ಒಟ್ಟು 1587 ಕಡೆಗಳಲ್ಲಿ , 108 ದಾಸರು , 1227 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ರುವತಾಳ ಹಿಂದಿನ ಜನ್ಮಜನ್ಮಾಂತರದಿ ಮಾಡಿದಘವ ನಿವಾರಿಸುವರು ನಿನ್ನ ದಾಸರು ದುರಿತ ದುರ್ಜಯ ದುಃಖವ ದೂರ ಮಾಡುವರು ನಿನ್ನ ದಾಸರು ಮುಂದಣ ಅಪಾರ ಆನಂದ ಸುಖವ ಅನವರತ ಈವರು ನಿನ್ನ ದಾಸರು ಯೆಂದು ಇಲ್ಲದಿರೆ ಬ್ಯಾರೆಗತಿಯುಂಟೆ ನಿನ್ನನರಿವ ಬಗೆ ಮತ್ತುಂಟೆ ಎಲೆದೇವ ನಂದನಂದನ ನಿನ್ನವರೆ ಜೀವನ ಅಚಲಾನಂದವಿಠಲರೇಯ ಬ್ಯಾರೆಗತಿ ಮತ್ತುಂಟೆ 1 ಮಠ್ಯತಾಳ ಭೂತದಯಾಪರ ನರನಾಥ ದೇವತೆಯೆಂಬರು ಭೂತವಿರೋಧ ಮಾಡಿ ಕೈಯ್ಯಾತು ಬೇಡುವ ದೈವವ ಸಾತ್ವಿಕವೆಂದು ಬಗೆವರು ಜನರು ಈ ರೀತಿಯೇನೆಂಬೆ ಅಜಾತ ಸಕಲದೇವರ ದಾತನೆ ಅಚಲಾನಂದವಿಠಲ ನೀನಿರೆ ಸಾತ್ವಿಕವೆಂದು ಅನ್ಯದೈವವ ಈ ಭೂತಳದ ಜನರು ಬಗೆವರು ಪ್ರತಿದಿನ 2 ತ್ರಿಪುಟತಾಳ ಮಾನವನೆ ಕೇಳು ಕಬ್ಬಿಣ ಸೋಸಿ ಕಾಸಿ ಬಡಿಯಲು ತಾನು ಪರುಷ ಸೋಕದೆ ಸುವರ್ಣ ಅಪ್ಪುದೇ ಅನಾದಿ ಅವಿದ್ಯ ತಾಪದಿಂದ ಬೆಂದು ತಾನು ನೀರೊಳು ಮಿಂದರೇ ಹೋಹುದೇನೊ ಅನಾದಿದೈವ ಅಚಲಾನಂದವಿಠಲನ ಧ್ಯಾನಮಾಳ್ಪರ ಪಾದಪರುಷ ಸೋಕದನಕ 3 ಅಟ್ಟತಾಳ ಎನ್ನ ಹಳಿಯಲಿ ಉಗುಳಲಿ ಬಂಧುಗಳೆನ್ನ ಮನ ರಂಗ ನಿನ್ನನೆ ನೆಚ್ಚಿಹ್ಯದೆನ್ನಮನ ಕೃಷ್ಣ ನಿನ್ನನೆ ನಂಬಿಹ್ಯದೆನ್ನ ಮನ ಅಚಲಾನಂದವಿಠಲರೇಯ ನಿನ್ನವರೊಲುಮೆಯ ಸಾರಿತೆನ್ನ ಮನ 4 ಆದಿತಾಳ ಹಲವು ಮಾತೇನು ಹಲಧರನನುಜನ ಚೆಲುವಿಕೆಯನೆ ಕಂಡು ಮನಸೋತೆನವ್ವ ಕೆಲಬಲದಾ ಕುಲದವರೆನ್ನ ಹಳಿಯಲಿ ಚಲಿಸದು ಚಿತ್ತ ಚಂಚಲವಾಗದೆನ್ನ ಮನ ಕೆಲಚಿತಿ ವೆಂಣೆಲ್ಲ (?) ತಾನೊಲಿವಂತೆ ಮಾಡಿದ ನಿಲುಕುವನಚಲಾನಂದವಿಠಲರೇಯ ಕ್ಯಲಬಲದ ಕುಲದವರೆನ್ನ ಹಳಿಯಲಿ 5 ಜತೆ ಬೆಂದ ಸಂಸಾರದಿ ಬಂದು ಬಂದು ಹೋದೆನೊ
--------------
ಅಚಲಾನಂದದಾಸ
ನಗುವು ಬರುತಿದೆ ಎನಗೆ ನಗುವು ಬರುತಿದೆಬಿಗಿದು ಶ್ವಾಸ ಮೂಗ ಹಿಡಿದು ನಿಟಿಲ ನೋಡುವವರ ಕಂಡು ಪ ಹಡೆದ ದೈವ ಹತ್ತಿರಿರಲು ನೋಡಿದರು ನೋಡದಂತೆಮೃಡನು ತಾನೆ ಇರಲು ಮೂಗ ಕೊನೆಯ ನೋಡುವವರ ಕಂಡು 1 ಹೊಳೆಯುತಿಹುದು ಪರಬ್ರಹ್ಮ ನಾನಾ ರೂಪಗಳನು ತಾಳಿತಿಳಿಯದಲೆ ತನ್ನನೀಗ ಕಣ್ಣು ಮುಚ್ಚುವವರ ಕಂಡು2 ಮನಕೆ ನಿಲುಕದವನು ತಾನೆ ಮಂಗಳವಾಗಿ ಬೆಳಗುತಿರಲುಮನದಿ ಪೂಜೆಯನ್ನು ಮಾಡ್ವ ಮಂದಮತಿಗಳನ್ನು ಕಂಡು3 ತಾನು ದೇವ ನಿಜವಿದಿರಲು ತಂದು ಪ್ರತಿಮೆ ಇಟ್ಟುಕೊಂಡುಏನೋ ಮಂತ್ರ ಒದರುತಿರುವ ಮನುಜರನ್ನು ಕಂಡು ನನಗೆ4 ಯೋಗ ಮಾಡಿಕೊಂಬುದೇನು ಯೋಗಮಾಡುವವನೆ ಇರಲುಯೋಗಿಯಾದ ಚಿದಾನಂದ ತಾನೆ ಸಾಕ್ಷಿಯಾಗಿ ಇರಲು5
--------------
ಚಿದಾನಂದ ಅವಧೂತರು
ನಂದಗೋಪನ ಕಂದ ನಾನುವೃಂದಾರಕೇಂದ್ರ ಖಳಕುಲ ಮರ್ದನಪ. ಎಂದೆಂದು ಎನ್ನ ನಂಬಿದ ಭಕುತರಿಗೆ ಸುತ್ತಿಂದಬಂದ ಕ್ಲೇಶಗಳನ್ನೆಲ್ಲ ಖಂಡಿಸಿತಂದೆ ಮಕ್ಕಳ ಪೊರೆವಂತೆ ಪಾಲಿಸುತಿಹೆಕಂದರ್ಪನಾಣೆ ಇದು ಎನಗೆ ಬಿರುದು 1 ಅಂದಂದು ಅವರು ಬೇಡಿದ ಇಷ್ಟಂಗಳನಿತ್ತೆಸಂದೇಹವಿಲ್ಲ ಸಂತತ ಸಲಹುವೆಮಂದಜನರೊಡನಾಡಿ ಮರುಳುಗೊಳದಿರು ಮನುಜ ಚೆಂದದಿಂದೆನ್ನ ಪೂಜೆಯನು ಮಾಡು 2 ಇಂದ್ರ ಗರ್ವಿಸಲವಗೆ ಸಾಂದ್ರ ಸುರತರುವ ಆನಂದನವನವನು ಪೊಕ್ಕು ಕಿತ್ತುತರಲುಒಂದಾಗಿ ರಣಕೆ ಬಂದು ನಿಂದಮರರನು ಕರುಣದಲಿಅಂದು ಪಾಲಿಸಿದೆ ಭಕ್ತರ ಬಂಧುವೆನಿಸಿ 3 ಇಂದುಮುಖಿ ಸಭೆಯಲ್ಲಿ ಕರೆಯಲಾಕ್ಷಣದೊಳಗೆಬಂದವಳ ಅಭಿಮಾನವನು ಕಾಯ್ದೆಇಂದುಧರ ಭಸ್ಮನುಪದ್ರದಲಿ ಬಳಲುತಿರೆಬಂದೊದಗಿ ಶಿವನÀ ಕಾಯಿದವನರಿಯಾ4 ಅಂಧಂತಮವ ದಾಟಿ ಅನಂತಾಸನಕೆ ಪೋಗಿಒಂದು ನಿಮಿಷದೊಳಗೆ ದ್ವಿಜನ ಸುತನ ತಂದೆಸಿಂಧುವಿನೊಳಗೆ ದೈತ್ಯನ ಕೊಂದು ಸಾಂದೀಪ -ನಂದನನÀ ಯಮನಪುರದಿಂದ ತಂದೆ 5 ನೃಪರ ಬಹುಬಲ ಜರಾ -ಸಂಧನ ಗಧೆಯ ಗಾಯದಿ ಕೊಲಿಸಿಅಂದವನ ದೆಸೆಯಿಂದ ನೊಂದ ನೃಪರನು ಬಿಡಿಸಿಕುಂದದುಡುಗೊರೆಯ ನಾ ಕೊಡಿಸಿ ಮೆರೆದೆ6 ಹಿಂದಾಗಜೇಂದ್ರನಿಗೊದಗಿದವನಾರು ಪಿತನಿಂದನೊಂದ ಪ್ರಹ್ಲಾದನ್ನ ಕಾಯ್ದವರದಾರುಮಂದರಗಿರಿಯನೆತ್ತಿ ಸುರರಿಗಮೃತ ಉಣಿ-ಸಿಂದಿರೆಯನಾಳ್ದ ಹಯವದನನರಿಯಾ7
--------------
ವಾದಿರಾಜ
ನದಿಗಳ ಸ್ತೋತ್ರ ಕಾವೇರಿ ಕಲುಷ ಸಂಹರಳೆ ಕಾವೇರಿ ಪ ವಿಧಿ ಸುತೆ ನಮ್ಮ | ಕಾವುದು ಬಿಡದಲೆ ಅ.ಪ. ಅಮಿತಾಭ ಕವೇರ ನೃಪನು | ಪುಣ್ಯಶಮದಮದಿಂದಯುತನು | ಸಾರಿಹಿಮನಗ ತಪ್ಪಲುಗಳನು | ದಿವ್ಯಸಮಶತದಶ ವರ್ಷಗಳನು | ಆಹಸುಮನ ಸೋತ್ತಮನಾದ | ಬೊಮ್ಮನ ಧೇನಿಸಿಅಮಮಸುಘೋರವು | ವಿಮಲ ತಪವ ಗೈದ 1 ಬೊಮ್ಮ | ಅಚ್ಚ್ಯುತ ಮಾಯ ತನ್‍ಇಚ್ಛೆಯ ಸುತೆ ನಿನ | ಮೆಚ್ಚು ಪುತ್ರಿಯಹಳು 2 ಸ್ಮರಣೆ ಮಾತ್ರದಿ ವಿಷ್ಣುಮಾಯಾ | ದಿವ್ಯತರುಣಿ ರೂಪದಿ ಬ್ರಹ್ಮರಾಯ | ನೆದುರುಕರವ ಮುಗಿದು ಪೇಳು ಜೀಯಾ | ಎನೆಬರೆದನಾ5ದು ಕವೇರ್ಕನ್ಯಾ | ಆಹಸರಿತು ರೂಪದಿ ಮೋಕ್ಷ | ವg್ವ5ರ ವಹುದು ನೀಸರುವ ತೀರಥ ಮಯಿ | ಪರಿವುದು ಈ ಪರಿ 3 ಎರಡು ಅಂಶವು ನಿನಗಿಹುದೂ | ಒಂದುಸರಿತಾಗಿ ಪ್ರವಹಿಸುವೂದು | ಮತ್ತೆತರುಣಿ ರೂಪದಿ ಪತ್ನಿಯಹುದು | ಮುನಿವರ ಕುಂಭ ಸಂಭವಗಹುದು | ಆಹಕರೆಸಿ ಲೋಪಾಮುದ್ರೆ | ಮೆರೆವುದು | ಪತಿವ್ರತೆಶಿರೋಮಣಿ ಎನಿಸಿ ನೀ | ಮೆರೆವುದು ಭುವಿಯಲ್ಲಿ 4 ವರವಿತ್ತು ಮರೆಯಾಗೆ ಅಜನು | ನೃಪವರ ಸುತೆಯೊಡನೆ ಪೊರಟನು | ಕಾಲಕರ ಮರತನದಿ ಕಳೆದಾನು | ಮುಂದೆವ್ಯೆರಾಗ್ಯದಿಂ ಪೇಳಿದಾನು | ಆಹಪರಿಶುದ್ಧನಿಹೆ ನಿನ್ನ | ದರುಶನ ಮಾತ್ರದಿಪರಮ ನಿಷ್ಕಾಮದ | ಕರ್ಮವನೆಸಗುತ್ತ 5 ಹರಿಧ್ಯಾನದೊಳು ಬಲುರತ | ನಿರೆನರಪತಿ ಹರಿಲೋಕ ಗತ | ನಾಗೆತರುಣಿ ಕಾವೇರಿಯು ಸ್ಥಿತ | ಘೋರವರ ತಪವನ್ನು ಗೈಯ್ಯುತ್ತ | ಆಹಇg5ರಲೀ ಪರಿ ಪರಿ ಪರಿ ಬೇಡಿದಳ್ 6 ಸರಿದ್ರೂಪಳಾಗಿನ್ನು ಪರಿದೂ | ಹರಿಶರಣರ ಪಾಪವ ತರಿದೂ | ಮತ್ತೆಸರುವರ ತಾಪವ ಕಳೆದೂ | ಇನ್ನುಸರಿತು ಗಂಗಾದಿಗೆ ಹಿರಿದೂ | ಆಹವರ ಕೀರ್ತಿಯಿಂದಲಿ | ಮೆರೆಯುತ ಲೋಕೋಪಕರಳೆನಿಸಿ ಪ್ರವಹಿಸಿ | ಶರಧಿಯ ಸೇರ್ವಂಥ 7 ಸ್ಮರಣೆ ಮಾತ್ರದಿ ಪಾಪನಾಶಾ | ಮಾಳ್ಪಗಿರಿಯುಂಟು ಸಹ್ಯ ಆದ್ರೀಶ | ಅಲ್ಲಿತರು ರೂಪಮಲಕ ದೊಳ್ವಾಸಾ | ನಿನ್ನಚರಣ ಕಮಲವ ವಾಣೀಶಾ | ಆಹವಿರಜೆ ಪುಣ್ಯದ ಜಲ | ವರ ಕಂಬುವಿಲಿ ತುಂಬಿಎರದಭಿಷೇಚಿಸೆ | ಪರಿವುದದರ ಸಹ 8 ವರ ದತ್ತಾತ್ರೇಯ ನೆಂದೆನಿಸಿ | ತವಶಿರ ಸ್ಥಾನದಲ್ಲಿ ವಾಸೀಸಿ | ಎನ್ನಶರಣರ ಅಘಗಳ ಹರಿಸೀ | ನಿನ್ನವರ ದಕ್ಷಗಂಗೆಂದು ಕರೆಸೀ | ಆಹವರ ತವೋತ್ಸಂಗದಿ | ಶಿರವಿಟ್ಟು ಮಲಗುತ್ತಸರಿದ್ವರಳೆನಿಸುತ್ತ | ಮೆರೆಸುವೆ ನಿನ್ನನು 9 ಮಂಗಳ ಜಪತಪ ಸ್ನಾನ | ಮಿಕ್ಕಗಂಗಾದಿ ತೀರ್ಥಾನುಷ್ಠಾನ | ನಾಲ್ಕ್ಯುಗಂಗಳೊಳಗೆ ಮಾಳ್ಪ ನಾನಾ | ಕರ್‍ಮಂಗಳ್ತವೋತ್ಸುಂಗ ಶಿರಸ್ಥಾನ | ಆಹಮಂಗಳಾಮಲಕ ಜಲಂಗಳಿಗ ಸಮ ಕ-ಳೆಂಗಳ್ಷೋಡಶಕ್ಕೊಂದಂಗ ಸರಿ ಬರೆದು 10 ದಾತ | ತನ್ನಕಾಮಂಡುಲಿನೊಳ್ ನಿನ್ನ ಧೃತ | ಆಹನೇಮದಿಂದೊಂದಂಶ | ಲೋಪಾ ಮುದ್ರೆಯು ಆಗಿಆ ಮಹ ಮುನಿಯನ್ನ | ಪ್ರೇಮದಿ ವರಿಸುವೆ 11 ವರವಿತ್ತು ಮರೆಯಾಗೆ ಹರಿಯು | ಅತ್ತವರ ಮುನಿ ತಪಸಿನ ಧಗೆಯು | ಕಂಡುಸುರಜೇಷ್ಠ ಅವನೆದುರು ಹೊಳೆಯು | ಆಗಬರೆದನು ಜೀವನ ಧೊರೆಯು | ಆಹಹೊರಲಾರದವ ತಾನು | ವರ ಸನ್ಯಾಸದಿ ಮನವಿರಸಿರುವುದು ನಿರಾ | ಕರಿಸುತ್ತ ಪೇಳ್ದನು 12 ಚಕ್ರಧರ | ತುಂಬಿದ ಮನದಿಂದಹಂಬಲಿಸಿ ಕೈಗೊಂಡು | ಬೆಂಬಿಡದೆ ಸಲಹುವ 13 ಮುನಿವರಗಸ್ತ್ಯನು ಅಜನ | ಮಾತಮನವಿಟ್ಟು ಕೇಳುತ್ತ ವಚನ | ಪೇಳ್ದಅನುಕೂಲ ಭಾರ್ಯಳಾಳ್ವುದನ | ಯೋಗಅನುಕೂಲಿಸುವುದೆಂಬ ಹದನ | ಆಹವನಜ ಗರ್ಭನು ತನ್ನ | ತನುಜೆಯ ಸುಕನ್ಯಾಮಣಿಯ ಕಾವೇರಿಯ | ವಿನಯದಿ ವರಿಸೆಂದ 14 ನಗ ಶೃಂಗದಿರಿಸುತ್ತಮಿಗೆ ಚೆಲ್ವ ಸರಿತಾಗಿ | ಪೋಗಲನುಗ್ರಹಿಸು 15 ಮೋದ ತಾಳುತ್ತಸುಗುಣೆಯ ಬೆಸಸೀದ | ನಗು ಮುಖದಿಂದಲಿ 16 ಹೊರ ಮುಖಳಾದಳ್ ಕಾವೇರಿ | ಮುನಿವರನ ಸತ್ಕರಿಸಲು ನಾರಿ | ದ್ವಿಜವರ ಪೇಳೆ ಬ್ರಹ್ಮಗನುಸಾರಿ | ಆಕೆವರಗಳ ಬೇಡಲು ಭಾರಿ | ಆಹಸುರಜೇಷ್ಠ ನ್ವೊರೆದಂತೆ | ವರಗಳ ನೀಯಲುಸುರಕನ್ಯಾಮಣಿಯಾಗ | ವರಿಸಿದಳಾ ಮುನಿಯ 17 ವಾಹನ ಪತ್ನಿ ಸೇರಿ | ಶಿರಿಕಂಸಾರಿ ಗರುಡನ್ನ ಏರಿ | ಕ್ರತುಧ್ವಂಸಿ ಉಮಾ ನಂದಿ ಏರಿ | ಇಂದ್ರಶಂಸಿ ಸೈರಾವತನೇರಿ | ಆಹಸಾಂಶರು ಯೋಗ್ಯ ನಿರಂಶರು ಸೇರಿ ಪ್ರ-ಶಂಸನ ಗೈಯುತ್ತ ವೈವಾಹ ನಡೆಸಿದರ್ 18 ಮದುವೆ ವೈಭವ ಪೇಳಲಾರೆ | ಜಗದುದಯಾದಿ ನಡೆಪರಿಹಾರೆ | ಹರಿಮುದ ಪೊಂದಲಿನ್ನೆದುರ್ಯಾರೆ | ಎಲ್ಲರ್ವೊದಗಿ ಆಶೀರ್ವದಿಶ್ಯಾರೆ | ಆಹವಿಧ ವಿಧ ದುಡುಗೊರೆ | ಅದ ಪೇಳಲಳವಲ್ಲಅದುಭುತ ಜರುಗಿತು | ಉದ್ವಾಹ ಕಾರ್ಯವು 19 ಗಮನ | ಮತ್ತೆಕಾವೇರಿ ಸಹ ಮುನಿ ಹಿಮನ | ಕೇಳ್ಕೆಭಾವಿಸುತಲ್ಲೆ ಕೆಲದಿನ | ಆಹಆವಾಸಿಸಿರೆ ಋಷಿ | ಸಾರ್ವರ ಮನ ತಿಳಿದುಆಹ್ವಾನ ವಿತ್ತಳು | ಸಹ್ಯಾದ್ರಿ ಸನಿಯಕ್ಕೆ 20 ಗಮನ | ಆಹಇಂಬಿಟ್ಟನ್ನೊಂದಂಶ | ಲೋಪಾಮುದ್ರೆಯು ಕುಂಭಸಂಭವ ಸಹ ಸಹ್ಯ ಅದ್ರಿಗೆ ಗಮಿಸಿದಳ್ 21 ಉತ್ತರ ಹಿಮನಗ ಬಿಡುತ | ವನಸುತ್ತುತ ವಿಂಧ್ಯ ಮೀರುತ್ತ | ಹಾಂಗೆಉತ್ತಮ ಸಹ್ಯಾಚಲೇರುತ್ತ | ಅಲ್ಯುನ್ನತ್ತ ಬ್ರಹ್ಮಗಿರಿ ಸಾರುತ್ತ | ಆಹಉತ್ತಮ ಕ್ಷೇತ್ರದಿ ಜತ್ತಾಗಿ ಕಮಂಡಲಒತ್ತಟ್ಟಿಗಿರಿಸುತ್ತ ಪತ್ನಿಗೆ ಬೆಸಸಿದರ್ 22 ಕಾಲ ಮುದದಿ ಕರಕದಿಂದಅದುಭೂತವೆನೆ ಸರಿದ್ವರಳಾಗಿ ಪ್ರವಹಿಸು 23 ಪರಿ ಕಾಲ ಸಮೀಪವಾಗಲು ಸುರಪ 24 ಹರಿ ಮನೋಭಾವಾನು ಸಾರಿ | ಮಳೆಗರೆಯಲನ್ಯತರುವ ಸಾರಿ | ಶಿಷ್ಯರುಗಳಾಶ್ರಯಿಸಲು ಮೀರಿ | ಕುಂಡಸರುವೆ ತೀರಥಗಳು ಉಸುರಿ | ಆಹಪರ್ವ ಕಾಲವು ಇದು | ಪೊರಮಡು ಕಾವೇರಿಪರಿವೆವು ನಿನ ಪಿಂತೆ | ತೀರ್ಥಗಳಗ್ರಣಿಯೆ 25 ವಿಧಿ ಬಂದ ಹಂಸವನೇರಿ | ಆವಮುದದಿಂದ ವನಗಳ್ ಸಂಚಾರಿ | ಇನ್ನುಅದುಭೂತಾಮಿತ ತೀರ್ಥ ಗಿರಿ | ಕಂಡುಒದಗಿ ಕರಕದ ಜಲ ಭಾರಿ | ಆಹಮುದದಿ ಮೀಯುತ ಜಪ ಅದುಭೂತಾಷ್ಟಾಕ್ಷರಪದುಮ ಸಂಭವ ಹರಿಧ್ಯಾನದಿ ರತನಾದ 26 ಮಂದ ಮಾರುತ ಬೀಸೆ ವಿಮಲ | ಧಾತ್ರಿಗಂಧ ವೆಂದೆನುತಲಿ ಬಹಳ | ಮುದದಿಂದೆಚ್ಚರಗೊಂಡು ಕಂಗಳ | ಮುಂದೆಸುಂದರಾಮಲಕಾ ಕೃತಿಗಳ | ಆಹಎಂದು ಕಾಣದ ದೃಶ್ಯ | ವೆಂದೆನುತಲಿ ಮನದಿಂದ ಧೇನಿಸೆ ಅದು | ಛಂದದಿ ಮರೆಯಾಯ್ತು27 ಸಿರಿ ಹರಿಯು | ಸಿರಿವತ್ಸಾಂಕಿತನು ಬಾಹು ದ್ವಿದ್ವಯು | ಇಂದಮೆಚು5Àೂಪವ ತೋರೆ ವಿಧಿಯು | ಆಹ |ಸಚ್ಚರಿತೆಯ ಪಾಡೆ | ನಿಚ್ಚಳಾಮಲಕದಉಚ್ಚರೂಪವ ಕಂಡು | ಅರ್ಚಿಸಿದನು ಬಹಳ 28 ಗಾತ್ರ ಪಾದ | ಬಿಸಜಗಳ್ವಂದಿಸಿಬಿಸಜ ಸಂಭವ ಗೈದ | ಅಸಮ ಸಂಪೂಜೆಯ 29 ಧಾತಾ ಸ್ವ ಕುಂಡಿಕಾಸ್ಥಿತ | ವಿಮಲ ತೀರ್ಥವು ವಿರಜೆಯಿಂ ಹೃತ | ಶಂಖಪೂರ್ತಿಸಿ ಪೂಜಾ ಪದಾರ್ಥ | ಪ್ರೋಕ್ಷಿಸಿಪೂತಾತ್ಮಾಮಲಕದಿ ಸ್ಥಿv5 ಆಹಶ್ರೀ ತರುಣೀಶನ | ದತ್ತಾತ್ರೇಯನ ರೂಪಖ್ಯಾತ ಪೂಜಿಸುತಿರಲಶರೀರ ವಾಕ್ಕಾಯ್ತು 30 ಪರಿ ಗೈಯ್ಯುವ ಭಾಮಾ ಮಣಿಕುರಿತು ಪೇಳಿತು ವಾಣಿ ನೇಮ | ನೀನುಶರಧೀ ಸೇರುವ ಮನೋ ಕಾಮಾ | ಆಹಪರಿಪೂರ್ಣವಹುದೀಗ | ವರ ತುಲಾಪರ್ವದಿಶರತ್ಕಾಲ ಮುಕ್ತಿದ | ಪರಿವುದು ಕಾವೇರಿ31 ತತುಕ್ಷಣ ಮುನಿಯ ಕಮಂಡ್ಲು | ದೊಳುಸ್ಥಿತ ಸರ್ವ ತೀರ್ಥಮಾನಿಗಳೂ | ಪೇಳೆತುತುಕಾಲ ಕವೇರ ತನುಜಳೂ | ಶೀಘ್ರಉತು ಪತ್ತಿ ತಾಳಿ ಪರಿದಾಳೂ | ಆಹಇತರ ತೀರಥಗಳು | ಸರಿತು ರೂಪದಿ ಹಿಂದೆಅತಿ ತ್ವರೆಯಲಿ ಪ್ರವ | ಹಿತರಾಗಿ ಪೋದರು 32 ಋಷಿವರ್ಯ ಸ್ನಾನವ ಮಾಡಿ | ಪರಿಕ್ಷಿಸಲಾಗ ವಿಸ್ಮಯ ಕೂಡಿ | ಶಿಷ್ಯರಿಗುಸರಲಾಕ್ಷೇಪದ ನುಡಿ | ಅವರುಸಿರಿದರ್ ಮಳೆಯ ಗಡಿಬಿಡಿ | ಆಹರಸ ರೂಪದಲಿ ಪರಿವ | ಅಸಮ ಪತ್ನಿಯ ಕೂಗೆಋಷಿಗೆ ಶಾಂತಿಯ ಸೊಲ್ಲ | ಒಸೆದು ಪೇಳಿದಳವಳೂ 33 ಸುರವರ ಪೂಜ್ಯ ಧಾತ್ರಿಯು | ಇನ್ನುತರುವು ಆ ಮಲಕದ ಬಳಿಯು | ತೀರ್ಥವರ ಶಂಖ ಸಂಜ್ಞಿತ ತಿಳಿಯು | ಇಲ್ಲಿವಿರಜೆಯ ದೊಂದಿಹ ಕಳೆಯು | ಆಹವರ ನಭೊ ಗಂಗೆಯು | ಸರಿ ಸಹ್ಯಾಮಲಕವುವರಣಿಸಲಳವಲ್ಲ | ಸರಿದ್ವರ ಮಹಿಮೆಯ 34 ಕೈವಲ್ಯ | ದಾತನ ಒಲಿಮೆಯು 35 ಗಂಗಾನದೀಗಗಳು ತಮ್ಮ | ಪಾಪಹಿಂಗಿಸಲೋಸುಗವಮ್ಮ | ತುಲಾಮಂಗಳ ಮಾಸದಲಮ್ಮ | ಒಂದುತಿಂಗಳಿಹರಿಲ್ಲಿ ಸಂಭ್ರಮ್ಮಾ | ಆಹಗಂಗೆ ದಕ್ಷಿಣಾಖ್ಯೆ | ಮಂಗಳೆ ಜನಗಳಘಂಗಳ ಕಳೆಯುತ್ತ | ತುಂಗೋಪಕಾರಿಯೆ 36 ಕಾವೇರಿ ಪ್ರವಹಿಸಿ ಭರತ | ವರ್ಷಪಾವಿಸುತಿಹಳು ತಾ ನಿರುತ | ಬಂದುಸೇವಿಸೂವರ ಪಾಪ ತ್ವರಿತ | ದೂರಗೈವಳೆಂಬುವದೆ ನಿಶ್ಚಿತ | ಆಹಈ ವಿಧ ಮಹಿಮೆಯ ಓವಿ | ಪಾಲಿಸಿದನು |ಶ್ರೀವರ ಶ್ರೀ ಗುರು | ಗೋವಿಂದ ವಿಠಲಯ್ಯ 37
--------------
ಗುರುಗೋವಿಂದವಿಠಲರು
ನನಗಾವ ಬಲವಿಲ್ಲ ನಿರುಪಮನೆ ಹೇಳೈಯ ವನಜ ಸಂಭವ ಜನಕ ತವ ಚರಣ ವಲ್ಲದಲೆ ಪ ಮಣಿದು ಬೇಡುವೆನೈಯ ಪ್ರಣತಾರ್ಥಿ ಹರಕೃಷ್ಣ ಜನುಮಗಳ ಹರಿಸುತಲಿ ಭವಬಂಧ ಬಿಡಿಸೈಯಅ.ಪ ನರರ ನಂಬಿದೆ ನೈಯ ಸಿರಿಯುರಿಗೆ ಬಾಯ್ಬಿಟ್ಟೆ ಅರಿಯದೆಲೆ ತವ ಮಹಿಮೆ ಬರಿದೆ ಬಳಲಿದೆಭವದಿ ಧೊರೆ ತನವು ಸವಿಯಹುದೆ ತವ ಸವಿಯ ಕಂಡವಗೆ ಜರಿಯ ದಲೆ ಬಡವನನು ಕರೆದು ಪಾಲಿಸು ತಂದೆ 1 ಹಣ ವನಿತೆ ಭೂ ವಿಷಯ ಉಂಡುಂಡು ಬೆಂಡಾದೆ ತನುಜ ಕರಣಗಳಿನ್ನು ಶತ್ರುಗಳ ಸಮವಿಹವು ಗುಣ, ಪೂರ್ಣ ಬಿಂಬನನು ನೆನೆಯ ಗೊಡದಲೆ ನಿತ್ಯ ಇನಸುತನ ಪುರದೆಡೆಗೆ ಸೆಳೆಯುತಿಹವೋ ಸ್ವಾಮಿ 2 ಸುರರು ಸುರರಿಗಾಶ್ರಯ ನೀರ ಮರುತಗಾಶ್ರಯ ಸಿರಿಯು ಸಿರಿರಮಣನೀನಿರಲು ಚರಣ ಸೇವಕ ನೆನ್ನ ನರರಿಗೊಡ್ಡುವರೇನೊ ಸರ್ವೇಶ ಅಕ್ಷರನೆ ಮೊರೆ ಹೊಕ್ಕೆ ಸಲಹೈಯ 3 ದೇವ ದೇವರ ದೇವ ದೇವತ್ವ ನೀಡುವನೆ ಕಾವ ಜೀವರ ನಿಚಯ ಸಾರ್ವಭೌಮನು ನೀನು ನೀವಲಿದು ಪೊರೆಯದಿರೆ ಆಗುವುದೆ ಸುಖಮುಕ್ತಿ ನಾವಿಕನು ನೀನೆಂದು ನಂಬಿದೆನು ಕೈಪಿಡಿಯೊ 4 ಅಗಲಿ ಬದುಕಿರಲಾರೆ ಗೋಪ ಪುರುಷನೆ ನಿನ್ನ ಸುಗಮ ಮಾಡಿಸು ಪಥವ ಸರ್ವಜ್ಞ ತವಪುರಕೆ ನಗವೈರಿ ಜಯತೀರ್ಥ ವಾಯು ವಂತರದಿರ್ಪನಗೆ ಮೊಗದ ಶ್ರೀಕಾಂತ ಕೃಷ್ಣವಿಠಲನೆ ಬೇಗ 5
--------------
ಕೃಷ್ಣವಿಠಲದಾಸರು
ನನ್ನಿಂದ ನಾನೇ ಜನಿಸಿ ಬಂದೆನೆ ದೇವಎನ್ನ ಸ್ವತಂತ್ರವು ಲೇಶವಿದ್ದರು ತೋರು ಪ ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮಅ ಜನನಿಯ ಜಠರದಲಿ ನವಮಾಸ ಪರಿಯಂತಘನದಿ ನೀ ಪೋಷಿಸುತಿರೆ, ನಾನುಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದವನಜಾಕ್ಷ ನೂಕಿದವನು ನೀನಲ್ಲವೆ 1 ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂಹೊಲಿದು ಚರ್ಮವ ಹೊದಿಸಿ ದೇಹದೊಳುಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿನೆಲಸಿ ಚೇತನವನಿತ್ತವ ನೀನಲ್ಲವೆ 2 ಜನಿಸಿದಾರಭ್ಯದಿಂದ ಇಂದಿನ ಪರಿಯಂತಘನಘನ ಪಾಪ ಸುಕರ್ಮಂಗಳನುಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲಅನುಭವಿಸುವುದು ಜೀವನೊ ನೀನೊ ದೇವ 3 ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯುವಾಮುಂದಾಳು ತಪ್ಪಿ ಗುಂಡಿಗೆ ಕೆಡಹಲುಅಂಧಕನ ತಪ್ಪೊ ಅದು ಮುಂದಾಳಿನ ತಪ್ಪೊಹಿಂದಾಡಬೇಡ ಎನ್ನೊಳು ತಪ್ಪಿಲ್ಲವೊ 4 ಕಂದನ ತಾಯಿ ಆಡಿಸುವಾಗ ಅದು ಪೋಗಿಅಂದಿ ಬಾವಿಯ ನೋಡುವುದನು ಕಂಡುಬಂದು ಬೇಗನೆ ಬಾಚಿ ಎತ್ತಿಕೊಳ್ಳದಿದ್ದರದುಕಂದನ ತಪ್ಪೊ ಮಾತೆಯ ತಪ್ಪೊ ಪರಮಾತ್ಮ 5 ಭಾರ ನಿನ್ನದೊ ದೂರು ನಿನ್ನದೊ ಕೃಷ್ಣನಾರಿ ಮಕ್ಕಳು ತನುಮನ ನಿನ್ನದಯ್ಯಕ್ಷೀರದೊಳಗದ್ದು ನೀರೊಳಗದ್ದು ಗೋವಿಂದಹೇರನೊಪ್ಪಿಸಿದ ಮೇಲೆ ಸುಂಕವೆ ದೇವ 6 ನ್ಯಾಯವಾದರೆ ದುಡುಕು ನಿನ್ನದೊ, ರಂಗ, ಮತ್ತ-ನ್ಯಾಯವಾದರೆ ಪೇಳುವರಾರುಮಾಯಾರಹಿತ ಕಾಗಿನೆಲೆಯಾದಿಕೇಶವಕಾಯಯ್ಯ ತಪ್ಪನೆಣಿಸದೆ ದೇವ 7
--------------
ಕನಕದಾಸ
ನಂಬಿ ತುತಿಸಿರೋ ರಾಘವೇಂದ್ರ ಧ್ವರಿಯಾ ಸನ್ಮುನಿ ಕುಲವರಿಯಾ ಪ ಅಂಬುಜನಾಭನಿಗತಿ ಪ್ರೀಯಾ ಸಜ್ಜನರಿಗೆ ಸಹಾಯ ಅ.ಪ ಕನಕಶಯ್ಯನ ತನುಜನಾಗಿ ಜನಿಸಿ ನರಹರಿಯನ್ನೆ ಒಲಿಸಿ ಅನುಜರಿಗನುದಿನ ತತ್ತ್ವವ ತಾಕಲಿಸಿ ಮನದಲಿ ಶ್ರೀಹರಿ ಪದವನ್ನೇ ಭಜಿಸಿ ವರ ಕರುಣವನೇ ಸಲಿಸಿ ವನಜಭವಾಂಡದಿ ಬಹು ಬಲ್ಲಿದನೆನಿಪ ನತಜನರಿಗೆ ಸುರÀ 1 ಕಾಮಧೇನು ಸುರತರುವಿಗೆ ಸಮನೀತ ಕಾಮಿತ ಫಲ ದಾತಾ ರಾಮ ನರಹರಿ ಕೃಷ್ಣರ ಪದ ದೂತ ಲೋಕದಿ ಬಹು ಖ್ಯಾತ ಕಾಮಿನಿ ಸುತ ಧನ ಧಾನ್ಯದ ವ್ರಾತ ನೀಡುವೊನತಿ ಪ್ರೀತ ಪ್ರೇಮದಿ ನಿಜಜನಸ್ತೋಮಕೆ ಬಹು ದಾತ ಯತಿವರ ಕುಲನಾಥ 2 ಪಾತಕವನಕುಲ ವೀತಿಹೋತ್ರನೆನಿಸಿ ಭೂತಪ್ರೇತ ಮಹ ಭೀತಿಯನೇ ಬಿಡಿಸಿ ರೋಗವಪರಿಹರಿಸಿ ಮಾತಪಿತರ ತೆರ ದೂತರ ರಕ್ಷಿಸಿ ಮನೋಚಿಂತೆಯನೆ ಬಿಡಿಸಿ ದಾತಗುರುಜಗನ್ನಾಥವಿಠÀಲ ಪದದೂತ ದಾತ 3
--------------
ಗುರುಜಗನ್ನಾಥದಾಸರು
ನಂಬಿದೆನು ಚರಣಗಳ ಪಾಲಿಸೈ ಹರಿಯೇ ನಂಬಿದೆನು ಶ್ರೀ ಚನ್ನಕೇಶವನೆ ದೊರಿಯೇ ಪ ಸರಳೆ ದ್ರೌಪದಿಯಂತೆ ಕರಿರಾಜ ಧೃವರಂತೆ ದುರುಳ ಕನಕಾಸುರನ ನಿಜತನುಜನಂತೇ ಖಗರಾಜ ಕಪಿಯಂತೆ ವರತತ್ತ್ವ ಭೋಧಿಸಿದ ಯತಿಗಣಗಳಂತೇ 1 ಗೌತುಮನ ಸತಿಯಂತೆ ಯಾದವರ ಪಡೆಯಂತೆ ಭೂತಳದಿ ಪೆಸರಾದ ಹರಿದಾಸರಂತೇ ಕೋತಿ ಜಾಂಬವನಂತೆ ಅಮರೇಶ ಸುತನಂತೆ ಆತುರದಿ ನಂಬಿರುವ ಶ್ರೀ ಲಕ್ಷ್ಮೀಯಂತೆ 2 ನಾನಿತ್ತ ಪೂಜೆಯಿಂ ನಾಗೈದ ಭಜನೆಯಿಂ ನಾನಿಂದು ಮಾಡಿದಾ ಹರಿಸ್ಮರಣೆಯಿಂದ ನೀನೊಲಿದೆಯಿಂತೆಂದು ದೃಢವಾಗಿ ನಂಬಿದೆನು ಹೀನನನು ಸಲಹಯ್ಯ ಸ್ವಾಮಿ ಕೇಶವನೇ 3
--------------
ಕರ್ಕಿ ಕೇಶವದಾಸ
ನಂಬಿಭಜಿಸೊ ನಿರಂತರ | ನೆರೆ ನಂಬಿ ಭಜಿಸಿ ಮನವೆÉ ಪ ಕುಂಭಿಣಿನಾಥ ದಾಸಾರ್ಯ | ಸಹ್ಲಾದರಾ | ಶಲ್ಯಾಖ್ಯರಾ ಅ.ಪ ಆದಿಯುಗದಿ ಪ್ರಹ್ಲಾದನನುಜ | ಸಹ್ಲಾದನೆಂದೆನಿಸಿದರಾಯರ 1 ದ್ವಾಪರದಲ್ಲಿ ಶರಚಾಪಧಾರಿ | ಶಲ್ಯಭೂಪರೆನಿಸಿದ ರಾಯರು 2 ಭಾವಿ ಮರುತರಾಜರ ಪ್ರೀಯ ದೂತರ 3 ಪಾಲದಾಸರ ದಯಷಾತ್ರರ 4 ರಂಗವಲಿದ ಗುರುರಾಯರ 5 ದೀನಜನರಾಮರಧೇನುವೆಂದೆನಿಸಿದ ಮಾನವಿಕ್ಷೇತ್ರ ನಿವಾಸರ 6 ಬುಧರಿಗೆರೆದ ರಾಯರ 7
--------------
ಶಾಮಸುಂದರ ವಿಠಲ
ನಂಬು ನರಮೃಗನಾ|ಮನುಜಾ| ಅಂಬುಧಿವಾಸ ಶ್ರೀ ದೇವನಾ ಪ ಕುಟಿಲ ಶಠಸುರನುಪಟಳ|ಘಟಿಸೆ ಖಟಮ ನವ್ಯಾಟಪ್ತ ಬಾಯೆನೆ ಶರಣಾ| ಖಟಖಠಾನೆಂದು ವಿಸ್ಫುಟವಾಗಿ|ಸ್ತಂಬ| ಛಟಛಟಾನೆನೆ ಬ್ರಮ್ಹಾಂಡ | ಘಟಪಟುವಂತೆ ಯಾರ್ಭಟದಿಂದಲೊಗೆದನಾ1 ಅರಿಯನರದವನ ಕರಳು ಸರಧರಿಸಿ| ಭರದಿ ಪೊರೆದೆ ಡಂಗುರನಾ ಹರನಾ ಗುರುಮಹೀಪತಿ ಪ್ರಭು ಚರಣಚರನೆನಿಸಿದ| ಸ್ಮರಹರ ಅಜಸುರ ಪರರೊಡೆಯನಾ2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬು ಮನವೆ ರಾಮಚಂದ್ರನಾ ದ | ಯಾಂಬು ನಿಧಿ ಸದ್ಗುಣ ಸಾಂದ್ರನಾ|| ನಂಬಿದ ಭಕ್ತ ಕುಟುಂಬಿಯೆನಿಸುವ| ಅಂಬುಜನಾಭನ ಹಂಬಲವಿಡಿದು ಪ ದಶರಥ ಕೌಸಲ್ಯ ಬಸುರಿಲಿ ಬಂದು| ಋಷಿಮಖ ರಕ್ಷಿಸಿ ಶರದಿ|| ಅಸುರೆಯ ಭಂಗಿರಿಸಿ ನಡೆಯಲಿ|ಮುನಿ| ಅಸಿಯಳುದ್ದರಿಸಿ ಉಂಗುಟದಲಿ| ಅಸಮ ಧನುವೆತ್ತಿ ವಸುಧಿಯ ಮಗಳ ವ ರಿಸಿಕೊಂಡು ಬಂದನು ಕುಶಲವಿಕ್ರಮನಾ1 ಜನಕನ ವಚನಕ ಮನ್ನಿಸಿ|ಸತಿ| ಅನುಜನೊಡನೆ ವಿಹರಿಸಿ| ವನಚರ ಭೂಚರ ನೆರಹಿಸಿ|ದಾಟಿ| ವನಧಿಯೊಳಗ ಗಿರಿಬಂಧಿಸಿ|| ಮುನಿದು ಮರ್ದಿಸಿ ದಶಾನನ ಮುಖ್ಯ| ದನುಜರಾ ವನಸಿರಿ ಪದವಿ ವಿಭೀಷಣಗ ನೀಡಿದಾ2 ಸುರರಿಗೆ ನೀಡಿದಾನಂದನು|ಸೀತೆ| ವರಿಸಿ ಅಯೋಧ್ಯಕ ಬಂದನು| ಧರಿಸಿ ಸಾಮ್ರಾಜ್ಯದಿ ಹೊರೆದನು|ಗುರು| ವರ ಮಹಿಪತಿ ನಂದನೊಡೆಯನು|| ಅರಿತು ಸದ್ಬಾವತಿ ಸರಿಸಲಿ ಸದ್ಗತಿ| ಶೆರೆವಿಡಿದೆಳೆತಹದರಿಯಲೋ ನಾಮಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮಿಸು ಮನವೆ ನೃಹರಿ ರೂಪವಾ | ರೋಗ ಹರಣನಾ ಪ ಹರಣ | ಸುರಪ ಪಾಲಕನಾ ಅ.ಪ. ಸಕಲ ಸುರರ ದನುಜ ಭಾದಿಸೆ | ಹರಿಗೆ ಮೊರೆಯಿಡೇಅಕಳಂಕ ಮಹಿಮ ಅಭಯವಿತ್ತು | ಅವರ ಕಳುಹಿದಾ 1 ಸುರರು ಪಾಡಿದರೂ 2 ಪಿತನು ತನ್ನ ಸುತನ ಭಾದಿಸೆ | ಹರಿಯೆ ಚರಣವಾಸತತ ನಮಿಸಿ ಭಜಿಸಿ ಭರದಿ | ಕಂಬದಿ ಕರೆದನೂ 3 ಭೃತ್ಯನ್ವೊಚನ ಸತ್ಯ ಮಾಡೆ | ಸ್ತಂಭವ ಸೀಳುತಾವೃತ್ಯಸ್ತವಾಗೆ ಸಕಲರ್ ಹೃದಯ | ಘಡ ಘಡೀಸುತಾ 4 ದೈತ್ಯನುದರ ಬಗೆದು ಕರುಳ | ಮಾಲೆ ಧರಿಸುತಾನೃತ್ಯವಾಡಿ ತನ್ನ ಪ್ರಳಯ ರೂಪವ ತೋರಿದಾ 5 ಅಕ್ಷರಜ್ಞೆ ಲಕುಮಿ ದೇವಿ | ಪಕ್ಷಿವಾಹನನಾಲಕ್ಷಣ ವೀಕ್ಷಿಸಿ ಕುಕ್ಷಿಯ ಬಿಡುತ | ವತ್ಸನ ನೂಕಿದಳು 6 ಮೋದ ಪಡಿಸುತಾಸದಯದಿಂದ ಗೈದ ಅವನ | ಭಕ್ತ ಶ್ರೇಷ್ಟನಾ 7 ಪತಿ 8 ಭವ ಕೂಪಾ9
--------------
ಗುರುಗೋವಿಂದವಿಠಲರು
ನಮಿಸುವೆನು ಭಕ್ತಿಯಲಿ ಚನ್ನಕೇಶವನೇ ಮೂರ್ತಿ ಅಜಸುರಾರ್ಚಿತನೇ ಪ ಕರಿರಾಜ ಖಲನಕ್ರ ಭಾಧೆಯಿಂ ಮರೆಹೊಗಲು ಕರಿಯನ್ನು ಸಲಹಿ ನಕ್ರಕೆ ಮೋಕ್ಷವವಿತ್ತೇ ಕರು ನೃಪತಿಯನುಜ ದ್ರೌಪದಿ ಮಾನ ಕಳೆಯುತಿರೆ ಶರಣೆಂದ ಮಾನಿನಿಗೆ ಅಕ್ಷಯವನಿತ್ತೇ 1 ಮಂದರವ ಪೊತ್ತೆ ನೀ ಸುರರಿಗಮೃತವ ನಿತ್ತೆ ಚಂದದಿಂದಜಮಿಳಗೆ ಅಂತ್ಯದಲಿ ವಲಿದೇ 2 ದಾಸಗೊಲಿಯುವಿಯಂತೆ ಭಕ್ತಜನರಿಗೆ ನಿತ್ಯ ಭಾಸವಾಗುವಿಯಂತೆ ವಿಶ್ವರೂಪದಲ್ಲಿ
--------------
ಕರ್ಕಿ ಕೇಶವದಾಸ
ನಮಿಸುವೆನು ವ್ಯಾಸಾರ್ಯ | ಸುಮನಸರಿಗತಿ ಪ್ರೀಯ ವಿಮಲಕೀರ್ತಿ ಸುಶಯ್ಯ ಯತಿವರಾರ್ಯ ಪ ಅಮಮ ನಿಮ್ಮಯ ಕೀರ್ತಿ ಪೊಗಳಲಳವೇ ಎನಗೆಸುಮನಸ ಮುನಿಯನುಗ್ರಹೀತಾ - ಖ್ಯಾತಾ ಅ.ಪ. ಕನಕ ಕಶ್ಯಿಪು ಸುತನೆ | ಧನಕನಕ ತೃಣಗಣನೆಅಣು ಘನನ ಶ್ರೀ ಚರಣ | ವನಜ ಭ್ರಮರಾ |ಮನುಜಮೃಗ ವೇಷ | ಶ್ರೀ ನರಹರಿಯ ಮೂರ್ತಿಯನುಘನವಾದ ಸ್ತಂಭದೊಳು | ಕರೆದು ತೋರಿಸಿದೇ 1 ಮತ್ತೆ ನೀ ತ್ರೇತೆಯಲಿ | ಹತ್ತು ತಲೆ ರಾವಣನಭ್ರಾತೃವಾಗವತರಿಸಿ | ಕೀರ್ತಿಯಲಿ ಮೆರೆದೇ |ಭೃತ್ಯ ಭಾವದಿ ನಮಿಸಿ | ಸತ್ಯಾತ್ಮ ಶ್ರೀಹರಿಯವಿಸ್ತರದ ಕೀರ್ತಿಯಲಿ | ಲಂಕ ಪತ್ತನವಾಳ್ದ 2 ನರಪ ಪ್ರತೀಪನಾ | ಪರಸೂನು ವೆಂದೆನಿಸಿ ಕುರುಪತಿಯ ಋಣಸೇವೆ | ಸರಿಯಾಗಿ ಸಲಿಸೀ |ಮರುತಾತ್ಮ ಭೀಮನಿಂ | ವರವನೇ ಪಡೆಯುತ್ತವರ ಕಲೀಯಲಿಯತಿ | ವರನೆನಿಸಿ ಮೆರೆದೇ 3 ಬ್ರಹ್ಮಣ್ಯಯತಿ ಕರಜ | ಬ್ರಹ್ಮ ಬ್ರಾಹ್ಮಣ ಪ್ರೀಯಬ್ರಹ್ಮಣ್ಯ ಪ್ರೀಯ ಸು | ಬ್ರಹ್ಮಣ್ಯನಾವೇಶನೇ |ಬ್ರಹ್ಮಾಸ್ಮಿ ಎಂದೆನಿಪ | ಬ್ರಹ್ಮದ್ವೇಷಿಯ ನಿಕರಬ್ರಹ್ಮಾಂಡದಲಿ ತರಿದೇ | ಬ್ರಾಹ್ಮಣರ ಪೊರೆದೇ 4 ಭಾಗವತ ಪ್ರೀಯ 5
--------------
ಗುರುಗೋವಿಂದವಿಠಲರು
ನಮೋ ನಮಸ್ತೇ ನರಸಿಂಹ ದೇವಾ ಸ್ಮರಿಸುವವರ ಕಾವಾ ಪ ಸುಮಹಾತ್ಮ ನಿನೆಗೆಣೆ ಲೋಕದೊಳಾವಾ ತ್ರಿಭುವನ ಸಂಜೀವಾ ಉಮೆಯರಸನ ಹೃತ್ಕಮಲದ್ಯುಮಣಿ ಮಾ ರಮಣ ಕನಕ ಸಂಯಮಿ ವರವರದಾ ಅ ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ ದಾನವ ಕುಲಭೀಮಾ ಸನ್ನುತ ಬ್ರಹ್ಮಾದಿ ಸ್ತೋಮಾ ಸನ್ಮಂಗಳ ನಾಮಾ ಚಿತ್ರ ಮಹಿಮನಕ್ಷತ್ರನೇಮಿಸ ರ್ವತ್ರಮಿತ್ರ ಸುಚರಿತ್ರ ಪವಿತ್ರ 1 ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕ ಶರಣ್ಯ ಶಫರಕೇತು ಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯಕ ಶಿಪುಸುತನ ಕಾಯ್ದಪೆನೆನುತಲಿ ನಿ ಷ್ಕಪಟ ಮನುಜಹರಿವಪುಷ ನೀನಾದೆ 2 ತಪನ ಕೋಟಿ ಪ್ರಭಾವ ಶರೀರಾ ದುರಿತೌಘವಿದೂರಾ ಪ್ರಪಿತಾಮಹ ಮಂದಾರ ಖಳವಿಪಿನ ಕುಠಾರಾ ಕೃಪಣಬಂಧು ತವ ನಿಪುಣತನಕೆ ನಾ ನುಪಮೆಗಾಣೆ ಕಾಶ್ಯಪಿವರವಾಹನಾ 3 ವೇದವೇದಾಂಗವೇದ್ಯಾ ಸಾಧ್ಯ ಅಸಾಧ್ಯ ಶ್ರೀದ ಮುಕ್ತಾಮುಕ್ತರಾರಾಧ್ಯಾ ಅನವದ್ಯ ಮೋದಮಯನೆ ಪ್ರಹ್ಲಾದವರದ ನಿ ತ್ಯೋದಯ ಮಂಗಳ ಪಾದಕಮಲಕೆ 4 ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ ನಿನಗೆ ಬಿನ್ನೈಸುವೆ ಎನ್ನಯ ಮಾತಾ ಲಾಲಿಸುವುದು ತಾತಾ ಗಣನೆಯಿಲ್ಲದವ ಗುಣವೆನಿಸಿದೆ ಪ್ರತಿ ಕ್ಷಣಕೆ ಕಥಾಮೃತ ಉಣಿಸು ಕರುಣದಿ 5
--------------
ಜಗನ್ನಾಥದಾಸರು