ಒಟ್ಟು 1685 ಕಡೆಗಳಲ್ಲಿ , 106 ದಾಸರು , 1252 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿತ್ತಗೊಟ್ಟು ಸಿರಿಕೃಷ್ಣ ಕಾಯಿ ಕಂಡ್ಯ ಪ ಮತ್ತೊಬ್ಬ ನಾನಲ್ಲ ನಿನ್ನ ಭೃತ್ಯರ ಭೃತ್ಯಅ.ಪ ಕಾಲನವರ ಮುನ್ನ ಮುಂಚೂಣಿ ದಾಳಿಗೆಕೀಳು ಮನಮಂತ್ರಿ ಮೂಲೆಯ ಪೊಗಲುಮೂಲ ಬಲದಾಳಿಗೆ ಮುರಿದು ನಾನೋಡಲುಕಾಲಗೆಟ್ಟು ನಾನಿಹ ಕಾಲದಲ್ಲಿ 1 ಪಿತ್ತವೆಂಬ ಕಿಚ್ಚು ವಾತಕೂಡ್ಹೆಚ್ಚಿತುಹತ್ತಿಕೊಂಡು ದೇಹಪುರ ಸುಡುವಾಗಮತ್ತೆ ಶ್ಲೇಷ್ಮವು ಕೂಡಿ ಸುತ್ತು ಮುತ್ತೆಳೆವಾಗಎತ್ತ ಹೋಗಲೆಂಬ ಸಂಕಟದೊಳಗೆ 2 ತಿಂದೋಡಿ ಬಂಧುಗಳೆಲ್ಲ ಕೈಬಿಟ್ಟರುಮುಂದೆಮದೂತರು ಬಂದು ನಿಂದಾಗಎಂದಿಗಾದರು ಒಮ್ಮೆ ನೆನೆದುದ ಕೈಗೊಂಡುಹಿಂದಿಟ್ಟುಕೊಂಡೆನ್ನ ಕಾಯಿ ಕಂಡ್ಯ ಕೃಷ್ಣ3
--------------
ವ್ಯಾಸರಾಯರು
ಚಿತ್ತಾಭಿಮಾನಿ ಬಾರೆ ತ್ವಚ್ಚರಣಕಮಲ ತೋರೆ ಪ ಭೃತ್ಯಾರ್ಥಕಾರಿಣೆ ನೀರೆ ಭುವನೈಕ ಸುಗುಣಧಾರೆ ಅ.ಪ ನಿರ್ಜರವರದೆ ಸಂಪನ್ನೆ ನಿಗಮಾಭಿಮಾನಿ ಪ್ರಸನ್ನೆ 1 ಬುದ್ಧ್ಯಾದಿ ತತ್ವದೊಡೆಯರು ಭೃತ್ಯರು ನಿನಗೆನಿಸುವರು ಬದ್ಧರು ನಿಮ್ಮನ್ನು ಬಿಟ್ಟು ದುರ್ಭವದಿ ಬೀಳ್ವರು ಕೆಟ್ಟು 2 ಜಾನಕಿ ನೀನೆ ಮಹಾಮಾಯೆ ಮನ್ಮಾನಸದೊಳಿರು ತಾಯೆ 3 ಐಶ್ವರ್ಯಮದದಿ ಕೆÀಲರು ಈಶ್ವರಿ ನಿನ್ನನು ಮರೆಯುವರು ಪಶ್ವಾದಿಗಳ ಸಮವವರೂ ನಿಸ್ವರಾಗಿಗತಿ ದೂರರಹರು 4 ಸ್ವಾಮಿ ಜೀವೇಶ ತವ ಭರ್ತ ಕಾಮಿತ ಪ್ರದಾಯಕ ಪಾರ್ಥ- ಸೂತನ ನಾಮ ಸ್ಮರಣೆ ಸ್ವಾರ್ಥ ಗುರುರಾಮ ವಿಠಲ ಕರ್ತ 5
--------------
ಗುರುರಾಮವಿಠಲ
ಚೋದ್ಯ ಚೋದ್ಯ ಹರಿ ನಿನ್ನ ಆಟ ಸುಲಭವಲ್ಲಾರಿಗೆ ತಿಳಿಯದೀ ಮಾಟ ಪ ಉಣಿಸುವವರೊಳು ನೀನೆ ಉಣುತಿರುವವರಲಿ ನೀನೆ ಉಣಿಸುಣಿಸಿ ಅಣಕಿಸುವ ಬಿನುಗರಲಿ ನೀನೆ ಮಣಿಯುವವರೊಳು ನೀನೆ ಮಣಿಸಿಕೊಂಬರಲಿ ನೀನೆ ಕ್ಷಣಕ್ಷಣಕೆ ಬದಲ್ವಾಗ ಬಣ್ಣಕಗರಲಿ ನೀನೆ 1 ಹೊಡೆಯುವವರಲಿ ನೀನೆ ಹೊಡೆಸುವವರಲ್ಲಿ ನೀನೆ ಹೊಡೆಸಿಕೊಳ್ವರಲಿ ನೀನೆ ಬಿಡಿಸುವವರಲಿ ನೀನೆ ದುಡಿಯುವವರಲಿ ನೀನೆ ದುಡಿಸಿ ಕೊಂಬರಲಿ ನೀನೆ ಬಡವರಲಿ ನೀನೆ ಬಲ್ಲಿದರೊಳ್ನೀನೆ 2 ಕೊಟ್ಟೊಡೆಯರಲಿ ನೀನೆ ಬಿಟ್ಟೋಡ್ವರಲಿ ನೀನೆ ಕೊಟ್ವೊವಚನತಪ್ಪುವ ಭ್ರಷ್ಟರಲಿ ನೀನೆ ಶಿಷ್ಟನಿಷ್ಟರಲಿ ನೀನೆ ಬಿಟ್ಟಾಡ್ವರಲಿ ನೀನೆ ಇಟ್ಟಿಟ್ಟು ಹಂಗಿಸುವ ದುಷ್ಟರಲಿ ನೀನೆ 3 ಪಾಪಿಷ್ಟರಲಿ ನೀನೆ ಕೋಪಿಷ್ಟರಲಿ ನೀನೆ ಶಾಪಿಸುವರಲಿ ನೀನೆ ಶಾಪಕೊಂಬರಲಿ ನೀನೆ ತಾಪತ್ರದಲಿ ನೀನೆ ಭೂಪತಿಗಳೊಳು ನೀನೆ ಅಪಾರ ಸೃಷ್ಟಿ ಸರ್ವವ್ಯಾಪಕನು ನೀನೆ 4 ಇನ್ನರಿದು ನೋಡಲು ಅನ್ಯವೊಂದಿಲ್ಲವು ನಿನ್ನಪ್ರಭೆಯೆ ಸಕಲ ಜಗವನ್ನು ಬೆಳಗುವುದು ನಿನ್ನ ರೂಪವೆ ಜಗ ಎನ್ನಯ್ಯ ಶ್ರೀರಾಮ ಭಿನ್ನಬೇದ ಬಿಡಿಸೆನ್ನ ಧನ್ಯನೆನಿಸಯ್ಯ 5
--------------
ರಾಮದಾಸರು
ಛಂದದಿಂದ ಬಂದು ಸಲಹೊ ಫಂಡರೀಶ ನಿನ್ನ ನಂಬಿದೆ ಪ ತಂದೆ ನೀನೆ ಸರ್ವರಿಗೆ ಅನಿಮಿತ್ತ ಬಂಧುವಲ್ಲವೆ ಅ.ಪ ದೋಷಿನಾನು ಮೂಢನಾನು ವಲಿಯೆನೆಂದು ಏಕೆ ಹೇಳು ದೋಷದೂರ ಜ್ಞಾನರೂಪ ಬಿಂಬ ನಿನ್ನ ದಾಸನಲ್ಲವೆ 1 ಎಲ್ಲಾ ಸತ್ತಾದಾತ ನೀನು ಇಲ್ಲ ನಿನಗೆ ಭೇದವೇನು ನಲ್ಲ ಶರಣು ಎಂದಮೇಲೆ ವಲ್ಲೆ ಎನ್ನೆ ಬಿರುದು ಪೋಗದೆ 2 ಕಾಕುಮಾಡಿ ಎನ್ನ ಜಗದಿ ನೂಕಿ ಬಿಟ್ಟು ಭಂಟರಲ್ಲಿ ಸಾಕದೇನೆ ಬಿಟ್ಟರೀಗ ಲೋಕನಗದೆ ಭಕ್ತರಾಣೆ 3 ಮುಂದುಮಾಡಿ ಹಿಂದೆ ಎನ್ನ ಹಿಂದು ಮಾಡಿ ಈಗ ನಗುವೆ ಇಂದಿರೇಶ ನಿನ್ನ ನ್ಯಾಯ ಮಂದನಾನು ಅರಿಯೆ ಶರಣು 4 ಲಕುಮಿ ಮೊದಲು ಎಲ್ಲಾ ಜಗಕೆ ಶಕುತ ನೀನೆ ಒಬ್ಬ ಆಶ್ರಯ ನೀಡಿಕಾಯೋ ಬೇಗನೆ 5
--------------
ಕೃಷ್ಣವಿಠಲದಾಸರು
ಛೀ ಛೀ ಛೀ ಛೀ ಪ ಬಿಟ್ಟು ಕೊಡೋ ನೀ ಸಂಸಾರ ಭ್ರಾಂತಿ | ಎಷ್ಟು ಸೋಸುವಿ ದುಃಖದ ಪಂಥಿ | ಅಷ್ಟು ಪಾಶದೀ ಬಿಗಿದಿಹ ಗ್ರಂಥಿ | ಕಷ್ಟ ಪಟ್ಟಿನ್ನು ಮಾಡುವಿ ಚಿಂತಿ 1 ಸತಿ ಸುತರೆಲ್ಲಾ | ಘನ್ನಸ್ನೇಹವ ಮಾಡುವರಲ್ಲಾ | ಧನ ಯೌವನ ಕೊರತ್ಯಾಗಿ ಸೊಲ್ಲಾ | ತೃಣ ಸಮಮಾಡಿ ಬಗೆವರು ಖುಳ್ಳಾ 2 ಹಳೆದಾಯಿತು ತಾಳಿದ ಕಂಥೀ | ಬಲವಿಂದ್ರಿಯ-ವಾದವು ಶಾಂತಿ | ಬಲು ನೆರೆಯಿತು ರೋಗದ ಸಂತಿ | ಕೆಳಗಾಯಿತು ಪೌರುಷ ಖಂತಿ 3 ಹಿರಿಕಿರಿಯರು ಸರಿಕರು ನಿನ್ನಾ | ಸರಿದ್ಹೋಗುದು ಕಾಣಲಿಲ್ಲÁ ಕಣ್ಣÁ | ಅರಿತು ವಿವೇಕವ ಪಡಿಯದೆ ಘನ್ನಾ | ಮರೆದಾಗುರೆ ನೀ ಮಸಿಮಣ್ಣಾ 4 ಒಂದಾಗಲು ಮತ್ತೊಂದಾಶೆ | ಸಂಧಿಸುವದು ವಾಸನೆ ಸೂಶಿ | ತಂದೆ ಮಹಿಪತಿ ನಂದನು ಹೇಸಿ | ಇಂದು ಸಾರಿದಾ ಹರಿನಾಮ ಸ್ಮರಿಸಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಛೀ ಛೀ ಮನವೆ ನಾಚದ ತನುವೆನೀಚವೃತ್ತಿಯ ಬಿಟ್ಟುನೆನೆ ಕಂಡ್ಯ ಹರಿಯ ಪ. ಕಿವಿಗೊಟ್ಟು ಗಂಟೆಯ ನಾದಕ್ಕೆ ಹುಲ್ಲೆಯನಿವಹ ಬಲೆಗೆ ಸಿಕ್ಕಿ ಬಿದ್ದುದನರಿಯನವ ಯೌವನೆಯರ ಕೋಕಿಲಾಲಾಪದಸವಿನುಡಿಗೇಳದಚ್ಯುತನ ಕಥೆ ಕೇಳೊ 1 ಪಣ್ಣೆಂದು ಭ್ರಮಿಸಿ ಪತಂಗ ದೀಪದಿ ಬಿದ್ದುಉಣ್ಣದುರಿವುದ ನೀ ಕಂಡು ಕಂಡರಿಯಬಣ್ಣದಬಲೆಯರ ರೂಪಿಗೆ ಮರುಳಾಗಿಮಣ್ಣ ತಿನ್ನದೆ ಮಾಧವನ್ನ ನೀ ಸ್ಮರಿಸೋ 2 ಗಾಣದ ತುದಿಯ ಮಾಂಸವ ಮೆಲ್ಲುವ ಮತ್ಸ್ಯಪ್ರಾಣವ ಬಿಡುವುದಂಗನೆಯರಧರವಮಾಣದೆ ಬಯಸಿ ಕೆಡದೆ ಶ್ರೀಮನ್ನಾರಾ-ಯಣ ನಾಮಾಮೃತಸವಿ ಎಲೆ ಮನವೆ 3 ಕರಿ ಕರಿಣಿಯ ಸ್ಪರುಶಕೆ ಪೋಗಿಕುಳಿಯ ಬಿದ್ದುದ ನೀ ಕಂಡು ಕಂಡರಿಯಲಲನೆಯರಾಲಿಂಗನಕೆÀಳೆಸದೆ ಸಿರಿ-ಲಲನೇಶನಂಘ್ರಿಯ ಅಪ್ಪಿಕೋ ಮನವೆ 4 ಅಳಿ ಪರಿಮಳಕ್ಕಾಗಿ ನಳಿನದೊಳಗೆ ಸಿಕ್ಕಿಅಳಿವಂತಂಗನೆಯ ಮೈಗಂಧವ ಬಯಸಿಬಳಲದೆ ವರದ ಶ್ರೀಕೃಷ್ಣನಂಘ್ರಿಯೊಳಿಪ್ಪತುಳಸಿಯನಾಘ್ರಾಣಿಸು ಕಂಡ್ಯಮನವೆ 5
--------------
ವ್ಯಾಸರಾಯರು
ಜಂಗಮನು ಇಂತಿವನು ಸರ್ವಸಂಗ ದೂರಾದವನೀಗ ಜಂಗಮ ಪ ತನ್ನ ತಿಳಿದು ತಾನಾದವ ಜಂಗಮ ಜಗವಭಿನ್ನವೆಂದು ಕಾಣದವ ಜಂಗಮಹೊನ್ನು ಹೆಣ್ಣು ಬಿಟ್ಟವನು ಜಂಗಮ ಸಂ-ಪನ್ನ ಸಾಧು ಸಂಗವಿಹ ಜಂಗಮ 1 ಒಳಗೆ ಹೊರಗೆ ಒಂದಾದವ ಜಂಗಮ ಎಲ್ಲಹೊಳೆವುದೊಂದೆ ಜ್ಯೋತಿಯು ಎಂಬುವ ಜಂಗಮಹೊಲೆಯು ಶುದ್ಧವ ಕಳೆದವ ಜಂಗಮ ಎನಗೆಕುಲವು ಛಲವು ಇಲ್ಲವೆಂಬುವ ಜಂಗಮ 2 ಅಂಗ ಲಿಂಗವಾಗಿಹ ಜಂಗಮಲಿಂಗ ಅಂಗ ಏಕವಾಗಿಹ ಜಂಗಮಮಂಗಳವೇ ನಿತ್ಯವಿಹ ಜಂಗಮ ಗುರುಲಿಂಗವಾದ ಚಿದಾನಂದ ಜಂಗಮ 3
--------------
ಚಿದಾನಂದ ಅವಧೂತರು
ಜಯ ಜಯ ನಿಮಗೆ ಜಯವಣ್ಣ ಭಯವಿಲ್ಲೀನುಡಿ ಕೇಳ್ ಚಿಣ್ಣ ಪ ಶ್ರೀ ಮನೋಹರನ ಲೀಲೆಯಿದು ಸು ಕ್ಷೇಮವಹುದು ಸತ್ಪುರುಷರಿಗೆ1 ಈ ಜಗತ್ತನೂ ಈಶ್ವರನೂ ತಾ ರಾಜನಾಗಿ ಕಾಪಾಡುವನು 2 ಕುರುಡರು ತಾವ್ ಕೆಡುವರು ಕೊನೆಗೆ 3 ಇದರೊಳುಂಟು ಬಹುವಿಧ ಭೇದ ವದರುತಿಪ್ಪದು ಸಕಲವೇದ4 ಅಂತ್ಯವಿಲ್ಲದಿಹ ಕಾರಣದಿ ಅ ನಂತ್ಯವೆಂದು ಪೇಳ್ವರು ಭರದಿ 5 ಮನುಜ ಜನ್ಮ ಬಹುದುರ್ಲಭವು ಮನನಶೀಲರಿಗಹುದು ಶುಭವು 6 ಮರೆಯಬೇಡಿ ಜನರೆ ನೀವು ಅರಿತು ಅರಿಯದವರಿಗೆ ನೋವು 7 ಕತ್ತಲೆ ಕೊನೆಯಿಲ್ಲದ ಘೋರ 8 ವುಳಿಯದು ನಿಮಗದು ಕೇಳ್ ಜನರೆ 6 ಧರ್ಮವೆಂಬ ಮೂಟೆಯ ಕಟ್ಟೆ ಬಟ್ಟೆ 10 ಗುರುವಾಜ್ಞೆಯ ಮೀರುವುದು ಸಲ್ಲ ಈ ದುರುಳತನ ನಿಮಗೆ ಸರಿಯಲ್ಲ 11 ನಾನೇ ಶ್ರೇಷ್ಠನೆಂಬುವ ಮಾತು ಶಾನೆ ವಡಕು ಗಡಿಗೆಯು ತೂತು 12 ಹಿಂದಿನವರ ಕಷ್ಟವ ನೋಡಿ ಮುಂದಕೆ ಸತ್ ಸಾಧನೆ ಮಾಡಿ 13 ಮೂರು ಕರಣ ಶುದ್ಧಿಯು ಬೇಕು ಧೀರ ಜನರಿಗಿಷ್ಟೇ ಸಾಕು 14 ಜನರ ನೋಡಿ ನಡೆಯಲಿಬೇಡಿ ಕೊನೆಗೆ ನಿಮಗೆ ಕಾಲಿಗೆ ಬೇಡಿ 15 ಹೆಚ್ಚಪೇಕ್ಷಿಸೆ ಬರುವುದಿಲ್ಲ ಮೆಚ್ಚನು ನಿಮಗೆ ಸಿರಿಯನಲ್ಲ 16 ನಿರ್ಮಲ ಮಾರ್ಗ ಹುಡುಕಿದಿರಾ 17 ಜ್ಞಾನರತ್ನ ಸಂಪಾದನೆಯು ಹೀನ ಜನರಿಗಾಗದು ಕೊನೆಯು 18 ದುರಾಸೆಯಲಿ ಕೆಡುವರು ಕೆಲರು ನರಾಧಮರು ಎಂದೆನಿಸುವರು 19 ಪರಿಯಂತ ತಂ ತಮ್ಮಟ್ಟಿಗಿಹುದು ಅಂತ 20 ಗೂಡಿನ ಮೇಲೆ ದುರಭಿಮಾನ ಮಾಡಿ ಮಾಡಿ ಕೆಡುತಿಹರು ಜನ 21 ಯೀಗೂಡಿಗೆವೊಂದಾಧಾರ ಯೋಗಿಗಳರಿವರಿದರಸಾರ 22 ವರ ರಸಗಳು ನಾಲ್ಕು ತೊಗರು 23 ಹಂಚೇಳರಿಂ ಮಾಡಿಹದೇವ 24 ಘಟಿಸಿರುವುದು ಪತ್ತಲೆಯಿದರೊಳ್ 25 ಮರನಿದೆಂದು ಶಾಸ್ತ್ರದ ಮೂಲ ಅರಿಯದೆ ನಾನೆಂಬೆನು ಬಾಲ 26 ಪಕ್ಷಿಗಳೆರಡೀ ಮರದಲ್ಲಿ ಸಾಕ್ಷಿ ಒಂದು ಒಂದಕೆ ಅಲ್ಲಿ 27 ಮರದ ಪಣ್ಣು ತಿಂಬುವದೊಂದು ನಿರುತವು ನೋಡುತಿರುವದೊಂದು 28 ದ್ವಾಸುಪರ್ಣ ಶೃತಿ ಇದರರ್ಥ ದಾಸನಾಗದಿರುವನು ವ್ಯರ್ಥ 29 ಅಧ್ಯಾತ್ಮ ವಿದ್ಯದಲಿ ತೋರುವುದೇ 30 ಜೀವನಾಮ ಆತ್ಮನಿಗುಂಟು ದೇವತಾನು ತಬ್ಬಿದ ಗಂಟು 31 ಅಭೇದ ಶೃತಿಗಳೇನಕ ವಿಧ ಸ್ವಭಾವದಿರುನಡೆ ತೋರುವದ32 ಸುರರುತ್ತಮರು ನರರಾನಿತ್ಯ ಸುರೇತರರು ನೀಚರು ಸತ್ಯ 33 ನೂರು ವರುಷ ಬದುಕುವರೆಂದು ಮೀರಿ ಮನದಿ ಯೋಚಿಸಿ ಮುಂದು 34 ಬಹು ಧನಾರ್ಜನೆಯ ವೂಹೆಯಲಿ 35 ಮೊದಲು ಅನ್ನಕಿಲ್ಲೆಂದು ಮತಿ ವಿಧ ವಿಧ ವಸ್ತ್ರಗಳಲಿ ಪ್ರೀತಿ 36 ನಾಬಡವನು ಎಂದಗಲಿರುಳು 37 ತನಗೆ ಬೇಕಂತ ಚಿಂತೆಯೊಳು 38 ಇತರರ ನೋಡಿ ತನಗಪೇಕ್ಷೆ ಗತಿ ಇಲ್ಲದೆ ಇರುವುದೆ ಶಿಕ್ಷೆ 39 ತಾವ್ ಸಮಂಜಸದಿ ಪೇಳಿದರು 40 ಪ್ರವೃತ್ತಿ ಮಾರ್ಗದ ಸಂಪತ್ತು ಭವಾಂಬುಧಿ ಸುಳಿಯು ವಿಪತ್ತು 41 ಫಲವ ಕೋರಿ ಕರ್ಮವ ಮಾಡಿ ಹಲವು ಯೋನಿಗಳೊಳೋಡಾಡಿ42 ಮರಳಿ ಮರಳಿ ಜನನ ಮರಣದೆ ದರಿಯ ಕಾಂಬ ಬಗೆ ದಾರಿಯದೆ 43 ಇದುವೆ ದೊಡ್ಡ ಸಂಸೃತಿ ವೃಕ್ಷ ತುದಿ ಮೊದಲಿಗು ದೊರಕದು ಮೋಕ್ಷ 44 ಇನ್ನು ಅಕ್ಕ ತಂಗಿಯು ಮೊದಲು 45 ಸತಿ ಸುತರು ಬಳಗಗಳು 46 ಇವರು ತನ್ನವರಿತರರಲ್ಲ ಭವ ಜಲಧಿಯ ಜಂತುಗಳೆಲ್ಲ 47 ಕೊಡದಿದ್ದರೆ ಕೋಪವು ಬಹಳ 48 ವಿತ್ತವಿರಲು ಬಂಧುಗಳೆಲ್ಲ ಹತ್ತಿ ಇವನ ಬಾಧಿಪರೆಲ್ಲ 49 ಸುಳ್ಳುಹೇಳಿದರೆ ಬಹುನಂಬಿಕೆ 50 ಹಿತೋಪದೇಶದಿ ಬಹುಕೋಪ ಪತಿತ ಜನರಿಗೆ ಇದು ಪಾಪ 51 ಒಬ್ಬ ದೈವಲೋಕಕೆ ಸತ್ಯ ಹಬ್ಬವವನ ಭಜಿಪುದಗತ್ಯ 52 ಕಾಮುಕರಿಗೆ ಕಡೆಗೂ ದುಃಖ ನೇಮವದಕೆ ಮೂಲವುರೊಕ್ಕ 53 ಸ್ಪøಹದಿಂದಲೆ ಕೋಪವು ಬಹುದು ವಿಹಿತವೆಂದು ನಗುವನೆ ಸಾಧು 54 ಲೋಭದಿಂದ ಮೂಲಕೆ ನಾಶ ಸ್ವಾಭಾವ್ಯದಿ ದುರ್ಜನಕಾಶಾ 55 ರಾಶಿ ಧನವ ಕೊಳ್ಳೆಯು ಕೊಡುವ 56 ದಾನಕೆಂದರಿಲ್ಲವು ಕಾಸು ದಂಡಕೊಡುವುದಕೆ ಬಹುಲೇಸು 57 ನಷ್ಟವಾದರೂ ಮನಕಿಷ್ಟ ದುಷ್ಟಾತ್ಮರು ಪಡುವರು ಕಷ್ಟ 58 ಆರ್ಯರುಕ್ತಿ ಕೇಳುವುದಿಲ್ಲ ಕಾರ್ಯದಲಿ ವಿಘಾತವೆ ಎಲ್ಲ 59 ಧನವಿದ್ದರು ಸೌಖ್ಯವು ಕಾಣೆ ಘನದುರಾಸೆ ಕುಜನರಿಗೆ ಆಣೆ 60 ಭೂಮಿ ಉಂಟು ತನಗೆಂಬುವರು ನೇಮದಿ ದಂಡವ ತೆರುತಿಹರು 61 ಮಳೆಬೆಳೆಯನು ನಿಂದಿಪರು ಕೆಲರು ಖಳರು ಸುಮನಸರ ದೂಷಿಪರು62 ಮೊದಲು ತುದಿಯಲಿ ದುರಭಿಮಾನ 63 ವ್ಯಾಪಾರದಿ ಧನ ಕಳಕೊಂಡು ಕೋಪ ವ್ಯಾಜ್ಯಕೆಳೆವದೆ ಫಂಡು 64 ಬಲುಧನವ ಕೂಡಿಸುತಲಿ ಮುಂದು 65 ಮುಖದಾಕ್ಷಿಣ್ಯದಿ ಮಾತಾಡಿ ವಿಕಲರನರ ಸ್ನೇಹದಿ ಕೂಡಿ66 ದೊಡ್ಡದಾಗಿ ಮನೆಯನು ಕಟ್ಟಿ ದುಷ್ಟತನದಿ ವಾದಿಸಿ ಬಿಟ್ಟಿ 67 ಕೂಲಿಯವರ ಹೊಟ್ಟೆಗೆ ಕೊಡದೆ ಲೋಲನಾಗಿ ವಂಚನೆ ಬಿಡದೆ 68 ಸಂಸಾರವಿದೆ ಸ್ಥಿರವೆಂದು ಹಿಂಸೆಪಡುತಲಿ ಸದಾನೊಂದು 69 ಚತುರ ಶೀತಿ ಲಕ್ಷಯೋನಿಗಳೊಳ್ ಮತಿಹೀನರಾಗಿ ಜನಿಸುತಲೂ 70 ಭದ್ರವು ತಮಗೆಂದು ಪ್ರಾಣಿಗಳು 71 ಇದಕ್ಕಾಗಿ ಪರಾಧೀನದಲಿ ಪದೇ ಪದೆಗೆ ತಾವು ನೋಯುತಲಿ 72 ಮನುಜ ಜನ್ಮ ಬರುವುದೆ ಕಷ್ಟ ಮಾನಿತನಾದವನೆ ಅತಿ ಶ್ರೇಷ್ಠ 73 ಭೋಧಿಸುವಾತನೆ ಶುಭತಮನು 74 ಸುಜನರಿಲ್ಲವವರದೆ ಪಂಥ 75 ಕರ್ಮಾರ್ಥ ಶೃತಿ ಗಹನದಲಿ ನಿರ್ಮಲರಾಗದೆ ಚಿಂತೆಯಲಿ&ಟಿbsಠಿ
--------------
ಗುರುರಾಮವಿಠಲ
ಜಯ ಜಯವೆನ್ನಿ ಕೈಯ ಮುಗುಬನ್ನಿ ದಯವುಳ್ಳ ಮಹಿಮಗಾರುತಿ ಮಾಡುವ ಬನ್ನಿ ಧ್ರುವ ಮನವೆ ಬತ್ತಿ ತನುವಾರತಿ ಘನಕೆ ಮಾಡವ ಬನ್ನಿ ನೆನವು ತುಪ್ಪ ಙÁ್ಞನದೀಪವನ್ನು ಬೆಳಗುವ ಬನ್ನಿ 1 ಭಾವಗುಟ್ಟು ಠಾವಿಲಿಟ್ಟು ದೈವ ನೋಡು ಬನ್ನಿ ಮಾವಮಕರಗುಣ ಬಿಟ್ಟು ಸೇವೆಮಾಡು ಬನ್ನಿ 2 ಮಹಿಪತಿಸ್ವಾಮಿಗಿನ್ನು ಜಯಜಯವೆನ್ನಿ ಬಾಹ್ಯಾಂತ್ರ ಬೆಳಗಿ ಪೂರ್ಣ ಧನ್ಯವಾಗು ಬನ್ನಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಾನಕಿಯು ನಮ್ಮಮ್ಮ ನಮಗೆ ಭಯವೇನು ಪ ಪವಮಾನ ತನಯನು ಪಾಲಿಪ ಗುರುವಯ್ಯಾ ಅ.ಪ ಕಾಲಕಾಲದಿ ತಪ್ಪದೆ | ಭತ್ಯವ ಹಾಕಿ ಬಾಲಲೀಲೆಗಳಾಡಿಸಿ ಮೇಲೆ ತುಡುಗಾಟವಾಡಿದರೆ ಕೆನ್ನೆಯ ಹಿಂಡಿ ಹಾಲ ಕುಡಿಸಿ ಮಕ್ಕಳರ್ಥಿಯ ನೋಡುವ 1 ಇತರ ಮಕ್ಕಳಿಗೆಲ್ಲಾ | ಅವರ ಮಾತಾ ಪಿತರು ವಡವೆಗಳಿಟ್ಟು ಮಿತಿಯಿಲ್ಲದೆ ಬೈದು ಬಲು ಚಿಂತೆಯ ಪಡುವರು 2 ಕಳ್ಳರಿಗೆ ಸಿಕ್ಕದೈಯ್ಯ | ನಮ್ಮೊಡವೆಗಳ್ ಕಳಚುವುದಕೆ ಬಾರದು ಒಳ್ಳೆ ವಸ್ತ್ರವ ಉಡಿಸಿ ಉಚಿತ ತಿಂಡಿಯ ಕೊಡಿಸಿ ಸುಳ್ಳಾಡದಂದದಿ ಸುತ್ತಿಸಿ ನಗುವರು 3 ಓದು ಬರಹವ ಕಲಿಸಿ | ನಮ್ಮನು ಕೆಲವು ಹೊತ್ತು ಆಟಗಳಾಡಿಸಿ ಆದರಿಸುತ ಜನ್ಮ ಜನ್ಮಗಳಲಿ ಬಿಡದೆ ಕಾದು ಕೊಂಡಿರುವರು ಕಡೆಗೂ ನಮ್ಮಗಲರು 4 ಇಂತಹ ನಮ್ಮವರ ಬಿಟ್ಟು | ಬರಿದೇ ಲೋಕ ಸಂತೆಯವರನು ನಂಬುವರೆ ಎಂತಾದರೂ ಗುರುರಾಮ ವಿಠಲನ ನಾಮ ಸ್ವಂತವಾದರೆ ಮುಕ್ತಿ ಸ್ವಾಧೀನವಾಗುವುದು5
--------------
ಗುರುರಾಮವಿಠಲ
ಜೋ ಜೋ ಎನ್ನಿ ನಿರ್ವಿಕಾರಿಯಜೋ ಎಂದು ತೂಗಿರಿ ಬ್ರಹ್ಮಾಸ್ತ್ರ ದೊರೆಯ ಪ ವಾದಾತೀತಳಿಗೆ ಹೃದಯ ತೊಟ್ಟಿಲ ಮಾಡಿವೇದ ನಾಲಕು ಎಂಬ ನೇಣನೆ ಹೂಡಿಸಾಧನ ಚತುಷ್ಪಯ ಹಾಸಿಗೆ ಹಾಸಿಬೋಧಾನಂದಳನು ಭಾವದಿ ತಂದು ನೋಡಿ 1 ಶುದ್ಧದ ಚವುರಿ ಸಡಿಲಿಸಿ ಮಗ್ಗುಲಲಿ ಶಾಂತರಸ ದೀಪಗಳ ಹಚ್ಚಿಹೊಡೆಯುತಿಹ ಭೇರಿಗಳ ಘಂಟಾರವ ಹೆಚ್ಚೆಎಡೆಬಿಡದೆ ಓಂಕಾರ ಮಂತ್ರ ಘೋಷಣವು ಮುಚ್ಚಿಕಿಡಿ ನಯನೆಯಳನು ನೋಡಿ ಹರುಷ ತುಂಬೇರಿ 2 ಹಿರಿದಾ ಖಡ್ಗದ ಹಲಗೆ ಬಲ ಭಾಗದಲಿಟ್ಟುಶರಶಾಙರ್É ಬತ್ತಳಿಕೆ ಎಡಭಾಗದಲ್ಲಿಟ್ಟು ದುಷ್ಟ ಶತ್ರುಗಳ ಕಾಲದೆಸೆಗಿಟ್ಟುಪರಮಾಮೃತ ಪಾನ ಪಾತ್ರೆ ತುಂಬಿಟ್ಟು 3 ಜೋ ಜೋ ಶತ್ರು ಸ್ತಂಭಿನಿ ಎನ್ನಿರಿ ನರರೆಲ್ಲಜೋ ಜೋ ಗತಿಮತಿ ಸ್ತಂಭಿನಿ ಎನ್ನಿರಿ ಸುರರೆಲ್ಲಜೋ ಜೋ ಜಿಹ್ವಾ ಸ್ತಂಭಿನಿ ಎನ್ನಿರಿ ಹರರೆಲ್ಲಜೋ ಜೋ ಸ್ತಂಭಿನಿ ಎನ್ನಿರಿ ಧರೆಯೆಲ್ಲ 4 ಜೋ ಜೋ ಸುರಗಿರಿ ಧೈರ್ಯದಾಯಿನಿ ಜೋ ಜೋಜೋ ಜೋ ಹರಿ ಸಮ ಭಾಗ್ಯವೀವಳೆ ಜೋ ಜೋಜೋ ಜೋ ಶಿವ ಸಮ ಸತ್ವವೀವಳೆ ಜೋ ಜೋಜೋ ಜೋ ನಂಬಿದ ರಾಜ್ಯವೀವಳೆ ಜೋ ಜೋ 5 ಭಕ್ತರಭಿಮಾನಿ ಭಕ್ತಮಾತೃಕೆ ಜೋ ಜೋಭಕ್ತವತ್ಸಲೆ ಭಕ್ತ ಕರುಣಾಳು ಜೋ ಜೋಭಕ್ತ ಜೀವನಿ ಭಕ್ತ ಬಂಧುವೆ ಜೋ ಜೋಭಕ್ತ ಚಿಂತಾಮಣಿ ಭಾಗ್ಯಳೇ ಜೋ ಜೋ 6 ಯೋಗಾರೂಢಕೆ ಏಕಾಕ್ಷರಿ ಜೋ ಜೋಯೋಗಿ ಹೃದ್ವಾಸಿನಿ ಯೋಗ್ಯಳೇ ಜೋಜೋಯೋಗಿ ಬೃಹತ್ಯಾಗಿ ವಿರಾಗಿ ಜೋಜೋಯೋಗಿಗಳ ಭಂಡಾರಿ ಯೋಗೀಳೆ ಜೋಜೋ 7 ಚಿದಬಿಂದುಗಳೆಂಬ ಮಂತ್ರ ಪುಷ್ಪ ಚೆಲ್ಲಿಚೆದುರೆಯರು ಮಂಗಳಾರತಿ ಬೆಳಗುತಿಲ್ಲಿಸದಮಳೆ ನೀ ಮಲಗು ಯೋಗ ನಿದ್ರೆಯಲಿಚಿದಾನಂದ ತಾನಾದ ಬಗಳಾಂಬೆ ಸುಖದಲಿ 8
--------------
ಚಿದಾನಂದ ಅವಧೂತರು
ಜೋ ಜೋ ಜೋ ಗುಂಡ ಪರಮಪ್ರಚಂಡ ಜೋ ಜೋ ಜೋ ಗುಂಡ ಸುರಚಿರದಂಡ ಪ ಜೋ ಜೋ ಜೋ ದೊಡ್ಡ ಕರಿಯಕಲ್ಗುಂಡ ಜೋ ಜೋ ಜೋ ಮದ್ದನರೆಯಚ್ಚಗುಂಡ ಅ.ಪ ದುಂಡು ಮಲ್ಲಿಗೆಗಿಂತ ಮೃದುವಾದ ಗುಂಡಾ ಕೆಂಡ ಸಂಪಿಗೆಗಿಂತ ಚೆಲುವಾದ ಗುಂಡಾ ಪುಂಡರೀಕಕ್ಕಿಂತ ಚೆಲುವಾದ ಗುಂಡಾ ಮೊಂಡ ಮೂಕರಕಯ್ಯ ಕೋದಂಡಗುಂಡಾ 1 ಒಬ್ಬಿಟ್ಟು ಹೂರಣವರೆಯುವ ಗುಂಡಾ ತಬ್ಬಿಬ್ಬಾಡುವರನು ಕಡುಗುವಾ ಗುಂಡಾ ರುಬ್ಬಿ ರುಬ್ಬಿ ದೋಸೆ ಯೀಯುವಾ ಗುಂಡಾ ಕೊಬ್ಬಿದ ಜನವನು ದಬ್ಬುವಾ ಗುಂಡಾ 2 ಪರಿಪರಿ ಬಂಧನವರಿಯದ ಗುಂಡಾ ಉರುಳಿಸಿದಲ್ಲಿಯೇ ನಿದ್ರಿಪ ಗುಂಡಾ [ವರಭಕ್ತಾವಳಿಗೆ ಸುಖವೀವಗುಂಡಾ] 3 ನೀನಿಲ್ಲದಿರುವ ಮನೆಗಳಿಲ್ಲ ಗುಂಡಾ ನೀನಿರುವಲ್ಲಿ ತಿಂಡಿಗಳುಂಟು ಗುಂಡಾ ಕಾನನದೊಳಗಿದ್ದು ಕರಗದ ಗುಂಡಾ ಮಾನವ ಗಣಕ್ಕೆಲ್ಲಾ ಬೇಕಾದ ಗುಂಡಾ4 ಒರಳುಕಲ್ಲಿನ ಮೇಲೆ ನೇಯುವಾ ಗುಂಡಾ ತರುಣಿಯ ಕರದೊಳು ನಲಿಯುವಾ ಗುಂಡಾ ವರ ದುಕೂಲಂಗಳ ಬಯಸದ ಗುಂಡಾ ವರದ ಮಾಂಗಿರಿರಂಗನೆನಿಸುವ ಗುಂಡಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜೋ ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ಜೋ ರಣಭೀಮ ಪ ಜೋ ಜೋ ಭಕ್ತರ ಕಷ್ಟನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ ಅ.ಪ. ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋಮಸೂರ್ಯರೆಂಬ ಕಲಶವ ಹೂಡಿನೇಮದಿ ವೇದಗಳ ಸರಪಣಿ ಮಾಡಿಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ1 ಸರಸಿಜೋದ್ಭವ ಸರಸ್ವತಿ ಭಾರತಿಗರುಡಶೇಷ ರುದ್ರರಿವರ ಸತಿಯರುಸುರರ ಕಿನ್ನರರು ಕಿಂಪುರುಷ ನಾರದರುಪರಿಪರಿ ಗೀತದಿ ತುತಿಸಿ ಪಾಡಿದರು 2 ವಸುದೇವಸುತನಾದ ಮುದ್ದುಮುರಾರಿಅಸುರೆ ಪೂತನಿಯ ಪ್ರಾಣಾಪಹಾರಿಅಸಮ ಸಾಹಸಮಲ್ಲ ದೈತ್ಯರ ವೈರಿಶಿಶುವಾಗಿ ದೇವಕೀಗಾನಂದ ತೋರಿ 3 ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿನಿಗಮಗೋಚರ ನಿತ್ಯಾನಂದನೆ ತ್ರುವ್ವಿ ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ 4ತಮನ ಮರ್ದಿಸಿ ವೇದತತಿಗಳನು ತಂದೆಸುಮನಸರಿಗಾಗಿ ಮಂದರಪೊತ್ತು ನಿಂದೆಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ 5 ತರಳನಾಗಿ ಬಲಿಯ ದಾನವ ಬೇಡ್ದೆಪರಶು ಧರಿಸಿ ಕ್ಷತ್ರಿಯರ ಸವರಿದೆದುರುಳ ರಾವಣನ ಶಿರವ ಚೆಂಡಾಡಿದೆಚರಿಸಿ ಮನೆಗಳ ಪಾಲ ಮೊಸರನ್ನು ಕುಡಿದೆ 6 ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲಪದ್ಮನಾಭ ಸರಿ ಭಕ್ತವತ್ಸಲನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ 7
--------------
ಶ್ರೀಪಾದರಾಜರು
ಜೋ ಜೋ ರಂಗಯ್ಯ ಜೋ ಜೋ ಕೃಷ್ಣಯ್ಯ ಮಲಗಯ್ಯ ಜೋ ಜೋ ಪ ಕಣ್ಣೇಕೆ ನೀನು ಮುಚ್ಚಲೊಲ್ಲೆಯೊ ರಂಗ ಬೆನ್ನು ಭಾರವಾಗಿರುವುದೇನೋ ದೇವ ಮಣ್ಣಿನೊಳು ನೀನಾಡಿ ಮೈ ನೋಯುವುದೇನೊ ಹೊನ್ನು ಕಶಿಪುವಿನ ಕರುಳ ಕಂಡಂಜಿದೆಯೇನೊ 1 ಚಿಣ್ಣ ನೀ ಧರೆಯನಳೆಯಲೇತಕೆ ಪೋದೆ ಗಣ್ಡುಗೊಡಲಿ ಪಿಡಿದು ಕೈಯಿ ಉಳುಕಿಹುದೇನೊ ಅನ್ನವ ಬಿಟ್ಟು ನೀ ಪರ್ನವೇತಕೆ ತಿಂದೆ ಬೆಣ್ಣೆಯ ಮೆದ್ದು ನಿನ ಹೊಟ್ಟೆ ನೊಯ್ಯುವದೇನೊ 2 ಬತ್ತಲೆ ತಿರುಗಿ ಮೈ ಬಿಸಿಯಾಗಿರುವದೇನೊ ಕತ್ತಿಯ ಪಿಡಿದು ತೇಜಿಯ ಹತ್ತಬೇಕೇನೊ ಹೊತ್ತಾಯ್ತು ಕಂದಯ್ಯ ಮಲಗೆಂದು ಯಶೋದೆ ಮುತ್ತಿಟ್ಟು ತೂಗಿದಳು ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ ಪಾಡಿ ತೂಗುವೆ ಮುದದಿಪ ಯೋಗಿಗಳರಸನೆ ಸಾಗರಶಯನನೆ ಭಾಗವತರಪ್ರಿಯ ಬಾಗಿ ಸ್ತುತಿಪರೊ ನಿನ್ನ ಅ.ಪ ಹರ ಬ್ರಹ್ಮಾದಿಗಳು ಕೂಡಿ ನಿನ್ನನು ಪರಿಪರಿ ವಿಧದಲಿ ಕೊಂಡಾಡಿ ಸುರರು ಗಂಧರ್ವರು ವರಋಷಿಗಳು ಕೂಡಿ ಪರಮ ಸಂಭ್ರಮದಿಂದ ಹರಿ ನಿನ್ನ ಸ್ತುತಿಪರು 1 ಗೋಕುಲದ ನಾರಿಯರು ಗೋವಿಂದ ನಿನಗೆ ಬೇಕಾದ ಪಾಲ್ಮೊಸರು ಜೋಕೆಯಿಂದಲಿ ಹೊಸ ಬೆಣ್ಣೆ ತಂದಿಹೆವೆಂದು ಅ- ನೇಕ ಬಗೆಯಲಿ ಸ್ತುತಿ ಮಾಡಿ ಬೇಡುತಲಿರುವರು 2 ದಿಟ್ಟ ಗೋಪಾಲ ಕಯ್ಯೊಳಗೊಂದು ಪುಟ್ಟ ಬಚ್ಚೆಯ ಪಿಡಿದು ಅಚ್ಚುತ ನಿನಗೀವೆವೆಂದು ಬಾಗಿಲೋಳ್ ನಿಂದು ಪುಟ್ಟ ಮಕ್ಕಳು ಬಾಯಿಬಿಟ್ಟು ಪ್ರಾರ್ಥಿಸುವರು 3 ಇನಕೋಟಿ ಪ್ರಭೆ ನಾಚಿಪ ಮುಖ ಕಮಲದ ದನುಜದಲ್ಲಣ ನಿನ್ನನು ಸನಕಾದಿಗಳು ಸ್ತುತಿಮಾಡಿ ಮೈ ಮರೆತರೊ ವನಿತೆಯರೋಕುಳಿಗಳನಾಡಿ ನರ್ತಿಸುವರೊ 4 ನಿದ್ರೆ ಮಾಡಿದರೆ ನೀನು ಈ ಜಗವೆಲ್ಲ ಉದ್ಧಾರವಾಗುವುದೇನು ನಿದ್ರೆ ಸಾಕೇಳೆಂದು ದುರ್ಗಾದೇವಿಯರು ಸ್ತುತಿಸೆ ಮುದ್ದು ಕೃಷ್ಣನೆ ಭಕ್ತರುದ್ಧಾರಕರ್ತನೆ5 ಹಯ ಮುಖ ಹರಿ ಮತ್ಸ್ಯನೆ ಕೂರ್ಮನೆ ವರಹ ಹಯಗ್ರೀವ ನರಸಿಂಹನೆ ಜಯವಟು ಭೃಗು ರಾಮಕೃಷ್ಣ ಬುದ್ಧನÉ ಕಲ್ಕಿ ಜಯ ನಾನಾ ರೂಪನÉ ಜಯವೆಂದು ಪೊಗಳ್ವರೊ6 ನವನೀತ ಚೋರನೆಂದು ನಾರಿಯರೆಲ್ಲ ನವವಿಧ ನುಡಿ ನುಡಿವರೊ ಭುವನ ಮೋಹನಸ್ವಾಮಿ ಸುಮನಸ ವಂದ್ಯನೆಕವಿ ಜನರಪ್ರಿಯ ಶ್ರೀ ಕಮಲನಾಭ ವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ