ಒಟ್ಟು 489 ಕಡೆಗಳಲ್ಲಿ , 63 ದಾಸರು , 408 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೋಭಾನ ಪಾಂಡುರಂಗಗೆ | ಶೋಭನ ಶ್ರೀನಿವಾಸಗೆ |ಶೋಭನಉಡುಪಿನಿಲಯಾಗೇ ಪಸುಮನಸರಾಳ್ದವನ ವರಜ ಬಾ |ಕಮಲೆಸದನಮುಖಕಂಜರವಿಬಾ |ವಿಮಲ ಗುಣಾರ್ಣವನೀಲಜಲದನಿಗಾತ್ರಾ ಬಾ ||ವಾರಿಜನೇತ್ರ ಬಾ ಮಂಗಳ ಸ್ತೋತ್ರ ಬಾ |ವಹನ ಪತತ್ರಾ ಬಾ ನತಜನ ಮಿತ್ರಾ ಬಾಹಸಿಯಾ ಜಗುಲೀಗೇ 1ಅಷ್ಟನಾಮ ಒಪ್ಪುವನೇ ಬಾ |ದುಷ್ಟ ದಿತಿ ಸುತ ಮದಹರಣಾ ಬಾ |ಮುಷ್ಟಿಕ ಪ್ರಮುಖಹ ಗೋವರ್ಧನಧರ ಕೃಷ್ಣಾ ಬಾ ||ಹರಿಗತಕಷ್ಟಾ ಬಾ ತ್ರಿಜಗಚ್ಚೇಷ್ಟಾ ಬಾ |ಅಕ್ಷರಜೇಷ್ಠಾ ಬಾ ನಿರುತ ವಿಶಿಷ್ಟಾ ಬಾಹಸಿಯಾ ಜಗುಲೀಗೇ 2ಮಾತುಳರಿಪುವನಅನಳಬಾ |ಶ್ವೇತವಹನ ರಥಸಾರಥಿಬಾ |ಮಾತಿ ಶಿರ ಕಡಿದು ಬಾಹುಜರೊರಸಿದ ನಾಥಾ ಬಾ ||ಗೋಕುಲ ತ್ರಾತಾ ಬಾ ಲೋಕೈಕದಾತಾಬಾ |ವಸುದೇವ ಜಾತಾ ಬಾ ಸುಪ್ರಖ್ಯಾತಾ ಬಾಹಸಿಯಾ ಜಗುಲೀಗೇ 3ವಾಮನ ಕೇಶವ ಹಯಮುಖ ಬಾ |ಭೀಮವಿನುತನಿಃಸೀಮಾ ಬಾ |ಕಾಮಿನಿಯರ ಚೈಲಹರಣ, ಋಷಿ, ರಣಭೀಮಾ ಬಾ ||ದಶರಥ ರಾಮಾ ಬಾ ಬಾಣವಿರಾಮಾ ಬಾ |ಅಜಮುಖ ನಾಮಾ ಬಾ ಕೃಷ್ಣಾ ಪ್ರೇಮಾ ಬಾಹಸಿಯಾ ಜಗುಲೀಗೇ 4ಕಂದರ್ಪಜನಕ ನರಹರಿ ಬಾ |ಅಂದಮೃತವ ತಂದವನೇ ಬಾ |ಮಂದೇತರಮುದಘಟಜ ಪ್ರಮುಖ ಮುನಿವಂದ್ಯಾ ಬಾ ||ಕಸ್ತುರಿ ಛಂದಾ ಬಾ ದೇವ ಮುಕುಂದಾ ಬಾ |ದೇವಕಿ ಕಂದಾ ಬಾ ಸದ್ಗುಣ ವೃಂದಾ ಬಾಹಸಿಯಾ ಜಗುಲೀಗೆ 5ಕ್ಷಿತಿಧರ ಜಿನಧರ ಸಖನೇ ಬಾ |ಅತುಳಮಹಿಮನೆ ಅಜಿತನೇ ಬಾ |ಸತಿಗಮರ ಸದನದಕುಸುಮತಂದಚ್ಯುತನೇ ಬಾ ||ಮೂರುತಿ ಸುತನೆ ಬಾ ಲೋಕ ವಿತತನೆ ಬಾ |ಪೂಜಿಗುಚಿತನೆ ಬಾ ರಕ್ಷಣರತನೇ ಬಾಹಸಿಯಾ ಜಗುಲೀಗೆ 6ಪ್ರಾಣೇಶ ವಿಠ್ಠಲರಾಯಾ ಬಾ |ವೀಣಾಪಾಣೀ ಜನಕನೆ ಬಾ |ಮಾಣದೆಭಕ್ತರ ಪೊರವುತಿಹನೆ ಸತ್ರಾಣಾ ಬಾ ||ಸತ್ಯಾ ಪ್ರಾಣಾ ಬಾ ಶ್ರೀ ಪಾಠೀಣಾ ಬಾ |ನಿಜ ವಿಜ್ಞಾನಾ ಬಾನಿತ್ಯಕಲ್ಯಾಣಾ ಬಾಹಸಿಯಾ ಜಗುಲೀಗೆ 7
--------------
ಪ್ರಾಣೇಶದಾಸರು
ಶ್ರೀ ಅಚ್ಯುತಾನಂತ ಗೋವಿಂದ ಸ್ತೋತ್ರ42ಪ್ರೋಚ್ಯಸುಗುಣಾರ್ಣವ ಶ್ರೀಶನಿರ್ದೋಷಅಚ್ಯುತಾನಂತ ಗೋವಿಂದಾಯ ನಮಃ || ಪಪ್ರಾತರುದಿತಾರ್ಕ ನಿಭ ತೇಜಸ್ವಕಾಂತಿಮಾನ್ರತ್ನ ಛವಿ ಜ್ವಲಿಸುವ ಕಿರೀಟಿಯೆ ಶರಣುಪ್ರತತ ಪ್ರಜ್ವಲ ಮಂಡಲೋಪಮ ಕುಂಡಲಗಳುವಿತತ ಮಹಿಮನೆ ನಿನ್ನ ಕಿವಿಯಲಿ ಪೊಳೆಯುತೆ 1ರಾಜರಾಜೇಶ್ವರನೆ ಸರ್ವಾಯುಧೋಪೇತನಿಜಬಲಾಮಿತ ಶಕ್ತ ಚತುರ್ಬಾಹು ಶರಣುಭಜಕರಕ್ಷಕ ಶಂಖಚಕ್ರಧರದೇವನೆತ್ರಿಜಗದೀಶನೆ ವಿಪೋಪರಿಸಂಸ್ಥಸ್ವಾಮಿ2ಅನಂತ ನಿತ್ಯನೆ ನಿನ್ನನ್ನ ಸರ್ವದೇವತೆಗಳುಸನಕಾದಿ ಮುನಿವರರು ಉಪಾಸಿಪರು ಶರಣುಘನವರದ ಅಭಯದನೇ ಸರ್ವ ಲೋಕವಕಾಯ್ವವನಜಭವಪಿತ ನಮೋ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಕೇಶವ ತೀರ್ಥ ಸ್ತೋತ್ರ107ಸೂರಿಪ್ರಾಪ್ಯ ಘೃಣಿಶೌರಿಶ್ರೀರಮಾಪತಿ ಪ್ರಿಯರುಸೂರಿವರ ಬ್ರಹ್ಮಣ್ಯ ತೀರ್ಥ ಆರ್ಯರ ಸುಸರೋಜಕರಜಾತ ಜಗತ್ಖ್ಯಾತ ವ್ಯಾಸರಾಜಾರ್ಯರಹಸ್ತಸುವ್ರತ ನಿಜೋತ್ಪನ್ನ ಕೇಶವ ತೀರ್ಥಾರ್ಯರ್ಗೆ ವಂದೇ ಪಮುಖ್ಯಪ್ರಾಣಪವಮಾನ ಸುರಮಾತರೀಶ್ವಗುರುಪ್ರದ್ಯುಮ್ನ ಅನಿರುದ್ಧ ಪುರುಷ ನರಸಿಂಹ ಶ್ರೀಶಪ್ರಜ್ಯೋತಿರ್ಮಯ ಉಗ್ರವೀರ ವಿಶ್ವವ್ಯಾಪಿ ವಿಷ್ಣುವುಮೃತ್ಯು ಮೃತ್ಯು ಸ್ತಂಭದಿಂ ಬಂದು ಪ್ರಹ್ಲಾದನ್ನ ಪೊರೆದ 1ನರಸಿಂಹನಾಜೆÕಯಿಂ ಪ್ರಹ್ಲಾದ ಸಿಂಹಾಸನವೇರೆನೆರೆದಿದ್ದ ಸುಮನಸರು ಹರಿಭಕ್ತ ಜನರುಸೂರಿಗಳುಆ ವೈಭವ ಕಂಡುಕೇಳಿಜಯಪರಾಕ್ಪರಾಕೆಂಬ ದಿವ್ಯಾನುಭವಜ್ಞಾನಿಕೇಶವ ತೀರ್ಥ2ಹಿಂದಿನ ಪ್ರಹ್ಲಾದಇಂದುವ್ಯಾಸಮುನಿರಾಜರಾಗಿದುಸ್ತರ್ಕ ಧ್ವಂಸಕರ ತರ್ಕತಾಂಡವ ಬೋಧಿಸಿಹಿತಕರ ನ್ಯಾಯ ಪೀಯೂಷವ ಉಣಿಸಿ ಆಹ್ಲಾದಚಂದ್ರಿಕಾಸುಖ ನೀಡಿ ಯತ್ಯಾಶ್ರಮ ಇತ್ತರಿವರ್ಗೆ 3ಶ್ರೀವ್ಯಾಸರಾಯರು ಅನುಗ್ರಹಿಸಿ ಕೇಶವ ತೀರ್ಥದಿವ್ಯ ನಾಮಾಂಕಿತವ ಪ್ರಣವಾದಿ ಮಂತ್ರ ಉಪದೇಶನಿವ್ರ್ಯಾಜ ನಿಶ್ಚಲ ಭಕ್ತಿಮಾನ್ ವಿನಯಸಂಪನ್ನ ಈಶಿಷ್ಯನಿಗೆ ಕೊಟ್ಟದ್ದು ಸಜ್ಜನರು ಹೊಗಳಿದರು 4ಶ್ರೀರಂಗದಲಿ ಉತ್ತರಾರಣ್ಯ ಬೀದಿಯಲ್ಲಿಹಶ್ರೀ ಕೃಷ್ಣಮಂದಿರದಿ ಶ್ರೀವ್ಯಾಸರಾಯ ಮಠದಿಚಾರುತರ ಚತುರ್ವಿಂಶತ್ ವಿಷ್ಣು ಮೂರ್ತಿಗಳುಂಟುತತ್ರಗೋಲಕ ಕ್ರಮದಿ ಶ್ರೀಹರಿಯ ಚಿಂತಿಪರು 5ಬ್ರಹ್ಮ ಗಾಯತ್ರಿ ಮನು ಇಪ್ಪತ್ತು ನಾಲ್ಕಕ್ಷರದಲಿತಂ ಆದಿ ಯಾತ್ ಅಂತ ಒಂದೊಂದರಲಿ ಒಂದುಹರಿಯಅಮಲ ಸುಪೂರ್ಣ ಕೇಶವಾದಿ ಕೃಷ್ಣಾಂತರೂಪಆ ಮೊದಲು ತಂ ಅಲ್ಲಿ ತಾರಕೇಶವನು ಧ್ಯಾತವ್ಯ 6ಬಲದಕೆಳಗಿನ ಕರದಿಪದ್ಮ ಮೇಲೆ ಶಂಖಜ್ವಲಿಪ ಚಕ್ರವು ಮೇಲಿನ ಎಡದ ಹಸ್ತದಲ್ಲಿಕೆಳಗಿನ ಎಡಕರದಿ ಗದೆಯ ಹಿಡಿದಿಹಜಲಜಸಂಭವ ಭವಾದ್ಯರ ಸ್ವಾಮಿ ಕೇಶವನು 7ದಶಪ್ರಮತಿ ಸರಸೀರುಹನಾಭ ನರಹರಿಅಸಮಮಾಧವಅಕ್ಷೋಭ್ಯ ಜಯವಿದ್ಯಾಧಿರಾಜಅಸಚ್ಛಾಸ್ತ್ರಗಿರಿಕುಲಿಶ ರಾಜೇಂದ್ರ ಜಯಧ್ವಜಶ್ರೀಶವಶಿ ಪುರುಷೋತ್ತಮ ಬ್ರಹ್ಮಣ್ಯ ವ್ಯಾಸತೀರ್ಥ 8ಹಂಸವಿಧಿ ಸನಕಾದಿಗಳಾರಭ್ಯ ಸನಾತನಸುಶೀಲ ಈಗುರುಪರಂಪರೆಯಲಿ ವ್ಯಾಸಮುನಿಸರೋಜ ಕರಜಾತ ಕೇಶವ ತೀರ್ಥರು ಹೀಗೆಕೇಶವನ್ನ ಧ್ಯಾನಿಸಿ ಒಲಿಸಿ ಕೊಂಡದ್ದು ಸಹಜ 9ಹರಿಪ್ರೀತಿ ಸಮರ್ಪಕ ಯತ್ಯಾಶ್ರಮ ಧರ್ಮಗಳಚರಿಸುತಗುರುಸೇವಾರತರಾಗಿ ಇರುತಿಹಬರುವ ಶಿಷ್ಯರಿಗೆ ಸೌಲಭ್ಯ ವಾತ್ಸಲ್ಯ ನೀಡುತಸೇರಿದರು ಪರಮತಿ ವೇಲೂರೆಂಬ ಕ್ಷೇತ್ರವನ್ನು 10ಶಲ್ಯ ರಾಜನ್ನ ಜ್ಞಾಪಿಸುವ ಶುಕವನ ಕ್ಷೇತ್ರದಿಂಒಳ್ಳೆಯ ರಸ್ತೆ ಹದಿನೈದು ಕ್ರೋಶ ದೂರದಿ ಇಹುದುಪ್ರಹ್ಲಾದ ವರದ ನಾರಸಿಂಹ ನಾಮಗಿರಿ ದೇವಿಬಲಜ್ಞಾನರೂಪ ಮಾರುತಿ ಇರುವ ನಾಮಕಲ್ಲು 11ನಾಮಶೈಲದಿಂದ ರಂಗ ತಾನೇ ತೋರಿದ ವೇಂಕಟರಮಣ ಪಶುಪತಿಕ್ಷೇತ್ರ ಕರೂರಿಗೆ ಹೋಗುವರಮಣೀಯಮಾರ್ಗಮಧ್ಯದಲ್ಲಿಯೇ ಇರುತಿಹವುಪರಮತಿ ವೇಲೂರು ಸುಪುಣ್ಯ ಕಾವೇರಿಯು 12ಸರ್ವಸುಗುಣಾರ್ಣವನುಅನಘಸರ್ವೋತ್ತಮನುಸರ್ವಕರ್ತಾಗಮೋದಿತನು ಜಿಜ್ಞಾಸ ಜನ್ಯ ಜ್ಞಾನಸಂವೃದ್ಧಿ ಸಾಧನಾನುಕೂಲ ಚತುರ್ವೇದಿ ಮಂಗಳದಿವ್ಯ ಪರಮತಿಯು ಅಲ್ಲಿ ಲೌಕೀಕರೇ ತುಂಬ 13ಸಪರಮತಿ ಸಮೀಪದಲ್ಲೆ ಚನ್ನಕೇಶವ ವೇಲಿಪುರವುಂಟು ಅದನ್ನ ವೇಲೂರೆಂದು ಹೇಳುವರುಪರಮತಿ ವೇಲೂರು ಕಾವೇರಿ ಪೋಷಿತವು ತೀರಪರಮಭಾಗವತಋಷಿ ಸಂಚಾರ ವಾಸಸ್ಥಾನ14ರಸಪೂರಿತ ಮಾವು ತೆಂಗು ಕದಲೀಫಲವೃಕ್ಷಬಿಸಜಮಲ್ಲಿಗೆ ಜಾಜಿಕುಸುಮಪರಿಮಳವುಹಂಸ ಪಾರಾವತ ತಿತ್ತರಾಶುಕ ಇಂಥಾ ಸುಪಕ್ಷಿಶ್ರೀಶನಂಘ್ರಿ ಸಂಬಂಧಿ ವರಜಾಯುಕ್ ಕಾವೇರೀ ಸರಿತ 15ಶ್ರೀಮನೋರಮ ಕೇಶವನ್ನ ಆರಾಧಿಸಿ ಧ್ಯಾನಿಸಲುಈ ಮನೋಹರ ಶಾಂತ ಸುಪವಿತ್ರ ಕ್ಷೇತ್ರವೆಂದುತಮ್ಮಯ ಬಾಹ್ಯ ಚಟುವಟಿಕೆಗಳ ನಿರೋಧಿಸಿಸಮೀರಸ್ಥ ಶ್ರೀಹರಿಯ ಧ್ಯಾನಾದಿರತರಾದರು 16ಯುಕ್ತಕಾಲದಿ ಈ ಸಂನ್ಯಾಸರತ್ನ ಕೇಶವಾರ್ಯರುಭಕ್ತಿವೈರಾಗ್ಯ ಯುಕ್ ಜ್ಞಾನ ಸಂಪನ್ನ ಶ್ರೀಹರಿಯಚಿಂತಿಸುತ ತ್ರಿಧಾಮನ ಪುರವನ್ನ ಯೈದಿದರುವೃಂದಾವನದಲ್ಲಿ ಒಂದಂಶದಲಿ ಇರುತಿಹರು 17ಕಾಲಧೀರ್ಘದಲಿ ಗ್ರಾಮಜನ ಬದಲಾವಣೆಯಿಂಎಲ್ಲಿ ವೃಂದಾವನ ಸ್ಥಾನ ಇದೆ ಎಂದು ಸರಿಯಾಗಿಹೇಳುವವರು ಸುಲಭದಿ ದೊರಕುವುದು ಶ್ರಮತಿಳಿದವರ ಸಹಾಯದಿಂ ಗುರುದಯದಿ ಸಾಧ್ಯ 18ಸದಾಪಾಣಿ ಭೀಮಸೇನ ಆರಾಧ್ಯ ಶ್ರೀಕೃಷ್ಣನು ಮತ್ತುಪದ್ಮಾಲಯಾಪತಿ ಪುಂಡರೀಕಾಕ್ಷನ್ನು ಶ್ರೀವಿಶ್ವನ್ನುಮಧ್ವಸ್ಥ ಪರಮಾತ್ಮನ್ನು ಸ್ಮರಿಸಿ ವೃಂದಾವನವಸಂದರ್ಶನ ಮಾಡಿ ಸೇವಾ ಸ್ವಗುರೂಪದೇಶವಿಧಿ19ಸ್ಮರಣ ದರ್ಶನ ಪ್ರದಕ್ಷಿಣ ನಮನ ಕೀರ್ತನಶಾಸ್ತ್ರಾಧ್ಯಯನ ಪ್ರವಚನ ಭಕ್ತಿಯಿಂದಲಿ ಪೂಜಾಪರಿಶುದ್ಧ ನೈವೇದ್ಯ ಎಷ್ಟೆಷ್ಟು ಸಾಧ್ಯವು ಅಷ್ಟುಹರಿಗುರು ಪಾದೋದಕ ಶುಭದ ಸರ್ವಾಭೀಷ್ಟದ 20ಆದರದಿ ಈ ಸ್ತೋತ್ರ ಪಠನ ಶ್ರವಣ ಮಾಳ್ಪರ್ಗೆಭಕ್ತಿಮೇಧಆಯುಷ್ಯ ಆರೋಗ್ಯ ಸೌಭಾಗ್ಯಗಳೀವಪದ್ಮಜನಪಿತನು ಶ್ರೀ ಪ್ರಸ್ನನ ಶ್ರೀನಿವಾಸನುವಂದೇ ವಿಧಿಮಧ್ವ ವ್ಯಾಸಮುನಿ ಕೇಶವಾರ್ಯಾಂತಸ್ಥ 21|| ಶ್ರೀ ಶ್ರೀ ಕೇಶವ ತೀರ್ಥ ಸ್ತೋತ್ರ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಿಜಯೀಂದ್ರ ತೀರ್ಥರ ಚರಿತೆ110ಪ್ರಥಮ ಕೀರ್ತನೆವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿ ಯಿಂ ಶರಣಾದೆ ಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಹಂಸ ಲಕ್ಷೀಮಶ ನಾಭಿಭವ ಸನಕಾದಿಮಹಂತರ ಸೂರಿಗಳಗುರುಪರಂಪರೆಯಮಹಾ ಪುರುಷೋತ್ತ ಮದಾಸ ಶ್ರೀಮಧ್ವವನದೃಹ ಪಾದಗಳಲ್ಲಿ ನಾ ಶರಾಣು ಶರಣಾದೆ 1ಅರವಿಂದನಾಭ ನರಹರಿ ಮಾಧವತೀರ್ಥಸೂರಿಕುಲ ತಿಲಕ ಅಕ್ಷೋಭ್ಯ ಜಯತೀರ್ಥಪರವಿದ್ಯಾಕುಶಲ ಶ್ರೀ ವಿದ್ಯಾದಿರಾಜರಜಯೀಂದ್ರರ ಚರಣಂಗಳಲಿ ನಾ ಶರಣು 2ಕೋವಿದಶಿರೋಮಣಿ ಕವೀಂದ್ರ ವಾಗೀಶರುಭಾವುಕಾಗ್ರಣಿ ರಾಮಚಂದ್ರ ವಿಭುದೇಂದ್ರದೇವ ಹರಿಪ್ರಿಯ ಜಿತಾಮಿತ್ರ ಯತಿವರರು ರಘುನಂದನದೇವಿ ತುಳಸೀಪತಿಯ ಒಲಿಸಿಕೊಂಡ ಸುರೀಂದ್ರರು 3ಈ ಸರ್ವ ಗುರುಗಳಚರಣಕಮಲಗಳಲ್ಲಿನಾ ಸರ್ವದಾ ಶರಣು ಶರಣೆಂಬೆ ಮುದದಿವ್ಯಾಸಮುನಿ ಪ್ರಿಯಮಿತ್ರ ಶ್ರೀಸುರೇಂದ್ರರಕರಸರಸಿಜದಿಜಾತ ವಿಜಯೀಂದ್ರರಲಿ ಶರಣು ನಾ 4ವಿದ್ಯಾಧಿರಾಜ ಸುತ ರಾಜೀಂದ್ರತೀರ್ಥರಪದ್ಮ ಕರದುದಯ ಜಯಧ್ವಜರಹಸ್ತವೃತತಿಜೋತ್ಪನ್ನ ಪುರುಷೋತ್ತಮ ಮಹಾಮಹಿಮಯತಿಕುವರ ಸೂರಿವತ ಬ್ರಹ್ಮಣ್ಯತೀರ್ಥ 5ಬ್ರಹ್ಮಣ್ಯತೀರ್ಥಾಖ್ಯ ಖಗಕರದಿ ಅರಳಿತುಮಹಿಯಲಿ ಪ್ರಖ್ಯಾತ ವ್ಯಾಸಮುನಿಅಬ್ಜಬಹುಮಂದಿ ಈ ಸುಮನ ಪರಿಮಾಳಾಕರ್ಷಿತರುಬ್ರಹ್ಮವಿದ್ಯಾ ಮಕರಂದದಿ ಮೋದಿಸಿದರು 6ಪೂರ್ವಜನ್ಮದಿ ನಾರದರಿಂದ ಉಪದಿಷ್ಟವ್ಯಾಸರಾಜರು ಶ್ರೀಪಾದರಾಜರಲಿಸರ್ವವಿದ್ಯಾ ಕಲಿತು ವಾದಿಗಜಹರಿ ಆಗಿತತ್ವ ಬೋಧಿಸಿ ಸಜ್ಜನರ ಕಾಯ್ದಿಹರು 7ಋಜುಮಾರ್ಗದಲಿ ಇರುವ ಯತಿವಟು ಗೃಹಸ್ಥರುನಿಜಭಕ್ತಿ ಶ್ರದ್ಧೆಯಿಂದಲಿ ಶ್ರೀವ್ಯಾಸ-ರಾಜರಲಿ ವಿದ್ಯಾಭ್ಯಾಸ ಮಾಡಲು ಆಗಪ್ರಜಾಪೇಕ್ಷೆ ಭಿನೈಸಿದ ವಿಪ್ರಶಿಷ್ಯ 8ಆವಿಪ್ರೋತ್ತಮನಿಗೆ ಪ್ರಜಾ ಅನುಗ್ರಹ ಮಾಡಿಪ್ರವರ ಪುತ್ರನ ತಮ್ಮ ಮಠಕ್ಕೆ ಕೊಡಬೇಕುಅವರಜರು ಸಂತತಿ ಅಭಿವೃದ್ಧಿಗೆ ಇರಲುಈ ವಿಧದಿ ಹೇಳಿದರು ಶ್ರೀ ವ್ಯಾಸಮುನಿಯು 9ಕೊಟ್ಟವರ ತಪ್ಪದೇ ವಿಪ್ರಪತ್ನಿಗೆ ಶಿಶುಹುಟ್ಟುವ ಸಮಯದಲಿ ಗುರುಗಳು ಕೌಶೇಯತಟ್ಟೆಯ ಕಳುಹಿಸಿ ಭೂಸ್ಪರ್ಶ ಇಲ್ಲದÀಲೇಹುಟ್ಟಿದ ಮಗುವನ್ನು ಹಿಡಿಯ ಹೇಳಿದÀರು 10ಶ್ರೀಮಠಕ್ಕೆ ವಿಪ್ರನು ಆ ಬಾಲಕನನ್ನುನೇಮಿಸಿದ ರೀತಿಯಲಿ ಒಪ್ಪಿಸಿ ಅಲ್ಲಿರುಕ್ಮಿಣಿನಾಥ ವಿಠಲನ ಪೆಸರಿಂದವಿಮಲವಟು ವಿದ್ಯಾರ್ಥಿ ಸನ್ಯಾಸಿ ಆದ 11ವಿಟ್ಠಲಾಚಾರ್ಯನು ಶ್ರೀ ವ್ಯಾಸರಾಜರಲಿಶಿಷ್ಠವಿಲ್ಲದೇ ಅಷ್ಟು ಶಾಸ್ತ್ರ ಕಲಿತು ಚತುಃಷಷ್ಟಿ ವಿದ್ಯಾದಲ್ಲಿ ಸಹನಿಪುಣನಾಗಿಅಷ್ಟ ದಿಕ್ಕುಗಳಲ್ಲಿ ಪ್ರಖ್ಯಾತನಾದ 12ಇದರಲ್ಲೇನು ಆಶ್ಚರ್ಯ ಇಲ್ಲ ಸ್ವಾಭಾವಿಕವುದೇವತೆಗಳು ಧರಣಿಯಲ್ಲಿ ಜನಿಸಿದರೂಶಕ್ಯಾತ್ಮನ ಸರ್ವ ಅಣಿಮಾದಿ ಐಶ್ವರ್ಯಇದ್ದು ಸುವ್ಯಕ್ತ ವಾಗುವವು ಗುರುಕೃಪದಿ 13ಈ ವಿಠಲನೇವೇ ವಿಜಯೀಂದ್ರ ನಾಮದಲಿಭುವಿಯಲ್ಲಿ ಬೆಳಗಿದನು ಸುರರಲ್ಲಿ ಶ್ರೇಷ್ಠದೇವತಾ ಕಕ್ಷದವರಾದ ಶ್ರೀವ್ಯಾಸಮುನಿಪ್ರವರ ಸುರಗಣ ವಾದಿರಾಜರ ಸಮೇತ 14ಸರಸಿಜಾಸನಪಿತ &ಟಜquo; ¥ಸÀನ್ನ ಶ್ರೀ ನಿವಾಸನು&ಡಿಜquo;ಬರೆಸಿದ ಶ್ರೀಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ15 ಪ-ಇತಿ ಪ್ರಥಮ ಕೀರ್ತನೆ ಸಂಪೂರ್ಣಂ-ದಿತೀಯ ಕೀರ್ತನೆವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿಯಿಂದ ಶರಣಾದೆಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಶ್ರೀಮನೋಹರ ರಂಗನಾಥನ ಸೇವಿಸಲುಶ್ರೀಮಠ ಜರುಗಿತು ರಂಗ ಕ್ಷೇತ್ರಕ್ಕೆಸೋಮಪುಷ್ಕರಿಣಿಯಲಿ ಕಾವೇರಿ ಮಧ್ಯದಲಿಕಾಮಿತಪ್ರದ ಶ್ರೀಶರಂಗ ಇರುತಿಹನು 1ಕಾವೇರಿ ತೀರದಲ್ಲಿ ಶ್ರೀತುಳಸಿವನ ಬೆಳಸೆಆವನಸಮೀಪದಲಿ ವ್ಯಾಸಮುನಿ ಮಠವುದುರ್ವಾದ ಖಂಡನ ಸಿದ್ಧ್ದಾಂತ ಸ್ಥಾಪನದೇವತಾರ್ಚನೆ ಹರಿಕೀರ್ತನೆ ವೈಭವವು 2ಒಂದು ದಿನ ಶ್ರೀ ವ್ಯಾಸರಾಯರು ನೋಡಿದರುತಂದು ಪೂಜೆಗೆ ಇಟ್ಟ ತುಳಸೀದಳಗಳುಇಂದಿರಾಪತಿಗರ್ಪಿತವಾದ ನಿರ್ಮಾಲ್ಯಎಂದು ತಿಳಕೊಂಡರು ವಿಚಾರ ಮಾಡಿದರು 3ತಿಳಿಯ ಬಂತು ಅಂದು ಪ್ರಾತಃಕಾಲದಲಿತುಳಸೀಗೆ ಬಂದುರು ಸುರೇಂದ್ರ ಮಠದವರುತುಳಸಿ ಕೊಡುವುದಿಲ್ಲ ಎನೆ ಪೋದರು ಆ ಬಾಹ್ಮಣರುಪೇಳಿದರುಗುರುಸುರೇಂದ್ರರಿಗೆವೃತ್ತಾಂತ4ಭಾವುಕ ಶಿರೋಮಣಿವಿಜ್ಞಾನಸೂರಿಗಳುತಾವು ಕುಳಿತಲ್ಲೇ ಸುರೇಂದ್ರ ಸ್ವಾಮಿಗಳುಭವಜನಯ್ಯನಿಗೆವನತುಳಸಿ ಪೂರಾವುಭಾವಶುದ್ಧದಿ ಅರ್ಪಿಸಲು ಹರಿಕೊಂಡ 5ಶ್ರೀ ಸುರೇಂದ್ರರ ಈ ಮಹಿಮೆಯ ಶ್ಲಾಘಿಸಿಬೇಗವ್ಯಾಸರಾಯರು ತಾವೇವೆ ಪೋಗಿಕುಶಲ ಸಂಭಾಷಿಸಿ ತಮ್ಮ ಮಠಕ್ಕೆ ಬಂದುಶ್ರೀಶಾರ್ಚನೆ ಚರಿಸಲು ಆಹ್ವಾನ ಮಾಡಿದರು 6ಸೂರಿವರ ರಾಜೇಂದ್ರ ರವೀಂದ್ರರುಎರಡು ಈ ಗುರುಗಳಿಂದಲಿ ಬಂದ ಮಠಗಳುಎರಡು ಸ್ವಾಮಿಗಳು ಶ್ರೀವ್ಯಾಸ ಸುರೇಂದ್ರರಹರಿಪೂಜೆ ವೈಭವವು ವರ್ಣಿಸಲು ಅಶಕ್ಯ 7ಥಳಥಳಿಪ ಬ್ರಹ್ಮವರ್ಚಸ್ಸು ಮುಖಕಾಂತಿಯುಎಲ್ಲ ಶಾಸ್ತ್ರಜ್ಞಾನ ಪ್ರವಚನ ಪಟುತ್ವಶೀಲತ್ವ ಸೌಲಭ್ಯ ಬಾಲ್ಯ ಚಟುವಟಿಕೆಯುಸೆಳೆದವು ಸುರೇಂದ್ರರ ವಿಠಲನ ಬಳಿಗೆ 8ರಮೆಯರಸನ ಪೂಜೆತತ್ವಬೋಧÀವು ಮಾಳ್ಪತಮ್ಮ ಸಂಸ್ಥಾನದ ಉನ್ನತ ಸ್ಥಾನಕ್ಕೆತಮ್ಮ ನಂತರ ವಿಜಯೀಂದ್ರರೇ ಸರಿ ಎಂದುನೇಮಿಸಿದರು ಮನದಿ ಸುರೇಂದ್ರ ಗುರುವು 9ಅಪರೋಕ್ಷದಲು ಈವಿಠಲನ ಯೋಗ್ಯತೆಆ ಪುಣ್ಯ ಶ್ಲೋಕರು ಅರಿತು ತಾವುಅಪೇಕ್ಷಿಸುವಂತ ವಸ್ತು ಬÉೀಕೆಂದರುಶ್ರೀಪನ ಇಚ್ಫೆಯನರಿತು ವ್ಯಾಸರಾಯರಲ್ಲಿ 10ಕೇಳುವ ವಸ್ತು ಬಿಟ್ಟು ಬೇರೆ ಏನೂ ಕೊಡುವೆಕೇಳÉಲಾರೆನು ಬೇರೆ ಕೊಳ್ಳೆನು ಬೇರೆಇಲ್ಲ ವೆಂದರೆ ಊಟ ಮಾಡಿಕೊಡುತ್ತÉೀನೆ ಈಲೀಲಾ ವಿನೋದ ಮಾತುಗಳು ಕ್ರೀಡಾರ್ಥ 11ವಿಮಲ ವಿರಜಾ ಸಮ ಕಾವೇರಿ ಮಧ್ಯದಲಿರಮಾಯುಕ್ ರಂಗನಾಥನು ಹನುಮಸೇವ್ಯರಾಮ ಪೂಜಿಸಿದಂಥ ರಾಮನು ಪಟ್ಟಾಭಿರಾಮ ಶ್ರೀ ಗೋಪಾಲಕೃಷ್ಣನ ಮುಂದೆ 12ಶ್ರೀಶನ ಈ ಬಹುರೂಪ ಸನ್ನಿಧಿಯಲ್ಲಿಭೂಸುರ ವಿದ್ವಾಂಸರ ಸಭೆ ಮಧ್ಯದಲಿವ್ಯಾಸಮುನಿದತ್ತ ವಿಠಲನ ಸುರೇಂದ್ರರುಸುಸ್ವಾಗತದಿಂದ ಸ್ವೀಕಾರ ಮಾಡಿದರು 13ವಿಜಯೀಂದ್ರ ತೀರ್ಥ ಶುಭತಮ ನಾಮವಿತ್ತರುವಿಜಯಶೀಲರಾಗಿ ವಿಜಯೀಂದ್ರರುನಿಜತತ್ವ ಸಿದ್ಧಾಂತ ಸ್ಥಾಪಿಸಿ ದುರ್ಮತದುರ್ಜನ ದುರ್ವಾದ ಚೂರ್ಣ ಮಾಡಿದರು 14ಬ್ರಹ್ಮ ದಶರಥ ರಾಮಚಂದ್ರನು ಅರ್ಚಿಸಿದಭೂಮಾದಿ ಗುಣಗಣಾರ್ಣವ ದಯಾನಿಧಿಯುಕಮಲೆ ಸೀತಾಸೇವ್ಯ ಮೂಲರಾಮನ್ನಸಮ್ಮುದದಿ ಶ್ರೀವಿಜಯೀಂದ್ರರು ಪೂಜಿಸಿದರು 15ಸರಸಿಜಾಸನಪಿತ &ಟಜquo; ಪ್ರಸÀನ್ನ ಶ್ರೀನಿವಾಸ&ಡಿಜquo; ನುಬರೆಸಿದ ಶ್ರೀಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ16-ಇತಿದ್ವಿತೀಯಕೀರ್ತನೆ ಸಂಪೂರ್ಣಂ-ವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿಯಿಂಶರಣಾದೆ ಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಧರೆಯೊಳುತ್ತಮ ಕುಂಭಕೋಣಾಖ್ಯ ನಗರದಿಹರಿದ್ವೇಷಿಯ ಗೆದ್ದು ಅವನ ಮಠ ತೋಟಸ್ಪರ್ಧೆ ಫಣವಾದ್ದವ ತಮ್ಮಲ್ಲಿ ಸೇರಿಸಿಕೊಂಡಧೀರ ವಿಜಯೀಂದ್ರರ ಚರಣಕಾನಮಿಪೆ 1ಸಾರಂಗಹಸ್ತವರಾಹಚಕ್ರಪಾಣಿ ರಾಮಮಂಗಳಾಂಬಿಕೆಯುತ ಕುಂಭೇಶ್ವರತುಂಗಮಹಿಮಳು ಕಾವೇರಿ ಸುಧಾಸರಸ್ಸುಈ ಕುಂಭಕೋಣದ ಮಹಿಮೆ ಏನೆಂಬೆ 2ಸಂಕ್ರಂದಸ್ಮರಮೊದಲಾದ ಜಗತ್ತಿಗೆ ಗುರುವಾದಮಂಗಳಾಂಬಿಕೆ ಕುಂಭೇಶ್ವರರ ನೃಹರಿ ಸಾನಿಧ್ಯರಭಂಗವಿಲ್ಲದೆ ಪ್ರತಿದಿನ ಸೇವಿಸುವರುಸುರೇಂದ್ರಮಠ ಗುರುವು ವಿಜಯೀಂದ್ರರು 3ಭಸ್ಮಧರನು ಸರ್ವೊತ್ತ ಮನೆಂದು ವ್ಯರ್ಥದಿದುಸ್ತರ್ಕ ಮಾಡಿದ ಜಗನ್ಮಿಥ್ಯಾವಾದಿಅಪ್ಪಯ್ಯನ ಮತವ ತೃಣದಂತೆ ಮಾಡಿದತತ್ವವಾದ ಅಸಿಯಿಂದ ವಿಜಯೀಂದ್ರ ಜಯಶೀಲ 4ಸ್ವಪಕ್ಷ ಪರಪಕ್ಷ ಸರ್ವವಿದ್ವಾಂಸರುಈ ಪುಣ್ಯಶ್ಲೋಕರ ಮಹಿಮೆ ಕೊಂಡಾಡಿತಪ್ಪದೇ ಆಗಾಗ ಬಂದು ಮರ್ಯಾದೆಅರ್ಪಿಸಿ ಪೋಗುವರು ಕೃತಕೃತ್ಯಮನದಿ 5ಬಾದರಾಯಣಿ ಮಾಧ್ವ ಗ್ರಂಥಗಳನುಸರಿಸಿವೇದ ವಿರುದ್ಧ ಮತ ಖಂಡನ ಗ್ರಂಥಗಳುಚತುರೋತ್ತರ ಶತಮೇಲ್ ತತ್ವ ಬೋಧಕವಾದಗ್ರಂಥಗಳ ರಚಿಸಿದರು ಉತ್ತಮ ರೀತಿಯಲಿ 6ಅಂಬುಶಾಯಿ ಸರ್ವ ಮುಕ್ತಾಮುಕ್ತ ಆಶ್ರಯನುಅಂಭ್ರಣೀಪತಿ ಶ್ರೀಮನ್ನಾರಾಯಣಗಂಭೀರ ಶಬ್ದಾರ್ಥ ನಿರ್ವಚನ ಮಾಡಿಹರುಅಂಬುಜನಾಭ ಒಲಿವ ಪಠಿಸಿದರೆ 7ಮಧ್ವಮತ ಪರಿಮಳ ಸುಗಂಧ ಭುವಿಯಲಿ ಹರಡೇಸುಧಾದಿ ಉದ್ಗ್ರಂಥ ಪ್ರವಚನದಿ ಪಟುವುಸುಧೀಂದ್ರ ಯತಿವರಗೆ ಸಂಸ್ಥಾನ ಕೊಟ್ಟರುಮಧ್ವಮತೋದ್ಧಾರ ವಿಜಯೀಂದ್ರ ಗುರುರಾಟ್ 8ಸದ್ಭಕ್ತಿಯಿಂಶುಚಿ ಅಧಿಕಾರಿ ಇವರ ನರಸಿಂಹಾಷ್ಟಕವಪಠಿಸೆ ಭೂತ ಪ್ರೇತ ಪಿಶಾಚಾದಿಗಳ ಉಚ್ಫಾಟನವುಚೋರ ವ್ಯಾಧಿ ಮಹಜ್ವರ ಭಯಾದಿ ಕಷ್ಟಗಳು ನಿವಾರಣಸಂಧ್ಯಾಕಾಲ ಪಠನದಿ ಸದ್ಭಕ್ತಿಗೆ ಒಲಿದು ಕಾಯ್ವ ಶ್ರೀ ನರಸಿಂಹ 9ಐವತ್ತು ಮೇಲೈದು ವರ್ಷ ಸಂಸ್ಥಾನದಿನಿರ್ವಿಘ್ನ ಪೂಜಾ ಶಿಷ್ಯೋ¥ದೇಶದೇವ ಲಕ್ಷೀಶಗೆ ತಮ್ಮ ಸೇವೆ ಸಮರ್ಪಣೆ ಮಾಡಿಪವಿತ್ರತಮ ಸುಸಮಾಧಿಯನ್ನು ಹೊಂದಿದರು 10ಶಾಲಿವಾಹನಶಕ ಹದಿನೈದು ನೂರು ಹದಿನಾಲ್ಕನೇ ವರ್ಷ ಜೇಷ್ಠಬಹುಳಶೀಲತಮ ಭವದಿತ್ರಯೋದಶಿ ದಿನದಿಮಾಲೋಲ ನಾರಾಯಣಪುರಯೈದಿದರು 11ಮತ್ತೊಂದು ಅಂಶದಲಿ ಕುಳಿತು ವೃಂದಾವನದಿಉತ್ತಮ ಶ್ಲೋಕ ನಾರಾಂiÀiಣನ ಧ್ಯಾನಿಸಿಒಲಿದು ಸೇವಿಸುವರಿಗೆ ಸÀತತ ಔದಾರ್ಯದಲ್ಲಿಇತ್ತು ವರಗಳ ಸದಾ ಸಂರಕ್ಷಿಸುತಿಹರು 12ಮೂಲರಾಮನ ವಿಮಲ ಭಾವದಲಿ ಅರ್ಚಿಸಿಕುಳಿತು ವೃಂದಾವನದಿ ಧ್ಯಾನಿಸುವ ಇವರುಮೂಲ ವೃಂದಾವನ ಮಾತ್ರದಿ ಅಲ್ಲದೇಅಲ್ಲಲ್ಲಿ ಇವರು ಮೃತಿಕೆಯಲ್ಲಿಯೂ ಇಹರು 13ವಿಜಯೀಂದ್ರರಾಯರ ವೃಂದಾವನದಲಿವಿಜಯಸಖ ಸರ್ವ ಜಗಜ್ಜನ್ಮಾದಿಕರ್ತಅಜಭವಾದಿಗಳಿಂದಸೇವ್ಯಶ್ರೀನರಹರಿ ಇಹನುವಿಜಯೀಂದ್ರಗುರುಅಂತರ್ಯಾಮಿವಾಂಛಿತಪ್ರದನು14ಶ್ರೀಶನ ಸಾನಿಧ್ಯ ಪೂರ್ಣ ಇರುವುದರಿಂದಶ್ರೀಶನೊಲಿಮೆ ಪೂರ್ಣಪಾತ್ರ ಇವರಲ್ಲಿಶ್ರೀ ಸುಧೀಂದ್ರಾದಿಗಳು ದೇವವೃಂದದ ಜನರುಭೂಸುರರು ಪ್ರತಿದಿನ ಬಂದು ವಂದಿಪರು 15ವೃಂದಾವನ ದರ್ಶನ ಸೇವೆ ಪಾದೋದಕಕುಂದುಕೊರತೆ ಇರುವ ಧಾರ್ಮಿಕ ಇಷ್ಟದವುಎಂದಿಗೂ ಎನ್ನ ಕುಂದುಗಳ ಎಣಿಸದೆಬಂದು ಪ್ರತಿಕ್ಷಣ ಕಾಯುತಿಹರು ಶರಣು ಶರಣಾದೆ 16ವಿ ಎಂದರೆ ವಿಠಲ ಜ್ಞಾನಮುದವೀವಜ ಎಂದರೆ ಜಯವು ಪುಟ್ಟು ಸಾವಿಲ್ಲಯೀ ಎಂದರೆ ಜ್ಞಾನಕರ್ಮ ಪೂಜಾಫಲವುಇಂದ್ರ ಎಂದರೆ ಐಶ್ಚರ್ಯ ಸುಖವೀವ 17ಸಿಂಧೂರವರದ ಶ್ರೀಕರ ಪುರುಷೋತ್ತಮಬಿಂದುಮಾಧವ ಶ್ರೀಧರ ರಾಮಚಂದ್ರಸೈಂಧವಾಸ್ಯನು ಅಚ್ಯುತಾನಂತ ಗೋವಿಂದಎಂದಿಗೂ ಎಮ್ಮನು ಕಾಯ್ವ ಗುರುಚರಿತೆ ಪಠಿಸೆ 18ಅಂಬರೀಷ ರಕ್ಷಕನು ಅಜಾಮಿಳ ವರದನುಕಂಬದಲಿ ತೋರಿ ಪ್ರಹ್ಲಾದನ್ನ ಕಾಯ್ವವನುಈ ವೃಂದಾವನ ಗುರುಚರಿತೆ ಪಠಿಸುವರಿಗೆಸೌಭಾಗ್ಯವೀವನು ಸುಧಾಮಗೊಲಿದವನು 19ನಾರಾಯಣವಾಸುದೇವ ಸಂಕರುಷಣಪ್ರದ್ಯುಮ್ನ ಅನಿರುದ್ಧ ಲಕ್ಷ್ಮೀ ಸಮೇತವರವಾಯು ಭಾರತೀ ಸುರವೃಂದ ಸಹಿತಇರುತಿಹ ವಿಜಯೀಂದ್ರರಲಿ ಅಭಯವರದ 20ಸೌಂದರ್ಯಸಾರ ಜಗದೇಕವಂದ್ಯನು ಭೈಷ್ಮೀಸತ್ಯಾಸಮೇತವರಅಭಯದ ಅಜಿತಇಂದಿರಾಪತಿ ಕೃಷ್ಣಗರ್ಪಿತ ಈ ಗುರುಚರಿತೆಸುದರ್ಶನ ಕಂಬುಧರ ಅಖಿಲಪ್ರದ ಹರಿಗೆ 21ಸರಸಿಜಾಸನಪಿತ &ಟಜquo; ಪ್ರಸನ್ನ ಶ್ರೀ ನಿವಾಸ &ಡಿಜquo; ನುಬರೆಸಿದ ಶ್ರೀ ಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವೈಕುಂಠಕೆ ಸರಿಯಾದ ದ್ವಾರಕೆಯಲಿ ಶ್ರೀಕೃಷ್ಣ ರುಕ್ಮಿಣಿದೇವಿಯರ ವಿವಾಹ ಶೋಭನದಿ ಉತ್ಸಾಹದಲಿ ಸರಸ್ವತಿಭಾರತಿದೇವಿಯರು ಸರ ಋಷಿ ಭಾವೆಯರು ಸಂಗೀತಕೋವಿದೆಯರು ಹಸೆಗಿಬ್ಬರನು ಕರೆದರು ಪ.ಅಗಣಿತಬ್ರಹ್ಮಾಂಡವ ರಚಿಸಿನಗುತಲೆ ನುಂಗೇಕಾಕಿಯಲಿಮಗುವೆನಿಸಿ ವಟಪತ್ರದಲಿ ಮಲಗಿದೆಮಲಗಿದಪ್ರಾಕೃತ ನಂದನಮಗನೆ ಬಾ ಕಸ್ತೂರಿ ಮೃಗನೆ ಬಾ ಶ್ರೀ ತ್ರಿಯುಗನೆ ಬಾರೆಂದು ಹಸೆಗೆ ಕರೆದರು 1ಕಡೆಗಣ್ಣಿನ ನೋಟದಿ ಕಮಲಜಮೃಡÀಮುಖ್ಯರ ಪಾಲಿಸುವೆ ಪಾಲ್ಗಡಲೊಡೆಯನ ಪಟ್ಟದರಂಭೆ ಜಗದಂಬೆಜಗದಂಬೆ ಮೋಹನ ಮಾಯದಬೆಡಗೆ ಬಾ ಭಾಗ್ಯದ ಹಡಗೆ ಬಾ ವ್ರಜದಕಡೆಗೆ ಬಾರೆಂದು ಹಸೆಗೆ ಕರೆದರು 2ಪೂತನಿ ಶಕಟಾಂತಕನೆ ಬಾ ಚಕ್ರವಾತನ ಘಾತಿಸಿದವನೆ ಬಾಪಾತಕಿಬಕಧೇನುಕಹರ ನವನೀತಚೋರ ನವನೀತಚೋರ ಭುವನಕಪ್ರತಿಪೂತನೆ ಬಾ ದೇವಕಿ ಜಾತನೆ ಬಾ ಬೊಮ್ಮನತಾತನೆÉ ಬಾರೆಂದು ಹಸೆಗೆ ಕರೆದರು 3ಯಮಳಾರ್ಜುನಭಂಜನಬಾ ಸಂಯಮಿ ಕುಲ ಮನರಂಜನ ಬಾರಮಣಕಪತಿ ಮದಹರಶುಭಯಮುನಾವಿಹಾರಯಮುನಾವಿಹಾರ ಗೋಪವಧೂಟೀರರಮಣ ಬಾ ಖಳಕುಲದಮನ ಬಾಖಗವರಗಮನಬಾರೆಂದು ಹಸೆಗೆ ಕರೆದರು4ಹೆಂಗಳ ಪಣೆಮಣಿಯೆ ಬಾ ಮನಮಂಗಳ ಗುಣಮಣಿಯೆ ಬಾ ಭುವನಂಗಳ ಬೆಳಗುವ ಚೆಲ್ವಿಕೆಯ ನಗೆಮೊಗದನಗೆಮೊಗದ ನೈದಿಲೆಗಂಗಳೆ ಬಾ ಸುರಮುನಿಜಂಗುಳಿ ಬಾ ಮಾತಿನಹೊಂಗಿಳಿಬಾರೆಂದು ಹಸೆಗೆ ಕರೆದರು 5ಸ್ವರ್ಧುನಿಯಳ ಜನಕನೆ ಬಾಭವಕರ್ದಮ ಶೋಷಕನೆ ಬಾ ಸುರಶಾರ್ದೂಲಸದ್ಗುಣಜಾಲ ಸಂಗೀತಲೋಲಸಂಗೀತಲೋಲ ಗೋಪಾಲಕವರ್ಧನಬಾ ರಿಪುಚಯ ಮರ್ದನ ಬಾಧೃತಗೋವರ್ಧನಬಾರೆಂದು ಹಸೆಗೆ ಕರೆದರು6ಅಂಬುಜಮಾಲಿನಿಯೆ ಬಾ ಮತ್ತಂಬುಜಜ ಜನನಿಯೆ ಬಾ ಹೇಮಾಂಬರೆ ಸಂಪಿಗೆಯ ಕಬರೆ ಬಿಂಬಾಧರೆಬಿಂಬಾಧರೆ ಬಹಳ ಉದಾರಿಗಳಿಂಬೆ ಬಾ ಜಗದ ವಿಡಂಬೆ ಬಾಕುಂದಣಬೊಂಬೆ ಬಾರೆಂದು ಹಸೆಗೆ ಕರೆದರು 7ರಾಜನಗಜ ಮಡುಹಿದನೆ ಬಾಮತ್ತಭೋಜೇಂದ್ರನ ಕೆಡಹಿದÀನೆ ಬಾಈ ಜನನೀ ಜನಕರ ಬಂಧನ ನಿವಾರಣನಿವಾರಣ ಕಾರಣ ಪೂರಣತೇಜಬಾ ರಾಜಾಧಿರಾಜ ಬಾ ದ್ವಿಜಸುರಭೋಜ ಬಾರೆಂದು ಹಸೆಗೆ ಕರೆದರು 8ವೈದರ್ಭ ಗರ್ಭಜಾ ತೇಜಾ ಅಲರೈದಂಬನ ಮಾತೆ ಬಾವೈದಿಕ ವಿಖ್ಯಾತೆ ಸ್ವಯಂಜ್ಯೋತೆ ದಾತೆಸ್ವಯಂಜ್ಯೋತೆ ದಾತೆ ನಿತ್ಯಮುತ್ತೈದೆ ಬಾ ಮುಕ್ತಿಯ ಬೋಧೆ ಬಾ ಮುದ್ದಿನಮೋದೆ ಬಾರೆಂದು ಹಸೆಗೆ ಕರೆದರು 9ಪಾಂಡವ ಸ್ಥಾಪಕನೆ ಬಾ ಮಹಾಖಾಂಡವವನ ದಾಹಕನೆ ಬಾಹೆಂಡರು ಹದಿನಾರು ಸಾವಿರದ ನೂರೆಂಟುನೂರೆಂಟರನಾಳುವಕದನಪ್ರಚಂಡ ಬಾ ಉದ್ದಂಡೋದ್ದಂಡ ಬಾ ಪುಂಡರಗಂಡಬಾರೆಂದು ಹಸೆಗೆ ಕರೆದರು10ಮುತ್ತಿನ ಸೂಸಕಳೆ ಬಾ ನವರತ್ನದ ಭೂಷÀಕಳೆ ಬಾಕಸ್ತೂರಿ ತಿಲಕದ ಪುತ್ಥಳಿಯೆ ಅಳಿಕುಂತಳೆಯೆಅಳಿಕುಂತಳೆಯೆ ಮದವಳಿಗನಚಿತ್ತೆ ಬಾ ನಿಜಪತಿವ್ರತ್ತೆ ಬಾಸುಪ್ಪಾಣಿಮುತ್ತೆ ಬಾರೆಂದು ಹಸೆಗೆ ಕರೆದರು 11ತುರಗಾಸ್ಯನ ಹೂಳಿದನೆ ಬಾ ಮಂದರಬೆನ್ನಲಿ ತಾಳಿದನೆ ಬಾವರಹ ನರಹರಿ ವಾಮನಭಾರ್ಗವರಾಮರಾಮರ ರಾಮ ಕೃಷ್ಣಯೋಗಿವರನೆ ಬಾ ಕಲಿಮಲಹರನೆ ಬಾ ಶಾಮಸುಂದರನೆ ಬಾರೆಂದು ಹಸೆಗೆ ಕರೆದರು 12ಶಂಕಿಣಿ ಪದ್ಮಿಣಿಯರು ರುಕ್ಮಿಣಿಪಂಕಜನಾಭನ ಪೂಜಿಸಿ ರತ್ನಾಂಕಿತ ಹರಿವಾಣದಲಿ ಆರತಿಯೆತ್ತಿಆರತಿಯೆತ್ತಿ ಪಾಡಿದರು ಅಕಳಂಕನ ಅಹಿಪರಿಯಂಕನ ಪ್ರಸನ್ನವೆಂಕಟರಮಣಗೆ ವಿಜಯವ ಹರಸಿದರು 13
--------------
ಪ್ರಸನ್ನವೆಂಕಟದಾಸರು
ಶ್ರೀಆನಂದಮಯಸ್ತೋತ್ರ40ಪೂರ್ಣ ಸುಗುಣಾರ್ಣವನೆಅನಘಪರಮೇಶ್ವರನೆಆ ನಮಿಪೆ ಶ್ರೀರಮಣಆನಂದಮಯವಿಷ್ಣುಪನಿನ್ನಯ ಸುಮಹಿಮೆಗಳ ನಿನ್ನಿಚ್ಛೆಯಿಂದಲೇಚೆನ್ನಾಗಿ ತಿಳಿಸಿ ಅಚ್ಛಿನ್ನ ಭಕ್ತಿಯನೀಯೊ ಅಪಸುಖರೂಪ ಪಾಲನಾಲಯಕರ್ತ ಲಕ್ಷ್ಮೀಶನಿಷ್ಕಳನು ನೀ ಸದಾಕೈವಲ್ಯಸುಖದಆಗಮಸುಶಾಸ್ತ್ರೈಕ ವಿಜÉÕೀಯ ಪರಬ್ರಹ್ಮಅಂಗಾಂಗ್ಯಭಿನ್ನ ಆನಂದ ಸಂಪೂರ್ಣ 1ಬ್ರಹ್ಮಶಬ್ದದಿ ಮುಖ್ಯವಾಚ್ಯ ಬಹು ಆವರ್ತಿಬ್ರಹ್ಮಆನಂದಮಯನೀ ಇತರರಲ್ಲಬ್ರಹ್ಮಪರಿಪೂರ್ಣಹರಿಸರ್ವನಾಮದಿ ನೀನೆಬಹುರೂಪ ಸರ್ವಸ್ಥ ಈಶ್ವರಆನಂದಮಯ2ಚಿತ್ಪ್ರಕೃತಿ ನಾಲ್ಮೊಗನು ಅಷ್ಟಮೂರುತಿ ಎಂಬರುದ್ರನು ದೇವೇಂದ್ರ ಸುರಗುರುವಿಪ್ರಇಂಥ ಯಾರೂ ವಸ್ತು ಯಾವುದೊ ಅಲ್ಲವುಆನಂದಮಯನೀನು ವಿಷ್ಣು ಪರಬ್ರಹ್ಮ3ಪ್ರಕೃತಿ ಪ್ರಜಾಪತಿ ಸದಾನಂದ ದಶಪ್ರಮತಿರುದ್ರಾಷ್ಟಮೂರ್ತ್ಯಾದಿ ಸರ್ವ ಶಬ್ದಂಗಳುಪರನೆ ಬ್ರಹ್ಮನೆ ವಿಷ್ಣು ಮುಖ್ಯ ವಾಚಕ ನಿನಗೆಇರುವ ಈ ಸರ್ವರೊಳು ಸುಖಪೂರ್ಣ ಸ್ವಾಮಿ 4ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯಆನಂದಮಯಎಂಬ ಐದು ಶಬ್ದಂಗಳು 1ಆನಂದಮಯಶಬ್ದದಿಂದ ಗ್ರಹಿಸಲುಬೇಕುಆನಂದಮಯಬ್ರಹ್ಮ ನೀನೆ ಇತರರು ಅಲ್ಲ5ಶಿರ ಬಾಹುದ್ವಯ ಮಧ್ಯಚರಣಅಂಗಾಂಗಗಳುಪೂರ್ಣಆನಂದಮಯಎಂದೂ ಅಭಿನ್ನಉರು ಸುಗುಣ ಪರಿಪೂರ್ಣ ವಿಷ್ಣು ಆತ್ಮನು ಬ್ರಹ್ಮಶೃತಿಯು ಬಹುಸಾರುತಿದೆ ಸುಖಮಯನು ಎಂದು 6ಅನ್ನಮಯ ಅನಿರುದ್ಧ ಪ್ರಾಣಮಯ ಪ್ರದ್ಯುಮ್ನಮನೋಮಯ ಸಂಕರ್ಷಣನು ವಿಜ್ಞಾನಮಯನುಅನಘಮಾಯಾರಮಣ ಪರವಾಸುದೇವ ನೀಆನಂದಮಯಶ್ರೀಶ ನಾರಾಯಣ ಬ್ರಹ್ಮ7ಪಂಚ ಕೋಶಂಗಳಲಿ ತನ್ನಾಮ ತದ್ಭಿನ್ನಕಿಂಚಿತ್ತು ಲೇಪವಿಲ್ಲದೆ ಇದ್ದು ನಿಯಮಿಸುವೆಪಂಚ ಸುಖರೂಪದಿಂ ಪಂಚವರ್ಣದಿ ಜ್ವಲಿಪೆಸಂಚಿಂತಿಪರ್ಗೆ ಸುಖವೀವೆ ಸುಖಮಯ ಬ್ರಹ್ಮ 8ಅಧಿಕಾರಿ ಆನಂದಪ್ರಚುರಬಹುರೂಪ ನೀಸರ್ವರೂ ನಿನ್ನಿಂದ ಉಪಜೀವ್ಯರೊ ಸ್ವಾಮಿಸರ್ವರಿಗು ಪ್ರೇರಕನು ಸತ್ತಾಪ್ರವೃತ್ತಿದನುಸರ್ವೇಶ ಸುಖಪೂರ್ಣ ಸರ್ವವ್ಯಾಪಿಯೆ ದೇವ 9ಆನಂದಮಯನೀನೆ ಆನಂದೋದ್ರೇಕದಿಂಪ್ರಾಣಿಗಳ ಧರ್ಮಗಳ ಪ್ರವೃತ್ತಿ ಮಾಡುವೆಯೊಆನಂದೋದ್ರೇಕದಿಂ ಸರ್ವತ್ರವ್ಯಾಪ್ತ ನೀಆನಂದಮಯಇತರ ಲೋಕಚೇಷ್ಟಕರಿಲ್ಲ10ಅಂಗಾಂಗಿತ್ವದಿ ಭಗವಂತ ನೀ ಕ್ರೀಡಿಸುವೆರಂಗ ನೀ ಸತ್ಯಂ ಜ್ಞಾನಮನಂತಂ ಬ್ರಹ್ಮನೆಂದುಹೊಗಳುತಿದೆ ಶೃತಿಯು ಸುಖಸಾರಾತ್ಮ ಚಿನ್ಮಾತ್ರಚಾರ್ವಾಂಗ ನಿನ್ನ ತಿಳಿಯದೆ ಬೇರೆ ಗತಿಯಿಲ್ಲ 11ಸತ್ಯ ಸತ್ಸøಷ್ಟಿಕರ್ತ ಜೀವನಪ್ರದನುಸರ್ವ ಪ್ರವರ್ತಕನು ಸಂಹಾರಕರ್ತಅಶೇಷಸಾಮಾನ್ಯ ವಿಶೇಷಜ್ಞಾನವು ಜ್ಞಾನದೇಶಾದಿಪರಿಚ್ಛೇದ ಶೂನ್ಯವು ಆನಂತ 12ಅನ್ನಮಯದಿಂ ಸೃಷ್ಟಿ ಸಂಹಾರಜೀವನವುಪ್ರಾಣಮಯ ಶಬ್ದ ಸಹ ಜೀವನಪ್ರದವುಮನೋಮಯ ಶಬ್ದದಿಂ ಸಾಮಾನ್ಯಜ್ಞಾನವುವಿಜ್ಞಾನಮಯ ಶಬ್ದದಿ ವಿಶೇಷಜ್ಞಾನ 13ಆನಂದಮಯಶಬ್ದದಿಂದಲಿ ಜÉÕೀಯವುಆನಂದಾದ್ಯಖಿಳಗುಣ ಅಪರಿಚ್ಛಿನ್ಮತ್ವಅನ್ನಮಯ ಪ್ರಾಣಮಯ ಸತ್ಯಂ ಬ್ರಹ್ಮಮನೋಮಯ ವಿಜ್ಞಾನಮಯ ಜ್ಞಾನಂ ಬ್ರಹ್ಮ 14ಆನಂದಮಯಆನಂತಂ ಬ್ರಹ್ಮ ಎಂದೀ ರೀತಿಮಂತ್ರವರ್ಣೋಕ್ತ ಶಬ್ದಗಳಿಗೇಕಾರ್ಥಆನಂದಮಯಮೊದಲಾದ ಶಬ್ದಗಳಿಂದಆನಂದಪರಿಪೂರ್ಣ ವಿಷ್ಣು ನೀನೇ ವಾಚ್ಯ 15ಆತ್ಮ ನೀಆನಂದಮಯಇತರರು ಅಲ್ಲಆನಾತ್ಮರು ಸಂಪೂರ್ಣಸ್ವತಂತ್ರರು ಅವರುಚೇತನಾಚೇತನದಸತ್ತಾನಿನ್ನಿಂದಲೇಆನಂತ ನೀ ಸರ್ವಗನು ಆಸಮ ಪ್ರಭು ಐರ 16ಬ್ರಹ್ಮ ವಿದಾಪ್ನೋತಿ ಪರಂ ಎಂದು ಉಪನಿಷದ್ವಾಕ್ಯಬ್ರಹ್ಮಾಪರೋಕ್ಷವೇ ಮೋಕ್ಷಕ್ಕೆ ಕಾರಣಬ್ರಹ್ಮೇತರ ವಿರಿಂಚಾದಿ ಜೀವರ ಜ್ಞಾನಮೋಕ್ಷಕೊಡಲು ಎಂದು ಶೃತಿಯು ಪೇಳುತಿದೆ 17ತಮೇವಂ ವಿದ್ವಾನಮೃತ ಇಹಭವತಿನಾನ್ಯಃ ಪಂಥಾ ಅಯನಾಯ ವಿದ್ಯತಾಎಂಬ ಶೃತ್ಯನುಸಾರ ನಿನ್ನಾಪರೋಕ್ಷ ವಿನಾಮುಕ್ತಿಯು ಲಭಿಸದು ಅನ್ಯಜ್ಞಾನದಿ ಎಂದೂ 18ಆನಂದಪ್ರಚುರ ಪೂರ್ಣಾನಂದಮಯ ನೀನೆಆನಂದ ತರತಮದಿ ಜೀವರಲಿ ಉಂಟುಅತ್ಯಂತ ಭೇದವು ನಿನಗೂ ಜೀವರಿಗೂಅನಂತ ಅಪರಿಮಿತ ಆನಂದಿ ನೀನೆ 19ರುದ್ರನ ಶತಗುಣಿತ ಆನಂದ ನಾಲ್ಮೊಗನಒಂದು ಆನಂದವು ಎಂಬುವುದು ಶೃತಿಯುಆನಂದ ಪರಿಮಿತವು ಜೀವರಿಗೆ ಈ ರೀತಿಆನಂದ ಅಪರಿಮಿತ ನಿನ್ನಯ ಸ್ವರೂಪ 20ಸುಖಮಯ ನಿನ್ನಪರಿಮಿತಾನಂದಾದಿಗಳನುಸಾಕಲ್ಯತಿಳಿದವರು ಇಲ್ಲವೇ ಇಲ್ಲಸಾಕಲ್ಯಶಬ್ದಗಳು ಪೊಗಳಲರಿಯವು ನಿನ್ನಏಕಸುಖಮಯ ನೀನು ಜೀವರಿಗೆ ಭಿನ್ನ 21ತತ್ವಮಸ್ಯ ಹರಿಬ್ರಹ್ಮಾಸ್ಮಿ ಪುರುಷಯೇ ವೇದಂಸರ್ವಂ ಎಂಬಂಥಾ ಇಂಥ ಶೃತಿ ಮಾತುಗಳುಜೀವೇಶ ಐಕ್ಯವನು ಬೋಧಿಸುವವಲ್ಲವುಸರುವಿಚಾರ ನಿರ್ಣಯದಿ ಭೇದಬೋಧಕವೆ 22ಜೀವರಿಗೆ ಜನ್ಮಜೀವನಸತ್ತಾದಾತನುಸರ್ವಾಶ್ರಯ ಸರ್ವನಿಯಾಮಕನು ಆತ್ಮಜೀವರು ಪರಬ್ರಹ್ಮಜ್ಞಾನದಿಂ ಪೊಂದುವಸೋಚಿತಪೂರ್ಣತ್ವ ಕೊಡುವ ನೀ ಬ್ರಹ್ಮ 23ಸರ್ವಕ್ಕೂ ಭಿನ್ನ ನೀ ಸರ್ವತ್ರ ಸರ್ವದಾಸರ್ವದೊಳು ಇರುವಂಥ ಸರ್ವೇಶ್ವರಸರ್ವ ಸತ್ತಾದಿ ಪ್ರದತ್ವ ಸ್ವಾಮಿತ್ವದಿಂಸರ್ವ ನೀನೆಂದೆನಿಸಿಕೊಂಬೆಯೊ ದೇವ 24ಸರ್ವವಂದ್ಯನು ವಿಷ್ಣು ಸರ್ವಾಂತರ್ಯಾಮಿಯುಸ್ವತಂತ್ರ ಈಶನು ಸರ್ವಜೀವರಿಗೆ ಭಿನ್ನಸರ್ವಸ್ವಾಮಿಯು ನೀನು ಎಂದರಿತು ಭಜಿಪರಿಗೆಸರ್ವಶೋಕವ ಬಿಡಿಸಿ ಮೋಕ್ಷಸುಖವೀವೆ 25ಸರ್ವಜಡ ಚೇತನದಿ ಅಂತರ್ನಿಯಾಮಕನುಸರ್ವಜಗದಾಧಾರ ಏಕ ಬಹುರೂಪತ್ವಂ ಅಸೌ ಅಹಮೆಂದು ಸರ್ವನಾಮದಿ ವಾಚ್ಯಸರ್ವಜಡ ಚೇತನಕೆ ವಿಲಕ್ಷಣನು ಸ್ವಾಮಿ 26ಅತೀಂದ್ರಿಯವು ಬ್ರಹ್ಮವಿಷಯಕ ಜ್ಞಾನಶೃತ್ಯನುಸಾರವಿಲ್ಲದ ಅನುಮಾನದುಸ್ತರ್ಕದಿಂದಲಿ ಲಭಿಸದು ಯಾರಿಗೂಮೋದಮಯ ಶ್ರೀ ವಿಷ್ಣು ಜೀವರಿಂ ಭಿನ್ನ 27ಬದ್ಧರೊಳು ಮುಕ್ತರೊಳು ಇದ್ದು ನೀ ನಿಯಮಿಸುವೆಬದ್ಧರಂತೇ ಮುಕ್ತಜೀವರಿಗೂ ಭಿನ್ನಮುಕ್ತರಿಗೆ ಅವರವರ ಆನಂದ ಅನುಭವವುಅಧೀನ ನಿನ್ನಲ್ಲಿಆನಂದಮಯಶ್ರೀಶ28ಸದಮಲ ಬ್ರಹ್ಮ ನಿನ್ನ ಪರೋಕ್ಷಜ್ಞÕನಿಗೆಪದುಮಸಂಭವ ಸಹ ನೀನು ಸಹ ಇದ್ದುಒದಗಿಸುವೆ ಸೋಚಿತ ಮೋಕ್ಷಸುಖ ಅವರಿಗೆಹೇ ದಯಾನಿಧೇ ನಮೋ ಆನಂದಪೂರ್ಣ 29ಅನ್ನ ಪ್ರಾಣ ಮನೋವಿಜ್ಞಾನಆನಂದಮಯಪರಿಣಾಮ ಅಭಿಮಾನರಹಿತ ಅಧಿಕಾರಿಆನಂದ ಪ್ರಚುರನೇ ಲೋಕಚೇಷ್ಟಕ ನೀನೆಮಂತ್ರವರ್ಣೋಕ್ತ ಮಹಾಮಹಿಮ ಸುಖಪೂರ್ಣ 30ವನಜಾಸನಾದಿಗಳು ಆನಂದಮಯರಲ್ಲನಿನ್ನಿಂದ ಉಪಜೀವ್ಯ ಭಿನ್ನರು ಅವರುಆಮ್ನಾಯದಿಂ ವೇದ ದುಸ್ತರ್ಕಕತಿ ದೂರಆನಂದಮಯವಿಷ್ಣು ಮುಕ್ತರಿಗೂ ಆಶ್ರಯನು31ಜ್ಞಾನಸುಖಪೂರ್ಣ ಪ್ರಸನ್ನ ಶ್ರೀನಿವಾಸಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಎನ್ನ ಒಳಹೊರಗಿದ್ದು ನೀನೆ ನುಡಿದೀ ಗ್ರಂಥನಿನಗೆ ಅರ್ಪಣೆ ಸುಹೃದನಿತ್ಯಸಂತೃಪ್ತ32
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಭಾವಸಂವತ್ಸರ ಸ್ತೋತ್ರ151ಭೇಶಸರ್ವೇಶ್ವರ ಶ್ರೀಪತಿಯೇ ಈಭಾವಸಂವತ್ಸರ ನಿಯಾಮಕÀನು ನಮೋ ನಮೋ ಸ್ವಾಮಿ ಪಇಲ್ಲಿ ಬರುವ ನುಡಿಗಳ ಅರ್ಥ ಅನುಸಂಧಾನಗಳಎಲ್ಲ ವೇದಆಗಮಗಾಯತ್ರಿ ಮಹಾಮಂತ್ರ ಬಾಹ್ಯರಿಗೆ ಅಲ್ಲಮೀರುವರಿಗೆ ಒಳ್ಳೇದು ಅಲ್ಲ 1ಶ್ರವಣ ಪಠನ ಫಲಮೋಕ್ಷಸಾಧನ ಜ್ಞÕನಅವಾಂತರ ಫಲ ಕೀರ್ತಿ ಯಶಸ್‍ಲಾಭ ಕಷ್ಟಕಲುಷÀನಾಶವಿವಾದ ಸಂವತ್ ಸಂಜ್ಞÕನ ಅಧೋಪ್ರಾಪ್ತಿಯಥಾಯೋಗ್ಯ2ಆಂಗೀರಸ ವರುಷ ಶ್ರವಣಕ್ಕೆ ಅನುಕೂಲ ಶ್ರೀ ಭಾವವುಮನನಕ್ಕೆ ಅನುಕೂಲ ಸಾಧನ ಈಗ ಈಭಾವಸಂವತ್ಸರ ಉತ್ತಮರೀತಿಯಲ್ಲಿ ಮಾಳು ಸುಧ್ಯಾನಕೆ 3ವೇದಪ್ರತಿಪಾದ್ಯ ಸರ್ವೋತ್ತಮ ಸರ್ವಸ್ವಾಮಿಯ ಸಾಕ್ಷಾತ್ಕಾರತನ್ನಿಚ್ಛೆ ಇಂದಲೇಈವಶ್ರೀ ವಿಷ್ಣು ಪ್ರೀತಿಕರ ಸಾಧನ4ಸದಾಗಮದಿಂದಲ್ಲೇ ಯಥಾಯೋಗ್ಯ ಸಂವೇದ್ಯ ವಿಷ್ಣುತ್ರಯೀಮಯನು ಧರ್ಮಮಯನು ತಪೋಮಯನು ಅವನೇಜಗಜ್ಜನ್ಮಾದಿ ಕರ್ತುತ್ಪಾದಿಗಳ ಕಲ್ಯಾಣತಮ ಮಹಿಮೆಗಳ 5ಶ್ರದ್ಧಾಭಕ್ತಿಯಿಂ ವಿಶೇಷ ಜಿಜ್ಞÕಸವ ಸೌಶೀಲ್ಯ ಗುಣವಂತಅಜಶಂಕರಾದಿಗಳಿಂ ಮಾಡಲ್ಪಟ್ಟ ಷಡ್ಗುಣೋಪಲಕ್ಷಿತ ಅನಂತಕಲ್ಯಾಣ ಗುಣರೂಪನಾದ ಭಗವಂತನ ಪ್ರಸಾದಲಭಿಸೇ ಸಾಧನಸುಧ್ಯಾನ 6ಭಗವಾನ್ಭೇಶಸರ್ವೇಶ್ವರ ಅಜನ ಪಿತ ಪ್ರಸನ್ನ ಶ್ರೀನಿವಾಸತನ್ನಿಚ್ಛೆ ಇಂದಲೇ ಸಜ್ಜೀವರಗೀವ ಯೋಗ್ಯತೆಅರಿತು ಅಪರೋಕ್ಷ್ಯ ಕರುಣಾಸಮುದ್ರ ಶ್ರೀಪ 7
--------------
ಪ್ರಸನ್ನ ಶ್ರೀನಿವಾಸದಾಸರು
ಷಡ್ವರ್ಗ ಸುಳಾದಿಝಂಪೆತಾಳಧನಧಾನ್ಯ ಗೃಹಕ್ಷೇತ್ರ ವನಿತೆ ಪುತ್ರಾದಿತರನೆನವಿನಲಿ ಜನುಮಗಳ ತಂದೀವ ಕಾಮಕನಕಗಿರಿ ಕೈಸಾರ್ದಡಂಪರಸುದೊರೆದಡಂಇನಿತು ತೃಪುತಿಯೈದದೆನ್ನ ಮನೋಕಾಮಜನಪರ ಸಿರಿಬಯಕೆ ಜಾಣೆಯರ ಸಂಗತಿಯಕನಸಿನೊಳಗಾದಡಂ ಬಿಡದಿಹುದು ಕಾಮತನಗಲ್ಲದ್ಹವಣದಿಹ ಕಾಮಕಾಮಿನಿಭೂತಕೆನಿತಶನ ಸಾಲದಾಯಿತೈ ಪೂರ್ಣಕಾಮಮುನಿನಾರಿಯಳ ಕಲ್ಲಮೈಯನೆತ್ತಿದಪಾದವನು ಎನ್ನ ದುರ್ವಿಷಯ ಕಾಮದಲ್ಲಿಟ್ಟು ನಿನ್ನಜ್ಞಾನ ಭಕುತಿ ವೈರಾಗ್ಯ ಕಾಮವನೀಯೊದಿನಕರಕುಲೋದ್ದಾಮ ಪ್ರಸನ್ವೆಂಕಟ ರಾಮ1ಮಠ್ಯತಾಳಗುರುಹಿರಿಯರಿಗಂಜದೆ ನಿಕ್ಕರ ನುಡಿಸುವ ಕ್ರೋಧಬರಿಯಹಂಕಾರದಿ ಬೆರತಘರಾಶಿಯನೆರಹಿಸಿ ನಿರಯವನುಣಿಸುವ ಕ್ರೋಧಮರುಳನ ದುರುಳನ ಮಾಡುವ ಕ್ರೋಧಗುರುಹಿರಿಯರಿಗಂಜದೆ ಉರುಕೋಪದಲೆದ್ದ ಕಾಳುರಗನ ಪೆಡೆದುಳಿದಾ ಸಿರಿಚರಣವ ಕ್ರೋಧಾಹಿಶಿರದ ಮ್ಯಾಲಿಡು ಗಡ ಗರುಡಾದಿ ಪ್ರಸನ್ವೆಂಕಟ ತಾಂಡವ ಕೃಷ್ಣ 2ರೂಪಕತಾಳಹೀನ ಧರ್ಮನ ಮಾಡಿಸುರಋಷಿಪಿತೃ ಋಣವೇನು ಕಳಿಯಲಿಲ್ಲವೆನ್ನ ಲೋಭಜೇನನೊಣನ ವೋಲು ತಾನುಣ್ಣನೊದಗಿಸಿನಾನಾಲಾಭದಲಿ ತುಂಬದು ಲೋಭಭಾಂಡದಾನವ ಬೇಡಿಳೆಯಾಜಾಂಡವನೊಡೆದಶ್ರೀನುತಾಂಘ್ರಿಯಲೊದ್ದು ಲೋಭದ ಕೋಶವನುನೀನೆ ಸೂರೆಯ ಮಾಡೊ ಪ್ರಸನ್ವೆಂಕಟ ವಾಮನ್ನ ಉದಾರಿಶಿಖಾಮಣಿಭಾಗ್ರ್ವಾ3ಪಂಚಘಾತ ಮಠ್ಯಅನ್ನಕೆ ಉಬ್ಬಿ ಯೌವನ ರೂಪಕೆ ಕೊಬ್ಬಿಧÀನ್ನಕೆ ಮೊಬ್ಬೇರಿಸಿತೆನ್ನ ಮದವುಎನ್ನ ಸವಿಸುವ ಪರಿವಾರ ಭುಜಬಲೆಂಬುನ್ನತಿಯಿಂದುನ್ಮತ್ತನ ಮಾಳ್ಪ ಮದವುದಾನವೇಂದ್ರನ ಮೌಳಿಯನ್ನು ತುಳಿದ ಪದದಿಎನ್ನ ಮದರಾಜನ ಮೆಟ್ಟಿಯಾಳೆಲೆ ದೇವನಿನ್ನ ಧ್ಯಾನವಿರತಿ ಮದದಿಂದ ಕೊಬ್ಬಿಸು ಪ್ರಸನ್ವೆಂಕಟ ಉರುಕ್ರಮ ಧನ್ಯರೊಡೆಯ 4ತ್ರಿವಿಡಿತಾಳಉತ್ತಮರ ಅವಗುಣವೆಣಿಸುತಹೊತ್ತು ಯಮಪುರಕೊಯ್ವ ಮತ್ಸರಮತ್ತೆ ಪರಸೌಖ್ಯಕ್ಕೆ ಕುದಿಕುದಿಸಿತು ಮತ್ಸರವುಚಿತ್ತಜನ ಶರ ಮತ್ಸರಿಸುತಿರೆಮೊತ್ತ ಗೋಪೇರ ಕುಚದ ಪೀಠದಿಒತ್ತಿ ಸುಖವಿತ್ತ ಪದವೆನ್ನೆದೆಲಿಡು ಪ್ರಸನ್ವೆಂಕಟ ಕೃಷ್ಣ 5ಅಟ್ಟತಾಳಇಂದುಮುಖಿಯರ ಕಂಡಂದಗೆಡಿಪ ಮೋಹಕಂದಗಳಾಡಿಸಿ ಕರುಣ ಉಕ್ಕಿಪ ಮೋಹತಂದೆ ತಾಯಿ ಬಂಧುವರ್ಗದ ಮೋಹಮುಂದಣಗತಿಗೆ ಮೂರ್ಛೆಯನಿತ್ತ ಮೋಹಕಂದರ್ಪನ ಗೆದ್ದಯೋಗಿಜನರ ಹೃದಯಾಂಧಕಾರವ ಗೆದ್ದು ತವಪಾದನಖಪೂರ್ಣಚಂದ್ರ ಚಂದ್ರಿಕೆದೋರಿ ಅಭಿಜÕನ ಮಾಡೆನ್ನ ದಯಾಸಿಂಧುಪ್ರಸನ್ನವೆಂಕಟ ಮುನಿಜನವಂದ್ಯ6ಏಕತಾಳಎನ್ನ ಕಾಮವೆಂಬ ಗಿರಿಗ್ವಜ್ರಾಂಕಿತ ಪದಎನ್ನ ಕ್ರೋಧವೆಂಬಾಹಿಗೆ ಧ್ವಜದಂಡಾನ್ವಿತ ಪದಎನ್ನ ಮದವೆಂಬ ಗಜಕಂಕುಶಾಂಕಿತ ಪದಎನ್ನ ಮತ್ಸರಾನ್ವಯಕೆ ಗಂಗಾನ್ವಿತ ಪದಎನ್ನ ಲೋಭ ಗೆದ್ದ ಮನೋಳಿಗೆ ಅಬ್ಜಯುತ ಪದಎನ್ನ ಮೋಹಧ್ವಾಂತ ಪೂರ್ಣೇಂದು ನಖದ ಪದಎನ್ನ ಮನೋರಥ ಸಿದ್ಧಿಯನು ಕರೆದೀವ ಪ್ರಸನ್ನವೆಂಕಟನ ದಿವ್ಯಪಾದಪಾಂಕಿತ ಪದಜತೆಇಂತು ಬಾಧಿಪ ಷಡ್ವರ್ಗದಂಬನೆ ಕಿತ್ತು ಸಂತತ ಶ್ರೀಚರಣ ಸ್ಮರಣೆಮುಂತಾದೌಷಧವನಿತ್ತೆನ್ನ ರಕ್ಷಿಸು ಧನ್ವಂತರಿ ಪ್ರಸನ್ನವೆಂಕಟ ನರಹರಿಯೆ
--------------
ಪ್ರಸನ್ನವೆಂಕಟದಾಸರು
ಸಂತತ ನಿಮ್ಮ ಸ್ಮರಣೆ ಉಳ್ಳವರಿಗೆಅಂತರ್ಬಾಹ್ಯಾರ್ಥವು ತೋರುವುದೊಂದರಿದೆ ಪ.ಅಂತ್ಯಜಾತಿಯಳಂಗಸಂಗದಿ ಮತಿಗೆಟ್ಟುಅಂತ್ಯವಸಾನದೊಳೊಯ್ಯ ಬಂದಅಂತಕನವರ್ಗಂಜಿಅಣುಗನಾರಾಯಣನೆಂತೆಂದಜಾಮಿಳನ ಕಾಯ್ದೆ ಕರುಣಾಬ್ಧಿ 1ಕಾಂತಾರತಿರುಗಿ ಕ್ರೀಡೆಗೆ ಜಲದೊಳು ಪೊಕ್ಕದಂತಿಅಂಘ್ರಿಯನಕ್ರನುಂಗೆಳೆಯೆಚಿಂತಿಸಿ ತುದಿಯಲ್ಲೆ ಹರಿಯೆಂದು ಕೂಗಲನಂತಾಸನವ ಬಿಟ್ಟು ಬಂದೆತ್ತಿ ಹೊರೆದೆ 2ಕಂತುವೈರಿಯ ಭಕ್ತ ಸೊಕ್ಕಿ ನೃಪರನೌಸೆಕಾಂತ ನಿಮ್ಮಡಿಗೆ ಬಿನ್ನಹ ಕಳುಹೆಕುಂತಿಯ ತನುಜನಿಂದವನ ಕೊಲ್ಲಿಸಿ ಭೂಕಾಂತರಿಗೊಲಿದ್ಯೊ ಪ್ರಸನ್ನವೆಂಕಟಕೃಷ್ಣ 3
--------------
ಪ್ರಸನ್ನವೆಂಕಟದಾಸರು
ಸಮಸ್ತ ನಾಮಮಣಿಗಣ ಷಟ್ಚರಣ ಪದ್ಯಮಾಲಾಶ್ರೀ ರಮಾವರ ಶ್ರುತಿವಿನುತ ಸುಖಸಾರಗೃಹಕೆ ಸರ್ವೇಶ ಸುರದ್ರುಮವಾರಿಜಾಕ್ಷ ಮುಕುಂದಮುರಹರನಾರಸಿಂಹ ನಮೋಪ.ಗರುಡಗಮನ ಗುಡಾಳಕಾಖಿಳಶರಣಜನಸುರಧೇನುಸುರಮಣಿಕರುಣಸಾಗರ ಕಾಮಿತಾರ್ಥದದುರಿತಗಜಸಿಂಹಾಸರಸಿಜಾಸನಸೇವ್ಯಮುಕ್ತಾಭರಣನಮಿತ ಸುರೇಶ ನಿಶಾಚರಹರಣಶೀಲ ಸದಾಗಮ ಜೆÕೀಯಾದಿ ಪುರುಷ ನಮೋ 1ವಿಶ್ವಗರ್ಭ ವಿಚಿತ್ರಚರಿತ ಶುಭಾಶ್ವವದನ ವಿಶಾಲವಿಕ್ರಮಶಶ್ವದೇಕ ಸುವ್ಯಾಪ್ತ ಜ್ಞಾನಾನಂದ ಬಲಪೂರ್ಣನಶ್ವರೇಶ್ವರ ಸವಿತರೇಶ್ವರಈಶ್ವರೇಶ್ವರವೇದಗೋಚರಸುಸ್ವಭಾವ ನವಾಂಬುದಾಂಗ ಕೃಪಾಳು ಕೃಷ್ಣ ನಮೋ 2ಜನಪಮುನಿನುತ ತಾಟಕಾಂತಕಜನಕಜಾವರ ಲಕ್ಷ್ಮಣಾಗ್ರಜಜನಕ ವಾಗ್ವರ ಇಂದ್ರಪೂಜಿತ ಸೂರ್ಯಸುತಪಾಲದಿನಪ ಕುಲಪತಿ ದೀನವತ್ಸಲವನಧಿಬಂಧ ವಿಹಾರದಶಶಿರಹನನಕಾರಣ ಭರತಪಾಲಕ ರಾಮರಾಜ ನಮೋ3ಪೂತನಾಂತಕ ಶಕಟಮಾರಕವಾತಚಕ್ರಾನಿಷ್ಟಹರ ನವನೀತ ಪ್ರಿಯ ದಧಿಸಾರ ಭೋಜಕ ಗೋಪವಧುಲೋಲಶೀತಕರ ಕುಲತಿಲಕ ಶ್ರುತಿವಿಖ್ಯಾತಕರಿಚಾಣೂರ ಬಕಹರ&ಟsquo;ಮಾತುಳಾಂತಕ ಪಾರ್ಥಸ್ಥಾಪಕ ಕೌರವಾಂತ ನಮೋ 4ಚಕ್ರ ಶಂಖ ಗದಾಬ್ಜಧರ ತ್ರಿವಿಕ್ರಮಾಚ್ಯುತ ವರಹ ವಾಮನನಕ್ರಶಿಕ್ಷಕ ನಾಗರಕ್ಷಕ ನಿತ್ಯತೃಪ್ತ ಹರೇಶಕ್ರಗಿರಿಶಾರ್ಚಿತ ಪದಾಬ್ಜ ತ್ರಿವಕ್ರವಧು ಸೌಂದರ್ಯದಾಯಕಅಕ್ರುರಾಭೀಷ್ಟದ ವಿದುರ ಉದ್ಧವವರೇಣ್ಯ ನಮೋಮ 5ಮಧುಮಥನ ಕೈಟಭವಿದಾರಣಕುಧರವರ ಆನಂತವರ್ಣಾಭಿಧ ಜನಾರ್ದನ ಸಾಮಗಾಯನ ವೇದ್ಯಅನವದ್ಯವಿಧಿನಿಷೇಧಾಲಿಪ್ತ ಸತತ ವಿಬುಧನಿಯಾಮಕ ನಿರ್ಭಯಾತ್ಮ ತ್ರಿವಿಧ ಜನಾಶ್ರಯ ಕುಶಶಯನ ಶಾರಙ್ಗಪಾಣಿ ನಮೋ 6ವಾಸುದೇವಕುಭಾರವಾಹಕವಾಸವೇಯ ಕಪಿಲ ಋಷಭಮಹಿದಾಸ ಯಜ್ಞಾದತ್ತ ನಾರಾಯಣ ನಿರಾಮಯ ಭೋಶ್ರೀಸನಾತನ ಸಕಲಭುವನ ನಿವಾಸ ಸಂಕರುಷಣ ಸದಾಸ್ಮಿತಹಾಸ ದಿವಾಕರೇಕ್ಷಣಸ್ವಪ್ರಕಾಶನಮೋ7ಶೇಷಶಯನ ಜಗಚ್ಚರಾಚರಪೋಷಕಾಧಾರಕ ಸ್ವಜನ ಹೃದ್ಭೂಷಣಾಪರಿಚ್ಛಿನ್ನ ಅಪ್ರಮೇಯಾದಿ ಶ್ರುತಿವಕ್ತಘೋಷ ವರ್ಣ ಸುಪೂರ್ಣ ವಾಚ್ಯಾಶೇಷದೋಷವಿದೂರ ಖಳಜನಭೀಷಣಾಪ್ರಾಕೃತ ಅನುಪಮ ಪರಮಪುರುಷ ನಮೋ 8ಇಹದ್ಭಯ ಕ್ಷಯಕರ ಗುಣತ್ರಯರಹಿತ ವೃದ್ಧಿ ಹ್ರಾಸವರ್ಜಿತವಿಹಗತೈಜಸಪ್ರಾಜÕವಿಶ್ವಾವಸ್ಥತ್ರಯದಾತಾಅಹಿತನಾಶ ಪರೇಶ ಗಹನಾತ್ಗಹನಅವ್ಯಯಅತಿಶಯಾದ್ಭುತಬಹುಳ ಜೀವಾಂತರಿಯ ಅಂತರ್ಬಹಿಃಸ್ವತಂತ್ರ ನಮೋ 9ಪೂರ್ಣ ಕಾಮಾಂಬೋಧಿ ಶ್ರೀವಟಪರ್ಣತಲ್ಪ ಪರಾತ್ಪರಾಪ್ರತಿವರ್ಣ ನಿಗಮಾಗಮ ಅತಕ್ರ್ಯಾನಂತ ಸದ್ಗುಣ ಧೇನಿರ್ಣಯಾತೀತಾನಿರುದ್ದ ಸುಖಾರ್ಣವಾಚ್ಯುತ ಸೌಖ್ಯಕರ ನವಕೀರ್ಣ ವಿಗ್ರಹಪದ್ಮನಾಭಉದಾರಲೀಲ ನಮೋ10ಮೋಕ್ಷವಲ್ಲಭ ಭವಮಲಘ್ನ ಮುಮುಕ್ಷುವರದ ಮುನೀಂದ್ರ ಸುಮನೋಧ್ಯಕ್ಷ ದಾಮೋದರ ದಯಾಪರ ಜಿತದಿತಿಜ ಸಮರಭಿಕ್ಷುಕಾನ್ವಯಪ್ರಿಯ ಸಮಾಧಿಕಪಕ್ಷ ಸೃಷ್ಟ್ಯಾದ್ಯಷ್ಟ ಕಾರಣದಕ್ಷಾಧ್ವರಹರ ಬ್ರಹ್ಮ ನಿವಹಾದ್ಭಿನ್ನರೂಪ ನಮೋ 11ಕಂಠಕೌಸ್ತುಭಭೂಷಣಾಂಶಾಕುಂಠಿತಾತ್ಮೈಶ್ವರ್ಯ ಅಶುಭವಿಲುಂಠಕಾಧೋಕ್ಷಜ ಉಪೇಂದ್ರನೆ ಶ್ರೀಶ ಅನಿರುದ್ಧಕುಂಠಿತ ಜನನ ಮರಣ ಶಿರಿ ವೈಕುಂಠಪಾಬ್ಜಾಮ್ಲಾನ ತುಲಸೀಕಂಠಮಾಲಾನ್ವಿತ ಸುಗಂಧ ಜ್ಞಾನಕೋಶ ನಮೋ 12ನಿರ್ಜರೇಷ್ಟದ ನೀತಫಲದನೆದುರ್ಜನಾರ್ದಕ ದೂಷಣಾಂತಕನಿರ್ಜಿತಾಖಿಳ ಸುಜನಪಾಲಕ ನಿಶಾಚರೌಘಹರವರ್ಜಿತಕಲುಷನಿತ್ಯವಿಬುಧರಊರ್ಜಿತರ ಚಾರಿತ್ರವಿಮಲ ಗುಣಾರ್ಜಿತೋದಧಿ ವಿಪದಧ್ವಜ ವೈರಾಗ್ಯ ಪುರುಷ ನಮೋ 13ಅಪುಶಯನ ಆದ್ಯಾಪ್ತ ಇಷ್ಟಜನ ಪರಗತಿಪ್ರದ ಈಶ ವರನುತಉಪಮವಿರಹಿತ ಊಧ್ರ್ವಗಪ್ರಿಯ ಋಜು ಭೃನ್ರೂಪಧರಲುಪತ ದುಷ್ಕøತ ಲೋಕ ಮೋದಕಚಪಲ ಏಕಾನೇಕ ವಿಗ್ರಹಸ್ವಪರ ಐಶ್ವರ್ಯೋಜ ಔದಾರ್ಯ ಸಹಸ್ರ ನಮೋ 14ಕರುಣನಿಧಿ ಖಳಹರ ಗರಾದಪಘರಘರಧಿ ಸಮ್ಯಙ್ಞ್ನಮಕ ಸುಚರಿತಪ್ರಾಕೃತಛವಿರಹಿತ ಜನಪಾಲಝಷಋಷಭಾಞುರು ಜಗತ್ಪರ್ಯಟನಕಮಠಡಮರ ಧರೇಢ್ಯನೆ ಗೂಢ ಗುಣಚಿತ್ಪರಕುಧರಧಿಕೋಚ್ಚರ ಜಾರಗ ಧನುಹನ್ಧನದನಮೋ15ನರಸಖಾಮಿತಪಶುಪಫಣಿಮದಹರ ಬಲಾನುಜಭರಿತವಿಕ್ರಮಮರುತ ಕಾಂಗಯರುಘ್ನ ನೆರಲೇಶ್ವಶುರ ಲಕ್ಷ್ಮೀಶಾವರದರಾಟ್ ಶಶಿವದನ ಷಕೃಸನಿರುತ ಸರ್ವಭುಕ್ ಯಜÕ ಹವ್ಯೇಶ್ವರ ಸ್ವತೃಪ್ತ ಸ್ವಪೂರ್ಣಲಕ್ಷ್ಮೀಧರ ಯಜ್ಞಾಂಗ ನಮೋ 16ಕಪಟನಾಟಕಕಾಲಕಿತವಭಯಪರಿಹರ ಕೀಚಕರಿಪುಪ್ರಿಯಕುಪುರುಷಾಂತಕ ಕೂಬಕೇಶನೆ ಕೈವಲ್ಯಕೀಶವಿಪುಲಕೋಶನೆ ಕೌಶಿಕಮುನಿ ಮಖ ಪರಿಪೋಷಕಕಂಬುಕಂಧರತÀಪನ ಕೋಟಿಪ್ರಕಾಶ ಕಶ್ಯಪಸುತ ಸುರೇಂದ್ರ ನಮೋ 17ಖರವಿದಾರಕ ಖಾದಿ ಪಂಚಕಭರಿತನಖಿಳ ವ್ರಜಸಖೀಮನೋಹರ ಸುಖುರಪುಟ ಶೋಭಿತ ಖಡ್ಗ ಖೂಚ್ರ್ಛ ಇಷುಪಾಣಿಸುರಸಖೇಳನ ಪರಸುಖೈಕ ಶರಿರ ವಿಶಿಷ್ಟ ಸುಖೋದಯಾಂಕುರವರಸುಖೌಘಾಖಂಡಪರಶೋ ದುಃಖಹರಣ ನಮೋ18ಗಗನನಾಭಾಗಾಧ ಚರಿತ ಗಿರಿಗಣಸೇವ್ಯ ಸುಗೀತಪ್ರಿಯ ಗುಪ್ತಗುಣ ಗೂಢಧಿ ಗೇಹ್ಯತ್ರಯಯುತ ಗೈದಿಹನೆ ಗೋಪ್ತಾಸ್ವಗತ ಗೌರವ ಗಂವ್ಹರಾಂಕಿತಸುಗಃನೋತ್ತರ ಶುಭಸುಖಾಕರಸುಗಮಸೂಕ್ಷ್ಮ್ಮ ಸುದುರ್ಗಮಾಲಯ ವಿಜಿತರೋಷ ನಮೋ19ಘಟಶ್ರವಣ ಘಾತಕ ಲಘಿಮಯುಕ್ಚಟುಲಗಾತ್ರಾ ಘೀಜನಹರಣಪಟು ರಘುದ್ವಹ ಪಿಶಿತಭೋಜಕ ಘೂಕಖದ್ಯೋತಕಠಿಣ ಘೇರಟಮಾನಖಳಸಂಕಟ ನಿವಾರಕಘೋರಯೋಧಕನಟಕಾಘೌಘ ವಿದಾರ ಘಂಟಾಚಾಪ ದೀರ್ಘ ನಮೋ 20ಚಕ್ಷುಷಾಲಯ ಚಾರುಗುಣಚಿತ್ಕುಕ್ಷ್ಷೆ ಚೀರದ್ವಯ ಚುತೇತರರಕ್ಷ ಚೂಡಾಚೇಷ್ಟ ಚೈದ್ಯಹರಾದ್ಯ ಚೋರಾರೇರಿಕ್ಷಜಾತಾವರ ಚೌರಾಶಿತಿಲಕ್ಷ ಪ್ರತಿಮಾದ್ಯಕ್ಷಚಂದನವಕ್ಷ ವನಸ್ರಗ್ಧರ ಋಚಃಸ್ವನ ಪ್ರೀಯಪುರುಷ ನಮೋ 21ಛತ್ರಯುಕ್ ಛಾಯಘ್ನ ಛಿಧ್ವರಕ್ಷುತೃಷಾರ್ದಕ ಛೇದವರ್ಜಿತ* * * ಸ್ವೇಚ್ಚೈಕಚರ ಇಚ್ಛೋದ್ರೇಕ ಮಾಂದ್ಯಹರಶತ್ರುಭಿತ್ಸಚ್ಛೌರ್ಯ ಭೂಷಿತಸತ್ರಭುಕ ಛಂದೋಮಯಾತ್ಮಕಪುತ್ರ ಪೌತ್ರ ಪ್ರಪೌತ್ರ ಶೋಭಿತ ಸ್ವಚ್ಛಃ ವರ್ಣ ನಮೋ 22ಜಯತರಾನನ ಜಾಡ್ಯಹರಜಿತಭಯನಿಚಯ ಜೀವೌಘರಕ್ಷಯಜುರ್ಯಜಾಸುರ ಜೂಕನುತ ಸುರಜೇಷ್ಠ ಜೈನಧಿಹನ್ಲಯ ಜಲಾಶ್ರಯ ಜೋತಿರ್ಮಯ ತನುವ್ಯಯ ವ್ರಜೌಕಸ ವಂದ್ಯ ಜಂಬುನಿಲಯ ಕುವಲಯನಯನ ಅಜಸ್ರಾನಂದ ಬಲಗ ನಮೋ 23ಝಡಿತಿಚರ ಝಂಝಾಮರುಚ್ಚರಝಡುಪಚರ ಝಿಲ್ಲಿಕ ವನೇಚರಜಡಧಿಚರ ಝೀರಿತ ಸುರ ಝುಂಟಾವಲಯ ಝೂಣಿಚರ ?ಒಡನೆ ಝೇಂಕರಿಸುತಲಿ ಝೈಡಿಯುದೃಢದಿ ಝೋಂಡಿಯೋಳ್ಚ್ಚರಿಸಿ ಝೌಂಕರಿಸ್ಯೊಡಲಿನೊಳು ಝಂಕಾರಪೂರ್ಣನೆ ಝಷಪತಿಯೆ ನಮೋ 24ಪಟಲಹೈಮಕಟಾಹಭಂಜಕನಿಟಿಲದೃಕ್ ಟೀಕಾರ್ಥಸುಪ್ರಿಯಕಟುಮತಿಘ್ನ ಭವೇಡ್ಯಾ ಟಂಕಾನ್ವಿತ ಕರಾಬ್ಜೇಕಾಜಠರಜಡಹ ಕುಠಾರಧರಸತ್ಕಠಿಣಕರ ಸುಕಠೋರ ಯೋಧ ಕಮಠವಿಕಾರ ಶಠೌಘಸಂಹರ ನೃಹರೆ ಭೃಗುಜ ನಮೋ 25ಕುಂಡಲೀಶ ಷಡಾಸ್ಯಸನ್ನುತಪಂಡಿತಾರ್ಚಿತ ಪಾಂಡುರಾಂಬರಮಂಡಲೇಶ ಬಿಡೌಜನುತ ನೃವಿಡಂಬನ ಚರಿತ್ರಪಂಢರಾಪುರ ರಾಜವಿಠಲಾಖಂಡಮತಿ ಪಾಖಂಡ ದೂಷಕಖಂಡಮರಕ ಪ್ರಭುಘ್ನಮುನಿ ಪುಂಡರೀಕವರದ ನಮೋ 26ಪ್ರಣತಪ್ರಿಯ ಪ್ರಣಾಯ್ಯಪ್ರಿಯ ವಿಪಫಣಿಪಪ್ರಿಯ ವಾಣೀಧವಪ್ರಿಯಅಣುಮಹದ್ರೇಣೂಸ್ಥಪ್ರಿಯ ಸುಗಣೇಶ ಪ್ರಿಯಕರನೇಕ್ಷಣ ಕ್ಷಣೈಕ್ಯ ಸುವ್ಯಕ್ತಧಾರಣಗುಣಗಣೋತ್ಪಾಟಣ ರಣೌಘಾಂಗಣ ಭಯೋಚ್ಚಾಟಣ ಗುಣಾಂಕ ಶರಣ್ಯಸುಖದ ನಮೋ 27ತÀಥ್ಯವ್ರತ ಸತ್ತಾತ್ವಿಕಾಗಮಕಥ್ಯ ತಿಲಮಾತ್ರಾರ್ಪಕೇಷ್ಟದಮಿಥ್ಯದೂಷಕ ತೀರ್ಥಶ್ರವ ತುರ್ಯಾತ್ಮಾತೂರ್ಣಪ್ರಿಯನಿತ್ಯತೇಜಸ ತೈತ್ತಿರಿಯಶ್ರುತಿಸ್ತುತ್ಯ ತೋಯಾಯನ ಧೃತೌಷಧಪಥ್ಯ ತಾಂತ್ರಿಕಪರಮಚೇತಃಪರಮಕಾಲ ನಮೋ28ಪ್ರಥಮಪುರುಷ ಪೃಥಾತ್ಮಜಾನ್ವಗಮಥಿತವೀರ್ಯ ರಥೀಂದ್ರ ಪರಿಚರಪೃಥಿವಿ ಪೂಜಿತ ಸ್ಥೂಲಕೃತ್ಯಥೇಚ್ಛ ಸ್ಥೈರ್ಯಮತೇಪಥಿಕಸದನ ಯಥೋಕ್ತ ಫಲದ ವಿಪಥರಥೌಘಪ ಸುರಥಚರಣ ಕುಪಥಗÀ ದೂರಕ ಬ್ರಹ್ಮಸ್ತಂಭಾಂತಸ್ಥ ಸ್ವಸ್ಥಃ ನಮೋ 29ದಹರ ವ್ಯೋಮಗ ದಾತೃ ದಾಂತ ಹೃದ್ಗುಹಸದನ ಕರ್ತ ತುಹಿನಬಿಂಬಗಅಹಿಪದೀಪ್ತ ಮಯೂಖ ದುರ್ಗಾವ್ಯಾಕೃತಾಂಬರಗಾಅಹಿತದೂಷಕ ದೇವ ದೈತ್ಯರದೋಹನ ಕಾರ್ಯಗ ದೌತ್ಯಕರ್ಮಗದ್ರುಹಿಣದೇಹ್ಯಗ ದಂಡಕಾರಕ ದರ್ಪಕಸಹ ನಮೋ 30ಧÀರ್ಮನಿಚಯಪ ಧಾತು ಸಮುಹಪಕರ್ಮಧಿಷÀಣಪ ಧೀರಪ್ರಜÕಪನರ್ಮವಾಗ್ಮಿಪ ಧುನಿಕದಂಬಪ ಧೂರ್ಜಟಾಂಕಿತಪಚÀರ್ಮಖಡ್ಗಪಧೇನುವಿಪ್ರಪಮರ್ಮ ಧೈರ್ಯಾಂಕಿತನಧೋಕ್ಷಜನಿರ್ಮಲಾತ್ಮಕ ಧೌಮ್ಯಗರ್ಗಪ ಧನ್ಯಧನಪ ನಮೋ 31ನಗವಿಧೃತಕರ ನಾಗಗರ್ವಹನ್ನಿಗಮರಿಪುನಾಶಕ ನೀತಪ್ರಭುಸುಗುಣಸೇವ್ಯ ನುತಜನಮಂದಾರ ನೂತನಾಬ್ಜಾಂಘ್ರೀಯುಗ ಯುಗಾಂತಕ ನೇಮನೈಷ್ಟಿಕಸುಗುಣನೋದಧಿ ನೌಗ ನಂದಕವಿಗತ ಸ್ನೇಹವಿನಷ್ಟ ಜಗದೋದ್ಧರಣಶೀಲ ನಮೋ 32ಪವನ ಮತಿ ಪರಿಪಾಕ ಬಿಂಬಸ್ತವನನಿರತ ಪಿನಾಕಿಮೋಹನಸುವಧು ಪೀಯೂಷಧರ ಪುಷ್ಪವಿಹಾಸ ಪೂರ್ಣಪ್ರಭಾಕವಿವರದ ಪೇಶಲ ಜಟಿಲ ಪೈಲವಿನುತ ಶುಕವಿಪೋಷ ಪೌರಾಣವಿರಚಕ ಪಂಚನಿಶಿ ಭಾರತ ಸೂತ್ರಕರ್ತ ನಮೋ 33ಫಲಿತ ಸದ್ರಸ ಫಾಲಲೇಖಕಲಲಿತ ಸ್ಫೀತಾತ್ಮಕ ಸ್ಫುಟಥಭೃಜ್ವಲ ಮರುತ ಪಯಫೇನ ಭುಕ್ಷತ ಸ್ಫೋಟಾತಂಕಹಾಬಲಬಲದ ಬಾಣಘ್ನ ಬಿಲಗಿರಿನಿಲಯಮುನಿ ಹೃನ್ನಿಲಯಬುಧಮಂಡಲ ವಿರಾಜಿತ ಬೋಧಯುತಕರ ಬಂಧಮೋಕ್ಷ ನಮೋ 34ಭದ್ರಪದ ಭಾವಕ ಭಿಷಗ್ವರರುದ್ರಭೀಕರ ಭುಕ್ತಿದಾ ದಾರಿದ್ರ್ಯದೂರಕ ಭೂರಿಭೂತಿದ ಭೇದವಾದೀಶಾಹೃದ್ರುಜಹನ್ ಭೈಷ್ಮೀಶ ಭೋಜೇಶಾದ್ರಿಕುಲಿಶಕುಶಸ್ಥಳೋಕ ಸುಪದ್ರವಾರ್ದಕ ಭೌಮವರಪ್ರದ ಭಂಗರಹಿತ ನಮೋ 35ಮಕರಧ್ವಜಜಿತ ಮಾಸಖಾಮಿತಭುಕುಲಜೀವನ ಮೀನ ಮುರಲಿಧರಕರ ಮೂಲಕವೀಂದ್ರ ಮೇಧ್ಯಚರಿತ್ರ ಮೈಥುಳಪಾಸುಕರಮೋಹಕ ಮೌನಿಪೂಜಕಚಕಿತಕರ ದನುಜೇಂದ್ರ ಕಷಣಾಂಬಕ ಬಕಾಂತಕ ಮಂಜುಹಾಸ ಮಹಾಧಿರಾಜ ನಮೋ 36ಯಜÕ ಭಿಕ್ಷುಕ ಯಾಜÕರತ ಯಿಂದ್ರಾಜÕ ದೂಷಕ ಯೀಷಣಾರ್ದಕಸುಜÕರಾಡ್ಯುಗ ಯೂಗಸಂಭವ ಯೂಥಪೋತ್ತಂಸಅಜÕಭಿದ್ಯೇಕೇಶ ಮೌನಿಗಣಜÕ ಯೌವನ ಪುಂಸಯಂತ್ರಾರ್ಥಜÕ ಪೋಷಕ ಕಿಂಕರೋಧೃತ ಕಾಮುಕಾಷ್ಟ ನಮೋ 37ರಸಿಕರಾಜಪ ರಾಜ್ಯಚಕ್ರಪವಸುಪ ವೃಕ್ಷಪ ಕುಲಪರೀಕ್ಷಿಪಪ್ರಸರಪಾಂಥಪ ರುಚಿಗುಣೌಘಪರೂಪಬಹುರೂಪಾಅಸುಪ ರೇತೋದ್ಭವಪ ರೈಗಪರಸಪ ರೋಷಪ ರೌಪ್ಯನಗಪಪಕುಸುಮಬಾಣಪ ರಂಗಕ್ಷೇತ್ರಪ ರಹಸ್ಯಪಾಲ ನಮೋ 38ಲವಜನಕ ಲಾಘವ ಕರಾಬ್ಜ ಲಿಪ್ತವಿಮಲ ಶ್ರೀ ಚಂದನಾಂಗ ಸುಕವಿನಚರಲುಬ್ಧ ವಧು ಪೂಜ್ಯನುಲೂಖ ಲೋಧಕನೇಭವಜಪಾಕ್ಷರ ಲೇಶ ಮೋಹ ಮದವಿರಹಿತ ಲೋಭಘ್ನ ಲೌಕಿಕಪ್ರವಹೇತರ ಲಂಕೌಕಸಾರ್ದಕ ಲಬ್ಧತುಷ್ಟನಮೋ39ವಕ್ತøವರ ವಾಲ್ಮೀಕಿ ಕೃತೀಶ ವಿವಿಕ್ತಮತಿ ಪದವೀಶಗತಿದನೆವುಕ್ತ ಸುಚರಿತ ಊಧ್ರ್ವಪಟ ಪ್ರಸ್ಥಾಪ ವೇದ್ಯ ನಮೋರಿಕ್ತಭಯ ವೈದೇಹಿ ಮನೋಹರತ್ಯಕ್ತಪ್ರಾಕೃತವೋಂ ವೌಷಡಾದ್ಯುಕ್ತಿವಾಚಕ ವಂದ್ಯವಂದಿತ ವಹಕ ವಾಹಕ ನಮೋ 40ಶಮಯುತಾಗ್ರಣಿ ಶಾಮಶಿವಕರಗಮನಶೀಘ್ರಗ ಶುದ್ಧ ವಿದ್ಯೋದ್ಯಮ ಶುಚಿವ್ರತ ಶೂರ್ಪನಖಿ ಮದಹರ್ತ ಶೇಷಸಹಯಮ ದಯಾಂಬುಧೆ ಶೈಲಗ್ರಹ ಸಂಯಮಿ ಗಣಾರ್ಥಿತ ಶೋಕತಾಪ ಪ್ರಶಮನ ಶೌಚಾಚಾರಯುತ ಪ್ರಭೊ ಶಾಂತ ಶಸ್ತ ನಮೋ 41ಷಡ್ವಿಭೂತೆ ನಿಷಾದ ಭಯಹರಷಡ್ವಧೂಧವ ಋಷಿವಧೂಸಖಶಾಡ್ವಲಚರ ಇಷೀಕ ಇಷುಧರ ಕಾಂಡ ಸುವಿಹಾರಾಷಡ್ವಿಕಾರಾತೀತ ವಿಜಿತಾನಡ್ವಷೇಚಿತ ಸೌರಭೇಯ ಭೂವಿಡ್ವರಘ್ನ ವೃಕ್ಷೌಘಘ್ನ ಸ್ವರ್ಣ ನಿಷಂಗಚಾಪನಮೋ42ಸರಸಿಜಾನನ ಸಾಧ್ಯ ಸಿದ್ಧನಿಕರಕರಾರ್ಚಕ ಸೀಕ್ಷರಕ್ಷಕಸುರಹೃನ್ಮಂದಿರಸೂರಿಹೃದ್ಗುಹಸೇವ್ಯ ಸುರಮೌಳಿನಿರುಜ ಸೈಂಧವಕಾಸ್ತø ಸೋಮಾಭರಣತೋಷಕ ಸೌಮ್ಯ ರತ್ನಾಕರನಿರಂಜನಸಂಜಯೋತ್ಸವ ಸಹಜಶೂರ ನಮೋ43ಹಲಿ ಸಹಗ ಹಾರ್ದಿಕ ಮನೋಗತಫಲ ಹಿರಣ್ಮಯವಸನ ಹೀರಾವಲಯ ಹುತ ಭುಗ್ಬಲದ ಹೂಣಪವಿತ್ರ ಹೇತ್ವರ್ಥಜಲಧಿಪುರಪತೆ ಹೈಮರಾಶಿದಬಲಿದ ಹೋಮದ ಹೋತ್ರಭಾಗದಸುಲಲಿತೋದನ ಪರಮಹಂಸ ಸತ್ಕುಲ ಹರುಷ ನಮೋ 44ಪಳಲವಾಂತ ಕಳಾಢ್ಯ ಯಜ್ಞಾವಳಿ ಕೃತಾದರ ನಿವ್ರ್ಯಳೀಕ ನಿಖಿಳ ಕೃಪಾಳುವರೇಣ್ಯಜೀವ ಜಿಳೂಕ( ಜಾಳಕ?) ತೃಪ್ತಿಕರಸ್ಥಳಕಳೇವರಭರಿತ ಬ್ರಹ್ಮ ವಿಪುಳ ಕಳೈಕ್ಯ ತಳೋಧ್ರ್ವಮದ ವಿಹ್ವಳ ಬಳೌಘನೆ ನಿಷ್ಕಳಂಕ ಕಳಾಪ್ರವೀಣ ನಮೋ 45ಕ್ಷತರಹಿತ ಕ್ಷಾರಾಬ್ಧಿ ಬಂಧಕಕ್ಷಿತಿಭರಹರ ಕ್ಷೀರನಿಧಿಗ್ರಹಅತುಳಗ್ರಹ ಕ್ಷುದ್ರಾರೆ ಕ್ಷೂರಾಯುಧನೆ ಕ್ಷೇಮೇಶಗತಿಗತೇ ದೀಕ್ಷೈಕ್ಯಕ್ಷೋಣಿಪತಿಪತೇ ಕ್ಷೌಮರಥ ಕ್ಷಾಂತಿಭರಿತ ನೃಗೋದ್ಧರ ಕ್ಷತ್ರವಲ್ಲಭ ಕ್ಷತ್ರವೇಷ ನಮೋ 46ಏಕರಾಡ್ ವಿಶ್ವೇಕಕಾರಕಏಕವ್ಯಾಪಕ ಏಕಸ್ಥಾಪಕಏಕಭೋಜಕ ಏಕಯಾಜಕ ಏಕತೋಕಾತ್ಮಏಕಸೃಜ ಭುವನೈಕವರ್ಧಕಏಕಮಾರಕ ಏಕತಾರಕಏಕಯಾಚಕ ಏಕಸೂಚಕ ಏಕಪತ್ರನಮೋ 47ದ್ವಯಕ್ರಿಯೇಶ್ವರ ದ್ವಯಪಥೇಶ್ವರದ್ವಯಸುವಿಸ್ತರ ದ್ವಯವಿಗೋಚರದ್ವಯನಿವಾರಕ ದ್ವಯಪ್ರದಾಯಕ ದ್ವಯಸಮಯಪೂರ್ಣದ್ವಯ ಪ್ರವಾಹಕ ದ್ವಯನಿಯಾಮಕದ್ವ್ವಯನಿರಂತರ ದ್ವಯದ್ವಯೇತರದ್ವಯಸುಬೋಧಕ ದ್ವಯಪ್ರಸ್ಥಾಪಕ ದ್ವಯಭಯಘ್ನ ನಮೋ48ತ್ರಯ ಸುವಿಗ್ರಹ ತ್ರಿಪದಕಾಲತ್ರಯಗ ತ್ರಿದಿವಪ ತ್ರಿಪಥಗಪಿತ ತ್ರಿನಯನಾರಿಹನ್ ತ್ರಿಪುರಮೋಹಕ ತ್ರಯ ಸ್ತ್ರಿಂಶತ್ ಸುರಪತ್ರಿಯುಗುದಿತ ತ್ರಿಗುಣೇಶ ಸಾಗರತ್ರಯಪ ಪಂಚಕತ್ರಿವಿಧಭಾಷ್ಯನಿಚಯಕಚಕ ತ್ರಿದಶಾರ್ಚ ತ್ರಿಜಗದ್ಧರಣಮಾರ್ಗನಮೋ49ಚತುರ್ವಿಧಾತ್ಮಾ ಚತುರ್ಭುಜಾಂಚಿತಚತುರ್ಮುಖಾಧಿಪ ಚತುರ್ವಿಧಾರ್ಥದಚತುರ್ವರ್ಣಾಶ್ರಯ ಚತುರ್ಮುಕ್ತಿ ಚತುಷ್ಟಯೇಶ್ವರ ತೇಚತುಃಸಮುದ್ರಗ ಚತುರತರಮತಿಚತುರ್ವಿಧಾಯಥ ಚತುರ್ಬಲಾಂಬುಧಿಚತುರವೇದಾರ್ಥಿತಚರಣ ಚತುಶ್ಯಾಸ್ತ್ತ್ರಪೂಜ್ಯನಮೋ 50ಪಂಚಮುಖಮುಖ ಪಂಚಮುಖನುತಪಂಚಜನರಿಪು ಪಂಚಮೋಕ್ಷದಪಂಚಪಾಂಡವಪ್ರಾಣ ವರಪಂಚಾಕೃತಾವ್ರಾತಪಂಚಶರಪಿತ ಪಂಚವ್ಯೂಹ ಸುಪಂಚಭಿದಮತ ಪಂಚಪರ್ವಹಪಂಚಕಾಲಜÕ್ಯಜÕ ಸಂಭೃತಪಂಚಬಾಣನಮೋ51ಷಟ್ಸಹೋದರ ಷಟ್ಚರಣಚರಷಟ್ಸಪತ್ನಹನ್ ಷಡೂರ್ಮಿಹರಷಟ್‍ಶಕ್ತ್ಯಾತ್ಮಕ ಷಡ್ಗುಣೋತ್ತರ ಷಡೃತುಪ್ರವಹಷಟ್ಕರಾಭಿದ ಷಟ್ಪರೋಕ್ಷದಷಟ್ಕ್ಕ್ರಯುಗ ಷಟ್ಶಾಸ್ತ್ರಪ್ರಿಯತಮ ಷಟ್ಕಸಹಗÀ ನಮೋ 52------------------------- 53ಅಷ್ಟಕಾರಣ ಶ್ಲಿಷ್ಟ ಮಹಿಷಿಯರಷ್ಟಕಾಶ್ರಯ ಅಷ್ಟಮದಹರಅಷ್ಟಕಾಷ್ಟಿಗ ಅಷ್ಟಭೂತಿದ ವ್ಯಷ್ಟಸೃತ್ಯಹಅಷ್ಟದಂಶಕ್ಷೋಣಿಪ್ರಜಹರಅಷ್ಟನಾಗಪ ಅಷ್ಟಭುಜಧರಅಷ್ಟ ಆಯುಧ ಸಂಭೃತಾಷ್ಟೌಷಧ ತ್ರಿಭಂಗ ನಮೋ 54ನವಸುರತ್ನಾಭರಣಯುಕ್ ತ್ರಿರ್ನವಕಪ್ರಿಯ ನವದ್ವಾರಪುರ ಪ್ರಭೊನವಶಯುಕ್ತ್ಯಾತ್ಮಕ ನವಗ್ರಹ ನವದೃಯಾಗದ್ರುಣನವರಸೇಶ್ವರ ನವಪ್ರಜೇಶಪನವನಿಧೀಶ ನವಾರ್ಥದೆ ದಾನವರಿಪುವೆ ನವಕೋಟ್ಯಮರರಿಂ ನಮಿತಚರಣ ನಮೋ 55ದಶಶತಾನನ ದಶಶತಾಂಬಕದಶಶತ ಸುತೋರ್ದಂಡ ದರಕಳದಶದಶಾಭಿದ ದಶಶತಾಭಿದ ದಶಖಗಾಮರಪದಶವರೂಥಜ ದಶಮುಖಘ್ನ ತ್ರಿದಶ ಭಯಾಂತಕ ದಶಕಕುಭ ಹಸತ್ದಶನ ದಶಮತಿಭಾಷ್ಯ ಋತದಶನೀಶದ್ರಕ್ಷ ನಮೋ 56ಶತಸುಖಾರ್ಥಿ ಶತಾಬ್ದಶಯನ ಸುಶತಮಖಾರ್ಚಿತ ಶತಗೋಪಿಪತೆಶತಸೋಮನೃಪಶತಕ ಸ್ಥಾಪಕ ಶತಶತಾಂಶುಧರಾಶತಕುರುಜಹನ್ ಶತಕುಲೋದ್ಧರಶತಾಯುಃಪ್ರದ ಶತಾಪರಾಧಿಪಶತಸಹಸ್ರಾರ್ಕಭ ಶತಪತ್ರಾಕ್ಷ ಸುಖದ ನಮೋ 57ಕ್ಷಿತಿಪ್ಲವೋದ್ಧರಕ್ಷಿತಿಭೃತೋದ್ಧರಕ್ಷಿತಿತಳೋದ್ಧರಕ್ಷಿತಿಚಲನಕರಕ್ಷಿತಿತ್ರಿಪದಧರ ಕ್ಷಿತಿಪಕ್ಷಯಕರ ಕ್ಷಿತಿಕನ್ಯಾಸುವರಕ್ಷಿತಿಜನಾಶಕ್ಷಿತಿಖಳಮೋಹಕಕ್ಷಿತಿಭರಾರ್ದಕ ಕ್ಷಿತಿಪಾಲನಪರಕ್ಷಿತಿವಲಯಚರ ಕ್ಷಿತಿಜನೇತರ ಕ್ಷಿತಿಸುರೇಶ ನಮೋ 58ಅಂಬುಗಮನ ಪಯೋಂಬುಮಥನ ಲಯಾಂಬು ತಳಗಾರುಣಾಂಬು ಸಟ ಬಾಹ್ಯಾಂಬುವಾಹಕ ಅಂಬುಶೋಷಕ ಅಂಬುಧಿಮದಘ್ನಅಂಬುಗೃಹ ಮೋಹಾಂಬುಧೆ ಧರ್ಮಾಂಬು ಶ್ರೀಮತ ಅಂಬುಜೇಶ ಸುಧಾಂಬುಧಿ ಸಮಾನೋದರಾಂಬುದಗಾತ್ರ ಕಪಿತ ನಮೋ 59ಅಗ್ನಿನಿಭ ಅಬ್ಧ್ಯಾಗ್ನಿ ಸಹಚರಅಗ್ನಿಮಯ ಪ್ರಳಯಾಗ್ನಿಲೋಚನಅಗ್ನಿಕಾರ್ಯಜ್ಞಾಗ್ನಿ ಪೂಜಿತ ಅಗ್ನಿ ಹೋತ್ರಯುತಾಅಗ್ನಿ ರುಧನ್ನಾಗ್ನಿಕೋಪನಅಗ್ನಿಸ್ಥಾಪಕ ಅಗ್ನಿವ್ಯಾಪಕಅಗ್ನಿವರ್ಧಕ ಅಗ್ನಿದೀಪಕ ಅಗ್ನಿವರ್ಣ ನಮೋ 60ವಾತಜನಕನೆ ವಾತಸಮಭ್ರಮವಾತಪಾಗ್ರಜ ನಾಸಿಕಜಲಯವಾತಸಮ ಕ್ವಾಶಾಂಕ ವಾತಭ್ರಾತೃ ಹಿತಕರಣಾವಾತಸಖಗತ ವಾತಭವನುತವಾತಸುತನುತ ವಾತರಶನ ಸುವಾತಸಮ ಹರಿಗಮನಸೂತ್ರಸುವಾತಜನಕ ನಮೋ61ಅಂಬರ್ವಾನರಜಾರ್ಚಿತ ನಗಾಂಬರಾಂಬರ ಕ್ರೀಡಾಂಬರಾಳಕಸಂಭಜಿತ ಸ್ವಾಂಬರಭರಿತಪದ ಅಂಬರೇಣುಕಹನ್ಅಂಬರಗ ವಂಶೇಂದ್ರ ಗೋವಧ್ವಾಂಬರಾಪಹರಾಂಬರಾಂಬರಅಂಬರಗ ಹಯಗಾಂಬರಪ ಪಾಂಬರ ಸುನಾಭಿ ನಮೋ 62ಶಬ್ದಬೋಧಕ ಶಬ್ದಕಾರಕಶಬ್ದಘರ್ಘರ ಶಬ್ದಹುಂಕರಶಬ್ದಪಾರಗ ಶಬ್ದ ವೀರಗಭೀರ ಶಬ್ದಾಂಕಾಶಬ್ದಶೋಧಕ ಶಬ್ದದೂಷಕಶಬ್ದಸ್ಥಾಪಕ ಶಬ್ದವಿಸ್ತøತಶಬ್ದ ಬ್ರಹ್ಮಜೆÕೀಶ ಶಬ್ದಾತೀತ ಶಬ್ದ ನಮೋ 63ವೃಷಭಗೇಷ್ಟ ಮಿಥುನ ಕುಜಾರ್ದಕವಿಷಮಕರ್ಕಶಮೃತ್ಯು ಕರಿಹರಿವಿಷರದನ ಕನ್ಯಾಪತಿಸಖ ವೃಶ್ಚಿಕಾಭಾಂಗಾವಿಷಪಧನುಹರಮಕರಕುಂಡಲವಿಷಕುಂಭ ಸ್ತನಪಾನ ತತ್ಪರವಿಷಯಸುಖಮಾಯ ಮೀನ ಮೇಷಾರೂಢಸೇವ್ಯನಮೋ64ಅಶ್ವರೂಪ ಮಹಾಭರಣಿಸಖವಿಶ್ವಕೃತ್ತಿಕಾಯಂಗಿ ವರರೋಹಿಣೇಶ್ವರೋದ್ಭವ ಮೃಗಮದಾಂಕಾರಿದ್ರವಿಣ ಹರಣಾನಿಸ್ವಜನ ಪುನರ್ವಸುದ ಗುರುಗಣಹೀಶ್ವರಾಸನ ಪಿತೃಚಯಾರ್ಚಿತಸ್ವ ಸ್ವಭಾಗ್ಯ ಸುಪೂರ್ಣ ಅಮೃತೋತ್ತರ ಸುಹಸ್ತ ನಮೋ 65ಚಿತ್ರರಥ ಸ್ವಾತಿಶಯದೂರ ಮರುತ್ತವೇಶಾನುರಾಧಕೋದ್ಧರಗೋತ್ರಿ ಸುಖಕರ ಮೂಲರಾಕ್ಷಸವಂದ್ಯ ಜಲರೂಪಶತ್ರು ಶ್ರವಣರಹಿತ ಧನಿಷ್ಠ ನಕ್ಷತ್ರ ಶತಪತಿ ಕುಲಜ ಮಧ್ಯ ಪೂರ್ವೊತ್ರ ಭದ್ರಪದೇಶ ರೇವತಿ ರಮಣಾವರಜ ನಮೋ 66ಕತರಕರ್ಚಿತ ಕಿತವಹರ ಸತ್ಯವ್ರತಪ ಕ್ರೀಡಾಪರಕುಧರಕೂಜಿತನಿಗಮಕೇಡ್ಯ ಕೋಟರಮುಖ ಕೌಶಲ ಜವಗಮಾಶ್ರುತಿಹರಹರ ಕಂಠರೇಖಾಂಕಿತ ಕಶ್ಯಪಸುತ ಕರುಣಭಾಷಕಶತಸುಖೋದ್ಧರ ಸಿತತರೋದರ ಶಫರಿರೂಪ ನಮೋ 67ಕಮಠಕಾಲಯ ಕಿಲ್ಬಿಷೋದರವಿಮಲ ಕೀಲಾಲೇಷ್ಟ ಕುಲಗಿರಿಭ್ರಮಣಕರ ಕುಪರ ಕರ್ಮೇತರ ಕೇಶ್ವರೇಷ್ಟಕರಅಮಿತ ಕೈತವಾನಿಷ್ಟ ಕೋಮಲವಿಮಲಜಠರಕಠಿಣವಪುಃ ಕೌರ್ಮ ಮಹತ್ಸ್ಮøತಿಪ್ರಿಯ ಕಂಠಲಂಬ ಕಚ್ಛಪಾತ್ಮ ನಮೋ 68ಕನಸಭವ ಕಾಪುರುಷಮಥನಕಿಟಿನಟ ಕೀರ್ತಿತಯಜÕ ಕುಶಮಯತನೋ ಶ್ರೀ ಕುಧವ ಕೆಗಕ್ರೋಡ ಕೈಶೋರ ಕುಜವರದಘನಸಮಸ್ವನಕೋಲಘರ್ಘರಮನುಸನಕನುತ ಕೌತುಕಾಟಣಕನಕಗಿರಿಚರ ಕಂಜಭವನುತ ಕಷ್ಟಹರಣ ನಮೋ 69ಮಧ್ವವಲ್ಲಭ ಮಧ್ವತೀರ್ಥಗಮಧ್ವಮತಪರ ಮಧ್ವಪತೆ ಮುನಿಮಧ್ವರಮಣ ಶ್ರೀಮಧ್ವಯತಿನುತ ಮಧ್ವಪುಷ್ಕರಪಾಮಧ್ವಪೋಷಕ ಮಧ್ವಭಾಷಕಮಧ್ವತೋಷಕ ಮಧ್ವರಿಪುಹರಮಧ್ವಕಾಮದ ಮಧ್ವಹೃದ್ಗುಹ ಮಧ್ವವಿಭವ ನಮೋ 70ಪ್ರಸನ್ನವದನ ಪ್ರಸನ್ನಲೋಚನಪ್ರಸನ್ನಭವನ ಪ್ರಸನ್ನಭಾಷಣಪ್ರಸನ್ನಕಾರ್ಯ ಪ್ರಸನ್ನಗುಣನಿಧೆ ಪ್ರಸನ್ನತರ ಮೂರ್ತೆಪ್ರಸನ್ನಪುರುಷ ಪ್ರಸನ್ನ ಸೋಂಕಿತಪ್ರಸನ್ನಕಥನ ಪ್ರಸನ್ನಭೂಷಣಪ್ರಸನ್ನಚರಿತ ಪ್ರಸನ್ನವೆಂಕಟ ಪ್ರಸನ್ನಕೃಷ್ಣ ನಮೋ 71
--------------
ಪ್ರಸನ್ನವೆಂಕಟದಾಸರು
ಸರಿಸರಿದೋಡುತಿವೆಲವತ್ರುಟಿಗಳುತಿರುಗದಲಿಟ್ಟಡಿಯಹರಿಗುರು ಪ್ರೀತಿಯ ದೊರಕಿಸು ಪ್ರಾಣಿಕಿರಿಯರಲ್ಲ್ಲ್ಯಮನವರು ಪ್ರಾಣಿ ಪ.ಪರದಾರ ಪರಸಿರಿ ಪರನಿಂದೆ ನಿರುತದಿಚಿರರತಿ ಬೆರತ್ಯಲ್ಲೊಪರಉಪಕಾರ ದಾರಿಯರಿಯದೆ ಬರಿ ಒಣಗರುವಿನಲಿರುವ್ಯಲ್ಲೊನರಹರಿ ಚರಣವಾದರಿಸದೆ ಸ್ಮರಿಸದೆನರರನುಸರಿಪ್ಯಲ್ಲೊಶರೀರ ಸಿಂಗರಿಸಿ ಸತ್ಕಾರ್ಯಬಾಹಿರನಾಗಿನಿರಯಕೆ ಗುರಿಯಾದ್ಯಲ್ಲೊ ಪ್ರಾಣಿ 1ಸುಖಗಳ ಕಕುಲತೆಗಖಿಳ ಸಾಧಕನಾದೆಭಕುತಿಗಳಿಕೆ ತೊರೆದುಬಕವೃತ್ತಿಯ ಕಲಿತು ಮುಖವ ಮುಸುಕಿದೆ ವಿರಕ್ತಿಸರಕುದೋರೈಲೋಕದ ಮೋಹಕ ಜ್ಞಾನಾಧಿಕನಾದೆ ಅಕಳಂಕಸುಖತೀರ್ಥವಾಕುದೋರೈಸಕಲಕಲೆ ಕಲಿತು ಸ್ತ್ರೀಕದಂಬ ಸಖನಾದೆಮುಕುತಿ ಹೊಂದಿಕೆ ತೋರೈ ಪ್ರಾಣಿ 2ಅಶನದುವ್ರ್ಯಸನಕೆ ನಿಶಿದಿನ ವಶನಾದೆಶ್ರೀಶ ಭೃತ್ಯೆನಿಸಿಕೊಳ್ಳೊಹುಸಿಉಪದೇಶಧ್ಯಾತ್ಮ ವೇಷದೊಳು ಘಾಸಿಯಾದೆದಶವ ವರಿಸಿಕೊಳ್ಳೈವಿಷಯ ಬಯಸಿ ವೃಥ ಮಸಿವರ್ಣೆನಿಸದೆ ನೀನ್ಯಶಸ ಕೂಡಿಸಿಕೊಳ್ಳೈಹಸಿತೃಷೆಗಸಣೆಗೆ ಬೇಸರದೆ ಪ್ರಸನ್ವೆಂಕಟೇಶನ ಒಲಿಸಿಕೊಳ್ಳೈ ಪ್ರಾಣಿ 3
--------------
ಪ್ರಸನ್ನವೆಂಕಟದಾಸರು
ಸಂಶಯವಾಯಿತೋ ನಮಗೆಸಂಶಯವಾಯಿತೊಕಂಸಾರಿನಿನಗೆ ಎರಗ ಬರಲುಹಂಸರೂಪ ಕಂಡು ಬೆದರಿ ಪ.ಮದನಜನಕ ನಿನಗೆ ನಾವುಮುದದಿ ಎರಗ ಬರಲುಬ್ಯಾಗಕುದುರೆರೂಪಕಂಡು ನಮಗೆಹೆದರಿಕೆ ಬಾಹೋದು ಕೃಷ್ಣ 1ಪ್ರದ್ಯುಮ್ನ ನಿನಗೆ ಎರಗಿ ನಾವುಸಿದ್ಧಿ ಪಡೆÀದೇವೆಂದು ಬರಲುಅರ್ಧನಾರಿ ರೂಪವ ಕಂಡುಗಡಗಡ ನಡುಗಿದೆವೊ ಕೃಷ್ಣ 2ಚಲ್ವ ರಾಮೇಶಗೆ ಎರಗಿಕಲಿಯಕಿಲ್ಬಿಷPಳೆದೆವೆಂದರೆÉಶಿಲೆಯ ಹೆಣ್ಣು ಮಾಡಿದ್ದು ಕಂಡುಬಲುಬಲು ಅಂಜಿದೆವೊ ಕೃಷ್ಣ 3
--------------
ಗಲಗಲಿಅವ್ವನವರು
ಸುಮ್ಮನೆ ಬಾಹೂದೆ ಮುಕುತಿ - ನಮ್ಮ |ಚೆನ್ನಾದಿ ಕೇಶವನ ದಯವಾಗದನಕ ಪ.ಮನದಲ್ಲಿ ದೃಢವಿರಬೇಕು - ದುರ್ |ಜನರ ಸಂಗತಿಯನು ನೀಗಲುಬೇಕು ||ಅನಮಾನಂಗಳ ಬಿಡಬೇಕು - ತನ್ನ |ತನು - ಮನ ಹರಿಗೆ ಒಪ್ಪಿಸಿ ಕೊಡಬೇಕು 1ಕಾಮ - ಕ್ರೋಧವ ಬಿಡಬೇಕು -ಹರಿ |ನಾಮಸಂಕೀರ್ತನೆ ಮಾಡಲುಬೇಕು ||ಹೇಮದಾಸೆಯ ಸುಡಬೇಕು - ತ |ನ್ನಾ ಮನ ಹರಿಯ ಪಾದದಲಿಡಬೇಕು 2ಪಾಪಗಳನೆ ಕಳೆಯಬೇಕು - ಜ್ಞಾನ |ದೀಪ ಬೆಳಕಿನಲಿ ಲೋಲಾಡ ಬೇಕು ||ತಾಪ ರಹಿತಗೈಯಬೇಕು - ನಮ್ಮಓಪ ಪುರಂದರವಿಠಲನೊಲೆಯ ಬೇಕು 300
--------------
ಪುರಂದರದಾಸರು
ಹರಿಯ ನೆನೆಯಿರೋ - ನಮ್ಮಹರಿಯ ನೆನೆಯಿರೊ ಪ.ಬರದೆ ಮಾತನಾಡಿ ಬಾಯಬರಡು ಮಾಡಿ ಕೆಡಲುಬೇಡಿ ಅಪನಿತ್ಯವಿಲ್ಲದೀ ಶರೀರವ |ನಿತ್ಯವೆಂದು ನೋಡಿರಯ್ಯ ||ಹೊತ್ತು ಕಳೆಯಬೇಡಿಕಾಲ |ಮೃತ್ಯ ಬಾಹೊದೇಗಲೊ 1ಹಾಳು ಹರಟೆ ಮಾಡಿ ಮನವ |ಬೀಳು ಮಾಡಿಕೊಳ್ಳ ಬೇಡಿ ||ಏಳುದಿನದ ಕಥೆಯಕೇಳಿ |ಏಳಿರಯ್ಯ ವೈಕುಂಠಕೆ 2ಮೆಟ್ಟಿ ಪುಣ್ಯಕ್ಷೇತ್ರಗಳನು |ಸುಟ್ಟು ಹೋಹುದು ಪಾಪ ಮನ ||ಮುಟ್ಟಿ ಭಜಿಸಿರಯ್ಯಪುರಂದರವಿಠಲನಾ ಚರಣವನ್ನು 3
--------------
ಪುರಂದರದಾಸರು
ಹರಿಯೆ ನೀನಲ್ಲದಾರ ಕಾಣೆ ಕಾಯ್ವರಮರೆ ಹೊಕ್ಕವರ ಭಯ ಪರಿಹಾರವನು ಮಾಡಿ ಪಶಿವಭಕ್ತಾಗ್ರಣಿ ಬಾಹ್ರ್ಯದ್ರಥ ಗಂಜಾಲೆಮಜಾ ನಿ- |ನ್ನವನಿಂದಳಿಸಿದೆ, ಬಾಣನ ಬಾಗಿಲೂ ||ಭವಕಾಯ್ದಿರಲು ನೀ ತೋಳ್ಗಳನು ಛೇದಿಸುವಾಗ |ಲವಮಾತ್ರ ಪ್ರತಿಕೂಲನಾಗಲಿಲ್ಲ ಶಂಕರನು 1ಹರಿಯೆಂದುದಕೆ ತಾಳದಲೆ ಬಾಧಿಸುತಲಿರೆ |ತರಳನ ಮೊರೆಕೇಳಿಕಂಭದಿಂದ ||ಉರಿಯುಗುಳುತ ಬಂದು ಖಳನುದರವ ಬಗೆದು |ಶರಣ ಪಾಲಕನೆಂಬ ಬಿರುದು ದಕ್ಕಿಸಿಕೊಂಡೆ 2ಸ್ಥಾಣುವಿನವರಬಲದಿಂದಮರರ ಕಾಡೆ |ದಾನವಾನ್ವಯ ಕೊಂದೆ ಭಸ್ಮಾಸು- ||ರನು ಪಾಣಿಯ ತಲೆಯೊಳಿಡುವೆನೆಂಬೊ ಭರದಿ ಬರಲು |ಪ್ರಾಣೇಶ ವಿಠಲ ನೀ ಶಂಕರನನುಳುಹಿದಿ 3
--------------
ಪ್ರಾಣೇಶದಾಸರು