ರಕ್ಷಿಸೋಯನ್ನ ರಕ್ಷಿಸೋ
ರಕ್ಷಿಸೋ ಬೇಗ ಉಪೇಕ್ಷಿಸದಲೆ ಜಲ
ಜಾಕ್ಷ ಯನ್ನ ಮೊರೆ ಪಕ್ಷಿವಾಹನ ದೊರೆ ಪ
ವಾರಿಧಿ ಮತ್ಸ್ಯಾವತಾರದಿ ಧರಿಸಿ ಪೊಕ್ಕು
ಘೋರದೈತ್ಯನ ಕೊಂದು ಇನ್ನು
ಚಾರು ಚರಿತ ವಿಸ್ತಾರ ಶೃತಿಗಳನು
ವಾರಿಜಾಸನಗಿತ್ತ ವರದ ಜಗನ್ನಾಥ 1
ವರಕೂರ್ಮನಾಗಿ ಮಂದರಗಿರಿ ಪೊತ್ತು
ನಿರ್ಜರರಿಗೆ ಸುಧೆಯನುಣಿಸಿ ಹರುಷದಲಿ
ಕರುಣಿಸೋಯಂದರೆ ಕಠಿಣತ್ವ ವಹಿಸುವರೇ
ಪರಮ ಪುರುಷ ನೀನು ಭಜಕರ ಕಾಮಧೇನು 2
ಧರೆಯ ಕದ್ದು ಒಯ್ದವನ ಕೋಪದಿ
ಘನತರ ಕೋರೆಯಲಿ ಸೆಳದೆ ದನುಜಹರ
ವರಾಹನಾದ ಶ್ರೀ ವತ್ಸಲಾಂಛನ ದೇವ
ಶರಣಜನ ಮಂದಾರ ಶರನಿಧಿ ಗಂಭೀರ 3
ಗರುಡಗಮನ ಶ್ರೀ ಹರಿ ಸರ್ವೋತ್ತಮನೆಂಬ
ತರುಳನ ತಂದೆಯ ತಾಮಸದಿ
ಪರಿಪರಿಹಿಂಸೆಯ ಪಡಿಸುತಿರಲು
ನರಹರಿ ರೂಪತೋರಿ ಪ್ರಹ್ಲಾದಗೊಲಿದ ಧೊರೆ 4
ಬಲಿಯದಾನವು ಬೇಡಿ ಬ್ರಹ್ಮಾಂಡ ಭಾಂಡವು
ಅಳೆದು ಮೂರು ಪಾದದೊಳಗೆ ಮಾಡಿ
ತುಳಿದವನ ಪಾತಾಳಕಿಳಿಯಲು ವಾಮನ
ಬಲಭೇದಿ ಸನ್ನತ ಪಾಲಿಸೋ ಪ್ರಖ್ಯಾತ 5
ಪರಶುರಾಮ ಬಾಹು ಬಲದಿ ಸಕಲ
ರಾಜರನೆಲ್ಲ ಗೆದ್ದು ಸುಸ್ಥಿರ ಮೂರ್ತಿ
ಧುರದಿಂದ ಭೂಮಿ ಭೂಸುರರಿಗೇ ಧಾರೆಯ
ನೆರೆದ ಶ್ರೀಮದನಂತ ನಿರತದಿ ಭಗವಂತ 6
ಅನಿಮಿಷರೊಡೆಯ ಶರಣು ಶರಣೆನುತ
ರಾವಣನನು ಜನು ವಿಭೀಷಣನು ಬರಲು
ಘನದಿ ಪಂಕ್ತಿ ಕಂಧರನ ಜಯಿಸಿ ಲಂ-
ಇನಕುಲ ಪಾವನ 7
ಬಲದು:ಶಾಸನ ಸೀರಿಸೆಳಿಯೇ
ದ್ರೌಪದಿ ಮನದಲಿ ಕಾಮಿತಾರ್ಥ ಫಲದಾಯಕ
ಮಾನವ ರಕ್ಷಿಸೆಂದು ಸ್ತುತಿಸಲು
ಪೊರೆದೆ ಹಲಧರಾನುಜ ಮುದದಿ 8
ಅಂಗಜ ಪಿತ ತ್ರಿಪುರಾಂಗನೆಯರ ವ್ರತ
ಭಂಗಮಾಡಿದೆ ಹಿಂಗದಲೇ
ಮಂಗಳಮಹಿಮ ಕೃಪಾಂಗ ಗಂಗೆಯನು
ಪಾದ 9
ಚಲುವ ಕುದುರೆಯನೇರಿ ಕಲ್ಕಿಕಯ್ಯೊಳು
ಖಂಡೆಯ ಪಿಡಿದು ಝಳಪಿಸುತ
ಕಲುಷಾತ್ಮರೆಲ್ಲರ ಖಂಡಿಸಿ ಧರ್ಮವು
ಪರಿಪಾಲನೆಮಾಳ್ಪ ಶ್ರೀ ಭೂದುರ್ಗಾಧಿಪಾ 10
ಪಾವನಚರಿತ ಕೃಪಾವನ ರಾಶಿ
ಶ್ರೀ ದೇವಕೀಸುತ `ಹೆನ್ನೆಪುರೀಶ’
ದೀನ ದೇವೋತ್ತಮ ದೀನ ಬಾಂಧವ
ವೃಂದಾವನ ನಿಲಯಾನಂದ ಸುಂದರಕಾಯಾ 11