ಒಟ್ಟು 9531 ಕಡೆಗಳಲ್ಲಿ , 132 ದಾಸರು , 5434 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಸಿರ ನಾಮವ ಹಾಡೆ | ತಂಗಿ ಪ ದಾಸರು ಬಂದರೆ ಕೈ ಜೋಡಿಸಿ ವಂದಿಸೆ ತೋಷದಿ ವರಗಳ ಸೀಡುವರಮ್ಮ ಅ.ಪ ಪರಿಮಳ ಭರದಲಿ ಮೆರೆಯುವ ಹೂಗಳ ಅರಸಿ ತಂದಿರುವಳು ನೀನಲ್ಲವೇ ಪರಮ ಮಂಗಳಕರ ಸರಸಿಜಪಾದಕೆ ಹರುಷದೊಳರ್ಪಿಸೆ ಮರೆಯದಿರಮ್ಮ 1 ಮಂದರಧರ ಗೋವಿಂದನು ಮನದಲಿ ನಿಂದಿರುವನು ತಾನೆಂದೆಣಿಸಮ್ಮ ಬಂಧಿಸಿ ಪಂಚೇಂದ್ರಿಯಗಳನೆಲ್ಲ ವಂದಿಸಿ ಕೈಪಿಡಿ ಎಂದು ಬೇಡಮ್ಮ 2 ಅಂಗನೆಯರ ಭಾವಭಂಗಿಗೆ ನಲಿಯುವ ಮಾಂಗಿರಿಯರಸನು ನಿಜವಮ್ಮ ಇಂಗಿತವರಿತು ಗೋಪಾಂಗನೆಯರಿಗಾ- ಲಿಂಗನವಿತ್ತವನಿವನಮ್ಮ 3 ಇವನಮ್ಮ ಮನದೈವ ಗೋಪಾಲನು ಇವನಮ್ಮ ಪರದೈವ ನೀಲಾಂಗನು ಭವದೂರ ಸುಕುಮಾರ ಸಿರಿಲೋಲನು ನವನೀತ ದಧಿಚೋರ ಸುವಿಲಾಸನು 4 ಪರಮಾರ್ಥ ಚರಿತಾರ್ಥ ವರದಾತನು ಪರತತ್ವ ಚಿರತತ್ವ ಗುರುವೀತನು ದುರಿತಾರಿ ಉಪಕಾರಿ ಪರಮಾತ್ಮನು ಸಿರಿರಂಗ ಮಾಂಗಿರಿಯ ದೊರೆಯೀತನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾಸಿರನಾಮ ಪೂಜೆಸಾಸಿರ ನಾಮ ಪೂಜೆಯ ಸಮಯಾ ಶ್ರೀವಾಸುದೇವನೆ ರಕ್ಷಿಪ ಸಮಯಾ ಸ್ವಾಮಿ ಪಸಾಸಿರ ದಳ ಪದ್ಮ ಮಧ್ಯಕೆ ಶ್ರೀ ವೇದವ್ಯಾಸ ಗುರುವು ಬಂದಿಹ ಸಮಯಾ ಭಾಸುರ ಛಂದಸ್ಸು ಮುಖಮಂಡಲದಿ ಪ್ರಕಾಶಿಸಿ ಮಂತ್ರ ಸಿದ್ಧಿಪ ಸಮಯಾ ಸ್ವಾಮಿ 1ಶ್ರೀರಮೆ ಧರೆ ಸಹ ಹೃದಯಮಧ್ಯದಿ ಶ್ರೀಮನ್‍ನಾರಾಯಣ ನೀನಿಹ ಸಮಯಾತೋರುತಿದಿರೆ ಪೀಠದಿ ಪೂಜೆಗೊಳುತೆನ್ನಸ್ಮೇರಾಸ್ಯದಿಂ ನೋಡುವ ಸಮಯಾ ಸ್ವಾಮಿ 2ಬೀಜನಾಮವು ದಕ್ಷಿಣ ಸ್ತನ ದೇಶದಿಭ್ರಾಜಿಸಿ ಭಕ್ತಿಗೂಡುವ ಸಮಯಾರಾಜಿಪ ಶಕ್ತಿ ನಾಮವು ವಾಮದಿ ಫಲರಾಜಿಯ ಬೆಳಸುತಿರುವ ಸಮಯಾ ಸ್ವಾಮಿ 3ಹೃದಯದಿ ಕೀಲಕ ನಾಮವು ನಿನ್ನಯಪದಸನಿಯವ ಸೇರಿಪ ಸಮಯಾಪದರದೆ ವಿಘ್ನತತಿಗೆ ಭಜಿಸೆನ್ನುತಸದಯ ಸದ್ಗುರು ನಿಯಮಿಪ ಸಮಯಾ ಸ್ವಾಮಿ 4ಅಂಗುಲಿಗಳು ನಿನ್ನ ಮಂಗಳ ನಾಮಗಳಸಂಗದಿ ಶುದ್ಧಿವಡೆದಿಹ ಸಮಯಾಗಂಗೆಯ ಪಡೆದ ನಿನ್ನಡಿಗೆ ತುಲಸಿ ಕುಸುಮಂಗಳನರ್ಪಿಸುತಿಹ ಸಮಯಾ ಸ್ವಾಮಿ 5ಅಂಗಗಳಾರು ಶುಭಾಂಗಗಳಾಗಿ ನಿನ್ನಮಂಗಳ ತನುವ ಧ್ಯಾನಿಪ ಸಮಯಾತೊಂಗದೆ ವಿಷಯಗಳೊಳು ನಿನ್ನ ಪದದುಂಗುಟದುದಿಯ ಸೇರಿಹ ಸಮಯಾ ಸ್ವಾಮಿ 6ದಶನಾಮ ದಶಕ ದಶಕ ಸಮಯದಿ ದಿವ್ಯದಶವಿಧ ಭೋಜ್ಯ ಭೋಜಿಪ ಸಮಯಾದಶವಿಧದಾರತಿಗಳ ಬೆಳಕಿಗಿಂದ್ರಿಯದಶಕವು ವಶಕೆ ಬಂದಿಹ ಸಮಯಾ ಸ್ವಾಮಿ 7ಮೀನ ಕಮಠ ಬುದ್ಧ ಕಲ್ಕಿನೀನಾಗಿ ಭಕತರಿಷ್ಟವನಿತ್ತೆ ನನ್ನಯದೀನತೆಯಳಿವರಿದೇ ಸಮಯಾ ಸ್ವಾಮಿ 8ಅನುಗ್ರಹಶಕ್ತಿಯೊಳಿರುತಷ್ಟಶಕ್ತಿಗಳನು ನೋಡಿ ಸೇವೆಗೊಳುವ ಸಮಯಾಸನಕಾದಿಗಳು ಶ್ರುತಿ ಸ್ಮøತಿ ಪುರಾಣಂಗಳುವಿನಮಿತರಾಗಿ ನುತಿಪ ಸಮಯಾ ಸ್ವಾಮಿ 9ವರ ಸಿಂಹಾಸನದಗ್ನಿ ದಿಕ್ಕಿನೊಳ್ ಧರ್ಮನುಹರುಷದಿಂ ಸೇವೆಗೈಯುವ ಸಮಯಾನಿರುರುತಿ ದೇಶದಿ ಜ್ಞಾನನು ತಾಮಸಬರದಂತೆ ಕಾದು ನಿಂದಿಹ ಸಮಯಾ ಸ್ವಾಮಿ 10ವೈರಾಗ್ಯ ವಾಯವ್ಯದೊಳು ನಿಂದು ದುಃಖವಹಾರಿಸುತಲಿ ಸೇವಿಪ ಸಮಯಾಸಾರಿರುತೈಶ್ವರ್ಯನೀಶನೆಡೆಯೊಳ್ ನೀನುತೋರಿದೂಳಿಗ ಗೈಯುವ ಸಮಯಾ ಸ್ವಾಮಿ 11ಸುರಪತಿ ದೆಶೆಯೊಳಧರ್ಮನು ಬೆದರುತಕರವ ಮುಗಿದು ನಿಂದಿಹ ಸಮಯಾಇರುತ ದಕ್ಷಿಣದಲಜ್ಞಾನನು ಚೇಷ್ಟೆಯತೊರೆದು ಭಯದಿ ಭಜಿಸುವ ಸಮಯಾ ಸ್ವಾಮಿ 12ವರುಣದಿಕ್ಕಿನೊಳವೈರಾಗ್ಯನು ನಿನ್ನಡಿಗೆರಗುವವರ ನೋಡುವ ಸಮಯಾಇರುತಲುತ್ತರದಲನೈಶ್ವರ್ಯ ಮಂತ್ರದುಚ್ಚರಣೆಯ ತಪ್ಪನೆಣಿಪ ಸಮಯಾ ಸ್ವಾಮಿ 13ಕಾಮಾದಿಗಳು ಪೀಠಸೀಮೆಯೊಳಗೆ ನಿಂತು ಕೈಮುಗಿದಲುಗದಿರುವ ಸಮಯಾತಾಮಸ ರಾಜಸ ಸಾತ್ವಿಕಗಳು ನಿನ್ನನಾಮದ ಬಲುಹ ತಿಳಿವ ಸಮಯಾ ಸ್ವಾಮಿ 14ಎಂಟು ದಿಕ್ಕಿನ ದೊರೆಗಳು ಪರಿವಾರ ಸಹಬಂಟರಾಗಿಯೆ ಕಾದಿಹ ಸಮಯಾಎಂಟು ಬಗೆಯ ಸಿರಿದೇವಿಯರೊಂದಾಗಿನಂಟುತನವ ಬಳಸಿಹ ಸಮಯಾ ಸ್ವಾಮಿ 15ಮೊದಲ ನಾಮವು ವಿಶ್ವಮಯ ನಿನ್ನ ನಿರ್ಗುಣಪದವ ಸೂಚಿಸಿ ಸಲಹುವ ಸಮಯಾತುದಿಯ ನಾಮದಿ ಭಕತರಿಗಾಗಿ ತನುದಾಳಿಒದೆದು ದುರಿತವ ರಕ್ಷಿಪ ಸಮಯಾ ಸ್ವಾಮಿ 16ದೂರಕೆ ದುರಿತವು ಹಾರಿ ಹೋಗಿಯೆ ಭಕ್ತಿಸೇರಿ ನಿನ್ನೆಡೆಯೊಳಾನಿಹ ಸಮಯಾದಾರಿದ್ರ್ಯ ದುಃಖವು ತೋರದಾನಂದವ ಸಾರಿ ನಿನ್ನನು ನುತಿಸುವ ಸಮಯಾ ಸ್ವಾಮಿ 17ಸಾಸಿರ ತಾರಕ ಜಪ ಮೊದಲು ಲಭಿಸಿಸಾಸಿರ ನಾಮ ಜಪವು ಮಧ್ಯದಿಸಾಸಿರ ವಂದನೆ ಕುಸುಮ ತುಲಸಿಗಳಸಾಸಿರದಿಂದೊಪ್ಪುವ ಸಮಯಾ ಸ್ವಾಮಿ 18ಸಾಸಿರ ಸಾಸಿರ ಜನ್ಮ ಜನ್ಮಗಳೊಳುಸಾಸಿರ ಸಾಸಿರ ತಪ್ಪುಗಳಾಸಾಸಿರ ಬಾರಿ ಮಾಡಿದ್ದರು ನಾಮದಸಾಸಿರ ಪ್ರಭೆಯೊಳಳಿವ ಸಮಯಾ ಸ್ವಾಮಿ 19ಮುಂದೆನ್ನ ಕುಲವೃದ್ಧಿಯೊಂದಿ ನಿನ್ನಯ ಕೃಪೆುಂದ ಭಕತಮಯವಹ ಸಮಯಾುಂದೆನ್ನ ಭಾಗ್ಯಕೆಣೆಯ ಕಾಣದೆ ನಿನ್ನಮುಂದೆ ನಾ ನಲಿದು ಕುಣಿವ ಸಮಯಾ ಸ್ವಾಮಿ 20ಗುರುವÀರನುಪದೇಶಿಸಿದ ಮಂತ್ರಕೆ ಸಿದ್ಧಿಬರುವ ನಿನ್ನಯ ಕೃಪೆಗಿದು ಸಮಯಾಕರುಣದಿಂ ನೋಡಿ ಕೈವಿಡಿದಭಯವನಿತ್ತುಪೊರೆವದಕೆನ್ನನಿದೇ ಸಮಯಾ ಸ್ವಾಮಿ 21ಧನ್ಯನು ಧನ್ಯನು ಧನ್ಯನು ನಾನೀಗಧನ್ಯನು ಮತ್ತು ಧನ್ಯನು ವಿಭುವೆಧನ್ಯರು ಜನನೀ ಜನಕ ಬಾಂಧವರೆಲ್ಲಧನ್ಯರೆಮ್ಮನು ನೋಡುವ ಸಮಯಾ ಸ್ವಾಮಿ 22ಮೂಲ ಮಂತ್ರಾಕ್ಷರ ಮೂಲ ನೀನಾಗಿಯೆಮೂಲಾವಿದ್ಯೆಯ ತೊಲಗಿಪ ಸಮಯಾಮೂಲೋಕನಾಯಕ ಮುಕ್ತಿ ಮಾರ್ಗಕೆುದೆಮೂಲವಾಗಿಯೆ ಬದುಕುವ ಸಮಯಾ ಸ್ವಾಮಿ 23ಮುರಹರ ಮಾಧವ ತಿಮಿರ ಭಾಸ್ಕರ ಕೃಷ್ಣಶರಣುಹೊಕ್ಕೆನು ನಿನ್ನ ಚರಣ ಪಂಕಜಗಳಪೊರೆಯುವರೆನ್ನನಿದೆ ಸಮಯಾ ಸ್ವಾಮಿ 24ತಿರುಪತಿಯೊಡೆಯನೆ ಶ್ರೀ ವಾಸುದೇವಾರ್ಯಗುರುವಾಗಿ ಕಾವೇರಿ ತೀರದಲಿಕರುಣದಿಂ ಪಾದುಕೆಗಳನಿತ್ತ ಭಾಗ್ಯವುಸ್ಥಿರವಾಗಿ ಭಕತಿ ಹೆಚ್ಚುವ ಸಮಯಾ ಸ್ವಾಮಿ 25 ಓಂ ಶಕಟಾಸುರಭಂಜನಾಯ ನಮಃ
--------------
ತಿಮ್ಮಪ್ಪದಾಸರು
ಸಾಹುಕಾರರು ನಾವು ಜಗದ ಹುಟ್ಟುಸಾವಿಗೆ ಭಯಪಡೆವು ಪ ದೇಹಗಳ್ ವಸ್ತ್ರಗಳಂದದಿ ಬರುವುವು ಸಾಹಸಿವಳಗಿರುವನೊಬ್ಬನವನಕಡೆಯ ಅ.ಪ ಮೂಲ್ಯರತ್ನಗಳು ನೇಮ ಕಾಲಕಾಲಕೆ ನಿತ್ಯಕರ್ಮಾಚರಣೆ ಬಂಡ- ವಾಳವಾಗಲು ಸದ್ವ್ಯಾಪಾರ ಮಾಡುವಂಥ 1 ರಡ್ಡಿಯು ಉಂಟಾಗದು ಕಡ್ಡಿಯ ಕೊಟ್ಟು ಪೇಳುವೆವು ನಿಜದಲಿ ಕೇಳಿ ಕಲುಷಾತ್ಮರಿಗೆ ಸಾಲಕೊಡುವುದಿಲ್ಲವು 2 ದೊಡ್ಡಸಮಯಕೆ ಬೇಕಾದಷ್ಟು ಬಡ್ಡಿಯು ಬರೆ ಸಮವಾಗಿಹುದಿದುವೆ ಗುಟ್ಟು ಕ್ರಮವಾಗಿ ಲೆಕ್ಕ ಒಪ್ಪಿಸಬೇಕು ವರುಷಕೊಮ್ಮೆ 3
--------------
ಗುರುರಾಮವಿಠಲ
ಸಿಕ್ಕ ಸಮಯ ನಿಜ ತಿಳಿಯದಲೆ ಬರಿ ಕಕ್ಕುಲಾತಿ ನಿನಗ್ಯಾಕಲೆ ಮರುಳೆ ಪ ಬೊಕ್ಕಸ ಭಂಡಾರವೆಲ್ಲ ಸುಳ್ಳೆ ಸುಳ್ಳೆ ನಿನ್ನ ನಿಕ್ಕುವ ಮನೆ ಊರ್ಹೊರಗಿದೆಲೆ ಅ.ಪ ಮೇಲುಮಾಳಿಗೆಮನೆ ಸ್ಥಿರವಲ್ಲ ಬಹು ಬಾಳುವೆ ಧನಸಿರಿ ನಿನಗಿಲ್ಲ ನಾಳೆ ಬಂದೊದಗಲು ಯಮಶೂಲ ಹಿಂ ಬಾಲಿಸಿ ನಿನಗೊಂದು ಬರೋದಿಲ್ಲ 1 ಬಂಧುರ ಬುವಿಯಧಿಕಾರ ನಿಖಿಲ ಮಹ ಅಂದಣೈಶ್ವರ್ಯ ಛತ್ರ ನಂಬಿಗಿಲ್ಲ ತಂದೆ ತಾಯಿ ಬಂಧು ಬಳಗೆಲ್ಲ ನಿನ ಗೊಂದುಕೊಂದು ಸಂಬಂಧವಿಲ್ಲ 2 ಅತಿರಥರೆಲ್ಲರೀ ಭೂಮಿ ಸುಖ ನೆಚ್ಚಿ ಮತಿಗೆಟ್ಟು ಪೊಂದದಿರತಿ ದು:ಖ ಜತೆಯಲಾರ್ವೊಯ್ಯಲಿಲ್ಲಂತೆಕ್ಕ ಸುಳ್ಳೆ ವ್ಯಥೆ ಬಟ್ಟರು ತಿಳಿಯದಿದರ ಲೆಕ್ಕ 3 ಕ್ಷೋಣೆ ಪಾರುಪತ್ಯತನವೆಲ್ಲ ತಿಳಿ ಆನೆ ಕುದುರೆ ಒಂಟೆ ನಿನ್ನದಲ್ಲ ಕಾಣುವುದೆಲ್ಲ ಮಾಯಭವಜಾಲ ಮತ್ತು ಮನುಷ್ಯಜನುಮ ಸೀಗೋದಲ್ಲ 4 ನಾನು ನೀನೆಂಬುವ ದುಷ್ಟಮದ ಸುಟ್ಟು ಜ್ಞಾನದೊಡನೆ ಗೆಲಿ ಭವಬಾಧೆ ಧ್ಯಾನದಾಯಕ ಶ್ರೀರಾಮಪಾದ ನಿಜ ಧ್ಯಾನವಿಡಿದು ಪಿಡಿ ಮುಕ್ತಿಪದ 5
--------------
ರಾಮದಾಸರು
ಸಿಕ್ಕದಿರು ನಾರಿಯರ ಕಡೆಗಣ್ಣಿಗೆ ಮನ ವಿಕ್ಕಿದರೆ ಇಹಪರದ ಗತಿ ಕೆಡಗು ನಿನಗೆ ಪ ಹೇಸದೇತಕೆ ಮನಸು ಪರದಾರ ಪರದ್ರವ್ಯ ದಾಸೆಯೊಳು ಹಗಲಿರುಳು ಕುದಿದು ಕುದಿದು ಘಾಸಿಯಾಗುತ ತೊಳಲಿ ಬಳಲಿ ಯಮನರಕದೊಳು ವಾಸವನು ಮಾಡದಿರು ಎಲೆ ಮೂಢ ಮನುಜ 1 ಮೊಲೆಯೆ ಮಾಂಸದ ಚೆಂಡು ಮೊಗವು ಶ್ಲೇಷ್ಮೆಯಗೂಡು ಬಳಸಿ ನೋಡಿದರಿದಕೆ ಹುರುಳಿಲ್ಲವೋ ಒಳ ಹೊರಗು ಹೊಲಸು ಹೆಬ್ಬಡಿಕೆಗಳು ವಸನದಲಿ ಬೆಳಗುವಳು ತಲೆ ತುರಿಸಿ ಸಿಲುಕದಿರು ಕಂಡ್ಯಮನುಜ 2 ವಿಧಿ ಲಿಖಿತ ಸರಿಗು ಇಹಪರ ಕೆಡಗು ಪರವಧುವಿನೊಳು ಮನವ ಹರಿಸಬೇಡ ತೊರೆದಿವರ ಮರುತಸುತ ಕೋಣೆ ಲಕ್ಷ್ಮೀಪತಿಯ ಸಾಯುಜ್ಯ ಪದವಿಯನು 3
--------------
ಕವಿ ಪರಮದೇವದಾಸರು
ಸಿಕ್ಕಲು ನೋಡೇ ಸತ್ಸಂಗ | ಯನ | ಗಕ್ಕಿತು ಸ್ವಾನುಭವದಂಗ | ಮಿಕ್ಕಿನವಿಷಯದಿ ಹಂಗಿಲ್ಲಾ | ಒಳ | ವಕ್ಕಲವಾದನು ಶ್ರೀನಲ್ಲಾ ಪ ಜ್ಞಾನಾಂಜನವನು ತಂದಿಡಲಿ | ಅ | ಪರಿ ಬಿಡಲಿ | ಪರಿ ಭಾಸುವ ಕೋಶದಲೀ | ತಾನೇ ದೋರುವ ಜಗದೀಶಾ 1 ಭವ ಬಂಧವ ತಿಳಿಯಲು ನೆಲೆಯಾ | ತಾ | ಅವನಿಲಿ ಶುಕನಳಿ ಕನ್ಯಾಯಾ | ವಿವರಿಸಿಯನ್ನೊಳಗೆಚ್ಚರಿಸಿತೆ | ನಾ | ತವಕದಿ ಚಿದ್ಘನದೊಳು ಬೆರೆತೇ 2 ಏನೆಂದ್ಹೇಳಲಿ ಅಮ್ಮಮ್ಮಾ | ಯನ್ನಾನಂದದ ಸುಖ | ಸಂಭ್ರಮಾ | ಶ್ರೀನಿಧಿಗುರು ಮಹಿಪತಿ ಬೋಧಾ | ಸಲೆ | ತಾ ನಳಿಯಿತು ಕಲ್ಪನೆ ಬಾಧಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲಭಕ್ತವತ್ಸಲ ದೇವನು ಪ ಮಕ್ಕಳ ಚೆಂಡಿಕೆ ಮರದ ಕೊನೆಗೆ ಕಟ್ಟಿಘಕ್ಕನೆ ಕೈ ಚಪ್ಪಾಳಿಕ್ಕಿ ನಗುವ ರಂಗ ಅ.ಪ. ಹೆಣ್ಣುಮಕ್ಕಳು ಬಚ್ಚಲೆಣ್ಣೆ ಮಂಡೆಯೊಳುಬಣ್ಣ ವಸ್ತ್ರವ ಬಿಟ್ಟು ಬರಿಮೈಯೊಳಿರಲುಚೆನ್ನಿಗ ಬಿಸಿನೀರ ಚೆಲ್ಲಿ ಸೀರೆಗಳೊಯ್ದುಉನ್ನಂತವಾದ ವೃಕ್ಷವೇರಿ ಕಾಡುವನಮ್ಮ 1 ಪರಿ ಎಷ್ಟೆಂತೆ ಪೇಳಲೆ2 ಸಡಗರದೊಳು ಸೋಳಸಾಸಿರ ಗೋಪೇರಒಡಗೂಡಿ ಕೊಳಲನು ಪಿಡಿದು ತಾ ಮೊಸರಕಡೆವೊ ಗೊಲ್ಲತಿಯರ ಕೈ ಪಿಡಿದಾಡುವಒಡೆಯನೆ ಇವನಮ್ಮ ಉಡುಪಿನ ಶ್ರೀಕೃಷ್ಣ3
--------------
ವ್ಯಾಸರಾಯರು
ಸಿಕ್ಕಿದೆಲ್ಲೊ ಕೃಷ್ಣ ನೀನು ಸಿಕ್ಕಿದೆಲ್ಲೊ ನಮ್ಮ ಕೈಯ ಹೊಕ್ಕು ಮುನಿಯ ಹಕ್ಕಿಯೊಳಾದ್ಯೊ ತೆಕ್ಕಿಯ ಪುಕ್ಕಸಾಟಿಯ 1 ಬಿಟ್ಟರ ಗೊಲ್ಲತೇರಲ್ಲೊ ಕಟ್ಟಿದ ಸೊಲ್ಲೊ ಮುಟ್ಟಿ ಬಿಡುವವರಲ್ಲೊ ಘಟ್ಯಾಗಿ ನಿಲ್ಲೊ 2 ನಾವು ಬಲ್ಲೆವು ನಿನ್ನಾಟ ಎವಿ ಹಾಕುನೋಟಿ ಹವಣಿಸಿ ಹಿಡಿದೆವೊ ನೀಟ ಭಾವಿಸಿ ಈ ಮಾಟ 3 |ಬಲ್ಲತನವದೋರಿದೊ ಇಲ್ಲಿ ಮರುಳಾದ್ಯೊ ನಿಲ್ಲೊ ನಮ್ಮೊಳು ನೀನಾದ್ಯೊ ಎಲ್ಲಿಗೆ ಹೋದ್ಯೊ 4 ವಶವಾಗಲಿಕ್ಕ ನಮಗ ವಸುಧಿಯೊಳಗ ಯಶೋದೆ ಹಡೆದಳು ತಾ ಈಗ ಲೇಸಾಗಿ ನಿನಗ 5 ನಾವು ಹಿಡಿದೇವೆಂಬುವ ಮಾತ ಪೂರ್ವಾರ್ಜಿತ ನವನೀತ ಸವಿದೋರಿ ಹಿತ 6 ಭಾನುಕೋಟಿ ಸು ಉದಯ ಮುನಿಜನರಾಶ್ರಯ ನೀನಾಗಿ ಸಿಕ್ಕಿದ್ಯೊ ಕೈಯ ದೀನ ಮಹಿಪತಿಯ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಿತಗಿರೀಶ ಶ್ರೀಪತಿಯೆ ಕಾಯೋ ಯನ್ನಾ | ಕರುಣಾರಸ ಪೂರ್ಣ ಪ ಭವ ಭಂಗಾ ಅ.ಪ. ವರುಷಾ | ಕಾಣಲಿಲ್ಲ ಹರುಷಾ ||ಇಂದಿರೇಶ ತವ ಚರಣ ಸನ್ನಿಕರ್ಷಾ | ಎಂದಾಗುದೊ ಶ್ರೀಶಾ ||ವಂದಿಸೂವೆನೊ ನಾನು ನಿನ್ನ ಅನಿಶಾ | ಶ್ವೇತಾದ್ರಿ ವಾಸಾ 1 ಕಮಲ ಕಾಂಬುವಂಥ ಹದನಾ | ತೋರಿಸೊ ಜಿತ ಮದನಾ 2 ಸುರುಚಿರಾಂಗ ಶ್ರೀ ಬಿಳಿಗಿರಿಯ ರಂಗಾ | ಎನ್ನಂತರಂಗಾ ||ಮುರ ವಿರೋಧಿ ಸುರ ಸಾರ್ವಭೌಮ ಹರಿಯೇ | ಕರಿರಾಜನು ಕರಿಯೇ ||ತ್ವರದೊಳುದಿಸ್ಯವನ ಕಾಯ್ದ ದೊರೆಯೇ | ಹೀಗೆನ್ನ ಪೊರೆಯೆ ||ಗುರು ಗೋವಿಂದ ವಿಠಲ ಶ್ರೀಹರಿಯೇ | ನಿನ್ನುಪಕೃತಿ ತಾ ಮರೆಯೆ 3
--------------
ಗುರುಗೋವಿಂದವಿಠಲರು
ಸಿಂದೂರಗಮನೆ ಸಾರೆ ಮಲಗಿರುವನ್ಯಾರೆ ಪ ಸಂದರೀ ಮಂದಿರದೊಳಿವನ್ಯಾರೆ ಸೌಂದರ್ಯದ ಮ್ಯಾರೆ ಛಂದದಲಿ ನೀ ಸಾರೆ ಇಂದು ನಭದಲಿ ಚರಿಸುತಲಿ ಮನ ನೊಂದು ಬೇಸರದಿಂದ ಇಲ್ಲಿಗೆ ಬಂದು ಮಲಗಿಹನೇನೆ ಸುಖದಿ 1 ಶೀಲೆ ನೋಡಿವನ ಮುಖಕಮಲ ಸಂಗರದೊಳತಿ ಚಟುಲ ಸುವಿಶಾಲ ಭುಜಯುಗಲ ಶ್ರೀ ಲಕುಮಿವರ ಪಾಲ ನಯನ ಮರಾಳ ಧ್ವಜರೊಳ ಗಾವನೊ ಇವ ಪೇಳುವದು ಕೀಲಾಲಜಾಂಬಕಿ2 ನಾರಿ ಮಾತನಾಡಿಸೇ ಇವನ ಮನ ಮೋಹದವರನ ಕಮನೀಯ ಗುಣಯುತನ ವಾರಿಜಾಸನ ಮುಖ್ಯ ಸುರಪರಿವಾರ ಸೇವಿಯ ಕೊಳುವ ಕಾರ್ಪರನಾರಸಿಂಹನೆ ಪವಡಿಸಿಹನೆ 3
--------------
ಕಾರ್ಪರ ನರಹರಿದಾಸರು
ಸಿದ್ಧಬಸವ ಪ್ರಸಿದ್ಧನ ಮಹಿಮೆಯ ಕೇಳಿರಿ ನೀವಿನ್ನು |ವಿದ್ಯಾ ಬುದ್ಧಿ ಧನ ಧಾನ್ಯವನು ಸಿದ್ಧಿಸುವವಿನ್ನೂ ಪ ಶಿವನ ಅಪ್ಪಣೆ ತೆಗೆದುಕೊಂಡು ಶಿವಕಂಚಿಯೊಳಗೆ |ಪಾವನ ಚರಿತ ಬ್ರಾಹ್ಮಣನಲ್ಲಿ ಪುಟ್ಟಿದನು ಬೇಗ ||ದಿವಸ ದಿವಸಕೆ ಬೆಳೆದನು ಬಿದಗಿ ಚಂದ್ರಮನ ಹಾಗೆ |ಜಾವ ಜಾವಕೆ ಶಿವನ ಧ್ಯಾನವ ಮಾಡುವ ಮನದೊಳಗೆ1 ಮುಂಜಿ ಮಾಡಿಸಿಕೊಂಡನು ಸಿದ್ಧನು ಮದುವೆಯಾಗಲಿಲ್ಲ |ರಂಜಿಸುತಿಹನು ಸೂರ್ಯನಂತೆ ತೋರುವ ಜಗಕೆಲ್ಲ ||ಬಂಜೆ ಒಬ್ಬಳು ಇದ್ದಳು ಆಕೆಗೆ ಮಗನ ಕೊಟ್ಟನಲ್ಲ |ಸಂಜೆ ಹಗಲು ಕಾಣದ ಕುರುಡಗ ಕೊಟ್ಟನು ಕಣ್ಣುಗಳ 2 ತಂದೆ ತಾಯಿಗೆ ಹೇಳಿದನಾಗ ಪೋಗುವೆ ನಾನೆಂದು |ಕಂದ ನಮ್ಮನು ಬಿಟ್ಟು ಪೋಗುವದುಚಿತವೆ ನಿನಗೆಂದು ||ಅಂದ ತಾಯಿಗೆ ವಂದಿಸಿ ಹೇಳಿದ ಮಗನಾಗುವೆನೆಂದು |ಸಂದೇಹವು ಬೇಡೆಂದು ಪೇಳುತ ತೆರಳಿದ ದಯಾಸಿಂಧು 3 ಮಹಾಶಿವಾಲಯ ಕಂಡನು ಸಿದ್ಧನು ದೇಶ ತಿರುಗುತಲಿ |ಆ ಸೀಮೆಯಲಿ ಹಳ್ಳದ ನೀರು ನಿರ್ಮಲ ನೋಡುತಲಿ ||ಆಸನ ಹಾಕಿ ಕುಳಿತನು ಶಿವನ ಧ್ಯಾನವ ಮಾಡುತಲಿ |ಆ ಸಮಯದಿ ಬಂದನು ಕರಣಿಕ ಹೊಲಗಳ ನೋಡುತಲಿ 4 ಉದ್ದಂಡ ಸಂತತಿ ಆಗಲಿ ಇನ್ನು 5 ನಿನ್ನಯ ಪೂಜೆಯ ಮಾಡುವದ್ಹೇಗೆ ಹೇಳೋ ನಮಗೀಗ |ಮನ್ನಿಸಿ ಅವಗೆ ಪೇಳಿದ ಸಿದ್ಧ ಪುರುಷನು ತಾ ಬೇಗ ||ಸಣ್ಣ ಬಿಂದಿಗೆಯನಿಟ್ಟು ದ್ವಿಜರ ಪಾದೋದಕವೀಗ |ಸಂಖ್ಯೆಯಿಲ್ಲದ ಕೊಡಗಳ ಹಾಕಲು ತುಂಬದು ಎಂದೀಗೆ 6 ಅಂದಿಗೆ ಉಂಟು ಇಂದಿಗೆ ಇಲ್ಲ ಎನಲಾಗದು ನೀನು |ಸಂದೇಹವಿಲ್ಲ ಆಶ್ವೀನ ವದ್ಯ ದ್ವಿತೀಯದ ದಿನವು ||ಇಂದಿಗೆ ಕರಣಿಕ ವಂಶದವರು ಮಾಡುತಾರೆ ಇನ್ನೂ |ಮುಂದಕೆ ತೆರಳಿ ಕೊಳಕೂರಕೆ ಬಂದ ಸಿದ್ಧ ತಾನು 7 ಗಾಣಿಗರ ಮನೆಯೊಳಗಿದ್ದು ಗಾಣಾ ಹೂಡಿದನು |ಪ್ರಾಣ ತೊಲಗಿದ ಹೆಣ್ಣುಮಗಳಿಗೆ ಪ್ರಾಣವನಿತ್ತಾನು ||ಗೋಣಿಯೊಳಗೆ ಹೊಲಿದು ನದಿಯಲಿ ಪಾಚ್ಛಾ ಹಾಕಿದನು |ಕಾಣಿಸದಂತೆ ಬೇಗನೆ ಹೊರಗೆ ಹೊರಟು ಬಂದಾನು 8 ಹೆಸರು ನಿನ್ನದು ಏನು ಎಂದು ಪಾಚ್ಛಾ ಕೇಳಿದನು |ಹೆಸರು ನನಗೆ ಬಸವನೆಂದು ಕರೆತಾರೆ ಇನ್ನು ||ಪಶು ನೀನಾದರೆ ಸೊಪ್ಪಿಯ ಬೇಗ ತಿನಬಾ ಎಂದನು |ನಸು ನಗುತಲಿ ಸೊಪ್ಪಿಯ ತಿಂದು ಡುರಕಿ ಹೊಡೆದಾನು 9 ಗೊಂಬಿಗೆ ವಸ್ತಾ ಸೀರೆಯನುಡಿಸಿ ಸಿಂಗಾರ ಮಾಡಿದನು |ರಂಭೆಗೆ ಸರಿ ಈ ಹೆಣ್ಣು ಮಗಳಿಗೆ ಮದುವ್ಯಾಗೋ ನೀನು ||ಅಂಬುಜ ಮುಖಿ ಬಾರೆಂದು ಕರೆದನು ಸಿದ್ಧ ಮುನೀಶ್ವರನು |ತುಂಬಿದ ಬಸುರೊಳು ಮಗನ ಪಡೆದಳು ವಂಶಾದೆ ಇನ್ನು 10|| ನೇಮವ ಮಾಡಿ ಕೊಳಕೂರದಿ ಇರುವೆನು ನಾನೆನುತ |ಈ ಮಹಿಮೆಯೊಳಗೆ ಭೀಮಾ ದಕ್ಷಿಣವಾಹಿನಿ ಮಹಾಕ್ಷೇತ್ರ ||ಗ್ರಾಮಸ್ಥರನು ಕರೆದು ಹೇಳಿದನು ಅಡಗುವೆ ನಾನೆನುತ |ನೀವು ಮಾತ್ರ ನಾವಿದ್ದ ಸ್ಥಳವನು ನೋಡಬೇಡೆನುತ 11 ಕಲಿಕಾಲವನು ಕಂಡು ಸಿದ್ಧನು ಅದೃಶ್ಯನಾದನು |ತಿಳಿದು ಭಕ್ತಿ ಮಾಡಿದವರಿಗೆ ವರಗಳ ಕೊಡುತಿಹನು ||ಸುಳಿವನು ಕಣ್ಣಿಗೆ ಸತ್ಪುರುಷರಿಗೆ ಸಿದ್ಧ ಬಸವ ತಾನು |ಹಲವು ಹಂಬಲ ಮಾಡಲು ಬೇಡರಿ ಇರುವೆ ನಾನಿನ್ನೂ 12 ಹನ್ನೆರಡು ನುಡಿ ಸಿದ್ಧನ ಸ್ತೋತ್ರವ ಕೇಳಿದವರಿಗೆ |ಮುನ್ನ ಮಾಡಿದ ಪಾಪವು ನಾಶಾಗಿ ಹೋಗುವದು ಬೇಗ ||ಧನ್ಯನಾಗುವ ಕೀರ್ತಿ ಪಡೆಯುವ ಲೋಕದ ಒಳಗ |ಚನ್ನಾಗಿ ಶ್ರೀಪತಿ ಗುರುವಿಠ್ಠಲನು ಒಲಿವನು ತಾ ಬೇಗ 13
--------------
ವಿಶ್ವಪತಿ
ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು ಬುದ್ಧಿವಂತರು ಬಲ್ಲರಾಧ್ಯಾತ್ಮ ಸುಖವು ಧ್ರುವ ಕಾಲಿಲ್ಲದಾಕಳವು ಬಾಲಮುಖದಲಿ ಬಂದು ಕಾಳರೂಪದ ಹುಲಿಯನೆ ನುಂಗಿತು ಮೇಲವರಿಯಲಿ ಬಂದು ಜಲದೊಳಗಿನ ಕಪ್ಪೆ ಮೂಲ ಸರ್ಪದ ಹೆಡೆಯ ನುಂಗಿದದು ನೋಡಿ 1 ಬಾಲ ಇಲ್ಲದ ಇಲಿಯು ಜಾಲಹಾಕುತ ಬಂದು ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು ನಾಲಿಗಿಲ್ಲದ ಮೊಲವು ನಿಲುಕಿ ಜಪವ ಹಾಕಿ ಭಲೆ ಶ್ವಾನನ ಗಂಟಲ್ಹಿಡದಿಹುದು ನೋಡಿ2 ದಿವ್ಯ ಯೋಗದ ಮಾತು ಕಿವಿ ಇಲ್ಲದವಕೇಳಿ ಕಣ್ಣಿಲ್ಲದವ ಕಂಡು ಬೆರಗಾದನು ಕೌತುಕವು ಕಂಡು ಮಹಿಪತಿಯು ತನ್ನೊಳು ತಾನು ತ್ರಾಹಿ ತ್ರಾಹಿಯಿಂದ ಮನದೊಳು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಿಂಧು ಶೋಷಿಪೇಕ್ಷಣ ಕಲ್ಯಾಣಗಾತ್ರ ಪ ಪವಮಾನ ಪ್ರಿಯ ಪುತ್ರ ಕಾರುಣ್ಯನೇತ್ರ ಅ.ಪ. ನಿರವದ್ಯ ಭೂದೇವ ನಿರುತ ಸುಖಭರಿತ ಭಾವ ಶರಣ ಜನರನು ಕಾವ ಶಪಥ ಭಾವ ಪರ ಸೇವಾ ನಿರುತ ಮಂಗಳ ಭಾವ ಸಂಜೀವ 1 ತನುಮನವ ಹರಿಗಿತ್ತ ಗುಣನಿಧಿ ಮಹಗುಪ್ತ ಅಣುಘನದಿ ಹರಿದೀಪ್ತ ತನುನೋಳ್ಪ ಶಕ್ತ ಘನ ಕೃಷ್ಣವರ್ಯಾಪ್ತ ಮನೋವಾಕ್ಕಾಯಸ್ತ ಗುಣಾಪೂರ್ಣಾ ಹರಿಕೃತ್ಯವನು ಎಣಿಪ ತೃಪ್ತ 2 ಬಲುಭಕ್ತಿ ಭಾರನತ ಬಲಿತ ವಿಜ್ಞಾನರತ ಲಲಿತ ಮಂಗಳಚರಿತ ನಲಿವನು ಪ್ರೀತ ಕ- ಮಲಾ ಅಪಹರ್ತ ಕಲ್ಯಾಣ ಸಂಭರಿತ ಪುಲ್ಲಾಕ್ಷ ಮಮನಾಥ ಕೃಷ್ಣಾಂಘ್ರಿದೂತ 3 ಪರಮ ಸೌಭಗ ಪೂಜ ಪರಭಕ್ತಿ ನಿವ್ರ್ಯಾಜ ಚರಿಸಿ ಶ್ರೀ ಗುರುರಾಜ ವರಕಲ್ಪಭೂಜ ಸರುವ ತತ್ವಗಳೋಜ ವಶಗೊಂಡ ಮಹರಾಜ ಸರುವ ಸಿದ್ಧಿಗೆ ದೊರಿ ಎನಿಪ ವಿರಜ 4 ಸಂತಾಪಹರ ಶಾಂತ ಸೌಭಾಗ್ಯಕರವಂತ ಸ್ವಾಂತದಲಿ ನಿಶ್ಚಿಂತ ಸರಸಿ ಶ್ರೀಮಂತ ಧ್ವಾಂತ ಹರ ಶ್ರೀ ಜಯೇಶವಿಠಲನ ಏಕಾಂತ ಪಂಥ ಬಿಡದಿರುವಂಥ ಪೂರ್ಣ ಜಯವಂತ 5
--------------
ಜಯೇಶವಿಠಲ
ಸಿರಿ ಇಂದಿರೇಶ ದಾಸಜನಪೋಷ ದಾಸನಾಶೋತ್ತರಕೆ ಬೇಸರಿಯಬೇಡ ಪ ಭೇದಭಾವನೆ ಬಿಡಿಸು ವಾದಮತಿ ಪರಿಹರಿಸು ಸಾಧುಸಜ್ಜನರ ಸುಬೋಧನುಡಿಗಲಿಸು ಕ್ರೋಧ ತಾಮಸ ಕಡಿಸು ವೇದವಾಕ್ಯವ ತಿಳಿಸು ಸಾಧನದಿ ಪರಲೋಕ ಹಾದಿಯೊಳು ನಡೆಸು 1 ಶಾಂತಿ ಸದ್ಗುಣ ಕಲಿಸು ಶಾಂತಿನುಡಿಗಳು ನುಡಿಸು ಶಾಂತಿ ಮಂತ್ರವ ಬೋಧಿಸು ಶಾಂತಿಸ್ಥಿರಗೊಳಿಸು ಶಾಂತರೊಡನಾಟವಿರಿಸು ಶಾಂತಿಸುಖ ಕರುಣಿಸು ಶಾಂತಜನಪ್ರಭುವೆ ವೇದಾಂತ ಎನಗೊಲಿಸು 2 ಕಾಸಿನಾಸೆಯು ಬಿಡಿಸು ಹೇಸಿ ಬವಣೆಯ ಗೆಲಿಸು ಮೋಸಮಯಪಹರಿಸು ದೋಷದೂರೆನಿಸು ದೋಷನಾಶನ ಜಗದೀಶ ಶ್ರೀರಾಮ ನಿನ್ನ ಸಾಸಿರ ನಾಮ ಎನ್ನ ಧ್ಯಾಸದೊಳು ನಿಲಿಸು 3
--------------
ರಾಮದಾಸರು
ಸಿರಿ ಚರಣದಲ- ಪಾರ ಭಕುತಿಯನೀಯೋ ತವ ಸೇವಕನೆನಿಸಿ ಕೀರುತಿಯನು ಪಡೆಯೋ ಭವಕ್ಲೇಶ ಕಳೆಯೊ ಪ ಸೂರಿ ಸುಬ್ಬಣಾಚಾರ್ಯಕರಸ- ರೋರು ಹಗಲಲಿ ಪೂಜೆಗೊಳುತಲಿ ಚಾರುತರ ಶ್ರೀ ಜಯಮಂಗಳಿಯ ತೀರದೊಳಿರುವ ವೀರ ಮಾರುತಿ ಅ.ಪ. ಪ್ರತಿ ವರುಷ ಮಾಘಸಿತ | ನವಮಿ ದಿನದೊಳು ನೀ- ನತಿವಿಭವದೊಳು ನಗುತ | ಭಕುತರಿಷ್ಟವ ಸಲಿಸೆ ರಥದೊಳಗೆ ಕುಳ್ಳಿರುತ | ವಿಧ ವಿಧ ವಾದ್ಯಗಳ ತತಿಯನಾಲೈಸುತ | ಅತಿ ಮೋದಬಡುತ ಪರಿ ಸಂ- ಸ್ತುತಿಸೆ ಹಿಗ್ಗುತಲವರ ಸ್ವಮನೋ- ರಥಗಳ ನೀ ಸಲಿಸುವೆನೆನುತಲಿ ಅತುಳ ವಿಕ್ರಮದಭಯ ಹಸ್ತದಿ ಕೃತಿರಮಣ ಸಿರಿವರ ಹರಿಯನನು ಮತವ ಪಡೆಯುತ ರಥವ ನಡೆಸಿ ಚತುರ ದಿಕ್ಕಲಿ ಬಿಜಯ ಮಾಡುತ ಸತತ ಹರುಷವಗರೆವ ದೇವ 1 ರಕ್ಕಸಕುಲ ತಮ ಭಾನು | ತಾಮಸರ ಧ್ಯಾನಕೆ ಸಿಕ್ಕುವನಲ್ಲ ನೀನು | ಸುಜನರ ಹೃದಯದೊಳು ಅರ್ಕನೊಲು ಪೊಳೆವನು | ಹರಿಸಿರಿಗಾಳುಳಿದು ಬಕ್ಕ ದಿವಿಜರಿಗಿನ್ನು | ಗುರುಬಲ್ಲೆ ನಾನು ಚಿಕ್ಕ ರೂಪವಗೊಂಡು ಲಂಕೆಯ ಪೊಕ್ಕು ರಾಮನ ಸತಿಯ ಕಂಡು ತುಕ್ಕಿ ವನವನು ಸೂರೆ ಮಾಡಿ ಉಕ್ಕಿನ ಧ್ವಜಸ್ತಂಭದಿಂದ ಸೊಕ್ಕಿ ಬಂದ ದನುಜವ್ರಾತವ ಕುಕ್ಕಿ ಕೆಡಹಿ ಪುರವನುರಹಿ ಅಕ್ಕರದ ಮಣಿಸಹಿತ ಬಂದು ಪಕ್ಕಿದೇರನಿಗೆರಗಿ ನಿಂದೆ 2 ತುತಿಸ ಬಲ್ಲೆನೆ ನಾನು | ನಿನ್ನಯ ಸುಗುಣಗಳ ತತಿಗಳೆಲ್ಲವನು | ತ್ರಿಪುರ ಸುಂದರಿ ಪಾ- ರ್ವತಿ ಪತಿಯ ಪಡೆದವನು | ರಂಗೇಶವಿಠಲಗೆ ಅತಿಪ್ರೀತಿಸುತ ನೀನು | ನಿಷ್ಕಾಮಯುತನು ಪತಿತರನುದ್ಧರಿಸಲು ನೀ ಸಿರಿ ಪತಿಯ ಮತದೊಳು ಹನುಮ ಭೀಮ ಯತಿಯ ರೂಪವ ತಾಳಿ ಹರುಷದಿ ಕ್ಷಿತಿಯ ಭಾರವ ಹರಸಿ ಸಲಹಿದೆ ಅತುಳ ಮಹಿಮ ನಿನ್ನಪರಿಮಿತ ಶ ಕುತಿಗೆ ನಮೊ ನಮೊ ವಾಯುತನಯನೆ ಸತತ ಮುದದೊಳು ನಿನ್ನ ಸ್ಮರಿಸುವ ಮತಿಯ ಪಾಲಿಸು ಪತಿತ ಪಾವನ 3
--------------
ರಂಗೇಶವಿಠಲದಾಸರು