ಒಟ್ಟು 8293 ಕಡೆಗಳಲ್ಲಿ , 131 ದಾಸರು , 4393 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸ್ವತಿಸ್ತುತಿಪಾಹಿಸರಸ್ವತೇ ಪಾಲಿಸೆನ್ನ ಮಾತೆ ಪಪಾಹಿಲೋಕದಾತೇಪಾಹಿಶೋಕಘಾತೆಪಾಹಿಧರ್ಮ ಪ್ರೀತೆ |ಪಾಹಿಕರ್ಮರಹಿತೆ 1ಪಂಕಜೌಘಕೋಟಿ | ಸಂಕಾಶೆ ಪದ್ಮಾಕ್ಷಿಕಿಂಕರನ್ನ ರಕ್ಷಿಸಂಕದಿ ನಿರೀಕ್ಷಿಸಿ 2ಕುಂದಸಮರದನೇ ಮಂದಗಜಗಮನೇಚಂದದಿ ಗೋವಿಂzÀ | ದಾಸನೊಂದ್ಯಚರಣೆ 3
--------------
ಗೋವಿಂದದಾಸ
ಸರಸ್ವತೀ ಶ್ರೀ ಗಾಯತ್ರೀ | ಪರಮೇಷ್ಟಿಜೆ ಸಾವಿತ್ರಿ ||ಸರುವ ವೇದಾತ್ಮಿಕೆ ಪ್ರೀತಿ | ಸರಸ್ವತಾ ದೇವೀ ಪವಾಣೀ ದೇವೀ ಸುವೀಣಾಪಾಣಿ ಕಾಯೆ |ಬ್ರಹ್ಮನ ರಾಣಿ ಗರುಡಾರಾದ್ಯಾರಾಧಿತೇ ||ಜಾಣೆ ತವ ಪದ ಕಂಜಾರೇಣು ಸೇವಿಪೆನಿತ್ಯಪೋಣಿಸಾಬೇಕೆ ಸನ್ಮತಿಯಾ 1ಹಂಸ ವರೂಢೆ ಮಾತೆಕಂಸಾರಿನಿಜದೂತೆಸಂಸೇವಿಸುವರ ದಾತೆ ||ದೋಷರಹಿತೆ ಯನ್ನಾ ಆಶಿ ಪೂರ್ತಿಸೆ ನಿನ್ನಾನಾ ಸೇವಿಸೂವೇನೆಯೆಮ್ಮಾ 2ಶಿರಿ ಪ್ರಾಣೇಶ ವಿಠಲನ ಚರಣಾಂಬುಜ ಷಟ್ಟಾದೆಕರವಮುಗಿದು ಬಿನ್ನೈಸುವೆ ||ಬರವ ನುಡಿಗೆ ವಿಘ್ನತೆ ಬರದಂತೆಪಾಲಿಸವ್ವಾ ಕರಣಾ ಸಾಗರೆ ಪವಿತ್ರೆ3
--------------
ಪ್ರಾಣೇಶದಾಸರು
ಸರಿಸರಿದೋಡುತಿವೆಲವತ್ರುಟಿಗಳುತಿರುಗದಲಿಟ್ಟಡಿಯಹರಿಗುರು ಪ್ರೀತಿಯ ದೊರಕಿಸು ಪ್ರಾಣಿಕಿರಿಯರಲ್ಲ್ಲ್ಯಮನವರು ಪ್ರಾಣಿ ಪ.ಪರದಾರ ಪರಸಿರಿ ಪರನಿಂದೆ ನಿರುತದಿಚಿರರತಿ ಬೆರತ್ಯಲ್ಲೊಪರಉಪಕಾರ ದಾರಿಯರಿಯದೆ ಬರಿ ಒಣಗರುವಿನಲಿರುವ್ಯಲ್ಲೊನರಹರಿ ಚರಣವಾದರಿಸದೆ ಸ್ಮರಿಸದೆನರರನುಸರಿಪ್ಯಲ್ಲೊಶರೀರ ಸಿಂಗರಿಸಿ ಸತ್ಕಾರ್ಯಬಾಹಿರನಾಗಿನಿರಯಕೆ ಗುರಿಯಾದ್ಯಲ್ಲೊ ಪ್ರಾಣಿ 1ಸುಖಗಳ ಕಕುಲತೆಗಖಿಳ ಸಾಧಕನಾದೆಭಕುತಿಗಳಿಕೆ ತೊರೆದುಬಕವೃತ್ತಿಯ ಕಲಿತು ಮುಖವ ಮುಸುಕಿದೆ ವಿರಕ್ತಿಸರಕುದೋರೈಲೋಕದ ಮೋಹಕ ಜ್ಞಾನಾಧಿಕನಾದೆ ಅಕಳಂಕಸುಖತೀರ್ಥವಾಕುದೋರೈಸಕಲಕಲೆ ಕಲಿತು ಸ್ತ್ರೀಕದಂಬ ಸಖನಾದೆಮುಕುತಿ ಹೊಂದಿಕೆ ತೋರೈ ಪ್ರಾಣಿ 2ಅಶನದುವ್ರ್ಯಸನಕೆ ನಿಶಿದಿನ ವಶನಾದೆಶ್ರೀಶ ಭೃತ್ಯೆನಿಸಿಕೊಳ್ಳೊಹುಸಿಉಪದೇಶಧ್ಯಾತ್ಮ ವೇಷದೊಳು ಘಾಸಿಯಾದೆದಶವ ವರಿಸಿಕೊಳ್ಳೈವಿಷಯ ಬಯಸಿ ವೃಥ ಮಸಿವರ್ಣೆನಿಸದೆ ನೀನ್ಯಶಸ ಕೂಡಿಸಿಕೊಳ್ಳೈಹಸಿತೃಷೆಗಸಣೆಗೆ ಬೇಸರದೆ ಪ್ರಸನ್ವೆಂಕಟೇಶನ ಒಲಿಸಿಕೊಳ್ಳೈ ಪ್ರಾಣಿ 3
--------------
ಪ್ರಸನ್ನವೆಂಕಟದಾಸರು
ಸಲಹು ವೆಂಕಟರಮಣ ದಯಾಂಬುಧಿಸಲಹು ವೆಂಕಟರಮಣ ಪ.ಮಸ್ತಕದೊಳೊಪ್ಪುವ ಮಾಣಿಕ ಮಕುಟದಕಸ್ತೂರಿನಾಮದ ಚೆಲುವವಿಸ್ತರ ಕದಪಿಲಿ ಹೊಳೆವಕುಂಡಲಪ್ರಶಸ್ತವದನಜಗಜೀವ1ಎಳೆನಗೆ ತಿಂಗಳ ಕಾಂತಿಲಿಹೃತ್ತಾಪಕಳೆವ ಕರುಣಿ ಸಿರಿಕಾಂತಗಳದೊಳು ವನಮಾಲೆವೈಜಯಂತಿಪದಕಗಳೊಲೆವ ಮಂಗಳಮೂರ್ತಿಮಂತ 2ಮುತ್ತಿನ ಸರ ಸರಪಳಿ ಭುಜಕೀರ್ತಿಯುಎತ್ತಿದ ಶಂಖಾರಿಪಾಣೆರತ್ತುನ ಮೇಲೊಡ್ಯಾಣ ಕಂಕಣ ಮುದ್ರೆಒತ್ತೆ ಅಭಯವರದನೆ 3ಉಟ್ಟು ಪೊಂದಟ್ಟಿ ಕಠಾರಿ ಕಟ್ಟಿರುವದುಷ್ಟರ ರಣಜಿತವೀರಇಟ್ಟ ವಜ್ರದ ಕಾಲಂದಿಗೆ ಪಾವುಗೆಮೆಟ್ಟಿದ ಸುರರಮಂದಾರ4ಅಗರುಚಂದನಕಪ್ಪುರ ಕೇಶರ ಸುರಭಿಗಳಿಗೆ ಅತಿಪ್ರಿಯ ಅಂಗಮಘಮಘಿಸುವ ಮಲ್ಲಿಗೆ ಸಂಪಿಗೆಯಮಾಲೆಗಳ ಪ್ರಸನ್ವೆಂಕಟ ರಂಗ 5
--------------
ಪ್ರಸನ್ನವೆಂಕಟದಾಸರು
ಸಲಹು ಸಲಹು ನನ್ನಯ್ಯನೆಸಲಹು ಸಲಹು ಪ.ಶ್ರೀಗಿರಿವಾಸ ನಾಗವಿಭೂಷಯೋಗಿಜನೇಶಾಘೌಘವಿನಾಶ 1ಗಜದ ಸುಚೈಲಿ ಅಜನ ಕಪಾಲಿದ್ವಿಜಮೌಳಿಅಂಗಜಹರಶೂಲಿ2ಸ್ಫಟಿಕ ಸುಗಾತ್ರ ಪಟೂಜ್ವಲ ನೇತ್ರಕುಟಿಲ ಪ್ರಸನ್ವೆಂಕಟಪತಿ ಪೌತ್ರ 3
--------------
ಪ್ರಸನ್ನವೆಂಕಟದಾಸರು
ಸಂಸಾರ ದುಷ್ಟೆಂದು ತಿಳಿದ ಮಹಾತ್ಮರಸಂಸಾರ ಮಾಡುವುದು ಹ್ಯಾಗೆಸಂಸಾರದೊಳಗಿದ್ದು ಇಲ್ಲದ ವಿವರವಬರೆದೆನು ದೃಷ್ಟಾಂತವಾಗೆಪನಾರಿ ಪುತ್ರರೊಳಗೆ ತಾವು ಕಲೆತಿದ್ದುನಾಸ್ತಿಯಾಗಿಹರದು ಹ್ಯಾಗೆವಾರಿಯೊಳಗೆ ತಾವರೆಕರ್ಣ ತಾನಿರ್ದುನೀರಿಗೆ ಅಂಟದ ಹಾಗೆ1ಎಲ್ಲ ಪ್ರಪಂಚವ ಮಾಡುತ್ತ ನಿತ್ಯದಿಎರಡು ಆಗಿಹರದು ಹಾಗೆಹಲ್ಲೊಳಗೆ ನಾಲಗೆ ತಾನು ಇರುತಿರ್ದುಹಲ್ಲ ಬುಡಕೆ ಬೀಳದ್ಹಾಗೆ2ಶಿಷ್ಯ ಚಿದಾನಂದನಾಗಿ ಸಂಸಾರವಮುಟ್ಟಿಮುಟ್ಟದಿರು ಹ್ಯಾಗೆಹುಟ್ಟು ನಾನಾಕಾರಗಳನು ತೊಳಸಿಯೆಹುಟ್ಟು ರುಚಿಯ ಅರಿಯದ್ಹಾಗೆ3
--------------
ಚಿದಾನಂದ ಅವಧೂತರು
ಸಂಸಾರ ನಂಬುವೆಯ ಹೆಡ್ಡ ಈಸಂಸಾರವಿಹುದು ಮುಕ್ತಿಗೆ ಅಡ್ಡಪಮನೆಯು ಎಂಬುದುವಸ್ತಿ ಮಳಿಗೆಸತಿತನಯಹೋಹರು ಹಾದಿಗಳಿಗೆಎನಿತು ಮಮತೆ ಇದರೊಳಗೆ ಯಮಮನಮುಟ್ಟಿ ಹಿಡಿದಿಹ ಗುದಿಗೆ1ಸುಳ್ಳುಗಳಾಡೋದು ಎಷ್ಟುಮಹಾತಳ್ಳಿಕಾರಿಕೆ ಬೆಟ್ಟದಷ್ಟುಬೆಳ್ಳಿಟ್ಟು ಬಗುಳೋದು ಯಷ್ಟು ಯಮ ಕಕ್ಕಲಿಹಶೀಳುಯಂಬಾಕೊಲ್ಲೆಯಿವನ ಕುಟ್ಟುಕುಟ್ಟು2ಮಕ್ಕಳು ಮನೆಗಿಲ್ಲವೆಂಬ ಎನಗೆತಕ್ಕ ಹೆಂಡತಿ ಅಲ್ಲವೆಂಬರೊಕ್ಕವ ದಿನ ನೋಡಿಕೊಂಬ ಯಮಕಕ್ಕರಲಿರು ಶೀಳುಯೆಂಬ3ಗುರುಹಿರಿಯರ ನಿಂದಿಪನುಸತಿಮರುಕಕೆ ಹಲ್ಲು ತೆರವನುಹೊರಡಿಪ ತಂದೆ ತಾಯಿಯನುಯಮನರಕಕೆ ಹಾಕುಯೆಂಬುವನು4ನಾನಾರುಯೆಂಬುದು ಅಣಕೆ ಹಿಂದಕ್ಕೆನಿದ್ದೆಯೆಂಬುದು ಒಣಗಿಏನೋಮುದೆಂಬುದು ಜಣಗಿ ಚಿದಾನಂದ-ನೆಂಬುದು ಮುಣಗಿ5
--------------
ಚಿದಾನಂದ ಅವಧೂತರು
ಸಂಸಾರ ಶರಧಿಯೊಳು ಮುಳುಗಿ ಮುಳುಗಿ ಸಂಶಯವಿಲ್ಲದೆಬಳಲುತಿಹ ಮರುಗಿ ಮರುಗಿಪಅಜ್ಞಾನ ತಿಮಿರವೆಂಬ ವ್ಯಾಪಾರದೊಳೋಡಾಡಿಸುಜ್ಞಾನ ಜ್ಯೋತಿಯ ಬಿಡುಗಡೆಯ ಮಾಡಿಭಗ್ನ ಮಾಡಿಯೆ ಶಾಂತ ಬುದ್ಧಿಗಳನೇ ನೋಡಿಪ್ರಾಜÕನಾಗದೆ ಕೆಡುವೆ ನರಕವನು ಕೂಡಿ1ಕಾಲವಿಪರೀತದಿಂದ ಕೇಡುಬರೆ ನೀನದನುಕಾಲಲೊದೆಯದೆ ಬಹಳ ಚಿಂತೆಯನು ಮಾಡಿಓಲಗಿಸಿ ಮನದೊಳಗೆ ತಾ ಕೆಟ್ಟೆಯೆನ್ನುವನುಪಾಲಿಸುವರಿಲ್ಲೆಂದು ಸೇರುವೆಯ ನರಕವನು2ಬೇಡ ಮನದೆ ಇನ್ನುಖುಲ್ಲಗುಣಗಳ ಬಿಟ್ಟುಖೋಡಿಸಂಸಾರವೆಂಬುದನು ಸುಟ್ಟುಗೂಢ ಚಿದಾನಂದಾವಧೂತನೊಳು ಅಳವಟ್ಟುಕೂಡು ಕೆಲಸಾರದಲೆ ದೃಷ್ಟಿ ಆತ್ಮನಲಿಟ್ಟು3
--------------
ಚಿದಾನಂದ ಅವಧೂತರು
ಸಾಕು ಮಾಡಿರವ್ವ ರಂಗನ | ಏಕೆ ದೂರುವಿರೆ? ಪಬೆಟ್ಟು ಬಾಯೊಳಗಿಟ್ಟರೆ ರಂಗ - ಕಚ್ಚಲರಿಯನೆ |ಕಟ್ಟಿರುವೆಯನು ಕಂಡರೆ ಬವ್ವೆಂದು - ಚಿಟ್ಟನೆ ಚೀರುವನೆ ||ರಟ್ಟೆಯ ಹಿಡಿದು ನಡಸಲು ರಂಗ -ದಟ್ಟಡಿಇಕ್ಕುವನೆ |ಭ್ರಷ್ಟ ಮಾತುಗಳನೆಷ್ಟೋ ಕಲ್ಪಿಸಿ |ಪಟ್ಟ ಪಟ್ಟಿಗೆ ರಟ್ಟು ಮಾಡುವುದು 1ಅರಿಯದಂತೆ ನೊರೆಹಾಲನು ಕುಡಿವನೆ -ಕರೆಕರೆಮಾಡುವನೆ |ಇರಲು ಮನೆಯೊಳಗೆ ಬರುತ ನಿಮ್ಮ ಮನೆ - ಮೊಸರನು--------------------ಸುರಿಯವನೆ ||ಸರಸಿಜಾಕ್ಷಿಯರೆ ಪರಿಪರಿಯಿಂದಲಿ |ಹರಲಿ ಮಾಡುವುದಿದು ತರವೇನಮ್ಮ 2ಚಿಕ್ಕ ಚಿಕ್ಕ ಗೋವಕ್ಕಳ ಕೂಡ ಚೆಂಡನಾಡುವಾಗ |----------------------------------------ಸಿಕ್ಕಿತೆನುತ ಬಹು ಚಕ್ಕಂದಾಡುತ |ಗಕ್ಕನೆ ಹೋಗಿ ಕೈಯಿಕ್ಕಿ ತೆಗೆದನೆ 3ಮಾಲೆಗಂಬದೋಪಾದಿಯಲಿ ನೀವು ಬಹಳ ಬೆಳೆದಿರೀಗ |ನೀಲಕುಂತಳೆಯೆ ದಧಿಶೋಧಿಸಿ ಓಲಾಡುತ ಕಡೆವಾಗ ||ಬಾಲಕೃಷ್ಣನಿಗೆ ಜೋಲುವ ಕುಚಗಳು |ನಿಲುಕುವ ಬಗೆ ಹೇಗೆ? ||ಖೂಳಸೆಟವಿಯರು ಕಾಳವಾಗಿಹರು |ಕೇಳಿಕೇಳಿ ಬೇಸತ್ತಿಹೆನಮ್ಮ 4ಫುಲ್ಲನಾಭನಿವ ಒಲ್ಲದನಾದರೆ ಎಲ್ಲ ಒಯ್ದಿಡಬೇಕೆ? |ಖುಲ್ಲತನದಿ ನೀವ್ ನಿಲ್ಲಗೊಡದಿಹಿರಿ ಗುಲ್ಲುತನವು ಸಾಕೆ ||--------------------ಸಲ್ಲದು ಈ ನುಡಿ ಪುರಂದರವಿಠಲಗೆ |ಹಲ್ಲೊಳಗಾತನ ಇಟ್ಟಿರಬೇಡಿ 5
--------------
ಪುರಂದರದಾಸರು
ಸಾಕು ಸಾಕಿನ್ನು ಸಂಸಾರಸುಖವು |ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಪಉದಿಸಿದುವು ಪಂಚಭೂತಗಳಿಂದ ಔಷಧಿಗ-|ಳುದಿಸಿದುವು ಔಷಧಿಗಳಿಂದನ್ನವು ||ಉದಿಸಿದುವು ಅನ್ನದಿಂ ಶುಕ್ಲ-ಶೋಣಿತವೆರಡು |ಉದಿಸಿದುವು ಸ್ತ್ರೀ-ಪುರುಷರಲ್ಲಿ ಹರಿಯೆ 1ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ |ಪತನವಾದಿಂದ್ರಿಯವು ಹೊಲೆ-ರುಧಿರವು ||ಸುದತಿಯುದರದೊಳೆರಡು ಏಕದಲಿ ಸಂಧಿಸಲು |ಬುದಬುದನೆ ಮಾಸಪರ್ಯಂತರದಿ ಹರಿಯೆ 2ಮಾಸವೆರಡರಲಿ ಶಿರಮಾಸಮೂರರಲಂಗ |ಮಾಸನಾಲ್ಕರಲಿ ಚರ್ಮದ ಹೊದಿಕೆಯು ||ಮಾಸವೈದರೊಳುನಖರೋಮ ನವ ರಂಧ್ರಗಳು |ಮಾಸವೇಳಲಿ ಧಾತು ಹಸಿವು ತೃಷೆಯು 3ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ |ಭಂಗವನು ಪಡಲಾರೆ ಭವಭವದೊಳು ||ಅಂಗನೆಯ ಉದರಕಿನ್ನೆಂದಿಗೂ ಬರೆನೆಂದು |ಹಿಂಗದಲೆ ಧ್ಯಾನಿಸುತ ಕಳೆದೆನೈ ದಿನವ 4ಇನಿತು ಗರ್ಭದೊಳು ನವಮಾಸ ಪರಿಯಂತರದಿ |ತನು ಸಿಲುಕಿ ನರಕದಲಿ ಆಯಾಸಗೊಂಡು ||ಘನಮರುತವೇಗದಿಂ ಅರುಹನಲ್ಲಿಯೆ ಮರೆತುಜನಿಸುವಲಿ ಮೃತಭಾವದೊಳು ನೊಂದೆ ಹರಿಯೆ 5ಧರೆಯಮೇಲುದಿಸಿ ಬಹು ವಿಷ್ಣುಮಾಯೆಗೆ ಸಿಲುಕಿ |ಪರವಶದೊಳಿರಲು ನೀರಡಿಸಲಾಗ ||ಹೊರಳಿ ಗೋಳಿಡುತ ಕಣ್ದೆರೆಯ ಹರಿಯನು ಮರೆವ |ದುರಿತರೂಪದ ತನುವ ಧರಿಸಿದೆನೊ ಹರಿಯೆ 6ಶಿಶುತನದೊಳಿರಲು ನೊಣ ಮುಸುಕಲಂದದಕಳಲು |ಹಸಿದನಿವನೆಂದು ಹಾಲನೆ ಎರೆವರು ||ಹಸು-ತೃಕ್ಷೆಗಳಿಂದಳಲು ಹಾಡಿ ತೂಗುವರಾಗ |ಪಶುವಂತೆ ಶಿಶುತನದೊಳಿರಲಾರೆ ಹರಿಯೆ 7ನಡೆಯಲರಿಯದ ದುಃಖ ಮನಸಿನೊಳು ಬಯಸಿದುದ |ನುಡಿಯಲರಿಯದ ದುಃಖ ವಿಷಮದಿಂದ ||ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು-|ನುಡಿಯೊಳಿಹ ಬಾಲ್ಯದೊಳಗಿಲಾರೆ ಹರಿಯೆ 8ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು |ಗೋಳಿಡುತವಿದ್ಯೆಕರ್ಮಗಳ ಕಲಿತು ||ಮೇಲೆ ಯೌವನದುಬ್ಬಿನೊಳು ಮದುವೆಯಾಗಿ ನಾಬಾಲೆಯರ ಬಯಸಿ ಬಹು ಮರಳಾದೆ ಹರಿಯೆ | 9ಜ್ವರದ ಮೇಲತಿಸಾರ ಬಂದಂತೆ ಯೌವನದಿ |ತರುಣಿಯೊಡನಾಡಿಕೂಡಿದವಿಷಯದಿ ||ತರುಣಿ-ಸುತರ್ಗನ್ನ ವಸ್ತ್ರಾಭರಣವೆಂದೆನುತ |ಪರರ ಸೇವೆಯಲಿ ನಾ ಕಡುನೊಂದೆ ಹರಿಯೆ 10ನೆತ್ತರವು ತೊಗಲು ಮಾಂಸದ ಹುತ್ತು ಜೊತ್ತುಗಳ |ಹತ್ತು ಇಂದ್ರಿಯದ ಬಹುರೋಗದಿಂದ ||ಮತ್ತೆ ಕಾಲನ ಬಾಯತುತ್ತು ಬಹುವಿಧ ಕರ್ಮ-||ಕತ್ತಲೆಯೊಳೀ ದೇಹ ಕರಕಾಯ್ತು ಹರಿಯೆ 11ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು |ಕಟ್ಟಿಕಾದಿಹರು ಮುಪ್ಪಡಸಲಾಗ ||ತಟ್ಟನೇ ಕೆಟ್ಟನುಡಿಗಳ ಬಯ್ಯುತಳಲುವರು |ಮುಟ್ಟಿನೋಡರು ಸರಕುಮಾಡರೈ ಹರಿಯೆ 12ಎಷ್ಟವಜೆÕಯ ಮಾಡೆ ಮತ್ತವನಿಗಳಲುತಿರೆ |ಕಟ್ಟಳೆಯ ದಿನತುಂಬಿಮೃತನಾಗಲು ||ಕುಟ್ಟಿಕೊಂಡಳುತ ಹೋಯೆನುತ ಬಂಧುಗಳೆಲ್ಲ |ಮುಟ್ಟದಲೆ ಹೆಣನೆಂದು ದೂರದೊಳಗಿಹರು 13ಸತ್ತ ಹೆಣಕಳಲೇತಕೆಂದು ಬಂಧುಗಳೆಲ್ಲ |ಸುತ್ತಿರ್ದು ಹೊತ್ತು ಹೋಯಿತು ಎನ್ನುತ ||ಹೊತ್ತು ಕೊಂಡಗ್ನಿಯಲಿ ತನುವ ಬೀಸಾಡುವರು |ಮತ್ತೆ ಧರಣಿಯಲಿ ನಾ ಜನಿಸಬೇಡವೊ ಹರಿಯೆ 14ಇನ್ನು ಈ ಪರಿಪರಿಯ ಯೋನಿಮುಖದಲಿ ಬಂದು |ಬನ್ನವನು ಪಡಲರೆ ಭವಭವದೊಳು ||ಜನ್ಮ-ಮರಣಾದಿ ಕ್ಲೇಶಗಳನ್ನು ಪರಿಹರಿಸಿ |ಸನ್ಮತಿಯೊಳಿರಿಸೆನ್ನ ಪುರಂದರವಿಠಲ 15
--------------
ಪುರಂದರದಾಸರು
ಸಾಕು ಸಾಕು ಸಂಸಾರ ಸಂಖ್ಯಾಗಿಲ್ಲ ಒಲ್ಲೆ ಒಗೆತನವ ಪ.ಆರುಮಂದಿ ಗಂಡರಾಳುವರು ಎನ್ನಆರುಮಂದಿಗೆ ಮೂರು ಸುತರೆನಗೆಆರು ಮೂರೇಳ್ಪರುಭಾವ - ಮೈದುನರೆಲ್ಲಆರರೆಂದರೆ ಬಿಡರು ಆರಿಗುಸುರಲಮ್ಮ 1ಹತ್ತುಮಂದಿ ಬೆನ್ನ ಮುತ್ತಿಕೊಂಡರೆಮತ್ತೆ ಬಿಟ್ಟೆನೆಂದೆ ಬಿಡಗೊಡರುಅತ್ತಿಗೆ ನಗೆಹಣ್ಣಿ ಹೊತ್ತು ಹೊತ್ತನೊಳೆಮ್ಮನೆತ್ತಿಯೊಳು ಹಸ್ತವಿಟ್ಟೆನ್ನ ಸಲುವರಮ್ಮ 2ಪಂತರೈವರು ಎನ್ನ ತೊಂತ ಹಂತಯೆಂದುಸಂಚಿತದ ಕರ್ಮವನುಣಿಸುವರುವಂಚನೆಯಳಿದ ಪ್ರಪಂಚವನು ಕಳೆದಿಹಮಿಂಚಿನ ಪರಿಯವಿರಿಂಚಿಬರೆದಿಹನಮ್ಮ3ಜೇಷ್ಠನಾಗಿಹ ಪುತ್ರ ಧರ್ಮನ ಅಗಲಿಸಿಭ್ರಷ್ಟ ಆತ್ತೆಯು ಮೈತ್ಯುವಾಗಿಹಳುಮೆಟ್ಟಿಲಿನ ಹೊರಗೆ ಕಣ್ಣಿಟ್ಟು ಸಾಧುಗಳನುದೃಷ್ಟಿಸಿ ನೋಳ್ಪನೆಂದರೆ ಕ್ಷಣ ಬಿಡರಮ್ಮ 4ಒಂಬತ್ತು ಬಾಗಿಲ ಊಳಿಗವನು ಮಾಳ್ಪಕುಂಬತದ ನರತ ಕಾವರ ದಾಳಿಢಂಭಕವನು ಬಿಟ್ಟು ಇಂಬಿನೊಳಟ್ಟು ವಿಶ್ವಂಭರ ಪುರಂದರವಿಠಲ ಧ್ಯಾನದಗುಟ್ಟು5
--------------
ಪುರಂದರದಾಸರು
ಸಾಕ್ ನಿನ್ನ ಸಂಸಾರವೂ ಓ ಮನವೇಯಾಕ್ ನಿನಗೀ ವ್ಯಾಪಾರವೂಪಬೇಕ್ ಬೇಕಾದುದ ತಂದುಹಾಕಿದುದೆಲ್ಲವ ತಿಂದು ಕಾಗೆ-ಯಂತೆ ಕೂಗುವರುಜೋಕೆಜೋಕೆಪೋಕಮನವೇಅ.ಪಯಜಮಾನ್ನೆ ಸಿಕ್ಕೀತೆಂದು ಪೌರುಷವ್ಯಾಕೋಅಜಪಟ್ಟಕ್ಕೊಡೆಯನೆಂದು ಟ್ರೆಜರಿ ಖಜಾನಿ ಕೀಲಿಕೈಸಿಕ್ಕಿತೆನುತ್ಹಿಗ್ಗಿಸುಜನಸಜ್ಜನರ ಮನ್ನಿಸದ ನಿ-ನ್ನೆಜಮಾನ್ಕೆ ಸುಡುವುದು ಮನವೇ1ಹೊಟ್ಟೆಗೂ ಸಮ ತಿನ್ನದೇ ಒಳ್ಳೆಯದೊಂದುಬಟ್ಟೆಸಹ ಹೊದೆದುಕೊಳ್ಳದೆಕಷ್ಟ ಪಟ್ಟು ಹಣ ಗಳಿಸಿಟ್ಟು ಮರುಗದೆದುಷ್ಟ ಮಕ್ಕಳು ಜುಗಾರಾಡಿ ಕಳೆದರೆಂದುಕೆಟ್ಟ ಪಾಪಿ ಮನವೇ2ಋಣ ರೂಪಸಂಸಾರಕೇ ನಿನಗೆ ಕೈಲಿ ಹಣಇಲ್ದೀ ವ್ಯಾಪಾರ್ಯಾಕೆ ಗುಣವಿಲ್ಲದ್ಹೆಂಡತಿಬಿನವಿಲ್ದ ನೆಂಟರುಬಣಗುಮಕ್ಕಳಿಗಾಗಿದಣಿವುದ್ಯಾತಕೊ ವ್ಯರ್ಥ ಹೆಣದತ್ತ ಮನವೇಬಂಧು ಬಾಂಧವರೆಲ್ಲರೂ ಸಂಪದವಿರೆಬಂದು ಸೇವಿಸಿ ಹೊಗಳ್ವರುಇಂದುನೀ ಗತಿಹೀನನೆನಿಸಲು ಜಗಳವಸಂಧಿಸಬೇಕಾಗಿ ನಿಂದಿಸುವರುಹಿಂದಿನಿಂದಲಿ ಪರಿಪರಿ ಮಂಗಬುದ್ಧಿ ಮನವೇ3ಯಾರಿಗೋಸುಗ ಬಂದಿಲ್ಲಿ ದಣಿವೆ ಸಂಗ-ಡ್ಯಾರೂ ಬರುವರ್ ಕಡೆಯಲಿಯಾರು ಯಮನ ಶಿಕ್ಷೆ ತಡೆವೆನೆಂಬರು ಪೇಳ್ವಾರಿಜನಾಭಗೋವಿಂದನಲ್ಲದೆ ಮುಂದೆಯಾರಿಗ್ಯಾರುಳಿಂಬ್ಹೇಳು ಮನವೇ4xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಸಾಕ್ಷಾತ್ ಶಿವ ಜಗದೊಳಗೆ ಭವದಿ ಬಂದಿರೆ ಬಳಿಗೆ |ನರನಲ್ಲಾ ನರನಲ್ಲಾ ಗುರುವರ ಪರನು || ನರನಲ್ಲ ನರನಲ್ಲಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಅಲ್ಲಹುದೆಂಬುದು ಭ್ರಾಂತೀ ||ಗುರುವಿಂದಲ್ಲದೆ ಆಗದು ಶಾಂತೀ || ನರನಲ್ಲ ನರನಲ್ಲ1ತಮ್ಮಂತಲೆ ನೋಡುವರು | ದೇಹದಹಮ್ಮಿಂದಲೆ ಕೆಡುತಿಹರೂ || ನರನಲ್ಲ ನರನಲ್ಲ2ಭ್ರಾಂತದ ಮಾತೂ ಗುಹ್ಯೇಕಾಂತದಿ |ಇಹುದೇನೋ | ನರನಲ್ಲ ನರನಲ್ಲ3ಗುರುಶಂಕರ ಪರಬ್ರಹ್ಮ ಒಂದೆ ಎಂದೊದರಿತೊಶ್ರುತಿನಿಯಮಾ || ನರನಲ್ಲ ನರನಲ್ಲ4
--------------
ಜಕ್ಕಪ್ಪಯ್ಯನವರು
ಸಾಧನ ದೇಹವಿದು62-3ಸಾzನ ದೇಹವಿದುಶ್ರೀ ಪದುಮೇಶ ದಯದಿ ಕೊಟ್ಟ ದೇಹವಿದು ಪವಿಹಿತಾವಿಹಿತವು ಈರ್ವಿಧ ಕರ್ಮದಿವಿಹಿತವ ಪಿಡಿದು ಅಕಾಮ್ಯದಿ ಸಮ್ಯಕ್ ಆಚರಿಸಿಅಹಿಪಶಯ್ಯನ ಸನ್ಮಹಿಮೆಗಳರಿತು ವರಾಹನ ದಯದಲಿ ಪರಸುಖ ಪೊಂದಲು 1ಬೇಸರ ತೊರೆದು ಸುಶಾಸ್ತ್ರವನೋದಿಸಾಸಿರ ನಾಮನಭಾಸುರಗುಣಕ್ರಿಯರೂಪಗಳಈಶನ ದಯದಿ ಸದ್ಯೋಚಿಸಿ ಹಿಗ್ಗುತವಾಸುದೇವನೆ ಸರ್ವೇಶನೆಂದರಿಯಲು 2ವಿಷಯೀಕ್ಷಣಗಳು ಕ್ಷಣಸುಖವೀವುವುಶೇಷಗಿರೀಶನೆ ಅಕ್ಷಯಸುಖದನು ಸುಖಮಯನುದೋಷದೂರ ಶ್ರೀ ಲಕ್ಷ್ಮಿಯ ರಮಣನೆಪೋಷಕ ಮನೋಗತ ತಿಮಿರಕೆ ಪೂಷನು 3ತಾರಕಗುರುಉದಾರ ಸುಮನದಲಿದಾರಿಯ ತೋರಿಸಿ ಉದ್ಧರಿಸಲು ಬಹು ದಯದಿವಿಧಾತೃಸಮೀರಸುಮೇಧರು ಚಿಂತಿಪವಾರಿಧಿಶಯ್ಯ ಪರೇಶನು ತೋರುವ 4ಸಪ್ತ ಸುಸ್ಥಾನದಿ ಮರುತಾದಿಗಳೊಡೆಗುಪ್ತನಾಗಿಪ್ಪ ನಿರ್ಲಿಪ್ತ ನಿರಾಮಯ ಶ್ರೀಕಪನುಸುಪ್ತಿಜಾಗೃತ ಸ್ವಪ್ನಾದಿ ಕಾಲದಿ ಕಾಯುವಆಪ್ತ ಸುಹೃದನಿವಗಾರು ಈಡಿಲ್ಲವು 5ಪಂಚ ಸುನಾಡಿಯೋಳ್ ಪಂಚ ಸುವರ್ಣದಿಪಂಚ ಸುರೂಪ ಸ್ವತಂತ್ರನು ಇರುತಿಹ ಶ್ರೀಹರಿಯುವಿರಿಂಚಸಮೀರಸುಮೇಧರು ಬಹು ವಿಧಚಿಂತಿಸಿ ನಮಿಪ ಪ್ರಪಂಚದ ಒಡೆಯನು 6ಪದುಮದ ದಳಗಳು ಐದು ಮೂರುಂಟುಅದರ ಮೂಲದಿ ಇಹ ಸದಮಲ ಲಕ್ಷ್ಮೀಶಬಾಧಿಪ ಕರ್ಮವ ಸುಡುವ ಸಂಕರುಷಣಸದಮಲ ಪೊರೆಯುವ ಒಳಹೊರಗೆ 7ಶ್ರವಣ ಮನನ ಸುಧ್ಯಾನದ ಬಲವುಶ್ರೀಶನೊಳ್ ಭಕುತಿಯು ನಿಶ್ಚಯ ಸಾಧನ ಗುರುಮಯದಿಶ್ರೀಶನ ಮಹಿಮೆಗಳರಿತು ಸದೃಷದಿಸುರತಟಿನಿಯಪೋಲು ಸರಿಪ ಪ್ರೇಮವೆ ಭಕ್ತಿ 8ಮುಕುತಿ ಕೊಡುವ ಜ್ಞಾನ ಭಕುತಿಲಿ ಬರುವುದುಸುಖಮಯ ಶ್ರೀಶನ ದಯವು ಇಲ್ಲದೆ ಇದು ಸಿಕ್ಕದಯ್ಯವಿಕಸಿತಾಬ್ಜಜತಾತಪ್ರಸನ್ನ ಶ್ರೀನಿವಾಸಶ್ರೀಕರ ವ್ಯಾಸ ರಾಮ ಕೃಷ್ಣ ನೃಹರಿ ಕಾಯ್ವ 9
--------------
ಪ್ರಸನ್ನ ಶ್ರೀನಿವಾಸದಾಸರು
ಸಾಂಬಶ್ರೀವಾಹನ ಕುಂಟೋಜೀಶಾ |ಸುಂದರ ಬಸವೇಶಾಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಜಗದೊಳಗಿಹ ಜನರಘನಾಶ |ಸುಗಮದಿ ಕಡಿವನು ಭವದಪಾಶ|ಅಗಣಿತಶಿವಗಣರೊಳು ಮೆರೆವಅವಿನಾಶ1ಗಳಬೆನ್ನವನಿತ್ತು ಪರೇಶ |ಮಾಳ ಹೊಲಗಳ ನಡಿಸುವನೀಶ |ತಿಳಿ ಮನದೊಳು ಬೆಳಗುವ ಜ್ಯೋತಿ ಪ್ರಕಾಶ2ಧರಣಿಗಧಿಕವಾದ ಕೈಲಾಸ |ಪೊರೆವುತ ಕುಂಟೋಜ ನಿವಾಸಾ |ಸ್ಥಿರವಾಗಲು ಶಂಕರಗಾಯಿತು ಉಲ್ಹಾಸ3ಸುಂದರ ಬಸವೇಶ ||
--------------
ಜಕ್ಕಪ್ಪಯ್ಯನವರು