ಒಟ್ಟು 11213 ಕಡೆಗಳಲ್ಲಿ , 138 ದಾಸರು , 6168 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ ವಾಸವಾಗುವುದು ನಿಜ ಭಕುತಿಯಲಿ ಬಿಡದೆ ಪ ಪಿತನಿಂದ ನೊಂದು ರತಿಪಿತನ ಸ್ಮರಿಸುತ ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು ಬಲು ಮತಿವಂತನಾಗಿ ಮುದದೀ ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು ಅಚ್ಯುತನ ವರದಿಂದ ಬಂದು 1 ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತ್ತಿದ್ದ ಬಲ್ಲ ಭಕುತಿಂದ ಸತತ ಖುಲ್ಲನಲಿ ಪುಟ್ಟಿದ ಪ್ರಲ್ಹಾದ ದೇವನು ಬಲ್ಲಿದಾನಾಗೆಲ್ಲಿ ಸಂಸಾರನುತ್ತರಿಸಿ ಮುನಿ ಮೆಲ್ಲನೇ ನಡತಂದನು2 ಬಂದ ನಾರದಗೆ ಪ್ರಲ್ಹಾದ ದೇವನು ಎರಗಿ ನಿಂದು ಕಂಗಳ ಮುಗಿದು ತ್ರಾಹಿ ತ್ರಾಹಿ ಎಂದು ಇಂದು ನಿಮ್ಮಯಾ ದರುಶನಾ ಛಂದವಾಯಿತೆನಗೆತ್ತಲಿಂದ ಬಂದಿರಿ ಇತ್ತ ಬಂದ ವಿಚಾರ ಪೇಳೆಂದು ಬಿನ್ನೈಸಲು ನಂದದಲಿ ಹಾಹಾ ಎನುತಾ 3 ವೃಕೋದರನಿಂದ ನೊಂದು ದೇಹವನು ಬಿಡುವಾಗ ಬಾ ಲ್ಹಕರಾಯನಾಗಿ ಹುಟ್ಟಿದ ಪ್ರಲ್ಹಾದನು ವೈದಿಕ ಮಾರ್ಗವನ್ನೇ ಧರಿಸಿ ಉಕುತಿಯನೇ ಸಾಧಿಸಿ ಕಲಿಯೊಳಗೆ ನಿಮ್ಮ ಪೂ ಜಕನಾಗಿಪ್ಪೆನೆಂದು ತಲೆವಾಗಲು ಇಂದು ಪ್ರಕಟವಾಯಿತು ಧರೆಯೊಳು 4 ದಿಕ್ಕುಗಳಂ ಮರದು ಧಿಗಿಧಿಗಿನೆ ಚಿಗಿದಾಡುತ್ತ ಉಕ್ಕಿದವು ಕಣ್ಣಿಂದ ಅಶ್ರು ಜಲಧಾರೆ ತಾ ಮೈಮರೆದು ದೇವಕಿ ನಂದನನ ನೆನೆದು ನಕ್ಕು ಕಿಲಿಕಿಲಿ ರಾಹಸ್ಯಗಳನುಚ್ಚರಿಸುತಾ ತಕ್ರ್ಕೈಸಿ ತಿಳುಪಿದನು ಮುಂದಣಾಗಮವೆಲ್ಲ ವೃತ್ತಾಂತ ಅಕ್ಕಟ ಅದ್ಭುತವೇನೆಂಬೆ 5 ಬನ್ನೂರು ಗ್ರಾಮದಲಿ ಜನಿಸಿದನು ಭೂಸ್ವರೂಪ ಮುನ್ನಿಲ್ಲದೇ ಬೆಳೆದು ಮುನಿ ಸುಬ್ರಾಹ್ಮಣ ರನ್ನು ಪಾಲಿಸುವ ಪರಮಾನಂದವುಳ್ಳ ಬ್ರಹ್ಮಣ್ಯತೀರ್ಥರ ಕರದಿ ಚೆನ್ನಾಗಿ ಪೋಷಿಸಿಕೊಂಡು ಉಪನೀತವಾಗಿ ಸನ್ಯಾಸಿ ಪಟ್ಟವನೆ ಧರಿಸಿ ಧರ್ಮದಲಿ ಸ ವಿದ್ಯವನೋದಿ ಧನ್ಯ ಕೀರ್ತಿಯಲಿ ಮೆರೆದಾ 6 ರಾಯಗದ್ದುಗೆನೇರಿ ಅವನಿಗೆ ಬಂದ ಮಹಾ ಕುಹುಯೋಗವ ನೂಕಿ ರಾಜ್ಯದೊಳಗೆ ಇದ್ದ ಸುವರ್ಣ ಛಾಯದಂತೆ ಕಾಂತಿಲೀ ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆ ಎಂಬ ಸ್ಥಾಯವಾದರು ಪೊಂಪದಿ7 ಯಂತ್ರೋದ್ಧಾರಕನ ಪ್ರತಿಷ್ಠಿಸಿ ವಿಜಯೀಂದ್ರ ಸಂತ ವಾದಿರಾಜಗೊಲಿದು ಪುರಂದರ ಮಂತ್ರ ಸಿದ್ಧಿಯನೆ ಕೊಟ್ಟು ಭ್ರಾಂತಗೊಳಿಸುವ ಮಹಾ ಅನ್ಯಾಯ ಮತವೆಂಬ ಕಾಂತಾರ ಪಾವಕನೆ ವ್ಯಾಸಾಬ್ಧಿಯನು ಬಿಗಿದು ಚಿಂತಿತಾ ಫಲದಾಯಕ 8 ಮಧ್ವಮತವೆಂಬ ದುಗ್ಧಾಬ್ಧಿಗೆ ಪೂರ್ಣೇಂದು ಹೃದ್ವನಜದೊಳಗಿರಿಸಿ ಕೃಷ್ಣನ ಪದಾಂಬುಜವ ಚಿದ್ವಾತ್ಯದಲಿ ನಿಲಿಸಿ ಕಾವ್ಯದಲಿ ಕೊಂಡಾಡಿ ಸದ್ವೀರ ವೈಷ್ಣವರಿಗೆ ಪದ್ಧತಿಯನು ಪೇಳಿ ತವಕದಿಂದಲಿ ತಾವು ಸದ್ವೈಷ್ಣವ ಲೋಕ ಸಿರಿಮರಳೈದಿದರು ಪಾದದ್ವಯವ ಭಜಿಸುವವರೂ ಕೇಳಿ 9
--------------
ವಿಜಯದಾಸ
ವ್ಯಾಸರಾಯರು ಗೋಪಾಲಕೃಷ್ಣನ ಭಕ್ತಿಯಿಂದಲಿ ಭಜಿಸುವ ನಮ್ಮ ಗುರು ವ್ಯಾಸಮುನಿರಾಯ ಪ. ಹೇಸಿ ವಿಷಯಗಳಿಗೆ ಮೋಸ ಹೋದೆನು ನಾನು ಭಿಲಾಷೆಗಳ ಪೂರೈಸೊ ಅ.ಪ. ಹಿಂದೇಳ ಜನ್ಮಗಳು ಬಂದು ಪೋದವಯ್ಯಾ ಇಂದು ವಸುಧಿಯೊಳಗೆ ಬಂದೆನಯ್ಯಾ ಭವದೊಳಗೆ ನೊಂದೆನಯ್ಯಾ ಬಹಳ ಬೆಂದೆನಯ್ಯ ಅಘಕೂಪದೊಳು ಬಿದ್ದೆನಯ್ಯ ಉದ್ಧರಿಸು ಜೀಯ್ಯಾ 1 ವಂದಿಸುವೆನು ನಿಮಗೆ ನವವೃಂದ ವನದಲಿ ಇರುವೋರು ಇಂದಿರೇಶನ ನೋಡುವೋರು ಆನಂದಪಡುವೋರು ಸಿಂಧುಶಯನ ತಂದು ತೋರಿಸೋ ಇಂದು ನಿಮ್ಮಯ ಪಾದವೊಂದೆ ಭಜಿಪೆ ತಂದೆ ಮಾಡೆಲೊ ಸತ್ಕøಪೆ 2 ಯೆಷ್ಟು ಜನುಮದ ಪುಣ್ಯ ಫಲಿಸಿತು ಎನಗೆ ವೈಷ್ಣವಾ ಜನ್ಮ ದೊರಕಿತು ಕೊನೆಗೆ ದುಷ್ಟ ಸಂಗವಾ ದೂರದಿ ಮಾಡಯ್ಯ ಶಿಷ್ಟ ಜನ ಸಂಗದೊಳಗೆನ್ನಿಡಯ್ಯಾ ಅಭೀಷ್ಟಗಳ ನೀಡಯ್ಯ ಕಾಳಿಮರ್ಧನ ಕೃಷ್ಣನ ತೋರಿಸಯಾ ಪಾಲಿಸಯ್ಯಾ 3
--------------
ಕಳಸದ ಸುಂದರಮ್ಮ
ವ್ಯಾಸಾರ್ಯಾ - ವ್ಯಾಸಾರ್ಯ ಪ ದೈಶಿಕಾರ್ಯ ಬ್ರಹ್ಮಣ್ಯರ ಕರಜನೆ ಅ.ಪ. ಭವ ಪರಿಹರಿಸುವೆ 1 ಭೀಕರವೆನೆ ನೃಪ | ಗಾಕುಹುಯೋಗವತಾಕುವ ಮುನ್ನವೆ | ನೀ ಕಳೆದೆಯೊ ಗುರು 2 ಪನ್ನಗ ನಗಪ ಪ್ರಪನ್ನ ಭಜಕ ನಿನ | ಗಿನ್ನುಂಟೇ ಸಮ 3 ಮಂದ ಜನರೋದ್ಧರ | ವೆಂದು ರಚಿಸಿದೇಚಂದ್ರಿಕಾದಿ ತ್ರಯ | ಸುಂದರ ಗ್ರಂಥ 4 ವ್ಯಾಸ ತ್ರಯಾಭಿಧ | ಲೇಸು ಗ್ರಂಥ ಸಂಕಾಶಿಸೆ ಬಹು ವಿಧ | ಆಸುರಿ ಮತ ಹನ5 ದಾಸ ಪಂಥ ಉಪ | ದೇಶಿಸೆ ಶ್ರೀನಿವಾಸ ನಾಯಕರ | ದಾಸರೆಂದೆನಿಸಿದೆ 6 ವಾಸವ ನಾಮಕ | ದಾಸರಿಂದ ದಿಗ್ದೇಶ ಪ್ರಸರ ಮಹಿ | ದಾಸನ ನಾಮವು 7 ಶ್ವಸನನ ಮತ ವಿ | ದ್ವೇಷಿವಾದ ಹರದೇಶ ದೇಶ ಹನು | ಮೇಶ ಪ್ರತಿಷ್ಠಿತ 8 ಸಾರ್ವ ಭೌಮ ಗುರು | ಗೋವಿಂದ ವಿಠಲನತೋರ್ವುದೆನ್ನ ಹೃದ | ಯಾ ಕಾಶದಲಿ 9
--------------
ಗುರುಗೋವಿಂದವಿಠಲರು
ಶಂಕರ ಕೃಪಾಸಾಗರ ಶಿವ ಮೃಗಾಂಕಾ ಶಶಿಶೇಖರಾ ಪ ಕಿಂಕರರಿಗೆ ಬಂದ ಸಂಕಟವ ಬಿಡಿಸುವ ಅ.ಪ ಭವ ರೋಗಗಳ ಕಳೆವ ಭೋಗ ನಂಜುಂಡದೇವ 1 ಕಂದರ್ಪ ಸಂಹಾರನೆ 2 ಸಂಗರಹಿತ ಭಸಿತಾಂಗಲೇಪಿತ ಶಿವ 3 ಗರಳಪುರದಿ ನೆಲೆಸಿರುವ ಶ್ರೀಕಂಠೇಶ ಶರಣಾಗತರ ಸುರತರುವೆ ಮದ್ಗುರುವೆ | ಶಿವ 4 ಲಕ್ಷ್ಮೀಶನಾದ ಗುರುರಾಮವಿಠಲನ ಸಖ5
--------------
ಗುರುರಾಮವಿಠಲ
ಶಂಕರ ಗಂಡನ ಹಾಡು ಸರಸ್ವತಿಗಭಿವಂದಿಸುವೆ ಒಡೆಯನು ಎನ್ನ ಮನದೊಡೆಯ 1 ಸಂಭ್ರಮ[ದಾ] ಕೇಳಿ ಸಜ್ಜನರು 2 ವಿಶಾಲ ವಿಲಾಸ ಪಟ್ಟಣದಿ ಖಚಿತ ಮಂದಿರದಿ 3 ಮಂದಮಾರುತ ತಂಪೆÉಸೆಯೆ ಗಂಧ ಕಸ್ತೂರಿ ಕದಂಬವನೇರಿಸಿ ಆನಂದವಾಗಿದ್ದ ಮನ್ಮಥನು4 ಮಯೂರ ಪಕ್ಷಿಗಳು ನಳಿನ ನಾಭನ ಓಲಗವು 5 ನಿರ್ಭಯದಲಿನಲ್ಕಾವತಿಯು ಪಾಲಿಸುತ್ತ 6 ಮರಿಹಾವುಗಳ ನೆರೆಹುವಳು ಗೊಂಬೆಯಾಟವನೆ ಆಡುವಳು 7 ಕೂಡಿದ್ದ ಗೆಳತಿಯರ ಒಡನೆ ನೋಡಿದ ನವಯೌವನೆಯನು 8 ಕುಚವು ತೋರಿದವು ಚಿತ್ತದೊಳಗೆ ಚಿಂತಿಸುತ್ತಿದ್ದ 9 ಚೆನ್ನಿಗನು ಮನ್ಮಥನು ಉದಯಕ್ಕೆ ಕರೆತನ್ನಿರೆಂದ 10 ಬಂದು ವಿಲಾಸ ಪಟ್ಟಣದೊಳು ಮದನಗೆ ಪ್ರೀತಿಲಿ ನಿಂದು ಕೈ ಮುಗಿದರು ಹೋ ಗ್ಯೆಂದು ಶಂಕರಗಂಡ ಕಳುಹಿದ ನಿಮ್ಮನೆಗೈತಂದೆವೆನಲು 11 ಮಾತಾಡಿ ನಗುತ ಭೂ ಕೇಳಿದ ಮನ್ಮಥನ 12 ರಾಜ್ಯವು ಕ್ಷೇಮವೆನ್ನಲು ಬ್ರಹ್ಮಾನಂದದಲಿದ್ದ ಶಂಕರಗಂಡನು 13 ವಿವಾಹ ಮಾಡಲಿಚ್ಛಿಸುವೆ ಚಂದ್ರಮುಖಿಯು 14 ಸಂಭ್ರಮದಿಂದ ಕುಳಿತರು ತಂದಿಡುವರು ಮನ್ಮಥಗೆ 15 ಅಂಗಜ ಅತಿ ದೈನ್ಯ ಉಕ್ತಿಯಿಂದಲಿ ಬಹು ಮಂಗಳ ಮೃದು ವಾಕ್ಯವನ್ನು ಪ್ರ ತಂಗಿಯನೆನಗೀಹುದೆಂದ 16 ಮಲ್ಲಿಗಿಸರ ಕಬ್ಬು ಬಿಲ್ಲು ಹಿರಿಯರು ಹೇಳುವರು 17 ಒಬ್ಬಳೇ ರತಿ ನಮ್ಮ ತಂಗಿ ಹಬ್ಬ ಹುಣ್ಣಿಮೆಗೆ ಕಳಿಸದೆ ನಮ್ಮನೆಗೆ ನಿರ್ಬಂಧ ಮಾಡುವಿರೆಂದ 18 ಕಡುಮೋಹದಿಂದ ಸಾಕಿದೆನು ಕೊಡಲಾರೆ ತಂಗಿಯನೆಂದ 19 ಅವಳಿಗೆ ಸ್ವತಂತ್ರವಿಲ್ಲೇನು ನುಡಿದ ದೈನ್ಯದಲಿ 20 ಭಾಗ್ಯದಿಂದಲಿ ನೋಡಿದರು ಮದನ ನೇಮವನೆ ಮಾಡಿದರು 21 ಪ್ರತಿಬಿಂಬ[ದಂದ]ದಲಿ ಎಣಿಕೆಯಿಲ್ಲದ ಬಂಧು ಜನರ 22 ಎಲ್ಲರು ನೆರೆದು ಸಂಭ್ರಮದಿ ಮಲ್ಲಿಗೆ ಸರದಿ ಮದನರತಿದೇವಿಗೆ ಕಲ್ಯಾಣವನೆ ಮಾಡಿದರು 23 ಬಟ್ಟಲು ಗಿಂಡಿಗಳನ್ನು ಬಳುವಳಿ ತಂಗಿಗೆ ಇತ್ತ 24 ಸಾಸಿರ ಗೋವು ಗಜವು ತುರಗವು ಬ್ಯಾಸರಿಯದೆ ತಂಗಿಗಿತ್ತ ವಿಲಾಸಪಟ್ಟಣಕೆ ಕಳಿಸಿದ 25 ದಿನ ಬಾಳುತಿರಲು ತಾನೇ ಯೋಚಿಸಿದ 26 ಬಿಗಿದ ನಾಡಗಂಬಳಿಯ ನಗುವಂತೆ ಮಾಡಿ ರೂಪವನು 27 ಕುಡಗೋಲು ಕÀವಣೆಯ ಪಿಡಿದು ಮಾಡುವೆನೆನುತ 28 ರೂಢಿಯೊಳಗೆ ಅತಿಚೆಲುವ ಸತಿಗೆ ತೋರಿದನು 29 ಒಡಹುಟ್ಟಿದಣ್ಣ ತಾ ಮುನಿಯೆ ನಮಗೆ ಬೇಡವೆಂದ್ಲು 30 ಕಾರಣವ ಹೇಳದಂತೆ ದಿನÀಕರ ನಂತೆ ಹೊಳೆಯುತ ಸಭೆಯಲಿತವಕದಿಂದಲಿ ಬಂದು ಕುಳಿತು31 ಗೆಲುವಿನಿಂದ ಮಾತಾಡಲಿಲ್ಲ ಜುಲ್ಮಿಂದ ತಾನೆ ಕೇಳಿದನು 32 ನಮ್ಮನೆಯಲಿ ನಾವೀಗ ಕಳಿಸುವೋರಲ್ಲ 33 ತೌರುಮನೆಯ ಹಾರೈಸುವರು ಉಂಡು ಸಂಭ್ರಮದಿಂದ ಬಾಹೋಳೆಂದ 34 ಕರುವ ಕಾಯಿ ನಮ್ಮ ಮನೆಯ ಮರೆಯದೆ ಹೊಯ್ಸುವೆಂನೆಂದ 35 ಜೋಳವ ಕೊಂಡು ಹೋಗೆನಲು ಬೇಡೆಲವೊ ಕಾಮ ನಿನ್ನ ಐಶ್ವರ್ಯವ ಹಾಳು ಮಾಡುವೆನೊಂದÀು ಗಳಿಗೆಯಲಿ 36 ಗಮಕದಿಂದಲಿ ಬೆಳೆವೆನೆಂದು ಚಮತ್ಕಾರದಿಂದ ಮಾಯವಾದ 37 ಅಟ್ಟ ಅಡಿಗೆ ಮನೆಂiÉ
--------------
ಹೆಳವನಕಟ್ಟೆ ಗಿರಿಯಮ್ಮ
ಶಂಕರ ಗುರುವರ ಮಹದೇವ ಭವ- ಸಂಕಟ ಪರಿಹರಿಸಯ್ಯ ಶಿವ ಪ. ಸಂಕಲ್ಪ ವಿಕಲ್ಪಮನೋನಿಯಾಮಕ ಕಿಂಕರಜನಸಂಜೀವ ಅ.ಪ. ಭಾಗವತರರಸ ಭಾಗೀರಥೀಧರ ಬಾಗುವೆ ಶಿರ ಶರಣಾಗುವೆ ಹರ ಶ್ರೀ ಗೌರೀವರ ಯೋಗಿಜನೋದ್ಧರ ಸಾಗರಗುಣಗಂಭೀರ 1 ರಾಯ ಲಕ್ಷ್ಮೀನಾರಾಯಣ ಭಕ್ತಿಪ- ರಾಯಣ ತ್ರಿನಯನ ಪುರಹನ ಕಾಯಜಮಥನ ಮುನೀಂದ್ರ ಸಿದ್ಧಜನ- ಗೇಯಸ್ವರೂಪೇಶಾನ 2
--------------
ತುಪಾಕಿ ವೆಂಕಟರಮಣಾಚಾರ್ಯ
ಶಂಕರ ದೇವನಾಲಂಕಾರ ಶಯನ ಶಂಖ ನೃಪನ ಪಾಲಾ ಶಂಖಾದಿ ಸೂದನ ಶಂಕೆಯಿಲ್ಲದೆ ತಾಯಿ ಸಂಕಲೆ ಕಡಿದ ಶಶಾಂಕಕೋಟಿ ಪ್ರಭಾವ ಸಂಕರುಷಣ ದೇವ ಶಂಖಾರಿಧರನೆ 1 ಕಂಬದಿ ಬಂದಚ್ಯುತನೆ ಗೊಲ್ಲರ ಸಲಹಿದ ಗೋವರ್ಧನಧರ ಪುಲ್ಲ ಲೋಚನನೆ2 ಅಖಿಳ ಅಸುರರ ಶಕುತಿಯ ಅಪಹರಿಸಿದ ಅದಿತಿ ರುಕ್ಮಿಣಿಯೊಡನೆ ವಿಹಾರ ಸಕಲ ಸುರರೊಡೆಯ ಸಾಮಗಾಯನಲೋಲ ಶಕುಜನಕನೆ3 ಶಾಮಲ ಶರೀರ ವರ್ಣ ವಿನುತ ರೋಮ ರೋಮ ಕೂಪದಿ ಆನಂದ ಭರಿತ ದಾಮೋದರ ವಿಶ್ವದಾನಿಗಳರಸನೇ ಸಾಮಜವರದ 4 ಸನ್ನುತ ಚರಣ ಅನಿರುದ್ಧ ದೇವನೆ ಅಸುರ ಸಂಹರಣಾ ಕನಕಗರ್ಭಾದಿ ಸುರಕಟಕ ಪಾಲಕನೆ ವನಜ ಜಾಂಡವ ಪೆತ್ತ ವೈಕುಂಠ ಪುರಾಧೀಶ 5 ಫಣಿ ಫಣ ಮರ್ದನ ಪ್ರಣವ ಪ್ರತಿಪಾದ್ಯ ಪ್ರ ಸನ್ನವದನಾ ರಣರಂಗ ಭೀಮಾ ಭಕುತ ಜನ ಮೋದನಾ ಅಣು ಸ್ಥೂಲದಲಿ ಗಮನ 6 ಶ್ವೇತವಾಹನನ ಸಮರದಿ ಕಾಯಿದಾ ಅಖಿಳ ಜೀವ ಭೇದಾ ದರ ಪರಮ ಸುಮೋದಾ ಭೀತಿರಹಿತ ಕಲ್ಪಭೂಜನೆನಿಪ ಜಗನ್ನಾಥವಿಠ್ಠಲನೆ 7
--------------
ಜಗನ್ನಾಥದಾಸರು
ಶಂಕರ ಶಿವಶಂಕರ ಶಿವಶಂಕರ ಶಿವಶಂಕರ ಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ. ವ್ಯೋಮಕೇಶ ಭವಾಬ್ಧಿತಾರಕ ರಾಮನಾಮೋಪಾಸಕ ಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕ ಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜ ಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ1 ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದ ಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದ ವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲ ವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ 2 ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರ ಶೈಲರಾಜಸುತಾಧರಾಮೃತಲೋಲ ಲೋಕಧುರಂಧರ ಕರುಣಾಲವಾಲ ಮಹೇಶ್ವರ ಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ 3 ಕೃತ್ತಿವಾಸ ಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯ ದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯ ಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕ ಮೃಡ ನಮೋ„ಸ್ತು ಸುಮನನಿಯಾಮಕ 4 ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹ ಚಂಡಿಕಾಧವ ಶಿವ ದಯಾರ್ಣವ ಖಂಡಪರಶು ಸುರಾರಿಹ ಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪ ಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ 5 ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮ ಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮ ಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗ ಸದೋದಿತ ಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ 6 ಭರ್ಗ ಭಾರ್ಗವ ಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದ ನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದ ದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನ ನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ 7 ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರ ನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರ ವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತ ವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ 8
--------------
ತುಪಾಕಿ ವೆಂಕಟರಮಣಾಚಾರ್ಯ
ಶಂಕರನಂದನ ನಮೋ ನಮೋ ಕಿಂಕರಪಾಲಕ ನಮೋ ನಮೋ ಪ ಪಂಕಜಭವನುತ ನಮೋ ನಮೋ ಸಂಕಟ ಪರಿಹರ ನಮೋ ನಮೋ ಅ.ಪ ಓಂಕಾರಪ್ರಿಯ ದಿವ್ಯಶರೀರಾ ಶಂಕರ ಸುಖಕರ ಭವಪರಿಹಾರ ಅಂಕನಾಥ ಸರ್ವೇಶ ಮನೋಹರ 1 ಗಿರಿಜಾನಂದ ಕುಮಾರ ಶರಣಾಗತ ಪರಿವಾರ ವರಕೈಲಾಸ ವಿಹಾರ | ಸುರುಚಿರ ವಜ್ರಶರೀರಾ ಶರವಣಭವ ಭುಜಗೇಶ | ಕರುಣಾಕರ ಜಗದೀಶ ಹರಿಪರ್ಯಂಕ ಪರೇಶ ಮುದಗಾಂಕಿತ ಧೃತಕೋಶ 2 ಚಿಂತಾ ಜಲನಿಧಿ ಭೀಮ | ಸಂತ ಶರಣಜನ ಪ್ರೇಮ ಅಂತರ ಭಯಹರ ಜಗದಭಿರಾಮ ಸಂತಸದಾಯಕ ಮಾಂಗಿರಿಧಾಮ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶಂಕರಾ ಪೊರೆಯಯ್ಯ ನಾ ನಿನ್ನ ಕಿಂಕರ ಪ ಪಂಕಜಾಸನಕುವರ ಮನದ ಶಂಕ ನಾಶಗೈಸಿ ಶೇಷಪ ರ್ಯಂಕಶಯನನ ಪಾದ ಪಂಕಜದೇಕ ಭಕುತಿಯನಿತ್ತು ಸಲಹಯ್ಯಅ.ಪ ನಿಟಿಲನಯನ ಧೂರ್ಜಟಿಯೆ ಸೋಮಧರಾ ಜಟಾಜೂಟನೆ ಕಠಿಣವೆನ್ನಯ ಕುಟಿಲಮತಿಯ ಜಟಿಲಕಳೆದು ನಿಷ್ಕುಟಿಲ ಮನದೊಳು ವಿಠಲಮೂರ್ತಿಯ ಧೇನಿಸಲು ಹೃ ತ್ತಟದಿ ದಿಟಮನ ಕೊಟ್ಟು ರಕ್ಷಿಸಯ್ಯ 1 ಘೋರ ದುರಿತಾಪಹಾರ ತ್ರಿಪುರಹರ ಕರುಣಾಸಮುದ್ರನೆ ನಿರುತ ಶ್ರೀಹರಿಚಾರುಚರಣಸ್ಮರಣೆ ಕರುಣಿಸಿ ಪೊರೆಯೋ ಗುರುವರ ಸುರನದೀಧರ ಪಾರ್ವತೀವರ ಕರಿಗೊರಳ ಕೈಲಾಸಮಂದಿರ2 ಸರ್ಪಭೂಷಣ ಶೂಲಿ ಡಮರುಧರ ಕಂದರ್ಪಹರ ಶಿವ ಸರ್ಪಗಿರಿ ಶ್ರಿ ವೆಂಕಟೇಶಗೆ ಸರ್ವಭಕ್ತಿ ಸಮರ್ಪಿಸಯ್ಯ ಆಪತ್ತುಹರ ಸಂಪತ್ತುಕರ ಶಾರ್ವರೀಕರಧರ ಶುಭಕರ 3 ಶಂಬರಾಂತಕವೈರಿ ಭಸಿತಧರ ಬೆಂಬಿಡದೆ ಸಲಹೊ ಶಂಭು ಶಚಿಪತಿಬಿಂಬ ಗುರುವರ ಸಾಂಬ ಪೊಂಬಸುರಕುವರ ತ್ರ್ಯಂಬಕಾ ತ್ರಿಪುರಾಂತಕ ಶುಕ 4 ಗಿರೀಶ ಸುರವರ ರುಂಡಮಾಲಾಧರ ಕರಿಚರ್ಮಾಂಬರ ನಿರುತ ಹೃದಯಸದನದೊಳನ ವರತ ಉರಗಾದ್ರಿವಾಸ ವಿಠಲನ ಚರಣಸರಸಿಜಮಧುಪ- ನೀ ಸುಖ ಸವಿದು ಸೇವಿಪ ವೈಷ್ಣವಾಗ್ರಣಿ5
--------------
ಉರಗಾದ್ರಿವಾಸವಿಠಲದಾಸರು
ಶಂಕರಿ ಸರ್ವೇಶ್ವರಿ ಮೃಗಾಲಂಕಶೇಖರಿ ಜಯ ಜಯಪ. ಶಾಂಭವಿದೇವಿ ಸುರಕದಂಬಸಂಜೀವಿ ಅಂಬುಜಾಯತಾಕ್ಷಿ ಖಲಶುಂಭಮರ್ದಿನಿ1 ಬುದ್ಧಿದೇವತೆ ಸುರಸಿದ್ಧಸನ್ನುತೆ ಅದ್ರಿಜಾತೆ ರುದ್ರಪ್ರೀತೆ ಶುದ್ಧ ಭಾಗವತೆ2 ಧ್ಯೇಯರೂಪಿಣಿ ಮಹಾದೇವ ಮೋಹಿನಿ ಶ್ರೀಯಶೋದೆ ಲಕ್ಷ್ಮೀನಾರಾಯಣಭಗಿನಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶಕುನವೆ ಬಲು ಶಕುನವೆ ಸಖ ಕೃಷ್ಣನ ಮುದ್ದು ಮುಖವ ಕಾಂಬುವೆ ನೀಗ ಪ. ಹಾಲು ಮೊಸರಿನ ಕುಂಭ ಮೇಲಾದ ಘ್ರತÀ ಬೆಣ್ಣಿಸಾಲುಸಾಲಾಗಿ ಎದುರಾಗಿ ಇಂದೀವರಾಕ್ಷಿಸಾಲುಸಾಲಾಗಿ ಎದುರಾಗಿ ರಂಗನ ಕಾಲಿಗೆಶಿರವ ನೀಡುವಂತೆ ಇಂದೀವರಾಕ್ಷಿ 1 ಕೋಟಿ ಜನರು ಕೂಡಿ ತ್ವಾಟ ಪಟ್ಟಿಗಳದಾಟಿ ನೀಟಾದ ಹಂಸ ಗಿಳಿವಿಂಡುನೀಟಾದ ಹಂಸ ಗಿಳಿ ವಿಂಡು ನಡೆದವುಹಾಟಕಾಂಬರನ ದಯವಿದು ಇಂದೀವರಾಕ್ಷಿ 2 ಜತ್ತಾಗಿ ದ್ವಾರಕೆಯ ಹತ್ತಿರ ಬರುತಿರೆಮುತ್ತಿನ ಹೇರು ಇದುರಾಗಿ ಇಂದೀವರಾಕ್ಷಿಮುತ್ತಿನ ಹೇರು ಇದುರಾಗಿ ರಂಗಯ್ಯಹಸ್ತಲಾಘವ ಕೊಡುತಾನೆ ಇಂದೀವರಾಕ್ಷಿ3 ಸಾವಿರ ಅಂಗಡಿ ಸಾಲಾದ ಬಾಜಾರ ನೇರಳೆ ಹಣ್ಣು ಇದುರಾಗಿ ಇಂದೀವರಾಕ್ಷಿನೇರಳೆ ಹಣ್ಣು ಇದುರಾಗಿ ರಂಗಯ್ಯಮೇಲು ಕರುಣದಲಿ ಕರೆಸುವನು ಇಂದೀವರಾಕ್ಷಿ 4 ಹಸ್ತಿನಾಪುರದವರು ಸಪ್ತಪ್ರಾಕಾರ ದಾಟಿಮತ್ತೆ ಶ್ರೀಗಂಧ ಇದುರಾಗಿ ಇಂದೀವರಾಕ್ಷಿಮತ್ತೆ ಶ್ರೀಗಂಧ ಎದುರಾಗಿ ಬಲರಾಮಅರ್ಥಿಲೆ ಬಂದು ಕರೆವÀನು ಇಂದೀವರಾಕ್ಷಿ5 ವ್ಯಾಲಾಶಯನನ ಮನೆಯ ಏಳು ಬಾಗಿಲದಾಟಿಬಾಳೆಯ ಹಣ್ಣು ಇದುರಾಗ ಇಂದೀವರಾಕ್ಷಿಬಾಳೆಯ ಹಣ್ಣು ಇದುರಾಗ ರಂಗಯ್ಯಕೇಳೋನು ಕ್ಷೇಮ ಕುಶಲವ ಇಂದೀವರಾಕ್ಷಿ6 ನಾಗಶಯನನ ಮನೆಯ ಬಾಗಿಲು ಹೊಗಲಿಕ್ಕೆನಾಗಸಂಪಿಗೆಯ ಮುಡಿದವರು ಇಂದೀವರಾಕ್ಷಿನಾಗಸಂಪಿಗೆಯ ಮುಡಿದವರು ಬಂದರು ಈಗರಾಮೇಶನ ದರುಶನಕೆ ಇಂದೀವರಾಕ್ಷಿ 7
--------------
ಗಲಗಲಿಅವ್ವನವರು
ಶತ್ರುಗಳ ಬೇಗ ಜಯಿಸು ಪ. ಶಿಶುವಾದ ಪ್ರಲ್ಹಾದ ಪೇಳಿದ ಕ್ಷಮೆ ತಾಳಿದ ನಯನುಡಿಗಳ ಕೇಳ್ದ ನಿನ್ನ ತೋರೆಂದು ಹಾಟಕ ಬಂದ ದೈತ್ಯನ ದೇಹದಿಂದ ದೀನ ಬಂಧು ಗೋವಿಂದ 1 ಶತ್ರುಸಂಚಯ ಪಚನ ವಿಭಾವನ ದಾನವಕೂಟ ಮಥನ ಲೋಕಪಾವನ ದಯಕರ ಪಕ್ಷಿಗಮನ ಗೆಲ್ವ ಶಕ್ತಿಕೊಡುವರೆ ಬಲ್ಲನ 2 ಈ ಭೂಮಿಗತವೈರಿಜನರೆಲ್ಲಾ ಕೂಡಿಹರಲ್ಲ ಇನ್ನೂ ಹತರಾಗಲಿಲ್ಲ ನಾ ಬಲಹೀನನೆಂಬುದ ಬಲ್ಲ ಶ್ರೀಭೂನಲ್ಲ ನೀನರಿಯದುದಿ ಲಾಲಿಪರಿಲ್ಲ ಆದರು ಭಯವಿಲ್ಲ ಸೂತ ರಕ್ಷಿಸು ಜಗನ್ನಾಥ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶತ್ವ್ರಾಂತಕನು ಸುಜ್ಞಾನ ಭಕ್ತಿಯೇ ಕಾಂತೆ ಜನಕಜೆಜೀವಹನುಮನು ಸುಪಥಸುಗ್ರೀವ 1 ಸಾಧನಾತ್ಮಕಕೌಶಿಕನಮಖ ಕಾದುಸಲಹಿದವಿಘ್ನವೇದು ರ್ಮೇಧೆತಾಟಕಿದುಷ್ಟಸಂಗಸುಬಾಹುಮುಖಖಳರೂ ಸಾಧರವೆವರಯಜ್ಞಗೌತಮ ಭೂದಿವಿಜಸತಿಶಾಪಮೋಕ್ಷವೆ ಶೋಧನಿಷ್ಕøತಿತಾರ್ತಿಚಾಪವಧರ್ಮವೆನಿಸುವುದು 2 ಪರುಶುರಾಮ ಸಮಾಗಮವುವಿ ಸ್ತರಿಸಿನೋಡೆಸಮತ್ವವಿಪಿನಾಂ ತರವೆಕರ್ಮಸುವೃತ್ತಿಮುನಿಗಳು ರಾವಣನತಂಗಿ ಪರಿಕಿಸಲುದುರ್ವೃತ್ತಿಗಳುತತ್ ಪರಿಜನಖರಾದಿಗಳುಭ್ರಾಂತಿಯು ನೆರೆಕನಕಮೃಗದಶವದನನಿಂದ್ರಿಯಗಳೆನಿಸುವನು 3 ಅರುಣತನಯನುಧರ್ಮನೋಡೆ ಶ ಸುರಪಸುತದುಷ್ಕರ್ಮಚಪಲವೆಕಪಿಸಮೂಹಗಳು ಹಿರಿಯಮಗನೆಸಹಾಯವಾಸೆಯೆ ಶರಧಿಲಂಕೆಯೆದೇಹಲಂಕಿನಿಯೇದುರಭಿಮಾನ 4 ಮಣಿಯೆಜ್ಞಾಪಕಸ್ವಸ್ಥಚಿತ್ತತೆ ವನವಶೋಕವುತ್ರಿಜಟೆಕನಸೇ ಘನವೆನಿಪಸಂಸ್ಕಾರದುಷ್ಕರ್ಮಾಖ್ಯವನಭಂಗಾ ದನುಜಪತಿಸುತಮುಖರವಧೆಯೇ ಮುನಿಮತವುದುರ್ವೃತ್ತಿಪರಿಹರ ವನಜಸಂಭವನಸ್ತ್ರವೇಸನ್ಮಾರ್ಗವೆನಿಸುವುದು 5 ಮಮತೆಲಂಕೆಯದಹಿಸಿಮತ್ತೆಹ ಪಮಶರಧಿ ಬಂಧನವೆಯಾಸೆನಿರೋಧನಂತರವು ಕ್ರಮದಿಧರ್ಮವಿಭೀಷಣನಸುರ ದಮನವಿಂದ್ರಿಯಜಯವುಮಿಗೆ ಹೃ ತ್ಕಮಲವೇಸಾಕೇತಪುರವು ಸಮಾಧಿಯಭಿಷೇಕಾ 6 ವಧೆಯಗೈಸಿದಕಾಲಜ್ಞಾನದಿಲವಣ ಮುಖ್ಯರನು ವಿಧವಿಧದಯಜ್ಞಗಳವಿರಚಿಸಿ ಸದಮಲಾತ್ಮನುಸಕಲರಿಂದೈ ದಿದಸಹಸ್ರಪಾದನು ಶ್ರೀಗುರುರಾಮವಿಠ್ಠಲನು 7
--------------
ಗುರುರಾಮವಿಠಲ
ಶಂಭು ಶಂಕರನೆ ನಿನಗೊಂದಿಸಿ ಬೇಡುವೆ ಬಿಂಬದಲ್ಲಿರುವ ಮನ ಸ್ವಾಮಿಯ ತೋರೈ ಪ. ರುದ್ರ ದೇವನೆ ಮನಶುದ್ಧಿಯ ನೀ ಮಾಡಿ ಶ್ರದ್ದೆಯಿಂದಲಿ ಅನಿರುದ್ಧನ ತೋರೈ 1 ಸಿದ್ದಗುಣಗಳೊಡೆಯ ಉದ್ದರಿಸೆನ್ನ ಹದ್ದುವಾಹನ ಪ್ರದ್ಯುಮ್ನನ ತೋರೈ 2 ಶಂಕರನೇ ನಿನ್ನ ಕಿಂಕರಳನೆ ಮಾಡಿ ಮಂಕುಬುದ್ದಿಯ ಬಿಡಿಸಿ ಸಂಕರುಷಣನ ತೋರೈ 3 ವಾಸುದೇವನಿಗೆ ಶಿಶುವಿನ ಶಿಶು ನೀನಾಗಿ ಹುಸಿಯ ಮಾಡದೆ ವಾಸುದೇವನ ತೋರೈ 4 ಪಾರ್ವತಿ ಪತಿಹರ ಪಾಪವ ಕಳೆಸೆನೆಗೆ ಪಾರ್ಥನ ಸಖನ ನಾರಾಯಣನ ತೋರೈ 5 ನಂದಿವಾಹನ ನಿನಗೊಂದಿಸಿ ಬೇಡುವೆ ಬಂಧನ ಬಿಡಿಸಿ ಗೋವಿಂದನ ತೋರೈ 6 ರಮಾವಲ್ಲಭ ವಿಠಲ ನಾಮವ ಅನುಗಾಲ ನುಡಿವಂತೆ ವರಗಳ ನೀ ನೀಡೈ 7
--------------
ಕಳಸದ ಸುಂದರಮ್ಮ