ಒಟ್ಟು 9531 ಕಡೆಗಳಲ್ಲಿ , 132 ದಾಸರು , 5434 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವ-ಪಾರ್ವತಿ ಅಗಜೆ ನಿನ್ನೊಗತನಕೆ ಜಗ ನಗುವುದೇ ನಗರಾಜ ಈ ಮನೆಯ ಹೊಗಿಸಿದನೆ ಅಕಟಕಟ ಪ ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡ ತೊಟ್ಟ ತೊಗಲುಡುಗೆ ತಲೆಯೋಡು ಕೈಯ ಭೂತೇಶ ಬಲು ಸಿಟ್ಟಿನವನಂಗಸಂಗ ಬಯಸಬಹುದೆ 1 ಆರುಮೊಗದವನೊಬ್ಬ ಆರ್ತಜನು ಮೊಲೆಪಾಲು ಕಾರಿ ಕಡುಮುನಿದು ಕಂಡರೆ ಸೇರರು ಊರಿಗುಪಕಾರಿ ಒಡಲಹರಕ ಗಜಮುಖನು ನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ 2 ಶಿವಶಕ್ತಿ ನಿನ್ನಂಥ ಸೌಭಾಗ್ಯವಂತೆಯಳ ಭುವನದೊಳಗಾವಲ್ಲಿ ಕಾಣೆನಿನ್ನು ಕವಿಜನಗಳೇನೆಂದು ಬಣ್ಣಿಸಿದರೊ ತಿಳಿಯೆ ಭವದೂರ ಶ್ರೀದವಿಠಲರಾಯ ಬಲ್ಲ 3
--------------
ಶ್ರೀದವಿಠಲರು
ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು ಪ ಶಿವ ಶಿವ ಎಂಬೊ ಎರಡಕ್ಷರವು ಭವರೋಗಕೆ ಇದು ಮೂತೌಷಧವು ಜವನಾಳ್ಗಳ ಭಯ ಲವಲೇಶವಿಲ್ಲವು ಇದು ಸತ್ಯವು 1 ಪಾತಕ ಪಹರಿನಿತು ಪೋತ ಮಾರ್ಕಂಡೇಯಗಾಯುವ ನೀಡಿತು ಭೂತೇಶನ ಪದವಾರಿಜ ಧ್ಯಾನದಿ ಧನ್ಯರಾಗಿರೋ 2 ಹರನ ದಿವ್ಯಪದವಾರಿಜ ಧ್ಯಾನ ಪರ ಚರ ಮುಕುತಿ ಪಥಕೆ ಸೋಪಾನ 3
--------------
ಶಾಮಸುಂದರ ವಿಠಲ
ಶಿವರಗಳೆ ಉದಯದಲೆದ್ದು ಸದಾಶಿವ ಎನ್ನಿ |ಅದರಿಂದಲಿ ಸದ್ಗತಿಗಿರುವದು ಒಂದೇ ಹಾದಿ |ನಾನಾ ಗ್ರಂಥಗಳ್ಯಾತಕ ಓದೀ |ಓದಿದರೋದಲಿ ಬೇಕಧ್ಯಾತ್ಮಾ ||ಸಾಧಿಸಿ ಬರುವನು ಶಿವ ಸರ್ವೋತ್ತಮಾಸರ್ವೋತ್ತಮ ತಿಳಿದರೆ ಸಾಕು |ಅನೇಕ ಶಾಸ್ತ್ರಗಳೇತಕೆ ಬೇಕು |ಬೇಕೆಂಬೋದೇ ಬಿಡುವದೆ ಪರಮಾರ್ಥಲೋಕದ ಪರಿಯಲ್ಲಿರುವದೆ ಸ್ವಾರ್ಥ |ಸ್ವಾರ್ಥಕೆ ಪರಮಾರ್ಥಕೆ ಬಹು ದೂರಾ |ಎರಡೂ ಸಮನಿಸಿದವನೇ ಧೀರಾ ||ಧೀರ ಉದಾರಗೆ ಆರ ಹಂಗಿಲ್ಲಾ |ಸೂರೆಗೊಂಡನು ಮೂಜಗವೆಲ್ಲಾ |ಎಲ್ಲರಿಗೆ ತಾ ಬಲು ಕಿರಿದಾಗಿ |ಬಲ್ಲತನದ ಬಡಿವಾರವ3ೀಗಿನೀಗಿ ನಿಶ್ಚಿಂತ್ಯಾದರ ತ್ಯಾಗಿ ||ತ್ಯಾಗವು ಬಲಿತರೆ ಅವನೇ ಯೋಗಿಯೋಗಿಗೆ ಮೂಲಾ ಐಕ್ಯದ ಮಾಟಾ |ಬೇಗನೆ ತಿಳಿಯದು ಜೀವ ಶಿವ ಕೂಟಾ |ಕೂಟವ ತಿಳಿಯದೆ ಯಾತರ ಜ್ಞಾನಿ |ಚಾಟಕನಾದರೆ ಜ್ಞಾನಕೆ ಹಾನಿಹಾನಿಗೆ ಹಾನಿ ತಂದವ ಜಾಣಾಸ್ವಾನುಭವದಲಿದ್ದವ ಪ್ರತಿಗಾಣಾ |ಪ್ರತಿಗಾಣನು ಶಿವರತಿಯುಳ್ಳವನು |ಗತಿ ಬಯಸುವನು ಗುರು ಚರಣವನು |ಚರಣಗಳಲ್ಲಿ ವರಗಳು ಉಂಟು |ಗುರುಹಿರಿಯರಿಗೆ ಶರಣು ಹೋಗಿರಿ |ಪರಿಣಾಮದ ಘೋರಿಗೆ ಪರಿಪರಿ ಸ್ತುತಿಗಳು |ಪರಿ ಪರಿಸ್ತುತಿಗೆ ಪರಿಪರಿ ಪೂಜೀ |ಪರಿಪರಿ ಪೂಜಿಗೆ ಪರಿಪರಿ ವಾಜೀ ||ವಾಜಿ ಒಂದಾದರೆ ಸಹಜವೆ ತಾನು |ಮೂಜಗದೊಳಗಿದು ಸೋಜಿಗವೇನು |ಸೋಜಿಗವೆಂಬದು ಶ್ರಮದಲಿ ಮಾಯಾ ಕಂಟಕ ಕಾಕು ಭಂಗ ಬ್ರಹ್ಮಜ್ಞಾನ ಯೋಗಿ ಬ್ರಹ್ಮಜ್ಞಾನ ಬ್ರಹ್ಮಜ್ಞಾನ |ಸಿದ್ಧಗುರು ತ್ರಿಪುರಾಂತಕ ಧ್ಯಾನ |ಪ್ರಕಾಶ ಮುಖದಲಿ ಹೇಳಿದ ರಗಳಿ |ಶಿವ ಸಾಯೋಜ್ಯವೆ ಬೈಲನೆ ಹೊಗಳಿ ||
--------------
ನರಸಿಂಹ
ಶುಕಪಿತನ ಪದಕಂಜ ಪದುಪಾ | ಅಖಿಳ ಲೋಕದ ಗುರುವೆ ಸುಖ ತೀರ್ಥ ಮುನಿಪಾ ಪ ನಿತ್ಯ ನೈಮಿತ್ಯಗಳು | ಗತಿ ತಪ್ಪಿ ಪೋಗಿರಲು ಸರ್ವ ದೇವತೆಗಳು || ಪಥವ ಕಾಣದೆ ನೆರೆದು ಯೋಚಿಸಿ ತಮ್ಮೊಳು | ಅತಿಶಯದಿ ವೊದರಿ ಕೇಳು ಭವನದಾ | ಪತಿಯಾದ ಬೊಮ್ಮಗುಸರಿದರಂದು ಮೇಲು1 ತುತಿಸಲಾಕ್ಷಣ ಕೇಳಿ ಅಜನು ಶಿರದೂಗಿದನು | ಕೃತಭುಜರ ಸಹವಾಗಿ ಹರಿಪುರಕೆ ಸಾಗಿದನು | ನತನಾಗಿ ಶಿರಿಪತಿಯ ಪದಯುಗಕೆ ಬಾಗಿದನು | ಗತಿ ನೀನೆ ಎಂದು ಕೂಗಿದನು ಹರಿ ಕೇಳಿ | ಸತತ ನಿನ್ನನ್ನು ಕರೆದು ಪೇಳಿದವೇಗಿದನು 2 ಭೂಸುರನ ಗರ್ಭದಲಿ ಬಂದೆ ನೀನವತರಿಸಿ | ವಾಸುದೇವನೆಂಬ ನಾಮದಿಂದಲಿ ಜನಿಸೀ | ಭಾಸುರ ಕೀರ್ತಿಯಲಿ ಮೆರೆÀದೆ ಬಲು ಪಸರಿಸಿ | ದೋಷ ವರ್ಜಿತದ ಗುಣರಾಸಿ ಎನಿಸುವಾ | ಲೇಸು ಆರೈದೆರಡು ಲಕ್ಷಣ ಸಂನ್ಯಾಸಿ 3 ಪುಟ್ಟಿ ಇಳಿಯೊಳಗೆ ಸಂಕರನೆಂಬ ದುರವಾದಿ | ಜಟ್ಟಿಗನಾಗಿ ಸೋsಹಂ ಯೆಂಬ ಅತಿ ಕ್ರೋಧಿ | ಅಟ್ಟಹಾಸದಲಿ ತಿರುಗಿದನು ಬೀದಿ ಬೀದಿ | ಘಟ್ಟವಚನದಿಂದ ಕಾದಿ ಅವನ ಮುರಿ | ದೊಟ್ಟಿದೇ ವಪ್ಪದಲಿ ಮಾಯಿ ಮತಭೇದಿ 4 ಅಮೃತ | ಗ್ರಂಥ ಉತ್ತಮರಿಗೆರೆದು ಸುಖ ಬಡಿಸಿದೆ ಅತಿಶ್ಯಾಂತ | ಅತ್ಯಂತ ಮಹಿಮ ಬಲವಂತ ನಿಮಗೆ ನಾ | ಎತ್ತಿ ಕರಗಳ ಮುಗಿವೆ ತೋರು ನಿಜ ಪಂಥ 5 ಹರಿಯೆ ಪರನೆಂದು ಬೊಬ್ಬರಿದು ಎಳಹರಿ | ಮರಿಯೆ ಬಿರಿದು ಡಂಗುರವ ಹೊಯಿಸಿ | ಚರಿಸಿದ ಗುರು ದೊರೆಯೇ | ಸರಿಗಾಣೆ ನಿನಗೆಲ್ಲಿ ಮತ್ತೊಬ್ಬರನ ಕರಿಯೇ | ವರ ಬದರಿಲಿಪ್ಪ ವೈರಾಗ್ಯದ ಸಿರಿಯೇ 6 ಮುನಿಗಳೊಳಗೆ ರನ್ನ ಮುನಿದವರಿಗಿರಬೆನ್ನ | ಘನ ವಿದ್ಯಸಂಪನ್ನ ಗುಣದಲ್ಲಿ ಅಚ್ಛಿನ್ನ | ನೆನೆದವರ ಪ್ರಸನ್ನ ತನುವೆ ತಪುತ ಚಿನ್ನ | ಮಿನಗುವಂತೆಯಿಪ್ಪ ಪಾವನ್ನ ಮಧ್ವಮುನಿ | ಚಿನುಮಯ ವಿಜಯವಿಠ್ಠಲನ್ನ ಪ್ರಸನ್ನಾ7
--------------
ವಿಜಯದಾಸ
ಶುಕ್ಕುರವಾರದಿ ಭಕ್ತಿಲಿ ಭಜಿಸುವೆ ಲಕ್ಕುಮಿ ದೇವಿಯನುರುಕ್ಮಾಭರಣ ವಿಲಕ್ಷಣ ಶೋಭಿಪ ಸುಲಕ್ಷಣ ಮೂರ್ತಿಯನುರಕ್ಕಸರಿಪು ಬಲಪಕ್ಕದಿ ಕೂತಿಹ ರುಕ್ಮಿಣಿ ದೇವಿಯನು ಪ ಸಂತತ ಭಜಿಸುವ ಸಂತರ ಹತ್ತಿರ ನಿಂತು ರಕ್ಷಿಸುತಿಹಳುಶಾಂತಳು ಸದ್ಗುಣವಂತಳು ಕಮಲಾಕಾಂತನ ಸುಪ್ರಿಯಳೂ ಕರವೀರಪ್ರಾಂತ್ಯದೊಳಿರುತಿಹಳು ಹೃತ್ಕಮಲಂಚಳ ಸಂಸ್ಥಿತಳು 1 ಮಾಧವ ಭೂಮಿಯ ಮಂಗಳ ಮೂರ್ತಿಯು ಸುಖರಾಶಿ2 ಆಸ್ಯಾಂಬುಜತನು ಹಾಸಸುಕುಂತಳೆ ಭೂಷಿತ ಬಿಂಬೋಷ್ಠೀಕೂಸಿಗೆ ಕೊಡು ಇಂದಿರೇಶನ ಸಹಜಗದೀಶಳೆ ತವ ಭೆಟ್ಟಿ3 ಅಗಣಿತ ಮಹಿಮನಸುಗುಣದೊಳಾಡುವ ಮಿಗೆ ಹರುಷವ ಕೊಡುನಗೆಮುಖದವಳೇ 4 ಸಂದರವದನೆ ಸಿಂಧುರಗಮನೆ ಕುಂದದ ಅಸುರರನೆಮಂದರಮಾಲಾ ಭೂಷಿತವೇಣಿ ಇಂದಿರೇಶನ ಪಾದದ್ವಂದ್ವತೋರಿಸು ನಿನಗೊಂದಿಸುವೆನು ಶರದಿಂದು ಸುಮನಸೆ 5
--------------
ಇಂದಿರೇಶರು
ಶುಕ್ರವಾರ ಕೇಶವನ ಭಜನೆ ಮಾಡಬೇಕೊ ನಮ್ಮ ಚಕ್ರಧಾರಿಯನ್ನು ಬಿಡದೆ ನೋಡಬೇಕೊ ಪ ಚಕ್ರಧಾರಿಯಾಗಿ ಸಕಲ ಚಕ್ರವರ್ತಿಗಳನು ಗೆದ್ದ ಆ ಕ್ರುರಗೆ ತಾ ವರನಿತ್ತು ನಿತ್ಯಾನಂದ ತ್ರಿವಿಕ್ರಮನನ್ನು ಅ.ಪ ಅಪ್ರಾಕೃತಮಾದ ವೈಕುಂಠನಾಥ ರಂಗಾ ಜಯ ಜಯ ಕ್ಷಿಪ್ರದಿಂದಾ ಭಕ್ತರಿಗೊಲಿಯುವಡೋಪಪತ್ರಂಗಾ ಅಪ್ರಮೇಯ ಅಚಲನಾನು ಆರೂಢರಿಗಾಧೀನವಿದಹುದೊ ನಿತ್ಯಾನಂದನೆ ಮುರಳೀಧರ ಗೋಪಾಲ ಜನಾರ್ದನ ಸತ್ಯಬ್ರಹ್ಮವೋ 1 ದಾಸದಾಸರಿಗೆ ದಾಸನಾಗಬೇಕೊ ಕೆಟ್ಟ ವೇಷ ಭಾಷೆ ದುರ್ದೋಷಗಳು ವೋಗಬೇಕೊ ಬ್ಯಾಸರಾಂತಕಮಾದ ಶ್ರೀಮದ್ದೇಶಿಕಾ ಶ್ರೀತುಲಸಿರಾಮಾ ನಾಸಿಕಾಗ್ರನಿವಾಸನೆಂದು ನಂಬಿ ನಾರಾಯಣನಂ ಬಿಡದೆ 2
--------------
ಚನ್ನಪಟ್ಟಣದ ಅಹೋಬಲದಾಸರು
ಶುದ್ಧ ಸನ್ಮಾರ್ಗ ಸರ್ವರಿಗಿದು ಒಂದೆ ಬುದ್ಧಿವಂತರು ತಿಳಿದರು ಇದರಿಂದೆ 1 ಇದರಿಂದೇವೆಂಬುದು ನಿರ್ವಾಣ ಒದರುತಲಿಹುದು ವೇದಪುರಾಣ 2 ಪುರಾಣ ಪುಣ್ಯದ ಹಾದಿಯು ನಿಜ ಸುರಮುನಿಗಳಿಗಿದು ಹೊಳೆವದು ಸಹಜ 3 ಸಹಜಾನಂದದ ಸುಖಸಾಗರ ಬಾಹ್ಯಾಂತ್ರ ಸದೋತಿತ ಸಹಕಾರ 4 ಸಹಕಾರವು ಚಿನ್ಮಯ ಚಿದ್ರೂಪ ಸೋಹ್ಯದೋರುವ ಶ್ರೀ ಗುರುಸ್ವರೂಪ 5 ಸ್ವರೂಪವೆ ಸದ್ಗೈಸುವ ಹಾದಿ ಪರಮ ವೈಷ್ಣವರ ಮೂಲಾಗ್ರದ ಆದಿ 6 ಅಧಿವೆಂಬುದು ನಿಜನಿರ್ಧಾರ ಸಾಧಿಸುದವರಿಗೆ ಸಾಕ್ಷಾತಾರ 7 ಸಾಕ್ಷಾತ್ಕಾರವೆ ಮೋಕ್ಷದಮನೆಯು ಅಕ್ಷಯ ಪದ ಅದ್ವೈತದ ಖಣಿಯ 8 ಅದ್ವೈತವೆ ಆಧ್ಮಾತ್ಮ ಸುವಿದ್ಯ ಸಿದ್ದಸಾಧಕರಿಗೆ ಆಗುವ ಸಾಧ್ಯ 9 ಸಾಧ್ಯವೆಂಬುದು ನಿಜಸಿದ್ಧಾಂತ ಭೇದಿಸಿದವರಿಗೆ ಇದು ಸನ್ಮತ 10 ಸನ್ಮತವೆ ಮತ ಸರ್ವರಿಗೆಲ್ಲ ಉನ್ಮನಲೀಹ ಮಹಾಯೋಗಿಯು ಬಲ್ಲ 11 ಬಲ್ಲೆವೆಂಬುದು ಬಲು ಅಗಾಧ ಸೊಲ್ಲಿಗೆ ಸಿಲುಕದು ಗುರುನಿಜಭೋದ 12 ಬೋಧವೆ ಸದ್ಗುರುವಿನ ದಯಕರುಣ ಸದ್ಗತಿಸುಖ ಸಾಧನದ ಸ್ಫುರಣ 13 ಸ್ಫುರಣವೆ ಬ್ರಹ್ಮಾನಂದದ ಹರುಷ ತರಣೋಪಾಯದ ಮಹಾ ಉಪದೇಶ 14 ಉಪದೇಶವೆ ನಿಜ ಉಪನಿಷದ್ವಾಕ್ಯ ಒಪ್ಪಿಡುವದು ಭೂಸ್ವರ್ಗತ್ರೈಲೋಕ್ಯ 15 ತ್ರೈಲೋಕ್ಯಕೆ ಇದು ನಿಜನಿಧಾನ ಭಯವಿಲ್ಲದ ಮಹಾಸುಖಸಾಧನ 16 ಸಾಧನದಿಂದ ಸದ್ಗತಿ ಸಂಪೂರ್ಣ ಸಾಧು ಸಜ್ಜನರಿಗೆ ಸಕಲಾಭರಣ 17 ಸಕಲಾಭರಣ ಸದ್ಗುರು ನಿಜ ಅಭಯವು ಶುಕಾದಿ ಮುನಿಗು ಕೂಡಿದ ಪ್ರಭೆಯು 18 ಪ್ರಭೆಗಾಣಲು ತೋರದು ನೆಲೆನಿಭವು ನಿಭವೆ ಮಹಾಮಂಗಳಕರ ಶುಭವು 19 ಶುಭದೋರುದು ಸದ್ಗುರು ಕೃಪೆಯಿಂದ ಭ್ರಮೆಹಾರಿತು ಮಾಯೆ ಇದರಿಂದ 20 ಇದರಿಂದೆ ಇದರಿಟ್ಟಿತು ಪುಣ್ಯ ಒದಗಿ ಕೈಗೂಡಿತು ಬಂತು ತಾರ್ಕಣ್ಯ 21 ತಾರ್ಕಣ್ಯವು ಬಂತೆನ್ನೊಳು ಪೂರ್ಣ ಸರ್ಕನೆ ದೊರೆಯಿತು ಸದ್ಗುರುಖೂನ 22 ಖೂನವೆ ಎನ್ನೊಳಗಾಯಿತು ಧ್ಯಾನ ಘನಸುಖದೋರುವ ಅನುಸಂಧಾನ 23 ಅನುಕೂಲಾದ ನಮ್ಮಯ್ಯ ಪ್ರಸಿದ್ಧ 24 ಪ್ರಸಿದ್ಧವೆ ಪ್ರತ್ಯಕ್ಷ ಪ್ರಮಾಣ ಭಾಸುತಿಹುದು ಶ್ರೀಗುರು ಶ್ರೀಚರಣ 25 ಶ್ರೀಚರಣಕೆ ಎರಗಿಹ ಮಹಿಪತಿಯು ಸೂಚನೆ ಮಾತ್ರ ಕೊಂಡಾಡಿದ ಸ್ತುತಿಯು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶುಭ ಜಯತು ಶುಕಪ್ರೀಯಾಕಾಯಯ್ಯ ಕವಿಗೇಯ ಮಹರಾಯಾ ಪ ಜಗದೀಶ ಸಖನಾಗಿ ಶಸ್ತ್ರಾಸ್ತ್ರವನೆ ಕೈಗೊಂಡುಜಯಶೀಲನೆಂದೆನಿಸಿ ಜಗದೊಳಗೆ ಮೆರೆದೆ ಜಯ ಭೀಮರಾಯನು ಈ ಮೇದಿನೀ ಸ್ಥಳಕ್ಕೆ ಬರಲು ಅಸಮ ಪಶು ಎಂದೆನಿಸಿ ಸೇವಿಸಿದಿ ನಿತ್ಯಾ ಸತ್ಯಾ 1 ಮಣಿ ಸರ್ವಜ್ಞರಾಯರು ವಿರಚಿಸಿದ ಗ್ರಂಥಗಳನಿರೇ ಸಜ್ಜನರಿಗೆ ಸುಜ್ಞಾನವನು ತೋರಿ ಸುಜ್ಞಾನಿಗಳವಾಗ್ಬಾಣದಿಂದರಿದ್ಯೋ ತರಿದ್ಯೊ 2 ಶಿರಿದೇವಿ ವರಬಲದಿ ಆಗಮಾದ್ರಿಯ ಮಥಿಸಿಸತ್ಸುಖಾ ತೆಗೆದು ಸಾಧುಗಳಿಗಿತ್ತೇಮಳಾಪುರಿನಿಲಯ ಪವನೇಶತಂದೆವರದಗೋಪಾಲವಿಠ್ಠಲನ ದೂತಾ ಖ್ಯಾತಾ ದಾತಾ 3
--------------
ತಂದೆವರದಗೋಪಾಲವಿಠಲರು
ಶುಭ ಪ ಬ್ರಹ್ಮರೂಪದಿ ಜಗವನು ಪುಟ್ಟಿಸಿ ಬ್ರಹ್ಮಜನಕನ ನೆತ್ತಿಲಿ ರಕ್ಷಿಸಿ ಬ್ರಹ್ಮ ಮೂರುತಿ ಬಾಲಬ್ರಹ್ಮದಿ ಚರಿಸಿದಾತಂಗೆ ಮಹಾ | ಬ್ರಹ್ಮಾಂಡಕೋಟಿ ಉದರದೊಳಿರಿಸಿ | ಬ್ರಹ್ಮನ ಸ್ತುತಿಗೆ ನಿಲುಕದ ಅವಿನಾಶಿ ಬ್ರಹ್ಮಾದಿ ಸುರವಂದಿತ ರುದ್ರನಾಗಿ ಸಂಹರಿಸಿ 1 ಜಗವನುದ್ಧರಿಸಲು ದೇಹವನು ಜಗದೀಶ್ವರನು ಅವತರಿಸಿ ಬಂದಿಹನು | ಜಗ ಮೃಗಜಲವೆಂದು ತಿಳಿದಿರೆ ಜಗದೊಳಾಡುವಗೆ || ಬಗೆ ಬಗೆಯಲಾಡುತ ಗಗನ ಗಟ್ಟಿಹನು | ನಿಗಮಕೆ ನಿಲ್ಕದೆ ನಿತ್ಯನೆನಿಸುವನು ಝಗಝಗಿಸುವ ಆರತಿಯ ಬೆಳಗಿರೆ ಜಗದ ಜನಕನಿಗೆ 2 ಛಪ್ಪನ್ನ ದೇಶಕೆ ಶೋಭಿಸುವ ಒಪ್ಪುವ ಕೋಳಕೂರೆಂದೆನಿಸುವ ದಿಕ್ಕು ದಕ್ಷಿಣಾ ಭೀಮಾತೀರದಿ ಥಳಥಳದಿ ಹೊಳೆವ |ಶ್ರೀ ಮಹಾಗುರು ಇಪ್ಪತ್ತೊಂದು ಸಮಾಧಿಯೊಳಿರುವತಪ್ಪದೆ ರಾಮಾತ್ಮಜನಾಗಿರುವ | ಸೊಪ್ಪೆರಾಯನು ಸಹಜಾನಂದ ತಾ ಯೋಗಿಯಾಗಿ ಮೆರೆವ 3
--------------
ಭೀಮಾಶಂಕರ
ಶುಭ ಮಂಜುಳಗಾತ್ರ್ರೆಕುಂಜರದಂತೆ ಗಮನೆ ರಂಜಿತಾಂಗಿ ನಿರಂಜನಾಂಗಿ ಪ ಧರೆಯ ಮ್ಯಾಲೆ ಹಿರಿಯಳು ನಾ-ನಿರಲು ಲಜ್ಜೆ ತೊರೆದು ನೀನುಸರಸವಾಡೋದೆ ಮುರಹರನಕರೆದು ಭಾಮಿನಿ ಸುಗುಣೆ ಕಾಮಿನಿ 1 ಪತಿಯ ಪ್ರೀತಿ ಎನ್ನ ಮ್ಯಾಲೆಅತಿಶಯದಿ ಇರಲು ಜ್ಯೇಷ್ಠಸತಿಯಳೇನೇ ನೀನು ನೋಡುಮತಿಯ ರುಕ್ಮಿಣಿ ಸುಪದ್ಮಗಂಧಿನಿ2 ಒಂದು ಕಾಲದಲ್ಲಿ ದಾಸಿ-ಯಿಂದ ಪತಿಯು ಸರಸವಾಡಲುಬಂದಳೇನೇ ಅರಸಿ ಸಮ-ಳೆಂದು ಭಾಮಿನಿ ಸುಗುಣೆ ಕಾಮಿನಿ 3 ದಾಸಿ ಸಮಳು ನಾನು ಅಲ್ಲ ದೋಷ ಮಾತನಾಡಬೇಡಶ್ರೀಶನ ದಯರಾಶಿ ಇರಲುದಾಸಿಯೆ ರುಗ್ಮಿಣಿ ಸುಪದ್ಮಗಂಧಿನಿ 4 ಸಾರೆ ಕೃತ್ಯವಾರೆ ಹೂಡಿದ್ವಾರಾವತಿಯಿಂದ ಎನ್ನಸಾರೆ ಬಂದ ಪ್ರೀತಿಯು ಅ-ಪಾರೆ ಭಾಮಿನಿ ಸುಗುಣೆ ಕಾಮಿನಿ5 ಕಡಲಶಾಯಿ ತಡೆದರಿನ್ನುದಿಡುಗು ದೇಹ ಬಿಡುವೆನೆಂಬೊನುಡಿಯ ಕೇಳಿ ಪಿಡಿದನೆಬಿಡದೆ ರುಗ್ಮಿಣಿ ಸುಪದ್ಮಗಂಧಿನಿ 6 ಮಂದರಧರನು ಪ್ರೀತಿ-ಯಿಂದ ನಿನ್ನ ಪಡೆದನೇನೆಒಂದು ಮಣಿಯ ಕಾರಣದಿಬಂದೆ ಭಾಮಿನಿ ಸುಗುಣೆ ಕಾಮಿನಿ7 ಸುಮ್ಮನೆ ಬಂದವಳಿಗೆಬ್ರಹ್ಮ-ಲಗ್ನದಿ ಬಂದೆನಗೆಸಾಮ್ಯವೇನೆ ಯಾಕೆ ನಿನಗೆಹೆಮ್ಮೆ ರುಗ್ಮಿಣಿ ಸುಪದ್ಮಗಂಧಿನಿ. 8 ಮಾನಾದಿ ಭಕ್ತಿಯು ಕನ್ಯಾ-ದಾನವು ಲೋಕದೊಳಗುಂಟುಏನು ನಿನ್ನ ತಾತ ಕೊಟ್ಟದೀನ ಭಾಮಿನಿ ಸುಗುಣೆ ಕಾಮಿನಿ 9 ಎನ್ನ ಹಂಗದೆಂದುಪ್ರಸನ್ನ ಕೇಳಿ ಶತಧನ್ವನಬೆನ್ನಟ್ಟಿ ಕೊಂದನೇ ನೀ-ಚೆನ್ನ ರುಗ್ಮಿಣಿ ಸುಪದ್ಮ ಗಂಧಿನಿ 10 ವೀರ ಅರಸರ ಸ್ವಭಾವಚೋರರ ಕೊಲ್ಲಬೇಕೆಂಬೋಸಾರ ಪ್ರೀತಿಯದರಿಂದತೋರಿ ಭಾಮಿನಿ ಸುಗುಣೆ ಕಾಮಿನಿ11 ಇಂದ್ರಾದಿ ದೇವತೆಗಳೊಳುಸಾಂದ್ರಯುದ್ಧವನ್ನೆ ಮಾಡಿವೀಂದ್ರ ಎನಗೆ ಪಾರಿಜಾತತಂದ ರುಗ್ಮಿಣಿ ಸುಪದ್ಮಗಂಧಿನಿ12 ಕ್ಲೇಶ ನೋಡಿ ತಂದತರುವ ಭಾಮಿನಿ ಸುಗುಣೆ ಕಾಮಿನಿ13 ನಿಜಳೆಂದು ರಂಗನು ಎನ್ನವಿಜಯಯಾತ್ರೆಯಲ್ಲಿ ತನ್ನಭುಜಗಳಿಂದಾಲಂಗಿಸಿದಸುಜನೆ ರುಗ್ಮಿಣಿ ಸುಪದ್ಮಗಂಧಿನಿ 14 ಅರಸರ ಸ್ವಭಾವ ತಮ್ಮಅರಸೇರ ಮನೆಯೊಳಗಿಟ್ಟುಸರಸ ದಾಸೇರಿಂದ್ಹೋಗೋದುಸ್ಮರಿಸೆ ಭಾಮಿನಿ ಸುಗುಣೆ ಕಾಮಿನಿ 15 ಸಾರವಚನ ಕೇಳಿ ಭಾಮೆಮೋರೆ ಕೆಳಗೆ ಮಾಡುತಿರಲುನಾರಿ ರುಕ್ಮಿಣಿ ಭಾಮೆಯರನ್ನುವೀರ ಕರೆದನು ತಾ ಸೇರಿ ಮೆರೆದನು16 ಮಂಗಳಾಂಗ ಮಹಿಮ ಕೇಶವಾ-ಲಿಂಗಿಸಿದ ಭೈಷ್ಮಿಯನ್ನುತುಂಗಗುಣ ಗೋಪೀರಮಣರಂಗವಿಠಲನು ಅನಂಗಜನಕನು 17
--------------
ಶ್ರೀಪಾದರಾಜರು
ಶುಭ ಚರಣಕೆ ಹೊಯ್ಯಂದ ಹಂಗುರವ | ಹೊಯ್ಯಂದ ಡಂಗುರವ ಹೊಯ್ಯಂದ ಡಂಗುರವ ಹೊಯ್ಯಂದ ಡಂಗುರವ ಪ ಸಂತರೊಳಗ ಮಹಂತನು ಈತನೇ | ನಿಂತರೆ ನೆರೆಯಲಿ ಸ್ವರ್ಗದ ಸುಖವುಂಟು | ಇಂತಿಪ್ಪ ಪ್ರಪಂಚ ಪರಮಾರ್ಥವೆನಿಸಿದ | ಕರತಲ ಮಲಕಂತೆ ತೋರಿದ 1 ಗುರು ಎಂದರೆ ಹಗದೊಳು ತಾನೇ ತಾನೇ | ಮರಳು ಮಂಕಗಳಿಗೆ ಗುರುತನ ಥರವೇ | ನÉರೆಯಂತ್ರ ಮಂತ್ರದಿ ಸಿಂತ್ರಗೆಡಹುದಲ್ಲಾ | ಪರಬ್ರಹ್ಮ ಇದೆಕೋ ಯಂದಯ್ಯ ತೋರುವ2 ನರ ನಲ್ಲಾ ನರನಲ್ಲಾ ಅವತಾರ ದೇಹೆಂದು | ಧರೆಯೊಳು ಮುಂಡಿಗೆ ಹಾಕುವೆ ಇದಕಿನ್ನು | ಗುರುತಿನ ಮಾತವ ಅರಿತನು ನಂದನ ಘನ | ನೆರೆ ಸಂಶಯಾತ್ಮಗ ದುರ್ಗತಿ ತಪ್ಪದು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶುಭ ಯೋಗಿ ಪುಂಗಗೆ | ಮಂಗಳಂ ಪಾಪೌಘ ಭಂಗಗೆ | ಮಂಗಳಂ ಯಾಳಗಿಯ ದೊರೆ ರಾಮಲಿಂಗನಿಗೆ ಪ ಮೋದದಲಿ ದತ್ತಾವಧೂತನು ಪೇಳಿದನು ಶ್ರೀಕಪಿಲ ಮುನಿವರ |ಗಾಧಿಯಂ ಮಣಿಚೂಲ ಶೈಲದ ಗುಹದಿ ತಪಮಾಡಿ ||ಮೇದಿನಿಯ ಜನರಿಂಗೆ ಸಹಜದಿ ವೇದ ವೇದಾರ್ಥವನು ಬೋಧಿಸಿ |ಭೇದ ಬುದ್ಧಿಯ ಬಿಡಿಸಿ ಕೃಪೆಯನು ಮಾಡಿ ಪೊರೆ ಎಂದು 1 ಕಪಿಲಮುನಿ ಲಿಂಗಾಂಬಿಕೆಗೆ ತಾ ಸ್ವಪ್ನದಲಿ ಪೇಳಿದನು ನಿಶ್ಚಯ |ಅಪರಿಮಿತ ವರ ಕೊಡುವ ಬೆಟ್ಟದ ರಾಮಲಿಂಗೇಶ ||ತಪವು ಮಾಡಲು ಕೊಡುವ ನೀ ತಪವು ಮಾಡೆಂದು ಪೇಳಿದ |ಗುಪಿತ ಮೂಲವ ತೋರಿ ಬೋಧಿಸಿ ಸುಖವ ಪಡೆ ಎಂದ 2 ಮೊದಲು ಲಿಂಗಾಂಬಿಕೆಯು ಮನದಲಿ ನೆನೆದು ಬೆಟ್ಟದ ರಾಮಲಿಂಗನ | ಪದುಳದಿಂ ಸೇವಾ ಪ್ರದಕ್ಷಿಣೆ ಭಕ್ತಿಭಾವದಲಿ |ಮುದದಿ ಪ್ರಾರ್ಥಿಸೆಗೈದು ಎನ್ನಗೆ ಸುತನ ಕೊಡಬೇಕೆಂದು ಪ್ರಾರ್ಥಿಸೆ | ಸದಮಲಾತ್ಮರಾಮಲಿಂಗನು ಜನಿಸುತಿಹನೆಂದ 3 ಸತಿ ಲಿಂಗಾಂಬೆ ಗರ್ಭದೊಳುಪಾವನಾತ್ಮಕ ಜನಿಸಿ ಬೆಳೆದುದ್ದಾಮ ಆನಂದಾಭ್ಧಿಯೊಳು ಸ- |ದ್ಭಾವದಿಂ ಮಣಿಚೂಲ ಶೈಲದಿ ತಪವನೆಸಗಿದಗೆ 4 ಕೆಲವು ದಿನ ಮಣಿಚೂಲ ಶೈಲದ ಗುಹೆಯೊಳಗೆ ತಪಗೈಯುತಿರೆ ಶ್ರೀಮಲಹರಿಯು ಪ್ರತ್ಯಕ್ಷರೂಪದಿ ಮಂತ್ರ ಬೋಧಿಸಿದ ||ಚೆಲುವ ರಾಮಪ್ಪಯ್ಯ ಮನದಲಿ ಹರುಷವಂ ಕೈಕೊಂಡು ಸಿದ್ಧಿಯಫಲವ ಪಡೆದನು ಮಂತ್ರ ಮಹಯೋಗಾದಿ ಸಿದ್ಧಿಗಳ 5 ಗೌತಮಾನ್ವಯದಲ್ಲಿ ಜನಿಸಿ ಸುಕೀರ್ತಿ-ಪಡೆದಪ್ಪಯ್ಯ ಗುರುವರ |ಮಾತು ಮಾತಿಗೆ ರಾಮಲಿಂಗನ ನೆನೆ ನೆನೆದು ಮನದಿ ||ಸಾತಿಶಯ ಮಣಿಚೂಲ ಶೈಲವ ಸೇರಿ ಕಂಡಿಹ ರಾಮಲಿಂಗನ |ಮಾತು ತಿಳುಹಿಸಿ ಗ್ರಹಕೆ ಕರಕೊಂಡು ಬಂದಿಹಗೆ 6 ಪರಮ ತಾರಕ ಮಂತ್ರ ಕರ್ಣದೊಳೊರೆದ ಗುರು ಅಪ್ಪಯ್ಯ ಮೂರ್ತಿಯ | ಚರಣವನು ಧ್ಯಾನಿಸುತೆ ಮಹಾ ವಾಕ್ಯಾರ್ಥ ಶೋಧಿಸಿದ | ಪರಿಪರಿಯ ವೇದಾರ್ಥವನು ಬಹು ಹರುಷದಿಂ ಶಿಷ್ಯರಿಗೆ ಬೋಧಿಸಿ | ನಿರುತ ಬ್ರಹ್ಮಾಕಾರ ವೃತ್ತಿಯೊಳಿರುವ ಶರಣಂಗೆ 7 ಪಂಚಲಿಂಗವು ಪಂಚ ತೀರ್ಥಗಳುಳ್ಳ ಯಾಳಗಿ ಕ್ಷೇತ್ರದಲಿ ಪ್ರ- |ಪಂಚವನು ಪರಮಾರ್ಥ ಬುದ್ಧಿಯಲಿಂದ ನೆರೆಗೈದು ||ವಂಚನಿಲ್ಲದ ರಾಮಲಿಂಗ ವಿರಂಚಿ ಭಾವದೊಳಿರ್ದು ಜನರಿಗೆಹಂಚಿಕೆಯ ಪೇಳಿದನು ಇಲ್ಲಿಗೆ ಗಂಗೆ ಬರುತಿಹಳು 8 ಇಂದು ವೇದ ರಸೈಕ ಶಕದ ವಿಕಾರಿವತ್ಸರ ದಕ್ಷಿಣಾಯನ |ಛಂದದಾಶ್ವೀನ ಶುದ್ದ ಸಪ್ತಮಿ ಸೌಮ್ಯ ವಾಸರದಿ ||ಸುಂದರದ ಜ್ಯೇಷ್ಠರ್ಕ ವೃಶ್ಚಿಕ ರಾಶಿ ಶುಭದಿನ ತೃತಿಯ ಪ್ರಹರದಿಹೊಂದಿದನು ಸುಸಮಾಧಿ ಸುಖವನು ರಾಮಗುರುವರನು 9 ಸುರರು ಅಂಬರಕೇರಿ ಪುಷ್ಪದ ಮಳೆಯ ಸುರಿದರು ಹರುಷದಿಂದಲಿಪರಮ ವಿಸ್ಮಯವಾಗೆ ಸುರದುಂದುಭಿಯ ಧ್ವನಿಕೇಳಿ || ಹರುಷ ದಿಂದಲಿ ಶಿರವ ನಲಿಯುತ ದೇವ ಗಣಿಕೆಯರು ನೃತ್ಯ ಮಾಡುತ ತರ ತರದಿ ಜಯ ಘೋಷ ಮಾಡುತ ಜನ ಸಹಿತವಾಗಿ 10|| ಜಯ ಜಯತು ಜಯ ನಿರ್ವಿಕಾರಗೆ ಜಯ ಜಯತು ಜಯ ನಿರ್ವಿಶೇಷಗೆ | ಜಯ ಜಯತು ನಿಃಸೀಮ ಪರಮಾನಂದ ರೂಪನಿಗೆ || ಜಯ ಜಯತು ಭಕ್ತಾಭಿಮಾನಿಗೆ ಜಯ ಜಯತು ಮಹ ಸಿದ್ಧ ವರದಗೆ | ಜಯ ಜಯತು ಸಿಂಧಾಪುರದ ಸಖರಾಮ ಗುರುವರಗೆ 11
--------------
ಗುರುರಾಮಲಿಂಗ
ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ಅಭಿವಂದಿಸುವೆನೊ ಜೀಯ್ಯಾ ಪ ಕರವ ಜೋಡಿಸಿ ಬಿನ್ನೈಪಾ || ದುರಿತ ರಾಶಿ | ಪರಿಹಾರ ಮಾಡಿಸಯ್ಯಾ 1 ಮಾರುತಿ ಸದಾಗತಿ ಭಾರತೀಪತಿ ಯತಿ | ಮಾರಾರಾತಿಗೆ ನೀ ಗತಿ || ಮಾರಿಗಳಿಗೆ ನಿರುತ ಮಾರಕ ನೀನಹುದೋ2 ವಾಯು ಎನಗೆ ಸಂಪೂರ್ಣಾಯು ಪಾಲಿಸೊ ಸರ್ವ | ಸಾಯುಜ್ಯ ಸಾರೂಪ್ಯನೆ || ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ | ಈ ಯುಗದೊಳು ಬಲವಾಗೋ 3 ಕಾಯ ನಿನ್ನದು ಗುಣನಿ | ಕಾಯ ನಿರ್ದೋಷ ಕಾಯಾ || ಕಾಯಾ ಐದಳಮಾನ | ಕಾಯ್ದ ಕಲಿವೈರಿ | ಕಾಯಜಪಿತನ ದೂತಾ 4 ಪಂಕಜನಾಭನ ಅಂಕದಲ್ಲಿಪ್ಪ ಬಿಂಕವ ತಾಳದಿರೊ | ಸಂಕರುಷಣ ನಮ್ಮ ವಿಜಯವಿಠ್ಠಲನ ಹೃ ತ್ಪಂಕದೊಳು ತೋರಿಸೊ 5
--------------
ವಿಜಯದಾಸ
ಶೂರ್ಪಾಲಯ ಕ್ಷೇತ್ರದ ನರಹರಿ ಸ್ತೋತ್ರ (ಕೃಷ್ಣಾತೀರ) ನರಹರೀ ಪಾಹಿ | ಮರನೂರ ನರಹರೀ ಪ ಪರಿ ಭವಣೆಯ | ಪರಿಹರಿಸುತ ಮುನ್ನವರ ವೈರಾಗ್ಯವನಿತ್ತು | ಕರುಣೀಸೊ ಸಂಪನ್ನ ಅ.ಪ. ಸತಿ | ಕೃಷ್ಣೆಗಕ್ಷಯ ವಸನಸೃಷ್ಟಿಗಿತ್ತವ ಹರಿ | ಕೃಷ್ಣನೆ ಸಲಹೆನ್ನ 1 ಬುದ್ಧ | ಆಘಹರ ಕಲ್ಕಿಯೆ 2 ಜನಿತ ಸುಖ ಜಲ ಕಣ್ಣ | ಬಿಂದುಯುಗಳವು ಬೀಳೆ ಪಾವನ್ನ | ವೃಕ್ಷಯುಗಳೋದಯವಾಯ್ತು ಮುನ್ನ | ಆಹಅಗಣಿತ ಮಹಿಮ | ಅಶ್ವತ್ಥ ಸನ್ನಿಹಿತನೆನಿಗಮ ವೇದ್ಯನೆ ಸರ್ವ | ಜಗದೀಶ ಸಲಹೆನ್ನ 3 ಶೂಲಿಯಿಂದೊಡಗೂಡಿ ರಾಮ | ಚಂದ್ರಪಾಲಿಸುತಿಹ ಸಾರ್ವಭೌಮ | ಸುಜನಾಳಿ ಪಾಪಾರಣ್ಯ ಧೂಮ | ಕೇತುಓಲೈಪ ಜನರಘ ಭಸ್ಮ | ಆಹಲೀಲೆಯಿಂದಲಿ ಗೈವ | ಆಲಯವಿದು ಶೂರಪಾಲೀಯ ಕ್ಷೇತ್ರದಿ | ಶ್ರೀಲೋಲ ನರಹರಿ 4 ನಡು ನದಿಯೋಳು ಕೋಟೇಶ | ಮತ್ತೆಪಡುವಲಯದೋಳು ಕಂಕೇಶ | ಇನ್ನುಬಡಗ ನರಹರಿ ಬಳಿ ಬೈಲೇಶ | ಆಹರೊಡಗೂಡಿ ನೆಲಸೀಹ | ಕಡು ಮುದ್ದು ರೂಪದಿದೃಢ ಭಕ್ತನೆನಿಸೀಹ | ಮೃಡನಿಂದ ಪೂಜಿತ 5 ಅಜಪಿತ ಪದಜಳು ಎನಿಪ | ಮತ್ತೆಅಜಾಂಡ ಕಟಹದಿಂ ಬರ್ಪ | ಇನ್ನುಅಜಸುತ ಶಿರದಲಿ ಧರಿಪ | ಸಗರಜರ ಪಾಪವನ್ನು ಹರಿಪ | ಆಹಮಝಬಾಪು ಗಂಗೆಯ | ನಿಜ ಪಾಪ ಕಳೆಯಲುಅಜಸುತ ನಾಜ್ಞೆಯಿಂ | ಬಿಜಯಿಸಿದಳು ಇಲ್ಲಿ 6 ಪರರಘಗಳ ಹೊತ್ತು ಗಂಗೆ | ಬಂದುಹರ ಪೇಳಿದಂಥ ದ್ವಿಜಂಗೆ | ಶೂರ್ಪವರ ವಾಯು ನ್ವಿತ್ತಳವಂಗೆ | ಪಾಪಹೊರದೂಡಿದಳು ಮಂಗಳಾಂಗೆ | ಆಹಗುರುಕನ್ಯಾಗತನಾಗೆ | ಸರಿದ್ವರ ಕೃಷ್ಣೇಲಿಬೆರೆಯುತ ಸುರ ನದಿ | ಹರಿಪಳು ಜನರಘ 7 ಮಧ್ವಾರ್ಯ ಸಂತತಿ ಜಾತ | ಗುರುವಿದ್ಯಾಧೀಶರು ಇಲ್ಲಿ ಖ್ಯಾತ | ದ್ವಾದಶಬ್ದ ಪರಿಯಂತನುಷ್ಠಾತ | ಪ್ರಾಣಮುದ್ದು ಪ್ರತಿಮೆ ಪ್ರತಿಷ್ಠೀತ | ಆಹಶುದ್ಧ ದ್ವಾದಶಿ ದಿನ | ಸದ್ವೈಷ್ಣ್ವ ಲಕ್ಷರ್ಗೆವಿಧ್ಯುಕ್ತ ಭೋಜನ | ಶ್ರದ್ಧೆಯಿಂದಲಿ ಗೈದರ್ 8 ಪರ ತತ್ವವೆನಿಸಿ | ಸ್ತುತಿಸ್ಕಂದೋಕ್ತ ಮಹಿಮೆಯ ಸ್ಮರಿಸಿ | ಆಹಇಂದುಪ ಗುರು ಗೋ | ವಿಂದ ವಿಠಲನಹೊಂದಿ ಭಜಿಪರ್ಗ | ಬಂಧನವೆಲ್ಲಿಹದೋ 9
--------------
ಗುರುಗೋವಿಂದವಿಠಲರು
ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ ಶೃಂಗಾರವಾರ್ಧಿ ವೇಲಾಪುರದ ಚೆನ್ನಾ ಪ ಕರದಲ್ಲಿ ದಂಡ ಕೋಲು ಕಮಂಡಲನೀವ ಪರಿ ಹೇಗೆ ದಾಸಾನುದಾಸನಲ್ಲ ಇರಲಿಯಂತದುವೆ ಶ್ರೀಧರನೆಂಬ ಪೆಸರು ಬಿ ಟ್ಟುರದ ಲಕ್ಷ್ಮಿಯನು ಕಡೆಗಿರಿಸು ನೋಡುವೆನೊಮ್ಮೆ 1 ಎನ್ನ ಬಿನ್ನಪವೊಂದುಂಟು ಕೇಳೆಲೊ ಸ್ವಾಮಿ ನಿನ್ನ ಬಾಲಬ್ರಹ್ಮಚಾರಿಯೆಂದು ಸನ್ನುತಿಸುತಿದೆ ವೇದ ಶಾಸ್ತ್ರಾಗಮಗಳೆಲ್ಲ ಇನ್ನದಕುಪಾಯವೇನಯ್ಯ ಚೆನ್ನಿಗರಾಯ 2 ಶೃಂಗಾರಗಳನು ತತ್ವಂಗಳನು ಪೇಳುವಡೆ ಗುಂಗುರುಹಿನೊಳಲ್ಪ ಮನುಜನಲ್ಲ ಮಂಗಳಾತ್ಮಕನೆ ಆಡಿಸಿದೊಡಾಡುವೆ ಎನಗೆ ಭಂಗವೇಕಯ್ಯ ವೈಕುಂಠ ಚೆನ್ನಿಗರಾಯ 3
--------------
ಬೇಲೂರು ವೈಕುಂಠದಾಸರು