ಒಟ್ಟು 1149 ಕಡೆಗಳಲ್ಲಿ , 97 ದಾಸರು , 869 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೇಳ ಸುಲಭವೆ ಜಗದಿ ಕಾಲಮಹಿಮೆಯ ನಮ್ಮ ಮೂಲ ಪುರುಷನ ದಿವ್ಯ ಲೀಲೆಯಲ್ಲವೆ ಎಲ್ಲ ಅ.ಪ ಮುಂದೆ ಸ್ತುತಿಪರು ಜನರು ಹಿಂದೆ ಜರಿವರು ಬಹಳ ತಂದೆ ಬಡವನ ನೀನ್ಯಾರೆಂದು ಕೇಳ್ವರು ಮನದಿ 1 ನೀಚಕೃತ್ಯವ ಮನದಿ ಯೋಚಿಸುತ್ತಲಿ ಸತತ ನಾಚಿಕೆಯನು ಪೊಂದದೆಲೆ ಯಾಚಿಸುವರು ದ್ರವ್ಯವನು 2 ಸತಿಯರೆಲ್ಲರು ಶುದ್ಧಮತಿಯ ತೊರೆಯುತ ತಮ್ಮ ಪತಿಯ ಜರಿವರು ಮುದದಿ ಇತರರನ್ನು ಕೋರುವರು 3 ಕಾಲ ಕಳೆದು ಖ್ಯಾತಿ ಪಡೆವರು ಬಹಳ ಸೋತು ತಮ್ಮ ದ್ರವ್ಯಗಳ ಪಾತಕಗಳ ಮಾಡುವರು4 ಸ್ನಾನ ಜಪತಪ ಪೂಜೆ ಏನನರಿಯರು ದುಷ್ಟ ಪಾನಗಳನು ಸೇವಿಸುತ ಮಾನ ದೂರ ಮಾಡುವರು 5 ಹರಿಯ ಮಹಿಮೆಗಳನ್ನು ಅರಿಯದಂತೆ ಸಂತತವು ಧರೆಯ ದುಷ್ಟ ಭೋಗದಲಿ ಕುರಿಗಳಂತೆ ಬೀಳುವರು 6 ಘನ್ನ ಧರ್ಮಗಳೆಲ್ಲ ಶೂನ್ಯವಾಗಿರೆ ಸುಪ್ರ ಸನ್ನ ಹರಿಯ ಸೇವಕರು ಇನ್ನು ಇರುವುದಚ್ಚರಿಯು7
--------------
ವಿದ್ಯಾಪ್ರಸನ್ನತೀರ್ಥರು
ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ ಪೇಳೇನೆಂದರೆ ನಿಲುಕೊ ಮಾತಲ್ಲ ಹೇಳಿಕೆ ಕೇಳಿಕೆಗೆ ಮೀರಿದ ಮೇಲುಮಹಿಮನ ಲೀಲಾಜಾಲವ ಅ.ಪ ಸಾಧ್ಯ ಮಾತಲ್ಲ ಜಗಸೂತ್ರನಾಟಕೆ ಆದಿ ಅಂತಿಲ್ಲ ಜಗಮೂರರೊಳಗೆ ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ ಸಾಧನಿಟ್ಟು ಆವಕಾಲದಿಂ ನಾದ ತಡೆಯದೆ ವೇದಗಳ ಬಿಡ ದೋದಿ ದಣಿದು ಇನ್ನು ಆದಿಮಹಿಮನ ಪಾದಕಾಣವು 1 ಬಾಗಿ ಅನುಗಾಲ ನಿಜತತ್ವಭೇದಿಸಿ ನೀಗಿ ಭವಮಾಲ ಜಡವಾದ ದುರ್ಭವ ರೋಗಗಳುಯೆಲ್ಲ ಪಾರಾಗಿ ನಿರ್ಮಲ ರಾಗಿ ಪರಮಯೋಗ ಒಲಿಸಿ ಯೋಗಿಗಳು ಮಹ ಉಗ್ರತಪದಿಂ ಯೋಗಬೆಳಗಿನೊಳಗೆ ನೋಡಲು ನಾಗಶಯನ ಮಹಿಮೆ ತಿಳಿಯದು 2 ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು ಮುನ್ಯಾದಿಗಳು ದೇವರ್ಷಿ ನಾರದ ಶೌನಕಾದಿಗಳು ಘನ ಸಪ್ತಋಷಿಗಳು ಅನಂತಾನಂತ ಪ್ರಳಯದಿಂದ ಜ್ಞಾನ ಬೆಳಗಿನೋಳ್ನಿಂತು ನೋಡಿ ಕಾಣದೆ ಶ್ರೀರಾಮಪಾದ ಮೌನದೋಳ್ಮುಳುಗೇಳುತಿಹರು 3
--------------
ರಾಮದಾಸರು
ಪೋಗದಿರೊ ಗೋಪಿಯರ ಮನೆಗೆ ಬಾ ಬೇಗ ಶ್ರೀ ಕೃಷ್ಣನೆ ನಮ್ಮ ಮನೆಗೆ ಪ. ಜಾಗು ಮಾಡದೆ ಹಿಡಿವರೊ ಕೇಳ್ ಮುನ್ನ ಭೋಗಿಸಿ ನಿನ್ನ ಸೆಳೆವರೊ ಮುನ್ನ 1 ಜಾರ ಚೋರನೆಂದು ಬಹುವಿಧದಿಂದ ನಾರಿಯರೆಲ್ಲ ದೂರುತಲಿಹರು ಮುನ್ನ ಸಾರಸಾಕ್ಷ ಕೃಷ್ಣ ಬಾರೆಲೊ ಮುನ್ನ ಸಾರಿ ಪೋಗಬೇಡವೊ ಏ ಚಿನ್ನ 2 ಹದ್ದಿಲ್ಲದ ಗೋಪೇರ ಗೊಡವ್ಯಾಕೊ ಸುದ್ದಿಯ ತರುವರೊ ನಿನ ಮೇಲೀಗದೂರಿ ಸದ್ದು ಮಾಡದೆ ಬಾ ಮುದ್ದು ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಪ್ರಸನ್ನ ರಾಮಾಯಣ ಸುಂದರಕಾಂಡ ಜಯ ಜಯ ಜಯ ರಾಮಚಂದ್ರ ಜಯ ರಾಮಭದ್ರ ಸರ್ವೇಶ ಜಯ ಜಯ ಜಯ ರಾಮ ಸ್ವರತ ಆಹ ಜಯ ಸೀತಾರಮಣ ನೀ ಭಯಬಂಧ ಮೋಚಕ ಜಲ ಸಂಭವಮುಖ ಸುರಸೇವ್ಯ ನಮೋ ನಮೋ ಪ ಶಾಶ್ವತ ಸುಗುಣಾಬ್ಧಿ ರಾಮ ಸವೇಶ್ವರನೆ ಬಲವೀರ್ಯ ಸಂಪೂರ್ಣಾರ್ಣವ ನಿನ್ನ ನಮಿಸಿ ಆಹ ಶೀಘ್ರ ಆ ಗಿರಿಯೆತ್ತಿ ಹನುಮ ಹಾರಲು ಆಗ ಸಾಗರ ಸರ್ವವು ಕಲಕಿ ಓಡಿತು ಕೂಡ 1 ಹಿಂದೆ ಪರ್ವತಗಳ ಪಕ್ಷ ಹನನ ಕಾಲದಿ ವಾಯು ತನ್ನ ಹಿತದಿ ರಕ್ಷಿಸಿದನು ಎಂದು ಆಹ ಹಿಮಗಿರಿಸುತ ಮೈನಾಕನು ಮೇಲೆ ಬಂದಾಗ ಹನುಮಗೆ ನಮಿಸಿ ವಿಶ್ರಮಿಸಿಕೊಳ್ಳೆಂದ2 ಶ್ರಮರಹಿತನು ಎಂದೂ ಹನುಮ ಶ್ರಮ ನಿವಾರಣ ಅನಪೇಕ್ಷ ಆಶ್ಲೇಷಿಸಿ ನಗವರನ ಆಹ ನಿಸ್ಸೀಮ ಪೌರುಷ ಬಲಯುತ ಹನುಮನು ನಿಲ್ಲದೆ ಮುಂದೆ ತಾ ಸುರಸೆಯೊಳ್ ಹೊಕ್ ಹೊರಟ 3 ಪರೀಕ್ಷಿಸೆ ಸುರಸೆಯ ಸುರರು ಪ್ರೇರಿಸಿ ವರವನ್ನು ಕೊಡಲು ಆಹ ಫಣಿಗಳ ತಾಯಿ ಅವಳು ಬಾಯಿ ತೆರೆಯಲು ಪೊಕ್ಕು ಲೀಲೆಯಿಂ ಹನುಮ ಹೊರಹೊರಟ4 ಸುರರು ಆನಂದದಿ ಆಗ ಸ್ತುತಿಸಿ ಹನುಮನ ಕೊಂಡಾಡಿ ಸುರಿಯಲು ಪುಷ್ಪದ ಮಳೆಯ ಆಹ ಶೀಘ್ರ ಪವನಜನು ಮುಂದೆ ತಾ ಹೋಗುತ್ತ ಸಿಂಹಿಕಾ ರಾಕ್ಷಸಿ ಛಾಯಾಗ್ರಹವ ಕಂಡ 5 ಸರಸಿಜಾಸನ ವರಬಲದಿ ಸಿಂಹಿಕಾ ಲಂಕಾ ಪೋಗುವರ ಸೆಳೆದು ತಾ ನಿಗ್ರಹಿಸುವಳು ಆಹ ಸೆಳೆಯೆ ಆ ರಾಕ್ಷಸಿ ಹನುಮನ ಛಾಯೆಯ ಸೀಳಿದ ಹನುಮ ಅವಳ ಶರೀರದಿ ಪೊಕ್ಕು 6 ತನ್ನ ನಿಸ್ಸೀಮ ಬಲವನು ತೋರಿಸಿ ಈ ರೀತಿ ಹನುಮ ಧುಮುಕಿದ ಲಂಬ ಪರ್ವತದಿ ಆಹ ತೋರ್ಪುದು ಲಂಕಾ ಪ್ರಕಾರದೊಲï ಈ ಗಿರಿ ತನ್ನ ರೂಪವ ಸಣ್ಣ ಹನುಮ ಮಾಡಿದನಾಗ 7 ಆಗಿ ಬಿಡಾಲದೊಲ್ ಸಣ್ಣ ಅಸಿತ ಕಾಲದಿ ಪೋಗೆ ಪುರಿಗೆ ಅಲ್ಲಿದ್ದ ಲಂಕಿಣಿ ತಡೆಯೆ ಆಹ ಅವಳ ಹನುಮ ಮುಷ್ಟಿಯಿಂದ ಕುಟ್ಟಿ ಜಯಿಸಿ ಅನುಮತಿಯಿಂದಲ್ಲೆ ಲಂಕೆಯೊಳ್ ಪೋದ 8 ಶ್ರೀಘ್ರ ಅಶೋಕ ವನದಲಿ ಶಿಂಶುಪಾವೃಕ್ಷ ಮೂಲದಲಿ ಸೀತಾ ಅಕೃತಿಯನು ಕಂಡ ಆಹ ಸೀತೆಗೆ ಏನೇನು ಭೂಷಣ ಉಂಟೋ ಸೀತಾ ಆಕೃತಿಗೂ ಸಹ ಅದರವೊಲಿತ್ತು 9 ಅವನಿಯೋಳು ನಿನ್ನ ವಿಡಂಬ ಅರಿತು ಅನುಸರಿಸಿ ಹನುಮ ಅದರಂತೆ ಪರಿಪಂಥಾವಳಿಗೆ ಆಹ ಅವಶ್ಯ ಮಾತುಗಳಾಡಿ ಅಂಗುಲೀಯಕವೀಯೆ ಚೂಡಾಮಣಿ ನಿನಗೆಂದು ಕೊಟ್ಟಳು 10 ಅರಿಯರು ರಾಕ್ಷಸರಿದನು ಅಮರರು ಕಲಿಮುಖರೆಲ್ಲ ಅವಲೋಕಿಸಿದರು ಈ ಕಾರ್ಯ ಆಹ ಅಮರರು ಲೋಕವಿಡಂಬವಿದೆಂದರಿಯೆ ಅಧಮ ಕಲ್ಯಾದಿಗಳ್ ಮೋಹಿತರಾದರು 11 ಕೃತಕೃತ್ಯವಾಗಿ ತಾ ಹನುಮ ಕೋವಿದೋತ್ತಮ ಬಲವಂತ ಕಾಣಿಸಿಕೊಳ್ಳುವ ಮನದಿ ಕಿಂಚಿತ್ತೂ ಭಯವೇನೂ ಇಲ್ಲದೆ ವನವನು ಕಡಿದು ಧ್ವಂಸವ ಗೈದ ಆ ಶಿಂಶುಪವ ಬಿಟ್ಟು 12 ಕುಜನ ರಾಕ್ಷಸರನು ಕೊಲ್ಲೆ ಕೂಗಿ ಆರ್ಭಟಮಾಡೆ ಹನುಮ ಕೇಳಿ ಚೇಷ್ಟೆಗಳ ರಾವಣನು ಆಹ ಕಪ್ಪು ಕಂಠನ ವರ ಆಯುಧಯುತರು ಕೋಟಿ ಎಂಬತ್ತರ ಮೇಲ್ ಭೃತ್ಯರ ಕಳುಹಿದ 13 ಆರ್ಭಟದಿಂದ ಘೋಷಿಸುತ ಅವರು ಆವರಿಸಿ ಹನುಮನ ಆಯುಧಗಳ ಪ್ರಯೋಗಿಸಲು ಆಹ ಪವನಜ ಮುಷ್ಟಿಪ್ರಹರದಿ ಆ ವೀರರೆಲ್ಲರ ಹಿಟ್ಟು ಮಾಡಿದ ಬೇಗ 14 ಕಡುಕೋಪದಿಂದ ರಾವಣನು ಕಳುಹಿದನು ಏಳು ಮಂತ್ರಿ ಕುವರರ ವರ ಬಲಯುತರ ಆಹ ಖಳರು ಈ ಏಳ್ವರ ಮೆಟ್ಟಿ ಷಿಷ್ಟವ ಮಾಡೆ ಕುಮತಿ ರಾಕ್ಷಸ ಸೈನ್ಯ ತೃತೀಯ ಭಾಗವು ಹೋಯ್ತು 15 ಅನುಪಮ ಬಲಕಾರ್ಯಕೇಳಿ ಅಧಮ ರಾವಣ ತನ್ನ ಸುತನ ಅಕ್ಷನ ಕಳುಹಲು ಹನುಮ ಆಹ ಅಕ್ಷನ ಚಕ್ರಾಕಾರದಿ ಎತ್ತಿ ಸುತ್ತಾಡಿ ಅವನ ಅಪ್ಪಳಿಸಿ ನೆಲದಿ ಚೂರ್ಣ ಮಾಡಿದ 16 ಅತಿ ದುಃಖದಿಂದ ರಾವಣನು ಅಕ್ಷನಗ್ರಜ ಇಂದ್ರಜಿತನ ಒಡಂಪಟ್ಟ ಸ್ವೇಚ್ಛದಿ ಹನುಮ ಬ್ರಹ್ಮಾಸ್ತ್ರಕೆ 17 ರಾವಣನಲಿ ಕೊಂಡು ಪೋಗೆ ರಾವಣ ಪ್ರಶ್ನೆಯ ಮಾಡೆ ರಾಮಗೆ ನಮಿಸಿ ಹನುಮನು ಆಹ ರಘುವರ ರಾಮ ದುರಂತ ವಿಕ್ರಮ ಹರಿ ರಾಕ್ಷಸಾಂತಕ ದೂತ ಮಾರುತಿ ತಾನೆಂದ 18 ರಘುವರ ಪ್ರಿಯೆಯನು ಬೇಗ ರಾಮಗರ್ಪಿಸಲೊಲ್ಲೆ ಎನ್ನೆ ಹನುಮ ಪ್ರಕೋಪದಿ ಅವನ ಆಹ ರಾಜ್ಯ ಮಿತ್ರ ಬಂಧು ಸರ್ವನಾಶ ರಾಘವ ಮಾಡುವನೆಂದು ಪೇಳಿದನು 19 ಅಜ ಶಿವ ಮೊದಲಾದ ಸರ್ವ ಅಮರೇಶ್ವರರು ತಾವು ತಡೆಯ ಆಶಕ್ತರು ರಾಮಬಾಣವನು ಆಹ ಅಂಥ ಬಾಣವ ಅಲ್ಪಶಕ್ತ ರಾವಣ ತಾಳೆ ಅಸಮರ್ಥನೆಂದ ಪ್ರಭಂಜನ ಸುತನು 20 ಪ್ರಭಂಜನ 1 ಸುತ ಮಾತು ಕೇಳಿ ಪ್ರಕುಪಿತನಾಗಿ ರಾವಣನು ಪ್ರಯತ್ನಿಸೆ ಹನುಮನ ಕೊಲ್ಲೆ ಆಹ ಪ್ರಕೃಷ್ಟ ಮನದಿ ವಿಭೀಷಣ ಬುದ್ಧಿ ಪೇಳಲು ಪುಚ್ಛಕ್ಕೆ ಬೆಂಕಿ ಹಚ್ಚೆಂದ ರಾಕ್ಷಸರಾಜ21 ಆತಿಭಾರ ವಸ್ತ್ರ ಕಟ್ಟುಗಳಿಂ ಅಧಮರು ಸುತ್ತಿ ಬಾಲವನು ಅಗ್ನಿಯ ತೀವ್ರದಿ ಹಚ್ಚೆ ಆಹ ಅಗ್ನಿಯ ಪರಸಖ ವಾಯು ಆದುದರಿಂದ ಅಂಜನಾಸುತ ನಿರಾಮಯನ ಸುಡಲೇ ಇಲ್ಲ 22 ಅಧಮ ರಾಕ್ಷಸರ ಚೇಷ್ಟೆಗಳ ಅಸಮ ಬಲಾಢ್ಯನು ಹನುಮ ಅನುಭವಿಸಿ ಕುತೂಹಲದಿ ಆಹ ಅಲ್ಲಲ್ಲಿ ಹಾರಿ ಆ ಲಂಕಾಪುರಿಯ ಸುಟ್ಟು ಅತಿ ಮುದದಲಿ ಗರ್ಜಿಸಿದ ರಾಮದೂತ 23 ಅಧಮ ಸಪುತ್ರ ರಾವಣನ ಅಲ್ಪ ತೃಣೋಪಮ ಮಾಡಿ ಅವರೆದುರಿಗೆ ಪುರಿ ಸುಟ್ಟು ಆಹ ಅಬ್ಧಿಯ ದಾಟೆ ವಾನರರು ಪ್ರಪೂಜಿಸೆ ಉತ್ತಮ ಮಧುವುಂಡು ಪ್ರಭುವೇ ನಿನ್ನಲಿ ಬಂದ 24 ಸಮಸ್ತ ವಾನರ ವರರೊಡನೆ ಸಮರ್ಥ ಹನುಮ ಧೀರ ಬಂದು ಶುಭಸೂಚಕ ಚೂಡಾಮಣಿಯ ಆಹ ಶ್ರೀಶ ನಿನ್ನಯ ಪಾದದ್ವಂದ್ವದಿ ಇಟ್ಟು ತಾ ಸನ್ನಮಿಸಿದ ಭಕ್ತಿಭರಿತ ಸವಾರ್ಂಗದಿ 25 ಭಕ್ತಿ ಸವೈರಾಗ್ಯ ಜ್ಞಾನ ಪ್ರಜ್ಞಾ ಮೇಧಾ ಧೃತಿ ಸ್ಥಿತಿಯು ಪ್ರಾಣ ಯೋಗ ಬಲ ಇಂಥಾ ಆಹ ತುಂಬಿ ಇರುವುವು ಈ ಪ್ರಭಂಜನ ವಾಯು ಹನುಮನಲಿ ಸರ್ವದಾ 26 ಸರ್ವೇಶ ರಾಮ ಅಗಾಧ ಸದ್ಗುಣಾರ್ಣವ ನೀ ಹನುಮನ ಸಂಪೂರ್ಣ ಭಕ್ತಿಗೆ ಮೆಚ್ಚಿ ಆಹ ಸಮ ಯಾವುದೂ ಇಲ್ಲದೆ ನಿನ್ನನ್ನೇ ನೀ ಕೊಟ್ಟೆ ಸುಪ್ರಮೋದದಿ ಹನುಮನ ಆಲಿಂಗನ ಮಾಡಿ27 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ನಮ್ಯ ಮಾರುತಿ ಮನೋಗತನೆ ಆಹ ನೀರಜಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 28
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಳಯಜಲದಲಿ ನೀನಾಲದೆಲೆಯ ಮ್ಯಾಲೆ ಹಲವು ಜೀವರು ನಿನ್ನ ಹೃದಯದೊಳಿರಲು ಕೆಲವುದಿನದಿ ಯೋಗನಿದ್ರೆಯೊಳಿರೆ ಒಲವಿಂದ ಸೃಜಿಸುವೆನೆಂದು ನೇಮಿಸುವೆ1 ಪ್ರಕೃತಿಯ ಮೂಲಕಾರಣವನು ಮಾಡಿ ಸಕಲತತ್ವಗಳ ಸಮ್ಮೋಹದಿ ಕೂಡಿ ವಿಕಳಿಸದಂತೆ ತನ್ಮಾತ್ರೆಯ ಕೂಡಿ ಅಖಿಳೇಶ ಮಹತತ್ವಗಳ ನಿರ್ಮಿಸಿದೆ 2 ಮಹತತ್ವದಿಂದಹಂಕಾರವ ಪುಟ್ಟಿಸಿ ಅಹಂಕಾರದಿಂದ ವೈಕಾರಿಕ ಮೊದಲಾದ ತ್ರಿವಿಧತತ್ವಗಳ ನಿರ್ಮಾಣವÀ ಮಾಡ್ದೆ ಮಹಮಹಿಮೆಯ ಮೆರೆದೆ ಜಗವರಿಯೆ 3 ಇಪ್ಪತ್ತುನಾಲ್ಕು ಅಯಿದಾರುತತ್ವಗಳಿಂದ ತÀಪ್ಪದೆ ಬೊಮ್ಮಾಂಡವ ನಿರ್ಮಿಸಿದೆ ಸರ್ಪಶಯನನಾಗಿ ನಾಭಿಕಮಲದಿಂದ ಅಪ್ಪಬ್ರಹ್ಮನ ಪ್ರಸವಿಸಿದೆ ನೀನೆಂದು 4 ಒಂದು ಮೂರುತಿಯಿಂದ ಸೃಷ್ಟಿಯ ಮಾಡಿ ಮತ್ತೊಂದು ಮೂರುತಿಯಿಂದ ಪಾಲನೆ ಮಾಡಿ ಒಂದು ಮೂರುತಿಯಿಂದ ಸಂಹರನೆ ಮಾಡಿ ಒಂದೊಂದು ಮಹಿಮೆಯು ಅನಂತಾದ್ಭುತವು 5 ಒಂದು ರೋಮಕೂಪದಲಿ ಬ್ರಹ್ಮಾಂಡ ಇಂದಿರೆ ಅನಂತಕೋಟಿ ನಾಮಗಳಲ್ಲಿ ಬಂದು ಗೋಕುಲದಲ್ಲಿ ಶಿಶುವಾಗಿ ತೋರಿದೆ ಆ- ಸುರರು 6 ಜನನಮರಣ ಭಯದಿಂದ ದೇವತೆಗಳು ಅನುದಿನ ನಿನ್ನ ಪೂಜೆಯ [ಮಾಡೇವೆನಲು] ಪುನರಾವೃತ್ತಿ ರಹಿತವಾದ ಫಲವೆತ್ತಿ ಮನುಜನಂತೆ ತೋರುವುದೇನುಚಿತವೊ 7 ಒಮ್ಮೆಕಾಣಲು ಸಿರಿರಮ್ಮೆ ಚೆಲುವನ ಒಮ್ಮನದಿಂದ ನೋಡೇನೆಂಬ ಭಯದಿಂದ ರಮ್ಮೆ ಮೊಗವ ತಗ್ಗಿಸಿ ನಾಚಿಸಿದಳೆ 8 ದÀಶದಿಕ್ಕು ನೋಡುತ್ತ ಭಯದಿಂದ ಕಮಲಜ ಶಶಿನಾಳದೊಳಗಿದ್ದ ದಾರಿಯ ಕಾಣದೆ ದಶಶತವರುಷ ನಿಮ್ಮನು ಧ್ಯಾನಿಸುತಿರೆ ವಸುಧೀಶ ನಿಮ್ಮ ನಿಜವ ತೋರಿದಿರಿ 9 ಆಲೋಚನೆಯಿಂದ ಸರ್ವ ವಿಷಯದಿಂದ ಲೀಲೆಯಿಂದ ಪಾಡಿ ಕಮಲಸಂಭವನ ವೋಳು ಮಾಡದಂತೆ ಒಳಿತಾಗಿ ತಲೆವಾಗೆ ಮೂಲ್ಲೋಕವ ಕೃಪೆಯಿಂದ ಪಾಲಿಸಿದೆ 10 ನಂದ ಯಶೋದೆ ವಸುದೇವ ದೇವಕಿಯರು ಸುಕೃತ ಫಲವಾಯಿತೆಂದು ಬಂದ ಬ್ರಾಹ್ಮಣರ ದ್ರವ್ಯದಿ ದಣಿಸಿದರು 11 ಜಾತಕರ್ಮವ ಮಾಡಿ ಮಧುವ ಬಾಯೊಳಗಿಟ್ಟು ಒತ್ತುಮೊರನ ಗೊಟ್ಟಿನಲಿ ಮಲಗಿದ್ದು ಸಾ- ಕ್ಷಾತ್ ಶ್ರೀ ನಾರಾಯಣನ ಅವತಾರವೆಂದು ಮಾತೆಯ ಮೊಲೆವಾಲನುಂಡ ಬೇಗದಲಿ 12 ವಾರುಣಿ ಶ- ಚಿ ರತಿ ಮೊದಲಾದ ಸತಿಯರು ನಾರಾಯಣ ಪರದೇವತೆಯೆಂದು ನಾರಿಯರೆಲ್ಲ ಪಾಡಿದರತಿ ಹರುಷದಲಿ 13 ನಾಮಕರಣ ದಿವಸ ಬ್ರಹ್ಮಾದಿ ಸುರರು ಈ ಮಹಾಶಿಶುವ ನೋಡೇವೆಂಬ ಭರದಿಂದ ಆ ಮಹಾಸ್ತೋಮವೆಲ್ಲ ಕೂಡಿಬರ- ಲೀ ಮಹಾಶಿಶುವ ನೋಡಿದರೆ ಅರ್ಥಿಯಲಿ 14 ವ್ಯಾಸ ಧೌಮ್ಯಾಚಾರ್ಯರೊಲಿದು ಮಂತ್ರಗಳಿಂದ ಸಾಸಿರಕೋಟ್ಯನಂತ ನಾಮಗಳುಳ್ಳ ವಾಸುದೇವ ಕೃಷ್ಣನೆಂಬ ನಾಮಗಳಿಟ್ಟು ಸೂಸಿದರಕ್ಷತೆ ಸುಮೂಹೂರ್ತದಲಿ 15 ಕ್ಷೀರಾಂಬುಧಿಯನ್ನೆ ತೊಟ್ಟಿಲು ಮಾಡಿ ಓರಂತೆ ನಾಲ್ಕುವೇದಗಳ ನೇಣನೆ ಮಾಡಿ ಧೀರಶೇಷನು ಬಂದು ಹಾಸಿಕೆ ಹಾಕಲು ನಾರಿಯರೊಡನೆ ಮಲಗಿದೆಯೊ ಹಯವದನ 16
--------------
ವಾದಿರಾಜ
ಪ್ರಾಣಕ್ಕೆ ಕಡೆಗಾಲ ಬಂದಿತೋ ಶಿವ ಶಿವ ಇನ್ನೇನಿನ್ನೇನು ಬೋಣನ ಸಗದ್ದೆಯೊಳಿರುತಿದೆ ನಾಡಿನಲಿನ್ನೇನಿನ್ನೇನು ಪ ಬಂತು ಇನ್ನೇನಿನ್ನೇನು ಮನೆಯೊಳು ಸಿಕ್ಕಿದೆ ಜಾರಲಿ ಕಣಿಯಿಲ್ಲವಿನ್ನೇನಿನ್ನೇನು ದನ ಕರುಗಳ ನೊಂದ ನುಳಿಸದೆ ವೈದ್ಯರು ಇನ್ನೇನಿನ್ನೇನು ಜನರೆಲ್ಲ ಕೈಸೆರೆಯನು ಸಿಕ್ಕಿ ಹೋಯಿತು ಇನ್ನೇನಿನ್ನೇನು 1 ಅಂಗಳದೊಳು ಪಾದವಿಕ್ಕೀತು ಜನರಿಗೆ ಇನ್ನೇನಿನ್ನೇನು ಭಂಗಾರವ ತನ್ನಿರೆಂದು ಝಂಕಿಸಿದರು ಇನ್ನೇನಿನ್ನೇನು ಭಂಗಪಡುವ ಕಾಲಬಂತು ಮಾನವರಿಗೆ ಇನ್ನೇನಿನ್ನೇನು ಅಂಗನೆಯ ಹಿಡಿದೆಳೆದು ಸುಲಿದರು ಇನ್ನೇನಿನ್ನೇನು2 ಉಡಿಗೆ ತೊಡಿಗೆಯನ್ನು ಸೆಳೆದರು ಸತಿಯರ ಇನ್ನೇನಿನ್ನೇನು ಕಡಿದರು ಕೆಲರ ತೋಳ್ ತೊಡೆಗಳ ಶಿರಗಳ ಇನ್ನೇನಿನ್ನೇನು ಕಡಲಿಟ್ಟು ಹರಿದುದು ರಕ್ತ ಪ್ರವಾಹವು ಇನ್ನೇನಿನ್ನೇನು ಕಡುಪಿಂದೆ ಕಾಲ್‍ಕೈಗೆ ಮುರವಾಳವಿಕ್ಕಿದರಿನ್ನೇನಿನ್ನೇನು 3 ಸುಲಿದರು ಚಿನ್ನ ಚಿಗುರು ಬೆಳ್ಳಿ ವಸ್ತುವ ನಿನ್ನೇನಿನ್ನೇನು ಹೊಳಲಿಗೆ ಬೆಂಕಿಯ ನಿಕ್ಕಿದರಲ್ಲಲ್ಲಿ ಇನ್ನೇನಿನ್ನೇನು ಉಳಿದೆನು ಇನ್ನೇನಿನ್ನೇನು ಜಲಜಾಕ್ಷ ನಿನ್ನಯ ಕರುಣ ಕಟಾಕ್ಷದಲಿನ್ನೇನಿನ್ನೇನು 4 ಹಿಂದಂಬರೀಶ ಗಜೇಂದ್ರನ ಕಾಯ್ದಂತೆ ಇನ್ನೇನಿನ್ನೇನು ಇಂದಿನ ದುರಿತವ ಪರಿಹರಿಸಿದೆ ನೀನು ಇನ್ನೇನಿನ್ನೇನು ಬಂಧಿಸಿ ಹೊಡೆದ ಗೋಕುಲವನು ತಂದಿತ್ತೆ ಇನ್ನೇನಿನ್ನೇನು ಮಂದ ಮಾರುತ ನಣುಗನ ಕೋಣೆ ಲಕ್ಷ್ಮೀಶ ಇನ್ನೇನಿನ್ನೇನು 5
--------------
ಕವಿ ಪರಮದೇವದಾಸರು
ಪ್ರಾಣದೇವನೆ ನಿನ್ನ ಧ್ಯಾನಿಸದೆ ಮನದಿ ಬಲು ಹೀನನಾದೆನೊ ಲೋಕದಿ ಪ ಪಾದ ಧ್ಯಾನಮಾಡುವ ಮುಖ್ಯ- ಪ್ರಾಣನೀನೆಂದು ಮನಸಾರ ಪೂಜಿಸದೆ ಶ್ರೀ ಅ.ಪ ಶರಧಿ ಬಂಧಿಸಿ ದಶಶಿರನಳಿದ ಪಾದ ಸ್ಮರಣೆ ಮಾಡುತಲಿ ನಿತ್ಯ ಧರಣಿಸುತೆಯಳ ತಂದು ಪರಮ ಸಂಭ್ರಮದಿಂದ ಮೆರೆವದೇವನ ಸ್ಮರಿಸುತ ನರರೂಪದಿಂದ ದಶರಥನ ಪುರದಲಿ ನಿಂತ ಪರಮಾತ್ಮನಿಗೆ ನಮಿಸುತ ಸುರರು ಸ್ತುತಿಸಲು ಪರಮಹರುಷದಿಂದಾಲಿಸುತ ಹರಿಯ ಮೆಚ್ಚಿಪ ನಮ್ಮ ಗುರುಪವಮಾನ ಶ್ರೀ 1 ಅಂದು ಆ ಬಕನ ಭಯದಿಂದ ಸಜ್ಜನರೆಲ್ಲ ಕುಂದಿರಲು ಭಯವ ಹರಿಸಿ ಅಂಧಕನ ಸುತನ ಬಂಧಿಸುತ ರಣದೊಳಗೆ ಯದು- ನಂದನಗೆ ಪ್ರೀತಿ ಪಡಿಸಿ ಕೊಂದು ಬಿಸುಡಲು ಜರಾಸಂಧನನು ವಸುದೇವ ಕಂದ ನೋಡುತಲಿ ಸುಖಿಸಿ ಇಂದಿರಾರಮಣ ಮುಕುಂದನನು ಪೂಜಿಸುವ ಸುಂದರ ಭೀಮ ನಿಸ್ಸೀಮನಹುದೆಂದು ಶ್ರೀ2 ಪತಿತ ಸಂಕರದಿಂದ ಮತವೆಲ್ಲ ಕೆಡಲು ಶ್ರೀ- ಪತಿಯ ಧ್ಯಾನವು ಮಾಡುತ ಯತಿ ಶಿರೋಮಣಿಯಾಗಿ ಶ್ರುತಿ ಸ್ಮøತಿಗಳಣಿ ಮಾಡಿ ಹಿತವ ಜನರಿಗೆ ತೋರುತ ಎಸೆವ ಘನಗಿರಿಯಲ್ಲಿ ಅಸದಳ ಹನುಮರೆಂ- ದೆಸೆದು ಮಿಗೆ ಶೋಭಿಸುತಲಿ ವಾರಿ ದಡದಲಿ ಕಮಲನಾಭ ವಿಠ್ಠಲನ ಸ್ಮರಿಸಿ ಧೀರ ಹನುಮಂತನಪಾರ ಮಹಿಮನೆಂದು ವನಗಿರಿಯ ಗುಹೆಗಳಲಿ ಹನುಮಂತನೆಂದೆನುತ ಎಣಿಸಲಳವಲ್ಲವೋ ಘನಪರಾಕ್ರಮಿ ಮುಖ್ಯ 3
--------------
ನಿಡಗುರುಕಿ ಜೀವೂಬಾಯಿ
ಫುಲ್ಲನಾಭ ನಿಜತತ್ವ ತಿಳಿಸು ನುತಪ್ರೇಮಿ ಅಲ್ಲದ್ದು ಅಹುದೆನಿಸಿ ಕೊಲ್ಲದಿರು ಸ್ವಾಮಿ ಪ ವಿಪಿನವನು ಸೇರಿ ಬಲು ಗುಪಿತದಿಂ ಕುಳಿತು ಮಹ ತಪವನಾಚರಿಸಲು ಸುಪಥ ದೊರಕುವುದೆ ಕಪಿವರದ ನಿನ್ನಡಿಯ ಕೃಪೆಯಿಲ್ಲದಿರೆ ಇನಿತು ಜಪತ¥ವ್ರತನೇಮ ಸುಫಲ ನೀಡುವುದೆ 1 ತ್ಯಾಗಿಯೆಂದೆನಿಸಿ ಬಲು ಭೋಗ ನೀಗುವುದೆ ಭಾಗವತ ಜನಪ್ರಿಯ ನಾಗಶಾಯಿ ತವ ದಯ ವಾಗದಲೆ ನರನ ಭವ ರೋಗ ತೊಲಗುವುದೆ 2 ಇಲ್ಲದದು ಇಲ್ಲೆನಿಸು ಅಲ್ಲದ್ದು ಅಲ್ಲೆನಿಸು ಸಲಿಸೆನ್ನನು ತವ ಬಲ್ಲಿದ ಶರಣರೊಳು ಎಲ್ಲದೇವರೆಲ್ಲ ಲೋಕ ಎಲ್ಲನಿನ್ನೊಳಗಭವ ಇಲ್ಲ ನಿನ್ನ್ಹೊರತು ಅನ್ಯ ಸಿರಿ ನಲ್ಲ ಶ್ರೀರಾಮ 3
--------------
ರಾಮದಾಸರು
ಬಟ್ಟೆಯ ನೆವದಿಂದ ಬಂದು ತಟ್ಟ ಕವನೆ ಕಂಡು ಕಣ್ಣ ತೆರೆದ ಕೃಷ್ಣವೇಣಿ ನಿಮ್ಮ ಕಂಡೆ ದುಷ್ಟ ಮಾನವರ ಬಾಧೆಗೆ ಅಂಜಿ ಇತ್ತ ಬಂದೆ ಕಷ್ಟ ದುರಿತಗಳ ಕಳೆಯೆ ತಾಯೆ ಪ. ಭೋರಿಡುವ ಮಳೆಗೆ ಹಲ್ಲುಗಿಟಗರಿದು ಶೀತತಲೆ- ಗೇರಿ ಕಂಪಿಸಿ ನಡುಗುತ್ತ ಜಾರಿ ಕೆಸರೊಳು ಬಿದ್ದು ಮತ್ತೇಳುತಲಿ ದಾರಿಯನು ಕೇಳಿಕೊಳ್ಳುತ ಕ್ರೂರವಾಗಿದ್ದ ಜಾಲಿಯ ಮುಳ್ಳನೆ ತುಳಿದು ಹರಿ ನಾರಾಯಣ ಎನ್ನುತ ಹಾರೈಸಿ ನಿಮ್ಮ ದರುಶನಕ್ಕೆ ನಾ ಬಂದೆ ಘೋರ ದುರಿತವನು ಕಳೆಯೆ ತಾಯೆ 1 ನಿತ್ಯ ಕಲ್ಯಾಣಿ ನಿರ್ಜರಸ್ತೋತ್ರೆ ಶುಭಗಾತ್ರೆ ಪ್ರತ್ಯಕ್ಷ ವಿಷ್ಣುಜಾತೆ ಮಾತೆ ವಿಸ್ತರಿಸಲಾರೆ ಶ್ರೀ ವಿಷ್ಣು ಸಂಪ್ರೀತೆ ಸತ್ಪಾತ್ರ ಸಂಪೂಜಿತೆ ಪ್ರೀತೆ ಸತ್ತು ಹುಟ್ಟುವ ಜನ್ಮ ಕೋಟಲೆಯ ಖಂಡ್ರಿಸೆ ಪತಿತ ಪಾವನ ಚರಿತೆ ವ್ಯರ್ಥವಾಯಿತು ಜನ್ಮ ಸಾರ್ಥಕವ ಮಾಡಮ್ಮ ಮುಕ್ತಿಸಾಧನದಾತೆ ಮಾತೆ 2 ಸುರಗಂಗೆ ಕೃಷ್ಣಮಲಾಪಹಾರಿ ಮೂವರು ಕೂಡಿ ಬೆರೆದಿದ್ದ ಸಂಗಮದಲ್ಲಿ ಅರಿಸಿಣ ಅಕ್ಷತೆ ಗಂಧ ಕುಂಕುಮ ತಾಂಬೂಲಗಳ ಹರುಷದಿಂದರ್ಪಿಸುತಲಿ ಥರಥರದಿ ನೆರೆದ ಮುತ್ತೈದೆಯರೆಲ್ಲರು ಮರದ ಬಾಗಿನವ ಕೊಡುತಲಿ ಹರುಷದಿಂದಿಪ್ಪುದನು ಕಂಡೆ ಹೆಳವನಕಟ್ಟೆ ಅರಸು ರಂಗನ ಕೃಪೆಯಲ್ಲಿ ತಾಯೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಬಡವರೆಲ್ಲ ಬದುಕಿ ಸುಖದಲಿ ಬಹುಕಾಲ ಪ ಬಡವರೆಲ್ಲ ಸುಖದಲಿ ಜಗ ಕಡುಕರುಣಕೆ ಪಾತ್ರರಾಗಿ ದೃಢದಿ ಬಾಳಿ ಸಡಗರದಲಿ ಅ.ಪ ಕುಕ್ಷಿಗಾಗಿ ಗೈದು ಬಂದುದು ಲಕ್ಷವೆಂದು ತಿಳಿದು ನಮ್ಮ ಲಕ್ಷ್ಮಣಾಗ್ರಜನಾಜ್ಞೆಯೆಂದು 1 ಮಾನರಕ್ಷಣೆಗೆ ವಸ್ತ್ರವುಟ್ಟು ನಾನು ಎಂಬ ಮಮತೆ ಬಿಟ್ಟು ಜ್ಞಾನರತ್ನವ ಸಂಗ್ರಹಿಸುತ 2 ಜಗದ ಜನಗಳಂತೆ ನಡೆಯದೆ 3 ಯೋಗಿಗಳನು ನೋಡಿ ಹಿಗ್ಗಿ ಭೋಗಿಗಳನು ನೋಡಿ ತಗ್ಗಿ ತ್ಯಾಗ ಬುದ್ಧಿಯುಳ್ಳವರಾಗಿ ಭಾಗವತರಾಚರಣ ಪಿಡಿದು 4 ಪರರ ಸ್ವತ್ತಿಗಾಸೆಪಡದೆ ಎರೆಡು ಸುಖವು ಕರಗತವೈ 5
--------------
ಗುರುರಾಮವಿಠಲ
ಬಂಡು ಮಾಡುವರಲ್ಲೊ ರಂಗೈಯ್ಯ ಪ ಮಡುವ ಪೊಕ್ಕೆನುಯೆಂದು ಮಡದೇರೆಲ್ಲರು ಕೂಡಿ ಬಿಡುಗಂಣನಿವನೆಂಬರೋ ರಂಗೈಯ್ಯಾ 1 ಗುಡ್ಡ ಹೊತ್ತನು ಎಂದು ಸಡ್ಡೆನು ಮಾಡದೆ ನಿನ್ನ ದೊಡ್ಡ ದೆವ್ವಯೆಂಬರೊ ರಂಗೈಯ್ಯಾ 2 ಧರಣಿ ಎತ್ತಿದೆ ಎಂದು ಪರಿಹಾಸ ಮಾಡುತ ಕೋರೆದಾಡಿಯನೆಂಬರೊ ರಂಗೈಯ್ಯಾ 3 ತರಳನ ಸಲಹಲು ಸಿರಿಗೆ ಪೇಳದೆ ಬಂದ ಉರಿಮೋರೆಯವನೆಂಬರೊ ರಂಗೈಯ್ಯಾ 4 ಕೃಪೆಯ ಮಾಡದೆ ಬಲಿಯ ತಪಭಂಗ ಮಾಡಿದ ಕಪಟ ತಿರುಕನೆಂಬರೊ ರಂಗೈಯ್ಯಾ 5 ಪಿತನ ಮಾತನು ಕೇಳಿ ಮಾತೃಹತ್ಯವಗೈದ ಪತಿತ ಹಾರುವನೆಂಬರೊ ರಂಗೈಯ್ಯಾ 6 ಸತಿಯ ರಕ್ಕಸನೊಯ್ಯೆ ಅತಿಶೋಕ ಪೊಂದಿದ ಹತಭಾಗ್ಯನಿವನೆಂಬರೊ ರಂಗೈಯ್ಯಾ 7 ನೆರೆಹೊರೆ ಹೆಂಗಳ ಸುರತದಿ ಕೂಡಿದ ಜಾರ ಚೋರನು ಎಂಬರೊ ರಂಗೈಯ್ಯಾ 8 ಬಟ್ಟೆಯಿಲ್ಲದೆ ಪೋಗಿ ನೆಟ್ಟನೆ ನಿಂತಿರ್ದ ಕೆಟ್ಟಾ ಭಂಡನಿವನೆಂಬರೊ ರಂಗೈಯ್ಯಾ 9 ಅಷ್ಟಾ ಭಾಗ್ಯವ ನೀಗಿ ಕಷ್ಟಕ್ಕೆ ಗುರಿಯಾದ ದುಷ್ಟ ರಾಹುತನೆಂಬರೊ ರಂಗೈಯ್ಯಾ 10 ಕಂದಾ ನೀ ನಿರ್ದೋಷ ರಂಗೇಶವಿಠಲ ನೆಂದು ತಿಳಿದು ದೂರುವರೊ ರಂಗೈಯ್ಯಾ 11
--------------
ರಂಗೇಶವಿಠಲದಾಸರು
ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾ-ವಣ್ಯದ ಕಣಿಯಾದ ಉಡುಪಿನ ಕೃಷ್ಣನ ಪ. ಕರಗುವ ಮಿಸುನಿಯ ಕಾಂತಿಯಿಂ ಗರುಡನಗರಿಗಳ ಇರವ ಧಿಕ್ಕರಿಪ ಪೀತಾಂಬರಎರಡು ಪಾಶ್ರ್ವಗಳಲ್ಲಿ ಶಿರದ ಕಿರೀಟವುಕೊರಳಹಾರದ ಜೋಡು ಇರಲು ಈ ಪರಿಯಿಂದಮರೆಯಲಬ್ಜದ ಕಂಕಣ ಭೂಮಿಗೈದುವವರ ಸೂರ್ಯನಾರಾಯಣ ಬಾಹುಗಳುಳ್ಳಮಕರಕುಂಡಲ ಬಾಹುಪುರಿಗಳಿಂದೆಸೆವನ1 ಪಾದ ಕಂಸೆಯಗಲಿ ಇಂದ್ರ ನೀಲದದಾಳ ದಿಕ್ಕುಗಳನೆಬೆಳಗುತಲೆ ಬಹಳ ಲೀಲೆಯ ತೋರ್ಪಖಳರೆದೆ ಶೂಲನ ಚೆಲುವ ಗೋಪಾಲನ 2 ಜಾತಿಮುತ್ತಿನ ಚುಂಗು ಖ್ಯಾತಿಯಿಂದೊಪ್ಪುವಚಾತುರ್ಯದಿ ವಾರೆಗೊಂಡೆಯ ಕಟ್ಟಿಆ ಜೂತದಿಂದಲಿ ಅತಿ ಮೈಜೋಡು ತೊಟ್ಟು ಈ-ರೀತಿಯಿಂದೆಡಗೈಯ ವಂಕಿ ಮಧ್ಯದೊಳಾನುಚ್ಚುತ ಖಡ್ಗದಿಂದೊಪ್ಪುವ ಭೂತಳದಿವಿಖ್ಯಾತಿ ಪಡೆದು ಮೆರೆವÀ ದುಷ್ಟಮೃಗವಘಾತಿಸಿ ಬಿಡುವ ಕಿರಾತÀ ಸ್ವರೂಪನ್ನ 3 ಮಿಸುನಿಯ ಮುಂಡಾಸು ಪೊಸರವಿಯಂತಿರೆಶಶಿಯ ಪ್ರಭೆಯಂತೆ ಪಸರಿಸಲಂಗಿಯುಹಸನಾದ ನವರಂಜು ವಶದಲ್ಲಿ ತುಂಬಿರೆಕುಸುಮನಂದದಿ ಧೋತ್ರವ ಉಟ್ಟುವೈರ್ವಸನವ ಸುತ್ತಿ ಗಾತ್ರದಿ ಕುಲಾಯಿ ಒಪ್ಪಿನಸುನಗೆಯಿಂದೊಪ್ಪುವ ನವವಿಪ್ರವೇಷನ್ನ 4 ಕಡೆದ ಬೊಗರಿಯಂತೆ ಕಡೆದು ಮಾಡಿದ ಬಾಹುದೃಢವಾದ ಕುಚಗಳು ದುರಿತದುನ್ನತವಾದಬಡನಡು ಬಳುಕಲು ಕಡೆಗಣ್ಣ ನೋಟದಿಮೃಡ ಮುಖ್ಯರ್ಮೋಹಿಸಿ ಒಡಲ ಮಾರದಿರಲುಮುಡಿಯ ನೋಡುತ ನವಿಲು ನಾಚಿ ಮೊಗಗೊಡದಡವಿಯ ಸೇರಲು ಭೂಷಣಗಳುಜಡಿವುತ್ತ ಜಗದೊಳು ಕಡುಮೋಹಿನೀ ಬಲು 5 ಕರ್ಮ ಕಿಂಕರರೊಳಗಾಗಿಟೊಂಕದಿ ಕೈಯಿಟ್ಟು ಶಂಕಿಸಲು ತನ್ನಂಘ್ರಿಪಂಕಜಂಗಳ ಬೇಡಿ ಪುರುಷಾರ್ಥ ಪಡೆಯಿರೊಶಂಕೆ ಬೇಡವೊ ಎಂದು ಲೆಂಕರಿಗೆ ಸೂಸಿಪ್ಪ-ಸಂಖ್ಯಾತ ಕರಯುಗಳದಿಂದೊಪ್ಪುವಶಂಖ ಚಕ್ರ ಆಯುಧಂಗಳ ಪಿಡಿದು ಸರ್ವಾಲಂಕಾರದಿಂ ವೆಂಕಟೇಶನ ರೂಪ6 ಈ ವಿಧ ತಪ್ಪದೆ ಏಳು ವಾರಗಳಲ್ಲಿಪಾವನಮತ ಗುರು ಬಳಿಗೆ ಬಂದವರೆಲ್ಲಶ್ರೀವರ ಹಯವದನನ ಸೇವೆಗೊಳ್ಳಿರೋ ನಿತ್ಯಆವಾವ ನಾಡಿನ ಆಶ್ರಿತ ಜನರನ್ನುಭಾವಶುದ್ಧಗಳರಿತು ಕೋರಿಕೆಗಳಈವ ಭಕ್ತರಿಗೊಲಿದು ಪಾಷಂಡಾದಿಶೈವರ ತರಿದ ಸದ್ವೈಷ್ಣವರ ದೇವÀನ್ನ7
--------------
ವಾದಿರಾಜ
ಬಂದದ್ದನುಭವ ಮಾಡ್ವೆ ಕಂದನಾಗಿರುವೆ ತಂದೆ ನಿನ್ನಯ ದಯವೊಂದಿರಲಿ ಹರಿಯೆ ಪ ಮಂದಿ ಮಕ್ಕಳು ಎನ್ನ ಕುಂದಿಟ್ಟು ಜರೆಯಲಿ ಬಂಧು ಬಾಂಧವರೆಲ್ಲ ನಿಂದಿಸಿ ನುಡಿಲಿ ಬಂಧನವು ಬಿಡರಿರಲಿ ಎಂದೆಂದು ಮರೆಯದಂತೆ ಇಂದಿರೇಶ ನಿಮ್ಮ ಧ್ಯಾನವೊಂದೇ ಎನಗಿರಲಿ 1 ಭೂಪತಿಗಳೆನ್ನೊಳ್ಕೋಪಮಂ ತಾಳಲಿ ತಾಪಬಡಿಸಲಿ ಮಹಪಾಪಿವನೆನುತ ತಾಪತ್ರಯ ಬಿಡದಿರಲಿ ಪಾಪಲೋಪನೆ ಜಗ ದ್ಯ್ಯಾಪಕನೆ ನಿನ್ನ ಧ್ಯಾಸಪರೂಪ ಎನಗಿರಲಿ 2 ಕಂಡಕಂಡಂತೆ ಜನರು ಭಂಡನೆಂದೆನ್ನಲಿ ತಂಡತಂಡದಿ ಕಷ್ಟ ಅಂಡಲೆದು ಬರಲಿ ಹೆಂಡರು ಸೇರದೆ ಗಂಡನೆಲ್ಲೆಂದೆನಲಿ ಪಂಢರೀಶ ನಿನ್ನ ಪದೆನ್ನ ಮಂಡೆಮೇಲಿರಲಿ 3 ಎತ್ತ ಪೋದರು ಜನರು ಹತ್ರ ಬಡಿಯಲಿ ಎನಗೆ ವಿತ್ತಕೊಟ್ಟೊಡೆಯರು ನಿತ್ತರಿಸದೊದಿಲಿ ಮುತ್ತಿಕೊಂಡ್ವೈರಿಗಳು ಕುತ್ತಿಗೆ ಕೊಯ್ಯಲಿ ಚಿತ್ತಜಪಿತನಿನ್ನ ಭಕ್ತ್ಯೊಂದೆನಗಿರಲಿ 4 ಪೀಡಿಸಲಿ ಬಡತನವು ಕಾಡಿಸಲಿ ದಾರಿದ್ರ್ಯ ಓಡಿಸಲಿ ಪೊಡವಿಪರು ನಾಡ ಬಿಟ್ಟೆನ್ನ ನೋಡಲಿ ಮುನಿದೆನ್ನ ನಾಡದೈವಗಳೆಲ್ಲ ಬೇಡೆನೆ ಶ್ರೀರಾಮ ನಿನ್ನಡಿ ಬಲೊಂದೆನಗಿರಲಿ5
--------------
ರಾಮದಾಸರು
ಬಂದರೆ ಭಾಗ್ಯ ಲಕ್ಷ್ಮಿಯರುಮುಯ್ಯವ ಛಂದಾಗಿ ಗೆಲಿಸೆಂದುವಂದಿಸಿ ಹರಿಗೆ ಪ. ಇಂದು ಮುಖಿಯರೆಲ್ಲ ಛಂದಾದ ವಸ್ತಗಳಿಟ್ಟುಚಂದ್ರಗಾವಿಯನುಟ್ಟು ಚಂದ್ರನಂತೆ ಒಪ್ಪುತ 1 ನೀಲ ಮಾಣಿಕದ್ವಸ್ತ್ರಮೇಲುದು ಧರಿಸುತ ನೀಲಾದಿಗಳೆಲ್ಲ 2 ವಸ್ತ ಮುತ್ತಿನ ಇಟ್ಟು ಕಸ್ತೂರಿ ಬೊಟ್ಟಿಟ್ಟುಮಸ್ತಕದಲಿ ಮಾಣಿಕ್ಕಿಟ್ಟು ಭದ್ರಾದಿಗಳು 3 ಹಸ್ತಾಭರಣ ಸಮಸ್ತ ವಸ್ತಗಳಿಟ್ಟುಸ್ವಸ್ತ ಚಿತ್ತದಿಂದ ಮಿತ್ರ ವೃಂದಾರಕಾದಿಗಳು 4 ಕಾಲಿಂದ್ಯಾದಿಗಳೆಲ್ಲ ಬಹಳೆ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಲಾಶಯನನ ಬಳಿಗೆ5 ಲಕ್ಷಣಾದಿಗಳೆಲ್ಲ ಲಕ್ಷ ವಸ್ತಗಳಿಟ್ಟುಲಕ್ಷ್ಮಿರಮಣನೆ ಪಂಥ ವೀಕ್ಷಿಸಿಗೆಲಿಸೆಂದು 6 ಜಾಂಬವಂತ್ಯಾದಿಗಳು ತುಂಬಿದೊಸ್ತಗಳಿಟ್ಟುಸಂಭ್ರಮ ಸೂಸುತ ಅಂಬುಜಾಕ್ಷನ ಬಳಿಗೆ7 ಹದಿನಾರು ಸಾವಿರ ಚದುರೆಯರು ವಸ್ತಗಳಿಟ್ಟುಮದನ ಜನಕನ ಮುಯ್ಯ ಮುದದಿಂದ ಗೆಲಿಸೆಂದು8 ವೀರ ರಾಮೇಶ ನಾರಿಯರ ಸೋಲಿಸೋ ಭಾರನಿನ್ನದೆಂದು ನೂರು ಮಂದಿನುಡಿದಾರು 9
--------------
ಗಲಗಲಿಅವ್ವನವರು
ಬಂದಾ ಗೋವಿಂದನು ಗೋಕುಲದಿಂದ ಆನಂದ ಮುಕುಂದನು ಪ ಅಂದಿಗೆ ಕಿರುಗೆಜ್ಜೆಯು ಘಲುಘಲುರೆನೆ ಮಂದಹಾಸನಗೆಯಿಂದಲಿ ಶ್ರೀಹರಿ ಅ.ಪ ಕರದಿ ಕಂಕಣ ವಂಕಿಯು ಹೊಳೆಯುತಲಿ ಸಿರದಿ ಕಿರೀಟ ಮುಂ- ಗುರುಳು ಮುಖ ಬೆವರಿನ ಹೊಸ ಕಾಂತಿಯಲಿ ಬೆರಳುಗಳಲಿ ಉಂಗುರ ಥಳಥಳಥಳ ಹೊಳೆಯುವ ಸೊಬಗಿನಲಿ ಕೊರಳೊಳು ಸರಿಗಿಯ ಸರ ಪರಿ ಸರ ಪದಕಗಳ್ಹೊಳೆಯುತಲಿ ಜರಿ ಪೀತಾಂಬರದ ನಡುವಿಲಿ ಕಿರು ಗೆಜ್ಜೆಗಳ್ಹೊಳೆಯುತಲಿ ತರುತುರು ತರುಣೇರು ಮರುಳಾಗುವ ತೆರ ಪರಿಪರಿ ರಾಗದಿ ಮುರಳಿಯ ನುಡಿಸಲು ಸುರರು ಪುಷ್ಪ ವೃಷ್ಟಿಯ ಸುರಿಸುತಲಿರೆ ತುರುಕರು ಮಧ್ಯದಿ ಪೊಳೆವೊ ಚಂದ್ರಮನಂತೆ1 ತುಂಬುರು ನಾರದರೆಲ್ಲರು ಕೂಡಿ ಅಂಬರದಲಿ ನೆರೆದರು ಗಂಧರ್ವಪ್ಸರ ಸ್ತ್ರೀಯರು ಕುಣಿದಾಡಿ ಪರಮಾತ್ಮನ ಸ್ತುತಿಸುತ ರಂಭೆ ಊರ್ವಶಿ ಮೇನಕೆಯರು ಕೂಡಿ ಆನಂದದಿ ನರ್ತಿಸೆ ಇಂದಿರೆ ರಮಣನ ಗುಣಗಳ ಪಾಡಿ ಅಂಬರದಲಿ ದೇವ ದುಂದುಭಿಗಳು ಮೊಳಗಲು ಕಂದರ್ಪನ ಪಿತ ಕರುಣದಿ ಭಕುತರ ಚಂದದಿ ದುರ್ಮತಿ ನಾಮ ವತ್ಸರದಲಿ ಕುಂದಿಲ್ಲದೆ ಸಲಹುವೆನೆನುತಲಿ ತ್ವರ 2 ಸೃಷ್ಟಿಗೀಶನ ಗುಣಗಳ ಪಾಡುತಲಿ ವ- ಶಿಷ್ಠರು ವಿಶ್ವಾಮಿತ್ರ ಕಶ್ಯಪ ಭಾರದ್ವಾಜ ಮುನಿಗಳು ದೇವೇಶನ ಸ್ತುತಿಸುತ ಅತ್ರಿ ಜಮದಗ್ನಿ ಜಾಬಾಲಿಗಳು ಶ್ರೀಕೃಷ್ಣನೆ ಪರನೆಂದು- ತ್ತಮ ಋಷಿಗಳು ಪೊಗಳುತಲಿರಲು ಪರಮೇಷ್ಠಿ ಪಿತನ ತ- ನ್ನಿಷ್ಟ ಭಕುತರನು ಸಲಹಲು ಕಂಕಣ ಕಟ್ಟಿಹ ಕಮಲನಾಭವಿಠ್ಠಲ ತ್ವರ ಶಿಷ್ಟರ ಸಲಹಲು ಸರಸರ ಓಡುತ 3
--------------
ನಿಡಗುರುಕಿ ಜೀವೂಬಾಯಿ