಸೇವೆಯಿಂದಿರುತಿಹೆನುಇಷ್ಟಲ್ಲದಿನ್ನೆನಗೆ ತೃಪ್ತಿ ಇನ್ನೆಂತಹುದೀಕಷ್ಟ ಶರೀರದೊಳು ತೊಳಲಲಾರೆನು ಹರಿಯೆ 3 ನರಜನ್ಮವೆಂಬ ಪಾತಕದ ಪಂಜರದೊಳಗೆಸ್ಥಿರವೆಂಬೊ ಅಹಂಕೃತಿ ಜೀವನವ ನಿರ್ಮಿಸಿಎರವಿನ ಮಾತಾಪಿತರನುಜರೆಂಬಉರಿಕಾವು ಕ್ಷಯವೆಂಬ ಸರಿಗಳನು ವಂದಿಸುವೆನು 4 ಇನಿತುಪರಿಯಲಿ ನಾನು ಹಲುಬಿದೊಡೆನೀನು ಸುಮ್ಮನಿದ್ದೊಡೆ ಬಹು ಅಪಕೀರ್ತಿಯುನಿನ್ನ ದಾಸಗೊಲಿದು ಸಲಿಸಯ್ಯ ಮನದಿಷ್ಟಕನಕಾದ್ರಿಯೊಳು ನೆಲಸಿದಾದಿಕೇಶವರಾಯ 5
--------------
ಕನಕದಾಸ
ಎಂತು ಎನ್ನ ತಾರಿಸುವಿಯೋ ತಿಳಿಯದಿಂದಿಗೆ ಕಂತುಪಿತನೆ ಮುಕುತಿ ಮಾರ್ಗ ಹೊಂದುವೆನೆಂದಿಗೆ ಪ ಓದಿತತ್ವ ಶಾಸû್ರಗಳನು ಜನರಿಗ್ಹೇಳುವೆ ನಾನು ಮೇದನಿಯೊಳು ಬಲ್ಲವನೆಂಬ ಗರ್ವ ತಾಳುವೆ ಸಾಧು ಸಂತರ ನಡಿಯ ನುಡಿಯ ಮಹಿಮೆ ಕೇಳುವೆ ಮತ್ತೆ ಹಾದಿತಪ್ಪಿ ಕುಜನ ವೃತ್ತಿಯಲ್ಲಿ ಬಾಳುವೆ 1 ಸ್ವಾದ ಲಂಪಟ ದುರ್ವಿಷಯ ಬಿಡದ ಸಕ್ತನು ಕಪಟ ಕಲುಷ ಚಿತ್ತನು ಸಾಧಕಗುರು ಹಿರಿಯರ ಅನುಸರಿಸಿದ ಭಕ್ತರು ಸಾಧಿಪಕರ್ಮ ವೃತ್ತಗಳಲ್ಲಿ ಡಂಭಯುಕ್ತನು 2 ಒಂದು ಎರಡು ಹೇಳಲೇ ಎನ್ನತಪ್ಪವಾ ಹೃದಯ ಮಂದಿರ ಮೊಳಗಿಲ್ಲವಾಯಿತು ಜ್ಞಾನ ದೀಪವಾ ನೊಂದು ಬೆಂದು ತಾಪತ್ರಯದಿ ಸುಖದ ರೂಪವಾ ಬಗೆವೆ ನಿಂದು ಒಮ್ಮಿಗ್ಯಾರ ವಿಡಿಯೆ ಪಶ್ಚಾತ್ತಾಪವಾ 3 ಪತಿತಪಾವನ ದೀನೋದ್ಧರಣನೆಂಬ ಬಿರುದವಾ ಕ್ಷಿತಿಯೊಳಿನ್ನು ತಾಳಿದುದರ ಕೇಳು ಮಾಧವಾ ಮತಿವಿವೇಕದಿಂದೆ ಹಚ್ಚಿ ಭಕುತಿ ಸ್ವಾದವಾ ಗತಿಯ ಕೊಟ್ಟ ಕರಿಯೆ ನಾನು ನಿನ್ನ ಮರೆದವಾ 4 ನಿನ್ನ ಭಕ್ತರ ಮನಿಯ ನಾಯಿ ಯಂದು ಎನ್ನನು ಮುನ್ನಿನವರು ಉಂಡ ವೆಂಜಲ ಶೇಷವನ್ನನು ಇನ್ನು ಇಕ್ಕಿಸಿ ಸಲಹಬೇಕು ಮೂಢ ಚಿನ್ನನು ಘನ್ನ ಗುರು ಮಹಿಪತಿಸ್ವಾಮಿದಯ ಸಂಪನ್ನನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂತು ಗತಿ ಎನಗಾಗುವದೊ ಶ್ರೀ | ಕಾಂತ ನಿನ್ನ ಭಕುತಿಯ ಕಾಣೆ ಪ ಸಂಸಾರ ಎಂಬುದು ಸುಖವೆಂದು ನಾನು | ಹಂಸನಂತೆ ನಲಿಯುತ್ತಲಿದ್ದೆ | ಕಂಸಾರಿ ನಿನ್ನ ನಾಮಸ್ಮರಣೆ ಒಳ್ಳೆ | ವಂಶರ ಕೂಡ ನಲಿಯಲಿಲ್ಲಾ 1 ಪಾತ್ರರ ಕಂಡರ ಪರಿಹಾಸ್ಯ ಕು | ಪಾತ್ರರ ನೋಡಲವರ ಶಿಷ್ಯಾ | ಕ್ಲೇಶ ಎನ್ನ | ಗಾತ್ರಗೋಸುಗ ಪೋಗೆ ಬಲು ತೋಷಾ 2 ವಿರಕ್ತಿ ಕೇಳಲು ತಲೆಶೂಲೆ ವಿ | ಹಾರ ಮಾಡುವಲ್ಲಿ ಅನುಕೂಲೆ | ವಾರಿಜಾಕ್ಷ ನಿನ್ನ ಕಥೆ ಬಿಡುವೆ ಬಹು | ಚಾರುವಾಕರ ಕೂಡ ಸುಖಬಡುವೆ 3 ಕಾಸು ಪ್ರಾಪುತವಾಗಿ ಬಚ್ಚಿಡುವೆ ಅದೆ | ಕಾಸು ಬೇಡಿದರೆ ಪ್ರಾಣವ ಕೊಡುವೆ | ಮೋಸ ಬುರುವದು ಕಾಣೆನಲ್ಲಾ ದು | ರಾಶೆಯಿಂದಲಿ ಬಾಳಿದೆನಲ್ಲಾ 4 ವೈಕುಂಠದಾಸರು ಬರೆ ಕುಗ್ಗುವೆನೊ | ಕುಂಟತನಕೆ ಬಹು ನಲಿದಾಟಾ ಗತಿ | ಉಂಟಾದದಕೆ ಉಚ್ಚಾಟ5 ತಂದೆ ತಾಯಿಗಳಲ್ಲಿ ವಂಚನೆ ಹೀನ | ಮಂದಿಕೂಡಾಪ್ತಾಲೋಚನೆ | ಕುಂದು ನುಡಿದೆ ಸಜ್ಜನರಿಗೆ ಆ | ನಂದ ಬಡಿಸುವೆ ದುರ್ಜನರಿಗೆ 6 ಹೆಂಡತಿ ಮುನಿದರೆ ಬೇಡಿಕೊಂಬೆ ಹರಿ | ಕೊಂಡರು ಮುನಿದರೆ ಪೋಗಲೆಂಬೆ | ಕೊಂಡು ಬಾಹ್ಯನೆ ಪರರವಡಿವೆ | ಪರರ ಕಂಡರೆ ಬೇಡವೆಂದು ನುಡಿವೆ 7 ಮಕ್ಕಳು ಹಸ್ತರೆ ಬಳಲುವೆನೊ ಭೂದೇ | ವಕ್ಕಳು ಹಸ್ತರೆ ನಗುವೆನೊ | ಮುಕ್ತಿಗಾಗುವ ನಾನಾ ಶ್ರವಣ ನೀಚ | ಉಕ್ತಿಗೆ ಮಾಡಿದೆ ಅನುದಿನಾ 8 ಜೀವನಕ್ಕೆ ಬೇಕಾದದೆ ಮಾಣಿದು | ಅಭಾವಾ ಮಾಡೆನು ನೀಚರ ಸೊಲ್ಲು9 ಹರಿ ನಿನ್ನ ಶುಚಿಮಾಡೆ ಹೀನ ನರರ ದೊಂಬಲು ತೆಗಿಯದೆ ಬಿಡೆ | ಅಗ್ರೋದಕ ತಾರೆ ನೀರು | ಹೊರುವೆನೊ ಹಣವೆಂದರೆ ಮಾರೆ 10 ಗಂಡಿಕಿಸಿಲಿ ತೊಳೆಯಲಿ ಮಿಡಿಕಿ ನಾನು | ಅಂಡವಲಿವೆ ಅಶನ ಹುಡುಕಿ | ಅಂಡಜವಾಹನ ನಿನ್ನ ಸೇವೆ ಕೈ | ಕೊಂಡು ಮಾಡದೆ ಪೋದೆ ಹೀಗೆವೆ11 ಗಂಧವ ತೆಗೆ ಎಂದರೆ ಅಳುವೆ | ಬಿದ್ದ | ಮಂದಿರಕೆ ಕದಡುತಳುವೆ | ಒಂದು ತುಲಸಿದಳ ತರಲಾರೆನೆಂದು | ಸಂದಿಗೊಂದಿ ಸುತ್ತಿದೆನೊ ದೊರೆ 12 ಧೂಪಾರತಿ ಏಕಾರುತಿ | ಮೂರ್ತಿ | ಪಾಪಾತಿಶಯದಿಂದಾ ನೋಡಲಿಲ್ಲ ಬಹು | ತಾಪತ್ರಯದಿಂದ ನೊಂದೆನಲ್ಲಾ 13 ಸಿರಿ | ದೇವನಿಗೆ ಯಿತ್ತು ಸುಖಬಟ್ಟು | ಆವಾವ ರುಚಿಗಳ ಭುಂಜಿಸದೆ ನಾನು | ಪಾವನಮತಿಯಾಗದೆ ಪೋದೆ 14 ಎಳೆದುಲಸಿ ನಿರ್ಮಾಲ್ಯವಾಸವಾ || ಬಳಿಯಲ್ಲಿಯಿಟ್ಟು ಕೈವಲ್ಯವಾ | ಘಳಿಸಿಕೊಳ್ಳದೆ ಬಲು ದುರ್ಗಂಧ ಬಂದು | ಭವ ಬಂಧಾ 15 ಹರಿಕಥೆಗೆ ಮೊಗ ತಿರುಹುವೆನೊ | ................................................... ಸ್ಮರಣೆ ಮಾಡುವಲ್ಲಿ ಅತಿ ಹೇಯಾ ದುರಾ | ಚರಿತೆಯ ಮಾಡುವಲ್ಲಿ ಬಲು ನ್ಯಾಯಾ 16 ಹರಿದಾಸರನಪ್ಪಿಕೊಳ್ಳದೆ ಪಾ | ಮರ ಸತಿಯೊಳನಪ್ಪ ತಾ ಪೊಳದೆ | ಧರೆಯೊಳು ನಾನು ನಡಿವಂಥ ಇಂಥಾ | ದುರುಳಾಟಕೇನೆಂಬೆ ಗುಣವಂತಾ 17 ನಿನ್ನಂಘ್ರಿಗೆ ಅಡ್ಡಬೀಳದೆ ತುತ್ತು | ಅನ್ನಕೆ ಎರಗುವೆ ಸೋಲದೆ | ಅನ್ಯಾಯ ಮಾಡುವಲ್ಲಿ ಆನಂದಾ ಸತಿಸ | ತ್ಪುಣ್ಯ ಮಾಡುವಲಿ ನಿಭಂಧಾ 18 ಸಾಧುಗಳೊಡನೆ ತಾಳುವೆ ದ್ವೇಷಾನಿತ್ಯ | ಕ್ರೋಧರ ಕಂಡರೆ ಬಲು ಹರುಷಾ | ಓದನಕೆ ವೇದವನೋದಿ ತಂದು | ವಾದಿಸುವೆನು ಸಭೆಯಲಿ ಕಾದಿ 19 ಸತಿಯಳ ಸಂಬಂಧಿಗಳ ಸಾಕುವೆನೊ ಮಾತಾ | ಪಿತರ ಕಡೆಯವರ ನೂಕುವೆನೊ | ಕರ್ಮ ಮಾಡೋರ ನೋಡಿ ಹೀನ | ವಕ್ರದವರು ಕಂಡು ಬಲು ಪಾಡಿ 20 ಪರಿ ಪರಿ ಹೊಸ | ಕೌತುಕ ಪೇಳೂವೆ ನೋಡಿರಿ | ಶ್ರಾತಾದಿಗಳು ಎಲ್ಲಿ ಧಿಕ್ಕರಿಸಿ ಯಿಂಥ | ಭೌತಿಕ ನೆಚ್ಚಿದೆ ಅನುಕರಿಸಿ 21 ಒಡಿವಿ ಮಾಡಿಸಿ ಮಡದಿಗೆ ಇಡದೆ ಅನ್ಯ | ಮಡದಿಯರಿಗೆ ಧನ ಸೂರೆವಿಡಿದೆ | ಬಡವರ ಕಂಡರೆ ಅಣಕಿಸುವ ಭಾಗ್ಯ | ಪಡದವರಿಗೆ ಬಾಗಿ ನಮಿಸುವೆ 22 ಧರ್ಮಕ್ಕೆ ಅಸೂಯಾ ಬಡುವೆ ಅ | ಧರ್ಮಕೆ ಹಿಗ್ಗಿ ಸುಖವ ಬಡುವೆ | ಷ್ಕರ್ಮಿಗಳ ಕೂಡಾಮಾನತನಾ 23 ವಿಧಿ ನಿಷೇದವನೆಣಿಸದಲೆ ನಾನು | ಉದರ ತುಂಬಿದೆ ಭೀತಿ ಗಣಸದಲೆ | ವದಗಿ ಬೀಳುವ ನರಕದ ಬಾಧೆ ಕೇಳಿ | ಹದುಳಕ್ಕೆ ಮನಮಾಡದೆ ಪೋದೆ 24 ಯಜಮಾನ ನಾನೆಂದು ಪೇಳಿಕೊಂಡು ದೋಷ | ವ್ರಜದಲಿ ಚರಿಸದೆ ದು:ಖವುಂಡು | ಇಂದು | ಸಿಂಧು 25
--------------
ವಿಜಯದಾಸ
ಎಂತು ಗುರು ಪೂಜೆಯ ಮಾಡಲಿನಿಂತಿಹನು ಅಂತರ್ಬಾಹ್ಯದಲಿ ಪ ವಾಕು ಮೊದಲಲ್ಲಿಜ್ಞಾನೇಂದ್ರಿಯ ಪಂಚಕ ನೋಡಲ್ಲಿ |ಪ್ರಾಣಾಪಾನ ವ್ಯಾನೋದಾನದಲ್ಲಿತಾನೇ ಇಹ ದಶಪ್ರಾಣದಲ್ಲಿ 1 ಮೂರ್ತಿ ತುಂಬಿಹವಿವನಲ್ಲಿ 2 ಭಾನುಶಶಿ ನಕ್ಷತ್ರಂಗಳಲ್ಲಿನಾನಾ ಜಾತಿ ಕುಲಗೋತ್ರದಲ್ಲಿ |ತಾನು ತಾನೇ ತೋರಿಸುವಲ್ಲಿಜ್ಞಾನಬೋಧ ಬೇರುಂಟು ಮತ್ತೆಲ್ಲಿ 3
--------------
ಜ್ಞಾನಬೋದಕರು
ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ | ಅಂತರಾತ್ಮಕ ಪೇಳು ಎನಗೊಂದು ಹದನಾ ಪ ವೇದಶಾಸ್ತ್ರವನು ಅರಿಯೆ | ಪುರಾಣ ಪುಣ್ಯಕಥೆ | ಓದಲಿನ್ನರಿಯೆನೊ ಎಂದೆಂದಿಗೂ | ಭೇದ ಭೇದವನರಿಯೆ | ಬಾಗಿ ನಮಿಸುವದನರಿಯೇ | ಆದರಣಿ ಅರಿಯೆ ಆರಾಧಿನಿಯನರಿಯೆ1 ಜ್ಞಾನ ಭಕುತಿಯನರಿಯೆ | ಗಮನ ತೀರ್ಥವನರಿಯೆ | ಧ್ಯಾನವನು ಅರಿಯೆ ದಾಕ್ಷಿಣ್ಯವನು ಅರಿಯೆ | ಮೌನವನು ಅರಿಯೆ ಮಹತಪಸ್ಸು ಮೊದಲೆ ಅರಿಯೆ | ಗಾನವನು ಅರಿಯೆ ಗತಿಮತಿಗಳನು ನಾನರಿಯೆ 2 ಬುದ್ಧಿ ಪೂರ್ವಕವರಿಯೆ | ಯಾತರ ಸೇವಿ ಅರಿಯೆ ಏನು ಅರಿಯೆ | ದಾತಾರ ಜಗದೇಕ | ನಿನ್ನ ನಾಮವನುಣಿಸಿಕಾಯೊ 3
--------------
ವಿಜಯದಾಸ
ಎಂತು ಪೊಗಳಲೊ ನಿನ್ನ-ಯತಿಕುಲ ಶಿರೋರನ್ನ ಪ ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ ಅ.ಪ. ಪ್ರಥಮಾವತಾರದಲಿ ವ್ರತತಿ ರಾಮನ ಭಜಿಸಿಅತಿ ಪಂಥದಿಂದ ಶರಧಿಯನು ದಾಟಿಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆಪ್ರತಿಗಾಣೆ ನಿನಗೆ ಅಪ್ರತಿ ಪರಾಕ್ರಮಿಯೆ 1 ದ್ವಿತಿಯಾವತಾರದಲಿ ದೇವಕೀಜನ ಕಂಡುಸತಿಗೆ ಕಾಮಿಸಿದವನ ಸಾಹಸದಿ ಸದೆದೆಪ್ರತಿಯಾದ ಮಾಗಧನಪೃತನದಲಿ ನೀ ಕೊಂದೆಪ್ರತಿಯ ಕಾಣೆನೊ ನಿನಗೆ ಮೂಜ್ಜಗದೊಳಗೆ 2 ತೃತಿಯಾವತಾರದಲಿ ತ್ರಿಜಗನುತಿಸಲು ಬಂದುಯತಿಯಾಗಿ ಮಹಾಮಹಿಮನನು ಭಜಿಸಿದೆಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿ ಪ್ರತಿಮತಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ 3
--------------
ವ್ಯಾಸರಾಯರು
ಎಂತು ಬಿನ್ನೈಸಲೊ ಮುರಾರಿ ಸಾರಿಗೆ ಸಾರಿ | ಸಂತ ಜನರ ಆಧಾರಿ ಪ ಶ್ಲೋಕ - ಘನ ಅನವರತÀ ಕಾಯಾ | ಸ್ವಾಮಿ ಲಕ್ಷ್ಮೀ ಸಹಾಯ | ಅನಿಮಿಷ ಮುನಿಗೇಯಾ ಹೇಯ ಧರ್ಮ ವಿಹಾಯ | ನಗರ ನಿಲಯಾ | ಅಮಿತÀ ಆನಂದ ಕಾಯಾ | ನಾಗ ತಲ್ಪೋರು ಗಾಯಾ 1 ಪದ - ಶರಣು ಶರಣು ಶಾರಣ್ಯನೆ | ಗುಣ ಗುಣ್ಯನೆ | ನಮಗಾನನ್ಯನೆ | ನಿರುತರಂತರ ಕಾರುಣ್ಯನೆ ಪ್ರದದಾನ್ಯನೆ | ಅಪ್ರತಿ ಧನ್ಯನೆ | ಪರಮ ಪುರುಷ ಅಸಮಾನ್ಯನೆ | ಮಹ ಪುಣ್ಯನೆ | ಪ್ರಳಯ ಕನ್ಯೆನೆ | ಕರುಣ ಸಾಕ್ಷಿಗನೆ ಲಾವಣ್ಯನೆ | ಅನುಗಣ್ಯನೆ ಪ್ರಾಕೃತ ಶೂನ್ಯನೆ 1 ಶ್ಲೋಕ - ಪರಿಪರಿ ಹೇಯ ಗಾತ್ರಾ ತೆತ್ತನೊ ಇಷ್ಟ ಮಾತ್ರಾ | ಚರಿಸಿದೆ ವಿಷಯ ಯಾತ್ರಾ | ಪಾರಗಾಣೆನೋ ಮಿತ್ರಾ | ಕೊರಳಿಗೆ ಮಮತೆ ಸೂತ್ರಾ | ಉರುಲು ಬಿದ್ದಿದೆ ಚಿತ್ರಾ | ಸುರಕು ಬಡಿಪ ತನುತ್ತಾ | ಕಮಲ ನಿನೇತ್ರಾ | 2 ಪದ - ನರಕ ನರಕ ಉಂಡು ಬೆಂದೆನೊ | ಇಲ್ಲಿ ನಿಂದೆನೊ | ಗತಿಗೆ ಮುಂದೇನೊ | ಕುರುಡ ಕಿವುಡನಾಗಿ ನೊಂದೆನೊ | ಇನ್ನೊಂದೇನೊ | ಉಪಾಯವಂದೆನೊ | ಮರಹು ಸಾಗರದೊಳು ಸಂದೆನೊ | ಅಂದು ಹಿಂದೆನೊ | ಸುಜನರಿಗಂದೇನೊ 2 ಶ್ಲೋಕ - ಸುಲಲಿತ ರುಚಿರಪಾಂಗಾ | ಶುದ್ದ ಸ್ವಭಾವÀ ರಂಗಾ | ಪಲಿಪರಮಾಣು ಸಂಗಾ | ಪಾವನ ಕೋಮಲಾಂಗಾ | ವೊಲಿಸಿದವರ ಭಂಗಾ | ಪರಿಸುವ ಶಿಂಗ ಶಿಂಗಾ | ವರಬಲಗುಣ ತರಂಗಾ | ಸರಸಿಜ ಹೃತ್ಪುಂಗಾ3 ಪದ - ಚಿಂತಿಸುವೆನೊ ನಿನ್ನ ವಿಗ್ರಹಾ | ಮನೋನಿಗ್ರಹಾ | ವಾಗಲಿ ಅನುಗ್ರಹಾ | ಸಂತತ ಎನಗಿದೆ ಸಂಗ್ರಹಾ | ದೇಹವೈಗ್ರಹಾ | ದುರುಳರ ಪ್ರತಿ ಗ್ರಹಾ | ಮುಂತೆ ಕೈಕೊಂಬ ದುರಾಗ್ರಹಾ | ಯೈವ ವಿಗ್ರಹಾ | ಮಾಣಿಸು ಶಿರಿಗ್ರಹಾ | ಸಂತೈಸು ಕರುಣವಾರುಣಗ ಅನಿಗ್ರಹಾ 3 ನವನೀತ ಗೋಪಿ ವಸ್ತ್ರಾಪಹಾರಾ | ಕಾಲ ಧಾರಾ | ಕಂಸದಾನವ ಸಂಹಾರಾ | ಧ್ರುವ ಬಲಿಕರಿ ಉದ್ಧಾರಾ | ನಾನವತಾರ ಧೀರಾ | ಪವನ ಮನಮಂದಿರಾ ಪಾಲಿಸೊ ವಾರಂ ವಾರ4 ಪದ - ವಿಜಯನಗರಾಧೀಶ ಸರ್ವೇಶಾ | ಮಣಿಮಯ ಭೂಷಾ | ಸೂರ್ಯ ಕೋಟಿ ಪ್ರಕಾಶಾ | ತ್ರಿಜಗದೊಳಗೆ ನೀನೆ ನಿರ್ದೋಷಾ | ಶಕ್ತಿ ವಿಶೇಷಾ | ಐಶ್ವರ್ಯ ವಿಲಾಸಾ | ಋಜುಜ್ಞಾನ ಕೊಡುವದೊ ಮನೋತ್ತರಿಸಾ | ಮಂಜುಳ ಭಾಷಾ | ಭೂದಾ ರಜವಾಸಾ | ನಿರ್ಜರ ಕೋಶಾ | ಹೃದಯ ಕಾಶಾ | ನಾಮಕ ಮಹಿದಾಸಾ 4
--------------
ವಿಜಯದಾಸ