ಒಟ್ಟು 681 ಕಡೆಗಳಲ್ಲಿ , 94 ದಾಸರು , 586 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತಕಯ್ಯ ತೀರ್ಥಕ್ಷೇತ್ರಗಳುಶ್ರೀ ತುಲಸಿಯ ಸೇವಿಪ ಸುಜನರಿಗೆ ಪ. ಅಮೃತವ ಕೊಡುವ ಹರುಷದೊಳಿರ್ದಕಮಲೆಯರಸನಕ್ಷಿಗಳಿಂದಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧ್ದಿಯೊಳುಆ ಮಹಾತುಲಸಿ ಅಂದುದಿಸಿದಳು 1 ಪರಿಮಳಿಸುವ ಮಾಲೆಯ ನೆವದಿ ಹರಿಯುದರದಲ್ಲಿಸಿರಿಯೊಲಿಹಳುತÀರುಣಿ ತುಲಸಿ ತಪ್ಪದೆಯವನಚರಣವ ರಮೆ ಭಜಿಸೆ ಭಜಿಪಳು2 ಪೂಜಿಸುವರ ಶಿರದಿ ನಿರ್ಮಾಲ್ಯಗಳವ್ಯಾಜದಿಂದ ಲಕ್ಷ್ಮಿಯ ಕೂಡೆ ಬಹಳುಈ ಜಗದೊಳು ತಾವಿಬ್ಬರಿದ್ದಲ್ಲಿಆ ಜನಾರ್ದನನಾಕ್ಷಣ ತಹಳು 3 ಒಂದು ಪ್ರದಕ್ಷಿಣವನು ಮಾಡಿದವರಹೊಂದಿಪ್ಪುದು ಭೂಪ್ರದಕ್ಷಿಣ ಪುಣ್ಯಎಂದೆಂದಿವಳ ಸೇವಿಸುವ ನರರಿಗೆಇಂದಿರೆಯರಸ ಕೈವಲ್ಯವೀವ 4 ತುಲಸಿಯ ನೆಟ್ಟವನು ಮತ್ತೆ ತನಗೆ ಇಳೆಯೊಳು ಪುಟ್ಟುವ ವಾರ್ತೆಯ ಕಳೆವಜಲವೆÀರೆದು ಬೆಳೆಸಿದ ಮನುಜರಕುಲದವರ ಬೆಳೆಸು ವೈಕುಂಠದಲ್ಲಿ 5 ತುಲಸಿಯೆ ನಿನ್ನ ಪೋಲುವರಾರುಮೂಲದಲ್ಲಿ ಸರ್ವತೀರ್ಥಂಗಳಿಹವುದಳದಲ್ಲಿ ದೇವರ್ಕಳ ಸನ್ನಿಧಾನಚೆಲುವಾಗ್ರದಿ ಸಕಲ ವೇದಗಳು 6 ತುಲಸಿ ಮಂಜರಿಯೆ ಬೇಕಚ್ಚುತಂಗೆದಳಮಾತ್ರ ದೊರಕಲು ಸಾಕವಗೆಸಲುವುದು ಕಾಷ್ಠಮೂಲ ಮೃತ್ತಿಕೆಯುಫಲವೀವನಿವಳ ಪೆಸರ್ಗೊಳಲು 7 ಕೊರಳಲ್ಲಿ ಸರ ಜಪಸರಗಳನ್ನುವರ ತುಲಸಿಯ ಮಣಿಯಿಂದ ಮಾಡಿಗುರುಮಂತ್ರವ ಜಪಿಸುವ ನರರುಹರಿಶರಣರ ನೆಲೆಗೆ ಸಾರುವರು8 ಎಲ್ಲಿ ತುಲಸಿಯ ಬನದಲ್ಲಿ ಲಕ್ಷುಮೀ-ವಲ್ಲಭನು ಸರ್ವಸನ್ನಿಹಿತನಾಗಿನೆಲಸಿಹನಿವಳೆಸಳೊಂದಿಲ್ಲದಿರೆಸಲ್ಲದವಂಗನ್ಯಕುಸುಮದ ಪೂಜೆ 9 ಎಲ್ಲ ಪಾಪಂಗಳೊಮ್ಮೊಮ್ಮೆ ಕೈಮುಗಿಯೆಎಲ್ಲಿ ಪೋಪುದು ದೇಶದೇಶಂಗಳಿಗೆನೆಲ್ಲಿ ಮಲ್ಲಿಗೆ ಮೊದಲಾದ ಸೈನ್ಯಅಲ್ಲೀಗಲು ನಮ್ಮ ಬನದಲೊಪ್ಪಿಹಳು 10 ಹರಿಪಾದಕೆ ಶ್ರೀತುಲಸಿಯೇರಿಸಿದನರರನು ಪರಮ ಪದಕೇರಿಸುವುದುನಿರುತದಿ ತುಲಸಿಯ ಕಂಡರವಗೆನರಕಗಳ ದರುಶನ ಮತ್ತಿಲ್ಲ 11 ಪಡಿ ಆಯಿತು ಗಡನ್ನಿವಳ ವೃಂದಾವನದಲ್ಲಿ ನೆಟ್ಟುಮನೆಮನೆ ಮನ್ನಿಸದವನ್ಯಾವ12 ಕನಸಿನಲಿ ಕಂಡಂತೆ ಇನ್ನೊಂದುಕೊನೆವೆರಸಿದ ಪುಷ್ಪದಿ ಜಪಿಸಿಅನುದಿನ ಹಯವದನನ್ನ ತೀರ್ಥವನು ಕೊಂಡು ನಾ ಧನ್ಯನಾದೆನು 13
--------------
ವಾದಿರಾಜ
ಯಾರಂದರೇನು ಫಲವದೆ ನಮ್ಮ ದೃಷ್ಟ ಈ ರೀತಿ ಕಾಡಲು ಬರಿದೆ ಪ ಯಕ್ಷ ಕಿನ್ನರಾದಿವಂದಿತ ಪರಮಾತ್ಮ ಜಲ- ಜಾಕ್ಷ ಕೃಷ್ಣ ಮಾಧವಾಚ್ಯುತ ಪಕ್ಷಿವಾಹನ ಪಾಲಿಸು ಕರಿವರದ ಬೇಗನೆ ನೀನು ಪೇಕ್ಷಿಸದೆ ರಕ್ಷಿಸೆನ್ನ 1 ಇನ ಶಶಿ ಕುಜರಾಹು ಗುರುಬಲ ಇದರ ಮೇಲೆ ಶನಿ ಸೌಮ್ಯ ಕೇತು ಶುಕ್ರ ಗ್ರಹಗಳ ಘನದಿ ಸುಫಲ ಲೇಶಕಾಣದೆ ಬಳಲುವ ವೇಳೆ ಅನಿಮಿಷರೊಡೆಯನ ಮೊರೆ ಹೋಗದೆ 2 ಪರಮ ಪುರುಷ ಪತಿತ ಪಾವನ ಬಿರುದುಳ್ಳ ಹೆನ್ನೆಪುರನಿಲಯ ನರಹರಿ ಚರಣ ಸ್ಮರಣೆ ಹರುಷದಿಂದ ನಿರುತ ಮನದೊಳಾವಾಗ ಪರರ ನಿಂದೆಗೊಳಗಾಗಿ ವೃಥಾ 3
--------------
ಹೆನ್ನೆರಂಗದಾಸರು
ಯಾರಲ್ಲಿ ಪೋದರು ನೀರಾದರೂ ಕೊಡರು ಪ ದೂರ ಹೋಗೆಂಬರು ಬದಿಸೇರಲೀಸರು ಅ.ಪ ಹಸಿವು ತೃಷೆಗಳಿಂದಲಿ ವ್ಯಸನವಪಡುತಲಿ ಉಸುರುಸುರೆನುತಲಿ ಬಸವಳಿದು ಭಯದಲಿ 1 ರೋಗದಲಿ ಬಳಲುತ ಹ್ಯಾಗಿನ್ನು ಎನ್ನುತ ಕೂಗುತ್ತ ಬಾಯ್ಬಿಡುತ ಎಲ್ಲರನು ಬೇಡುತ 2 ಗುರುರಾಮವಿಠಲನ ನೆರೆ ನಂಬದಿರುವನ ಪರಿಪರಿಯಲಿ ಜನ ಬಯ್ಯುವರನುದಿನ 3
--------------
ಗುರುರಾಮವಿಠಲ
ಯಾರು ಬಲ್ಲರು ವೆಂಕಟೇಶ ನಿನ್ನೊಳಿಹ ಚಾರು ಗುಣಶೀಲವೆಂಬ ವಾರಿಧಿಯ ಚಿಪ್ಪಿನೊಳು ಮೊಗೆದು ಬತ್ತಿಸುವಂಥ ವೀರನಾವನು ಜಗದೊಳು ಪ ಹದಿನಾಲ್ಕು ಲೋಕವನ್ನು, ನೀ ನಿನ್ನ ಉದರದೊಳಗಿರಿಸಿಕೊಂಡು ಉದಧಿಮಯವಾಗಿರ್ದ ಕಾಲದೊಳು ನಿನಗೊಂದು ಉದುರಿದೆಲೆಯೊಳು ನಿದ್ರೆಯಂತೆ 1 ಮಾಯೆ ಕಮಲಾಕರದೊಳು, ನಿನ್ನುದರ- ದಾಯತದಿ ತೋರಿ ನಿಲಲು ಮೋಹಿಸಲು ಆ ಕ್ಷಣದಿ ಕಾಯವಾಗಲು ಮೇಲೆ ಬಾಯಿ ನಾಲ್ಕಾಯಿತಂತೆ 2 ಅಲ್ಲಿ ತೋರಿದ ಸೊಲ್ಲನು, ಖಳನೋರ್ವ ನೆಲ್ಲವನು ಸೂರೆಗೊಳಲು ಮಲ್ಲನಾಗಿಯೆ ಜಲದಿ ಘಲ್ಲಿಸಿಯೆ ದೈತ್ಯನನು ಚೆಲ್ವಸಾರವ ಸೆಳೆದೆಯಂತೆ 3 ಅದರ ಆಧಾರದಿಂದ, ಸನಕಾದಿ- ಗುದಯವಾದುದುಯೆಲ್ಲವೂ ಮೊದಲ ಕಾಣದೆ ವೃಕ್ಷವದುರಿ ಬಿದ್ದುದ ನೋಡಿ ತುದಿಯೊಳಗೆ ಕದನವಂತೆ 4 ಒಳ ಹೊರಗೆ ನೀನೊಬ್ಬನೆ, ಹೊಳೆ ಹೊಳೆದು ಸುಳಿವ ಪರಿಯನು ಕಾಣದೆ ಮಲತಾಯಿ ಮಗನೊಳಗೆ ಕಲಹವಿಕ್ಕುವ ತೆರದಿ ಹೊಲಬುದಪ್ಪಿಯೆ ನಡೆವರಂತೆ 5 ಒಂದಿದರಿಂದೆರಡಾದುದು, ಮೂರಾಗಿ ಬಂದು ಇದಿರೊಳು ನಿಂದುದು ಒಂದು ಮಾತಿನೊಳೆರಡು ಸಂದೇಹಗಳ ತೋರಿ ಮಂದ ಬುದ್ಧಿಯ ಕೊಡುವೆಯಂತೆ 6 ಜಡವಾದ ಅಡವಿಯನ್ನು ಸಂಚರಿಸಿ ಒಡಲ ಹೊರೆವುದು ಕಡೆಯೊಳು ಎಡೆಯೊಳೊಪ್ಪಿಸಿ ಕೊಡುವಿಯಂತೆ 7 ನಂಬಿ ಬಂದವರ ನೀನು, ಮನದೊಳಗೆ ಹಂಬಲಿಸಿಕೊಂಡಿರುತಲೆ ಇಂಬಾಗಿ ಇಹಪರದಿ ಉಂಬ ಸಂಭ್ರಮವನ್ನು ಸಂಭವಿಸಿ ತೋರ್ಪೆಯಂತೆ 8 ಭೂಮಿಗೆ ವೈಕುಂಠವೆಂದು, ನಿಂತಿರುವ ಸ್ವಾಮಿಯೆನ್ನೆಡೆಗೆ ಬಂದು ಕ್ಷೇಮವನು ವರಾಹತಿಮ್ಮಪ್ಪ ಕರುಣದಿ ಕಾಮಿತಾರ್ಥವನೀಯೊ ಎಮಗೆ 9
--------------
ವರಹತಿಮ್ಮಪ್ಪ
ಯಾವ ಸಂಭ್ರಮವಿದೇ ವಾರಿಜ ವದನೆ ಶ್ರೀವೇಣುಗೋಪಾಲ ಮನೆಗೆ ಬಂದಿಹನೇ ಪ ದೇವ ದೇವನು ನಿನ್ನ ಪೂಜೆಗೊಪ್ಪಿದನೇ ಯಾವ ವಾತ್ಸಲ್ಯವ ನಿನಗೆ ತೋರಿದನೇ ಅ.ಪ ಗಾನ ನೃತ್ಯಗಳಿಂದ ಒಲಿಸಿದೆಯೇನೇ ಜೇನು ಸಕ್ಕರೆ ಬೆಣ್ಣೆಗಳನಿತ್ತೆಯೇನೇ ಸಾನುರಾಗದಿ ಪೂಜೆ ಮಾಡಿದೆಯೇನೇ ನಾನೇನಗೈದರೆ ಅವನೊಲಿಯುವನೇ1 ಪರಿಮಳ ಗಂಧಕೆ ಮೈ ತೋರುವನೇ ಕೊರಳಿಗೆ ಹಾರವ ನೀಡಲೊಪ್ಪುವನೇ ಮುರಳಿಯ ಗಾನವನೊಲಿದು ಕೇಳುವನೇ ಪರಮಪುರುಷ ಬಾರೆಂದರೆ ಬಹನೇ 2 ಕರಗಳ ಮುಗಿದರೆ ಕರುಣಿಪನೇನೇ ಚರಣಕೆ ಮಣಿದರೆ ಒಲಿಯುವನೇನೇ ಪರಿಪರಿ ಹೊಗಳಲು ನಲಿಯುವನೇನೇ ವರದ ಮಾಂಗಿರಿರಂಗ ದಯೆ ತೋರನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾವಪರಾಧ ಮಾಡಿದೆನೋ ರಂಗ ಈ ವಸುಧೆಯೊಳಿನ್ನು ಬಳಲುವೆನೋ ರಂಗ ಪ ಯಾವ ಪಕ್ಷಿಗೆ ಬಲೆ ಬೀಸಿದೆನೋ ರಂಗ ಯಾವ ಜೀವಿಗೆ ಗಾಳ ಹಾಕಿದೆನೋ ರಂಗ ಅ.ಪ ಯಾವ ಎಳಗೂಸನು ಬಾವಿಗೆ ತಳ್ಳಿದೆ ಯಾವ ತಪಸಿಗೆ ಭಂಗವಗೈದೆ ಯಾವ ದಂಪತಿಗಳ ಬೇರೆಗೈದೆನೊ ರಂಗ ಜೀವನು ನಾನೇನ ವಂಚನೆಗೈದೆನೊ 1 ಅಪರಾಧಂಗಳು ವಿಪರೀತವಾದರೂ ವಿಪುಲ ಕೃಪಾಕರ ನೀನಹುದಯ್ಯ ಅಪಕೃತಿಗೈದರೂ ಉಪಕೃತಿಗೈವೆ ನೀ ಕುಪಿತನಾಗದೆ ಕಾಯೋ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಕ್ಷಿಸಿ ಪೊರೆಯೊ ದೇವನೆ ಪಕ್ಷಿವಾಹನನೆ ಸೂಕ್ಷ್ಮ ಸ್ಥೂಲದಿ ವ್ಯಾಪ್ತನೆ ಪ ಲಕ್ಷ್ಮಿರಮಣ ಪುರುಷೋತ್ತಮ ಪುರುಷನೆ ಕುಕ್ಷಿಯೊಳಗೆ ಜಗ ರಕ್ಷಿಸಿ ಪೊರೆವನೆ ಅಕ್ಷರೇಢ್ಯ ಕಮಲೇಕ್ಷಣ ಮಾಧವ ರಕ್ಷ ಶಿಕ್ಷಕ ಜಗದ್ರಕ್ಷಕ ಹರಿಯೆ ಅ.ಪ ವಿಶ್ವರೂಪನೆ ಶ್ರೀಹರಿ ವಿಶ್ವವ್ಯಾಪಕನೆ ವಿಶ್ವತೋ ಮುಖನೆ ಶ್ರೀಶನೆ ವಿಶ್ವನಾಟಕನೆ ದೇವನೆ ವಿಶ್ವೋದ್ಧಾರಕನೆ ವಿಶ್ವಮಯನೆ ಶ್ರೀ ವಿಶ್ವನೆ ವಿಶ್ವರೂಪ ತಾಯಿಗೆ ಬಾಯೊಳು ತೋದರ್À ವಿಶ್ವರೂಪ ಮೈದುನನಿಗೆ ತೋರಿದ ವಿಶ್ವರೂಪ ಸಭೆಯೊಳು ಭಕ್ತರಿಗೆ ತೋರ್ದ ವಿಶ್ವ ಮೂರುತಿಯೆ 1 ಹಿಂದಿನ ಕರ್ಮಫಲದಲಿ ಬಂದು ಈ ಭವದಿ ಕಂದಿ ಕುಂದಿದೆನೋ ವ್ಯಥೆಯಲಿ ಬಂಧ ಮೋಚಕನೆನುತಲಿ ಬಂದೆರಗುತಲಿ ತಂದೆ ನೀ ಪೊರೆಯಬೇಕೆನುತಲಿ ಮಂದರೋದ್ಧರ ಗೋವಿಂದ ನಿನ್ನಯ ಪಾದ ದ್ವಂದ್ವಕೆ ನಮಿಸುವೆ ಬಂಧನ ಬಿಡಿಸೆಂದು ಇಂದು ಮುಂದು ಎಂದೆಂದಿಗೂ ನೀ ಗತಿ ಇಂದಿರೆ ರಮಣ2 ಶ್ರಮವ ಪರಿಹರಿಸೊ ಶ್ರೀಶನೇ ಶ್ರೀನಿಕೇತನನೆ ಕಮಲ ಸಂಭವನ ತಾತನೆ ಕಮಲ ಲೋಚನನೆ ಕಮಲ ಪೊಕ್ಕಳಲಿ ಪಡೆದನೆ ಕಮಲ ಭವೇಂದ್ರಾದ್ಯಮರರು ಪೊಗಳಲು ಕಮಲನಾಭ ವಿಠ್ಠಲ ವಿಠ್ಠಲನೆಂದು ಕಮಲಪುಷ್ಪ ಮಾಲಾಲಂಕೃತ ಶೋಭಿತ ಕಮಲದಳಾಕ್ಷನೆ ಕಮನೀಯರೂಪ 3
--------------
ನಿಡಗುರುಕಿ ಜೀವೂಬಾಯಿ
ರಕ್ಷಿಸೊ ಜಾನಕಿ ಕಾಂತ ಶಾಂತ ಪ ತಕ್ಷಣದಲಿ ಉಪೇಕ್ಷೆಯ ಮಾಡದೆ ಅ.ಪ ದಕ್ಷ ನಾನಲ್ಲವೊ ಪೊಗಳಲು ಶಾಸ್ತ್ರ ವಿ ಚಕ್ಷಣೆಯರಿಯೆನೋ ಲಕ್ಷ್ಮೀನಾಥ1 ಸಂತತಪಡುತಿಹ ಚಿಂತೆಯ ಬಿಡುತಲಿ ಶಾಂತಿಯ ಪೊಂದುವ ತಂತ್ರವ ತೋರುತ 2 ಬೇಡುವ ವಿಧದಲಿ ರೂಢಿಯಿಲ್ಲದೆ ಬಲು ಪಾಡುಪಡುತಿಹೆನೋ ನೀಡುತ ಕರವನು 3 ಕ್ಷೀಣಿಸೆ ಉರುತರ ತಪಗಳಿಂ ತನುವನು ತ್ರಾಣವಿಲ್ಲವೋ ರಮಾಪ್ರಾಣನಾಥನೆ 4 ಕೆಟ್ಟಯೋಚನೆ ಎನ್ನ ಮುಟ್ಟದೆ ಮನವನು ಘಟ್ಟಿಯ ಮಾಡುತ ಶಿಷ್ಟ ಪ್ರಸನ್ನನೇ 5
--------------
ವಿದ್ಯಾಪ್ರಸನ್ನತೀರ್ಥರು
ರಂಗ ಕೊಳಲನೂದುತ ಬಂದಯಶೋದೆಯ ಕಂದ ಪ ಕೊಳಲ ಧ್ವನಿಗೆ ವಿರಹವು ನಾರಿಯರಿಗೆಕಳಕಳÀವಾಗಲು ಕಳಕಳಿಸುತ ಅ.ಪ. ಶೃಂಗಾರ ಕೊಳಲ ಗಾಯನ ಮಾಡೆಸ್ತ್ರೀಯರು ನೋಡೆ ರಂಗನ ಪಾದದಲಿ ಮನ ಹೂಡೆಭೃಂಗಾಮೃತ ತೈಲದಿಅಂಗನೆಯರು ಝಳಕವ ಮಾಡೆದೇವರ್ಕಳು ನೋಡೆತುಂಗವಿಹಂಗ ಭುಜಂಗ ನವಿಲು ಸಾ -ರಂಗ ಗಿಣಿಯು ಮಾತಂಗ ಮರಿಯು ಕು-ರಂಗ ಮಧ್ಯೆ ಚರಣಂಗಳೆಡೆಗೆ ವೇ-ದಂಗಳೆರಗೆ ಕಾಮಂಗಳಲುಗೆ ನೇ-ತ್ರಂಗಳಿಗತಿ ಚಿತ್ರಂಗಳಾಗೆ ಆರಂಗನೂದ್ವ ಸಾರಂಗ ಕೇಳಿ ಋಷಿಪುಂಗಸಹಿತ ತಾವುಗಳು ಬರೆ ನರ-ಸಿಂಗನೂದಿದ ಜಗಂಗಳ ಮೋಹಿಸಿ1 ಬಂಗಾರ ಬಟ್ಟಲೊಳಗೆ ಅಂದುಕ್ಷೀರವ ತಂದು ರಂಗಗರ್ಪಿಸುವೆವು ನಾವೆಂದುಹರುಷದೊಳಂದು ಅಂಗನೆಯರು ಮೈಮರೆತು ನಿಂದುಒಲಿಯಬೇಕೆಂದು ಮಂಗಳ ಮಹಿಮನು ನೀನೆಂದುಅತಿಭಕುತಿಯೊಳಂದುತುಂಗ ವಿಕ್ರಮನ ಪದಂಗಳಿಗೆರಗಲುರಂಗ ನೆಗಹಿ ಕರಂಗಳ್ಹಿಡಿಯ ಮೋ-ಹಂಗಳಿಂದ ವಿರಹಗಳ್ಹೆಚ್ಚಿ ರವಿಕೆಂಗಳುಡೆಯ ಕುಚಂಗಳು ಬಿಟ್ಟಾ-ಲಿಂಗಿಸುತಿರೆ ಶ್ರೀ ಮಂಗಳಾಂಗಗೆ ಪು-ಷ್ಪಂಗಳಿಂದ ವರುಷಂಗಳು ಮೇಲ್ ಸುರ-ರಂಗಳು ಸುರಿಯೆ ಉತ್ತುಂಗ ಮಹಿಮ ಹರುಷಂಗಳ ಬೀರುತ ಅಂಗನೆಯರಿಗೆ 2 ಮಂದಿರ ಮಾನಿನಿಯರು ಬಿಟ್ಟುಮನದಲಿ ಕಂಗೆಟ್ಟುಮಂದರೋದ್ಧರನಲ್ಲೆ ಮನವಿಟ್ಟುಕರೆಕರೆಯ ಬಿಟ್ಟುಚಂದದಿ ಕರ್ಪೂರ ವೀಳ್ಯವನಿಟ್ಟುಸಡಗರವ ತೊಟ್ಟುಒಂದಾಗಿ ಚೆದರುತ ತೋಷವ ತೊಟ್ಟುತ್ವರೆ ಬರುವರು ಅಷ್ಟುಅಂದದಿಂದಲಾನಂದವೇರಿ ಮು -ಕುಂದನಂಘ್ರಿ ಮುದದಿಂದ ಸ್ಮರಿಸಿ ಬರು-ವಂದ ನೋಡಿ ಗೋವಿಂದ ಕೊಳಲ ಬಹುಅಂದದೊಳಿಡೆ ಈ ಇಂದುವದನೆಯರುಚಂದ್ರನುದಯವಾದಂತೆ ಆಯ್ತು ಮನಗಂಧ ಕಸ್ತೂರಿ ತಂದು ಆಗ ಹರಿಕಂದರದೊಳಗಿಡೆ ರಂಗವಿಠಲ ದಯದಿಂದ ನೋಡ್ದ ಪುರಂಧ್ರಿಯರನ್ನು3
--------------
ಶ್ರೀಪಾದರಾಜರು
ರಂಗ ಬಾರೊ ನರಸಿಂಗ ಬಾರೊ ಪ. ಸಾಸಿರ ಮೂರುತಿ ವಾಸವವಂದ್ಯನೆಸಾಸಿರನಾಮದೊಡೆಯನೆಸಾಸಿರನಾಮದೊಡೆಯನೆ ನರಹರಿಕೇಶವ ನಮ್ಮ ಮನೆದೈವ 1 ವಾರಣವಂದ್ಯನೆ ಕಾರುಣ್ಯರೂಪನೆಪುರಾಣಗಳಲ್ಲಿ ಪೊಗಳುವಪುರಾಣಗಳಲ್ಲಿ ಪೊಗಳುವ ನರಹರಿನಾರಾಯಣ ನಮ್ಮ ಮನೆದೈವ2 ಯಾದವಕುಲದಲ್ಲಿ ಸಾಧುಗಳರಸನೆಭೇದಿಸಿ ದನುಜರ ಗೆಲಿದನೆಭೇದಿಸಿ ದನುಜರ ಗೆಲಿದನೆ ನರಹರಿಮಾಧವ ನಮ್ಮ ಮನೆದೈವ 3 ದೇವೆಂದ್ರ ಮಳೆಗರೆಯೆ ಗೋವರ್ಧನ ಗಿರಿಯೆತ್ತಿಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿ ಕಾಯಿದನೆಗೋವಿಂದ ನಮ್ಮ ಮನೆದೈವ 4 ಸೃಷ್ಟಿಗೆ ಕರ್ತನೆ ದುಷ್ಟಕಂಸನ ಗೆಲಿದುಶಿಷ್ಟಪರಿಪಾಲನೆನಿಸಿದಶಿಷ್ಟಪರಿಪಾಲನೆನಿಸಿದ ನರಹರಿವಿಷ್ಣುವೆ ನಮ್ಮ ಮನೆದೈವ5 ಮಧುವೆಂಬೊ ದೈತ್ಯನ ಮುದದಿಂದ ಗೆಲಿದನೆವಿದುರನ ಮನೆಯಲಿ ನಲಿದುಂಡವಿದುರನ ಮನೆಯಲಿ ನಲಿದುಂಡ ನರಹರಿಮಧುಸೂದನ ನಮ್ಮ ಮನೆದೈವ 6 ಚಕ್ರವ ಪಿಡಿದನೆ ಭೂಚಕ್ರವ ಗೆಲಿದನೆಅಕ್ರೂರನೊಡನೆ ಮಧುರೆಗೆಅಕ್ರೂರನೊಡನೆ ಮಧುರೆಗೆ ಪೋದ ತ್ರಿ-ವಿಕ್ರಮ ನಮ್ಮ ಮನೆದೈವ7 ಸಾಮವನೋದುತ್ತ ದಾನವ ಬೇಡುತ್ತನಾಮದ ಮಹಿಮೆ ಪೊಗಳುತ್ತನಾಮದ ಮಹಿಮೆ ಪೊಗಳುತ್ತ ನರಹರಿವಾಮನ ನಮ್ಮ ಮನೆದೈವ8 ಶ್ರೀಧರ ಎಸಿಸಿದ ಶ್ರೀವತ್ಸ ಲಾಂಛನಶ್ರೀಧರ ಗೋಪೀತನಯನೆ ಶ್ರೀಧರ ಗೋಪೀತನಯನೆ ನರಹರಿಶ್ರೀಧರ ನಮ್ಮ ಮನೆದೈವ 9 ಋಷಿಜನ ವಂದ್ಯನೆ ಬಿಸಜನಾಭನೆ ದೇವಋಷಿಜನರಿಗೆಲ್ಲ ಅಭಯವಋಷಿಜನರಿಗೆಲ್ಲ ಅಭಯವ ಕೊಡುವೋನೆಹೃಷಿಕೇಶನೆ ನಮ್ಮ ಮನೆದೈವ10 ಪದುಮಸಂಭವಪಿತ ಪದುಮದಾಮೋದರ[ಪದುಮ]ದಿಂದಭಯವ ಕೊಡುವೋನೆ[ಪದುಮ]ದಿಂದಭಯವ ಕೊಡುವೋನೆ ನರಹರಿಪದುಮನಾಭನೆ ನಮ್ಮ ಮನೆದೈವ 11 ನಾಮದ ಮಹಿಮೆಯ ಪ್ರೇಮದಿ ಪೊಗಳಲುಕಾಮಿತಾರ್ಥಗಳ ಕೊಡುವೋನೆಕಾಮಿತಾರ್ಥಗಳ ಕೊಡುವೋನೆ ನರಹರಿದಾಮೋದರ ನಮ್ಮ ಮನೆದೈವ 12 ಸಂಕಟಗಳ ತರಿವೋನೆ ಪಂಕಜನಾಭನೆಶಂಕೆಯಿಲ್ಲದೆ ಅಸುರರಶಂಕೆಯಿಲ್ಲದೆ ಅಸುರರ ಸಂಹರಿಸಿದಸಂಕರ್ಷಣ ನಮ್ಮ ಮನೆದೈವ 13 ವಸುದೇವತನಯನೆ ಶಿಶುಪಾಲನ ಗೆಲಿದನೆವಶವ ಮಾಡಿದೆಯೊ ತ್ರಿಪುರರವಶವ ಮಾಡಿದೆಯೊ ತ್ರಿಪುರರ ನರಹರಿವಾಸುದೇವ ನಮ್ಮ ಮನೆದೈವ14 ಶುದ್ಧಸ್ವರೂಪನೆ ಶುದ್ಧ ಭಕ್ತರನು ಸಲಹಯ್ಯಹದ್ದುವಾಹನನಾದ ದೇವನೆಹದ್ದುವಾಹನನಾದ ದೇವನೆ ನರಹರಿಪ್ರದ್ಯುಮ್ನ ನಮ್ಮ ಮನೆದೈವ 15 ವನಜಲೋಚನ ಹರಿ ವಿನಯ ಉಳ್ಳವನೆಧ್ವನಿಕೇಳಿ ಬಂದ ಕುಬುಜೆಯ ಧ್ವನಿಕೇಳಿ ಬಂದ ಕುಬುಜೆಯ ನರಹರಿಅನಿರುದ್ಧ ನಮ್ಮ ಮನೆದೈವ 16 ಪಾರಿಜಾತದ ಹೂವ ನಾರಿಗೆ ಇತ್ತನೆವೀರ ದಾನವರ ಗೆಲಿದನೆವೀರ ದಾನವರ ಗೆಲಿದನೆ ನರಹರಿಪುರುಷೋತ್ತಮ ನಮ್ಮ ಮನೆದೈವ 17 ಅಕ್ಷಯಪದವೀವ ಪಕ್ಷಿವಾಹನಸ್ವಾಮಿಕುಕ್ಷಿಯೊಳೀರೇಳು ಭುವನವಕುಕ್ಷಿಯೊಳೀರೇಳು [ಭುವನವನಾಳಿದ] ನರಹರಿ ಅ-ಧೋಕ್ಷಜ ನಮ್ಮ ಮನೆದೈವ18 ನರಕಾಸುರನ ಕೊಂದು ಹಿರಣ್ಯನ ಮರ್ದಿಸಿಕರುಳ ಬಗೆದು ವನಮಾಲೆ ಹಾಕಿಕರುಳ ಬಗೆದು ವನಮಾಲೆ ಹಾಕಿದ ಹರಿನರಸಿಂಹನೆ ನಮ್ಮ ಮನೆದೈವ19 ಅಚ್ಚ್ಚುತಾನಂತನೆ ಸಚ್ಚಿದಾನಂದನೆ[ಮಚ್ಚಾವತಾರದಿ] ನಲಿದನೆ[ಮಚ್ಚಾವತಾರದಿ] ನಲಿದನೆ ನರಹರಿಅಚ್ಚುತ ನಮ್ಮ ಮನೆದೈವ 20 ಜಾನಕಿರಮಣನೆ ದಾನವಾಂತಕನೆದೀನರಕ್ಷಕನೆ ಸಲಹಯ್ಯದೀನರಕ್ಷಕನೆ ಸಲಹಯ್ಯ ನರಹರಿಜನಾರ್ದನ ನಮ್ಮ ಮನೆದೈವ 21 ಅಪರಿಮಿತಮಹಿಮನೆ ವಿಪರೀತ ಚರಿತನೆ[ಗುಪಿತವೇಷಗಳ] ತಾಳಿದನೆ[ಗುಪಿತವೇಷಗಳ] ತಾಳಿದ ನರಹರಿಉಪೇಂದ್ರ ನಮ್ಮ ಮನೆದೈವ 22 ಹರನ ಭಸ್ಮಾಸುರನು ಮರಳಿ ಬೆನ್ನ್ಹತ್ತಲುತರುಣಿರೂಪವನು ತಾಳಿದÀನೆತರುಣಿರೂಪವನು ತಾಳಿದ ನರಹರಿ ಶ್ರೀ-ಹರಿಯೆ ನಮ್ಮ ಮನೆದೈವ 23 ಕೃಷ್ಣಾವತಾರದಲಿ ದುಷ್ಟರ ಗೆಲಿದನೆವೃಷ್ಣಿಯರ [ಕುಲತಿಲಕನೆ]ವೃಷ್ಣಿಯರ [ಕುಲತಿಲಕನೆ] ನರಹರಿ ಶ್ರೀ-ಕೃಷ್ಣನೆ ನಮ್ಮ ಮನೆದೈವ 24 ಇಪ್ಪತ್ತು ನಾಲ್ಕು ನಾಮಂಗಳ ಪಾಡುವೆನುಅಪ್ಪ ಕೇಶವನ ಚರಿತೆಯನುಅಪ್ಪ ಕೇಶವನ ಚರಿತೆಯನು ಪಾಡಲುಒಪ್ಪಿಸಿಕೊಳ್ಳುವ ಹಯವದನ25
--------------
ವಾದಿರಾಜ
ರಂಗಬಾರನ್ಯಾತಕೆ ಸಖಿಯೆ ಮುದ್ದು ಪ ಶರಧಿಯ ಪೊಕ್ಕನೇನೆ ಸುರರೆಲ್ಲರು ಕೂಡಿ ಗಿರಿಯ ಬೆನ್ನಾಲಿ ಅವರು ಪೊರಿಸಿದರೇನೆ 1 ಧರೆಯನೆತ್ತಲು ಪೋಗಿ ನರಹರಿಯಾದನೇನೇ ಗರುವರಹಿತ ಬ್ರಹ್ಮಚಾರಿಯಾದನೇನು 2 ಪರಶುಪಿಡಿದು ಕ್ಷತ್ರಿಯರ ಸವರುವೆನೆಂದು ಗಿರಿವನಗಳಲಿ ತಾನು ಚರಿಸುತಲಿಹನೇನೇ 3 ಸ್ಮರನ ಪಿತನು ತಾನು ನಾರಿ ಪಾಂಚಾಲೆಯ ಮೊರೆಯ ಕೇಳುತ ಭರದಿ ಸಾರಿದನೇನೆ 4 ಮಾನವ ತಾ ಸೂರೆಗೊಳ್ಳಲು ತೇಜಿ ಏರಿ ಪೋದನೇನೆ ಶ್ರೀ ರಂಗೇಶವಿಠಲ 5
--------------
ರಂಗೇಶವಿಠಲದಾಸರು
ರಥವೇರಿ ಬರುತಿಹ ಗುರುವರನ್ಯಾರೆ ಪೇಳಮ್ಮಯ್ಯಾ ಪ ಟೀಕಾಕೃಧ್ಯ ತಿವರನಮ್ಮ ಅ.ಪ ಸ್ವೀಕರಿಸಿ ಮಾರುತನವತರಿಸಿ ಶೃತಿಸಮ್ಮತ ಶ್ರೀಮಧ್ಭಾಷ್ಯವತಾರಚಿಸಿ ಛಾತ್ರರಿಗೆ ವಿವರಿಸೆ ಕೇಳುತಲನುದಿನದಿ ಮಹಿಮ ಸುರಪತಿಯು ಕಾಣಮ್ಮ 1 ದೇಶಪಾಂಡ್ಯರಕುವರ ಕೇಳಲು ಗುರುವಚನ ಸಂಸಾರ ಸುಖವನ ಜಯ ತೀರಥರಮ್ಮ 2 ಸ್ಥಾಪಿಸಿದರು ಮುದದಿ ಶುದ್ಧಮಾಯಿ ಸುಭಟಧ್ವಜನಿಯ ಓಡಿಸಿದ ವಾಕ್ಸಾಯಕದಿಂದ ಮಧ್ವರಾಜಕೃತ ಸದ್ಗ್ರಂಥಗಳ ವಿಸ್ತಾರ ಮಾಡಿದ ಯತಿಧೀರಾ ಗೆಲಿದ ಪ್ರಸಿದ್ಧ ಕಾಣಮ್ಮ 3 ಚಾಮೀಕರಕೃತ ಚಾಮರ ಛತ್ರಗಳಿಂದ ಸೇವಿಪದ್ವಿಜರಿಂದ ಶ್ರವಣಕೆ ಪೀಯೂಷ ಭವಬಾಧೆ ಬಿಡಿಸಿದ ಶ್ರೀಮಳಖೇಡ ಸುಧಾಮ ಕಣಮ್ಮ4 ತೋಷಿತ ಬುಧನಿಕರ ಪಾವನತರಚರಿಯ ಶರಣುಜನಕೆ ಸುರತರುವೆನಿಸಿದ ಜಯರಾಯಾ ವಿದ್ವಜ್ಜನಗೇಯಾ ಧರೆಯೊಳು ಸಿರಿಕಾರ್ಪರ ನರಸಿಂಹನೆ ಪರನೆಂದರುಹಿದ ಗುರುವರನಮ್ಮ5
--------------
ಕಾರ್ಪರ ನರಹರಿದಾಸರು
ರಾಘವೇಂದ್ರ ಗುಣಸಾಗರ ನೋಡೆನ್ನಹರಿಯ ತೋರಿನ್ನ ಪ ಮಂತ್ರಾಲಯದೊಳು ಮಂದಿರ ಮಾಡಿರುವಿ ಮನೆಮನೆಯಲ್ಲಿರುವಿಸಂತತಿ ಸಂಪತ್ತುಗಳನು ನೀ ಕೊಡುವಿಸಂತರ ರಕ್ಷಿಸುವಿತಂತ್ರ ದೀಪಿಕೆಯೆಂಬೊ ಗ್ರಂಥವರಚಿಸಿರುವಿ ಸೂತ್ರಾರ್ಥಗಳರುಹಿ 1 ಎಷ್ಟೋ ಗ್ರಂಥಗಳ ವ್ಯಾಖ್ಯಾನವ ಮಾಡಿದೇವಾರ್ಥವ ನೋಡಿಕೆಟ್ಟವಾದಿಗಳ ವಾದದಿ ಜಯಮಾಡಿಸೂರಿಗಳನು ಕೂಡಿಕುಷ್ಠಮದಾದಿ ರೋಗಗಳನು ಹರಿ ಬೇಡಿಕಳೆಯುವ ಗುರುಮೇಧಿ 2 ಒಂದು ಚರಿತೆಯ ಪೇಳಲು ನಾನರಿಯೆಇರುವೆನು ಈ ಪರಿಯೆನಂದಬಾಲನ ಪ್ರಿಯ ನೀ ಎನಗೊಲಿಯೆದುರಿತಾಬ್ಧಿಗೆ ಸರಿಯೇಇಂದಿರೇಶನ ಪದ ಸಂದರುಶನ ದೊರೆಯೆನಿನ್ನಯ ನಾ ಮರೆಯೆ 3
--------------
ಇಂದಿರೇಶರು
ರಾಘವೇಂದ್ರ ಗುರು ನಮೋ ನಮೋ ಯೋಗಿಜನೇಡಿತ ನಮೋ ನಮೋ ಪ ವಾದಿಜಯಪ್ರದ ನಮೋ ಸಾಧುಜವಾವ ನಮೋ ನಮೋಶ್ರೀಧರ ಬೋಧಕ ನಮೋ ಅಗಾಧತವ ಮಹಿಮ ನಮೋ 1 ಎಷ್ಟು ದಿನವಾಯಿತು ನಮೋ ಶ್ರೀ ಕೃಷ್ಣನ ಕಾಣದೆ ನಮೋಭೆಟ್ಟಿಯ ಮಾಡಿಸು ನಮೋ ವಿಷ್ಣು ದಾಸರೇಣ್ಯನೆ ನಮೋ 2 ತುಷ್ಟ ಮುಖಾಯ ನಮೋ ಶಿಷ್ಯರು ಸೇವಿಸೆ ನಮೋದೃಷ್ಟಿಲಿ ಕಳೆಯುವಿ ನಮೋ ಸರ್ವೇಷ್ಯವರಪ್ರದ ನಮೋ 3 ಚೂತರಸದಿ ಹರಿ ನಮೋ ಪೋತನು ಬೀಳಲು ನಮೋಆ ತನು ತ್ಯಜಿಸಿದ ನಮೋ ಜೀವಾತು ನೀನಾದೆ ನಮೋ 4 ವರಜಯತೀರ್ಥರ ನಮೋ ಸುರಸ ಸುಗ್ರಂಥಕೆ ನಮೋಪರಿಮಳ ಟೀಕೆಯ ನಮೋ ವಿರಚಿಸಿ ರಾಜಿಪೆ ನಮೋ 5 ರತುನಮಾಲಿಯ ನಮೋ ಹುತವಹಗಿತ್ತೆಯೋ ನಮೋಅತಿಶಯ ಪ್ರಾರ್ಥಿಸೆ ನಮೋ ಪ್ರಥಮ ತೆಗೆದುಕೊಟ್ಟೆ ನಮೋ 6 ನಾರದ ಶಿಷ್ಯನೆ ನಮೋ ನಾರಸಿಂಹಾರ್ಚಕ ನಮೋಸೇರಿ ಭಜಿಸಿ ನಿಮ್ಮ ನಮೋ ಎನ್ನ ಚಾರುದೃಷ್ಟಿಲಿನೋಡು ನಮೋ 7 ನಾಕವತಾರನೆ ನಮೋ ಲೋಕನಾಥಾಶ್ರಯ ನಮೋಕಾಕು ದರ್ಮತ ಹರ ನಮೋ ಶ್ರೀಕರ ಸೇವಕ ನಮೋ 8 ವೃಂದಾವನದಲಿ ನಮೋ ನಮೋ ಭಕ್ತ ವೃಂದರಲಿಂದು ನೀ ನಮೋಬಂದು ಮಾತಾಡುವಿ ನಮೋ ಇಂದಿರೇಶನ ಪ್ರಿಯನಮೋ ನಮೋ 9
--------------
ಇಂದಿರೇಶರು
ರಾಜೀವದಳನೇತ್ರ ರಾಮಚಂದ್ರನೆ ಶುಭ- ನಾಮಧೇಯನೆ ನಿನಗಾನಮಿಸುವೆನು ಪ ರಾಮರಾಕ್ಷಸಕುಲ ಭಯಂಕರ ರಾಮದಶರಥ ಪುತ್ರನೆ ವರ ಸಾಮಗಾನ ವಿಲೋಲ ಶ್ರೀವರ ರಾಮ ಭರತ ಶತ್ರುಘ್ನ ಪಾಲಕ ಅ.ಪ ಸುರರೆಲ್ಲ ನೆರೆದು ಋಷಿವರರೆಲ್ಲ ಒಂದಾಗಿ ವರ ಕ್ಷೀರಾಂಬುಧಿಯ ಸಾರುತ ವೇಗದಿ ಪರಮಾತ್ಮ ನಿನ ಕಂಡು ಪರಿಪರಿ ಸ್ಮರಿಸುತ ನೆರೆದರು ದೇವ ಗಂಧರ್ವ ನಾರದರೆಲ್ಲ ಗರುಡ ಗಮನನೆ ಉರಗಶಯನನೆ ಪರಮ ಪುರುಷನೆ ಪುಣ್ಯಚರಿತನೆ ತ್ವರದಿ ಎಮ್ಮಯ ಮೊರೆಯ ಕೇಳೆಂದು ಭರದಿ ಪ್ರಾರ್ಥನೆ ಮಾಡುತಿಹರು 1 ಖೂಳ ದೈತ್ಯರು ನಮ್ಮ ಬಾಳಗೊಡರೊ ದೇವ ಭಾಳ ವ್ಯಾಕುಲರಾಗಿ ದು:ಖಿಪೆವು ಕೇಳಿ ತಡಮಾಡದೆ ಪಾಲಿಸಿ ಸಲಹಯ್ಯ ಶ್ರೀಲೋಲ ಶ್ರೀವರ ಶ್ರೀವತ್ಸಲಾಂಛನ ಶ್ರೀಶ ಶ್ರೀ ಭೂದೇವಿ ರಮಣನೆ ಮಾತುಳಾಂತಕ ಮದನಜನಕನೆ ವಾಸುದೇವನೆ ಭಜಿಪ ಭಕ್ತರ ಸೋಸಿನಲಿ ರಕ್ಷಿಸುತ ಪೊರೆಯುವೆ 2 ಭಕ್ತವತ್ಸಲ ಸ್ವಾಮಿ ಭಕ್ತರ ಸುರಧೇನು ಯುಕ್ತ ಮಾತುಗಳಾಡಿ ಸಂತಯಿಸಿ ಸತ್ಯ ಸಂಕಲ್ಪನು ಮತ್ತವರನು ಕಳುಹಿ ಸತ್ಯಸಂಧನ ದಶರಥನುದರದಿ ಪುಟ್ಟಿ ಮತ್ತೆ ವಿಶ್ವಾಮಿತ್ರ ಬರಲು ಅರ್ಥಿಯಲಿ ಯಾಗವನೆ ನಡೆಸಲು ಸುತ್ತಿ ಬರುವ ಸುರರನೆ ಸದೆದು ಮತ್ತೆ ಯಾಗ ನಿರ್ವಿಘ್ನ ಮಾಡಿದ 3 ಸೀತಾಸ್ವಯಂವರಕ್ಕಾಗಿ ಬರುತಿರಲಾಗವರು ಗೌತಮ ಸತಿಯ ಶಾಪಹರಿಸಿ ಪಾತಕಿ ತಾಟಕಿಯನು ಕೊಂದು ಹರುಷದಿ ನಿ- ರ್ಭೀತನಾಗಿ ಮಿಥಿಲಾಪುರಕೆ ಸೇರಲು ಬಂದು ಆತ ಲಕ್ಷ್ಮಣನೊಡನೆ ಶಿವಧನು ನೀತಿಯಿಂದೆತ್ತುತಲಿ ಸೀತೆಯು ಪ್ರೀತಿಯಲಿ ವನಮಾಲೆ ಹಾಕಲು ಆಕೆಯ ಕೈಪಿಡಿದ ರಾಮನೆ 4 ರಾಮಲಕ್ಷ್ಮಣ ಭರತ ಶತ್ರುಘ್ನರಿಗೆ ಲಗ್ನ ನೇಮದಿಂದಲಿ ಮಾಡಿ ಕಳುಹಲಾಗ ಸಾಮಜವರ ಅಯೋಧ್ಯಾಪುರದಿ ಭಕ್ತ- ಸ್ತೋಮವನೆರಹಿ ರಾಜ್ಯಾಭಿಷೇಕವ ನಡಸೆ ಆ ಮಹಾಮುನಿ ಸ್ತೋಮ ಸುರಗಣ ರಾಮನಿಗೆ ಪಟ್ಟವೆನುತ ಹರುಷಿಸೆ ಆ ಮಹಾಕೈಕೆ ವರವ ಬೇಡುತ ರಾಮನಿಗೆ ವನವಾಸವೆನಲು 5 ವನವನ ಚರಿಸುತ ಘನರಕ್ಕಸರ ಕೊಂದು ವನಜಾಕ್ಷಿ ಮಾಯಾಮೃಗವೆ ಬೇಡಲು ವನಮೃಗ ಬೆನ್ನಟ್ಟಿ ತರುವೆನೆನುತ ಪೋಗಿ ಬಣಗು ರಾವಣ ಸೀತಾಹರಣವ ಮಾಡಲು ಕುರುಹು ಕಾಣದೆ ಸೀತೆಯ ವನವನದಿ ಚರಿಸುವ ಸಮಯದಲಿ ಕಪಿ ವರರ ಸೈನ್ಯವ ಕಳುಹಿ ಮುದ್ರಿಕೆ ಇತ್ತು ಜನಕ ಜಾತೆಯ ನೋಡಿ ಬರಲು 6 ಕಡಲ ಕಟ್ಟುತ ಸೈನ್ಯ ನಡಿಸಿ ಯುದ್ಧವ ಮಾಡೆ ಬಿಡದೆ ರಾವಣ ಸಹಿತೆಲ್ಲರನು ಕೊಂದು ಕಡು ಭಕ್ತನಿಗೆ ಲಂಕಾಪುರದಲಿ ಪಟ್ಟವ ಕಟ್ಟಿ ಮಡದಿ ಸಹಿತ ಪುಷ್ಪಕವನೇರಿ ಬರುತಿರೆ ಸಡಗರದಿ ಹನುಮಂತ ಭರತಗೆ ಒಡೆಯ ಬರುತಿಹನೆಂದು ಪೇಳಲು ಕಡುಹರುಷದಿ ಅಯೋಧ್ಯೆಯನಾಳಿದ ಕಡಲೊಡೆಯ ಕಮಲನಾಭ ವಿಠ್ಠಲನೆ 7 ಬಂದ ಶ್ರೀರಾಮಚಂದ್ರ ಭಾಗವತರ ಕೂಡಿಇಂದಿರೆ ಜಾನಕಿ ಸೌಮಿತ್ರಿ ಸಹಿತದಿ
--------------
ನಿಡಗುರುಕಿ ಜೀವೂಬಾಯಿ