ಒಟ್ಟು 16362 ಕಡೆಗಳಲ್ಲಿ , 134 ದಾಸರು , 7361 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧ್ವೇಶ - ಮಧ್ವೇಶಾ ಪ ಸಿದ್ಧ ಮುನಿಯಲಿಂ | ದುದ್ಬವಿ ಶಾಸ್ತ್ರಗಳಬ್ದಿಯ ರಚಿಸುತ | ಉದ್ದರ ಸುಜನರ ಅ.ಪ. ವೇದ ವಿಭಾಗಗ | ಳಾದರದಿಂದಲಿಗೈದು ಋಷಿಗಳಿಗೆ | ಭೋದಿಸಿರುವೆ ಹರಿ 1 ನಿತ್ಯ ವೇದಾರ್ಥದ | ಸತ್ಯವನರಿಯಲುಕೃತ್ಯ ಮೀಮಾಂಸದ ಶಾಸ್ತ್ರ ನಿನ್ನೆಂದೆ 2 ಸೃಷ್ಟಿಗೀಶ ಹರಿ | ಅಷ್ಟಾದಶವೆನೆಸುಷ್ಠು ಪುರಾಣಗ | ಳಷ್ಟು ವಿರಚಿಸಿದೆ 3 ಈಶ ಮುಖ್ಯದಿವಿ | ಜೇಶ ನಮಸ್ಕøತವ್ಯಾಸಾಭಿಧ ಹರಿ | ಪೋಷಿಸು ಎಮ್ಮನು 4 ಉಂಬುವುಡುವುದು | ಕೊಂಬ ಕೊಡುವದನುಬಿಂಬ ಕೃತಗಳನೆ | ನಂಬಿಗೆ ಈಯೋ 5 ಮನಚಂಚಲ ತವ | ಗುಣ ರೂಪಗಳನುಗುಣಿಸಲಸಾಧ್ಯವು | ಮನದಿ ನೆಲಸೊ ಹರಿ6 ಕೀಟನಿಂದ ಭುವಿ | ರೋಟಿಸಿದ ಪ್ರಭುಸಾಟ ರಹಿತ ಹರಿ | ಕೋಟಿ ತಟತ್ಪ್ರಭ 7 ಸಪ್ತಧಾತು ತನು | ಸಪ್ತ ಕಮಲದಲಿಆಪ್ತನಿದ್ದು ನಿ | ರ್ಲಿಪ್ತನೆಂದೆನಿಸಿದೆ 8 ಭವ | ನೋವನು ಕಳೆಯನು 9
--------------
ಗುರುಗೋವಿಂದವಿಠಲರು
ಮಧ್ವೇಶಾರ್ಪಣ ಮಧ್ವೇಶಾರ್ಪಣ ಮಧ್ವೇಶಾರ್ಪಣಮಸ್ತುಶುದ್ಧ ಶ್ರುತಿ ಪದ್ಧತಿ ನಡೆಸುವೆ ಮಧ್ವೇಶಾರ್ಪಣಮಸ್ತು 1 ವಂದಿಸುವೆನು ಗೋವಿಂದನ ಚರಣಕೆ ಮಧ್ವೇಶಾರ್ಪಣಮಸ್ತುನಿಂದು ಕರಂಗಳ ವಂದಿಸಿ ಪ್ರಾರ್ಥನೆ ಮಧ್ವೇಶಾರ್ಪಣಮಸ್ತು 2 ಅಂಬುಜನಾಭನ ನಿತಂಬಿನಿ ಕಮಲಕೆ ಮಧ್ವೇಶಾರ್ಪಣ ಮತ್ತುಡಿಂಗರಿಗನು ನಾಜಗದಂಟೆಯ ಪ್ರಾರ್ಥನೆ ಮಧ್ವೇಶಾರ್ಪಣಮಸ್ತು 3 ಸಂಧ್ಯಾದೇವಿಗೆ ವಂದಿಸುತಿರುವೆನು ಮಧ್ವೇಶಾರ್ಪಣಮಸ್ತುಒಂದಿನ ಬಿಡದೆ ತ್ರಿಕಾಲದಿ ಮಧ್ವೇಶಾರ್ಪಣಮಸ್ತು 4 ಚಾಮರ ಹಾಕುವೆ ಶ್ರೀಮನೋಹರಗೆ ಮಧ್ವೇಶಾರ್ಪಣಮಸ್ತುಕೋಮಲ ಶಯನದಿ ಮಲಗಿಸುವೆನು ಮಧ್ವೇಶಾರ್ಪಣಮಸ್ತು 5 ಕೃಷ್ಣನ ಮಲಗಿಸಿ ತೊಟ್ಟಿಲ ತೂಗುವೆ ಮಧ್ವೇಶಾರ್ಪಣಮಸ್ತುಬಿಟ್ಟು ಅಭಿಮತ ಘಟ್ಟಿಸಿ ಪಾಡುವೆ ಮಧ್ವೇಶಾರ್ಪಣಮಸ್ತು 6 ಪರಿ ತೂಗುವೆ ಮಧ್ವೇಶಾರ್ಪಣಮಸ್ತುಗುರು ಪುಷ್ಕರ ಮುನಿ ಸುರದ್ವಾರದಿ ಮಧ್ವೇಶಾರ್ಪಣಮಸ್ತು 7 ಕರ್ಮವು ಸಿರಿಯಂದು ಹರಿಗರ್ಪಿಸುವೆ ಮಧ್ವೇಶಾರ್ಪಣಮಸ್ತುದಾಸರ ಚರಣಕೆ ಶಿರಬಾಗುವೆ ನಾ ಮಧ್ವೇಶಾರ್ಪಣಮಸ್ತು 8 ಕೃತಿ ಇಂದಿರೇಶಗರ್ಪಿಸುವೆ ಮಧ್ವೇಶಾರ್ಪಣಮಸ್ತು ಮಧ್ವೇಶಾರ್ಪಣ ಮಧ್ವೇಶಾರ್ಪಣ ಮಧ್ವೇಶಾರ್ಪಣಮಸ್ತು 9
--------------
ಇಂದಿರೇಶರು
ಮನದಣಿ ನೋಡಿದೆನೊ ಸನಕಾದಿನಮಿತ ಮನದಣಿ ನೋಡಿದೆನು ದೃಢದಿ ಪ ನಿನಗೆ ಸರಿಯಿಲ್ಲ ಭುವನತ್ರಯದಿ ಮನಕೆ ಬೇಸರವಿಲ್ಲದನುದಿನ ತನುವನಪ್ಪಿಹಿಡಿದು ಭಕುತರ ಮನದ ವರಗಳನಡೆಸಿ ಸಲಹುವ ಕನಿಕರಾರ್ಣವ ವಿಠಲ ನಿನ್ನಡಿ ಅ.ಪ ಒಂದು ದಿನ ಆ ತ್ರೇತಾಯುಗದಲ್ಲಿ ಋಷಿಗಡಣ ಕೂಡಿ ಬಂದು ನಿಮ್ಮಯ ಚರಣಸನ್ನಿಧಿಲಿ ಭಯಭಕುತಿಯಿಂದ ವಂದಿಸಾಲಿಂಗನೆಯ ಕೋರುತಲಿ ಅಭಯ ಬೇಡುತಲಿ ನಿಂದ ಋಷಿಗಳಿಗ್ಹಲವು ಪರಿಯಲಿ ತಂದೆ ನೀ ಸಮ್ಮತವ ಪೇಳಿ ಬಂದು ದ್ವಾಪರಾಂತ್ಯಯುಗದಲಿ ಒಂದು ಅರಲವ ಅಗಲದಲೆ ನಿಮ್ಮ ಪೊಂದಿ ಆಲಿಂಗನವನೀಯುವೆ ನೆಂದು ವರವಿತ್ತ ವಿಠಲ ನಿಮ್ಮಡಿ 1 ಅಪಾರಮಹಿಮಜಾಲ ಅವತರಿತಿಸಿದಿ ದ್ವಾಪರಯುಗದಿ ಬಾಲಕೃಷ್ಣ ನೀನಾಗಿ ಶ್ರೀಪತಿ ಸುಜನಪಾಲ ದನುಜಕುಲಕಾಲ ಪಾಪಸಂಹಿತ ಅಮಿತಲೀಲ ಶಾಪಪರಿಹಾರ ವೇಣುಲೋಲ ತಾಪಸೋತ್ತಮರಿಷ್ಟ ನೀಡಲು ಗೋಪಿಕಾಸ್ತ್ರೀಯರೆನಿಸಿ ಪುಟ್ಟಿಸಿ ಗೌಪ್ಯದಾಲಿಂಗನವನಿತ್ತ ಭೂಪ ಭೂಪತಿ ವಿಠಲ ನಿಮ್ಮಡಿ 2 ಸುಗುಣ ಸಂತರಹೃದಯಸಂಚಾರ ದಾಸಾನುದಾಸರು ಪೊಗಳಿ ಭಜಿಸುವ ಗಾನಪ್ರಿಯಕರ ಮೌಲಕೌಸ್ತುಭ ಜಗದಜೀವನ ಪಾವನಾಕಾರ ಪರಮಸುಖಕರ ಅಗಣಿತಾಗಣಿತಮಹಿಮಭರಿತ ಪೊಗಳಲಳವೆ ನಿಮ್ಮ ಚರಿತ ತ್ರಿ ಜಗನಾಟಕ ಸುಲಭದಲಿ ನೀ ಅಗಲದನವರತಸಮ ಈ ಕಲಿ ಯುಗದಿ ಭಕ್ತರಿಗಾಲಿಂಗನೀಯುವ ನಿಗಮಗೋಚರ ವಿಠಲ ನಿನ್ನಡಿ 3 ಮಂದಹಾಸ ಮಂದರೋದ್ಧಾರ ಸುರಕಲ್ಪಧೇನು ಇಂದಿರೆಯರ ಪ್ರಾಣ ಮನೋಹರ ಹೇ ದೀನಬಂಧು ಸುಂದರಾಂಗ ಸುಗುಣಗುಣಹಾರ ಬಂಧನಿವಾರ ಸಿಂಧುಕಲಕಿದಪಾರ ಶೂರ ಕುಂದದೆ ಮೊರೆಕಾಯ್ದ ಸುರರ ಹೊಂದಿಭಜಿಸುವ ಭಕುತಜನಕಾ ನಂದ ನೀಡುತ ಚಂದನೋಡುತ ಸಿಂಧುನಿಲಯ ಮುಕ್ಕುಂದ ಮುರಹರಿ ಅಂದಮಾದ ವಿಠಲ ನಿಮ್ಮಡಿ 4 ಸುತ್ತಮುತ್ತ ಭಕ್ತರಾಲಯವು ಹಿಂಭಾಗದಲ್ಲಿ ಸತ್ಯಭಾಮ ರುಕ್ಮಿಣೀಕಾಂತನು ಮುಂಭಾಗದಲಿ ನಿತ್ಯನಿರ್ಮಲ ಚಂದ್ರಭಾಗಿನಿಯು ನಡುಮಧ್ಯ ರಂಗವು ಭಕ್ತಗೊಲಿದು ಭೂವೈಕುಂಠವ ಸತ್ಯವೆನಿಸಿ ಮೀರಿ ಮೆರೆವ ಭಕ್ತಜನರ ಕೈಯೆತ್ತಿ ಸಾರುವ ಪೃಥ್ವಿಗಧಿಕ ಮಹ ಪಂಢರಾಪುರ ಮುಕ್ತಿ ತವರೆಂಬ ಮಂದಿರದಲ್ಲಿ ಕರ್ತುಶ್ರೀರಾಮ ವಿಠಲ ನಿನ್ನಡಿ5
--------------
ರಾಮದಾಸರು
ಮನದಧಿಪ ಮರೆಹೊಕ್ಕೆ ಮಹದೇವ ಪಾಹಿ ಪ ತೃಣ ಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ ಅ.ಪ. ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯ ಭಾಗವತ ಪದ ನಿನ್ನದಯ್ಯ ಕಮಲ ಮಧು ಮತ್ತ ಷಟ್ಪದ ದೊರೆಯೇ ಸರ್ವತ್ರ ನಿನ್ನಲ್ಲಿ ಹರಿಯ ತೋರಿಸಿ ಸಲಹೊ 1 ಆಪ್ತತಮ ನಿನ್ನಂಘ್ರಿ ಧ್ಯಾನದಲಿ ಇಡು ಎನ್ನ ತೃಪ್ತಿ ಅನ್ಯದಿ ಬ್ಯಾಡ ಸುಪ್ತಿರಹಿತ ಸಪ್ತೆರಡು ಭಕ್ತಿಯಲಿ ಬೆಳೆಸೆನ್ನ ಉದ್ಧರಿಸು ಮೂರ್ತಿ ದರುಶನ ಭೋಗ 2 ಮೂರುತಿಯ ಕೈಗಿತ್ತುದಾರ ಸಾಗರ ಶಂಭು ಘೋರ ಭವಹರ ಹರಿಯ ದಾಸವರ್ಯ ಮಾರಮಣ ಜಯೇಶವಿಠಲನ ಭಜನೆಯಲಿ ಸಾರ ಸುಖ ನೀಡೆನಗೆ 3
--------------
ಜಯೇಶವಿಠಲ
ಮನದಿಂದಲಿ ಮನನೋಡಿ ಮನವರಿತು ಘನ ಕೂಡಿ ಧ್ರುವ ಮನಸಿನಿಂದ ತಾ ನೋಡುವ ಖೂನ ಮನ ಮರೆಯಲದೆ ನಿಧಾನ ಮನವರಿಯದೆ ಇಹುದ್ಯಾತರ ಜ್ಞಾನ ಮನವೇ ಸ್ವಹಿತ ಕಾರಣ 1 ಮನದ ಕೊನಿಯಲಿದೆ ಘನಸುಖದಾಟ ಅನುದಿನ ನೋಡುದು ನೀಟ ಸ್ವಾನುಭವದಲಿದು ನೋಡುವ ನೋಟ ಮುನಿಜನರ ಸುಖದೂಟ 2 ಮನೋನ್ಮನದೊಳಗದೆ ಘನಸ್ಫೂರ್ತಿ ಙÁ್ಞನಕಿದೆ ಮನೆ ವಾರ್ತಿ ಮನದೊಳಗಿಹ್ಯ ಮಹಿಪತಿ ಗುರುಮೂರ್ತಿ ಮನಕಾಗಿಹ ತಾಂ ಸಾರ್ಥಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನದೊಳಗಿರು ಹರಿಯೆ ಮೂರ್ಲೋಕ ದೊರೆಯೆ ಪ. ಮನೆದೊಳಿ(?)ಗಿರು ಬಹು ಜನರು ಪೇಳುವ ದೂರು ಎಣಿಸಲು ಶಕ್ತನಾರು ಮುಖಾಬ್ಜ ತೋರು ಅ.ಪ. ಮೂರ್ತಿ ನೀನು ಪ್ರಾಕೃತ ಗುಣಸರ್ಗದಿ ಬರುವುದೇನು ಸರ್ಗರಕ್ಷಣ ಪಾಪವರ್ಗವೆಲ್ಲವನು ನಿಸರ್ಗ ಮೀರದೆ ಮಾಳ್ಪ ದುರ್ಗಮದ್ಭುತಕರ್ಮ ದೀರ್ಘದರ್ಶಿ ಮುನಿವರ್ಗಕೊಲಿದು ನಿಜ ಮಾರ್ಗ ತೋರ್ಪ ಶ್ರೀ ಭಾರ್ಗವೀ ರಮಣಾ 1 ಜಲದೊಳಗಾಡಿದನು ಬೇರನು ಕಿತ್ತಿ ಖಳರನು ಸೀಳಿದನು ನೆಲನನಳೆದು ತಾಯಿ ತಲೆಯ ತರಿದು ನಿಜಲಲನೆಗೋಸುಗ ದೈತ್ಯ ಕುಲವ ಸಂಹರಿಸಿದ ಶಿಲೆಯನು ರಕ್ಷಿಸಿ ಕಳವಳಿಸಿದ ಕಪಿ ತಿಲಕನ ಸ್ನೇಹವ ಬಳಸಿದನೆಂಬುದು 2 ಬಾಗಿಲ ಮುಚ್ಚಿದರೆ ಗೋಡೆಯ ಹಾರಿ ಹೋಗಿ ಮನೆಯ ಒಳಗೆ ಬಾಗಿಲ ಮರೆಯಲಿ ಬಾಗಿನೋಡುತ ಮೆಲ್ಲಗಾಗಿ ಬೆಣ್ಣೆಯ ಮೆದ್ದು ಸಾಗಿ ಬರುತಲಿರೆ ನಾಗವೇಣಿಯರು ಹಿಡಿಯಲು ನೀವಿಯ ನೀಗಿ ಪುರುಷರನು ಕೂಗಿದನೆಂಬರು3 ತೊಟ್ಟಿಲೊಳಗೆ ಮಲಗಿ ನಿದ್ರೆಯಗೈವ ಪುಟ್ಟ ಶಿಶುಗಳನೆಲ್ಲ ತಟ್ಟಿ ಎಬ್ಬಿಸಿ ಕಣ್ಣಾಕಟ್ಟಿ ವಸ್ತ್ರದಿ ತಾನೆ ಚಿಟ್ಟನೆ ಚೀರಿ ಒ- ತ್ತಟ್ಟು ಎಲ್ಲರು ಕೂಡಿ ಕಟ್ಟಿದ ಕರುಗಳ ಬಿಟ್ಟ ಮೊಲೆಗೆ ಒಳ- ಗಿಟ್ಟ ಹಾಲು ಮೊಸರೊಟ್ಟಿಲಿ ಸವಿವುದೆ 4 ವಿದ್ಯೆಯ ಕಲಿಯೆಂದರೆ ಅಮ್ಮಯ್ಯ ಎನಗೆ ನಿದ್ದೆ ಬರುವುದೆಂಬುವಿ ಹೊದ್ದಿಸಿ ತಟ್ಟಿದರೆದ್ದು ಓಡುವಿ ಗೋಪೆರಿದ್ದ ಠಾವಿಗೆ ನಾನಾ ಬದ್ಧವನು ಸುರುವಿ ಸಿದ್ಧವಾಗಿ ಕಾದಿರೆ ಕೈಗೆ ಸಿಕ್ಕದೆ ಉದ್ಧವ ಗೃಹದೊಳು ಬೌದ್ಧನಂತಿರುವಿ 5 ಕುದುರೆಯ ಹತ್ತಿದರೆ ಯಾರಾದರೂ ಕದನವ ಮಾಡಲಿಹರೆ ಹೃದಯ ಮಂಟಪದಿ ನೀ ಸದರವಾಡುತಲಿರೆ ಮದನ ಜನನಿವರ ಮದಮತ್ಸರಗಳ ಒದೆದು ತೀವ್ರದಲಿ ಪದಯುಗ ಪಾಲಿಸುವುದಯ್ಯ ಗಿರೀಶ 6
--------------
ತುಪಾಕಿ ವೆಂಕಟರಮಣಾಚಾರ್ಯ
ಮನದೊಳಗೆ ಮಸಣವನು ತುಂಬಿಕೊಂಡಿರಲು ಮನೆಯ ಚಂದದಿ ಮಾಡಿದರೇನಯ್ಯ ಪ ಮನೆಯೊಡೆಯ ತಾನು ಸನ್ನಡತೆಯಲ್ಲಿರದೆ ಮನೆಮಂದಿಯನು ದಂಡಿಸಲಾಗದಯ್ಯ ಮನೆತುಂಬ ಮನತುಂಬ ಜಾಜಿಪುರಿವಾಸನನು ಅನುದಿನವು ನುತಿಸಲು ಸುಖವುಂಟು ಕೇಳಯ್ಯ 1 ದೇವರು ಧರ್ಮವನು ದಾರಿಯಾಚೆಗೆ ಅಟ್ಟಿ ದೇವಾಲಯವ ಮನೆಯೊಳಗೆ ಮಾಡಲೇನು ಅವರಿವರ ನೋಟಕ್ಕೆ ಒಪ್ಪವಾದೀತಷ್ಟೆ ಯಾವ ಪುರುಷಾರ್ಥವದರಿಂದ ಹೇಳು 2 ಅವ್ವ ಕಷ್ಟವು ಬರಲು ಅವರಿವರು ಬಾರರು ಆ ವಾಸುದೇವನಲ್ಲದೆ ಮತ್ತೊಬ್ಬರಾಗರು ಭಾವ ಮೈದುನ ಗಂಡ ಹೆಂಡತಿ ಮಕ್ಕಳು ಇವರೆಲ್ಲ ದೇವ ಜಾಜಿಪುರೀಶನೊಕ್ಕಲು 3
--------------
ನಾರಾಯಣಶರ್ಮರು
ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ ತನುವನಾಗಿದ್ದವಗೆಲ್ಲಿಹುದು ಙÁ್ಞನ ಧ್ರುವ ನಿಗಮ ಓದಿದರೇನು ಅಗಮ ಹೇಳಿದರೇನು ಬಗೆ ಬಗೆ ವೇಷ ಜಗದೊಳುದೋರಿದರೇನು 1 ಮಠವು ಮಾಡಿದರೇನು ಅಡವಿ ಸಾರಿದರೇನು ಸಠೆ ಮಾಡಿ ಸಂಸಾರ ಹಟವಿಡಿದರೇನು 2 ನಿಗದಿ ಹಾಕಿದರೇನು ಗಗನಕ್ಹಾರಿದರೇನು ಮಿಗಿಲಾಗಿದೋರಿ ಬಗವಿಯ ಪೊದ್ದರೇನು 3 ಗುಹ್ಯ ಸೇರಿದರೇನು ಬಾಹ್ಯ ಮೆರೆದರೇನು ದೇಹ ದಂಡಿಸಿ ಹರವ ತೊರೆದರೇನು 4 ಮನಕೆ ಮೀರಿಹ್ಯ ಸ್ಥಾನ ಘನಸುಖದಧಿಷ್ಠಾನ ದೀನಮಹಿಪತಿ ನೀ ಸಾಧಿಸೊ ಗುರುಜ್ಞಾನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನಮೋಹಮಂದಿರಾ ಶ್ರೀವರ ಘನಮಣಿ ತಾ ಹಾರಾ ಪ ಮಾಂಗಿರಿಧಾಮಾ ಮಂಗಳನಾಮಾ ಶರಣಾಗತ ಪ್ರೇಮಾ ಅ.ಪ ದಿವಿಜನಿಕರ ಪರಿವಾರಾ ದಯಾಪೂರಾ ಭುವನೇಶ್ವರ ಶೂರಾ ಆನಂದಲೀಲಾ ಆಗಮಮೂಲಾ ತುಳಸೀದಳ ವನಮಾಲಾ 1 ಭಾಗವತಪ್ರಿಯ ಸಾಗರತನಯಾ ಮನರಂಜನ ಸದಯಾ ಮುರಳೀಧೃತಕರ ಕುಂಜವಿಹಾರಾ ರಾಧಾಮನ ಮಣಿಹಾರಾ 2 ನಂದನ ಕಂದಾ ಜಗದಾನಂದ ಬೃಂದಾವನಾನಂದ ಗೋಪಿಕಾ ಜಾಲ | ಪ್ರೇಮಿತ ಬಾಲಾ ಬೃಂದಾವನ ಲೋಲಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನರಥದಿಂದಲಿ ಘನರಥಕೀಗಲೆ ಬೇಗನೆ ಬಾರೊ ಪ. ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ ದನುಜದಲ್ಲಣ ಬೇಗ ಬಾರೋ ಕೃಷ್ಣ ಅ.ಪ. ಮುತ್ತಿನ ತೋರಣ ಸುತ್ತು ಛತ್ತರಿಗೆಯು ಬೇಗನೆ ಬಾರೊ ಸಿರಿ ಸಹ ಬೇಗನೆ ಬಾರೊ ಉತ್ತಮ ಭಕ್ತರು ಎತ್ತಿ ಕೈ ಕರೆವರು ಬೇಗನೆ ಬಾರೊ ನಿತ್ಯ ಮಂಗಳ ನಿನ್ನ ಉತ್ತಮ ರೂಪವ ಚಿತ್ತದಿ ತೋರುತ ಸತ್ಯ ಸಂಕಲ್ಪನೆ 1 ಗಡಗಡ ನಡೆಯುವ ಘನರಥದಲಿ ನಿಂದು ಬೇಗನೆ ಬಾರೊ ಎಡಬಲದಲಿ ಶ್ರೀ ಭೂಮಿಯರೊಡಗೂಡಿ ಬೇಗನೆ ಬಾರೊ ಧಡಧಡ ನಡೆಯುತ ದೈತ್ಯದಲ್ಲಣನೆ ಬೇಗನೆ ಬಾರೊ ನುಡಿಸುವ ವಾದ್ಯಗಳ್ ಪಿಡಿದಿಹ ಚಾಮರ ಕಡೆಗಣ್ಣೊಳು ಭಕ್ತರನೀಕ್ಷಿಸುತಲಿ 2 ನಾರದ ತುಂಬುರ ನಾಟ್ಯವನಾಡ್ವರು ಬೇಗನೆ ಬಾರೊ ಬಾರಿ ಬಾರಿಗೆ ಭಕ್ತರು ನುತಿಗೈವರು ಬೇಗನೆ ಬಾರೊ ವಾರಿಜಾಸನ ವಂದ್ಯ ಶ್ರೀನಿವಾಸ ದೊರಿ ಬೇಗನೆ ಬಾರೊ ತೋರುತ ರೂಪವ ಬೀರುತ ಕರುಣವ ಮಾರಜನಕ ಅಪಾರ ಮಹಿಮನೆ 3 ವಂದಿಸಿ ಕರೆವರೊ ನಿಂದು ಭಕ್ತರೆಲ್ಲ ಬೇಗನೆ ಬಾರೊ ಇಂದಿರೆಯರಸನೆ ಮಂದರೋದ್ಧರ ಕೃಷ್ಣ ಬೇಗನೆ ಬಾರೊ ಇಂದು ಸ್ಥಿರವಾರ ಸ್ಥಿರವಾಗಿ ಸಲಹಲು ಬೇಗನೆ ಬಾರೊ ಹಿಂದೆ ಮುಂದೆ ಭಕ್ತ ಸಂದಣಿಯೊಳು ಗುರು ವೃಂದ ಬಿಂಬ ಮನ್ಮನ ಬಿಂಬನೆ ರಥಕೆ 4 ಅಪಾರ ಕರುಣದಿ ಭಕ್ತರ ಪೊರೆಯಲು ಬೇಗನೆ ಬಾರೊ ಶ್ರೀಪತಿ ಶೇಷಾಚಲನಿಲಯನೆ ಹರಿ ಬೇಗನೆ ಬಾರೊ ಗೋಪಾಲಕೃಷ್ಣವಿಠ್ಠಲನೆ ತ್ವರಿತದಿ ಬೇಗನೆ ಬಾರೊ ಭೂಪರೈವರ ಕಾಯ್ದ ಗೋಪಕುವರ ಕೃಷ್ಣ ಈ ಪರಿಯಿಂದಲಿ ಭಕ್ತರ ಪೊರೆಯಲು 5
--------------
ಅಂಬಾಬಾಯಿ
ಮನವ ಶೋಧಿಸದೆಲೆ ಡಂಭದಿ ದಿನದಿನದಲಿ ಕರ್ಮಮಾಡೆ ತನುವಿಗೆ ಬಲು ಕ್ಲೇಶವಲ್ಲದೆ ಅನುಕೂಲವೇನು ಪ ಕಾಮಕ್ರೋಧ ಲೋಭಮೋಹ ಮದ ಮತ್ಸರಗಳನು ಬಿಡದೆ ನಾಮಗಳನು ಬಳೆದು ಮರೆದರೆ ಶ್ರೀ ರಾಮನರಿಯನೆ 1 ಈಶ ಸೇವೆಗೆಂದು ಬಹಳ ಮೋಸದಿಂದ ಧನವ ಗಳಿಸಿ ಈಶನನ್ನು ಮರೆವ ನರನನು ಜಗದೀಶನರಿಯನೆ 2 ಪರಸತಿಯರ ಸರಸಗಳಿಗೆ ಜರಿದು ಮನವ ಮರುಳು ಮಾಡೆ ಸರಳತನದಿ ದಾನ ಮಾಡಲು ನರಹರಿಯು ಅರಿಯನೆ3 ಒಡಲು ಪೊರೆಯೆ ಸಡಗರದಲಿ ಮಡಿ ಮಡಿಯೆಂದು ನುಡಿವ ಮೂಢನ ಪೊಡವೀಶನರಿಯನೆ4 ಪನ್ನಗಾರಿವಾಹನ ಪ್ರಸನ್ನವದನ ಕೃಷ್ಣಮೂರ್ತಿಯ ಉನ್ನತ ಮಹಿಮೆಗಳನರಿತಗೆ ಇನ್ನೇನು ಬೇಕು 5
--------------
ವಿದ್ಯಾಪ್ರಸನ್ನತೀರ್ಥರು
ಮನವು ನೆಮ್ಮದಿಯಾಗಲಿ ಪ ಅನುದಿನವು ನಿನ್ನ ಮನಸಾರೆ ಪೂಜಿಸುವಂತೆ ಅ.ಪ ಬೆಟ್ಟ ಬಿಸಿಲಿನಲಿ ಬೇಯುವುದ ನೋಡುತ ಮನವು ಕೆಟ್ಟು ಹೋಗದೆ ಸತತ ಶುದ್ಧವಿರಲಿ ಹೊಟ್ಟೆ ಪಾಡಿಗೆ ಕೊರತೆ ಪಡುತಿರುವ ಜನರಲ್ಲಿ ಸಿಟ್ಟುಬಾರದೆ ಮನಕೆ ತಾಳ್ಮೆಯಿರಲಿ 1 ನೀರು ಕಡೆದರೆ ಬೆಣ್ಣೆ ಬಾರದೆನ್ನುವ ಕ್ಲೇಶ ದೂರವಾಗಲಿ ತಿರುಗಿ ಬಾರದಿರಲಿ ವೀರ ಹನುಮನು ತನ್ನ ಸಾರಸೇವೆಗೆ ಫಲವ ಕೋರಿದನೆ ಧನಕನಕ ವೈಭವಗಳ 2 ಗೋಪುರವ ತಾಂಗಿರುವೆನೆಂಬ ಗೊಂಬೆಯ ಹೆಮ್ಮೆ ಈ ಪರಿಯೆ ಮನದ ಕ್ಲೇಶವ ತಂದಿತು ಶ್ರೀ ಪತಿಯು ಮಾಡಿ ಮಾಡಿಸುವೆನೆಂಬುವಜ್ಞಾನ ಲೋಪಪೊಂದದೆ ಮನ ಪ್ರಸನ್ನವಾಗಲಿ ದೇವ 3
--------------
ವಿದ್ಯಾಪ್ರಸನ್ನತೀರ್ಥರು
ಮನವೆ ನಿನಗೇಕಿನ್ನು ಲಜ್ಜೆದೋರದು ಬಳಿಕಕನಲಿ ನಿಂದಿಸುವೆ ಜನರನಿತರಾ ಪಘನಘೋರಮಲಜನಿತ ತನುವಿನೊಳುನೀನಿರುತಲನವರತ ತೊಳಲಬಹುದೇ ಬರಿದೆ ಅ.ಪಓದಿ ಗ್ರಂಥಗಳನು ಪಠಿಸಿಯದರರ್ಥವನುಬೋಧಿಸುವೆ ಪರರಿಗೆಲ್ಲಾ ಸೊಲ್ಲಾಸಾದರದಿ ತನ್ನಿಷ್ಠೆಯಲಿ ನಡೆಯುತನುಭವವನೀದಿನಕು ತಂದುದಿಲ್ಲವಲ್ಲಾಬೋಧೆವಡದಿಹ ಯೋಗಿಗಳ ಜರೆವ ಬಗೆಯಲ್ಲಿನೀ ದೊಡ್ಡ ಜಾಣನಲ್ಲಾ ಬಲ್ಲಸಾಧಿಸಿದ ವಿದ್ಯವನು ವಾದದಲಿ ನೀಗಾಡಿಬೀದಿಯಲಿ ನಿಂತೆಯಲ್ಲಾ ನಲ್ಲಾ 1ಧನಧಾನ್ಯ ದಾಸ ಕತಿಯೊಳಗೊಂದಿಕೊಂದಿರುವಜನರಲವಿವೇಕ ವಿಡಿದೂ ಜರಿದೂತನು ಪಾಶ ಬದ್ದದಲಿ ನರಕ ಭಾಜನರಾಗಿದಿನವ ಕಳೆಯುತ್ತಲಿಹರೂ ುವರೂಎನುತಲನುತಾಪದಲಿ ನೀ ಮತ್ತೆಯನವರತಧನಿಕರಿದ್ದೆಡೆಗೆ ಬಂದೂ ನಿಂದೂಧನವ ಕೊಡಿ ಸತ್ಪಾತ್ರನಾನೆಂದು ವೊಂದುವರೆಹಣವ ಕೈಯೊಡ್ಡಿ ಕೊಂಡೂ ಉಂಡೂ2ತೋರುವ ಜಗತ್ತಿದುವೆ ಪರಮಾತ್ಮನಿಂದಲೆತೋರುವದು ಭ್ರಮೆಗೆ ಹಲವೂ ಕೆಲವೂತೋರದಡಗದ ನಿತ್ಯ ವಸ್ತುವೆ ತಾನೆÀಂದುಧೀರತನದಿಂದಲಿರವೂ ಅರಿವೂಈ ರೀತಿಯಲಿ ತಿಳಿದು ಮುಕ್ತನಾಗದೆ ಬರಿಯಕ್ರೂರ ಬುದ್ದಿಯಲಿ ುರವೂ ಮರವೂದಾರಿಗಾಣದೆ ನಿನ್ನ ಅನುಭವವ ನೀ ಮತ್ತೆಹೊರುವುದೆ ನಿನಗೆ ಮತವೂ ದೃಢವೂ 3ಇಂದ್ರಿಯಂಗಳ ಸುಖವನೆ ಮೆಚ್ಚಿ ನೀನವರಹಿಂದುಗೊಂಡೆರಗಿ ಬಿಡದೆ ಪಡೆದೆಸಂದ ಭೋಗದ ಸವಿಯನೆನನೆನದು ಮತ್ತದನುಮುಂದು ಬೇಕೆಂದು ಹೊರೆದೆ ಬೆರೆದೆಕಂದಿ ಕಾಮಕ್ರೋಧದಗ್ನಿಯಲಿ ನೀ ಬೆಂದುಹೊಂದಿ ನೀಂ ಜನ್ಮಪಿಡಿದೆ ಮರೆದೆಹಿಂದುಗಳೆವಾತ್ಮನನು ಹಿತವೆಂದು ಮಿಥ್ಯವನುನೊಂ[ದು] ನೋಡದೆ ಬರಿದೆ 4ಚದುರ ವಿದ್ಯವ ಕಲಿತೆನೆಂಬುದೊಂದೇ ಘನತೆಸುದತಿ ಸಂಪತ್ತಿನಲ್ಲೆ ರಮತೆಒದಗಿ ಬಹಳೋದ್ಯೋಗಗಳ ಮಾಡಿ ಬಹುದಿವಸಬದುಕಿದವ ನೆಂಬುದರಲೆ ುರತೆಇದ ನಾನು ಸಂಪಾದಿಸಿದೆನೆನ್ನ ಶೌರ್ಯತೆಗೆಇದಿರಿಲ್ಲವೆಂದು ಇದಕೆ ಬೆರತೆಮುದದಿ ಗುರು ವಾಸುದೇವಾರ್ಯವೆಂಕಟರಮಣನೊಡಮೂಡದಿತರ ನಡತೆ ಜಡಕೆ 5
--------------
ತಿಮ್ಮಪ್ಪದಾಸರು
ಮನವೆ ನೀ ದೃಢವಾದರೆ ಮನಸಿಜನಯ್ಯನ ಚರಣ ಕಾಂಬೆನೊ ನಾನು ಪ ಹಂಬಲವನು ಮಾಡದಿದ್ದರೆ ಹರಿ ಎಂಬ ನಾಮಪೀಯೂಷ ದೊರಕುವುದು1 ಚಂಚಲವುಳ್ಳವುನಾಗದಿದ್ದರೆ ದುಷ್ಟ ಪಂಚೇಂದ್ರಿಯಗಳ ಸ್ಥಿರವಾಗಿ ನಿಲ್ಲಿಸುವೆ 2 ಅತ್ತಲಿತ್ತಲಿ ಪೋಗದಿರು ಎ ನ್ನತ್ತ ವಿಜಯವಿಠ್ಠಲ ಬರಲೀ 3
--------------
ವಿಜಯದಾಸ
ಮನವೆ ನೀ ಸ್ಥಿರವಾಗಿ ಹರಿಯ ಪಾದಾಂಬುಜ_ವನು ಸೇರಿ ಅಲ್ಲಿಯೆ ನಿಲ್ಲಯ್ಯ ಬಿಡದೆ ಪ ಅನುದಿನ ಸೇವಿಸಲನುವಾಗುದಯ್ಯಾಘನ ಚಂಚಲ ನೀನು ಎಚ್ಚರ ಎಚ್ಚರ ಅ.ಪ. ಅಲ್ಲಲ್ಲಿ ಇಲ್ಲೆಂದು ಎಲ್ಲೂ ಹುಡುಕಲು ಬೇಡಎಲ್ಲೆಲ್ಲ್ಯೂ ಇರುವ ಶ್ರೀವಲ್ಲಭನುಬಲ್ಲವರಾಡುವ ಸೊಲ್ಲನು ಲಾಲಿಸುಖುಲ್ಲನೆಂಬುವ ನಿಂದೆಗೀಡಾಗಬೇಡಾ 1 ನಿತ್ಯ 2 ಧ್ಯಾನದ ದಾರದಿಂ ಜಪವೆಂಬ ಗಂಟಿರಲಿಶ್ರೀನಿವಾಸನ ಪಾದವೆಂಬ ಗೂಟಕೆ ಕಟ್ಟಿಮೌನದಿಂ ಕಟ್ಟಿಸಿಕೊಂಡಲ್ಲೇ ಸುಳಿದಾಡುಸ್ಥಾನವ ಬಿಟ್ಟನ್ಯನಿಟ್ಟಿಗೆ ಪೋಗದೆ 3 ಸಕಲರ ಪಾಪವ ತೊಳೆದು ಪಾವನಗೈದುಮುಕುತಿಯ ದಾರಿಯ ತೋರುವ ನದಿಗಂಗೆಪ್ರಕಟವಾಗಿರುವಂತೆ ಚರಣದೊಳುರುಳಾಡುಭಕುತಿಯ ಬೇಡು ನೀ ಪ್ರತಿದಿನ ನೋಡು 4 ಗದುಗಿನ ವೀರನಾರಾಯಣಗೂ ನಿನಗೂ ಹೃದಯವೆ ಮಂದಿರವಲ್ಲವೆ ದೀಪದಕದಿರಂತ ಚಾಚುತ ಪೋಗಿಬರುವದೇತಕೆಸದನವ ಬಿಡದಲ್ಲೇ ಹರಿಯನು ಸೇವಿಸು 5
--------------
ವೀರನಾರಾಯಣ