ಒಟ್ಟು 798 ಕಡೆಗಳಲ್ಲಿ , 92 ದಾಸರು , 668 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನುಜಶರೀರವು ವರವೊ ದುರ್ಲಭವೊ ಪ ಭವಸಾಗರವನು ದಾಂಟಲು ನೌಕೆಯಿದೊ ಭವಭಾಧೆಯ ನೀಗಲು ಇದು ಸಾಧನವೊ ಪಾವನಸ್ವರೂಪಜ್ಞಾನವನರಿಯಲು ದೇವನೆ ತಾನೆನಿಸುವನೊ ಆ ನರನು 1 ತಿಳಿ ನೀನೀಗಲೆ ನಾನಾರೆಂಬುದ ಮನುಜಾ ಅಳಿವೀ ದೇಹದೊಳೇ ತಿಳಿಯಲುಬಹುದಿದನಾ ಉಳಿದ ದೇಹಗಳು ಹಲವಾರಿರುತಿರೆ ಫಲವೇನೈ ತಿಳಿವಿರದೇ ತಿಳಿ ಭರದೇ 2 ಪಾಪಿ ಜನ್ಮವು ಎಂದು ಶಪಿಸಲು ಬೇಡಾ ತಾಪನೀಗಲು ಇದೇ ದಾರಿಯೈ ನೋಡಾ ಭವ ಕಡಿಯೇ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಮನ್ನಿಸಿ ಸಲಹಯ್ಯ ಎನ್ನ ತಪ್ಪು ಒಪ್ಪಿಕೊ ಮಹರಾಯ ಪ ಮನ್ನಿಸಿ ಸಲಹಯ್ಯ ಪನ್ನಂಗಶಯನನೆ ನಿನ್ನ ಧ್ಯಾನಾಮೃತವನ್ನು ಕರುಣದಿತ್ತು ಅ.ಪ ನಾನಾಜನುಮ ಸುತ್ತಿ ಮತ್ತೆ ಹೀನ ಜನುಮವೆತ್ತಿ ಜ್ಞಾನವಿನಿತಿಲ್ಲದೆ ನಾನಾಪಾಪಗೈದೆ ದೀನಜನರ ಬಂಧು ನೀನೆ ಕ್ಷಮಿಸು ತಂದೆ 1 ಮರವೆ ದೇಹವೊದ್ದು ಸಂಸಾರ ಮರವೆಯೊಳಗೆ ಬಿದ್ದು ಶರಣ ಸತ್ಪುರುಷರ ನೆರವಿನಿತರಿಯದೆ ಮರುಳನಾದೆ ಹರಿ ಮುರಹರ ಕ್ಷಮಿಸಯ್ಯ 2 ಬರಬಾರದು ಬಂದೆ ಬಲು ವಿಧ ದುರಿತದೊಳು ಬೆಂದೆ ಕರುಣದಿ ಕ್ಷಮೆಮಾಡಿ ಪೊರೆಯೊ ಶ್ರೀರಾಮನೆ 3
--------------
ರಾಮದಾಸರು
ಮನ್ನಿಸೈ ಹರಿ ಪನ್ನಗೇಂದ್ರಶಯನ ಪ ಘನ್ನವಾದ ಪಾಪವನ್ನು ಮಾಡಿ ಜಗದಿ ನಿನ್ನ ನಾಮ ಮರದೆ ಸನ್ನುತಾಂಗ ಸಲಹೊಅ.ಪ ಜ್ಞಾನ ಶೂನ್ಯವಾಗಿ ನಾನಾ ವಿಷಯಗಳಲಿ ನಾನು ನನ್ನದೆಂಬ ಹೀನ ಮಮತೆಯಿಂದ ದಾನವಾರಿ ನಿನ್ನ ಧ್ಯಾನಿಸದಲೆ ಕಾಲ ಸಾನುರಾಗದಿಂದ ಶ್ವಾನನಂತೆ ಕಳೆದೆ 1 ರೋಗಹರನೆ ಭವದ ರೋಗವೈದ್ಯನೆಂದು ಬಾಗಿ ನಿನ್ನನುತಿಪೆ ನಾಗಾರಿವಾಹನ ಯೋಗಿವಂದ್ಯನೆ ಚನ್ನಾಗಿ ನಿನ್ನ ಸ್ತುತಿಪ ಭಾಗವತರ ಸಂಗ ದೇವ ಪಾಲಿಸಯ್ಯ 2 ರಕ್ಷಿಸೆಮ್ಮ ಬಿಡದೆ ಲಕ್ಷ್ಮಿರಮಣದೇವ ಕುಕ್ಷಿಯೊಳಗೆ ಜಗವ ರಕ್ಷಿಸುತ್ತ ಪೊರೆವ ಸೂಕ್ಷ್ಮ ಸ್ಥೂಲದೊಳು ಪ್ರತ್ಯಕ್ಷನಾದ ಹರಿ ಉ- ಪೇಕ್ಷಿಸದಲೆ ಕಾಯೋ ಪಕ್ಷಿವಾಹನ ದೇವ 3 ಕಡಲೊಡೆಯನೆ ದೇವ ಮೃಡನ ಸಖವೆ ಕಾಯೊ ಅಡಿಗಡಿಗೆ ಸ್ತುತಿಸಿ ಬಿಡದೆ ಮುಗಿವೆ ಕಯ್ಯ ಎಡಬಲದಲಿ ಶ್ರೀ ಭೂಮಡದೇರಿಂದ ಮೆರೆವ ಉಡುಪ ಮುಖನೆ ಕಾಯೋ ಕಡಲೊಡೆಯನೆ ರಂಗ 4 ಕಮಲಪತ್ರದಳಾಕ್ಷ ಕಮಲಜೋದ್ಭವೆ ಪ್ರಿಯ ಕಮಲಸಂಭವ ಜನಕ ಕಮನೀಯ ಸ್ವರೂಪ ಕಮಲನೇತ್ರೆರ ರಸಕಮಲಪುಷ್ಪಮಾಲಾ ಹೃ- ತ್ಕಮಲದೋಳು ಶೋಭಿಪ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ
ಮನ್ಮಥ ಚರಿತೆ340 ವರಸಿದ್ಧಿ ಗಣೀಶನ ಬಲಗೊಂಡೀ- ಶ್ವರನ ಪದಕೆ ನಮಿಸಿ | ಶಾರದೆಯ ಹರುಷದಿ ಸಂಸ್ಮರಿಸಿ | ಚ ತುರ್ಮುಖಗಳ ನೆರೆ ಭಜಿಸಿ ಹರುಷದಿ ನುತಿ ಮಾಡಿ | ಮಾಡಿ- ದ ಕೃತಿಯ ಸುಜನರು ನೋಡಿ 1 ಕಾಮಜನಕ ನಿಷ್ಕಾಮಜನಾಪ್ತ | ಸು- ಧಾಮನ ಸಖ ಹರಿಯು | ಮೂರು ಲೋಕಗಳಿಗೆ ತಾ ದೊರೆಯು | ಎನ್ನಹೃ- ತ್ಕಮಲದೊಳೀಪರಿಯು ಕಾಮನ ಸುಚರಿತೆಯು | ಸಜ್ಜನರು- ಇಹಪರ ಸದ್ಗತಿಯು | 2 ಪೃಥಿವಿಯೊಳಿಹ ಸುಜನರು ಕೇಳಿ | ಮ ನ್ಮಥ ಚರಿತ್ರೆಯನು | ಸಹ- ರ್ಷೋತ್ಕರದಿ ನೀವ್ಗಳಿದನು | ಭಜಿಸೆ ಸ- ದ್ಗತಿಗಳನು ಕೊಡುವನು | ಶತಮುಖವಂದಿತ ಸಿರಿದೇವಿಯರಸ- ನೊಲಿದು ಪಾಲಿಸುವನು | ಜನರ ಕೋ- ರಿದ ಕೋರಿಕೆಗಳನು | ತಾ ಕೊಟ್ಟವರನು ಪಾಲಿಪ ತಾನು 3 ತಾರಕಾಸುರನ ಭಯದಿಂದಲಿ ವೃಂ- ದಾರಕರೆಲ್ಲ ಕೂಡಿ | ಮನದಿ ಆಲೋಚನೆಗಳ ಮಾಡಿ | ವನಜ ಸಂ- ಭವನಡಿಗಳ ಬೇಡಿ | ಯಾರು ನಮಗೆ ದಿಕ್ಕೆಂದು ಕಳವಳಿಸಿ ನಾರಾಯಣನ ತ್ವರಿತದಲಿ | ಕಂಡು ವಂ- ದಿಸಿದರು ತವಕದಲಿ | 4 ವಾರಿಜಾಕ್ಷ ಪರುಷೋತ್ತಮ ವಿಶ್ವಾ- ಧಾರ ಪರಾತ್ಪರನೆ | ಅನಂತನವ- ತಾರ ಕೃಪಾಕರನೆ | ನಾವೆಲ್ಲ ಸೇರಿದೆವೈ ನಿನ್ನನೆ | ತಾರಕಾಸುರನ ಬಾಧೆ ಪರಿಹರಿಪ- ರ್ಯಾರನು ನಾವ್ ಕಾಣೆವೈಯ್ಯ | ಉ-- ದ್ಧಾರ ಮಾಳ್ಪನು ನೀನೆ | ಭಕ್ತಜನ- ವಾರಿಧಿ ಚಂದ್ರಮನೆ | 5 ಎನಲು ಸುರರೊಡನೆ ನುಡಿದನಾಗಲಾ- ವನಜನಾಭ ತಾನು | ಈ ಕಾರ್ಯ- ಕೆನಾ ಮಾಡುವುದೇನು | ಭ- ವಾನೀಧವನಾಗಿ ಶಿವನು | ಘನತಪವನಾಚರಿಸುತ್ತ ಮೇರುಗಿರಿ ಗುಹೆಯೊಳು ಕುಳಿತಿಹನೊ | ಫಾಲದಲಿ ಉರಿಗುಣ್ಣುಳ್ಳವನು | ಏನಾದರು ಸರಿ ತಾ ಲೆಕ್ಕಿಸನು | 6 ಕಾಮನಿಂದ ಶಂಕರನ ತಪಕಿಡಿಸಿ ಕರುಣಿಸಬೇಕೆಂದು ಬೇಡಿ | ಕೊಂ- ಡರವ ನಿಮ್ಮೊಳು ದಯಮಾಡಿ | ತ- ಕ್ಕಯೋಚನೆಗೈಯ್ಯುವ ನೋಡೀ | ತಾಮಸನ ಮುರಿದು ನಿಮಗೆ ಸಂತತವ ಕೊಡುವನು ಮುದಗೂಡಿ | ಎಂದು ಪೇಳಿದ ಶ್ರೀಹರಿಯನುಡಿ | ಕೇಳಿ ಇಂದ್ರನು ಗುರುವನು ನೋಡಿ 7 ಚಂದದಿಂದ ಸೇರಿ | ಸ್ಮರಗೆಯಿದ- ರಂದವೆಲ್ಲವುಸುರಿ | ಅವನಮನ ಶೌರಿ ಕಂದನೆಯಂತಾದರು ತಂದರೆ ಸುಖ- ವೆಂದನುಪಕಾರಿ | ಗುರು ವಂದಿಸೆ ಸುರರ ದೊರಿ | ಬೀಳ್ಕೊಂಡು ಬಂದನು ಕುಸುಮಪುರಿ8 ಕುಸುಮಾವತಿಯಲಿ ಮೀನಕೇತನನ ಶಶಿನಿಭವದನೆಯರು | ಸೇ- ವಿಸುತಿರೆ ಹಸನಾದ ಪನ್ನೀರು | ಪುನಗು ಅಗರು | ಕುಸುಮಶರನ ಉಪಚರಿಸುತ ಬಾಲೆಯ- ರೆಸೆಯಲು ಮೋದದೊಳು | ರತಿ- ಕ್ರೀಡೆಯಲಿ ಮನಕರಗಲು | ಬೃ ಹಸ್ಪತಿಯನಿತರೊಳೈತರಲು 9 ಊಳಿಗದವರಿಂದ್ಹೇಳಿ ಕಳುಹೆ ಗುರು ಕೇಳಿ ಸುದ್ದಿ ಮಾರಾ | ತವಕ ಪರಿಪರಿಯುಪಚಾರ | ಶ್ರೀಪತಿಯ ಕುಮಾರ | ಬಂದಹದ- ನೇನೆನುತ ಪದಾರ | ವಿಂದ- ಕೆರಗಿದನಾ ಕುಸುಮಶರ 10 ಭಯದೊಳಮರರೆಲ್ಲ | ಕ್ಷೀರಸಾಗರಕೆ ಪೋಗಿ ಎಲ್ಲ | ಬಿನ್ನೈ- ಸಲು ಕೇಳಿ ಸಿರಿಯನಲ್ಲಾ | ಅರಘಳಿಗಾಲೋಚಿಸಿ ಎನ್ನೊಳುನುಡಿ- ದನುಕೇಳಿಸಿರಿಯನಲ್ಲಾ | ಖಳಗೆಧರೆ- ಪರಿ ಎಲ್ಲವನು ಬಲ್ಲ 11 ಕಾಮನು ಪುಷ್ಪ ಶರಗಳಿಂದೆಸೆಯಲು ಗೌ- ರಿಮನೋಹರನೂ | ಬ- ಹಿರ್ಮುಖನಾಗುತ ಶಂಕರನೂ | ನಿ- ಕ್ಷೇಮವ ಪಾಲಿಪನು | ರಜತಗಿ ರಿವಾಸಿ ಮಹೇಶ್ವರನು | ಇದಕೆ ಗುರಿಯಾದ ಎನ್ನ ಮಗನು 12 ನಾವು ಪೇಳಿರುವೆವೆಂದು ನಮ್ಮ ಸು- ಕುಮಾರ ಮನ್ಮಥನಿಗೆ | ಇದೆಲ್ಲಾ ಪೇ- ಳಿವಿವರಮಾಗೆ | ಕರೆದುಕೊಂ- ಡ್ಹೋಗಿ ಶಿವನ ಬಳಿಗೆ | ಪಾವಕಾಕ್ಷ ಬಲು ಕರುಣಾನಿಧಿಯಿ- ನ್ನೇನು ಚಿಂತೆ ನಮಗೆ | ಬೇಗನಡೆ ಯೆಂದ ಹರಿಯು ಎನಗೆ | ಸಕಲವೂ ತಿಳಿಸಿದೆ ನಾನಿನಗೆ | 13 ಪರಿಯೋಚನೆ ಮಾಡು | ಸ- ತ್ಕೀರ್ತಿಯ ಸಂಪಾದನೆ ಮಾಡು | ಭರದಿ ಹೂ ಶರಗಳ ನೀ ಹೂಡು | ಹರನ ತಪವ ಭಂಗಿಸಿ ನಮ್ಮೆಲ್ಲರ ಕರುಣದಿ ಕಾಪಾಡು | ತಂದೆಯ- ಪ್ಪಣೆಯ ಮನದಿ ನೋಡು | ಮೂಜಗದಿ ಯಾರು ನಿನಗೆ ಜೋಡು | 14 ಈ ಪರಿಪೇಳಿದ ಗುರುವಿನ ನುಡಿಯನು ಶ್ರೀಪತಿಯ ಕುಮಾರ | ರತಿಯೊಡನೆ ಮಾರ | ನುಡಿದಳಾ ಶಿವನು ಮಹಾಕ್ರೂರ | ಆಪತ್ತೊದಗುವುದೀಗ ಬೇಡ ಎಂ- ಕಂದರ್ಪಮನದಿ ಸೋತು | ಬೃಹಸ್ಪತಿ- ಗೆಂದ ಕಾಮನಿನಿತು 15 ಸಮ್ಮತಿಯಿದು ಕೇಳಿ | ಪೂಶರನ ಬಿಡಲು ಚಂದ್ರಮೌಳಿ | ಕೋಪಿಸಲಾ ಹಣೆಗಣ್ಣೆನಗಾಳೀ | ಬ್ರಹ್ಮಾಂಡಗಳಾದರು ದಹಿಸುವುದು ಎನ್ನಳವೇ ಎಂದಾ | ಈ ಕಾರ್ಯಕೆ ನಾನು ಬಾರೆನೆಂದ | ನುಡಿಗೆ ಸುರ- ಗುರುಮತ್ತಿಂತೆಂದ | 16 ಮರೆಹೊಕ್ಕಿರುವಮರರ ಪಾಲಿಸುನೀ ಕಂದರ್ಪ | ಜಗ- ತ್ಕಾರಣನೈನಿಮ್ಮಪ್ಪ | ಪೇಳ್ದನುಡಿ ನಡಿಸಲು ಬೇಕಪ್ಪಾ | ಪರಿಪರಿಯಲಿ ನೋಡಿದರು ಜಗದೊಳಗೆ ನಿನ್ನ ಸರಿಯಾರಪ್ಪಾ | ನಮ್ಮ ನುಡಿ ಮೀರಬಾರದಪ್ಪಾ | ಅಷ್ಟು ಪೇಳಿ- ದರು ಕಾಮವೊಪ್ಪಾ | 17 ಕಾಮನವೊಪ್ಪಿಸಿ ಕರದೊಯಿದಮರರು ಕೈಲಾಸವ ಸೇರಿ | ಅರುಹಿದರು ಗಿರಿರಾಜ ಕುಮಾರಿ | ಕೇಳಿನಡೆತಂದಳಾಗಗೌರಿ | ವ್ಯೋಮಕೇಶನಿಹ ಗವಿಯ ದ್ವಾರಕೇ ಬರಲು ನೋಡಿ ನಂದಿ | ತಾಯಿನೀ- ನಿಲ್ಲಿಗೇಕೆ ಬಂದಿ | ಏನು ಅ- ಪ್ಪಣೆಯೆಂದನು ನಂದಿ 18 ವಂದನೆ ಒಳಗೆ ಹೋಗುವನು ಇವನನೀ ತಡೆಯಬೇಡವಯ್ಯ | ಎನ್ನ ಕಂದನು ಇವ ಕೇಳಯ್ಯ | ಎಂದು ಪೇ- ಳಿದ ಗೌರಿಯ ನುಡಿಯಾ | ಮುದದಿ ಶಿರದೊಳಾಂತನು ನಂದೀಶ್ವರ ಮುಂದೆ ಕೇಳಿ ಕಥೆಯ | ಅನಿತರೊಳ್ ಬಂದ ಕಾಮರಾಯ | ಪೋಗ ಬಹು- ದೆಂದ ಪ್ರಥಮಗೇಯ | 19 ಕಾಮಪೊಕ್ಕನಂದು | ಕರದಿ ಜ- ಪಮಾಲೆ ಪಿಡಿದು ಮುಂದು | ಮ- ಹಾಮಂತ್ರಗಳ ಜಪಿಸುತಂದು | ನೇಮದೊಳೇಕೋಭಾವದೊಳಿರುತಿಹ ಸೋಮಧರನ ಕಂಡ | ಏ- ನು ಮಾಡುವದೆಂದು ಪ್ರಚಂಡಾ | ಇಕ್ಷುಧ- ನುಶರಗಳ ಕೈಕೊಂಡಾ | 20 ವಿನಯದಿಂದ ಪ್ರಾರ್ಥಿಸಿ ಮಾತಾಡಿಸು- ವೆನೆಂದು ಶಂಕರನ | ನುತಿಸಿ ಬೇಡಿ- ದನು ಶೂಲಧರನಾ | ಎಷ್ಟಾದರು ಕರಗಲಿಲ್ಲವನಮನಾ | ಪರಿಪರಿಯೋ- ಚನೆ ಮಾಡಿ ಮನ್ಮಥನು | ಬೆರಗಾಗುತಾ ನಿಂತಾ ಸಮಯನೋಡುತ- ಲಿರತಿಯ ಕಾಂತಾ | ಮನ ದಿ ಹೊಂದಿದನು ಮಹಾಚಿಂತಾ 21 ನೆಂದು ಯೋಚಿಸಿದನು | ಇ- ಕ್ಷು ಧನುವನು ಜೇ ಹೊಡೆದಾನು | ಮಹೇ- ಶನ ಮರ್ಮಸ್ಥಳಗಳನು | ಪುಷ್ಪ ಬಾಣಗಳೂಡೆಸೆಯೆ ಮ- ಶರಗಳನು ಸುರಿದಾನು | ಜ- ನರೆ ಕೇಳೀಯಾಶ್ಚರ್ಯವನು | 22 ಆ ಮಹೇಶ್ವರನ ಮೂಲ ತಿಳಿಯಲಿಂ- ದ್ರಾದಿಸುರರಿಗಳವೆ | ಕೇಳಿಯೀ ಕಾಮನೇನು ಲಕ್ಷ್ಯವೆ | ಕರಿಚರ್ಮಾಂಬರನಾ | ಮೀನ ಕೇ- ತನನ ಬಾಣಕೆ ಮನಾ | ಬಹಿರ್ಮು- ಖನಾಗಿ ನೋಡಿ ಸ್ಮರನಾ | 23 ಕಣ್ಣುತೆಗೆದು ಮುಕ್ಕಣ್ಣಯಲೋ ನಿನ- ಗೆನ್ನೊಳೇಕೆ ಪಂಥಾ | ಛೀ ಛೀನಡಿ ಹೋಗು ಹೋಗು ಭ್ರಾಂತ | ಎಂದು ತಾ- ತನ್ನನಿಜಸ್ವಾಂತ-| ವನ್ನು ಪೂರ್ವದಂದದಿ ತಪದಲ್ಲಿರಿಸಚ- ಪೋಲ್ವಂದದಲಾ ಶಾಂತಾ | ಶೂರ್ಪಕಾ- ರಿಯು ಎದುರಲಿ ನಿಂತಾ | 24 ನಾನು ಬಂದಾ ಕಾರ್ಯವ ಕೇಳದಲೆ ಇ- ದೇನೀ ಪುರಹರನು | ಛೀಹೋಗೋ- ಗೆಂದು ಗರ್ಜಿಸಿದನು | ಎನುತ ತೆ- ಗೆದೆಚ್ಚ ಪೂಶರವನು | ನಾನಾವಿಧದಲಿ ತನ್ನ | ಚಮತ್ಕಾ- ರಗಳ ತೋರಿಸಿದನು | ಮನದಿ ಭಯಗೊಳುತ ಮನಸಿಜನು | ಮುಂದಾಗುವ ಕಥೆಯ ಕೇಳಿಯಿನ್ನು 25 ಭರ್ಗಕಣ್ದೆರೆದು ನೋಡಲಾಕ್ಷಣದಿ ಭರದಿಂ ಮನ್ಮಥನಾ | ಕೋಪಕಿಡಿ- ಯಿಡುತ ಫಣೆಗಣ್ಣ | ತೆಗೆದು ನೋಡಲು ತಕ್ಷಣ | ಚಿಣ್ಣಾ ಭುಗ್ಗು ಭುಗ್ಗುಯೆಂದೇಳ್ವ ಉರಿಗಳಿಂ ದಗ್ಧನಾದ ಮದನಾ | ಭಸ್ಮದಂ- ತಿದ್ದು ಮರ್ಮಸದನಾ | ಅಗ್ನಿವ್ಯಾ ಪಿಸೆ ಬ್ರಹ್ಮಾಂಡವನಾ 26 ಸುರರು ಕಿನ್ನರರು ಗಡಗಡ ನಡುಗುತ ಬೆರಗಾದರು ನೋಡಿ | ಅವರ- ಶಿರವನಲ್ಲಾಡಿ | ಚರರು ಬಂದು ರತಿಗೀ ಸುದ್ದಿಯ ಪೇಳಿ- ದರು ದುಃಖ ಮಾಡಿ | ಕೇಳಿ ನಾರಿಯರು ಶೋಕವಮಾಡಿ | ರತಿಯು ನೆಲದೋಳ್ ಬಿದ್ಹೊರಳಾಡಿ | 27 ಹಾಹಾರಮಣಾ ಹಾ ನಿಜೇಶ ಹಾ ಪ್ರಾಣಕಾಂತಕಾಮಾ | ಎನ್ನ ಕರ್ಕಶನಿಸ್ಸೀಮ | ಸಾಹಸ ಮಾಡುವೆನೆಂದು ಪೋಗಿ ಶಂ- ಕರನಿಂದಲಿ ಮಡಿದೆ | ಪೇಳಿದಮಾ- ತ್ಕೇಳದೆ ನೀ ನಡೆದೇ | ಪೋಗಬೇ- ಡೆಂದು ನಾನು ನುಡಿದೆ 28
--------------
ಗುರುರಾಮವಿಠಲ
ಮರಣ ಕಾಲವ ತಿಳಿಸೋ ಮಧುಸೂದನಾ ಪ ಶರಣು ಬಂದವರ ಭಯಹರಣಾ ಅ.ಪ. ಸ್ನಾನಮಾಡಲಿಬೇಕು ಮೌನದಿಂದಿರಬೇಕು ಹರಿಜ್ಞಾನಪೂರ್ವಕ ಹರಿಯ ಧ್ಯಾನಬೇಕುನಾನಾ ವಿಷಯದ ಚಿಂತೆ ಮಾನಸದಿ ಬಿಡಬೇಕುದಾನ ಧರ್ಮಗಳನು ಮಾನಸದಿ ಮಾಡಬೇಕು 1 ಸುತ್ತಲು ಜನರುಗಳ ಹತ್ತಿರ ಕೂಡುತಲಿನಿತ್ಯ ಭಾಗವತಾದಿ ಶಾಸ್ತ್ರಗಳನುಮೃತ್ಯು ಕಾಲದಿ ಪರಿಸೆ ಶ್ರೋತ್ರದಿಂ ಕೇಳಿ ಯಮ-ಭೃತ್ಯರು ಓಡಲಿಬೇಕು ಎತ್ತಿ ಕಾಲುಗಳು 2 ಮಕ್ಕಳು ಮನೆಗಳಲಿ ಚಿಕ್ಕ ಯುವತಿಗಳಲ್ಲಿಮಿಕ್ಕಾದ ಪಶು ಕೃಷಿ ರೊಕ್ಕಗಳಲ್ಲಿಪೊಕ್ಕಿ ಮನಸಿಲಿ ವಿಷಯ ಸಿಕ್ಕಿ ತೊಡಕೆನೊ ಎನ್ನವಕ್ರವಾ ತೋರಿಸುತ ಮೆಲ್ಲ ಕೈ ಬಿಡಿಸಿನ್ನು 3 ಕಮಲ ಮಂದಹಾಸವ ತೋರೋಸಿಂಧು ಉದ್ಧರನೆ ವೃಂದಾವನೀಯೋ 4 ಸಿಂಧುವಿನ ತಟದಿ ಗೋವೃಂದದೊಳಗೆ ಚಂದದಲಿ ಕೊಳಲೂದೋ ಸುಂದರ ಮುಖ ಕಮಲಒಂದೇ ಮನದಲಿ ನೋಡಾನಂದದಲಿ ಮಾಡೋಇಂದಿರೇಶ ನಿನ್ನ ಮುಂದೆ ನಿಂತಿರುವಾನಾರಂದ ಮುನಿ ಗುರುವರ ಮಂದಸ್ಮøತಿ ನೀಡೋ 5
--------------
ಇಂದಿರೇಶರು
ಮರುಳುತನವಿದ್ಯಾಕೆ ಮನವೆ ಮಂದಭಾವದಿ ಶ್ರೀ- ಧರೆಯರಸ ಸ್ವೇಚ್ಛೆಯಿಂದ ಪೊರೆವ ತಾನೆ ಕರುಣದಿ ಪ. ಕಾಲ ನಾನಾ ಫಲಗಳನ್ನು ತೋರ್ಪುದು ಶ್ರೀ ಲಲನೆಯರ ಸನಿಚ್ಛೆಯಿಂದ 1 ಛಳಿಯು ಬಿಸಿಲು ಮಳೆಯು ಗಾಳಿ ಸುಳಿವದ್ಯಾರ ಕೃತ್ಯವೆಂದು ತಿಳಿದು ನೋಡಲಿನ್ನು ವ್ಯರ್ಥ ಫಲವಗೊಳ್ಳುತಳಲದಿರು 2 ಸತ್ಯ ಸಂಕಲ್ಪಾನುಸಾರ ಭೃತ್ಯವರದ ಕರುಣದಿಂದ- ಲಿತ್ತುದೆ ಸಾಕೆಂದು ತಿಳಿವದುತ್ತಮ ಸಾಂಗತ್ಯ ಬಯಸು 3 ಹಸಿದ ವೇಳೆಯಲ್ಲಿ ತಾಯಿ ಬಿಸಿಯ ಹಾಲ ತಣಿಸಿ ತನ್ನ ಶಿಶುವಿಗೀವ ತೆರದಿ ಭಕ್ತವಶನ ಮೇಲೆ ಭಾರವಿರಿಸು 4 ನೆನೆವ ಜನರ ಮನದೊಳಿರುವ ವನಜನಾಭ ವೆಂಕಟೇಶ ವಿನಯದಿಂದ ಕಾವನೆಂಬ ಘನವ ತಿಳಿದು ಪಾಡಿ ಪೊಗಳು 5
--------------
ತುಪಾಕಿ ವೆಂಕಟರಮಣಾಚಾರ್ಯ
ಮರೆಯಬಾರದು ನಮ್ಮ ಮುರವೈರಿಯ ಕರುಣಾಕರ ಸಿರಿವರನಾದ ದೊರೆಯ ಪ. ಪರಿಕಿಸುವನು ನಾನಾ ತರದಿಂದಲಿ ಜರಿವನು ಮತ್ತೆ ನೇವರಿಸುವನು ಸುರ ನರೋರಗ ಪಕ್ಷಿಯಿರೆ ತರು ಮೊದಲಾಗಿ ಪೊರೆವ ಮೆರೆವ ಕರೆದಲ್ಲಿ ಬರುವ 1 ಬಡತನದಲಿ ಭಾಗ್ಯಕಾಲದಲಿ ಕಡು ಕಷ್ಟದಲಿ ಸೌಖ್ಯ ವೇಳೆಯಲಿ ಅಡವಿಯಲಾದರು ಅರಮನೆಯಲ್ಯಾದ- ರೊಡೆಯ ಸಲಹನೆ ಮೀರನು ಭಿಡೆಯ 2 ಸರ್ವ ಸ್ವತಂತ್ರ ಶ್ರೀ ರಮಣೀಶ ನಿರ್ವಹಿಸುವನು ನಂಬುವರಾಶಾ ಭರ್ವಸವಿಡು ಶೇಷ ಪರ್ವತೇಶ್ವರನಲಿ ನೀರ್ವಾಣೇಶ ಸರ್ವರೊಳಿರುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮರೆಯೊಕ್ಕೆ ನಿನ್ನನು ಮರುಗಿ ರಕ್ಷಿಸಬೇಕು ಶಂಕರೇಶಾಗಿರಿಜೆಯಾಣ್ಮನೆದೇವ ಕೆರೆಗೋಡಿಪುರದೀಶ ಶಂಕರೇಶಾ ಪಮರಳಿ ಮರಳಿ ಗರ್ಭಕುರುಳಿ ನಾನೊಂದೆನುಪರಿಪರಿ ಕರ್ಮದ ಫಲಗಳನುಣಲಾಗಿದುರಿತ ತೊಲಗದೀವರೆಗು ನಾನೇಗೈವೆಕರುಣಾರಸ ನಿನಗೇತಕುದಿಸದಿದೆ 1ಸೂತ್ರಧಾರಕ ನೀನು ಸಕಲಜೀವರಿಗೆಲ್ಲಪಾತ್ರ ಕೃಪೆಗೆ ನಾನು ಪ್ರೇಮದಿಂ ನೋಡಿನ್ನುಗೋತ್ರಾರಾತಿ ವಂದಿತ ಪಾದಕಮಲನೆಸ್ತೋತ್ರವ ಮಾಳ್ಪುದ ಮೊದಲೆ ನಾನರಿಯೆನು2ಮರತಿ ಪುಟ್ಟದು ನಾನಾವಿಧ ಭವಸುಖದಲಿವರೆತರಿತೆನೆನಿಸಿದ ಕರ್ಮದ ಬಲುಹಿನಿಂಬೆರೆತು ಬಯಲ ಮೋಹದಲಿ ಮೋಸಹೋದೆನುಕುರಿತು ಕಾಮ್ಯವ ಭಜಿಸಿದೆನೊ ನಿನ್ನನು3ಉರಿಗಣ್ಣ ದೃಷ್ಟಿಯಿಂ ದುರಿತವ ದಹಿಸಿನ್ನುವರಶಶಿನೇತ್ರದಿಂ ನೋಡಿ ತಾಪವ ಪರಿಹರಿದಶ್ವನೇತ್ರದಿ ಜ್ಞಾನವನರುಹಿಸುಶರಣಾಗತನಪರಾಧವನೆಣಿಸದೆ 4 ಪರಾಕು ಶಂಕರೇಶಾ5
--------------
ತಿಮ್ಮಪ್ಪದಾಸರು
ಮಹಾಲಕ್ಷ್ಮಿ ಇಂದಿರೆ ಮುಕುಂದ ಹೃನ್ಮಂದಿರೆ ಪ. ಇಂದಿರೆ ಲೋಕವಿಖ್ಯಾತೆ | ಶ್ರೀ- ನಂದನ ಕಂದನೊಳು ಪ್ರೀತೆ | ಆಹ ಬಂದೆನೆ ಭವದೊಳು ನಿಂದೆನೆ ನಿನ ಪದ ದ್ವಂದ ಸನ್ನಿಧಿಯಲಿ ಇಂದಿರೇಶನ ತೋರೆ ಅ.ಪ. ತ್ರಿಗುಣಾಭಿಮಾನಿಯೆ ದೇವಿ | ನಿನ್ನ ಜಗದೊಳು ನುತಿಪರ ಕಾಯ್ವಿ | ನಿತ್ಯ ನಗಧರನನು ಸೇವಿಸುವಿ | ಲಯ ಜಗ ಸೃಷ್ಟಿ ಸ್ಥಿತಿಯಲ್ಲಿ ದೇವಿ | ಆಹ ಬಗೆ ಬಗೆ ರೂಪದಿ ಸುಗುಣವಂತೆಯಾಗಿ ನಿಗಮಾದಿಗಳಿಂದ ನಗಧರನನು ಸ್ತುತಿಪೆ 1 ಸಕಲಾಭರಣ ರೂಪದಿಂದ | ಹರಿಯ ಅಕಳಂಕ ಭಕ್ತಿಗಳಿಂದ | ಪಂಚ ಪ್ರಕೃತ್ಯಾದಿ ರೂಪಗಳಿಂದ | ನಾನಾ ಸಕಲ ಸಾಮಗ್ರಿಗಳಿಂದ | ಆಹಾ ಮುಕುತಿ ನಾಲ್ಕರಲ್ಲಿ ಭಕುತಿಯಿಂ ಸೇವಿಸುತ ಮುಕುತರಿಂದೋಲಗ ಅಕಳಂಕದಿಂ ಕೊಂಬೆ 2 ಪಾದದಿ ಪಿಲ್ಯೆ ಪಾಡಗವೊ | ಮೋದ ವಾದ ನೆರೆಗೆ ವೈಭವವೂ | ಗಾಂಭೀ- ರ್ಯದ ವಡ್ಯಾಣ ನಡುವು | ಮೇಲೆ ಭಾ- ರದ ಕುಚದ್ವಯ ಬಾಹು | ಆಹ ಶ್ರೀದನ ಪೆಗಲೊಳು ಮೋದದಿಂದೆಸೆವ ಕೈ ಆದರದಲಿ ನಿನ್ನ ಪಾದಸೇವೆಯ ನೀಡೆ 3 ಕರದಲ್ಲಿ ಕಡಗ ಕಂಕಣ | ಬೆರಳ ವರ ವಜ್ರದುಂಗುರಾ ಭರಣ | ನಾಗ- ಮುರಿಗೆ ಸರಿಗೆ ಕಂಠಾಭರಣ | ಬಲ ಕರದಲ್ಲಿ ಪದ್ಮ ಭಕ್ತರನ | ಆಹ ವರದೃಷ್ಟಿಯಿಂದಲಿ ನಿರುತ ಈಕ್ಷಿಸುತ ಪರಿಪರಿ ಬಗೆಯಿಂದ ಪೊರೆವೊ ಸುಂದರಕಾಯೆ4 ಗೋಪಾಲಕೃಷ್ಣವಿಠ್ಠಲನÀ | ನಿಜ ವ್ಯಾಪಾರ ಕೊಡೆ ಎನಗೆ ಮನನ | ಪೂರ್ಣ ರೂಪಳೆ ಮುಖದ ಚಲುವಿನ | ನಿನ್ನ ರೂಪವ ತೋರಿಸೆ ಮುನ್ನ | ಆಹ ತಾಪ ಹರಿಸಿ ಲಕುಮಿ ಶ್ರೀಪತಿ ಪದದಲ್ಲಿ ಕಾಪಾಡು ನಿತ್ಯದಿ 5
--------------
ಅಂಬಾಬಾಯಿ
ಮಹಿಮೆ ಸಾಲದೆ, ಇಷ್ಟೇ ಮಹಿಮೆ ಸಾಲದೆ ಪ ಅಹಿಶಯನನ ಒಲುಮೆಯಿಂದಮಹಿಯೊಳೆಮ್ಮ ಶ್ರೀಪಾದರಾಯರ ಅ.ಪ ಮುತ್ತಿನ ಕವಚ ಮೇಲ್ಕುಲಾವಿರತ್ನ ಕೆತ್ತಿದ ಕರ್ಣಕುಂಡಲಕಸ್ತೂರಿ ತಿಲಕ ಶ್ರೀಗಂಧ ಲೇಪನವಿಸ್ತರದಿಂದ ಮೆರೆದು ಬರುವ 1 ವಿಪ್ರ ಹತ್ಯ ದೋಷ ಬರಲುಕ್ಷಿಪ್ರ ಶಂಖೋದಕದಿ ಕಳೆಯೆಅಪ್ರಬುದ್ಧರು ದೂಷಿಸೆ ಗೇರೆಣ್ಣೆಕಪ್ಪು ವಸನ ಶುಭ್ರಮಾಡಿದ2 ಹರಿಗೆ ಸಮರ್ಪಿಸಿದ ನಾನಾಪರಿಯ ಶಾಕಗಳನು ಭುಂಜಿಸೆನರರು ನಗಲು ಶ್ರೀಶಕೃಷ್ಣನಕರುಣದಿಂದಲಿ ಹಸಿಯ ತೋರಿದ3
--------------
ವ್ಯಾಸರಾಯರು
ಮಾಡಬಾರದೇ ಸಂಗಾ | ಸಂತರ | ಮಾಡಬಾರದೇ ಸಂಗ | ಕೂಡಿ ಶ್ರವಣವ ಮಾಡಲು ಮನದೊಳು | ಮಾಡಿಬಹುನು ಶ್ರೀರಂಗಾ ಪ ದೇಶ ತಿರುಗುವದ್ಯಾಕ | ಕಾಸಿ ಆರಿದ ಹಾಲವು ಇದರಿಡೇ | ಆ ಶಿವಧ್ಯಾನವು ಬೇಕ 1 ನಾನಾ ಸಾಧನದಿಂದಾ | ಬಾಹು | ದೇನೆಲೋ ಮತಿಮಂದಾ | ಮನಿಯೊಳಗಿನ ಗಿಡ ಸಂಜೀವನಾಗಿರೆ | ಕಾನನ ತಿರುಗುವದೇ ಅಂಧಾ 2 ಲೋಹ ಪರುಷವ ಬಿಟ್ಟು | ಕಾಷ್ಟದ ಲಾಹುದೇ ಚಿನ್ನದ ಗಂಟು | ಮಹಿಪತಿ ನಂದನು ಸಾರಿದ ಸ್ವಹಿತಕ | ಮಹಾನುಭಾವದಾ ನಿಜಗುಟ್ಟು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಡಿರೊ ಪಾಡಿರೊ | ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ ಪ ದಶಮಿ ಏಕಾದಶಿ ದ್ವಾದಶಿ ದಿನತ್ರಯ | ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ | ದಶರೆಲ್ಲ ಕೈ ಕೊಂಡು ಮಾಡಿದರಂದು ರಂ | ಜಿಸುವ ಸತ್ಕರ್ಮದಲ್ಲಿ | ಬಿಸಜನಾಭನು ಲಕುಮಿಗೆ ಪೇಳಿದ ವ್ರತ | ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ | ಋಷಿಗೆ ಅಜನು ಪೇಳಲಾ ಮುನಿ ಬೀರಿದಾ ದಶ ದಿಕ್ಕಿನೊಳಗೊಂದು 1 ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು | ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು ಹೃದಯದೊಳೀಪರಿ ಯೋಚಿಸಿ ಅಜ್ಞಾನ ಒಂದು ಕಡೆಗೆ ನೂಕಿ | ಸದಮಲನಾಗಿ ಸ್ನಾನಾದಿಯ ಮಾಡಿ ಮ ವಿಧಿ ಮುಗಿಸಿ ಶ್ರವಣ ಸಾರಾ ಹೃದಯರಿಂದಲಿ ಕೇಳಿ2 ಗೋವಿಂದನ ಚರಣಕೆ ಎತ್ತಿ ನಿರ್ಮಲ ಚಿತ್ತ | ದಿಂದಲಿ ನಲಿವುತ ಹಿಗ್ಗಿ ಹಾರೈಸಿ ಆನಂದ ವಾರಿಧಿಯಲ್ಲಿ | ಕುಂದದೆ ಸೂಸುತ ಗೆಳೆಯರ ಒಡಗೂಡಿ | ತಂದು ಪುಷ್ಪಗಳಿಂದ ಮಂಟಪವ ವಿರಚಿಸಿ | ಇಂದು ಸ್ಥಾಪಿಸಿ ತುತಿಸಿ 3 ಜ್ಞಾನಿಗಳೊಡನೆ ಕುಳ್ಳಿದ್ದು ಸುಜ್ಞಾನಿಗಳು ಶುದ್ಧ ಗಾ| ಆನನ ಕೂಗುತ ಹಾಡುತ ಪಾಡುತ | ಧ್ಯಾನವ ಗೈವುತಲಿ | ಕಾಣಬಾರದಂತೆ ಪ್ರಜೆದೊಳಗೆ ತೋರಿ | ಮಗುವಿನಂತೆ ಶ್ರೀನಿವಾಸನ ನೆನಸಿ 4 ಕೂಡಿ ಸೋಗು ವೈಯಾರದಿ | ಕಾಲಲಿ ಗೆಜ್ಜೆಯ ಕಟ್ಟಿ | ವಲಯಾಕಾರ | ಮೇಲು ಚಪ್ಪಳೆಯಿಂದ | ಬಾಲವೃದ್ಧರು ನಿಂದು ಕುಣಿಕುಣಿದಾಡಿ ಹಿ | ಯಾಲಲಿ ಹರಿಯ ಸಂಕೀರ್ತನೆ ಕೀರ್ತಿಸಿ | ಸೋಲದೆ ಘನಸ್ವರ ಸ್ವರದಿಂದಲಿ ಕೂಗಿ ವಿ | ಶಾಲ ಭಕುತಿ ಒಲಿಸಿ 5 ಕಿರಿಬೆವರೊದಕ ಮೊಗದಿಂದಿಳಿಯಲು | ಉರದಲಿ ಇದ್ದ ದೇವಗೆ ಅಭಿಷೇಚನೆ | ಪರವಶವಾಗಿ ಮೈಮರೆದು ತಮ್ಮೊಳು ತಾವು | ಕರದು ತರ್ಕೈಸುತಲಿ | ಕಿರಿನಗೆಯಿಂದ ತೋಳುಗಳು ಅಲ್ಲಾಡಿಸಿ | ಎರಡು ಭುಜವ ಚಪ್ಪರಿಸಿ ಏಕಾದಶಿ | ದುರಿತ ರಾಸಿಗೆ ಪಾವಕನೆಂದು ಕೂಗಿ ಬೊಬ್ಬಿರಿದು ಬಿರಿದು ಸಾರಿ6 ಮಧ್ಯ ಮಧ್ಯದಲಿ ಮಂಗಳಾರುತಿ ಎತ್ತಿ | ಮಧ್ವರಾಯರೆ ಮೂರು ಲೋಕಕೆ ಗುರುಗಳು | ಸಿದ್ಧಾಂತ ಮುನಿ ಸಮ್ಮತಾ | ಮಲ ಮೂತ್ರವನು ಕ್ರಿಮಿವ ಮನವು | ಮೆದ್ದಾ ಸದ್ದೋಷಿ ಚಂಡಾಲ ವೀರ್ಯಕ್ಕೆ ಬಿದ್ದವ ನಿಜವೆನ್ನಿ 7 ಸಾಗರ ಮೊದಲಾದ ತೀರ್ಥಯಾತ್ರೆಯ ಫಲ | ಭೂಗೋಳದೊಳಗುಳ್ಳ ದಾನ ಧರ್ಮದ ಫಲ | ಆಗಮ ವೇದಾರ್ಥ ಓದಿ ಒಲಿಸಿದ ಫಲ | ಯೋಗ ಮಾರ್ಗದ ಫಲವೊ | ಜಾಗರ ಮಾಡಿದ ಮನುಜನ ಚರಣಕ್ಕೆ ಬಾಗಿದವಗೆ ಇಂಥ ಫಲಪ್ರಾಪ್ತಿ ನಿರ್ದೋಷನಾಗುವ ವೈರಾಗ್ಯದಿ 8 ನಿತ್ಯಾ ನೈಮಿತ್ಯಕ ಮಾಡು ಮಾಡದಲಿರು | ಪೋಗಾಡದೆ ಸದಾಚಾರ ಸ್ಮøತಿಯಂತೆ ಅತ್ಯಂತ ಪಂಡಿತ ಪಾವನ್ನ | ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ | ಮೃತ್ಯು ಜೈಸಿ ಸದ್ಗತಿಗೆ ಸತ್ಪಥಮಾಡು | ಸತ್ಯ ಮೂರುತಿ ನಮ್ಮ ವಿಜಯವಿಠ್ಠಲರೇಯ | ನಿತ್ಯ ಬಿಡದೆ ಕಾವಾ 9
--------------
ವಿಜಯದಾಸ
ಮಾತೆ ದಾತೆ ಹಿತೆ| ಘನ ಸುಚರಿತೆ| ಮಾತೆ ದಾತೆ ಹಿತೆ ಪ ಮಾತೆ ಸದ್ಗುಣ ಭರಿತೆ ಘನ ವಿ| ಖ್ಯಾತೆ ಭುವನ ವಿರಾಜಿತೆ|| ದಾತೆ ದೀನಾನಾಥ ಜನಸಂ|ಪ್ರೀತಿಯುತೆ ಪರಿಪೋಷಿತೆಅ.ಪ ಕರವ ಜೋಡಿಸಿ| ವಿನಯದಿಂದಲಿ ಬೇಡುವ|| ಅಖಿಳ ಸಂಪದವೀಯುತ 1 ಪಾದ ಸೇವೆಯ ಗೈಯುವೆ|| ಆದರಿಸಿ ಪೊರೆಯೆನ್ನ ಸರ್ವಪ| ರಾಧಗಳನು ಕ್ಷಮಿಸುತ 2 ಜನನಿ ನೀನತಿಕರುಣೆಯಿಂದಲಿ| ಸುರರಿಗಭಯವನೀಯುತ|| ದುರುಳ ದೈತ್ಯನ ವಧಿಸಿ ನಂದಿನಿ| ನದಿಯ ಮಧ್ಯದಿ ನೆಲೆಸಿದ3 ಪಂಕಜಾಂಬಕಿ ಪರಮಪಾವನೆ| ಶಂಕರಿ ಸರ್ವೇಶ್ವರಿ|| ವೆಂಕಟಾಚಲನಿಲಯ ಶ್ರೀವರ| ವೆಂಕಟೇಶನ ಸೋದರಿ4
--------------
ವೆಂಕಟ್‍ರಾವ್
ಮಾಧವ ಮುಕುಂದ ಹರಿ ದನುಜಾರಿದಯಾವಾರಿಧಿ ಅನುದಿನದಿ ನಿಮ್ಮ ಚರಣವ ನಂಬಿದವರಿಗಿಂಥ ಬಿನುಗುದುರಿತಗಳು ಬಾಧಿಸುವುದ್ಯಾತಕೊ ಸ್ವಾಮಿ ಪ. ತರುಣಿಕುಲರಾಮನೊಳು ತೊಡಕು ಬೇಡವು ಸೀತೆ(ಯ) ಹರಿಗೆ ಒಪ್ಪಿಸು ಎನಲು ಊರ ಹೊರಗೋಡಿಸಿರಲು ಭರದಿಂದ ಬಂದು ಮರೆಹೊಗಲು ವಿಭೀಷಣನು ಚರಣಕಮಲಕೆ ಎರಗಲು ಕರವ ಪಿಡಿದೆತ್ತಿ ಅಭಯವನಿತ್ತು ಲಂಕೆಯ ಸ್ಥಿರಪಟ್ಟಕಟ್ಟಿದ ಕರುಣಾಳುಗಳ ದೇವ 1 ಒದೆದೆಳೆದು ಪತಿಗಳೈವರ ಮುಂದೆ ದ್ರೌಪದಿಯ ನಡುಸಭೆಯೊಳು ನಿಲ್ಲಿಸಲು ಉಡುವ ಸೀರೆಯ ಸೆಳೆವೆನೆಂದು ದುಶ್ಯಾಸ(ನ) ಕೈ ದುಡುಕುತಿರಲಾಕ್ಷಣದಲಿ ಕೆಡುವದಭಿಮಾನ ಶ್ರೀ ಹರಿ ನೀನೆ ಕಾಯೊ ಎನ್ನೆಂ- ದೊದರುತಿರಲು ನುಡಿಯಲಾಲಿಸಿ ನಾನಾಪರಿಯ ವಸ್ತ್ರವನಿತ್ತು ಉಡಿಸಿ ಅಭಿಮಾನ ರಕ್ಷಿಸಿದಂಥ ಶ್ರೀಕಾಂತ 2 ಉತ್ತಾನಪಾದರಾಜ (ನ)ಣುಗ ತಮ್ಮಯ್ಯನ ಮತ್ತ ತೊಡೆಯೇರಿಇರಲು ನಿತ್ಯದಲಿ ಸುರುಚಿ ಸುನೀತಿ ಕುಮಾರಕನ ಎತ್ತಿ ಕಡೆಯಕ್ಕೆ ನೂಕಲು ನಿತ್ತ ವಿಚಾರವಿಲ್ಲದಂತೆ ಸತ್ಯಮೂರುತಿ ಹೆಳವನಕಟ್ಟೆರಂಗಯ್ಯ ಭಕ್ತವತ್ಸಲನೆಂಬೊ ಬಿರುದು ನಿನ್ನದು ಸ್ವಾಮಿ 3
--------------
ಹೆಳವನಕಟ್ಟೆ ಗಿರಿಯಮ್ಮ
ಮಾನ ನಿನ್ನದು ಅಭಿಮಾನ ನಿನ್ನದು | ದಾನವಾಂತಕ ರಂಗ ದಯಮಾಡಿ ಸಲಹೊಪ ಒಡೆಯಳು ಕುಳಿತಿರಲು ತೊತ್ತಿನ ಮುಂದಲಿಯ | ಪಿಡಿದೆÀಳೆದೊಯ್ದು ಘಾಸಿಯನು ಮಾಡಿ || ಅಡಿಗಡಿಗೆ ಅಪಮಾನಗೊಳಿಸಿ ಕೊಲೆ ಮಾಡಿದರೆ | ಒಡತಿಗಲ್ಲದೆ ಕೊರತೆ ಅವಳಿಗೇನಯ್ಯಾ1 ಸದನದೊಳು ಪುರುಷನು ಇರುತಿರಲು ಹೆಂಡತಿಯ | ಎದೆಯ ಮೇಲಿನ ಸೆರಗು ಸೆಳೆದುಕೊಂಡು|| ಒದೆದು ಕೈ-ಕಾಲಿಂದ ಮಾನಹಾನಿ ಮಾಡಿದರೆ | ಅದು ಪುರುಷಗಲ್ಲದೆ ವಧುವಿಗೇನಯ್ಯಾ 2 ಪಿತನ ಬಳಿಯಲಿ ಮಗನು ಕುಳಿತಿರಲು ವರ ಮನುಜ | ಖರೆಯಿಂದ ಕೆಡಹಿ ಪಾಶದಲಿ ಕಟ್ಟಿ ಬಿಗಿಯಾಗಿ || ಮತಿಗೆಡಿಸಿ ನಾನಾ ಪ್ರಕಾರ ಭಂಗವ ಮಾಡೆ | ಕ್ಷತಿ ತಂದೆಗಲ್ಲದೆ ಕುವರಗೇನಯ್ಯಾ3 ಆಳುವ ದೊರೆಯ ಸಮ್ಮುಖದಲಿ ಬಂಟನಿರೆ | ಖೂಳರು ಬಂದು ಶಸ್ತ್ರವನು ತೆಗೆದು || ಕೀಳು ಮಾಡಿ ಬಂಟನ ಅಭಿಮಾನ ಕೊಂಡರೆ ಏಳಲವು ಅರಸಗಲ್ಲದೆ ಬಂಟನಿಗೇನು 4 ಸತ್ಯ ಸಂಕಲ್ಪ ಸರ್ಮೋತ್ತಮ ಸುರಪಾಲ | ಅತ್ಯಂತ ಪಾಲಸಾಗರ-ಸದನನೆ || ಭೃತ್ಯರಪಮಾನ ಅಭಿಮಾನ ನಿನ್ನದು ಸದಾ | ಸಿರಿ ವಿಜಯವಿಠ್ಠಲರೇಯಾ 5
--------------
ವಿಜಯದಾಸ