ಒಟ್ಟು 8611 ಕಡೆಗಳಲ್ಲಿ , 132 ದಾಸರು , 4839 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳಯ್ಯ ಬೆಳಗಾಯಿತು ಪ.ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆಸುಳಿದೋರೈ ನಿನ್ನ ಹಾರಯ್ಸಿ ನಿಂದಿಹರುತಳುವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯಸೆಳೆಮಂಚದಿಂದಲೇಳು ಅಪವೇದವನು ತರಲೇಳು ಮಂದರವ ಹೊರಲೇಳುಛೇದಿಸುತ ಅಸುರರನು ಭೂಮಿಯ ತರಲೇಳುಕಾದಿ ಹಿರಣ್ಯನ ಕರುಳ ಕೊರಳೊಳಗೆ ಧರಿಸೇಳು ಕಾದುಬಲಿಬಾಗಿಲೊಳಗೆ ||ಭೇದದಲಿ ಭೂಮಿಯ ತ್ರಿಪಾದದಿಂದಳೆಯೇಳುಛೇಧಿಸುತ ಕ್ಷತ್ರಿಯರ ಕೊಡಲಿಯಿಂ ಕಡಿಯೇಳುಸಾಧಿಸುತ ಶರಧಿಯಲಿ ಸೇತುವೆಯ ಕಟ್ಟೇಳುನಂದಗೋಪನ ಉದರದಿ 1ಪುರಮೂರ ಗೆಲಬೇಕು ಅರಿವೆಯನು ಕಳೆದೇಳುದುರುಳರನು ಕೊಲಬೇಕು ತುರಗವಾಹನನಾಗುಪರಿಪರಿಯ ಕೆಲಸಗಳ ಮಾಡಲುದ್ಯೋಗಿಸದೆ ಮರೆತುನಿದ್ರೆಯಗೈವರೆ||ಉರಿಗೈಯನಟ್ಟಿದರೆ ಹರನೋಡಿ ಬಂದಿಹನುಗಿರಿಜೆ ವರವನು ಬೇಡಬೇಕೆಂದು ನಿಂದಿಹಳುಸುರಪಾರಿಜಾತವನು ಕೊಂಡುಸುರರಾಜಬಂದಿರುವನೇಳಯ್ಯ ಹರಿಯೆ 2ಆಲದೆಲೆಯಿಂದೇಳು ಮಾಲಕುಮಿ ಬಂದಿಹಳುಹಾಲುಗಡಲಿಂದೇಳು ಶ್ರೀದೇವಿನಿಂದಿಹಳುಕಾಲಹೆಡೆಯಿಂದೇಳು ಭೂದೇವಿ ಬಂದಿಹಳು ಸಾಲಮಂಚಿಗಳಿಂದಲಿ ||ಕ್ಷಿತಿನಾಥ ನೀನೇಳು ಸತ್ಯಭಾಮೆ ಬಂದಿಹಳುಮತಿವಂತ ನೀನೇಳು ಜಾಂಬವತಿ ಬಂದಿಹಳುಗತಿವಂತ ನೀನೇಳು ಶ್ರೀತುಳಸಿ ಬಂದಿಹಳು ಏಕಾಂತ ಸೇವೆಯಮಾಡಲು 3ಅಂಬುರುಹದಿಂದ ಜನಿಸಿದ ಬ್ರಹ್ಮ ಬಂದಿಹನುಗಂಭೀರ ಗಾಯನದ ನಾರದನು ನಿಂದಿಹನುರಂಭೆ ಮೇನಕೆ ಮೊದಲು ನರ್ತನಕೆಐದಿಹರು ಶಂಬರಾರಿಪಿತನೆ ಏಳು||ರಾಜಸೂಯವಕೊಳಲು ವಾಯುಸುತ ಬಂದಿಹನುತೇಜಿಯಾಟಕೆ ಅರ್ಜುನನು ಕರೆದು ಬಂದಿಹನುಸಾಜಧರ್ಮಜ ಅಗ್ರಪೂಜೆ ಮಾಡುವೆನೆಂದು ಹೂಜೆಯನುಪಿಡಿದುಕೊಂಡು 4ದೇವ ನಿನ್ನಂಘ್ರಿಯನು ಪೂಜೆ ಮಾಡುವೆನೆಂದುಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಪಹರಿಸಾವಧಾನದಿ ಯಮುನೆ ತುಂಗಾ ಸರಸ್ವತೀಭೀಮರಥಿ ನೇತ್ರಾವತಿ ||ದುರಿತ ಬಂಧನವನ್ನು ಪರಿಹರಿಸಿದೆಯೊ ಸ್ವಾಮಿದುರಿತ ದುಷ್ಕರ್ಮವನು ದೇವ ಎಂದರೆ ಸುಡುವೆದುರಿತ ತಾಪಕೆ ಚಂದ್ರ ನೀನೆನಿಸಿಕೊಂಡೆಯೊಶ್ರೀ ಪುರಂದರವಿಠಲನೆ 5
--------------
ಪುರಂದರದಾಸರು
ಏಳು ನಾರಾಯಣ ಏಳು ಲಕ್ಷ್ಮೀರಮಣಏಳು ಶ್ರೀಗಿರಿಯೊಡಯ ಶ್ರೀವೆಂಕಟೇಶ ಪಕಾಸಿದ್ದ ಹಾಲನ್ನು ಕಾವಡಿಯೊಳ್ ಹೆಪ್ಪಿಟ್ಟುಲೇಸಾಗಿ ಕಡೆದು ಹೊಸ ಬೆಣ್ಣೆ ಕೊಡುವೆಶೇಷಶಯನನೆ ಏಳು ಸಮುದ್ರ ಮಥನವಮಾಡುದೇಶ ಕೆಂಪಾಯಿತು ಏಳಯ್ಯ ಹರಿಯೇ 1ಅರುಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳಸುರರುತಂದಿದ್ದಾರೆ ಬಲು ಭಕುತಿಯಿಂದಅರವಿಂದನಾಭ ಸಿರಿವಿಧಿಭವಾದಿಗಳೊಡೆಯಪಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ 2ದಾಸರೆಲ್ಲರು ಬಂದು ಧೂಳಿದರ್ಶನಕೊಂಡುಲೇಸಾಗಿ ತಾಳ ದಂಡಿಗೆಯ ಪಿಡಿದುಶ್ರೀಶಪುರಂದರವಿಠಲರಾಯ ನಿಮ್ಮ ಪಾದವನುಲೇಸಾಗಿ ಪೊಗಳುವರು ಹರಿಯೇ
--------------
ಪುರಂದರದಾಸರು
ಏಳು ವಾರಿಜನೇತ್ರ ಏಳು ಚಿನ್ಮಯಗಾತ್ರಏಳು ಪಾಂಡವಪಾಲ ಏಳುಸಿರಿಭೂಲೋಲಏಳು ಪಾವನಚರಿತ ಏಳೆರಡು ಜಗಭರಿತಏಳು ಯದುಕುಲಲಲಾಮಾ ಪ.ಮೂಡುತಿವೆಅರುಣಕಿರಣೋಡುತಿವೆ ತಮದ ಕುಲಬಾಡುತಿವೆ ತಾರಿನನ ಬೇಡುತಿವೆ ಚಕ್ರವಾಕಾಡುತಿವೆಕೀರಬಲು ಪಾಡುತಿವೆತುಂಬಿನಲಿದಾಡುತಿವೆಖಗಸಮೂಹರೂಢಿಯೊಳು ಮುನಿಜನರು ನೋಡಿ ರವಿಗತ ಹರಿಯಷೋಡಶುಪಚಾರಾರ್ಚನೆ ಮಾಡಿ ಮನದಣಿಯೆ ಕೊಂಡಾಡಿ ಕುಣಿದಾಡಿ ಭವಕಾಡನೀಡಾಡಿವರಬೇಡುತೈದಾರೆ ಗಡ ಹರಿಯೆ 1ವಿಷ್ಣುಪದೆ ವೃದ್ಧನದಿ ಕೃಷ್ಣವೇಣ್ಯಖಿಳ ಸಂಹೃಷ್ಟಿಪ್ರದೆ ಕಾವೇರಿ ಇಷ್ಟದಾ ಯಮುನೆಅಘನಷ್ಟಕಾರಣೆ ಭೀಮೆ ಶಿಷ್ಟಾಂಗೆ ತುಂಗೆವರತುಷ್ಟಿದಾಯಕ ನದಿಗಳುಕೃಷ್ಣ ನಿನ್ನಡಿಯುಗಳ ಸ್ಪøಷ್ಟರಾಗುತಲಿ ಉತ್ಕøಷ್ಟ ಪದ ಪಡೆವೆವೆಂದಷ್ಟ ದಿಗತಟದಿಂದಚೇಷ್ಟಿತ ತರಂಗದಿಂ ಸ್ಪಷ್ಟ ಬಂದಿರೆ ಕರುಣದೃಷ್ಟಿಯಿಂದವರ ನೋಡೈ ಹರಿಯೆ 2ಕೇಶನಾಕೇಶ ಕಕುಭೇಶಾದಿ ಅಮರರಾಕಾಶದಲಿ ದುಂದುಭಿಯ ಘೋಷ ಮೊಳಗಿಸಿದರನಿಮೇಷ ಮುನಿ ವೀಣೆಯುಲ್ಲಾಸದಿಂ ಮಿಡಿಮಿಡಿದು ಧನಶ್ರೀ ಭೂಪಾಳಿಯಿಂದಶೇಷಶಯನಖಿಳ ನಿರ್ದೋಷಗುಣಪೂರ್ಣಸರ್ವೇಶ ಮುಕುಂದ ಭಟಕೋಶನೆಂದವರು ನಿನ್ನಬೇಸರದೆ ಪಾಡುತಿಹರು ಶ್ರೀಶ ಪ್ರಸನ್ವೆಂಕಟೇಶನೆ ಒಲಿದುಪ್ಪವಡಿಸೊ ಹರಿಯೆ 3
--------------
ಪ್ರಸನ್ನವೆಂಕಟದಾಸರು
ಏಳು ಶ್ರೀ ಗುರುರಾಯ ಬೆಳಗಾಯಿತಿಂದುಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ ಪ.ಏಳುಗುರುರಾಘವೇಂದ್ರ ಏಳು ದಯಾಗುಣಸಾಂದ್ರಏಳು ವೈಷ್ಣವ ಕುಮುದಚಂದ್ರ ಶ್ರೀ ರಾಘವೇಂದ್ರ ಅ.ಪ.ಅಶನವಸನಗಳಿಲ್ಲವೆಂಬವ್ಯಸನಗಳಿಲ್ಲಮುಸುಕ್ಹಾಕಿ ಮೋಸದಲೆ ಮೋಹಿಸಿದೆನೆಲ್ಲಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ 1ನಾನು ನನ್ನದು ಎಂದು ಹೀನಮನಸಿಗೆ ತಂದುಏನು ಮಾಡುವಕರ್ಮನಾನೆ ಅಹುದೆಂದುಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೊಂದುನೀನೆ ಉದ್ಧರಿಸಯ್ಯ ದೀನ ದಯಾಸಿಂಧು 2ಅನ್ಯರ ಕೈಯಲ್ಲಿ ನಿನ್ನವರನಿರಿಸುವುದುಅನ್ಯಾಯವಾಯ್ತುಪಾವನ್ನಗುರುರಾಯಎನ್ನ ಮಾತಲ್ಲವಿದು ನಿನ್ನ ಮಾತೇ ಸರಿಮನ್ನಿಸಿ ಆಗು ಪ್ರಸನ್ನ ಗುರುರಾಯ 3ವೇದ ಶಾಸ್ತ್ತ್ರಗಳನ್ನು ಓದಿ ಪೇಳ್ದವನಲ್ಲಭೇದಾಭೇದವನು ತಿಳಿಯಲಿಲ್ಲಸಾಧು ಸಜ್ಜನರ ಸಹವಾಸ ಮೊದಲಿಲ್ಲಹಿಂದಾಗಿಮಾನಮಾರಿಸಿದಿ ಉಳಿಸಲಿಲ್ಲ4ಆಸೆಗೊಳಗಾದೆನೊ ಹೇಸಿ ಮನುಜನು ನಾನುಕ್ಲೇಶಭವಸಾಗರದೊಳೀಸುತಿಹೆನೊಏಸುಜನ್ಮದಿ ಎನ್ನಘಾಸಿಮಾಡಿದೆ ಮುನ್ನದಾಸನಾಗುವೆ ತೋರೊ ಪ್ರಸನ್ನವೆಂಕಟನ 5
--------------
ಪ್ರಸನ್ನವೆಂಕಟದಾಸರು
ಒಂದೇ ನಾಮದೊಳಡಗಿದುವೊ ಆ -ನಂದದಿಂದುಸುರುವಅಖಿಳ ವೇದಗಳುಪಒಂದೇ ನಾಮವು ಪ್ರಹ್ಲಾದನ ಕಾಯ್ತು - ಮ -ತ್ತೊಂದೆ ನಾಮವೆ ಅಜಮಿಳನ ಸಲಹಿತು ||ತಂದೆ ತಾಯಿಯ ಬಿಟ್ಟ ಕಂದ ಧ್ರುವರಾಯಗಾ -ನಂದಪದವನಿತ್ತ ಅದ್ಭುತಗುಣವೆಲ್ಲ 1ಮಚ್ಛ್ಯಾದ್ಯಾನಂತಾವತಾರ ಅಷ್ಟಾದಶಸ್ವಚ್ಛ ಪುರಾಣಗಳಮೃತದಸಾರ ||ಕಚ್ಛಪನಾಗಿ ತ್ರೈಜಗಕೆ ಆಧಾರ ತ -ನ್ನಿಚ್ಛೆಯಿಂದಲಿ ತಾನು ಮಾಳ್ಪ ವ್ಯಾಪಾರ 2ಒಬ್ಬರೀತಗೆ ಸಮರಿಲ್ಲ ತ -ನ್ನಬ್ಬರದಿಂದಲಿ ಸಲಹುವನೆಲ್ಲ ||ಕಬ್ಬು ಬಿಲ್ಲನ ಪಿತಪುರಂದರ ವಿಠಲ ವೈದರ್ಭಿಯ ರಮಣನ ವರಸುಗುಣಗಳೆಲ್ಲ 3
--------------
ಪುರಂದರದಾಸರು
ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದಭವಜಲದೊಳು ಮುಳುಗುವೆಪ.ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿಆಯಾಸಬಡುತಿದೆ ಪ್ರಾಣದಾತಬಾಯೆತ್ತಿ ಗೋವಿಂದ ಹರಿಯೆನ್ನಲೀಸದುಕಾಯೊ ದಯಾಳು ಕರಿವರದ ಕೃಷ್ಣ 1ಮನ ನೀರಾನೆಯ ಕಟ್ಟಿನೊಳಗೆ ಸಿಕ್ಕಿಕ್ಷಣ ಕ್ಷಣ ದೈನ್ಯದಿ ಒರಲುತಿದೆತನತನಗೆಳೆದು ದಣಿಸುವ ಇಂದ್ರಿಯ ಜಂತುಮುನಿಸೇವ್ಯ ನಿನ್ನೂಳಿಗಕ್ಕೆ ದೂರಾದೆ ಕೃಷ್ಣ 2ಬುದ್ಧಿ ತಪ್ಪಿದವಗೆ ಅಬದ್ಧ ನಡೆವವಗೆಶುದ್ಧ ಕಾರಣ ದಿವ್ಯನಾಮವಲ್ಲವೆಉದ್ಧರಿಸು ಬೇಗ ಪ್ರಸನ್ವ್ವೆಂಕಟ ಕೃಷ್ಣತಿದ್ದಿಟ್ಟುಕೊಳ್ಳೊ ನಿನ್ನವಗೆ ನಿರ್ಣಯ ನೀನೆ 3
--------------
ಪ್ರಸನ್ನವೆಂಕಟದಾಸರು
ಒಲ್ಲೆನೆ ವೈದಿಕ ಗಂಡನ - ನಾ -ನೆಲ್ಲಾದರೂ ನೀರ ಧುಮುಕುವೆನಮ್ಮ ಪ.ಉಟ್ಟೆನೆಂದರೆ ಇಲ್ಲ ತೊಟ್ಟೆನೆಂದರೆ ಇಲ್ಲ |ಕೆಟ್ಟ ಸೀರೆಯ ನಾನುಡಲಾರೆನೆ ||ಹಿಟ್ಟ ತೊಳಸಿ ಎನ್ನ ರಟ್ಟೆಯಲ್ಲ ನೊಂದವು |ಎಷ್ಟೆಂದು ಹೇಳಲಿ ಕಷ್ಟದ ಒಗತನ 1ಕೃಷ್ಣಾಜಿನವನು ರಟ್ಟೆಯಲಿ ಹಾಕಿಕೊಂಡು ||ಬೆಟ್ಟಲಿ ಗಿಂಡಿಯ ಹಿಡಿದಿಹನೆ ||ದಿಟ್ಟತನದಿ ನಾನೆದುರಿಗೆ ಹೋದರೆ |ದೃಷ್ಟಿಯಿಂದಲಿ ಎನ್ನ ನೋಡನಮ್ಮ 2ನಿನ್ನಾಣೆ ಹುಸಿಯಲ್ಲ ಬಿನ್ನಣ ಮಾತಲ್ಲ |ಕಣ್ಣಸನ್ನೆಯಂತು ಮೊದಲೆ ಇಲ್ಲ ||ಮುನ್ನಿನ ಜನ್ಮದಲಿ ಪುರಂದರವಿಠಲನ |ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮ 3
--------------
ಪುರಂದರದಾಸರು
ಔಪಾಸನವಮಾಡುದಾಸ ನಾನೆಂದುಶ್ರೀಪತಿದಾನ ಧರ್ಮವೆ ಮೋಕ್ಷವೆಂತೆಂದೂ ಪ.ವನಿತೆ ಲಕುಮಿಯು ದಾಸಿ ಮುಕ್ತಾಮುಕ್ತಗಣವೆಲ್ಲ ಹರಿದಾಸರುಹನುಮತ್ ಸ್ವಾಮಿಯು ರಾಮದಾಸತ್ವದ ಭಾಗ್ಯವನು ಹೊಂದಿವಿರಿಂಚಿಪದವಿಯ ಪಡೆದನು1ಅನಾದ್ಯನಂತಕಾಲಸಂಸೃತಿಯಲ್ಲಿಆನಂದವು ಮುಕ್ತಿಲಿನೀನೆಂದಿಗು ಸ್ವಾಮಿ ನಾನು ಭೃತ್ಯರಭೃತ್ಯಅನಿಮಿಷರೆಲ್ಲ ನಿನ್ನೂಳಿಗದವರೆಂದು 2ದಾರಾಪತ್ಯಾದಿ ಬಳಗ ದಾಸಿ ದಾಸರುನಾರಾಯಣ ದೇವನವರವರ ಯೋಗ್ಯತೆಸಾರಸಂಬಳ ಸೇವೆಮೀರದೀವ ದೀನೋದ್ಧಾರ ಕೃಷ್ಣನೆಂದು 3ಕರಣತ್ರಯಗಳಿಂದ ನಿರಂತರಮರೆಯೂಳಿಗವ ಮಾಡಿಸಿರಿದಾರಿದ್ರ್ರ್ಯತೆಗಳಿಗ್ಹಿಗ್ಗಿ ಕುಗ್ಗದೆಪರಮಭಕುತಿ ಭಾಗ್ಯ ದೊರಕಿದುಲ್ಲಾಸದಿ4ದುರಿತಕೋಟಿಗಂಜದೆ ಸಾಧುನಿಕರಹರಿಯ ಸೇವೆಯ ಬಿಡದೆವರವಿರತಿ ಜ್ಞಾನ ಭಕ್ತಿಲಿ ಪ್ರಸನ್ವೆಂಕಟಹರಿಕೊಟ್ಟಷ್ಟೆ ಪರಮಸಂಬಳ ಸಾಕೆಂದು5
--------------
ಪ್ರಸನ್ನವೆಂಕಟದಾಸರು
ಕಕ್ಷಾದೇವತೆಗಳ ಮನನ115ಪ್ರಾಣ ಪಾಲೀಸಿಂದ್ರಾನ ರಾಣೀ ದಕ್ಷಾನಿರುದ್ಧಾ |ಮಾನಿನಿರತಿಮನುಗುರುವಾಯು ಕೋಲೆ ||ಮಾನಿನಿರತಿಮನುಗುರುವಾಯು ಯಮಸೋಮ|ಮಾನವಿ ಭಾಸ್ಕರಗೆರಗೂವೆ ಕೋಲೆ 1ವರುಣ ನಾರದವಹ್ನಿತರುಣಿ ಪ್ರಸೂತಿ ಭೃಗು |ಸರಸೀಜಾಸನನ ಪುತ್ರರಾರೊಂದು ಕೋಲೆ ||ಸರಸೀಜಾಸನನ ಪುತ್ರರಾರೊಂದು ಮಂದಿಗಳ |ವರನಾಮ ವಿಸ್ತರಿಸಿ ವಂದಿಪೆ ಕೋಲೆ 2ಅಂಗೀರಾ ಪುಲಸ್ತ್ಯ ಅತ್ರಿ ಮಂಗಳಾಂಗ ಪುಲಹ ಕೃತು |ತುಂಗವಶಿಷ್ಠಿ ಮರೀಚಿಗೊಂದಿಪೆ ಕೋಲೆ ||ತುಂಗವಶಿಷ್ಠ ಮರೀಚಿ ವಿಶ್ವಾಮಿತ್ರನಿಗೆ ಮತ್ಸ್ಯಾ |ನಂಗ ಕಂಡ ವೈವಸ್ವತಗೊಂದಿಸುವೆ ಕೋಲೆ3ನಿರರುತಿ ಪ್ರಾವಾಹಿಮಿತ್ರಗುರುಪತ್ನೀಗೆ ವಂದಿಸುವೆ |ಕರಿಮುಖ ವಿಶ್ವಕ್ಸೇನ ಪೌಲಸ್ತ್ಯ ಕೋಲೆ ||ಕರಿಮುಖ ವಿಶ್ವಕ್ಸೇನ ಪೌಲಸ್ತ್ಯ ಅಶ್ವಿನೀಗ |ಳಿರಳೂ ಹಗಲೂ ನಾ ಸ್ಮರಿಸೂವೆ ಕೋಲೆ 4ಮರುತೂ ನಾಲ್ವತ್ತೊಂಬತ್ತುಗುರುವಿಶ್ವೇದೇವ ಹತ್ತು |ಎರಡು ಅಶ್ವೀನೀ ರುದ್ರರ್ಹನ್ನೊಂದೂ ಕೊಲೆ ||ಎರಡು ಅಶ್ವೀನೀ ರುದ್ರರ್ಹನ್ನೊಂದೂ ವಸುಯಂಟು |ಎರಡಾರು ಸೂರ್ಯರಿಗೆರಗೂವೆ ಕೋಲೆ 5ಭಾರತೀ ಭರತಾಗೆ ಮೂರು ಪಿತೃಗಳಿಗೆ |ಧಾರೂಣೀ ಋಭುವೀಗೆರಗುವೆ ಕೋಲೆ ||ಧಾರೂಣೀ ಋಭುವೀಗೆರಗೂವೆ ತಿಳೀವದು |ನೂರು ಮಂದೆಂದೂ ಕರಸೋರು ಕೋಲೆ 6ಮೂರು ಮಂದೀ ಉಳಿದೂ ಈರೈದು ಒಂದು ಮನು |ಚಾರುನಾಮಗಳ ವರ್ಣೀಪೆ ಕೋಲೆ ||ಚಾರುನಾಮಗಳ ವರ್ಣೀಪೆ ದಯಮಾಡಿ |ಸೂರಿಗಳೆಲ್ಲಾ ಕೇಳ್ವೋದು ಕೋಲೆ 7ಸ್ವಾರೋಚೀಷೋತ್ತುಮಾನು ಶ್ರೀ ರೈವತ ಚಾಕ್ಷುಷಾ |ನಾರಾಯಣನ ದಾಸ ಸಾವರ್ಣಿ ದಕ್ಷಾ ಕೋಲೆ ||ನಾರಾಯಣನ ದಾಸ ಸಾವರ್ಣಿ ದಕ್ಷ ಬ್ರಹ್ಮ |ಮಾರಾರಿದೇವ ಧರ್ಮ ಇಂದ್ರ ಸಾವರ್ಣೀ ಕೋಲೆ 8ಎಂದಿವರೀಗೊಂದೀಸಿ ಮುಂದೆ ಚವನ ಋಷಿ |ನಂದಾನೋಚಿತ್ಥ್ಯ, ಪಾವಕಾ, ಧೃವ, ನಹುಷ ಕೋಲೆ ||ನಂದಾನೋಚಿತ್ಥ್ಯಪಾವಕಧೃವನಹುಷಶಶಿ|ಬಿಂದೂ ಪ್ರಹ್ಲಾದ ಪ್ರಿಯ ವೃತಗೊಂದಿಸುವೆ ಕೋಲೆ9ಶಾಮಲಾ ಗಂಗಾ ಉಷಾ ಸೋಮರಾಣಿ ಸಂಜ್ಞಾ |ಧೀಮಂತ ಪರ್ಜನ್ಯಾಖ್ಯ ಸೂರ್ಯಗೆ ಕೋಲೆ ||ಧೀಮಂತ ಪರ್ಜನ್ಯಾಖ್ಯ ಸೂರ್ಯಗೆ ವಂದಿಸೀ ಅನ |ಭೀ ಮಾನೀ ಸೂರರನ್ನ ಮನದೊಳು ನೆನವೆನೆ ಕೋಲೆ 10ಅನಲರಸೀಬುಧಅಶ್ವಿನಿ ಭಾರ್ಯಾ ಛಾಯಾ ಪುತ್ರ |ಶನಿ ಪುಷ್ಕರಜಾನೂಜ ದೇವತಿಗಳಿಗೆ ಕೋಲೆ ||ಶನಿ ಪುಷ್ಕರಜಾನೂಜ ಮನ ದೇವತೆಗಳಿಗೊಂದಿಪೆ ಸು |ಪ್ರಾಣೇಶ ವಿಠಲಾನಲ್ಲಿರಲೆಂದು ಕೋಲೆ 11ಉರುವಸೀ ಮುಖ್ಯ ಅಪ್ಸರ ಸ್ತ್ರೀಯರೀಗೊಂದಿಸೀ |ಹರಿನಾರಿಯರ ಪಾದಕ್ಕೆರಗೂವೆ ಕೋಲೆ ||ಹರಿನಾರಿಯರ ಪಾದಕ್ಕೆರಗಿ ಪಿತೃಗಂಧರ್ವ |ನರನಾರಪತಿಮನುಷ್ಯೋತ್ತಮರಿಗೊಂದಿಸುವೆ ಕೋಲೆ12ಈ ನಿರ್ಜರರ ಧ್ಯಾನವನ್ನು ಮಾಡುತ್ತಾ |ಪ್ರಾಣೇಶ ವಿಠಲನ ಆ ನಾಭಿಯಿಂದ ||ಪ್ರಾಣೇಶ ವಿಠಲನ ಆ ನಾಭಿಯಿಂದ ಬಂದ |ಜ್ಞಾನಿಗಳ ಸಂತತೀ ನಾ ವರ್ಣಿಸುವೆ ಕೋಲೆ 13
--------------
ಪ್ರಾಣೇಶದಾಸರು
ಕಂಗಳುಹಿಂಗದಿರಲಿ ಎನ್ನ ನಿನ್ನಮಂಗಳಾಂಘ್ರಿ ಸರೋಜಂಗಳಲ್ಲಿ ಕೃಷ್ಣ ಪ.ಕ್ಷಿತಿಯನಳೆದ ಋಷಿಸತಿಯರಘ ಕಳೆದಶ್ರುತಿಸಾರಸ್ತುತಿಗೊಮ್ಮೆಗತಿ ಗೂಢದೊಲಿದಯತಿ ಮುನಿಜನ ದೇವತತಿಗಳ ಮನದಿಪ್ರತಿಕ್ಷಣ ತಟಿತದೀಧಿತಿಯುಳ್ಳ ಪದದಿ 1ಜಗದಘಹರಿಯೆಂಬ ಮಗಳನು ಪಡೆದಮಿಗಿಲಾದ ಕ್ರತುಕರ್ತನಿಗೆ ಒತ್ತಿ ಪೊರೆದಖಗವರಾದನ ಕರಯುಗಳೊಳು ಮೆರೆದವಿಗಡಾಹಿ ಮೌಳಿಯೋಳ್ ಧಿಗಿಲೆಂಬ ಪದದಿ 2ಶ್ರೀ ಚಕ್ಷುಚಕೋರ ಪೂರ್ಣಚಂದ್ರ ನಖದನೀಚಹಿಕೇತುವ ನಾಚಿಸಲೆಸೆದಶ್ರೀಚೆನ್ನ ಪ್ರಸನ್ವೆಂಕಟಾಚಲದೊಳಿದ್ದೆನ್ನಾಚರಣೆಗಕ್ಷಯ ಸೂಚಿಪ ಪದದಿ 3
--------------
ಪ್ರಸನ್ನವೆಂಕಟದಾಸರು
ಕಂಡೀರೆ ನೀವೆಲ್ಲರೂ ಶ್ರೀಕೃಷ್ಣನ ಕಂಡೀರೆ ಪಕಂಡೀರೆ ಪಾಂಡುರಂಗನನೂ ಕಳಕೊಂಡಿರೆಪಾಪ ಸರ್ವವನೂ ಅಂಡಜವಾಹನನಾಗಿಸಂಚರಿಸುವಪುಂಡರೀಕಾಕ್ಷಬ್ರಹ್ಮಾಂಡ ನಾಯಕನನ್ನೂ 1ಎಂಟನೆ ಅವತಾರಿಯೆನಿಸಿ ದೇವಕಿ ಎಂಟನೇಗರ್ಭದಿ ಜನಿಸಿ ಎಂಟನೆಮಾಸಶ್ರಾವಣಕೃಷ್ಣಾಷ್ಟಮಿ ದಿನ ನಟ್ಟಿರುಳಿನಲಿಸೃಷ್ಟಿಗಿಳಿದ ಶ್ರೀಕೃಷ್ಣನ 2ಮಧುರಾ ಪಟ್ಟಣದಿ ಮೈದೋರಿ ಬಹುವಿಧವಾಗಿ ಗೋಕುಲದೊಳಗಾದಧಿಘೃತಚೋರಕನೆಂದು ಯಶೋದೆಗೆಪದುಮಾಕ್ಷಿಯರು ಬಂದು ದೂರುವ ಕೃಷ್ಣನ 3ದನುಜೆ ಪೂತನೆಯಸುಗೊಂಡು ತನ್ನಜನನಿಗೋಪಿಗೆ ಬಾಯೊಳ್ ತೋರ್ದ ಬ್ರಹ್ಮಾಂಡವನಜಾಕ್ಷಿಯರ ಕೂಡಿ ಯಮುನಾ ತೀರದೊಳಾಡಿವನಿತೆಯರುಡುವ ಶೀರೆಗಳೊಯ್ದ ಕೃಷ್ಣನೇ 4ಗೋವಳರರಸನೆಂದೆನಿಸಿ ಶಿರಿಗೋವರ್ಧನವೆತ್ತಿಗೋವ್ಗಳ ಮೇಸಿ ಪಾವಕನುಕಾಳಿಮರ್ದನ ಗೈದು ಮಾವ ಕಂಸನ ಗೆಲ್ದಮಧುರೆಯೊಳ್ ಕೃಷ್ಣನಾ 5ದ್ವಾರಕಾಪುರವೊಂದ ರಚಿಸಿ ಬಲವೀರರಾಮನ ದೊರೆರಾಯನೆಂದೆನಿಸಿನಾರಿಯರ್ ಹದಿನಾರು ಸಾವಿರ ವಡಗೂಡಿಮಾರಕೇಳಿಯೊಳ್ ಮುದ್ದು ತೋರುವ ಕೃಷ್ಣನ 6ಶರದ ಸೇತುವಿಗೆ ಮೈಯ್ಯಾಂತ ಉಟ್ಟಶೆರಗೀಗೆ ವರವ ದ್ರೌಪದಿಗೊಲಿದಿತ್ತನರನ ಸಾರಥಿಯಾಗಿ ಕುರುನೃಪರನು ಗೆಲ್ದುಧರೆಯ ಪಟ್ಟವ ಧರ್ಮಜನಿಗಿತ್ತ ಕೃಷ್ಣನೆ 7ದುಷ್ಟ ನಿಗ್ರಹನೆಂಬ ಬಿರುದೂ ಭಕ್ತರಕ್ಷಕನೆಂದು ಮೂರ್ಲೋಕವದೆಂದೂಸೃಷ್ಟಿಯೊಳ್ ನರಜನರು ನಮಿಸಿ ಪೂಜಿಸಲೆಂದುಬಿಟ್ಟರು ದ್ವಾರಕಾಪುರವ ರಾಮಕೃಷ್ಣರು 8ಹಡಗಿನ ಮೇಲೇರಿ ಬಂದೂ ನಮ್ಮಉಡುಪಿಅನಂತೇಶನಿದಿರಾಗಿ ನಿಂದೂಕಡು ಕೃಪೆಯೊಳ್ ಭಕ್ತ ಕನಕನಿಗೊಲಿದವೊಡೆಯ ಗೊೀವಿಂದ ಗೋಪಾಲಕೃಷ್ಣನ 9
--------------
ಗೋವಿಂದದಾಸ
ಕಂಡೀರೇನೆ ಕಂಡೀರೇನೆ ಹಿಂಡುಗೋಪೇರುಪುಂಡರೀಕವರದ ಶ್ರೀ ಪಾಂಡುರಂಗ ಕೃಷ್ಣಯ್ಯನ ಪ.ಒಮ್ಮೆ ನಾನಂಜಿಸಿಕೊಂಡರಮ್ಮೆಯನುಣ್ಣದೆ ಹೋದನಮ್ಮ ರಂಗ ಸುಮ್ಮಾನದಿ ಭೀಮರಥಿಯಲಿದ್ದಾನಂತೆ 1ಎಡಬಲ ನೋಡದಲೆ ನಡೆದ ಕಾರಣವೇನೆಹಡೆದವರ ಮೇಲೆ ತಾ ಕಡುಕೋಪ ಉಚಿತೇನೆ 2ಗೆಜ್ಜೆ ಘಿಲ್ಲು ಒಡ್ಯಾಣದ ಗುಜ್ಜನ ಕಾಣದೆ ಕಣ್ಣಕಜ್ಜಳ ನೀರಾಗುತಿವೆ ದುರ್ಜನಾರಿ ಕೃಷ್ಣಯ್ಯನ 3ತಾಯಿತಂದೇರಗಲಿ ತಾನು ಬಯಲೊಳಗೆಂತಿಹನೆಮಾಯದ ಲೀಲೆಯ ನೋಡ್ವ ಬಯಕೆ ಕೈಗೂಡಲಿಲ್ಲ 4ಆಡುತಾಡುತ ಬತ್ತಲೆ ಓಡಿದ ವಾಜಿಯನೇರಿರೂಢಿಯೊಳ್ಪ್ರಸನ್ವೆಂಕಟ ಒಡೆಯ ವಿಠಲಯ್ಯನ 5
--------------
ಪ್ರಸನ್ನವೆಂಕಟದಾಸರು
ಕಂಡು ಕಂಡೆಂತು ಕೈ ಬಿಡುವೆ ಹರಿಯೆ |ಪುಂಡರೀಕಾಕ್ಷನಿನ್ನ ನಂಬಿದ ಮೇಲೆಪಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ |ಬಣಗುದಾರಿದ್ರ್ಯದಲಿ ಬಲು ನೊಂದೆನಯ್ಯ ||ಫಣಿಶಾಯಿ ಪ್ರಹ್ಲಾದವರದನೇ ನೀನೆನಗೆ |ಹೊಣೆಯಾದ ಮೇಲಿನ್ನು ಮರುಳು ಗೊಳಿಸುವರೆ? 1ಒಂದು ದಿನ ಅತಿಥಿಗಳನುಪಚರಿಸಿದವನಲ್ಲ |ಬೆಂದೊಡಲ ಹೊರೆದು ಬೇಸತ್ತೆನಯ್ಯ ||ಕುಂದು-ಕೊರತೆಯು ಏಕೆ ? ನಿನ್ನ ನಂಬಿದೆ ದಯಾ-|ಸಿಂಧುಗೋವಿಂದನೇ ತಂದೆಯಾದ ಮೇಲೆ2ಬಂಧು ಬಳಗ ಮುನ್ನಿಲ್ಲ ಬದುಕಿನಲ್ಲಿ ಸಖವಿಲ್ಲ |ನಿಂದ ನೆಲ ಮುನಿಯುತಿದೆನೀರಜಾಕ್ಷ||ತಂದೆ-ತಾಯಿಯು ನೀನೆ ಬಂಧು ಬಳಗವು ನೀನೆ |ಕುಂದದೇ ರಕ್ಷಿಸೈ ನಂದನಂದನನೆ 3ಆಶೆಯನು ಬಿಡಲಿಲ್ಲ ಅತಿ ಹರುಷವೆನಗಿಲ್ಲ |ದೇಶದೇಶವ ತಿರುಗಿ ದೆಸೆಗೆಟ್ಟೆನಯ್ಯ ||ವಾಸವಾರ್ಚಿತನಾದ ವೈಕುಂಠನಿಲಯ ಲ-|ಕ್ಷ್ಮೀಶ ನೀಯೆನ್ನ ಕಣ್ಣಾರೆ ಕಂಡ ಮೇಲೆ 4ಭಕುತವತ್ಸಲನೆಂಬ ಬಿರುದು ಹೊತ್ತಿದ ಮೇಲೆ |ಭಕುತರಾಧೀನನಾಗಿರ ಬೇಡವೆ ||ಮುಕುತಿದಾಯಕನೆ ಬೇಲೂರು ಪುರಾಧೀಶ್ವರ |ಸಕಲ ದೇವರದೇವಪುರಂದರವಿಠಲ5
--------------
ಪುರಂದರದಾಸರು
ಕಂಡೆ ಕರುಣನಿಧಿಯ | ಗಂಗೆಯ |ಮಂಡೆಯೊಳಿಟ್ಟ ದೊರೆಯ |ರುಂಡಮಾಲೆ ಸಿರಿಯ | ನೊಸಲೊಳು |ಕೆಂಡಗಣ್ಣಿನ ಬಗೆಯ | ಹರನ ಪಗಜಚರ್ಮಾಂಬರನ | ಗೌರೀ |ವರಜಗದೀಶ್ವರನ |ತ್ರಿಜಗನ್ಮೋಹಕನ | ತ್ರಿಲೋಚನ |ಭುಜಗಕುಂಡಲಧರನ | ಹರನ 1ಭಸಿತ ಭೂಷಿತ ಶಿವನ | ಭಕ್ತರ | ವಶದೊಳಗಿರುತಿಹನ |ಪಶುಪತಿಯೆನಿಸುವನ | ಧರೆಯೊಳು |ಶಶಿಶೇಖರ ಶಿವನ | ಹರನ 2ಕಪ್ಪುಗೊರಳ ಹರನ | ಕಂ | ದರ್ಪಪಿತನ ಸಖನ |ಮುಪ್ಪುರಗೆಲಿದವನ | ಮುನಿನುತ |ಸರ್ಪಭೂಷಣ ಶಿವನ | ಹರನ 3ಕಾಮಿತ ಫಲವೀವನ | ಭಕುತರ | ಪ್ರೇಮದಿಂ ಸಲಹುವನ |ರಾಮನಾಮಸ್ಮರನ ರತಿಪತಿ| ಕಾಮನ ಗೆಲಿದವನ | ಶಿವನ4ಧರೆಗೆ ದಕ್ಷಿಣ ಕಾಶೀ | ಎಂದೆನಿಸುವ |ವರಪಂಪಾವಾಸಿತಾರಕಉಪದೇಶಿ |ಪುರಂದರವಿಠಲ ಭಕ್ತರ ಪೋಷೀ | ಹರನ5
--------------
ಪುರಂದರದಾಸರು
ಕಂಡೆ ನಾ ಗೋವಿಂದನಪುಂಡರೀಕಾಕ್ಷಪಾಂಡವ ಪಕ್ಷನಪಕೇಶವ ನಾರಾಯಣ ಶ್ರೀ ಕೃಷ್ಣನವಾಸುದೇವಅಚ್ಯುತಾನಂತನ ||ಸಾಸಿರ ನಾಮದ ಶ್ರೀ ಹೃಷಿಕೇಶನಶೇಷಶಯನ ನಮ್ಮ ವಸುದೇವ ಸುತನ 1ಮಾಧವಮಧುಸೂದನ ತ್ರೀವಿಕ್ರಮನಯಾದವ ಕುಲಜನ ಮುನಿವಂದ್ಯನ ||ವೇದಾಂತ ವೇದ್ಯನ ಶ್ರೀಇಂದಿರೆರಮಣನ-ನಾದಿ ಮೂರುತಿ ಪ್ರಹ್ಲಾದವರದನ 2ಪುರುಷೋತ್ತಮ ನರಹರಿ ಶ್ರೀಕೃಷ್ಣನಶರಣಾಗತ ವಜ್ರಪಂಜರನ ||ಕರುಣಾಕರ ನಮ್ಮಪುರಂದರವಿಠಲನನೆರೆನಂಬಿದೆನು ಬೇಲೂರ ಚೆನ್ನಿಗನ3
--------------
ಪುರಂದರದಾಸರು