ಒಟ್ಟು 471 ಕಡೆಗಳಲ್ಲಿ , 77 ದಾಸರು , 382 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯಲ್ಲಿ ಧನ್ಯರು ಪೊರೆಯರು ಸತ್ಯಸ್ಥಿರವೀ ಮಾತಿಗೆ ಸದ್ಭಕ್ತರು ಸಾಕ್ಷಿಯಿಹರು ಪಪುಣ್ಯಾತ್ಮ ಪ್ರಿಯ ವೃತ ಸಾಕ್ಷಿ ಜಗನ್ಮಾನ್ಯ ನಾರದ ದೇವ ಋಷಿ ಶ್ರೇಷ್ಠ ಸಾಕ್ಷಿಧನ್ಯ ಧೃವರಾಯನು ಸಾಕ್ಷಿ ಹರಿಯಪೂರ್ಣ ವ್ಯಾಪ್ತಿಯ ತೋರ್ದ ಪ್ರಲ್ಹಾದ ಸಾಕ್ಷಿ 1ದೊರೆ ಅಂಬರೀಷನು ಸಾಕ್ಷಿಹರಿಗುರುಭಕ್ತಿ ನಾಮಕೆ ದ್ರೌಪದಿ ಸಾಕ್ಷಿಸ್ಥಿರ ವಿಭೀಷಣ ರಾಜ ಸಾಕ್ಷಿ ತನ್ನಮರಣ ಕಾಲದಿ ನೆನೆದ ಅಜಮಿಳ ಸಾಕ್ಷಿ 2ದೊರೆ ಧರ್ಮ ದೇವರು ಸಾಕ್ಷಿ ಜಗದ್ಗುರುವಾದ ಮಹ ರುದ್ರದೇವರು ಸಾಕ್ಷಿಗರಳಕಾಳಿಂಗನು ಸಾಕ್ಷಿ ಪ್ರಾಣಾತುರದಿಹರಿಯ ಕರೆದ ಗಜರಾಜ ಸಾಕ್ಷಿ 3ಶಿಲೆಯಾದ ಅಹಲ್ಯೆಯ ಸಾಕ್ಷಿ ಗರ್ವವರ್ತಿಸಿದ ನಹುಷನೃಗರು ಸಾಕ್ಷಿಚೆಲುವೆ ಗಂಡಿಕಾ ವೇಶ್ಯ ಸಾಕ್ಷಿ ಭಕ್ತಿಗೊಲಿದುನಲಿದಜ್ಞಾನಿವಿದುರನು ಸಾಕ್ಷಿ 4ಮೊರೆ ಹೊಕ್ಕ ಸುಗ್ರೀವ ಸಾಕ್ಷಿ ಬಾಲ್ಯಪರಮಮಿತ್ರನಾದ ಕುಚೇಲ ಸಾಕ್ಷಿಶರಬಿಟ್ಟ ಭೃಗುವಾದ ಸಾಕ್ಷಿ ಶ್ರೇಷ್ಠಹರಿದಿನ ವೃತದ ರುಗ್ಮಾಂಗ ಸಾಕ್ಷಿ 5ಪುಂಡಲೀಕ ಋಷಿಸಾಕ್ಷಿ ಆ ಮೃಕಂಡಮುನಿಜ ಮಾರ್ಕಾಂಡೇಯ ಸಾಕ್ಷಿಪಂಡಿತಸಾಂದೀಪ ಸಾಕ್ಷಿ ಕುರುಪಾಂಡವರ ಪಿತಾಮಹ ಭೀಷ್ಮನು ಸಾಕ್ಷಿ 6ಪಿರಿದು ಕಷ್ಟದ ನಳ ಸಾಕ್ಷಿ ಕೃಷ್ಣಕರುಣಿಕೆ ಪಾತ್ರಪರೀಕ್ಷಿತಸಾಕ್ಷಿನಳಕೂಬರು ಸಾಕ್ಷಿ ಸತ್ಯದ್ಹರಿಶ್ಚಂದ್ರಾದಿ ಪುಣ್ಯ ಶ್ಲೋಕರು ಸಾಕ್ಷಿ 7ನಿದ್ದೆಯ ಮುಚುಕುಂದ ಸಾಕ್ಷಿ ಆತ್ಮಬದ್ಧಭಕ್ತಿಯಲರ್ಪಿಸಿದಬಲಿಸಾಕ್ಷಿಶುದ್ಧಜ್ಞಾನಿಶುಕಸಾಕ್ಷಿ ಹರಿಯಸದ್ಯದಣನಾದ ಬಲಭದ್ರ ಸಾಕ್ಷಿ 8ಅರ್ಕಾದಿ ಋಷಿಗಳು ಸಾಕ್ಷಿ ವಿಶ್ವಾಮಿತ್ರದಕ್ಷ ಪ್ರಜೇಶ್ವರೆಲ್ಲ ಸಾಕ್ಷಿಮಿತ್ರೆ ಕುಬ್ಜಾ ತ್ರಿಜಟಿ ಸಾಕ್ಷಿ ಮಹಾಮೈತ್ರೇಯ ಪರಾಶರ ಮುನಿಶರು ಸಾಕ್ಷಿ 9ಇಂದ್ರಾದಿದಿವಿಜರುಸಾಕ್ಷಿ ಕೃಷ್ಣನ್ಹೊಂದಿ ಸೇವಿಸಿದುದ್ಧವಕ್ರೂರ ಸಾಕ್ಷಿಸುಂದರ ಗೋಪಿಯರು ಸಾಕ್ಷಿ ಪಾಪಸಂದೋಹದ್ಯುದೃತ ವಾಲ್ಮೀಕಿ ಸಾಕ್ಷಿ 10ಸರ್ವಮುಕ್ತಜೀವರು ಸಾಕ್ಷಿಯಾ ದೇವರು ವಸುದೇವ ದೇವಕಿಯರು ಸಾಕ್ಷಿಹರಿದಾಸರೆಲ್ಲರು ಸಾಕ್ಷಿ ಫಲಸಿರಿವಿಠಲಗೆ ಕೊಟ್ಟ ಶಬರಿಯ ಸಾಕ್ಷಿ 11
--------------
ಸಿರಿವಿಠಲರು
ಹರಿಯೆ ಗತಿಯೆನ್ನಿರೈ ಶ್ರೀನರಹರಿಯೆ ಶರಣೆನ್ನಿರೈ ಪ.ಹರಿಪಾದಕಮಲವ ನಂಬದ ಮೂಢನು ಮನುಜನಲ್ಲದನುಜಶ್ರೀಹರಿಚರಿತಾಮೃತ ಕೇಳದೆ ಗರ್ವಿಪ ನರನು ಪಾಮರನÀು 1ಹರಿಯ ಬಂಟರ ಅನುಸರಣೆಗಳ ಪರಿತ್ಯಾಗಿ ವೃದ್ಧಗೂಗಿಹರಿಮಹಿಮೆಯ ಹೊಗಳಾಡದ ಮಾತಿನ ಮುಖನು ಮಂಡೂಕನು 2ಕೃಷ್ಣಗೆ ಪ್ರಿಯವ್ರತ ದಾನಕೆ ವಿಮುಖಾದ ಧನಪನವ ಕುಣಪಕೃಷ್ಣಾಕೃತಿಯ ಬಹಿರಂತದಿ ನೋಡದ ಜಾಣನವ ಕೋಣ 3ಕೃಷ್ಣಗೆ ನಮಿಸದೆಸತಿಸುತರೊಳು ಭೂರಿತುಷ್ಟ ಹಿತನಷ್ಟ ಶ್ರೀಕೃಷ್ಣನವರ ಕಂಡೆರಗದ ವಿಷಯದಭೋಗಿಭವರೋಗಿ4ಗೋವಿಂದ ಸರ್ವೋತ್ತಮನಿರೆ ಬೇರೆಂಬಜ್ಞಾನಿ ಮದ್ಯಪಾನಿಗೋವಿಂದನೊಳು ವಿಶ್ವಾಸಿಲ್ಲದ ಭಕ್ತಿಯ ಧೀರ ಶುದ್ಧಜಾರ5ಗೋವಿಂದ ತೀರ್ಥ ಪ್ರಸಾದÀವ ನರಿಯದ ಬಲ್ಲನೆ ಕಳ್ಳನುಗೋವಿಂದನೊಪ್ಪದ ಮತವಿಡಿದವ ಮಹಿಗೆಕಕ್ಕಸರಕ್ಕಸ6ಪ್ರಸನ್ನ ಮೂರುತಿ ವಿಧಿಭವವಂದ್ಯನ ಅರ್ಚಕ ಧನ್ಯರೆ ಮಾನ್ಯರುಪ್ರಸನ್ನವೆಂಕಟಪತಿ ಕಂಡುಂಡಾ ಭಕ್ತಿಯಾಸಕ್ತರೆ ಮುಕ್ತರು 7
--------------
ಪ್ರಸನ್ನವೆಂಕಟದಾಸರು
ಹಲವನು ಯೋಚಿಸಲೇನು ಫಲ ಬರಿ |ಜಲವನು ಮಥಿಸಲಿನ್ನೇನು ಫಲ ||ಕುಲಜನು ಶೂದ್ರನ ಲಲನೆಯ ಕೂಡುತ |ಸಲಿಲದಿ ಮುಳುಗಿದರೇನು ಫಲ ||ಜಲಜಾಕ್ಷನ ಪದದೊಲುಮೆಯಿಲ್ಲದೆನರ|ಬಲಯುತ ತಾನೆನಲೇನು ಫಲ1ಪರಸತಿ ಪರಧನದಾಸೆಯೊಳಿರ್ಪನು |ಸುರನದಿಮುಳುಗಿದರೇನು ಫಲ ||ಪರಮಾತ್ಮನ ತಮ್ಮ ಹೃದಯದಿ ಕಾಣದೇ |ಧರೆಯಲ್ಲರಸಿದರೇನು ಫಲ2ಕಾಣದೆ ಕುಣಿಯೊಳು ಬಿದ್ದಾನೆಯು ಬಲು |ತ್ರಾಣಿಯಂತಾದರಿನ್ನೇನು ಫಲ ||ಕ್ಷೋಣಿಯೊಳಗೆ ಹರಿದಾಸರ ಜರೆಯುತ |ಜ್ಞಾನಿಯು ತಾನೆನಲೇನು ಫಲ3ಧೂರ್ತತನದಿ ಹಣ ಗಳಿಸುತ ಲೋಭದಿಸ್ವಾರ್ಥವೆಂದೆನಿಸಿದರೇನು ಫಲ ||ಪಾತ್ರಾಪಾತ್ರವನೆಣಿಸದೆ ದಾನವ |ಅರ್ತಿಯೊಳೆಸಗಿದರೇನು ಫಲ4ಪತಿಯನು ವಂಚಿಸಿರೂಪಮಾರುವಸತಿ|ವ್ರತಗಳ ಮಾಡಿದರೇನು ಫಲ ||ರತಿಪತಿಪಿತಗೋವಿಂದನ ನೆನೆಯದೆ |ಗತಿಯನುಬಯಸಿದರೇನು ಫಲ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಹಾ ಹಾ ಸಾಧುರು ಮೆಚ್ಚದನಕ ಹರಿಗುರು ಮೆಚ್ಚ ಪ.ನನ್ನ ಗುಣಕೆ ನಾ ಮೆಚ್ಚಿದೆ ಬರಿದೆಪುಣ್ಯವಂತನೆಂದನ್ಯರ ಜರಿದೆಉನ್ನತ ಸೂಕ್ಷ್ಮ ಸುಧರ್ಮವ ಕಾಣೆನನ್ನೊಳು ನಾ ವೃಥಾ ಹಿಗ್ಗಿದರೇನು 1ಜನದೊಳು ದಣಿಯದೆ ಜ್ಞಾನವನೊರೆದುಘನವೈರಾಗ್ಯಕೆ ಹಿಂದಕೆ ಸರಿದುತನು ಮನ ಕದ್ದು ಭಕುತಿಯೊಳಿದ್ದುಹೆಣಗಾಡುತ ಭಾಗವತೆನಿಸಿದ್ದು 2ಸಂತರು ಒಪ್ಪಿದ ಜ್ಞಾನಿಯವ ಸಂತಸಂತರಿಗಾಗದವಿರತಿಭ್ರಾಂತಿಸಂತರುಕೂಡಿದಭಕುತಿ ಮುಕುತಿಸಂತರ ಪ್ರಿಯ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು
ಹೀಗಾದರು ದೂರ ಪರಗತಿಹೀಗಾದರು ದೂರ ಪ.ತಾನೊಳ್ಳೆದುಂಡು ವಿಪ್ರಾನೀಕಕೊಂದುಹೀನ ದಯದಿ ಅತಿಜ್ಞಾನಿಆಗಿದ್ದು1ಆತುರದ ಧರ್ಮಾರ್ತರ ನಡವುಯಾತಕು ಸಲ್ಲದು ಮಾತಿನ ಮಡುವು 2ಭೂರಿಗುಣಜÕ ಉದಾರವನರಿಯದಆರಿಗೆ ಪ್ರಸನ್ವೆಂಕಟ ದೊರೆಯ 3
--------------
ಪ್ರಸನ್ನವೆಂಕಟದಾಸರು
ಹೀಗಿದ್ದರೆ ಲೇಸು ಜ್ಞಾನಿಗೆಹೀಗಿದ್ದರೆ ಲೇಸು ಪ.ಸತಿಇದ್ದರೆ ಸಮಹಿತದವಳಾಗಿಸುತನಿದ್ದರೆ ನಿಜಮತದವನಾಗಿ 1ಧನವಿದ್ದರೆ ಸಜ್ಜನಕೆ ವಿಭಾಗಮನೆ ಇದ್ದರೆ ಮಧ್ಯಾಹ್ನಕನ್ನತ್ಯಾಗ 2ಭಕುತಿ ಇದ್ದರೆ ಡಂಭಕವನಳಿದು ವಿರಕುತಿದ್ದರೆ ಭವದಾಶೆಯ ಕಳೆದು 3ಮತಿ ಇದ್ದರೆ ಶುಭಮತಿಯವನಾಗಿಧೃತಿ ಇದ್ದರೆ ದುಷ್ಕøತಿಗಳನೀಗಿ4ಪ್ರಸನ್ವೆಂಕಟೇಶನ ಪ್ರಸಾದವನುಣುತವಿಷಮ ಜನನ ಮೃತಿ ಗಸಣೆ ತಪ್ಪಿಸುತ 5
--------------
ಪ್ರಸನ್ನವೆಂಕಟದಾಸರು
ಹೆಸರು ತಂದಿರ್ಯಾ ಭಿಕ್ಷಕೆ |ಹೆಸರು ತಂದಿರ್ಯಾಪಅಸಮವೀರರೆಂಬ ಹೆಸರು |ಕುಶಲಗಾರರೆಂಬ ಹೆಸರುಶಶಿಯಂತೆ ಶೋಭಿಸುವ ಶಿಶುವು |ಕುಲಕೆ ಯೋಗ್ಯನೆಂಬ ಹೆಸರು ||ಹೆಸರು||1ದಾನಶೀಲರೆಂಬ ಹೆಸರು |ಮಾನವಂತರೆಂಬ ಹೆಸರು |ಸಾನುರಾಗದಲ್ಲೂ ಆತ್ಮ |ಜ್ಞಾನಿಗಳೆಂದೆಂಬ ಹೆಸರು2ಹಿರಿಯ ಮನೆತನದ ಹೆಸರು |ಗುರುಗಳಾ ಭಕ್ತಿಯಲಿ ಹೆಸರು |ಪರಮಭಾಗವತರ ತೆರದಿ |ಹರಿಯ ಶರಣರೆಂಬ ಹೆಸರು3ಪುತ್ರವತಿಯರೆಂಬ ಹೆಸರು |ಸತ್ಯಶೀಲೆಯರೆಂಬ ಹೆಸರು |ಪತಿಯ ಸೇವೆಯಲ್ಲಿನಿರತ|ಪತಿವ್ರತೇಯರೆಂಬ ಹೆಸರು4ಸತ್ಯಸಂಧರೆಂಬ ಹೆಸರು |ತತ್ವಜÕರೆಂದೆಂಬ ಹೆಸರು |ಚಿತ್ತ ಶುದ್ಧರೆನಿಸಿ | ಗೋವಿಂದಾನ |ದಾಸರೆಂಬ ಹೆಸರು5
--------------
ಗೋವಿಂದದಾಸ