ಒಟ್ಟು 859 ಕಡೆಗಳಲ್ಲಿ , 94 ದಾಸರು , 667 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ಪ. ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ಭಾರತೀಶ ಅ.ಪ. ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ 1 ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ಇಂದು ಒಲಿದೆನ್ನ ಕಾಯೊ2 ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ 3 ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮನಾಗಮ ಕಂಡು ಎರಗಿ ನಿಂದು ಪತಿ ಪಾದ ದಾಸ ಸಿದ್ಧಿಯ ಪಡೆದು ಭೂಮಿಯೊಳು ಖ್ಯಾತನಾದೆಯೊ ಆಂಜನೇಯ 4 ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸಿ ಮತ್ತೆ ಮುನಿಯಾಗಿ ಗ್ರಂಥವ ರಚಿಸಿ ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ 5
--------------
ಅಂಬಾಬಾಯಿ
ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಪ ಜಗದಂತರಂಗ ಹೋ ಹೋಅಪ ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ ಲೀಲಾ ವಿನೋದ ಸುತ್ತಿ ಪರಿಗೊಲಿದ ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ- ಕಾಮಿತಗರೆದ ಹೋ ಹೋ 1 ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ ಅಂದು ಪಡೆದ-ಮಗನಿಗೆ ನುಡಿದ ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ ಬಂದ ಪರಮಾ-ನಂದ ಹೋ ಹೋ 2 ಬರುತ ವಿಭೀಷಣ ಕಾವೇರಿ ತೀರಕೆ ಬಂದ, ಉತ್ಸಾಹದಿಂದ ಪರಮ ಪುರುಷ ಲಂಕೆಗೆ ಪೋಗದೆ ನಿಂತ-ಬಲು ಜಯವಂತ ಧರಣಿಪತಿ ಧರ್ಮವರ್ಮನ ಮಾತಿಗೆ ನಕ್ಕ-ಕೇಳಾವಾಕ್ಯ ಪೂಜೆಗೊಂಬ ಸರ್ವರ-ಬಿಂಬ ಹೋ ಹೋ 3 ಕಂಟಕ ದಶಕಂಠನ ವಂಶವ ಕೊಂದ -ಈತ ಮುಕುಂದ ಮಾಡಿಸಿಕೊಂಡ -ಬಲು ಪ್ರಚಂಡ ಜಯವೆನುತಿರಲಯೋಧ್ಯಾ-ಆಳ್ದ ಅನಾದ್ಯ ಕರುಣಾ-ಸಿಂಧು ಹೋ ಹೋ 4 ಮೂಜಗದ್ದಪ್ಪ ನಕ್ಷತ್ರೇಶ ಸರೋವರತಟ ಪುನ್ನಾಗ-ವೃಕ್ಷದಲ್ಲಿಹ ದಕ್ಷ ಅಪ್ರಾಕೃತ ಶರೀರ-ಧೃತ ಮಂದಾರ ವಾಹನ ರಾಜಾಧಿರಾಜ ಹೋ ಹೋ 5
--------------
ವಿಜಯದಾಸ
ರಂಗಪ್ಪ ಬಂದವ್ನೆ ಬಾಗ್ಲಲ್ಲಿ ನಿಂತವ್ನೆ ಸಿಂಗಾರದಿಂದವ್ನೇ ತೆಂಗಿನಕಾಯ್ಬಾಳೆಹಣ್ತಂದು ನೋಡಿರೋ ಹೊಂಗೂಳನೊತ್ತವ್ನೇ ಪ ನಾಕ್ಮಳ ನಿಂತವ್ನೆ ನೀರಲ್ಲಿ ನಿಂತವ್ನೆ ನಾಕೈಯಾ ಪಡೆದವ್ನೇ ಇಕ್ಕೆಲದಲಿ ಸಂಕುಚಕ್ರವ ಹಿಡಿದವ್ನೆ ರಾಕ್ಷಸನ್ನ ಮೆಟ್ಟವ್ನೆ1 ಗಟ್ಟಿ ಬೆನ್ನಿನ ಮ್ಯಾಗೆ ಬೆಟ್ಟವ ಹೊತ್ತವ್ನೆ ಗಟ್ಟಿ ಗದೇ ಹಿಡಿದವ್ನೇ ಮಟ್ಟಸವಾದ ನಾಕ್ಕಾಲಲ್ಲಿ ನಿಂತವ್ನೆ ಸಿಟ್ಟಿಲ್ಲ ನಗತವ್ನೇ 2 ಮೊಳದುದ್ದ ಮೂಗ್ಯ್ಮಾಲೆ ಭೂಮಿಯ ಹೊತ್ತವ್ನೇ ಬೆಳಸವ್ನೇ ಕೋರೆಹಲ್ಲಾ ತೊಳಲಿಬಳಲವನಪ್ಪ ನಮ್ಮಪ್ಪ ರಂಗಪ್ಪ ಯೆಳನಗೆ ನಗ್ತಾನೇ 3 ಮೂಡ್ತವ್ನೆ ಕಂಬ್ದಲ್ಲಿ ನರಸಿಮ್ಮನಾಗವ್ನೆ ಹಿಡಿದವ್ನೆ ದೊಡ್ರಾಕ್ಷಸ್ನಾ ದೊಡ್ದುಗ್ರಲೊಟ್ಟೆಯ ಬಗಿತವ್ನೆ ಸಿಗಿತವ್ನೆ ಕೊಡುತೀನ್ವರವನೆಂತಾನೇ 4 ಗಿಡ್ಡ ಹಾರುವನಂತೆ ಮೂರೆಜ್ಜೆ ಭೂಮಿಯನಡ್ಡಡ್ಡ ಅಳೆದವ್ನೆ ಪಾಡ್ಯದ ಹಬ್ದಲ್ಲಿ ಬಲಿಯ ಕರೆತರುತಾನೆ ಬೇಡಿದ್ದ ಕೊಡುತಾನೇ 5 ಜಯ ಜಯ ಜಯವೆಂತಾನೇ ಕೈಯಲ್ಲಿ ಹಿಡಿದವ್ನೆ ಗಂಡುಗೊಲ್ಲಿಯ ನೋಡೋ ಭಯವಿಲ್ಲ ಕೈಮುಗಿಯೋ 6 ಶಿವನ ಬಿಲ್ಮುರಿದವ್ನೆ ರಾವಣನ ತರಿದವ್ನೆ ಭೂಮಿಯೆಲ್ಲವಾಳ್ತವ್ನೆ ತವಕದಿ ನೋಡಿರೆಲ್ಲಾ 7 ಮಡುವಿಗೆ ಧುಮುಕಿ ಕಾಳಿಂಗನ ತುಳಿದವ್ನೆ ಹಿಡಿದವ್ನೆ ಹೊಂಗೊಳಲಾ ಮಾನವ ಕಡುರೂಪವಂತ ನಮ್ಮ 8 ಮತ್ತರ ಮಡದೀರ ವ್ರತವನು ಕೆಡಿಸಲು ಬೆತ್ತಲೆ ನಿಂತವ್ನೇ ಕೃತ್ತಿವಾಸನ ಕೈಯ್ಯೊಳಿಂಬಾಗಿ ನಿಂದವ್ನೆ ಉತ್ತಮ ದೇವನಮ್ಮ 9 ದುರುಳರನೊದೆಯಾಕೆ ಹೊಂಟವ್ನೇ ಪದಕಮಲಕೆ ಯೆರಗೋ 10 ಮುದ್ದು ರಂಗಪ್ಪನಿಗೆ ಪೊಂಗಲು ನೇವೇದ್ಯ ಸಿದ್ಧ ಮಾಡಿರಯ್ಯಾ ಬದ್ಧವು ಅವ ನಮ್ಮ ಕಾಯೋದು ಸಟೆಯಲ್ಲ ಎದ್ದೆದ್ದು ತಲೆಬಾಗಿರೊ 11 ರಾಮನು ಅವನೇ ಕಾಮನಪ್ಪನು ನಿಸ್ಸೀಮ ನಮ್ಮ ರಂಗನೇ ರಾಮದಾಸನ ಮನದೊಳು ಮನೆ ಮಾಡ್ಯವ್ನೇ ಪಾಮರ ವರದನೆಂಬ ಮಾಂಗಿರಿ 12
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಥವೇರಿ ಬರುತಿಹ ಗುರುವರನ್ಯಾರೆ ಪೇಳಮ್ಮಯ್ಯಾ ಪ ಟೀಕಾಕೃಧ್ಯ ತಿವರನಮ್ಮ ಅ.ಪ ಸ್ವೀಕರಿಸಿ ಮಾರುತನವತರಿಸಿ ಶೃತಿಸಮ್ಮತ ಶ್ರೀಮಧ್ಭಾಷ್ಯವತಾರಚಿಸಿ ಛಾತ್ರರಿಗೆ ವಿವರಿಸೆ ಕೇಳುತಲನುದಿನದಿ ಮಹಿಮ ಸುರಪತಿಯು ಕಾಣಮ್ಮ 1 ದೇಶಪಾಂಡ್ಯರಕುವರ ಕೇಳಲು ಗುರುವಚನ ಸಂಸಾರ ಸುಖವನ ಜಯ ತೀರಥರಮ್ಮ 2 ಸ್ಥಾಪಿಸಿದರು ಮುದದಿ ಶುದ್ಧಮಾಯಿ ಸುಭಟಧ್ವಜನಿಯ ಓಡಿಸಿದ ವಾಕ್ಸಾಯಕದಿಂದ ಮಧ್ವರಾಜಕೃತ ಸದ್ಗ್ರಂಥಗಳ ವಿಸ್ತಾರ ಮಾಡಿದ ಯತಿಧೀರಾ ಗೆಲಿದ ಪ್ರಸಿದ್ಧ ಕಾಣಮ್ಮ 3 ಚಾಮೀಕರಕೃತ ಚಾಮರ ಛತ್ರಗಳಿಂದ ಸೇವಿಪದ್ವಿಜರಿಂದ ಶ್ರವಣಕೆ ಪೀಯೂಷ ಭವಬಾಧೆ ಬಿಡಿಸಿದ ಶ್ರೀಮಳಖೇಡ ಸುಧಾಮ ಕಣಮ್ಮ4 ತೋಷಿತ ಬುಧನಿಕರ ಪಾವನತರಚರಿಯ ಶರಣುಜನಕೆ ಸುರತರುವೆನಿಸಿದ ಜಯರಾಯಾ ವಿದ್ವಜ್ಜನಗೇಯಾ ಧರೆಯೊಳು ಸಿರಿಕಾರ್ಪರ ನರಸಿಂಹನೆ ಪರನೆಂದರುಹಿದ ಗುರುವರನಮ್ಮ5
--------------
ಕಾರ್ಪರ ನರಹರಿದಾಸರು
ರಾಜರ ನೋಡಿದಿರಾ _ ಗುರು _ ರಾಜರ ನೊಡಿದಿರಾ ಪ ರಾಜರ ನೊಡಿ _ ಭಕುತಿಯ ಮಾಡಿ ಗೋಜನ ಕರುಣಕೆ _ ಭಾಜನ ರಾದೀರಾ ಅ.ಪ. ತುಂಗ ಮಹಿಮರು _ ನರ - ಸಿಂಗ ಭಕ್ತರು ಭಂಗರಹಿತರು _ ಸುರ _ ಸಂಘ ಮಾನಿತರು 1 ಯೋಗಿ ವರ್ಯರು _ ಬಹು _ ತ್ಯಾಗಶೀಲರು ಭವ _ ರೋಗ ವೈದ್ಯರು 2 ತಂತ್ರ ಮಲ್ಲರು _ ಬಹು _ ಗ್ರಂಥಕರ್ತೃಗಳು ಮಂತ್ರ ಸಿದ್ಧರು _ ಮ _ ಹಂತ ಮಠದವರು 3 ಶಾಂತ ಮೂರ್ತಿಗಳು _ ವೇ _ ದಾಂತ ಬಲ್ಲವರು ದಾಂತ ಶೇಖರರು _ ಏ _ ಕಾಂತ ಭಕ್ತರು 4 ರಾಘವೇಂದ್ರರು _ ಇವರೆ _ ವ್ಯಾಸರಾಜರು ಭಾಗ್ಯವಂತರು _ ಪ್ರ _ ಹ್ಲಾದರಾಜರು 5 ದೂಡು ಸಂಶಯಾ ನೀ _ ಮಾಡು ಭಕುತಿಯಾ ಬೇಡು ಬಯಕೆಯಾ ಪೋ _ ಗಾಡು ದುಃಖವಾ 6 ಸೃಷ್ಠಿ ನಾಯಕಾ _ ಶ್ರೀ _ ಕೃಷ್ಣವಿಠಲನ ಶ್ರೇಷ್ಠ ಭಕ್ತರೂ _ ಸಂ-ತುಷ್ಠಿ ನೀಡುವರು 7
--------------
ಕೃಷ್ಣವಿಠಲದಾಸರು
ರಾಜೋಪಚಾರರಾಜೋಪಚಾರರಾಜೀವನೇತ್ರ ನೀನವಧರಿಸು ಬೇಗ ಪಸಾವಿರದ ದಳವುಳ್ಳ ಕಮಲವೊಂದಕೆ ಶಕ್ತಿಸಾವಿರದ ಮೌಕ್ತಿಕದ ಸರಗಳೊಪ್ಪಿಹವುಕಾವಿಹುದು ಸಕಲ ದೇವಾತ್ಮಕದ ಶಾರದೆಯುನಾ ವಹಿಸಿ ತುರಿಯ ಕಲಶದ ಛತ್ರವೆಂದೆಂಬ 1ಆವಗವು ಸತ್ವಾದಿ ಗುಣಗಳಿಂದೊಪ್ಪಿರುವಆವರಣ ವಿಕ್ಷೇಪ ಶಕ್ತಿಯೆಂಬೆರಡುದೇವ ನಿನ್ನುಭಯ ಪಾಶ್ರ್ವದಲೊಲವುತಿಹ ಸರ್ವಭಾವದಿಂದುಭಯ ಚಾಮರವೆರಡರಿಂದ 2ಗಂಧರ್ವ ನಗರದಿಂದೈತಂದ ನಾರಿಯರುಛಂದದಿಂ ನರ್ತಿಸುತಲಿಹರೈವರಿವರುಒಂದಾಗಿ ಬಳಿಕಿವರ ಹೊಂದಿ ಮತ್ತೈವರಿರೆಹಿಂದೆ ನಾಲ್ವರುವೆರಸಿ ನಲಿವ ನರ್ತನವೆಂಬ 3ಪರವೆಂದು ನಾಭಿಯಲಿ ಪಶ್ಯಂತಿ ಹೃದಯದಲಿಸ್ವರವಿಹುದು ಕಂಠದಲಿ ಮಧ್ಯಮಾಖ್ಯೆಯಲಿಸ್ಫುರಿಸಿ ಮುಖಕಮಲದಲಿ ವೇದಶಾಸ್ತ್ರಗಳಾಗಿಮೆರೆವ ವೈಖರಿಯೆಂಬ ಗೀತವಿದ ಕೇಳು 4ತಾಳ ಮರ್ದಳೆ ಘಂಟೆ ಭೇರಿ ಶಂಖಗಳಿಂದಮೇಲಾದ ವೀಣೆ ವೇಣುಗಳ ರವದಿಂದಲಾಲಿಸುವ ಛಿಣಿ ಛಿಣೀ ಛಿಣಿಗಳೆಂಬವರಿಂದನೀಲ ಮೇಘಧ್ವಾನ ದಶನಾದದಿಂದ 5ಪರಿಪರಿಯ ಗತಿಯುಳ್ಳ ಚಿತ್ತವೆಂಬಶ್ವವನುವರ ಸತ್ವ ಗುಣವೆಂಬ ಹಲ್ಲಣವ ಬಿಗಿದುನಿರತ ಪರಮಾತ್ಮನೀಕ್ಷಣದ ಕಡಿವಾಣವನುಪಿರಿದಾಗಿಯಳವಡಿಸಿ ಮುಂದೆ ನಿಂದಿಹುದಾಗಿ 6ಒಲವುತಿಹ ಸುಖ ದುಃಖವೆರಡು ಘಂಟೆಗಳಿಂದನೆಲನ ಸೋಕುವ ಕಾಮ ಸುಂಡಿಲದರಿಂದಫಲ ಚತುಷ್ಟಯ ಪಾದ ಮೇಲು ಮಂಟಪದಿಂದಬಲುಮೆಯಹ ಮೂಲ ಕಾರಣವೆಂಬ ಗಜವು 7ಹಿಂದೆಮುಂದರುವರೊಂದಾಗಿ ವಹಿಸಿರಲದಕೆಹೊಂದಿಸಿದ ಚೌಕಿ ಮನವೆಂಬುದದರಲ್ಲಿಮಂದ ಮೃದು ಬಹು ವಿಷಯ ಸುಖದ ಹಾಸಿಕೆ ಹಾಸಿದಂದಳವಿದನುಭವದ ಕೊಂಬಿನಿಂದೊಪ್ಪಿರುವ 8ಆರು ನೆಲೆಯುಳ್ಳ ರಥವದಕೆ ಶಕ್ತಿಗಳೆಂಬಮೂರು ಕಲಶಗಳಲ್ಲಿ ನಾಲ್ಕು ಸತ್ತಿಗೆಯುಮೂರವಸ್ಥೆಗಳದರ ತುರಿಯವೆಂಬುದೆ ನಾಲ್ಕುಮೂರುಲೋಕವನಾಳ್ವ ಮಹಿಮ ನೀ ಪ್ರತಿಗ್ರಹಿಸು 9ನುಡಿವುದೆಲ್ಲವು ವೇದ ನಡೆವುದೆಲ್ಲವು ಶಾಸ್ತ್ರಬಿಡದೆ ನಿನ್ನಾಜ್ಞೆಯೊಳಗಿರೆ ಪುರಾಣದೃಢವಾಗಿ ನಿನ್ನ ಭಜನೆಯ ಮಾಳ್ಪ ದಿವಸವದುಕಡುಪುಣ್ಯವಾದ ಪಂಚಾಂಗವೆನಿಸುವದು 10ಉದಯದಲಿ ನಿನ್ನ ಸ್ಮರಣೆಯ ಮಾಡೆ ಪುಣ್ಯತಿಥಿಒದಗಿಸುವ ಸತ್ಕರ್ಮ ವಾರವೆನಿಸುವದುಅದರಲ್ಲಿಯನುಭವವೆ ನಕ್ಷತ್ರ ನಿನ್ನಲ್ಲಿಹುದುಗೆ ಜೀವನು ಯೋಗ ಹುದುಗುವದೆ ಕರಣ 11ಸಕಲ ವೇದಂಗಳಲಿ ಪ್ರತಿಪಾದಿಸಿದ ಫಲವುವಿಕಳವಿಲ್ಲದೆ ನಿನ್ನ ನಿಮಿಷ ಧ್ಯಾನಿಸಲುಸಕಲ ತೀರ್ಥಸ್ನಾನ ದಾನ ಜಪ ತಪ ಯಜ್ಞಸಕಲವೂ ಬಹುದೆಂಬ ಸರ್ವೋಪಚಾರ 12ಸುರ ಸಿದ್ಧ ಮುನಿವೃಂದ ನಿರತ ಸೇವಿತ ಚರಣಶರಣಾಗತೋದ್ದರಣ ಶರಧಿಜಾರಮಣತಿರುಪತಿಯ ಸ್ಥಿರವಾಸ ನಿರುಪಮ ಮಹಾಕರುಣಮರೆಯೊಕ್ಕೆ ಸಲಹೆನ್ನ ಪ್ರಾಣ ವೆಂಕಟರಮಣ 13ಓಂ ಜುನೇ ನಮಃ
--------------
ತಿಮ್ಮಪ್ಪದಾಸರು
ರಾಮ ಜಾನಕೀರಮಣ ರಾಜೀವದಳನಯನ ಧಾಮ ನಿಧಿವಂಶ ಸೋಮನಿಗೆ ಪ ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ ಪದುಮನಾಭನು ಬಂದು ಕುಳಿತನು ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ ಪದುಮ ಸಾಧನೆ ಲಕುಮಿ ಒಪ್ಪಿದಳು. 1 ವಾರುಣಿ ಗಿರಿಜೆ ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ 2 ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಹೆಣ್ಣುಗಳ ಮಧ್ಯೆ ಇಳಿಸಿದರು3 ತಂದೆ ತಾತನ ಬಳಿಯ ಮಂದಾಕಿನಿ ವಾಗ್ವಿಯ- ರೊಂದಾಗಿ ಒಡಗೂಡಿ ರಂಗಯ್ಯನ ಕೈಗೆ ಒಂದಾಗಿ ಒಡಗೂಡಿ ರಂಗಯ್ಯನ ಕೈಯೊಳಗೆ ತಂದು ಅರಿಶಿಣ ಎಣ್ಣೆ ಗಂಧವಿತ್ತು4 ತಡಮಾಡಲಾಗದು ಕಡಲಶಯನ ನಿಮ್ಮ ಮಡದಿಯಂಗಕ್ಕೆ ತೊಡೆವುದೆನಲು ಮಡದಿಯಂಗಕ್ಕೆ ತೊಡೆವುದು ಎನಲಾಗಿ ಕಡು ಹರುಷದಿ ಸತಿಯಳ ನೋಡಿದನು 5 ಎನ್ನರಸಿ ಹೊನ್ನರಸಿ ಪ್ರಾಣದರಸಿ ಪಟ್ಟದರಸಿ | ಕನ್ಯೆ ಶಿರೋಮಣಿ ಪಾವನ ದೇಹಿ || ಕನ್ಯೆ ಶಿರೋಮಣಿ ಪಾವನ ದೇಹಳೆ ನಿನ್ನ | ಕನ್ನಡಿ ಮುಖವ ತೋರರಿಷಿಣವ ನಾ ಹಚ್ಚುವೆ 6 ತಂದೆ ನಂದನರಿಗೆ ಬಂಧು ಬಳಗ ಸುತ್ತ | ಹೊಂದಿದ ಜನರಿಗೆ ಹಲವರಿಗೆ || ಹೊಂದಿದ ಜನರಿಗೆ ಹಲವರಿಗೆ ಕದನ | ತಂದು ಹಾಕುವಳೆಂದು ಹಚ್ಚಿದನು 7 ತೂಗಿಸಿಕೊಂಬುವಳೆ ದೌತ್ಯಕ್ಕೆ ಸಲ್ಲುವಳೆ | ಬಾಗಿಲ ಕಾಯಿಸುವಳೆ ಬಲ್ಲಿದರ || ಬಾಗಿಲಕಾಯಿಸುವಳೆ ಬಲ್ಲಿದರನು ಬಿಡದೆ | ಸಾಗರನ ಮಗಳು ಎಂದು ತೊಡೆದನು 8 ಇಂದಿರಾದೇವಿ ಬಾ ಮಂದಿರಾಂಬುಜ ರಾಮ | ಸುಂದರ ಶ್ರೀವಾರಿ ಮಂಗಳಗಾತ್ರೆ || ಸುಂದರ ಶ್ರೀನಾರಿ ಮಂಗಳಗಾತ್ರೆ ಯೆಂದು | ಅಂಗಜ ಜನಕನು ನಗುತಲಿದ್ದ 9 ರಮಣಿಯ ದೇಹಕ್ಕೆ ಕಮಲನಾಭನು ಎದ್ದು | ವಿಮಲಕಸ್ತೂರಿ ಗಂಧವರಿಷಿಣ ಎಣ್ಣೆ || ವಿಮಲ ಕಸ್ತೂರಿ ಗಂಧವರಿಷಿಣ ಎಣ್ಣೆಯ | ಕ್ರಮದಿಂದ ಲೇಪಿಸಿ ಊಟಣಿಸಾರಿ 10 ಸಾಕಾರಗುಣವಂತಿ ತ್ರಿಲೋಕದ ಜನನಿ | ನಾಕಜವಂದಿತಳೆ ನಾಗಗಮನೆ || ನಾಕಜವಂದಿತಳೆ ನಾಗಗಮನೆ ಏಳೂ | ಶ್ರೀಕಾಂತನ ಸೇವೆಯ ಮಾಡೆಂದರು 11 ಅಂದ ಮಾತನು ಕೇಳಿ ಗಂಧ ಅರಷಿಣ ಕೊಂಡು | ನಿಂದು ಸಮ್ಮುಖದಲ್ಲಿ ರಂಗನ ನೋಡಿ | ನಿಂದು ಸಮ್ಮುಖದಲ್ಲಿ ರಂಗನ ನೋಡಿ ಹಿಗ್ಗಿ | ಚಂದ್ರವದನೆ ಪತಿಗೆ ಹಚ್ಚಿದಳು 12 ಗೋವಳರ ಎಂಜಲು ಆವಾಗ ತಿಂದವನೆ | ಮಾವನ್ನ ಕೊಂದವನೆ ಮಾಯಾಕಾರ || ಮಾವನ್ನ ಕೊಂದವನೆ ಮಾಯಾಕಾರನೆ ನಿನ್ನ | ಸೇವೆಗೆ ಶಕ್ತಳೆನುತ ಹಚ್ಚಿದಳು 13 ಬೆಣ್ಣೆ ಮೊಸರು ಕದ್ದು ಹೆಣ್ಣುಗಳ ಕೆಡಿಸಿ | ಮುನ್ನೆ ತೊತ್ತಿನ ಮಗನ ಮನಿಯ ಉಂಡ || ಮುನ್ನೆ ತೊತ್ತಿನ ಮಗನ ಮನಿಯಲುಂಡ ಹಿಂದೆ | ಹೆಣ್ಣಾಗಿ ಇದ್ದವನೆಂದು ಹಚ್ಚಿದಳು 14 ಎನ್ನರಸ ಚೆನ್ನರಸ ಪ್ರಾಣದರಸ ಪಟ್ಟಣದರಸ | ಭಿನ್ನವಖಿಳ ಜೀವಕ್ಕೆನ್ನ ಒಡೆಯ || ಭಿನ್ನವಖಿಳ ಜೀವಕ್ಕೆನ್ನ ಒಡೆಯ ಸಲಹಿಂದು | ಚೆನ್ನಾಗಿ ಅರಿಷಿಣ ಗಂಧ ಹಚ್ಚಿದಳು 15 ನಿತ್ಯ ಕಲ್ಯಾಣ ಪುರುಷೋತ್ತಮ ಸರ್ವೇಶ | ಸತ್ಯಸಂಕಲ್ಪ ಸಿದ್ಧ ಅಪ್ರಮೇಯಾ || ಸತ್ಯಸಂಕಲ್ಪ ಸಿದ್ಧ ಅಪ್ರಮೇಯನೆಂದು | ಮಿತ್ರೆ ಸರ್ವಾಂಗಕ್ಕೆ ಹಚ್ಚಿದಳು 16 ದೇವಿ ದೇವೇಶಗೆ ಈ ಉರುಟಣೆಯಿಲ್ಲ | ಆವಾವ ಬಗೆ ಎಲ್ಲ ತೋರಿಸುತ್ತ || ಆವಾವ ಬಗೆ ಎಲ್ಲ ತೋರಿ ವಧು-ವರಗಳಿಗೆ | ಹೂವು ಬಾಸಿಂಗವ ರಚಿಸಿದರು17 ಅಸುರ ವಿರೋಧಿ ವಸುದೇವನಂದನ | ಪಶುಪತಿ ರಕ್ಷಕ ಪರಮ ಪುರುಷ || ಪಶುಪತಿ ರಕ್ಷಕ ಪರಮ ಪುರುಷ ಎಂದು | ಹಸನಾಗಿ ಲೇಪಿಸಿ ಇತ್ತ ಜನರ 18 ಶೃಂಗಾರವಂತೇರು ರಂಗ ಶ್ರೀಲಕುಮಿಗೆ | ಮಂಗಳಾರತಿ ಎತ್ತಿ ಹರಸಿದರು || ಮಂಗಳಾರತಿ ಎತ್ತಿ ಹರಸಿ ದೇವರಮನೆಗೆ | ಅಂಗನೆಯಳ ಸಹಿತ ನಡೆಯೆಂದರಾಗ 17 ಎತ್ತಿಕೊಂಡನು ರಂಗ ಚಿತ್ತದ ವಲ್ಲಭೆಯ | ಮತ್ತೆ ಸುಗಂಧಿಯರು ಹೊಸ್ತಿಲೊಳಗೆ || ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ನಿಂದು | ಪತ್ನಿಯ ಹೆಸರು ಪೇಳೆಂದರು ಆಗ 20 ಬೇಗ ಮಾರ್ಗವ ಸಾರಿ ತೂಗಲಾರನು ಇವಳ | ಸಾಗಿ ಪೋಗುವನೆಂದು ಪೇಳುತಿರಲು || ಸಾಗಿ ಪೋಗುವನೆಂದು ಪೇಳುತಿರಲು ಸ್ತ್ರೀ ಕೂಟ | ತೂಗವದೆಂತು ನಾಳೆ ನುಡಿಯೆಂದರು 21 ನಕ್ಕು ಸಂತೋಷದಲಿ ರುಕ್ಮಿಣಿ ಎಂದನು | ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ || ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ಎನಲು | ಚಕ್ರಪಾಣಿ ಎಂದು ಪೇಳಿದಳು ಲಕುಮಿ 22 ಗಂಡ ಹೆಂಡತಿ ಪೋಗಿ ದಂಡ ಪ್ರಣಾಮಮಾಡಿ | ಮಂಡಲದ ಚರಿತೆ ತೋರಿದರು ಆಗ || ಮಂಡಲದ ಚರಿತೆ ತೋರಿ ವಧು-ವರಗಳಿಗೆ | ಕಂಡವರಿಗೆ ಮದುವೆಯೆನಿಸಿದರು 23 ದಂಪತಿಗಳು ಒಲಿದು ಇಂಪಾಗಿ ಉರುಟಣಿ | ಸೊಂಪಾಗಿ ಮಾಡಿದರು ಅನೇಕವಾಗಿ || ಸಂಪತ್ತು ಕೊಡುವನು ವಿಜಯವಿಠ್ಠಲರಾಯಾ 24
--------------
ವಿಜಯದಾಸ
ರಾಮಚಂದ್ರವಿಠ್ಠಲನೆ ನೀನಿವನ ಕಾಮಿತಾರ್ಥಗಳಿತ್ತು ಕಾಪಾಡೊ ಹರಿಯೇ ಪ ಭೂಮಿಜೆಯ ರಮಣ ಸುರಸಾರ್ವಭೌಮನೆ ದೇವಪ್ರೇಮ ಈಕ್ಷಣದಿಂದ ನೋಡೊ ದಯಾಸಾಂದ್ರ ಅ.ಪ. ಗುರುದ್ವಾರವಿಲ್ಲದಲೆ | ಗರುಡವಾಹನ ಕರುಣದೊರಕಲಾರದು ಎಂಬ | ಸ್ಥಿರಮತಿಯನಿತ್ತೂಗುರುಭಕ್ತಿ ಹರಿ ಭಕ್ತಿ | ಕರುಣಿಸುತ ವೈರಾಗ್ಯಸ್ಥಿರಮಾಡಿ ಪಾಲಿಪುದು | ತರತಮದ ಜ್ಞಾನಾ 1 ಪತಿ ಪ್ರೀಯಪ್ರಾಕ್ಕುಕರ್ಮವ ಕಳೆದು ಕಾಪಾಡಬೇಕೋ 2 ಮಧ್ವಮತ ಸಿದ್ಧಾಂತ ಪದ್ಧತಿಯ ತಿಳಿಸುತ್ತಬುದ್ಧಿಪೂರ್ವಕ ನಿನ್ನ ಗುಣರೂಪ ಕ್ರಿಯೆಗಳಾಶ್ರದ್ಧೆಯಿಂದಲಿ ಭಜಿಪ ಸದ್ಬುದ್ಧಿ ಪಾಲಿಸುತಮಧ್ವೇಶ ಇವನ ಹೃನ್ಮಧ್ಯದಲಿ ಪೊಳೆಯೋ 3 ಶರ್ವಾದಿ ದಿವಿಜೇಡ್ಯ ದುರ್ವಿಭಾವ್ಯನೆ ದೇವಸರ್ವತ್ರ ಸರ್ವದಾ ತವಸ್ಮøತಿಯನಿತ್ತೂನಿರ್ವಿಘ್ನತೆಯಲಿವನ ಸಾಧನವ ಪೂರೈಸಿಅಸ್ವತಂತ್ರನ ಬಂಧ ಪರಿಹರಿಸಿ ಕಾಯೋ 4 ಭಕ್ತವತ್ಸಲನೆಂಬೊ ಬಿರಿದುಳ್ಳ ಶ್ರೀಹರಿಯೆಭೃತ್ಯನಿಗೆ ಬಪ್ಪ ಅಪಮೃತ್ಯು ಪರಿಹರಿಸೀಸತ್ಯ ಗುರು ಗೋವಿಂದ ವಿಠ್ಠಲನೆ ನೀನಿವಗೆನಿತ್ಯಾಯು ಪ್ರದನಾಗು ಎಂದು ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ರಾಮತಾರಕ ಮಂತ್ರ ಜಪಿಸಿ | ಸರ್ವಕಾಮಗಳ ಪಡೆದವನೆ ನಮಿಸಿ | ಬೇಡ್ವೆಕಾಮದುಷ್ಟಗಳ ಪರಿಹರಿಸಿ | ಹೃದ್‍ಧಾಮೆ ಹರಿ ತೋರೊ ಕರುಣಿಸೀ ಪ ಗಜ ಅಜಿನ ಧರಿಸಿ | ಮತ್ತೆಕರ್ಪರವ ಕೈಯಲ್ಲಿ ಇರಿಸಿ | ನೀನುಅಪವಿತ್ರ ಅಶಿವ ನೆಂದೆನಿಸೀ | ವರಮಸಫಲ ಶಿವ ಅಮಂಗಳವ ಹರಿಸೀ 1 ಪರಮ ಸದ್ಭಾಗವತ ಮೂರ್ತೇ | ಲಕ್ಷ್ಮೀನರಹರಿಯ ಆಣತಿಯ ಪೊತ್ತೇ | ವಿಷಯನಿರತರನು ಹರಿವಿಮುಖ ಶಕ್ತೆ | ಕಾಯೊಹರ ಸದಾಶಿವ ಭಾವ ಮೂರ್ತೇ 2 ತಪದಿಂದ ಹರಿಯೊಲಿಸೆ ನೀನು | ಹತ್ತುಕಲ್ಪ ಲವಣಾಂಭುದಿಯಲಿನ್ನು | ಗೈದೆತಪ ಉಗ್ರದಲಿ ಪೇಳ್ವುದೇನು | ನೀನು`ತಪ` ನೆಂದು ಕರೆಸಿದೆಯೊ ಇನ್ನು 3 ಶುಕಿಯಾಗಿ ಬಂದ ಅಪ್ಸರೆಯ | ಕೂಡ್ಡಅಕಳಂಕ ವ್ಯಾಸಾತ್ಮ ಧೊರೆಯ | ಮಗನುಶುಕನಾದೆ ಶಿವನೆ ಇದು ಖರೆಯ | ನುತಿಪೆಪ್ರಕಟ ಭಾಗವತಕ್ಕೆ ಧೊರೆಯ 4 ಮಾರುತನು ನಿನ್ನೊಳಗೆ ನೆಲಿಸಿ | ಗೋಪ್ಯದೂರೆಂಬ ನಾಮವನೆ ಧರಿಸಿ | ಇರಲುದೂರ್ವಾಸನೆಂಬ ಕರೆಸಿ | ಮೆರೆವಭೂ ಭೃತರ ಮಾನವನೆ ಕೆಡಿಸಿ 5 ಪತಿ ಸಂಗ ರಹಿತೆ | ಎನಿಸೆಭಾರತಿಯ ದೇಹದಲಿ ಜಾತೆ | ಇರಲುಪ್ರಾರಬ್ಧ ಭೋಗಿಸುವ ಮಾತೆ | ಎನಿಸಿವೀರ ಅಶ್ವತ್ಥಾಮ ಕೃಪೆ ಜಾತೆ 6 ಧಾಮ ಈಶಾನ್ಯದಲಿ ಇದ್ದು | ನಿನ್ನವಾಮದಲಿ ವಾಸುದೇವಿದ್ದು | ನೀನುವಾಮದೇವನ ಪೆಸರು ಪೊದ್ದು | ಧರಿಪೆಸ್ವಾಮಿ ಪೂಜಕನೆಂಬ ಮದ್ದು 7 ಕಾಲಾತ್ಮ ನಿನ್ನೊಳಗೆ ನೆಲಸಿ | ಪ್ರಳಯಕಾಲದಲಿ ಜಗವ ಸಂಹರಿಸಿ | ನಿನ್ನಕಾಲಾಖ್ಯ ನೆಂತೆಂದು ಕರೆಸಿ | ಮೆರೆವಲೀಲಾತ್ಮ ನರಹರಿಯು ಎನಿಸಿ 8 ಶಫರ ಹರಿದ್ವೇಷಿಗಳು ಎನಿಪ | ದೈತ್ಯತ್ರಿಪುರಸ್ಧರನು ಸಂಹರಿಪಾ | ಶಿವನೆವಪು ಧರಿಸಿ ಅಘೋರ ನೆನಿಪಾ | ಗೈದಅಪವರ್ಗದನ ಸೇ5ರೂಪ 9 ಹೃದ್ಯ ಹರಿಸೇವೆಂi5Àು ಗೈವಾ | ಮನದಿಬದ್ಧ ದ್ವೇಷಿಗಳೆಂದು ಕರೆವಾ | ದೈತ್ಯಕ್ರುದ್ಧರ ತಪಕೆ ಸದ್ಯ ವರವಾ | ಇತ್ತುಸಧ್ಯೋಜಾತನೆನಿಸಿ ಮೆರೆವ 10 ಹರಿಯಂಗ ಸೌಂದರ್ಯ ನೋಡಿ | ನೋಡಿಪರಮಾನಂದವನೆ ಗೂಡೀ | ಇಂಥಹರಿಪದ ದೊರಕೆ ಚಿಂತೆ ಗೂಡಿ | ಅತ್ತೆಹರುಷದಿ ಊರು ಸುತ ಪಾಡಿ 11 ಊರು ನಾಮಕ ರುದ್ರನಿಂದ | ಜಾತಕಾರಣ ಔರ್ವಭಿಧದಿಂದ | ಕರೆಸಿಉರ್ವರಿತ ರೋದನದಲಿಂದ | ಮೆರೆದೆಮಾರಾರಿ ಔರ್ವಭಿಧದಿಂದ 12 ವಿಷಯದಲಿ ಆಸಕ್ತರಾದ | ಮುಕ್ತಿವಿಷಯಕೆ ಬಹುಯೋಗ್ಯರಾದ | ಜನರವಿಷಯಾನುಕಂಪಿತನು ಆವ | ರುದ್ರಹಸನಾಗಿ ರೋದಿಸಿದಗಾಢ 13 ಕಮಲಾಕ್ಷಿ ದಕ್ಷಸುತೆ ತನ್ನ | ದೇಹವಿಮಲಯೋಗಾಗ್ನಿಯಲಿ ಭಗ್ನ | ಮಾಡಿಹಿಮದಾದ್ರಿ ಯೊಳಗೆ ಉತ್ಪನ್ನ | ವಾಗೆವಿಮಲ ಶಿವಗೊಂಡ ವ್ರತ ಕಠಿಣ 14 ಆದ್ಯಕಾಲದಲಿಂದ ಊಧ್ರ್ವ | ರೇತಬುದ್ಧಿಮಾಡುತ ತಪವು ಶುದ್ಧ | ಗೈದುಸಿದ್ಧನಾಗಿರುತಿರಲು ರುದ್ರ | ಕೇಳಿಊಧ್ರ್ವ ನೆಂಬಭಿಧಾನ ಪೊದ್ದ 15 ಕಾಮಹರ ತಪದಿಂದಲೆದ್ದು | ಬಹಳಪ್ರೇಮದಲಿ ಅದ್ರಿಸುತೆ ಮುದ್ದು | ಮಾಡಿಕಾಮಲಂಪಟನೆಂಬ ಸದ್ದು | ಗಳಿಸಿನಾಮ ಲಂಪಟ ನೆಂದು ಪೊದ್ದು 16 ಹರಪೊತ್ತ ಹನ್ನೆರಡು ನಾಮ | ದಿಂದಹರಿಮುಖ್ಯನಿಹನೆಂಬ ನೇಮ | ತಿಳಿದುಹರನ ಪೂಜಿಸೆ ಈವ ಕಾಮ | ನೆಂದುಗುರು ಗೋವಿಂದ ವಿಠ್ಠಲನ ನೇಮ17
--------------
ಗುರುಗೋವಿಂದವಿಠಲರು
ರಾಮದುರ್ಗದ ಪರಮ ಪೂಜ್ಯ ಆಚಾರ್ಯರನುನೇಮದಿಂದ ಸ್ಮರಿಸೊ ಮನುಜಾಕಾ'ುತಾರ್ಥವ ಕೊಟ್ಟು ಪ್ರೇಮದಿಂದ ಕ್ಕೆಪಿಡಿದುಸನ್ಮಾರ್ಗ ತೋಗಿಸುವರರು ಅವರು ಪಮಧ್ವಮತದೊಳು ಜನಿಸಿ ಸಚ್ಛಾಸ್ತ್ರಗಳನೋದಿ ಪ್ರಸಿದ್ಧಪಂಡಿತರಾಗಿ ಶುದ್ಧ ಆಚರಣೆ ಸದ್ದೈರಾಗ್ಯಸದ್ಭಕ್ತಿ ಸುಜ್ಞಾನ ಪೂರ್ಣರಾಗಿದುಡ್ಡಪ್ಪ ದೊಡ್ಡಪ್ಪ ಧಡ್ಡಪ್ಪರೆನ್ನದೆ ಸರ್ವಸಮದ್ಟೃ ಇಟ್ಟು'ದ್ಯಾರ್ಥಿಗಳಿಗೆಲ್ಲ ಅನ್ನವಸ್ತ್ರವ ಕೊಟ್ಟು ಗುರುಕುಲನಡಿಸಿದ ಋಗಳವರು 1ಸ್ನಾನಸಂಧ್ಯಾನ ಜಪಿತಪ ಅನುಷ್ಠಾನ ಅಗ್ನಿಹೋತ್ರವನಡಿಸುತ ಧ್ಯಾನಮೌನವು ಸದಾ ರಾಮನಾಮ ಸ್ಮರಣೆಪಾಠಪ್ರವಚಿನ ಪುರಾಣ ದಾನಧರ್ಮವು ದಿವ್ಯ ಸಂತಾನಸಂಪತ್ತು ರಾಜಮನ್ನಣೆ ಪಡೆದರು ಕ್ಷಣ ವ್ಯರ್ಥಕಳೆಯದೆ ವ್ಯರ್ಥಮಾತಾಡದೆ ದಿನಚರಿ ನಡಿಸಿದರು ಕಡೆತನರ 2ಘನವೈಯ್ಯಾಕರಣಿ ಗರ್ವವು ಎಳ್ಳೆಷ್ಟು ಇಲ್ಲಾ'ನಯ ಪೂರ್ಣಸ್ವಭಾವ ಹಣಹೆಣ್ಣು ಮಣ್ಣಿನಾಶೆಯುಪೂರ್ಣಬಿಟ್ಟವರು ಜನ'ತದಿ ಸತತ ನಿಂತರುಧನ ಮಾನ ಮರ್ಯಾದೆಗಳಿಗಾಗಿ ಎಂದೆಂದೂ ಧಡಪಡ-ಮಾಡಲಿಲ್ಲಾ ಗುಣನಿಧಿ ಭೂಪತಿ 'ಠ್ಠಲನ ಭಜನೆಯಾಕುಣಿಕುಣಿದು ಮಾಡುವ ಪರಮ ಭಾಗವತರು 3ಗಲಗಲಿ ನರಸಿಂಹಾಚಾರ್ಯರು
--------------
ಭೂಪತಿ ವಿಠಲರು
ರಾಮಾಯನ್ನಮ:ರಾಮ ಸದಾ ಓಂ ರಾಮಾಯನ್ನಮ:ರಾಮ ಪ ವೇದಾದಿ ರಾಮ ವೇದಾಂತರಾಮ ವೇದಾಂತ ವೇದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 1 ವೇದಮಯ ರಾಮ ವೇದ ನಿರ್ಮಯ ರಾಮ ವೇದ ವೇದಾತೀತಕಾದಿ ರಾಮ ಮಹ ದಾದಿಗಾದಿರಾಮ ( ಸದಾ) ಓಂ ಮಹ ದಾದಿಗಾದಿ ರಾಮ 2 ನಾದಯುತಾದಿ ರಾಮ ನಾದರಹಿತಾದಿ ರಾಮ ನಾದಾತೀತಾದ್ಯನಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 3 ಆದಿಗಾದಿರಾಮ ಅ ನಾದಿಗಾದಿರಾಮ ಆದಿ ಅನಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 4 ಸತ್ಪಥದಾದಿರಾಮ ¸ À ಚ್ಚಿತ್ತದಾದಿರಾಮ ಉತ್ಪತ್ತಿ ಸ್ಥಿತಿಲಯಕಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 5 ಸ್ವರ್ಗ ಭೋಗಾದಿ ರಾಮ ಧೀರ್ಘಕ್ಕೆ ದೀರ್ಘಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 6 ಜಪತಪದಾದಿ ರಾಮ ಗುಪಿತ ಗುಪ್ತಾದಿ ರಾಮ ಅಪರೋಕ್ಷ ಪರೋಕ್ಷಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 7 ಮಂತ್ರಮಯಾದಿ ರಾಮ ಮಂತ್ರ ತಂತ್ರಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 8 ಮಾಯಮಯಾದಿ ರಾಮ ಮಾಯ ನಿರ್ಮಯ ರಾಮ ಮಾಯ ಮಾಯಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 9 ಕಾಲಕಾಲದಿ ರಾಮ ಕಾಲಮೂಲಾದಿ ರಾಮ ಕಾಲಕಾಲನಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 10 ದಶರಥರಾಮ ದಶರಥಗಾದಿ ರಾಮ ದಶವಿಧೌತಾರದಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 11 ದಿವ್ಯಮಹಿಮಾದಿ ರಾಮ ಭವ್ಯಚರಿತಾದಿ ರಾಮ ದಿವ್ಯ ದೇವರ ದೇವರಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 12 ಬ್ರಹ್ಮನೆಯಾದಿ ರಾಮ ನಿರ್ಮಲಾತ್ಮಾದಿ ರಾಮ ಬ್ರಹ್ಮ ಬ್ರಹ್ಮಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 13 ಸತ್ಯ ಸತ್ಯಾದಿ ರಾಮ ನಿತ್ಯ ನಿತ್ಯಾದಿ ರಾಮ ತತ್ವ ಪಂಚದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 14 ಭುವಿತ್ರಯದಾದಿ ರಾಮ ಭವಭವದಾದಿ ರಾಮ ದಿವನಿಶಿಗಳಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 15 ಬೋಧಾದಿಮಯ ರಾಮ ಬೋಧಾದಿಗಾದಿ ರಾಮ ಸ ಸಾಧನ ಸಿದ್ಧಿಯಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 16 ನಿರ್ನಾಮ ರಾಮ ನಿರ್ಗುಣ ನಿರಂಜನಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 17 ಭಕ್ತಭಿರಾಮ ಮುಕ್ತೀಶ ರಾಮ ನಿತ್ಯ ನಿರ್ಮಲ ಜಗದಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 18 ಚಿನುಮಯ ರಾಮ ಚಿದ್ರೂಪ ರಾಮ ಜನನಮರಣ ಹರಣಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 19 ರಮಾಧವ ರಾಮ ಕ್ಷಮೆಯುತ ರಾಮ ಸುಮನಸ ಭಕ್ತಾಧೀನ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 20 ಜಯ ಜಯ ರಾಮ ಜಯ ಶ್ರೀರಾಮ ಜಯವೆಂದು ನೂರೆಂಟು ಪೊಗಳಲೀ ನಾಮ ದಯದೀಯ್ವಮುಕ್ತಿ ರಾಮ ಸದಾ ಓಂ ಮಹ ದಾದಿಗಾದಿ ರಾಮ21
--------------
ರಾಮದಾಸರು
ಲಕ್ಷ್ಮೀ ನಾರಾಯಣ ವಿಠಲ | ಪೊರೆಯ ಬೇಕಿವಳಾ ಪ ವಾಹನ ದೇವ | ಲಕ್ಷುಮಿಯ ರಮಣಾ ಅ.ಪ. ಸೃಷ್ಟಿ ಸ್ಥಿತಿ ಸಂಹಾರ | ಅಷ್ಟಕ್ಕು ಕಾರಣನೆಕಷ್ಟಗಳ ಪರಿಹರಿಸಿ | ಕಾಪಾಡೊ ಹರಿಯೇ |ಶಿಷ್ಟ ಸದಾಚಾರ | ನಿಷ್ಠೆಯಲಿ ಗೈಯ್ಯುವಳುಶಿಷ್ಟೇಷ್ಟ ಹರಿಯೆ ಸದ | ಭೀಷ್ಟಗಳಗರೆಯೋ 1 ವಿೂಸಲೆಂದೆನಿಸಿರುವ | ದಾಸತ್ವದಾಕಾಂಕ್ಷೆಸಾಸಿರಕ್ಕೋರ್ವರಿಗೆ | ಲೇಸು ಪುಟ್ಟವುದೋಈ ಸಮಯದಲ್ಲೀಕೆ | ಆಶಿಸುತ್ತಿಹಳಯ್ಯಕೇಶವನೆ ಒಲಿದಿವಳ | ದಾಸ್ಯ ಸ್ವೀಕರಿಸೋ 2 ಶುದ್ಧ ತರತಮ ಜ್ಞಾನ | ಮಧ್ವೇಶನಲಿ ಭಕುತಿಇದ್ವದಕೆ ತೃಪ್ತಿಯಿಂ | ಬದ್ಧ ವೈರಾಗ್ಯಾಸಿದ್ಧಿಸುತ ಸಾಧನದಿ | ಬದ್ಧ ಕಂಕಣಳೆನಿಸೊಅದ್ವಿತೀಯನೆ ಹರಿಯೆ | ಮಧ್ವಾಂತರಾತ್ಮಾ 3 ಮುಪ್ಪುರದ ವೈರಿನುತ | ಸರ್ಪಶಯನನೆ ದೇವಾಸ್ವಪ್ನ ಸೂಚನೆಯಂತೆ | ಗೋಪ್ಯದಂಕಿತವಾಸುಪ್ತೀಶ ಇತ್ತಿಹೆನೊ | ಒಪ್ಪಿ ಕೈಪಿಡಿ ಇವಳಗುಪ್ತ ಮಹಿಮನೆ ದೇವ | ಆಪ್ರಕಟ ಹರಿಯೇ 4 ಶರ್ವಾದಿ ದಿವಿಜೇಡ್ಯ ಶಾರ್ವರೀಕರ ಪಾಲದುರ್ವಾದಿ ತಿಮಿರಕ್ಕೆ ಮಾರ್ತಾಂಡ ರೂಪೀದರ್ವಿ ಜೀವಿಯ ಕಾವ | ನಿರ್ವಹಣೆ ನಿನ್ನದೋಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಕ್ಷ್ಮೀ ಮನೋಹರ ವಿಠಲ | ರಕ್ಷಿಸೋ ಹರಿಯೇ ಪ ಲಕ್ಷಿಸದಲೇ ಇವಳ | ಲಕ್ಷಾಪರಾಧಾ ಅ.ಪ. ತೈಜಸ ಮೂರ್ತಿದರುಶನವ ತಾನಿತ್ತು | ಹರುಷ ಪಡೆಸಿಹನೋಹರಿದಾಸ್ಯಕೇ ಮಾರ್ಗ | ವರಸೂಚಿ ಎಂಬಂತೆಪರಮ ಸಿದ್ಧತೆ ತೋರ್ದೆ | ವರಸತೀ ಮಣಿಗೇ 1 ಕಾರುಣಿಕ ನೆಂ | ದರಿತು ಬೇಡುವೆ ಹರಿಯೆಸರುವ ಕಾರ್ಯದಿ ನಿನ್ನ | ಸ್ಮರಣೆ ಸುಖವೀಯೋ 2 ಎರಡು ಮೂರ್ಭೇಧಗಳ | ಅರಿವನೀಕೆಗೆ ಇತ್ತುಎರಡು ನಾಲ್ಕರ ವರ್ಗ | ದೂರಗೈಸೋಮರುತಾಂತರಾತ್ಮ ನಿ | ನ್ಹೊರತು ಕಾಯುವರಾರೊಎರಡೇಳು ಭುವನಗಳ | ಅರಸಿಯೂ ಕಾಣೇ 3 ವಿಶ್ವ ಕರ್ಮ | ಸತ್ಶ್ರವಣ ಕೊಡುತಾ 4 ಭೂವಿ ಬುಧ ಹೆದ್ದೈವ | ಮಾವಿನೋದಿಯೆ ಹರಿಯೆನೀವೊಲಿಯ ದಿನ್ನಿಲ್ಲ | ಮಾವ ಕಂಸಾರೀದೇವ ದೇವೇಶ ಗುರು | ಗೋವಿಂದ ವಿಠ್ಠಲ್ಲಭಾವದೊಳು ಮೈದೋರಿ | ಕಾವುದೀಕೆಯನೂ 5
--------------
ಗುರುಗೋವಿಂದವಿಠಲರು
ಲಕ್ಷ್ಮೀ ವೆಂಕಟೇಶ ವಿಠಲ | ರಕ್ಷಿಸೋ ಇವಳಾ ಪ ವಿಶ್ವ ವ್ಯಾಪಕನೇ ಅ.ಪ. ಪುಟ್ಟಿ ಸತ್ಕುಲದಲ್ಲಿ | ತೊಟ್ಟು ಸತ್ಸಿದ್ಧಾಂತ ಇಷ್ಟ ಪಡುತಿಹಳಯ್ಯ | ಕಷ್ಟದಾಸತ್ವಾಇಷ್ಟ ಮೂರುತಿ ನೀನು | ತೈಜಸೀ ರೂಪದಲಿಸ್ಪಷ್ಟ ತೋರಿದ ಹರಿಯೆ | ಇತ್ತೆ ಉಪದೇಶಾ 1 ಮರುತ ಮತದಲಿ ದೀಕ್ಷೆ | ಹಿರಿಯರನು ಸರಣೆಯಲಿನಿರುತ ಆಸಕ್ತಿಯನು | ಕರುಣಿಸುತ ಭವದಾಶರಧಿಯನೆ ದಾಟಿಸುವ | ಮಾರ್ಗವನೆ ತೋರೊ ಹರಿಕರುಣಾಂಬುನಿಧಿಯೆಂದು | ಮೊರೆ ನಿನಗೆ ಇಡುವೇ 2 ಕಷ್ಟ ನಿಷ್ಠೂರಗಳ | ಸುಷ್ಠುಸಮತೆಲಿ ಉಂಬಶ್ರೇಷ್ಠ ಮತಿಯನೆ ಇತ್ತು | ರಕ್ಷಿಸೋ ಇವಳಾ |ಅಷ್ಟ ಸೌಭಾಗ್ಯಗಳ | ಕೊಟ್ಟು ಕಾಯಲಿ ಬೇಕೊಕೃಷ್ಣ ಮೂರುತಿ ಹರಿಯೆ | ಭಕ್ತ ವತ್ಸಲ್ಲಾ 3 ಪರಮಾರ್ಥ ಸಾಧನಕೆ | ಗುರು ಕರುಣಬೇಕೆಂಬವರಮತಿಯ ಕರುಣಿಸುತ | ಪೊರೆಯ ಬೇಕಿವಳಾಗರುಡ ಗಮನನೆ ದೇವ | ಸರ್ವಾಂತರಾತ್ಮಕನೆಕರುಣದಿಂ ಕೈ ಪಿಡಿದು | ಉದ್ಧರಿಸೋ ಇವಳಾ 4 ಪಾವಮಾನಿಯ ಪ್ರೀಯ | ಭಾವದಲಿ ಮೈದೋರಿಜೀವಿಯನು ಉದ್ಧರಿಸೋ | ದೇವ ದೇವೇಶಾಗೋವತ್ಸದನಿ ಕೇಳಿ | ಆಪು ಪೊರೆವಂತೆ ತೋರಿಗೋವಿದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಕ್ಷ್ಮೀದೇವಿ 13 ಭಾಗ್ಯವ ಕೊಡು ತಾಯೆ ಪ ಭಾರ್ಗವಿ ನಿನ್ನಯ| ಪದಯುಗಕೆರಗುವೆ| ಭಾಗ್ಯದ ಲಕ್ಷ್ಮೀ ಸೌ| ಭಾಗ್ಯದ ನಿಧಿಯೇ ಅ. ಪ ಸಾಗರಸಂಜಾತೆ| ದೇವಿ| ನಾಗವರದಪ್ರೀತೆ || ಯೋಗಿಜನಾವಳಿ| ಮಾನಸಪೂಜಿತೆ | ಅಗಣಿತಗುಣಮಣಿ| ತ್ರಿಜಗದ್ವಂದಿತೆ 1 ಸುರುಚಿರಸುಮಗಾತ್ರೆ | ದೇವಿ| ಹಿಮಕರನಿಭವಕ್ತ್ರೆ || ಕಿನ್ನರ | ಸುರಮುನಿ ಪೂಜಿತೆ | ಕಾಮಿತವೀಯುವ || ಕರುಣಾಕರೆಯೆ 2 ಜನನಿಯೆ ನಿರತವು ನೀ | ಪ್ರೇಮವ | ನಿರಿಸುತಲೆನ್ನೊಳು ನೀ | ಕನಕದ ವೃಷ್ಟಿಯ | ಕರೆಯುತಲನುದಿನ | ಮನ್ಮನದಿಷ್ಟವು | ಸಿದ್ಧಿಸುವಂದದ 3 ಅಹಿಪತಿ ಶಯನನಿಗೆ | ಮೋಹದ | ಮಹಿಷಿಯು ನೀನಾಗೆ || ಮಹಿಮಾಕರೆ ನೀ | ಮಹಿಯೊಳಗನಿಶವು | ಇಹಪರ ಸುಖವನು | ಭವಿಸುವ ತೆರದಾ 4 ಅಜಭವಸುರವಿನುತೆ | ದೇವಿ | ಸುಜನಾವಳಿಪ್ರೀತೆ || ಗಜವಾಹಿನಿ ವರ | ಮದಗಜಗಮನೆಯೆ | ವಿಜಯವಿಠಲಪ್ರಿಯೆ ಶ್ರೀ ಗಜಲಕ್ಷ್ಮಿಯೆ 5 ಶುಭ | ಮಂಗಳೆ ಸುಪವಿತ್ರೆ || ಮಂಗಳಾಂಗಿ ನರ | ಸಿಂಗನ ರಮಣಿಯೆ | ಮಂಗಳಕಾರ್ಯಗ | ಳನುದಿನವೆಸಗುವ 6 ಪಂಕಜದಳನೇತ್ರೆ | ದೇವಿ | ಕಿಂಕರನುತಿಪಾತ್ರೆ || ಶಂಖಚಕ್ರಾಂಕಿತ | ಶ್ರೀ ವೈಕುಂಠನ |ಅಂಕದಿ ಮೆರೆವಖಿ | ಳಾಂಕ ಮಹಿಮಳೇ 7
--------------
ವೆಂಕಟ್‍ರಾವ್