ಒಟ್ಟು 10034 ಕಡೆಗಳಲ್ಲಿ , 132 ದಾಸರು , 5388 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ | ಕಿಂಕರರಿಗೊಲಿದ ನಿಃಶಂಕ ಬಾರೊ ಪ ಇಂದಿರೆ ಕೂಡ | ಚಂದದಿಂದಲೊಪ್ಪುತಿಹ ಇಂದುವದನಾ || ಮಂದರೋದ್ಧಾರನೆ ಮಹನಂದ ಮೂರುತಿ | ವೃಂದಾರಕ ವಂದ್ಯಪಾಲ ವಂದಿಪೆ ನಿಂದು 1 ಲೌಕಿಕ ವಿಲಕ್ಷಣ ಅನೇಕ ಏಕಾ | ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ || ಪ್ರಾಕೃತ ರಹಿತಗಾತ್ರ ಲೋಕಪಾವನ | ಶೋಕ ಮೂಲನಾಶನ ಅಶೋಕ ಜನಕಾ 2 ಮಣಿ ಅಗಣಿತ ಬಂಧು | ಆಗನಾಗಧಾರಕನೆ ನಾಗ ಭಂಜನಾ || ಆಕಾಶ ಗಂಗೆಯ ಅಂಗುಷ್ಟದಿ ಪೆತ್ತನೆ | ಆಗಲೀಗಲೆನ್ನದಲೆ ಸಾಗಿ ವೇಗದಿ 3 ಅಂಗ ಅಂಗಿ ಭಾವದಿಂದ ಅಂಗದೊಳಿದ್ದು | ಸಂಗಡ ತಿರುಗುವ ನೀಲಾಂಗ ನಿಃಸಂಗಾ || ಭೃಂಗ ಜಗದಂತ | ರಂಗ ರಂಗರಾಜ ಸುಖಸಂಗ ನಿಸ್ಸಂಗಾ 4 ಆಪ್ತಕಾಮಿ ಅಮೃತಾಂಗ ಗುಪ್ತ ಮಹಿಮ | ತಪ್ತ ಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ || ತೃಪ್ತ ತೃಣ ಬೊಮ್ಮದಿ ನಿರ್ಲಿಪ್ತ ವ್ಯಾಪ್ತಾ | ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲಾ 5 ನಿರ್ದೋಷ ವಸ್ತುವಿನಿಂದ ನಿರ್ಧರ ಮಾಡೆ | ಪೊಂದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳೂ || ಭದ್ರ ಫಲದಾಯಕ ಸಮುದ್ರಶಯನಾ | ಮಧ್ಯಜೀವಿ ವಂದ್ಯ ಸುಪ್ರಸಿದ್ಧ ಮೋಹನ 6 ಜೀವಾಭಿಮಾನಿ ಗಿರೀಶ ದೇವ ದೇವೇಶಾ | ಜೀವ ರಾಶಿಗಳ ಸ್ವಭಾವ ಪ್ರೇರಕಾ || ಜೀವನವಾಗಿ ನಮ್ಮನು ಕಾವುತಿಪ್ಪ | ರಾಜೀವ ನಯನ ವಿಜಯವಿಠ್ಠಲ ಪೂರ್ಣಾ 7
--------------
ವಿಜಯದಾಸ
ವೆಂಕಟೇಶ ಕಲ್ಯಾಣ ಶ್ರೀವೆಂಕಟ ದೊರೆಯೆ ಪ ವಿಶ್ವಸೃಷ್ಟಿಯಗೈದಂಥ ತಾನಿನ್ನು ಅರಿಯೆನು ಎಂತೆನಲು ಅ.ಪ ಸುರವರ ನಾರೆಂದು ಅರಿಯೆಭೃಗುವು ತಾನು ಪತಿ ಹರ ವಿಧಿಗಳೆನೆಲ್ಲ ಬರುವ ಬಗೆಯ ಕಂಡು ಸುರತ ಕೇಳಿಯಸೋಗು ಧರಿಸಿ ಮಲಗಿರಲಂದು ಜರಿದುವದಿಯಲು ವಕ್ಷ ಹರಿಸಿ ದುಗುಡವ ಮುನಿಗೆ ವರಸಿ ಚರಣದ ಕಣ್ಣು ತರಿದು ಸಾಧನೆ ಅಧಿಕ ಸಿರಿಗೆ ಪ್ರೇರಿಸಿ ಕೋಪ ತೊರೆದು ಧಾಮವ ಬೇಗ ಧರೆಗೆ ಇಳಿಯುತ ಬಂದು ಗಿರಿಯ ಹುತ್ತವ ಸೇರಿ ಸುರಿಸೆ ವಿಧಿಯು ಪಾಲು ಕರುಣದಿಂದಲಿ ಕೊಂಡು ದೊರೆಯ ಸೇವಕ ಗೋವ ಹರಿಸೆ ಕೊಡಲಿಯ ನೆತ್ತೆ ಶಿರವನೊಡ್ಡುತ ರಕ್ತ ಧಾರೆ ಚಿಮ್ಮಿಸಿನಭದಿ ಬರಲು ಚೋಳನು ದೊರೆಗೆ ಕ್ರೂರ ಶಾಪವನಿತ್ತು ಕರೆಸಿಗುರುಗಳಮದ್ದು ತರಲು ಹೊರಟದೇವ ನಿರುತ ಚಿನ್ಮಯಗಾತ್ರ ಉರು ವೈದ್ಯ ಧನ್ವಂತ್ರಿ ನಿರುಪಮ ನಾಟಕದೆ 1 ಸಾಮ ವಿಶ್ವದ ಸಾರ್ವಬೌಮ ಬೇಡಿದೆ ರಚಿಸೆ ಧಾಮ ಕ್ರೋಢನ ಕಂಡು ಪ್ರೇಮದಿಂದಲಿ ಬಕುಳೆ ವಾಮ ಕಂದನು ಆಗಿ ಭಾಮೆ ಪಾಕವನುಂಡು ಕಾಮ ವರ್ಜಿತ ಪೂರ್ಣ ಕಾಮ ಕುದುರೆಯನೇರಿ ಕಾಮ ಬೇಟೆಯೋಳ್ ನಿಜ ಕಾಮಿನಿಯನು ಕಂಡು ದ್ಧಾಮ ಮೋಹವ ತೋರಿ ಭೂಮಿಜಾತೆಯ ಘಟಿಸೆ ಭಾಮೆ ಬಕುಳೆಯ ಕಳಿಸಿ ಧರ್ಮದೇವತೆಯೆನಿಸಿ ಜಾಮಾತ ಸನ್ನಾಹ ಜಾಣ್ಮಿಯಿಂದಲಿನಡೆಸಿ ಕಾಮಿತಾರ್ಥವ ಕೊಂಡು ಧಾಮ ಸೇರಲು ಬಕುಳೆ ಹೇಮಮಯ ದಾರಿದ್ರ ನೇಮದಾಟವ ತೋರಿ ಹೇಮಗರ್ಭನ ಕರಿಸೆ ಸೋಮಶೇಖರ ಕೊಡಿಸೆ ಹೇಮರಾಶಿಯ ತಂದು ಭೀಮರುಜೆಗಳ ನಟಿಸೆ ಸೋಮಸೋದರಿಕರಿಸಿ ಮಾಮನೋಹರಗೈದ ಸೀಮೆಇಲ್ಲದಂಥ 2 ಮದುವೆ ಹಬ್ಬಿಸಿ ಭಕ್ತ ಹೃದಯ ತುಂಬುವ ನಂದ ಮುದದಿ ಬೆಳೆಸೆ ಪಯಣ ವದಗೆ ಶುಕರಾತಿಥ್ಯ ಸದಯಗೊಳ್ಳುತ ತೃಪ್ತಿ ಬದಿಗರೆಲ್ಲರಿಗಿತ್ತು ಮದನಮೋಹನ ತೇಜ ಮದುವೆ ಊರನು ಸೇರಿ ಕುದಿವ ಕುತೂಹಲದಿ ಅದ್ಭುತ ಸ್ವಾಗತವ ಪದುಮಾವತಿಯ ತಂದೆ ಹೃದಯ ಪೂರ್ವಕ ನೀಡೆ ಆದರದಿ ಸ್ವೀಕರಿಸಿ ಪಾದದ್ವಂಧ್ವವ ನೀಡಿ ವೇಧಾದಿ ನಿಜವೃಂದ ಮೇದಿನೀ ಸುರವೃಂದ ಮೋದ ಮೆಲ್ಲಲು ಕೂಡಿ ವೇದ ಘೋಷವುಗೈಯೆ ವಾದ್ಯದುಂದುಭಿ ಮೊಳಗೆ ವೇದವೇದ್ಯನು ಮದುವೆ ವೇದಿಕೆಯನು ಏರಿ ಕಾದುಕೊಂಡಿಹ ಜನಕೆ ಸಾಧಿಸುತಲಭೀಷ್ಠ ಕರ ಸಾದರ ಪಿಡಿದಂಥ ಖೇದ ತರಿಯುತ ನಿಜ ಮೋದದಾನವ ಗೈವ 3 ತಿರುಪತಿ ತಿಮ್ಮಪ್ಪ ಸುರಗಣ ಜಗದಪ್ಪ ವರಸಮರಿಲ್ಲಪ್ಪ ಭರದಿ ಕಸಿವಕಪ್ಪ ಅರಿತವರಿಲ್ಲಪ್ಪ ಧರಿಸಿಹ ಸಿರಿಯಪ್ಪ ಕರುಣ ಸುರಿಸುವನಪ್ಪ ಉರುಗಗಿರಿಯಲ್ಲಿಪ್ಪ ಸುರತರು ಇವನಪ್ಪ ಗಿರಿಸಪ್ತ ದೊರೆಯಪ್ಪ ಹರಿಕೆ ಕೊಳ್ಳುವನಪ್ಪ ಅರಿಮಾರಿ ಸರಿಯಪ್ಪ ಶರಣರ ಪೊರೆಯಪ್ಪ ಕರೆಕರೆ ಬೇಡಪ್ಪ ಸ್ವರತ ಸುಖಮಯನಪ್ಪ ಅರವಿದೂರನಪ್ಪ ಮರೆವ ಶರಣರ ತಪ್ಪ ಸರ್ವಹೃದಯಗನಪ್ಪ ಪರಿಪೂರ್ಣಗುಣನಪ್ಪ ಅರಿಶಂಖುಧರನಪ್ಪ ಉರಿವ ರವಿಯಲ್ಲಿಪ್ಪ ಸರ್ವಮುಕ್ತರಿಗಪ್ಪ ಬಿರಿವ ಖಳರೆದೆಯಪ್ಪ ಮರುತ ಮಂದಿರನಪ್ಪ ಪರಿಮರ ಹೌದಪ್ಪ ಪೊರೆದೆ ಮಾಧವನಪ್ಪ ವರಲೀಲಾ ಮಯನಪ್ಪ ಪರಮ ಅದ್ಭುತನಪ್ಪ ಪರಮಾತ್ಮಹೌದಪ್ಪ ಕರಣ ಚೋದಿಪನಪ್ಪ ಕರಣಕ್ಕೆಸಿಗನಪ್ಪ ದುರಿತ ಪಾವಕನಪ್ಪ ಪರಮ ಪಾವನನಪ್ಪ ಹರನ ಅಪ್ಪನಿಗಪ್ಪ ಪರಮೋಚ್ಚಹೌದಪ್ಪ 4 ಬಾದರಾಯಣ ಪೂರ್ಣ ಭೋಧ ತೀರ್ಥರ ದೈವ ಮೋದ ಚಿನ್ಮಯಗಾತ್ರ ವೇದ ವಿಭಜಿಸಿ ನಿಂದ ಖೇದವಿದ್ಯೆಯ ಕೊಂದ ವಾದಿವಾರಿಣಿ ಸಿಂಹ ವಾದಿರಾಜರ ಹೃದಯ ಮೋದ ಹಯಮುಖ ಶುದ್ಧ ವೇದರಾಶಿಯತಂದ ವೇಧಗರುಹಿದ ಕರುಣಿ ಖೇದ ನೀಡುತಲಿದ್ದ ಆದಿದೈತ್ಯರ ಕೊಂದು ಮೇದಿನಿಯನು ಎಯ್ದೆ ಶ್ರೀಧರ ನರಸಿಂಹ ಗೋಧರಮಹಿದಾಸ ಕಾದುಕೊ ಶ್ರೀ ವಿಷ್ಣು ಭೇದ ವಿದ್ಯೆಯಮನಕೆ ಭೋಧಿಸು ವರ ಕಪಿಲ ಸಾಧು ಋಷಭದತ್ತ ಯಾದವ ಕುಲರನ್ನ ಕಾಯ್ದೆ ಗೋಪಿಯ ರನ್ನ ಸೀಳ್ದೆ ಕೌರವರನ್ನ ಪೇಳ್ದೆ ಪಾರ್ಥಗೆ ಗೀತೆ ಶುದ್ಧ ಜಯಮುನಿಹೃಸ್ಥ ಮಧ್ವ ಇಂದಿರೆನಾಥ ಮುದ್ದು ಕೃಷ್ಣವಿಠಲ ಬಿದ್ದೆ ಪಾದದಿ ಶರಣು 5
--------------
ಕೃಷ್ಣವಿಠಲದಾಸರು
ವೆಂಕಟೇಶ ನೀ ಕರುಣಿಸಿ ಮಾನಸ ಶಂಕೆಯೆಲ್ಲವ ಓಡಿಸು ವಂಕುಬೂದಿಯ ಬಿಡಿಸುತ ನಿನ್ನಯ ಕಿಂಕರಾಶ್ರಯ ಕೊಡಿಸು ಪ. ಎಷ್ಟು ಬಂದರೂ ತೃಪ್ತಿಯ ಪಡದ ಕ- ನಿಷ್ಟ ಭಾವನೆಯಿಂದಲೀ ಭ್ರಷ್ಟನಾದೆನು ಬಹು ವಿಧವಾಕೃತ ನಿಷ್ಠುರಾಗ್ನಿಯ ಹೊಂದಲಿ ಕೃಷ್ಣ ನೀ ಕರಪಿಡಿವುತ ಕರುಣಾ ದೃಷ್ಟಿಸಂಗತ ಧೀರತೆಯಿಂದಲಿ 1 ಗಾರುಗೊಂಡೆನು ಶ್ರೀಶನೆ ಸೇರಿದುದಂಗದಿ ದಿನ ದಿನ ಮೀರಿತೊ ಗ್ರಹವಾಸನೆ ಮಾರನಂದನ ಎನ್ನ. . . . . .ತಿ ಭಾರವೆ ಭವವಾರುದಿ ಶೋಷನೆ 2 ಸರ್ವದಾ ನಿನ್ನ ಪಾದಾಂಬುಜರತಿ ಇರ್ವರೊಂದನೆ ಪಾಲಿಸು ಮರ್ಮವೆಂದಿಗು ಮನಸಿಗೆ ಘಟಿಸದೆ ನಿವ್ರ್ಯಳೀಕದಿ ಲಾಲಿಸು ಸರ್ವಲೋಕ ಸುಖಾಕರ ಫಣಿಪತಿ ಪರ್ವತಾಲಯ ಪರಮ ಕೃಪಾಕರ 3
--------------
ತುಪಾಕಿ ವೆಂಕಟರಮಣಾಚಾರ್ಯ
ವೆಂಕಟೇಶ ವಿಠ್ಠಲನೆ ಉದ್ಧರಿಸೊ ಇವಳಾಪಂಕಜಾಸನ ವಂದ್ಯ ಪಂಕೇರು ಹಾಕ್ಷ ಪ ಪತಿ ವಿಯೋಗದ ದುಃಖ | ಅತಿಯಾಗಿ ತವಪಾದಗತಿಗಾಗಿ ಗಿರಿಯೇರಿ | ತುತಿಸುತಿರೆ ನಿನ್ನಾಗತಿಗೋತ್ರ ತೈಜಸನೆ ಪತಿರೂಪ ನಿನ್ನನುಪತಿಕರಿಸ ನಿನ್ನ ಮೃತ ಹಸ್ತ ನೆತ್ತಿಲಿ ಇಟ್ಟೇ 1 ಇಂದಿವಳ ಪ್ರಾರ್ಥನೆಯ ಛಂದದಲಿ ಮನ್ನಿಸುತಅಂದು ನೀನಾಗಿತ್ತ | ನಂದದಂಕಿತವಾಇಂದು ಊರ್ಜಿತ ಪಡಿಸಿ | ವಂದಿಸಿಹೆ ತವಪಾದವೃಂದಾರ ಕೇಂದ್ರ ಗುರು ನಂದ ಮುನಿ ವಂದ್ಯಾ 2 ಪಕ್ಷಿವಾಹನ ದೇವ | ದಕ್ಷಾರಿ ಪ್ರಿಯ ಸಖನೆದೀಕ್ಷಿತಳ ದಾಸಪಥ | ಲಕ್ಷಿಸುತಲಿದನಾಈಕ್ಷಿಪುದು ಕರುಣಾಕ | ಟಾಕ್ಷದಲೆಂದನುತಅಕ್ಷಾರಿ ವಂದ್ಯ ಹರಿ ಪಾರ್ಥಿಸುವೆ ನಿನ್ನಾ 3 ದೇಶ ದೇಶದ ಜನರ | ಆಶೆಗಳ ಪೂರೈಪ ಕೇಶವನೆ ಶ್ರೀ ವೆಂಕಟೇಶಾಖ್ಯ ಹರಿಯೇ |ದಾಸಿಯಳ ಹೃದಯಾ | ಕಾಶದೊಳು ತೋರೆಂದುಲೇಸು ಭಿನ್ನಪ ಸಲಿಸೊ | ಮೇಶ ಮಧ್ವೇಶಾ4 ಊರ್ವಿಯೊಳು ನಿನ್ಹೊರತು ಕಾವರನು ನಾಕಾಣೇಸರ್ವೋತ್ತಮೋತ್ತಮನೆ | ಶರ್ವ ವಂದ್ಯಾದರ್ವಿ ಜೀವಿಯ ಕಾವ | ಹವಣೆ ನಿನ್ನದಲ್ಲೇನೊ ಗುರ್ವಂತರಾತ್ಮ ಗುರು | ಗೋವಿಂದಾ ವಿಠಲಾ 5
--------------
ಗುರುಗೋವಿಂದವಿಠಲರು
ವೆಂಕಟೇಶನೆ ಶ್ರೀ ವೆಂಕಟೇಶನೆ ಪ. ಶಂಖ ಚಕ್ರಗಳನೆ ಪಿಡಿದುಬಿಂಕದಿಂದ ಮೆರೆಯುತಿರುವ ಅ.ಪ. ಮೀನನಾಗಿ ಬಂದು ಘೋರ ದಾನವನೆ ಕೊಂದುಯನ್ನೇ ಎತ್ತಿದಂಥ ಜಾಣ ಕೂರ್ಮಾವತಾರ1 ಧರಣಿದೇವಿಯನ್ನು ಕದ್ದ ಹಿರಣ್ಯಾಕ್ಷನೆ ತರಿದುಕರುಳಮಾಲೆಯನ್ನೆ ಧರಿಸಿ ವರ ಪ್ರಹ್ಲಾದನ ಕಾಯ್ದ 2 ಬಲಿಯ ದಾನವನ್ನೆ ಬೇಡಿ ನೆಲವ ಮೂರಡಿ ಮಾಡಿಛಲದಿ ಕ್ಷತ್ರಿಯನಳಿದ ಚಲುವ ಪರಶುರಾಮ3 ಹತ್ತುರಥನ ತನಯನೆನಿಸಿ ಹತ್ತುಶಿರನ ಸಂಹರಿಸಿಮತ್ತೆ ಕಂಸಾದಿ ಖಳರ ಹತ್ಯಮಾಡಿದಂಥ ಶ್ರೀ 4 ಚಾರು ಬುದ್ಧರೂಪವಾಗಿ ನಾರಿಯರ ವ್ರತವ ಕೆಡಿಸಿತುರಗವೇರಿ ಚರಿಪ ತಂದೆವರದವಿಠಲ ಕಲ್ಕಿ 5
--------------
ಸಿರಿಗುರುತಂದೆವರದವಿಠಲರು
ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ | ಪಶುಪತಿ ಗುರು ನಮಿತ ಪಾದಾ | ಪಂಕಜವ ಪೊಗುಳವೆನು ಪರಿಪಾಲಿಸೆನ್ನ | ಕಿಂಕರನ ಕಿಂಕರರಿಗೆ ಕಿಂಕರನೆಂದೆನಿಸೊ ಪ ಕಾರ್ಯವಾಕಾರ್ಯವನು ತಿಳಿಯಲೊಲ್ಲದ ಕಾಮಾ | ತೂರ್ಯದಲಿ ಪಾಪಗಳೆ ರಚಿಸಿ | ಬೆಂಬಿಡದದೆ ಬಲು | ಧೈರ್ಯವಂತನು ನೀನಾಗಿ | ಧೈರ್ಯವಾಗಿದ್ದಾಗ ಜಡಜೀವ ಜಂತುಗಳು | ವೀರ್ಯದಲಿ ಪೊಕ್ಕು ದುಃಖಾತಿಶಯದಲಿ | ದುರ್ಯೋನಿ ಮುಖದಿಂದ ಜನನ ಜನಿತನಾದೆ | ಮರ್ಯಾದೆಗಳು ಇಲ್ಲದೆ ಹರಿಯೇ 1 ಕ್ಷಿತಿಯೊಳಗೆ ಬಂದು ಕಾಮ ಕ್ರೋಧ ಸಂಮೋಹ ಶ್ರುತಿ ವಿಭ್ರಮ ಬುಧ್ಧಿನಾಶ ರಾಗದ್ವೇಷ | ಪಥದಲಿ ವಿಷಯೇಂದ್ರಿಗಳು ಆತ್ಮವಶವಾಗಿ ಹಿತದ ಪ್ರಸಾದದಿಂದ | ಗತಿ ಅದರಿಂದ ಈ ಸಂಖ್ಯೆಯಿಂದಲಿ | ಹತವಾಗಿ ಪೋಗಿ ಮರಳೆ ದೇಹವನು | ತೆತ್ತು ಗತಿ ಪುಣ್ಯವಂತನೈದೆ 2 ಇಂದಿಗಾ ಇವನ ಮನೆ ತಂದೆ ತಾಯಿಯ ದಿವಸ | ಇಂದಿಗಾ ಇವನ ಮನೆ ಹತ್ತ ಹತ್ತನೆ ದಿವಸ | ಹವ್ಯ ಕವ್ಯ ಜಾವಳ | ಇಂದಿಗಾ ಮದುವೆ ಮುಂಜಿ | ಇಂದು ನಿಮ್ಮನೆ ಪ್ರಸ್ತವೆಂದು ಕೇಳುತಾ ಪೋಗಿ | ಬಂದವರನನ್ನುಸರಿಸೆ ಬಾಗಿಲಾ ಮುಂದೆ ಕುಳಿತು | ನೊಂದೆ | ಬಂದೆನೊ ಕೊನೆಯಲಿ 3 ಆರಾದರೂ ಬಂದು ಕಾಸು ಕೊಡದಿದ್ದರೆ | ದೂರುವೆನೊ ನೂರಾರು ಕೇರಿ ಕೇರಿಯ ತಿರಗಿ | ಸಾರೆ ಅವರಲ್ಲಿದ್ದ ಅವಗುಣಂಗಳ ಎತ್ತೆ | ಬೀರುವೆನು ಬೀದಿಯೊಳಗೆ | ವಾರಣದಿಂದಲಿ ಕರೆದು ಆವನಾದರು ಬಂದು | ಶಾರೆ ಭತ್ತವ ಕೊಡಲು ಕೊಂಡಾಡುವೆ ಕುಲ ಉ | ಪೋರ ಬುದ್ಧಿಗಳ ಬಿಡದೆ4 ಪರವಣಿ ಪುಣ್ಯಕಾಲಾ ದಿವಸ ಬಂದರೆ ತಿಳಿದು | ಪರಮಾರ್ಥವೆಂದರಿದು ಉತ್ತಮರ ಬಾ ಎಂದು | ಕರೆದು ತುತ್ತನ್ನ ಮೇಲೊಂದು ದಕ್ಷಿಣೆ ಕಾಸು | ಹರುಷದಿಂದಲಿ ಕೊಡದಲೆ ಪರರ ಹಳಿಯುತ್ತ ಏನೇನು | ಇಟ್ಟುಕೊಂಡು ಮನಿಗೆ ಬಂದು | ಪರರರಿಯದಂತೆ ಮಂಚದ ಕೆಳಗೆ ಹೂಳಿ ಈ | ಪರಿಯಿಂದ ದಿನ ಹಾಕಿದೆ5 ತೊತ್ತು ಓರ್ವೆಯಲ್ಲಿ ಈ ಹೊತ್ತು ಪೋಗಾಡಿಸಿದೆ | ಉತ್ತಮರ ಬಳಿಯಲಿ ಕುಳಿತು ಸತ್ಕಥೆಗೆ ಕಿವಿ ಇತ್ತು ಕೇಳದಲೆ ಕೆಲಸಾರೆ ಬೇಸರಿಕೆಯಲಿ | ಅತ್ತಲಿತ್ತಲು ವ್ಯರ್ಥ ಸುತ್ತಿ ಸುಮ್ಮನೆ ಸುದ್ದಿ ಬರಿಗಂಟುಸಟೆ | ಮಾತು ಎತ್ತುವನೊ ಅನ್ನಿಗರನ ನ | ಎಣಿಕೆ ಮಾಡದಲೆ | ಉನ್ಮತ್ತದಲಿ ಕೆಟ್ಟೆನಯ್ಯಾ6 ಪರಿಯಂತ | ವೇದೆನೆ ಬಟ್ಟೆನೊ ದುಷ್ಟ ಹಾದಿಯಲಿ ಸಿಗಬಿದ್ದು | ಈ ದುರಾಚಾರಗಳ ಗಣನೆ ಮಾಡದೆ ಇನ್ನು | ಕಾದುಕೊ ಕಮಲನಾಭಾ | ಹೋದಪರಾಧಗಳ ನೋಡದಲೆ ದಯದಿಂದ | ಆದರಿಸಿ ನಿನ್ನ ದಾಸರ ಸಂಗತಿಯನಿತ್ತು | ಪಾದವನು ಕಾಣಿಸಯ್ಯಾ7
--------------
ವಿಜಯದಾಸ
ವೆಚ್ಚಕುಂಟು ನಮಗೆ ಅಚ್ಯುತನಾಮ ನಿಶ್ಚಯದ ಧನವು ಧ್ರುವ ವೆಚ್ಚಮಾಡಿದರೆಂದಿಗೆ ಅಚ್ಚಳಿಯದು ನಿಶ್ಚಯದ ಬದಕು ಬಚ್ಚಿಟ್ಟುಕೊಂಡು ನಿಜ ಎಚ್ಚರಿಕಿಂದ ನಿಶ್ಚಿಂತದಲಿ ಉಂಬೆನು 1 ಸಂಚಿತ ಧನವು ಬಡತನವನು ಹಿಂಗಿಸಿತು ಒಡಿಯನಖಂಡ ಕೃಪೆಯಿಂದಲಿ 2 ಸಾದ್ಯವಾಯಿತು ಎನಗೆ ಸದ್ಗುರು ಕೃಪೆಯಿಂದ ನಿಜಧನವು ಮಾಡಿ ಸಾಧಿಸೊಕೊಂಬುವದು 3 ಕಟ್ಟಬಿಡಲಾಗುದು ವಿಟ್ಟಿ ಹ್ಯಧನಕೊಟ್ಟರೆಂದಿಗೆ ತೀರದು ಇಟ್ಟಿಹ ತನುಮನದಲಿ ಘಟ್ಯಾಗಿ ಕೇಳಿರೊ ಈ ಮಾತವ 4 ಅರುಹು ಅಂಜನವಿಟ್ಟಿ ತೋರಿದ ಗುರುಕರದಲಿ ಈ ಧನವು ಹರುಷವಾಯಿತು ಎನಗೆ ಧರೆಯೊಳು ತರಳಮಹಿಪತಿಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವೇಂಕಟೇಶನೆ ಎನ್ನಾ ಪಾಲಿಪುದೊ ಹರಣ ಪ ಪಂಕಜೋದ್ಭವ ಹರ ವಂದ್ಯ ಪರಾತ್ಪರ ನಿಖಿಲಾಗಮೈಕವಿಜ್ಞೇಯ ಲೋಕೋದ್ಧಾರ ಅ.ಪ ವತ್ಸರ ಬ- ಹುಧಾನ್ಯ ಸಂದ ಶುಕ್ಲ ದ್ವಿತೀಯ ಸಂಧ್ಯಾಸವನ ಬಂದು ಕೀರ್ತನ ಸೇವಾ- ನಂತರದಿ ಎನ್ನಾ ಮಂದಿರದೊಳು ಸುಪ್ತಾವಸ್ಥೆ ಯಿಂದಿರಲಾಗ ಅಂದು ಕಡೆಯ ಯಾ- ಮದಿ ತೈಜಸನೆ ನೀ ಹಂಸರಿಂದೆನ್ನ ಮನಸಂಶಯ ಹರಿಸಿದೆ1 ಅರುಣೋದಯಲೆದ್ದು ಮುದದಿ ಕರಣಶುಧ್ದನಾಗಿ ತ್ವರಿತದಿ ಸ್ವಪನದ ವಿ- ವರಕಾಗಿ ಹರುಷದಿ ಹರಿಪೂಜಾಕಾಲದಿ ಅರುಹಿದ ಮರುತ ಮೂರುತಿಯಾ ಉರುತರ ಚರಿತೆಯ ನಿರುತಪೊಗಳಲಾಯತವಿತ್ತ ತಿರುಪತಿಶೈಲಾಧಿಪ ಮಮಕುಲಸ್ವಾಮಿ2 ಹರಿಗುರುಸೇವೆಯನು ಸರ್ವಸದ್ಯೋಗ್ಯಸಾಧನವನ್ನು ಪರಮಹಂಸರು ಇತ್ತವೇಂಕಟೇಶಾಂಕಿತ ಮೂರುತಿಯ ನುತಿಪಾ ನಿಜ ಹರಿಭಕುತರ ಚರಣಕಮಲಬಂಡುಣಿಯೆನಿಸಿ ಇವನನಿರುತ ರಕ್ಷಿಸೋ ಉರಗಾದ್ರಿವಾಸವಿಠಲಾ 3
--------------
ಉರಗಾದ್ರಿವಾಸವಿಠಲದಾಸರು
ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ ಪ ಕಾಣುತ ಭಕುತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ಅ.ಪ. ತರಣಿ ಒಂದು ಘಳಿಗೆ ನೀ ಹರಿಯ ಬಿಟ್ಟಿರಲಾರಿ ಮಂದಗಮನೆ ಎನ್ನ ಮುಂದಕ್ಕೆ ಕರೆಯೆ 1 ಕರುಣವಿಂದೆನ್ನ ಕರೆವುದು ಭವ ಸ್ಮರನಪಿತನ ಮುರಹರನ ಕರುಣದಿ 2 ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆ ಕುಜನರ ಸಂಗದೂರಳೆ ನಿಜ ಪದವಿಯನಿತ್ತು ಸಲಹುವ ನಮ್ಮ ವಿಜಯವಿಠ್ಠಲ ನಿಜಪದ ತೋರಿಸೆ 3
--------------
ವಿಜಯದಾಸ
ವೇಣು ವಿನೋದ ವಿಠಲ | ನೀನೆ ಪೊರೆ ಇವನಾ ಪ ದೈನ್ಯದಲಿ ತವ ದಾಸ್ಯ | ಕಾಂಕ್ಷೆಯಲಿ ಹಯಮೊಗನೆಗಾನ ಮಾಡಲು ನಿನ್ನ | ಪಾಸು ಕೂಲಿಸಿದೇ ಅ.ಪ. ಖಂಡೀ ಭವದ್ ಬಹುಲ | ಡಿಂಡೀರ ಜೃಂಬಣಸುಚಂಡೀ ಕೃತೋ ಎಂಬ | ಶೌಂಡಪದಯತಿಯಿಂಗೊಂಡು ಸುಸ್ವಪ್ನದಲಿ | ದಂಡವತ್ತರಗಿ ಮುದ-ಗೊಂಡು ತವ ಪಾಪಗಳ | ಖಂಡಿಸೀದವನಾ 1 ತೀರ್ಥಾಭಿಷೇಕದಿ ಪು | ನೀತನಾದಗೆ ಭಾವಿವಾತಾತ್ಮ ಮಹಿಮೆಗಳ | ದ್ಯೋತಕ ಸುಗ್ರಂಥಾಪ್ರೀತಿಯಿಂ ಪಡೆದಿಹನೊ | ಮಾತುಳಾಂತಕ ಹರಿಯೆಆತು ಕೈಪಿಡಿ ಇವನ | ಧಾತಾಂಡದೊಡೆಯಾ 2 ಲೌಕೀಕವನ್ನೆಲ್ಲ ವೈಧೀಕವೆಂದೆನಿಸಿ ಈತೋಕನಿಗೆ ಸುಜ್ಞಾನ | ಭಕುತಿ ಸಂಪದನಾನೀ ಕರುಣದಿಂ ಕೊಟ್ಟು | ಪ್ರಾಕ್ಕುಕರ್ಮಾವಳಿಯನೀ ಕಳೆಯೊ ಕರುಣಾಳು | ನಾಕನದಿ ಪಿತನೆ 3 ಬೋಧ ಬೋಧ ಮೂರುತಿಯೇ 4 ಅದ್ವೈತ ಭವ | ನೋವ ಪರಿಹರಿಸಯ್ಯಗೋವಳ ಪ್ರೀಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೇಣುಗೋಪಾಲದಾಸರ ಸ್ತೋತ್ರ ಕರೆದು ಕೈ ಪಿಡಿಯೊ ಎನ್ನ ವೇಣುದಾಸದೊರೆಯೆ ಪತಿತ ಪಾವನ್ನ ಪ ಕರೆದು ಕೈ ಪಿಡಿಯೊ ನೀ ಕರಬಿಡದೆ ನಿನ್ನಚರಣವೆ ಗತಿಯೆಂದು ಮರೆ ಬಿದ್ದ ಮನುಜನ್ನ ಅ.ಪ. ಸುಜನ ಪಿನಾಕ ಜನರ ಕೂಡಾ ಸಾ-ಹಜ ಭಕುತಿಯಲಿ ಯಜಿಸಿ ಮೋಹವೃಜನ ದಾಟಿ ದ್ವಿಜವರಾಗ್ರಣಿ 1 ಸಂತರ ಸಲಹುವನೇ ಸಂಗಡಲೇ ನಿ-ಶ್ಚಿಂತರ ಮಾಡುವುದೇಎಂತು ಪೇಳಲು ಎನಗಂತು ತೋರದು ದುಷ್ಟಭ್ರಾಂತಿಯಿಂದಲಿ ಮಾಳ್ಪ ಕಂತುಗಳಿಗೆ ಲೇಶಅಂತ ಕಾಲಕ್ಕೆ ಚಿಂತಾಕಾಲಯಾಪಂಥ ಸಾರುವದಿಂತು ಸರಿ ಜಗ-ದಂತು ರಂಗನ ಮುಂತು ತಿಳಿವ-ದೆಂತುಪಾಯವು ಶಾಂತದಾತನೆ 2 ಅರಿದೇನು ಆಪ್ತ ಬಂಧು ಪಾಮರನ ಉ-ದ್ಧರಿಪದು ನಿನಗೆ ಇಂದುಸರಿಸಾ ದೂರದಿ ನಿನ್ನ ಸ್ಮರಣೆ ಮಾಡುವೆ ಆ-ಲ್ಪಿರಿದು ಬಾಯಿ ಬಿಡುವೆನೊ ಮರೆಯಲಾಗದು ತಂದೆದುರುಳ ವಿಷಯಕ್ಕೆರಗುವೆ ಅಂತಃ-ಕರುಣ ನಿಲಿಸಿ ಪೊರೆವ ಭಾರವುನಿರುತ ನಿನ್ನದು ವ್ಯಾಸವಿಠಲನಭರದಿ ಪೊಗಳುವ ಪರಮ ಧನ್ಯಾನೆ 3
--------------
ವ್ಯಾಸವಿಠ್ಠಲರು
ವೇಣುಧರ ವಿಠಲಾ | ನೀನೆ ಪೊರೆ ಇವಳಾ ಪ ಕಾಣೆ ನಿನ್ಹೊರತು ಕಾ | ರುಣ್ಯ ಮೂರುತಿಯೆ ಅ.ಪ. ಸ್ವಾಪದಲಿ ಗುರುರೂಪ | ರೂಪ ಸಮ್ಮುಖದಲ್ಲಿಗೋಪಕೃಷ್ಣಾಕೃತಿಯ | ಪಡೆದಿಹಳು ಇವಳುಶ್ರೀಪತಿಯೆ ನಿನ್ನೊಲಿಮೆ | ಆಪಾರವಿರುತಿರಲುಪ್ರಾಪಿಸುತ ಅಂಕಿತವ | ಒಪ್ಪಿಸಿಹೆ ನಿನಗೇ 1 ಪಥ ತೋರೋ ಹರಿಯೇ2 ಪತಿ ಸುತನೆ | ಕಾರುಣ್ಯ ತೋರಿ ಆ-ಪಾರ ದುಷ್ಕರ್ಮಗಳ | ಪಾರಗಾಣಿಪುದೋ |ಮಾರುತನ ಮತದಲ್ಲಿ | ಧೀರೆ ಎಂದೆನಿಸಿ ಸಂ-ಸಾರ ಸಾಗರವನ್ನು | ದಾಟಿಸೋ ಹರಿಯೇ 3 ಸೃಷ್ಟಿ ಸ್ಥಿತಿ ಲಯ ಕರ್ತ | ಕೃಷ್ಣಮಾರುತಿ ದೇವಅಷ್ಟಸೌಭಾಗ್ಯಗಳ | ಕೊಟ್ಟು ಕಾಪಾಡೋವಿಷ್ಟರಶ್ರವ ಹರಿಯೆ | ನಿಷ್ಠೆ ಆಚಾರದಲಿಕೊಟ್ಟು ಕೈಪಿಡಿ ಇವಳ | ಜಿಷ್ಣುಸಖ ಹರಿಯೇ 4 ಸರ್ವದಾ ತವ ಮಹಿಮೆ | ಶ್ರವಣ ಸುಖ ಸಾಧನವಹವಣೀಸಿ ತವನಾಮ | ವಜ್ರಾಂಗಿ ತೊಡಿಸೀಭವವನುತ್ತರಿಸತ್ಕಿ | ಬಿನೈಪೆ ಶ್ರೀ ಹರಿಯೆಸರ್ವ ಸುಂದರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೇದನಿಧಿ ಹರಿ ವಿಠಲ | ಕಾದುಕೋ ಇವಳಾ ಪ ಮೋದತೀರ್ಥರ ಮತದಿ | ರಾಜಿಸುತ್ತಿಹಳಾ ಅ.ಪ. ವಾದೀಭ ಕೇಸರಿಯು | ವಾದಿರಾಜರು ಮತ್ತೆವೇದವೇದ್ಯರ ಕಂಡು | ಶುಭಸ್ವಪ್ನದೊಳಗೇಭೋದವಗದೆ ಸಾಗಿ | ವೇದನಿಧಿಗಳ ಹಸ್ತಸಾದರದಿ ಅಕ್ಷತೆಯು | ಪುಷ್ವ ಸ್ವೀಕಾರವು 1 ಯತಿವರೇಣ್ಯರ ಕರುಣಾ | ಸತತವಿರಲೀಕೇಗೇಪತಿಸುತರು ಹಿರಿಯಾ | ಹಿತಸೇವೆಯಲ್ಲೀಮತಿಯ ಕರುಣಿಸಿ ನಿನ್ನ | ವ್ಯಾಪ್ತತ್ವ ತಿಳಿಸೀಅತಿಶಯದ ಸೇವೆಯಿಂ | ಉದ್ದಿರಿಸೊ ಇವಳಾ 2 ಸುರರು ನರರೊಳಗೆಲ್ಲ | ತರತಮಾತ್ಮಕರೆಂಬ ವರಸುಜ್ಞಾನವ ಕೊಟ್ಟುಕಾಪಾಡೊ ಹರಿಯೇಗುರು ಭಕ್ತಿ ಹರಿಭಕ್ತಿ | ಪರಮ ಸಾದನವೆಂಬಅರಿವನೇ ನೀಡುವುದು | ಗರುಡ ಧ್ವಜಾತ್ಮ 3 ಧರ್ಮಮಾರ್ಗದಲಿರಿಸಿ | ಪೇರ್ಮೆಯಲಿ ಪೊರೆ ಇವಳಾಭರ್ಮಗರ್ಭನ ಪಿತನೆ | ನಿರ್ಮಾತೃ ಜಗಕೇನಿರ್ಮಮದ ಸಾದನೆಯ | ಮರ್ಮವನೆ ಅರುಹುತ್ತಕರ್ಮನಾಮಕ ಹರಿಯೆ | ಕಾಪಾಡೊ ಇವಳಾ 4 ಭವ ಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೇದವನಿದನವಧರಿಸು ಮಂತ್ರಭೇದವಾದರು ಮತ ಬೇರಲ್ಲವೆನಿಸು ಪಆದಿಯೊಳ್ ಋಗ್ವೇದದಲ್ಲಿ ಅಗ್ನಿಯಾದನು ದೇವತೆಯಾ ಯಜ್ಞದಲ್ಲಿಈದೇವ ಋತ್ವಿಕ್ಕಿನಲ್ಲಿ ಹೊಂದಲಾದರಿಸುತಲಾಗ ಹೊಗಳ್ವರೆಂಬಲ್ಲಿ 1ಹೋತೃತ್ವದಲ್ಲಿಯು ನಿಂದು ಸ್ವರ್ಣಧಾತುವು ತಾನಾದ ದಕ್ಷಿಣೆಗೆಂದುಈ ತೆರದಲಿ ದೇವ ಬಂದು ವಿಪ್ರವ್ರಾತಸ್ತೋತ್ರಕೆ ುೀತ ನೋಡಲಾದನೆಂದು 2ಸುರರಿಗೀತನು ಮುಖ್ಯ ಸಖನು ದ್ವಿಜವರರ್ಕೊಟ್ಟಾಹುತಿಯವರ್ಗಿತ್ತು ವ್ಟೃಯನುಬರಿಸುವನೆಂದೀತನನ್ನು ನೀನೆಇರಿಸಿದೆ ತಿರುಪತಿಯಾಳ್ವ ವೆಂಕಟನು 3ಓಂ ಮುಚುಕುಂದಪ್ರಸಾದಕಾಯ ನಮಃ
--------------
ತಿಮ್ಮಪ್ಪದಾಸರು
ವೇದವಿದಿತ ಮಾರಮಣ ಹರೇ ಪ ಸನ್ನುತ ಚರಣ ಶ್ರೀಧರ ಗಂಗಾಪಾದ ನಾರಯಣ ಅ.ಪ ಸಾರಯೋಗಿ ಕವಿತಾರಸ ತೋಷಿತ ಕೈರವ ಸುಮಭವ ವಾಣಿ ವಿಭೂಷಿತ ಭವ ವಾಗ್ರಂಜಿತ ನಾರಾಯಣ ತೇ ನಮೋ ನಮೋ 1 ಭೋಗ ಮಂಟಪೋಲ್ಲಾಸ ಮುಕುಂದ ತ್ಯಾಗ ಮಂಟಪೋಲ್ಲಾಸ ಗೋವಿಂದ ನಾಗಶಯನ ಶರಣಾಗತ ಬೃಂದ ಯೋಗ ಮಂಟಪ ಮಾಂಗಿರಿಪತಿ ನಮೋ ನಮೋ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್