ಒಟ್ಟು 1541 ಕಡೆಗಳಲ್ಲಿ , 104 ದಾಸರು , 1320 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂರ ಮಾಡುವರೇ ಶ್ರೀಶ ಪ ದೂರ ಮಾಡುವರೇದೂರ ಮಾಡುವರೇನೋ ಶ್ರೀಶದಾರಿ ಕಾಣದೆ ಮೊರೆಯನಿಡುವೆಆರು ಕಾಯುವರಿಲ್ಲ ಶ್ರೀಶಸಾರಸಾಕ್ಷ ಸಲಹೆ ಬೇಡುವೇ ಅ.ಪ. ಸಕ್ತಿ ಇಲ್ಲವೋ | ನಿನ್ನೊಳಾಸಕ್ತಿ ಇಲ್ಲವೋ |ಸಕ್ತಿ ನಿನ್ನಲ್ಲಿಲ್ಲದೇಲೇಮುಕ್ತಿ ಇಲ್ಲವೆಂದು ಶೃತಿಯಉಕ್ತಿ ಕೇಳಿ ಕೇಳಿದಾಗ್ಯೂ ವಿ-ರಕ್ತಿ ಪುಟ್ಟಲಿಲ್ಲ ಎನಗೆ ಭಕ್ತಿಮಾರ್ಗ ದೂರವಾಯ್ತೊ 1 ದುಷ್ಟ ವಿಷಯದೀ | ಮನವುಅಟ್ಟಿ ಪೋಗೋದೋ |ಎಷ್ಟು ಪೇಳಿದಾರೂ ಮನವುನೆಟ್ಟಗಾಗೋ ಪರಿಯ ಕಾಣೆಸೃಷ್ಠಿಗೀಶ ಮನವ ಅಭಿಧಸೊಟ್ಟ ಮನವ ಸರಿಯ ಪಡಿಸಿ | ಶ್ರೇಷ್ಠ ನನ್ನ ಮಾಡದ್ಹಾಂಗೆ 2 ಕೈಯ್ಯ ಬಿಡುವರೇ | ದಯಾಳು ವಿಷಯಧುಯ್ಯಲು ಕಳೆಯದೇ |ಪ್ರೇರ್ಯ ಪ್ರೇರಕನಾಗಿ ನೀನುಮಯ್ಯ ಮರೆಸಿ ಧೈರ್ಯಗೆಡಿಸೆಆರ್ಯರಿದನ ಸಯ್ಯೆಂಬೊರೇನೋಅಯ್ಯ ಕೈಯ್ಯ ಬಿಡದೆ ಕಾಯೋ | ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ದೂರಕ್ಕೆ ದೂರನೆಂದು ಹೆರೆ ಸಾರಲಿ ಬೇಡಸಾರಿಗೆ ಸಾರಿ ನಮ್ಮ ಕೃಷ್ಣನ್ನ ಸಾರಿರೈಯ ಪ ಅನಂತ ಜನುಮದೊಳೊಂದೆ ಜನುಮಅನಂತ ಕ್ಷಣದೊಳಗೊಂದೆ ಕ್ಷಣಅನಂತ ನಾಮದೊಳೊಂದೇ ನಾಮವಮುನಮುಟ್ಟಿ ನೆನೆದರೆ ಬೆನ್ಹತ್ತಿ ಬಿಡನೈಯ 1 ಅನಂತರೂಪದೊಳೊಂದೆ ರೂಪಅನಂತ ಗುಣದೊಳಗೊಂದೆ ಗುಣಅನಂತ ಜೀವರೊಳಗಾವನಾದರುಂ ಕನಸಿಲಿ ನೆನೆದರೆ ಋಣಿಯಾಗಿಪ್ಪನೈಯ 2 ಒಂದೆ ಹೂವು ಒಂದೆ ಫಲವೊಂದೆಬಿಂದು ಜಲವೊಂದೆ ತುಳಸಿಒಂದೇ ವಂದನೆಯೊಂದೆ ಪ್ರದಕ್ಷಿಣೆಒಂದನರ್ಪಸಿದೊಡಂ ಕುಂದದಾನಂದವೀವನೈ 3 ಹರಿ ಚಿನ್ಹಾಂಕನ ಹರಿದಿನದುಪವಾಸನೆರೆಯೂಧ್ರ್ವ ಪುಂಡ್ರ ತುಳಸಿಮಾಲೆಹರಿಯುತ್ಸವ ಸೇವೆ ಹರಿದಾಸರ ಸಂಗದುರಿತಾಬ್ಧಿಗೆ ಕುಂಭಸಂಭವನಲ್ಲವೆ 4 ಹರಿಪಾದ ತೀರ್ಥವು ಹರಿಯ ನಿರ್ಮಾಲ್ಯವುಹರಿ ಆರತಿ ಧೂಪ ಶೇಷಂಗಳುಹರಿಯ ಪ್ರಸಾದ ಶಂಖೋದಕ ಪ್ರತ್ಯೇಕದುರಿತ ರಾಸಿಗಳನ್ನು ಸೋಕಲು ಸುಡದೆ 5 ಒಮ್ಮೆ ಪಾಡಿದಡಂ ಒಮ್ಮೆ ಪೊಗಳಿದೊಡಂಒಮ್ಮೆ ಬೇಡಿದಡಂ ಒಮ್ಮೆ ನೋಡಿದಡಂಒಮ್ಮೆ ಸಾರಿದಡಂ ಮತ್ತೊಮ್ಮೆ ಕರೆದಡಂನಮ್ಮಾತನಿವನೆಂದು ಕೈಯ ನೀಡುವನೈಯ 6 ತನ್ನಲ್ಲಿಪ್ಪನಾಗಿ ದೂರನಲ್ಲ ನರಹೊನ್ನು ಬೇಡ ಲಕುವಿರಮಣಗೆ ಅನ್ಯವ್ಯಾತಕ್ಕೆ ಈ ಪರಿಪೂರ್ಣಾನಂದಗೆನಿನ್ನವನೆಂದರೆ ತನ್ನನೀವನು ಕೃಷ್ಣ7
--------------
ವ್ಯಾಸರಾಯರು
ದೂರದಿ ನಿಲಿಸಯ್ಯ ರಂಗಯ್ಯ ದೂರದಿ ನಿಲಿಸಯ್ಯ ನಿನ್ನ ನೀರಜಪಾದವ ಈಕ್ಷಿಸುವಷ್ಟೇ ಪ ಸಾರಸಭವ ವಾಲ್ಮೀಕಿ ಪುರಂದರ ನಾರದರೆಲ್ಲ ನಿನ್ನ ಬಳಿಯೊಳೆ ಇರಲೀ ಅ.ಪ ಹನುಮ ಖಗೇಶ್ವರ ದನುಜ ವೈರಿಗಳೆಲ್ಲ ನಿತ್ಯ ಸೂರಿಗಳು ಘನ ವೇದಾಂತ ಸಂಗೀತ ಕೋವಿದರು ವನಜನಾಭನೆ ನಿನ್ನ ಸೇವಿಸುತಿರಲಿ 1 ಮಣಿದು ಮಣಿದು ನಿನ್ನ ಗುಣಗಳ ಬಣ್ಣಿಸಿ ಕುಣಿ ಕುಣಿದೆರಗುವ ಭಕ್ತರ ಬಳಿ ನಾ ತೃಣಕೆ ಸಮ ನಾನಿಣುಕಿ ಬಾಗಿ ಮಣಿವಂತೆ ಮಾಡೋ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೂರದಿ ನಿಲ್ಲೆಲೆ ಬಾಲೆ ಎನ್ನ ಜಾರನು ಎಂದು ತಿಳಿದೆಯಾ ಜಾರೆ ಅಹಲ್ಯೆಯ ನಾರಿ ಮಾಡಿದ ಬ್ರಹ್ಮಚಾರಿಯೆಂದರಿತೆನೊ 1 ಅಂಗಸಂಗ ಯಾಚಿಸಲು ಎನ್ನ ಅ ನಂಗನೆಂದು ಭ್ರಮಿಸಿದೆಯಾ ಸಂಗದಿಂದ ಪಾಪಭಂಗ ಮಾಡುವ ಅ ನಂಗಜನಕನೆಂದರಿತೆ 2 ಪತಿಯನು ಬಿಟ್ಟು ನೀ ಬಂದು ಬಾಲೆ ಪತಿತಳಾಗದಿರು ಇಂದು ಪತಿತ ಪಾವನ ಜಗತ್ಪತಿಯು ಎನಗೆ ನೀನೆ ಪತಿಯೆಂದು ತಿಳಿದು ಬಂದಿರುವೆ 3 ನಿಂದಿಸರೇ ನಿನ್ನ ಜನರು ಬಾಲೆ ಹಿಂದು ಮುಂದು ನುಡಿಗಳಲಿ ಮುಕುಂದನೆ ಪ್ರಿಯಳನು ನಿಂದಿಪ ಜನರೆಲ್ಲ ಮಂದಮತಿಗಳಲ್ಲವೇನೊ 4 ನಿನ್ನ ನಡತೆ ತರವಲ್ಲ ಬಾಲೆ ಚೆನ್ನಾಗಿ ಯೋಚಿಸು ಎಲ್ಲ ಇನ್ನು ತಾಳಲಾರೆ ಕನ್ಯೆಯ ಮೇಲೆ ಪ್ರ ಸನ್ನನಾಗೋ ಶ್ರೀಕೃಷ್ಣ 5
--------------
ವಿದ್ಯಾಪ್ರಸನ್ನತೀರ್ಥರು
ದೂರಮಾಡು ದೂರಮಾಡು ದುರ್ಜನ ನೆರೆಯ ಸಾರಸಾಕ್ಷನೆ ಬೇಗ ದುಷ್ಟಸಂಗತಿಯ ಪ ಸೇಂದಿ ಸೆರೆ ಕುಡಿದು ಮನಬಂದಂತೆ ಕುಣದಾಡಿ ನಿಂದಿಸಿ ಕಂಡವರಿಂ ತಿಂದು ಲತ್ತೆಯನು ಮಂದಿಯೋಳ್ಮುಖದೋರ್ವ ಹಂದಿಮನುಜರ ದರ್ಶ ನೆಂದೆಂದು ಬೇಡೆನಗೆ ಮಂದರಾದ್ರಿನಿಲಯ 1 ನೂತನದ ಮಾತಾಡಿ ಖ್ಯಾತಿಯಿಂ ತೋರ್ಪಡಿಸಿ ಮಾತುಮಾತಿಗೆ ವಂಚಿಸಾತುರಕೆ ಪರರ ಘಾತಗೈಯುವ ಮಹಪಾತಕರ ಸಂಗ ಮಮ ದಾತ ಜಗನ್ನಾಥ 2 ಧ್ಯಾನದಾಸರ ಕಂಡು ಜ್ಞಾನವಿಲ್ಲದೆ ತುಸು ಹೀನಮಾತುಗಳಾಡಿ ಏನುಕಾಣದಲೆ ಶ್ವಾನನಂದದಿ ಚರಿಪ ಮಾನಹೀನರ ನೆರಳು ಏನಿರಲುಬೇಡ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು
ದೂರಿಗೊಳಗಹುದೇನೆಲೊ ಬರಿ ದೂರಿಗೊಳಗಹುದೇನೆಲೊ ಹರಿಧ್ಯಾನವನು ನೀ ಮಾಡದೇ ಪ ಅಪರೂಪ ಜನ್ಮವು ಬಂದಿದೆ ಕಪಿಚೇಷ್ಟೆಗಳು ನಿನ್ನ ಹೊಂದಿದೆ ಜಪ ಶಾಸ್ತ್ರದೊಳು ಹೀಗೆಂದಿದೆ 1 ಕಟಪತನಗಳದ್ಯಾತಕೋ ಯಿದು ತ್ರಿಪುಟಿಯೊಳಗದು ನೀತಿಕೋರ ನ ಪರನಾಗಲಿದ್ಯಾಕೊ ನೋಡದ ಗುಪಿತದಿಂದಲಿ ಭಜಿಸದೆ 2 ನಾನು ನನ್ನದು ಎಂಬುವೇ ಅಲ್ಲಿ ಗೇನು ಬಂದರು ತಿಂಬುವೇ ಹಾನಿಗೊಳಗಾಗಿ ನಮ್ಮಯ ಶ್ರೀನಿವಾಸನ ಭಜಿಸದೆ 3 ಎಂಟುಗೇಣಿನ ದೇಹವು ಅದು [ಕುಂಟು]ಸೋಹಮಸ್ಮಿಯ ಭಾವವು ಕಂಟಕಾಂತಕ ತಲಸಿಮದ್ಗುರು ವುಂಟು ನಿನ್ನೊಳಗರಿಯದೆ 4
--------------
ಚನ್ನಪಟ್ಟಣದ ಅಹೋಬಲದಾಸರು
ದೂರು ಯಾತಕ್ಕೆ ತರಲ್ಯಮ್ಮಾ | ಯಶೋದಮ್ಮ || ವಾರಿಜ ಮುಖಿಯರು ಶೇರದೆ ಹೇಳ್ವರು ಪ ವಂದು ದಿನ ನಾ ಮನಿಯ ಬಿಟ್ಟು ಹೋಗುವೆನೆಯಲ್ಲ್ಯೊ | ಬಂದು ಹೇಳುವರೆಲ್ಲ ಕೇಳು ಗೋಕುಲದೊಳು | ಸಂದು ಸಂದನೆ ತಿರುಗಿ ಮಂದಗಮನಿಯರು | ಹೊಂದಿ ಒದಗಿ ಬಾಯಂದದ್ದು ನಿಜಮಾತು 1 ಯನ್ನ ಮಾತನ್ನು ಸುಳ್ಳಾದರೆ | ಗೋವಳ್ಹಾರೇ ಮನ್ನಿಸಿ ಬದಿಗೆ ಕರೆದುಕೇಳು | ಅವರಿಗೆ ಹೇಳು ಕನ್ಯೆಯರೆಲ್ಲಾ ಬಂದು ಬೆಣ್ಣೆಗಳ್ಳನೆಂದು ಕಣ್ಣಿಲಿ ನೋಡದೆಯನ್ನ ದಂಡಿಸುವರೇ2 ಪರರ ಮನೆಯೊಳಗಿರುವ ಮಡಿಕೆ ಪಾತ್ರೆ ನಿನಗ್ಯಾಕೆ | ಸ್ಥಿರ ಕ್ಷೀರಾಂ ಬುಧಿಶಯನನಾಗಿ | ಇರವದು ಆಗಿ | ಪುರದ ಸ್ತ್ರೀಯರು ಯಲ್ಲ ದೊರೆ ಹೆನ್ನೆ ವಿಠಲನೆಂದು ಮರೆತು ಹೇಳಲಿ ಬಹು ಸ್ಥಿರವಾಗಿ ಮಾಡುವರೇನೆ 3
--------------
ಹೆನ್ನೆರಂಗದಾಸರು
ದೃಷ್ಟಿ ದೋಷವು ತಗಲಿತೆನ್ನ ಕಂದನಿಗೆ ಪ ದೃಷ್ಟಿಗೋಚರನಲ್ಲದಾ ದೇವ ರಕ್ಷಿಸಲು ಅ.ಪ ಸೇರು ಬೆಣ್ಣೆಯ ತಿಂದು ದೂರು ಕೇಳಿದೆನಿಂದು ಚಾರು ಮುಖಿಯರ ನೋಟ ಕ್ರೂರವೆಂದರಿ ಕಂದ ಈರೇಳು ಭುವನಗಳ ತಿಂದು ತೇಗುವ ದೇವ ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ 1 ಎಂದು ಕಾಣೆವು ಇಂಥಾ ಸುಂದರನ ನಾವೆಂದು ಮಂದಗಮನೆಯರ ನುಡಿ ಅಂದವಾಯಿತೆ ಕಂದ ಸಂದೇಹವಿಲ್ಲವರ ಶೃಂಗಾರಕೀ ಫಲವು ಜಲಧಿ ಮನುಮಥನ ಮನುಮಥನೆ ಗತಿ 2 ನೀರು ಮಂತ್ರಿಸಿದಾಯ್ತು ಬೂದಿ ಮಂತ್ರಿಸಿದಾಯ್ತು ನಾರಸಿಂಹಾದಿ ವರಮಂತ್ರಗಳ ಜಪವಾಯ್ತು ಭಾರಿ ಪುಸಿಯಾಯ್ತು ಜನನಿಯೊಲು ಹರಸಿದೀತನಲಿ ಮೀರಿಹನು ಯಂತ್ರ ಮಂತ್ರಾರ್ಥವೆಲ್ಲಾ ಪ್ರಸನ್ನ3
--------------
ವಿದ್ಯಾಪ್ರಸನ್ನತೀರ್ಥರು
ದೇವ ದೇವ ಲೋಕೇಶ್ವರಾ ರಾಮ ಪ ಪಾವನಾತ್ಮ ಪರಾತ್ಪರಾ ದೋಷದೂರಾ ಜೀವ ಜೀವ ಚರಾಚರ ಗೂಢಚಾರ ಅ.ಪ ತ್ರಿಗುಣಾತ್ಮಕಲೀಲಾ ಕರುಣಾಲವಾಲಾ 1 ಧರಣಿಜಾ ಕಳತ್ರಾ ಕರುಣೈಕ ಪಾತ್ರಾ 2 ಜವ ಜೀವನೇ ಶ್ರೀಧವ ಮಾಂಗಿರೀಶ || 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವರ ದಿವ್ಯಗುಣಗಳ ಪೊಗಳುವದು ಜೀವರಿಗಿದುವೆ ಪ್ರಯೋಜನವು ಪ ಭಾವದಿ ತೋರುವ ವಿಷಯಗಳೆಲ್ಲವು ಭಕ್ತಿಯೊಳರಿತು ಸಮರ್ಪಿಸುತಂ ಅ.ಪ ನಡೆವದು ನುಡಿವದು ಕೊಡುವದು ಬಿಡುವದು ಒಡೆಯ ಹರಿಯ ಪ್ರೇರಣೆಯೆಂದು ದೃಢಮನದಲಿ ತಿಳಿದಾವಾಗಲು ತಾ ಮೃಢ ಸಖನಡಿ ಧ್ಯಾನಕೆ ತಂದು 1 ಅರಿಯದೆ ಪಾಮರರೊರಲುವ ಬೋಧೆಯ ತರತರದಿ ತಿರಸ್ಕರಿಸುತಲೀ ಭವ ಭಯಗಳನೀಡಾಡುತಲಿ 2 ಜನನ ಮರಣ ದೂರ ಪರಾತ್ಪರ ಪಾ- ವನ ಚರಿತ್ರ ಭಾಸುರ ಗಾತ್ರಾ ವನಜನಯನ ಗುರುರಾಮವಿಠಲ ಎಂ- ದನುದಿನ ಭಜಿಸುವನೆ ಪವಿತ್ರ 3
--------------
ಗುರುರಾಮವಿಠಲ
ದೈವಕೃಪೆ ಇದಲ್ಲಾ ಇವರಿಗೆ ಭಾವ ಶುದ್ಧಿಯಿಲ್ಲಾ ಪ ದೇವತೆಗಳು ಸಂತೋಷಿಸರೆಂದಿಗು ನಾವೆಂಬಹಕಾರದಿ ಮಾಳ್ಪದರಲಿ ಅ.ಪ ಮದುವೆಯ ಪೆಸರಿರಿಸಿ | ದೂರದಿಂ ವಿವಿಧ ಬಂಧುಗಳ ಕರಸಿ ವಧುವರರಿಗವರು ವುಡುಗೊರೆ ವೋದಿಸ- ಲದನೇಯವರಿಗೆ ಹಿಂದಕ್ಕೆ ಕೊಡುವುದು 1 ಕೊಡದಿದ್ದರೆ ಕೋಪಾ | ಕೊಟ್ಟರೆ ಕಡು ಮೂಢರಿಗೆ ಪುಣ್ಯವೆಲ್ಲಿಹುದು ಸಡಗರ ಭ್ರಾಂತಿಯು ಡಂಬವು ಬರಿದೆ 2 ತಂತ್ರಗಳಾಚರಿಸೆ ಯಂತ್ರೋದ್ಧಾರಕ ಗುರುರಾಮವಿಠಲಾ ಸಂತಸಡುವನೆ ಧನವ್ಯಯ ಬರಿದೆ 3
--------------
ಗುರುರಾಮವಿಠಲ
ದೋಷ ದೂರ ಜನಾರ್ದನ ದೋಷ ದೂರಾ ಪ ದೋಷ ದೂರ ಎನ್ನ ಸಾಕುವುದು ಪರಾಶರವರದಾ ಅ ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನ ಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ 1 ಪುಂಡರೀಕ ಪಾದ ತಿಮಿರ ಮಾರ್ತಾಂಡ ಮುರವೈರಿ 2 ಅಜಗೆ ಪ್ರಸನ್ನ ವಿರಜಭಾಗ್ಯ ಸಂಪನ್ನ ವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ 3
--------------
ವಿಜಯದಾಸ
ದೋಷ ದೂರಿಸೈಯ್ಯಾ ಎನಗೆ ನೀ ತೋಷವೀವುದಯ್ಯಾ ಪ ಆಸವ ಶ್ರೀತುಲಸೀವಾಸನಿಲಯ ಸ- ರ್ವೇಶಹರಿಯ ದುರ್ವಾಸ ವಿಠಲರಾಯ ಅ.ಪ. ರಾಘವ ರಘುಕುಲ ಸೋಮನ ಸದಯ ಸ- ರ್ವಾಘ ಹರಿದ ನಿಖಿಳಾಗಮಗಳೊಡೆಯ 1 ಯಾದವ ಯದುಕುಲ ತಿಲಕಾವ್ಯಯ ಮಧು- ಸೂದನ ತ್ರಿದಶನು ವೇದ್ಯದಾಸ ವಂದ್ಯಾ 2 ನರಹರಿಕರುಣಾರ್ಣವ ಶರಣರ ಗುರು ಕರುಣವಿರಿಸು ನರಸಿಂಹವಿಠಲರಾಯ 3
--------------
ನರಸಿಂಹವಿಠಲರು
ದ್ರೋಹಿಯೋ ನಾನಿನಗೆ ದ್ರೋಹಿಯೋ ಪ ಪಾಹಿ ಬ್ರಹ್ಮಜವಂಶ ಪಾಪ ಬ್ರಾಹ್ಮಣ ಪ್ರಿಯ ಅ.ಪ ಸ್ವಪ್ನ ಜಾಗ್ರತೆ ನಿದ್ರೆ ಮೋಕ್ಷಾವಸ್ಥೆಯಲ್ಲಿ ತೈಜಸ ವಿಶ್ವ ಅಪ್ಪತುರೀಯನಾಗಿ ದಾತ ನಿನ್ನನ್ನು ಬಿಟ್ಟು ಬೆಪ್ಪನಂದದಿ ನರರ ಯೆಂಜಲ ಬಯಸುವೆ 1 ಬಿಂಬ ಮೂರ್ತಿಯು ನೀನು ಪ್ರತಿ ಬಿಂಬನಾನಿನಗೆ ತುಂಬಿ ಅಂತರ್ಬಹಿ ಮೆರೆವ ವಿಷ್ಣುವೆ ನಿನ್ನ ನಂಬಿದೆ ದೃಢದಿಂದ ಬರಿದೆ ಹಂಬಲಿಸುವೆ ಬೆಂಬಲನಾಗಿದ್ದು ತುಂಬೊ ನಿನ್ನಯ ಭಕ್ತಿ 2 ಸತಿ ಸುತ ಪಿತರಲ್ಲಿ ತಿಳಿಯದೆ ನಿನ್ನಿರವ ಹಿತರವರು ಬರಿದೆಂಬ ಭ್ರಾಂತಿಯ ನೀಗದೆ ಖತಿಯ ಪಡುವೆನು ಭವದಿ ಕುಮತಿಯನಗೆಮುಂದೆ ಗತಿಯೇನು ಜಗದೀಶ ಮರೆತು ನಿನ್ನನು ದೇವ 3 ಕಸವ ರಸವೆಂದು ಬಯಸುವೆ ವಿಷಯವ ರಸವ ವಿಷವೆಂದು ತೊರೆದು ಜೀವಿಸುತಿರ್ಪೆ ಅಸಮವಿಷಣವಿಷ್ಣು ಆತ್ಮಾಖ್ಯಾತನ ನಿನ್ನ ತುಸಸಹ ನೆನೆಯದೆ ಹುಸಿಯ ದಾಸನಾಗಿ 4 ನನ್ನದಲ್ಲದ ಒಡವೆ ನನ್ನದೆಂದು ತಿಳಿವೆ ನಿನ್ನ ಸ್ವಾಮಿತ್ವವ ಮರದು ಮೆರೆಯುತಿರ್ಪೆ ನನ್ನದೇ ಸ್ವಾತಂತ್ರವೆಂದು ತಿಳಿದು ಭವದಿ ಹುಣ್ಣು ತಿಂದೆನು ದೊರೆಯೆ ಕೊಡದೆ ನಿನ್ನದುನಿನಗೆ 5 ವೇದ ವೋದುವ ನಾನು ನಾನೆನೀನೆಂಬುವೆ ಭೇದವ ತಿಳಿಯದೆ ಭಜಿಸುವೆ ಕುವಿದ್ಯೆ ಬಾದರಾಯಣಗುದರ ಭೇದವ ನುಡಿಯುವೆ ಮಧ್ವಮಂದಿರ ಕೃಷ್ಣ ನೀನಿಲ್ಲ ವೆನ್ನುತ6 ಪೂರ್ಣ ಗುಣದವ ನಿನ್ನ ನಿರ್ಗುಣನೆಂಬುವೆನು ಪೂರ್ಣರಲ್ಲದ ಸುರರ ಸಾಟಿ ನಿನಗೆಂಬುವೆನು ಪೂರ್ಣಬೋಧರ ಕರುಣ ಕೊಡಿಸದ್ದಿದರೆಯಿನ್ನು ಜ್ಞಾನ ಮಾರ್ಗವ ಕಾಣೆ ಸ್ವಾಮಿ ಜಗಜ್ಜನಕ 7 ಜನನ ಮರಣ ರಹಿತ ಜನಿಸುವೆ ನಮ್ಮೊಡನೆ ಕ್ಷಣ ಬಿಟ್ಟಗಲದಲೆಮಗೆ ಉಂಡುಣಿಸುತಿಪ್ಪೆ ಅನಿಮಿತ್ತ ಬಂಧುವೆ ಮರೆತು ನಿಮ್ಮುಪಕಾರ ದನುಜರ ಸೇವಿಸುತ ಹಾಳು ಮಾಡಿದೆ ಬಾಳು 8 ನಿರಯ ಭಾಜನ ನಾದೆ ದೂರವಾಯಿತು ಮುಕುತಿ ದಾರಿಕಾಯುವರ್ಯಾರೊ ಧೀರ ಜಯತೀರ್ಥ ವಾಯು ಅಂತರದಿರ್ಪ ನೀರಜಾಕ್ಷನಮ್ಮ ಶ್ರೀ ಕೃಷ್ಣವಿಠಲನೆ 9
--------------
ಕೃಷ್ಣವಿಠಲದಾಸರು
ದ್ವಿರದ ವದನಾಪಾಹಿ | ವಿಘ್ನವಿದೂರ | ನಭೇಶ ಕೃಪಾಬ್ಧಿಗೌರಿ ಸುಕುಮಾರ ಪ ಸಿದ್ಧಿವಿನಾಯಕ ವಿದ್ಯಾಪ್ರದಾಯಕ |ಉದ್ಧರಿಸೈಸುಜನೋಪಕಾರಿ1 ವಾಹನ ಬಂಧವಿಮೋಚನ |ಚಂದಿರ ಶಾಪದ ಮಾರವಿದೂರ 2 ಶಾಮಸುಂದರ ಸ್ವಾಮಿಯ |ನಾಮಾಪ್ರೇಮದಿ ಜಿಂಹ್ವೆಗೆ ಕರುಣಿಸುದಾರಿ 3
--------------
ಶಾಮಸುಂದರ ವಿಠಲ