ಒಟ್ಟು 19041 ಕಡೆಗಳಲ್ಲಿ , 136 ದಾಸರು , 7982 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಯಸದಿರೈಹಿಕ ಸುಖಗಳನುದಿನ ನಿ ಪ ರ್ಭಯದಿ ಭಜಿಸು ಹರಿಯ ವಯನಗಮ್ಯ ವಾಂಛಿತ ಫಲಗಳ ಸ ದ್ದಯದಿ ಕೊಡುವುದರಿಯ ಅ.ಪ. ಮೃಗ ಪಶು ವಾರಿ ಖೇಚರ ಶ ರೀರಗಳಲಿ ಬಂದೆ ಮಾರಿ ಮಸಣಿ ಬಿಕಾರಿ ಭವಾನಿಗ ಳಾರಾಧಿಸಿ ನೊಂದೆ ನಾರಾಯಣ ಪದಾರವಿಂದ ಯುಗ ಳಾರಾಧನೆ ಒಂದೇ ಶರಧಿ ತೋರುವುದೋ ಮುಂದೆ 1 ಅನಿರುದ್ಧನು ನಿಜ ಮನಕೆ ಸಹಿತ ತಾ ಧನ ಧಾನ್ಯದೊಳಿಪ್ಪ ಸುಖಗಳ ತೋರ್ಪಾ ಗುಣವಂತರೊಳು ಜಯಪತಿ ಸಂಕರ್ಷಣ ಕರ್ಮವ ಮಾಳ್ಪಾ ಧರ್ಮ ಕರ್ಮಗಳ ಕೊನೆಗೀತನು ಒಪ್ಪ 2 ವಾಸುದೇವ ವಿಜಯಪ್ರದನಾಗೀ ನರ ರಾ ಶರೀರಗಳೊಳು ಕ್ಲೇಶ ಸುಪುಣ್ಯಗಳ ತಾ ಸಮನಿಸುವನು ಸಂದೇಹಿಸದಿರು ಆಶಾಪಾಶಗಳನು ತಾ ಸಡಲಿಸುವನು ಶೀಘ್ರದಿಂದ3 ನಾರಾಯಣ ಕರುಣಾಸಮುದ್ರ ಕೇಳು ತನ್ನಾರಾಧಕರಿಗೆ ದೂರಗೈದು ದುರಿತಾ ಕೈವಲ್ಯ ಪ್ರದಾಯಕ ತೋರುವ ಸರ್ವಜಿತ ಹಾರೈಸದಿರು ಅಲ್ಪಾಹಿಕ ಸುಖಗಳ ನರಕದ್ವಾರಗಳವು ನಿರುತ ಸೂರಿಗಳನು ಸಂಸೇವಿಸು ಮುಕ್ತಿಗೆ ದ್ವಾರವಹುದು ಸತತಾ4 ಪಂಚರೂಪಿ ಪರಮಾತ್ಮನು ತಾ ಷ ಟ್ಟಂಚ ರೂಪದಿ ಪೊರೆವಾ ಪಾತಕ ತರಿವ ಸಂಚಿತಾಗಾಮಿಗಳಪರಾಧವ ಮುಂಚಿನವಂಗೀವಾ ಮಿಂಚಿನಂದದಿ ಪೊಳೆವಾ 5
--------------
ಜಗನ್ನಾಥದಾಸರು
ಬಯಸಿ ಕರೆದರೆ ಬರುವರೇನಯ್ಯಾ ನರಹರಿಯ ದಾಸರು ಬಯಸಿ ಕರೆದರೆ ಬರುವರೇನಯ್ಯಾ ಪ ಬಯಸಿಕರೆದರೆ ಬರುವರೇನೋ ಜಯಶ್ರೀ ಮುರಹರಿಯ ನಾಮ ಓದಿ ಕಳೆದುಕೊಂಡ ಶೂರರು ಅ.ಪ ಮಹ ವಿಷಯಲಂಪಟ ಬಿನುಗು ತ್ರಿಗುಣೆಂಬ್ಹೇಸಿಕೆಯ ಬಳಿದು ಸುಸ್ಸಂಗಶ್ರವಣ ಮನನದಿಂ ನಿಜಮೂಲ ಮರ್ಮರಿದು ಆಸನವ ಬಲಿದು ಲೇಖ್ಯದಮೇಲೆ ಘನ ಅನಂದದಿರುವರು 1 ಆರು ದ್ವಯಗಜ ಇಕ್ಕಡಿಯ ಗೈದು ಬಿಡದ್ಹಾರಿಬರುವ ಆರು ಹುಲಿಗಳ ತಾರ ಸೀಳೊಗೆದು ಬಲುಘೋರಬಡಿಪ ಆರುನಾಲ್ಕು ಶುನಕಗಳು ತುಳಿದು ಸತ್ಪಥವ ಪಿಡಿದು ಸಾರಾಸಾರ ಸುವಿಚಾರಪರರಾಗಿ ಮಾರನಯ್ಯನ - ಪಾರಮಹಿಮೆಯ ಅಮೃತ ಪೀರುವವರು 2 ತಾಸಿನ ಜಗಮಾಯವೆಂದರಿದು ಇದು ಸತ್ಯವಲ್ಲೆಂದು ಬೇಸರಿಲ್ಲದೆನುಭವದಿ ದಿನಗಳೆದು ಸುಚಿಂತದನುದಿನ ದಾಸದಾಸರ ಸಾಕ್ಷಿಗಳ ತಿಳಿದು ನಿಜಧ್ಯಾಸದ್ಹುಡಿಕ್ಹಿಡಿದು ನಾಶನಭವದ್ವಾಸನೆಯ ನೀಗಿ ಸಾಸಿರನಾಮದೊಡೆಯ ನಮ್ಮ ಶ್ರೀಶ ಶ್ರೀರಾಮಚರಣಕಮಲದಾಸರಾಗಿ ಸಂತೋಷದಿರುವರು 3
--------------
ರಾಮದಾಸರು
ಬರತಾರಂತ್ಹೇಳೆ ಬಾಲೆಕರೆಯಲು ಬಾಯಿಮಾತಿನಲೆಬರತಾರಂತ್ಹೇಳೆ ಪ. ರಂಗನ ಪಾದಕಮಲ ಭೃಂಗಳೆ ದ್ರೌಪದಿಮಂಗಳಾದೇವಿ ರುಕ್ಮಿಣಿ ಸಖಿಯೆಮಂಗಳಾದೇವಿ ರುಕ್ಮಿಣಿ ಕರೆಯಲು ಅಂಗಳದೊಳಗೆ ಬರುತಾಳೆ ಸಖಿಯೆ 1 ಇಂದಿರೇಶನೆಂಬೊ ಚಂದ್ರಗೆಚಕೋರ ಕುಂದದಂಥವಳ ಸುಭದ್ರಾ ಸಖಿಯೆಕುಂದದಂಥವಳೆ ಸುಭದ್ರೆ ಕರೆಯಲೆ ಬಂದಳು ಭಾಮೆ ಎದುರಲಿ ಸಖಿಯೆ 2 ನಗ ಧರನ ಮುಖವೆಂಬೊ ಮುಗಿಲಿಗೆನವಿಲಸುಗಣಿರೈವರ ಮಡದಿಯರುಸುಗುಣರೈವರ ಮಡದಿಯರು ಕರೆಯಲುಮೂರ್ಜಗದ ಮೋಹನೆಯರು ಬರ್ತಾರೆ ಸಖಿಯೆ3 ಹರಿಯಾಗ್ರಜ ತನ್ನ ಹಿರಿಯರ ಕೂಡಿಕೊಂಡುಬರುವನು ಪರಮ ಹರುಷದಿ ಸಖಿಯೆಬರುವನು ಪರಮ ಹರುಷದಿ ಈ ಮಾತುದೊರೆಗಳಿಗೆ ಹೇಳೆ ವಿನಯದಿ ಸಖಿಯೆ4 ಎಲ್ಲರೂ ಮುತ್ತುರತ್ನ ಝಲ್ಲಿ ವಸ್ತ್ರಗಳಿಟ್ಟುಚಲುವ ಪ್ರದ್ಯುಮ್ನನ ಒಡಗೂಡಿ ಸಖಿಯೆಚಲುವ ಪ್ರದ್ಯುಮ್ನನ ಒಡಗೂಡಿ ಐವರಿಗೆ ಮಲ್ಲಿಗೆ ತೂರಾಡಿ ಕರೆಯಲಿ ಸಖಿಯೆ5 ಅಷ್ಟೂರು ಬಗೆಬಗೆ ಪಟ್ಟಾವಳಿಯನುಟ್ಟುಧಿಟ್ಟ ಸಾಂಬನ ಒಡಗೂಡಿಧಿಟ್ಟ ಸಾಂಬನ ಒಡಗೂಡಿ ಐವರಿಗೆ ಬುಕ್ಕಿಟ್ಟು ತೊರ್ಯಾಡಿ ಕರೆಯಲಿ ಸಖಿಯೆ6 ಮಾನಿನಿ ಮಾನಿನಿ ಸಹಿತಾಗಿ ರಮಿಅರಸುಮಾನದಲಿ ಐವರನ ಕರೆಸುವ ಸಖಿಯೆ7
--------------
ಗಲಗಲಿಅವ್ವನವರು
ಬರತಾರಂತ್ಹೇಳೆ ಹರಿಪಾದ ದರ್ಶನಕೆತ್ವರಿತದಿ ಪಾಂಡವರು ಪ. ಹದಿನಾಲ್ಕು ಲೋಕದ ಪದುಮಗಂಧಿಯರೆಲ್ಲಮದನನಯ್ಯನ ಮನೆನೋಡಲುಮದನನಯ್ಯನ ಮನೆನೋಡೋ ವ್ಯಾಜ್ಯದಿಮುದದಿಂದ ಮುಯ್ಯ ತರುತಾರೆ1 ಸುರನಾರಿಯರು ನಾನಾ ಪರಿಯ ಭೂಷಣವನಿಟ್ಟುಹರಿಯ ಮನೆ ನೋಡೋ ಹರುಷದಿಹರಿಯ ಮನೆ ನೋಡೋ ಹರುಷದಿ ಮುಯ್ಯವತರತಾರೆ ತಾವು ತವಕದಿ2 ನಾರಿಯರೆಲ್ಲರು ನಾನಾ ವಸ್ತಗÀಳಿಟ್ಟುಸಾರಾವಳಿಗಳ ನಿರಿದುಟ್ಟು ಸಾರಾವಳಿಗಳ ನಿರಿದುಟ್ಟು ಹೊರಡೆ ಸೂರ್ಯಮುಳಗಿದನೆ ಆಕಾಶದಲಿ 3 ಅಕ್ಕತಂಗಿಯರು ತಾವು ಚಕ್ಕನೆ ವಸ್ತಗಳಿಟ್ಟುಮಕ್ಕಳಿಗೆ ಬಾಲ್ಯ ಉಡಿಗೆಯಿಟ್ಟುಮಕ್ಕಳಿಗೆ ಬಾಲ್ಯ ಉಡಿಗೆಯಿಟ್ಟು ಹೊರಡಲುಅರ್ಕ ಮುಳುಗಿದ ಆಗಸದಿ 4 ಮಂದ ಗಮನೆಯರೆಲ್ಲ ತುಂಬಿದೊಸ್ತಗಳಿಟ್ಟುಕಂದರಿಗೆ ಬಾಲರ ಉಡುಗೆ ಇಟ್ಟುಕಂದರಿಗೆ ಬಾಲರ ಉಡುಗೆಯಿಟ್ಟು ಹೊರಡಲುಚಂದ್ರಜ್ಯೋತಿಗಳು ಹಿಡಿದಾವೆ 5 ಸುಮನಸೆಯರೆಲ್ಲ ಯಮುನಾದೇವಿಯ ದಾಟಿಧಿಮಿ ಧಿಮಿ ಭೇರಿ ಹೊಯಿಸುತಧಿಮಿ ಧಿಮಿ ಭೇರಿ ಹೊಯಿಸುತ ಬರುವಾಗಭುವನದ ಬೆಳಕು ಹರವಿತು6 ಆನೆಗಳು ಕುಂಭಿಣಿ ಜಡಿದು ಬರತಾವೆ ಕುಂಭಿಣಿ ಜಡಿದು ಬರತಾವೆ ರಾಮೇಶನ ಪದಾಂಬುಜ ನೋಡೊ ಭರದಿಂದ7
--------------
ಗಲಗಲಿಅವ್ವನವರು
ಬರಬಾರದಾಗಿತ್ತು ಬಂದೆನಯ್ಯಾ ಪ ಕರೆತರಲು ಬಂದುದಕೆ ಫಲವೇನೊ ದೇವಾಅ.ಪ ತರಳತನದಲ್ಲಿ ಎನ್ನ ಕರಣಗಳು ಮಾಡಿದ ಪರಿಪರಿಯ ಕ್ರೀಡೆಗಳ ಫಲವೇನೊ ಎನಗೆ ದುರುಳ ಸಂಗದೊಳಿದ್ದು ಹರುಷದಿಂದಲಿ ಎನ್ನ ಆಯುವನು ಕಳೆದೆ1 ಸತಿಸುತರು ಹಿತರಿವರು ಎನಗೆಂದು ಉಬ್ಬುಬ್ಬಿ ಮಿತಿ ಇಲ್ಲದಾ ಕಾರ್ಯಗಳನೆ ಮಾಡೀ ಗತಿಯೇನು ಮುಂದು ಹಿತವು ಯಾವುದು ಎಂದು ಮತಿಗೆಟ್ಟಮೇಲೆನಗೆ ಗೊತ್ತಾಗುವುದೆಂತೋ 2 ಶ್ವಾನ ಸೂಕರಗಳು ಸ್ವೇಚ್ಛೆಯಿಂದಲಿ ಚರಿಸಿ ತನ್ನ ಪರಿವಾರವನೆ ತಾ ಪೊರೆಯುತಿಹವೋ ಎನ್ನ ಸತಿಸುತರುಗಳ ಉದರಪೋಷಣೆಗಾಗಿ ಹೀನಸೇವೆಯಿಂದ ಉಪಜೀವಿಸಲು ಬಹುದೆ 3 ತನುಬಲವು ಇದ್ದಾಗ ಕೋಣನಂದದಿ ತಿರುಗಿ ಜ್ಞಾನ ಕರ್ಮಗಳನ್ನು ಆಚರಿಸದೇವೆ ಧನ ವನಿತೆ ಮೋಹಕೆ ಕೊನೆಮೊದಲು ಇಲ್ಲದೆ ಮನವೆಲ್ಲವನು ನಾನು ಹೊಲೆಗೆಡಿಸಿದಮೇಲೆ4 ವಿಕಳಮತಿಯನು ಹರಿಪ ಅಕಳಂಕ ಹರಿಭಕ್ತ- ರಕುಟಿಲಾಂತಃತರಣ ದೊರೆತು ಎನ್ನ ಸಕಲಾಪರಾಧಗಳ ಕ್ಷಮಿಸುವರ ಸಂಗ ನೀ ಕರುಣಿಸದಿದ್ದ ಮೇಲೆ ಶ್ರೀ ವೇಂಕಟೇಶಾ 5
--------------
ಉರಗಾದ್ರಿವಾಸವಿಠಲದಾಸರು
ಬರಬೇಕು ಬರಬೇಕು ಸಕಲ ಸಜ್ಜನಭಕ್ತರುಗುರುಸಾರ್ವಭೌಮರ ಆರಾಧನೆಗೆ ಗಲಗಲಿಗೆ ಪಪಂಚರಾತ್ರೋತ್ಸವವು ವೈಭವದಿ ನಡೆಯುವದುಚಂಚ'ುತ ಸುಪ್ರಸಾದವು ಇರುವದುವಂಚಿಸದೆ ಸೇವೆಯನು ಮಾಡಿದರೆ ಗುರುರಾಯವಾಂಛಿತಾರ್ಥವನಿತ್ತು ಸಂತೋಷಪಡಿಸುವನು 1ನಿತ್ಯ ಅಷ್ಟೋತ್ತರ ಅಲಂಕಾರ ಮಹಾಪೂಜೆಕ್ಷೇತ್ರ ಭೋಜನ ಕೀರ್ತನೆ ಪುರಾಣನೃತ್ಯಗೀತಗಳಿಂದ ಪಲ್ಲಕ್ಕಿ ಸೇವೆಯುಉತ್ತರಾರಾಧನೆಗೆ ರಥೋತ್ಸವದ ವೈಭವವು 2ಸಹಸ್ರಕುಂಭಾಭಿಷೇಕೋತ್ಸವವು ಕೊನೆಯದಿನಸತ್ಯನಾರಾಯಣನ ಮಹಾಪೂಜೆಯುಪವಮಾನಹೋಮ ಸಂಭಾವನಾ 'ತರಣೆಮುಕ್ತಾಯವಾಗುವದು ಪಂಚರಾತ್ರೋತ್ಸವವು 3ಕೃಷ್ಣವೇಣಿಯ ಪುಣ್ಯಕ್ಷೇತ್ರ'ದು ಗಲಗಲಿಯುಪ್ರಲ್ಹಾದವರದ ಶ್ರೀನರಹರಿಯ ಕ್ಷೇತ್ರವುಶ್ರೀವೆಂಕಟೇಶ'ಠ್ಠಲ ದತ್ತ, ಎಲ್ಲಮ್ಮ 'ೀರಮಾರುತಿ ಪರ್ವತೇಶ್ವರನ ಕ್ಷೇತ್ರ4ಗಾಲವ ಮರ್'ಗಳು ತಪವಗೈದಿಹ ಕ್ಷೇತ್ರಎಲ್ಲದರಲ್ಲಿಯೂ ಮುಂದಿರುವ ಕ್ಷೇತ್ರದೇವ ಭಕ್ತರ ಕ್ಷೇತ್ರ ದೇಶಭಕ್ತರ ಕ್ಷೇತ್ರಭೂಪತಿ'ಠ್ಠಲನ ಪ್ರೀತಿಯ ಕ್ಷೇತ್ರ5
--------------
ಭೂಪತಿ ವಿಠಲರು
ಬರಲು ಹಾರುವ ಮನೆಗೆ ಮೊರೆವರಯ್ಯಾ ಭವಿಯಂದು ಅರಿಯರು ಭವಿಯಾರೆಂಬುದನು | ಶರೀರದೊಳು ಖೋಯಂದು ಕೂಗುತ ಇರುವ ಲಿಂಗ ಕಾಣದವ ಭವಿ | ಹರದೊಡ್ಡವನೆಂದು ಹರಿಯ ನಿಂದಿಸುವನೇ ಭವಿ | ಧರಿಯೊಳು ಭವಿಗಳು ತಾವಾಗಿ | ಪರರಿಗೆ ಭವಿಯಂಬವಗ ಮಹಿಪತಿರಾಯ ನಂದನ ಪ್ರಭುವೆ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬರಹೇಳಮ್ಮಾ ಭಾವೇ ಮನೆಗೆ ಬಿರದಂಕ ಹರಿಯಾ| ಚರಣವನ್ನು ಗಾಣದೆನ್ನ ಚಿತ್ರನೆಲೆ ಗೊಳ್ಳದಮ್ಮಾ ಪ ಬಾಲೆಕೇಳೆ ಕುಂತಳೆ ಬೇಸರ ವಿದೇನೇ| ಪಾಲಗಡಲ ಮನೆಯಾ ಬಿಟ್ಟು ಪವನಾಹಾರನ ಪರ್ಯಂಕವನು| ಜಾಳಿಸಿ ತಾನ್ಯಾಕ ಪೋದನೇ ಜಲರುಹ ನಾಭ| ಕಾಲಿಲಲ್ಲದವನಾಗಿ ಕೊಂದು ತಮನನೀಗಿ| ಮ್ಯಾಲಗಿರಿಯ ಪೊತ್ತ ಮರರಿಗ ಮೃತವಿತ್ತಾ| ಭೂಲಲನೆ ಬಡಿಸಿ ಭೂವರಾಹೆನಿಸಿ| ಬಾಲಕರಿಯಲು ರೂಪ ಬೆಡಗಾ ವಿಡಿಸು 1 ಉಡುರಾಜದವನೆ ಕೆಳದೀ ಉನ್ನತಿಯ ನೋಡೇ| ಷಡ್ಗುಣೈಶ್ವರ್ಯವುಳ್ಳಾ ಸುರಮುನಿಸೇವಿತ ಪಾದಾ| ಬೇಡಿ ಭಾಗ್ಯವ ನೀಡುವ ಬಲುದೊರೆ ತಾನಾಗಿ| ಬಡಹಾರುವನಂತೆ ಭೂಮಿ ಬೇಡಿದನಂತೆ| ಕೊಡಲಿಪಿಡಿದರೆ ಸಕುಲ ಮಾಡಿದ ನಾಶಾ ವಡನೆ ವಾನರ ಸಂಗ ವಿರಹರಿಸಿ ಸುರತುಂಗಾ| ತುಡುಗತನದಿ ಬೆಣ್ಣೆತಿನ್ನುವರೆ ರನ್ನೆ 2 ಕರಿರಾಜ ಗಾಮಿನೀ ಕಿರೀಟ ಕುಂಡಲದಾ ಶಿವತ್ವಕುಂಡಲದಿಂದಾ| ಪರಮಪುರಷದೇವನು ಪೀತಾಂಬರಧಾರೀ| ಬರಿಯ ಬತ್ತೆಲೆಯಾಡಿ ಬೌದ್ಯರೋಳಗ ಕೂಡೀ| ತುರಗೀರಿಯ ವನರ ತುಳಿಸುತ ಸುರವರ ಮೊರೆಗೇಳಿ ಬಂದನು ಮನದೊಳು ನಿಂದನು| ಗುರು ಮಹಿಪತಿ ಪ್ರೀಯಾ ಗುಣಗಣನಿಲಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬರಿದೆ ಚಿಂತಿಸಬೇಡ ಮನವೆ ಭಯಗೊಂಡು ಹರಿಯೊಲುಮೆ ನಮ್ಮಲ್ಲಿ ಸ್ಥಿರವಾಗಿ ಉಂಟು ಪ ಕೊಲ್ಲುವನೊ ಕಾವನೋ ನಿಲ್ಲುವನೊ ಪೋಗುವನೋ ಬಲ್ಲನೊ ಅರಿಯನೋ ಇದನೆಲ್ಲವೆನುತ ಸೊಲ್ಲುಸೊಲ್ಲಿಗೆ ಕರೆದು ಎಲ್ಲವನು ತಿಳುಹಿದರೆ ಕಲ್ಲಾಗುವನೆ ಸ್ವಾಮಿ ಜಗದ ವಲ್ಲಭನು 1 ಕರಿರಾಜ ಧ್ರುವನು ಪ್ರಹ್ಲಾದ ದ್ರೌಪದಿ ದೇವಿ ಮರೆವಿನೊಳಜಾಮಿಳನು ಕರೆಯಲಾಗಿ ಮೊರೆಯ ಲಾಲಿಸಿ ತಾಯಿ ಕರುವನರಸುವ ತೆರದಿ ಉರಗ ಗಿರಿವಾಸ 2 ಗರ್ಭದೊಳಗಿರುವಾಗ ಹಬ್ಬಿರುವ ಮಾಂಸಲತೆ ಉಬ್ಬಸವ ಬಿಡುತಿರಲು ಅಬ್ಬೆ ಸಲಹಿದಳೆ ಉಬ್ಬರದ ನೋವಿನೊಳು ಒಬ್ಬನೇ ಬರುವಾಗ ಹೆಬ್ಬಾಗಿಲನು ಮುಂದೆ ತೋರಿದ (ರಾ)ರೊ ನಿನಗೆ 3 ಮಡದಿ ಮಕ್ಕಳನೆಲ್ಲ ಒಡಗೊಂಡು ಮಲಗಿರಲು ಕಡಸಾರ ಬಂದವಳು ಕಾಲು ಸುತ್ತಿ ನಡುವಿರುಳು ಹಿಡಿದಿರ್ದ ಹಿಡಿತಲೆಯ ಮೃತ್ಯುವನು ಬಿಡಿಸಿ ಸಲಹಿದರಾರು ಜಡನಾದ ಮನವೆ 4 ಹರಿಯನರಿಯದೆ ಮನದಿ ಮರುಗಿ ಕರಗಲು ಬೇಡ ಎರವು ಮಾಡದೆ ಸ್ವಾಮಿ ಪರಿಪರಿಯ ಸೌಖ್ಯವನು ಕರೆದು ಈವನು ನಮಗೆ ವರಾಹತಿಮ್ಮಪ್ಪ 5
--------------
ವರಹತಿಮ್ಮಪ್ಪ
ಬರಿದೆ ಚಿಂತಿಸಿ ನೀನು ಬಳಲುವದೇಕೆ ಮನವೆ ಹರಿನಾಮ ಸ್ಮರಣೆಯು ಹರುಷದಲಿ ಸ್ಮರಿಸಿ ಧರ್ಮಾರ್ಥ ಕಾಮ ವರಮೋಕ್ಷ ಫಲಗಳು ಕರುಣಾ ಕಟಾಕ್ಷದಿಂದ ಶ್ರೀಧರ ನಿರುತ ಕೊಡುವ ಪ ಅರಿಷಡ್ವರ್ಗಕೆ ಸಿಲ್ಕಿ ಅರಿಯದೆ ಭವಸಾಗರದೊಳು ಮುಣುಗಿ ಮೈಮರೆದು ಶ್ರೀನರಹರಿ ಶರಣರ ಪೊರೆವ ಬಿರುದುಳ್ಳಂಥ ಗರುಡವಾಹನ ಸಿರಿಯರಸ ಪರಮಾತ್ಮನ ಕಮಲ ಅನುದಿನ 1 ನೆಚ್ಚಿ ನೀ ಮಂದಾಂಧನಾಗಿ ಅಂದು ಪ್ರಹ್ಲಾದ ಪರಮಾನಂದದಿ ಕರೆಯಲು ದ್ವಂದ್ವರೂಪತಾಳಿ ಬಂದು ಕಾಯಿದಾ ವೃಂದಾರ ಕೇಂದ್ರನುತ ಮಂದರಧರ ಮುಚುಕುಂದ ವರದನ್ನ ಸಲಹೆಂದು ಮೊರೆಯ ಹೋಗದೆ 2 ನರಜನ್ಮ ತಾಳಿ ಸುಖಸ್ಥಿರ ಮಾರ್ಗ ಕಾಣದೆ ಸತ್ಪುರುಷರ ಜರಿದು ಗರ್ವ ಭರಿತನಾಗಿ ಮುರನರಕಾಂತಕ ಮುಕ್ತಿದಾಯಕ ಶುಭಕರ ಸ್ಮರಜನಕ ಶ್ರೀಧರ ಮಾಧವ ತ್ವರದಿ ರಕ್ಷಿಸೋಯನ್ನ ಹರಿಸರ್ವೋತ್ತಮ ನೆನದೆ 3
--------------
ಹೆನ್ನೆರಂಗದಾಸರು
ಬರಿದೆ ಬಯಸಲು ಬರುವುದೇನೆಲೆ ಮರುಳು ಯೋಚನೆ ಬಿಡೆಲೆ ಮನಸೆ ಪ ಹರಿಯ ಬಳಿಯಲಿ ಪಡೆದಷ್ಟಲ್ಲದೆ ದೊರಕದೆಂದಿಗೆ ಬೇರೆ ತಾನು ಅ.ಪ ಶಾಂತಿತಾಳತಿಭ್ರಾಂತಿ ನೀಗಿ ಸಂತಜನ ಕೃಪಾಪಾತ್ರನಾಗಿ ಕರು ಣಾಂತರಂಗ ಸಿರಿಕಾಂತನಂಘ್ರಿಯ ಅಂತರಂಗದಿ ಭಜಿಸದೆ 1 ಶಮೆಯಗೂಡಿಹ್ಯ ಭ್ರಮೆಯನಳಿದು ಸುಮನದೋಳಿರ್ದು ಕ್ರಮದಿ ಅನುದಿನ ವಿಮಲ ಹರಿಕಥೆ ಶ್ರವಣದಿಂ ರಮಾರಮಣನಂಘ್ರಿಗೆ ನಮಿಸದೆ 2 ದಮೆಯ ಪಡೆದು ದಾಸನಾಗಿ ವಿಮಲನಾಮದ ಬಲವಗಳಿಸಿ ಅಮಿತಮಹಿಮ ಶ್ರೀರಾಮನಂಘ್ರಿ ಕಮಲವೊಲಿಸಿ ಭವತುಳಿಯದೆ 3
--------------
ರಾಮದಾಸರು
ಬರಿದೆ ಮೋಹದೊಳು ಬೆರೆದೆ ನಮ್ಮ ಗುರುವಾದಿರಾಜಾರ್ಯ ಚರಣಗಳ ಮರೆದೆ ಪ. ಸರ್ವಜ್ಞಗುರುಮತವ ನಿರ್ವಹಿಸಿ ಮಾಯಿಗಳ ಗಣಪತಿಶಕ್ತಿ ಪೂರ್ವದೇವತೆಗಳನು ಸರ್ವ ಪರರೆಂದೊರೆವ ದುರ್ವಾದಿಗಳ ಭಂಗಿಸಿ ಹಯವದನ- ಪರ ದೈವವೆನಿಸಿ ಮೆರೆವಂಥ ಪಾರ್ವತೀವರವಂದ್ಯಪದ ಪಾತ್ರನೆನಿಸದೆ 1 ಅಂತರ್ಬಹಿಃಶತ್ರು ಸಂತತಿಯ ಗೆಲುವ ತೋರಿಸುವ ಚಂತಿತಾಭೀಷ್ಟಗಳ ಪರಮಾಂತರಂಗದಿ ಕೊಡುವ ಕಂತುಕೃತ ಬಾಧೆಯನ್ನು ನಿಲದಂತೆ ಸಂತೈಸಿಸುವರನ್ನು ಕಾವ ಕ- ಲ್ಪಾಂತದಲಿ ಪವಮಾನನಾಗುವನ ಮರೆದೆ 2 ಮೂರಾರು ಎಂಬತ್ತು ಭಾರಿ ಕಲ್ಪಗಳಲ್ಲಿ ಶ್ರೀ ರಮಾರಮಣಪದ ವಾರಿಜಗಳನು ಭಜಿಸಿ ತೋರಿ ವೈಷ್ಣವ ತತ್ವ ಸಾರವನು ಸಮಧರಿಸಿ ಮಾರುತನ ಮತವೆ ಮಧುವೈರಿಪ್ರಿಯಕರವೆನಿಸಿ ಧೀರ ಕವಿ ಶುಭಕರವಜ್ಞಾನ ಸುಖ ಸಾರ ವೆಂಕಟಪತಿಯ ಮನದಿ ಧರಿಸಿರುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬರುತಲಿಹರು ನೋಡಿ ಗುರುವರೇಣ್ಯ ಸುಖತೀರ್ಥ ಯತಿವರರು ಪ ಹರಿದು ಬರುವ ಸುರನದಿಯ ಪ್ರವಾಹದ ತೆರದಲಿ ಪರಿಪರಿ ಪರಿವಾರ ಸಹಿತ ಅ.ಪ ಕರದಲಿ ಪಿಡಿದಿಹ ದಂಡ ಕಮಂಡಲ ಕೊರಳೊಳು ತುಳಸಿಯ ಚಿಗುರಿನ ಮಾಲೆಯು ಅರಿವಾರಿಜ ಲಾಂಛನಗಳಿಂದೊಪ್ಪುವ ವರ ದ್ವಾದಶ ನಾಮಗಳನು ಧರಿಸುತ 1 ಯತಿಗಳು ಗೃಹಿಗಳು ಬ್ರಹ್ಮಚಾರಿಗಳು ಶತಶತ ಸಂಖ್ಯೆಗಳಲಿ ಸೇರಿಹರು ಅತಿ ಸಂಭ್ರಮದಲಿ ನೋಡಲು ಪುರುಷ ರತುನವು ಮಾರ್ಗದ ಖತಿಪರಿಹರಿಸುತ 2 ಅವನಿಸುರರು ಮುಂಬದಿಯಲಿ ತಮ್ಮಯ ಕವಿತೆಗಳಲಿ ಗೋವಿಂದನ ಗುಣಗಳ ನವ ನವ ಸ್ವರದಲಿ ಪಾಡುತ ಕುಣಿಯಲು ಶ್ರವಣ ನಯನಕಾನಂದವ ಬೀರುತ 3 ತ್ವರೆಯಲಿ ಸರಿದು ತಾ ಬರುತಿರೆ ಯುವ ಕೇ- ಸರಿಯ ಧಿಕ್ಕರಿಸುವ ಸಂಭ್ರಮ ಗಮನ ಚರಣಯುಗಳ ಕಾಂತಿಯ ಪಸರಿಸುತಲಿ ಧರಣಿಯ ಪಾವನ ಮಾಡುವ ಬಗೆಯಲಿ 4 ಏನಿರಬಹುದೆಂದು ನೋಡುವರಿಗೆ ಕಾಣಿಸುವುದು ತೇಜದ ಪುಂಜ ಭೂನಿಲಯವ ಬೆಳಗಲು ಅತಿ ನೂತನ ಭಾನು ಉದಯಿಸಿದ ತೆರದಲಿ ಪೊಳೆಯುತ 5 ಪದುಮರಾಗ ಕಾಂತಿಯ ಮೀರಿದ ನಖ ಕೂರ್ಮ ಪ್ರಪದಗಳು ವಿಧಿಭವಮುಖ ಸುರಸೇವಿತ ಜಂಘವು ಮದಗಜ ಕರವನು ಪೋಲುವ ತೊಡೆಗಳು 6 ಪುಷ್ಪ ನಿತಂಬಗಳಲಿ ಪೊಳೆಯುತಲಿಹ ರೇಷ್ಮೆಯ ವಸ್ತ್ರವ ಧರಿಸಿಹರು ಕುಕ್ಷಿಲಲಾಟ ಶಿರೋಧರಗಳಲತಿ ಶ್ರೇಷ್ಠದ ತ್ರಿವಳಿಗಳಿಂದ ರಾಜಿಸುತ7 ಕೆಚ್ಚಿನ ವಕ್ಷಸ್ಥಳವತಿ ಸುಂದರ ಉಚ್ಚ ಪೀವರದ ಸ್ಕಂಧಯುಗಳವು ಸ್ವಚ್ಛದ ಕೆಂಬಣ್ಣದ ಕರತಲದಲಿ ಬಿಚ್ಚಿ ಹಾರುತಿಹ ಧ್ವಜಲಾಂಛನದಿ 8 ಚಂದಿರ ಬಿಂಬವಿದೋ ಪ್ರೇಕ್ಷಕರಾ ನಂದತರಂಗವ ಉಕ್ಕಿಸುತಿಹುದು ಒಂದು ಕಳಂಕವು ಕಾಣದಿರುವ ಅತಿ ಸುಂದರ ಪುರುಷವರೇಣ್ಯರು ಸೊಗಸಿಲಿ 9 ಸುಂದರ ಮಂದಸ್ಮಿತದಿಂ ಶೋಭಿಪ ಕುಸುಮ ತೆರದಲಿ ದಂತಗಳು ಮಂದಿಗಳಿಗೆ ಬಲು ಹರುಷವಿತ್ತು ಅರ ವಿಂದ ನಯನ ಆನಂದತೀರ್ಥ ಮುನಿ 10 ಕಿವಿಯಲಿ ಪೊಳೆಯುವ ತುಳಸಿಯದಳಗಳು ಅವಿರಳ ತೇಜದಿ ಹೊಳೆಯುವ ಕಪೋಲ ಭುವನತ್ರಯಗಳಭೀಷ್ಟವ ನೀಡುವ ಸುವಿಮಲ ಸುಂದರ ಭ್ರಕುಟಿ ವಿಲಾಸದಿ 11 ಅಕಲಂಕ ಶರೀರರು ಬರುತಿಹುದನು ಸಕಲ ಕಲಾಕುಶಲರು ನೋಡಿ ಶಕುತಿಗೆ ಮೀರಿದ ಮಾದರಿಯೆಂದರು ಪ್ರಕೃತಿ ಮಧುರ ಸರ್ವಾಂಗ ಸುಂದರರು 12 ಕಾಂತಿ ಸುಧೆಯ ಪಾನವ ಮಾಡಿರಿ ಸುಖ ಶಾಂತಿ ನಿಲಯರಾಶ್ರಯದಲಿ ಬಾಳಿರಿ ಚಿಂತೆ ಸಂತಾಪಗಳೆಲ್ಲವ ತೊಳೆಯಿರಿ ಸಂತತ ಹರಿದಾಸ್ಯದಲಿ ಪ್ರಸನ್ನರು 13
--------------
ವಿದ್ಯಾಪ್ರಸನ್ನತೀರ್ಥರು
ಬರುತಾದೋ ಪದ ಬರುತಾದೋ ಪ ಪದುಮನಾಭನ ದಿವ್ಯಸದಮಲಪಾದದ ವಿಧವಿಧ ಮಹಿಮೆಯಯ ಪೊಗಳಿ ಬಾಳುವ ಪದ ಅ.ಪ ಛಂದಸ್ಸು ಮೀಮಾಂಸೆ ಅಂದದ ಯತಿಗಣ ಒಂದು ನಾನರಿಯದೆ ಸಂದೇಹಮಿಲ್ಲದೆ ಮಂದರಧರನಡಿ ಒಂದೇ ತ್ರಿಭುವಿಗೆ ಮಿಗಿ ಲೆಂದು ಪಾಡುತಲಾನಂದ ಪಡೆಯುವ ಪದ 1 ಸಕಲರು ತೆಗೆದಿಟ್ಟ ಅಕತಪಚಟಯೆಂಬ ವಖಿಲಮಂ ಗಣಸದೆ ಪ್ರಕಟಮಿನಿತಿಲ್ಲದೆ ಅಕಟಕಟೆನ್ನುತ ನಿಖಿಲವ್ಯಾಪಕನಂಘ್ರಿ ಭಕುತಿಯಿಂ ಭಜಿಸುತ ಮುಕುತಿ ಪಡೆಯುವ ಪದ 2 ಅಳುಕದೆ ಲೌಕಿಕ ತಿಳೆಸುಖಕೆಳಸದೆ ಮಲಿನದಿ ಸಿಲ್ಕದೆ ಚಲನವಲನಿಲ್ಲದೆ ಜಲಜಾಕ್ಷ ಭಕ್ತರ ಸುಲಭ ಶ್ರೀರಾಮನಂ ಒಲಿಸಿ ಪ್ರಾರಬ್ಧವ ಗೆಲಿದು ನಲಿಯುವ ಪದ 3
--------------
ರಾಮದಾಸರು
ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ಪ. ವರಗಿರಿ ವಾಸನ ಕರೆಯ ಬರುವ ಸೊಬಗು ಧರೆಯ ಮ್ಯಾಲಿಲ್ಲ ಸುಂದರಿಯೆ ರುಕ್ಮಿಣಿಯೆ 1 ಪಾಂಚಾಲಿ ಮೊದಲಾದ ಕೆಂಚೆಯರ ಆಭರಣವುಮಿಂಚಿನಂತೆ ಹೊಳೆಯುತ ಸಿದ್ಧರಾಗಿಹರಮ್ಮ ಚಂಚಲೆಯರು2 ಕಾಲಿಂದಿ ಮೊದಲಾದವರು ಭಾಳ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಳಾಶಯನನ ಬಳಿಗೆ 3 ಭದ್ರೆ ಮೊದಲಾದವರು ತಿದ್ದಿ ತಳಪಿಟ್ಟು ಶುದ್ಧ ವಸ್ತಗಳಿಟ್ಟುಸಿದ್ಧರಾಗಿಹರಮ್ಮ ಅನಿರುದ್ದನ ಕರೆಯಲು4 ಮಂದಗಮನೆಯರು ಗಂಧಕಸ್ತೂರಿ ಪುಷ್ಪಅಂದಾಗಿ ಧರಿಸಿ ಆನಂದವಾಗಿಹರಮ್ಮ5 ಕಾಲಂದುಗೆಗೆಜ್ಜಿ ತೋಳಲೆ ತಾಯಿತ ಭಾರಿ ವಸ್ತಗಳಿಟ್ಟು ಲೋಲ್ಯಾಡುತಿಹರಮ್ಮ6 ಅಚ್ಚಮುತ್ತಿನ ವಸ್ತ ಸ್ವಚ್ಚತೋರುವಂತೆ ಬಿಚ್ಚಿ ಚಾದರ ಹೊತ್ತು ಮಚ್ಚನೇತ್ರಿಯರೆಲ್ಲ 7 ಅಂದುಗೆ ಅರಳೆಲೆ ಬಿಂದುಲಿ ಭಾಪುರಿ ಕಂದರಿಗೊಸ್ತಗಳಿಟ್ಟು ಆನಂದವಾಗಿಹರಮ್ಮ8 ಮುತ್ತಿನ ಝಲ್ಲೆ ವಸ್ತಗಳಿಟ್ಟು ಫುಲ್ಲನಾಭನ ಕರೆಯಲು ಎಲ್ಲರೂನಿಂತಾರೆ9 ಶ್ರೇಷ್ಠ ರಾಮೇಶನ ಅಷ್ಷೊಂದು ಕರೆಯಲು ಪಟ್ಟಾವಳಿಗಳನುಟ್ಟು ಧಿಟ್ಟೆಯರು ನಿಂತಾರೆ10
--------------
ಗಲಗಲಿಅವ್ವನವರು