ಒಟ್ಟು 1149 ಕಡೆಗಳಲ್ಲಿ , 97 ದಾಸರು , 869 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾತಕ ಪರಿಹಾರ ದನುಜರಕರುಣಕ್ಕೆ ಕಾರಣ ನಂಬೆಲೊ ಮನುಜ ಪ ಗಂಗೆ ಮೊದಲಾದ ತೀರ್ಥಂಗಳೆಣೆಯ ಶ್ರೀ-ರಂಗ ಮೊದಲಾದ ಕ್ಷೇತ್ರವು ಸರಿಯೆ ಉ-ತ್ತುಂಗ ಜಪತಪÀ ಹೋಮಂಗಳೆದುರೆ ಶ್ರೀ-ರಂಗನಾಥನ ದಿನದೊಂದುಪವಾಸಕೆ 1 ಸುಕೃತ ಬೆಳಸುಮುಂದಣ ಮುಕುತಿಗೆ ಕಲ್ಪ ಲತಾಂಕುರಇಂದಿರೇಶನ ದಿನದೊಂದುಪವಾಸಕೆ 2 ರುಕುಮಾಂಗದ ಮೊದಲಾದ ಭಕುತರೆಲ್ಲಸಕಲವ ಬಿಟ್ಟು ಏಕಾದಶಿ ವ್ರತವಭಕುತಿಯಿಂ ಕೂಡಿ ಶ್ರೀಕೃಷ್ಣನ ಮೆಚ್ಚಿಸಿಮುಕುತಿ ಸೂರೆಯಗೊಂಡರೆಂಬುದನರಿಯ 3
--------------
ವ್ಯಾಸರಾಯರು
ಪಾದ ಕೂಡು | ಸಾಯಾಸಗಳನೇ ಬಿಡು ಪ ಪಾದ ಕೂಡು ಸಾಯಾಸಗಳನೇ ಬಿಡು | ಸಾಧಿಸುವದು ನೋಡು ಸದ್ಗತಿಯ ಸುಖಾಡು 1 ತನುವಿಟ್ಟು ಧನವಿಟ್ಟು ಚರಣಕ ಮನಕೊಟ್ಟು | ಅನುವಾಗಿ ತಿಳಿಗಟ್ಟು ಮದಗರ್ವಗಳ ಬಿಟ್ಟು 2 ನಿನ್ನಾ ನೀ ತಿಳಿಯಣ್ಣಾ ಮ್ಯಾಲ ದೋರುದ್ಯಾಕ ಬಣ್ಣಾ | ಇನ್ನಾರೆ ದೆರಿಕಣ್ಣಾ ಆಗದಿರು ಮಸಿಮಣ್ಣಾ 3 ತನಗ ತಾನೇವೇ ಬಂಧು ತನಗೆ ತಾನೇ ಹಗೆಯೆಂದು | ವನಜಾಕ್ಷ ಹೇಳಿದುದು ಅನುಮಾನಿಲ್ಲಿದಕಿಂದು 4 ಇನ್ನೊಂದು ಸಾಧನಿಲ್ಲಾ ಇದರಿಂದಧಿಕವಿಲ್ಲಾ | ಮನ್ನಿಸಿ ಕೇಳಿರೆಲ್ಲಾ ಮಹಿಪತಿಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾದ ಸೇವೆಯಿಂದಲಿ ಸುಖಿಸೋಳೊ ಲಕ್ಷ್ಮೀಲೋಲ ಪಾಡಿ ತೂಗುವಳೊ ಮೋಹದಲಿ ಯಶೋದ ಯೋಗಿ ಜನರು ಕೊಂಡಾಡಲ್ವಿನೋದ 1 ಜಲಧಿ ಭೂದೇವಿ ಪ್ರಜ್ವಲಿಸುವ ಆಲದೆಲೆಯು ತಾನಾಗಿ ನಿದ್ರೆಹಸಿವು ಬಿಟ್ಟು ನಿರುತದಿ ಆತನ- ಲ್ಲಿದ್ದಳಂಭ್ರಣಿ ಸ್ತೋತ್ರದಲಿ ಭೂದೇವಿ 2 ವಟದ ಎಲೆಯ ಮೇಲೆ ವಟುವಾಗಿ ಮಲಗಿ ಉಂ- ಗುಟವ ಬಾಯೊಳಗಿಟ್ಟು ಮುದದಿ ಚಪ್ಪರಿಸೆ ಕಟುತರದಲಿ ನಾಲ್ಕು ವೇದವ ತೋರುತ ಪಟುತರದಲಿ ಯೋಗನಿದ್ರೆ ಮಾಡಿದನು 3 ಹದಿನಾಲ್ಕು ಲೋಕ ತನ್ನುದರದಲ್ಲಿಡುವ ಪದುಮಾಕ್ಷ ಶ್ರೀಕೃಷ್ಣ ಪರಮಾತ್ಮ ಲಾಲಿ ಅಜಭವಸುರರೆಲ್ಲ ಭಜನೆಯ ಗೈವರು ಮುದದಿ ಶಯನವ ಮಾಡೊ ಮಧು ಮುರಾಂತಕನೆ 4 ಕಡಲಶಯನ ಹರಿ(ಯ) ತೊಟ್ಟಿಲೊಳಿಟ್ಟು ಬಿಡದೆ ನಾರಿಯರೆಲ್ಲ ಪಾಡಿ ತೂಗುವರು ಪೊಡವಿಗೊಡೆಯ ನಿನ್ನ ನಾಮ ಕೊಂಡಾಡಲು ಬಿಡದೆ ಭಕ್ತರ ಕಾಯೊ ಭೀಮೇಶಕೃಷ್ಣ 5
--------------
ಹರಪನಹಳ್ಳಿಭೀಮವ್ವ
ಪಾಲಿಪರೊಬ್ಬರಿಲ್ಲ ಪ ದಂಡಾದಿ ರಾಜ್ಯವು ಕೆಟ್ಟು ಪೋಕ ಪುಂಡರು ಹೆಚ್ಚಿ ಮಾರ್ಗವತೋರಿ ಕೊಟ್ಟು ಪೆಂಡಾರರಿಗೆ ಸುಲಿಗೆ ಕೊಟ್ಟು ಭೂ ಮಂಡಲದೊಳಗಣ ಜನರೆಲ್ಲ ಕೆಟ್ಟು 1 ಎತ್ತು ಮುಟ್ಟುಗಳೆಲ್ಲ ಹೋಗಿ ಬೀಳು ಬಿದ್ದು ಗದ್ದೆಯ ಪೈರು ನಿಸ್ಥಳವಾಗಿ ತುತ್ತುರಿಗಳು ಸುಟ್ಟು ಹೋಗಿ ದಂಡು ನಿತ್ತು ಪ್ರಜೆಗೆ ಮನೆ ಮುಖವಿಲ್ಲದಾಗಿ 2 ಕರಿದೋ ಬಿಳಿದೋ ಕಾಣೆ ಕ್ಷೀರ ಕೊಡುವ ತರುಗಳಿಲ್ಲವು ಮರ ಒಣಗಿ ಅರಮನೆ ಯತ್ತಣಿಂ ಘೋರ ಕರೆ ಕರೆಯೊಳು ಬಂದಿತಯ್ಯ ಗ್ರಹಚಾರ 3 ಗಂಜಿ ಗಾಸ್ಪದವಿಲ್ಲವಾಯ್ತು ಮೂರು ಸಂಜೆಯ ದೀಪಕೆ ಕೊಳ್ಳಿ ಬೆಳಕಾಯ್ತು ಅಂಜನ ಪಾತ್ರೆ ಹೆಚ್ಚಾಯ್ತು ಬದುಕಲು ನಾಲ್ಕು ವರ್ಣ ಒಂದಾಯ್ತು 4 ಕಾಲಗತಿಯು ಬಲು ಬಿರುಸು ಮುಂದೆ ಬಾಳುವ ಜನರಿಗೆ ನೃಪರಿಂದ ಹೊಲಸು ಶೂಲಿ ಸಾಯುಜ್ಯವ ಬಯಸು ಲಕ್ಷ್ಮೀ ಲೋಲನ ನಾಮವ ಮನದೊಳುಚ್ಚರಿಸು 5
--------------
ಕವಿ ಪರಮದೇವದಾಸರು
ಪಾಲಿಸು ಪಾಲಿಸು ಪಾರ್ವತಿ ತನಯನೆ ಫಾಲಚಂದ್ರಯುತನೆ ಕಾಲ ಸಂಭಾವನಲೋಲುಪ ವಾರಿಜಾಸ್ಯನುತನೆ ಪ ಸುಜನ ಗಜವದನಾ ಸುರಕುವಲಯ ದಿನಕರ ಧೂರ್ಜಟಿಸುತ ಗಣಪ 1 ಕಾಮಿತ ಫಲಗಳ ಪಡೆಯಲು ಸುಜನರು ನೇಮದಿ ಪೂಜಿಪರು ಸಾಮಜ ವದನನೆ ಭಕ್ತರಭೀಷ್ಟವÀ ಪ್ರೇಮದಿ ಕರುಣಿಸುತ 2 ಗಾನಲೋಲ ವರತಾಂಡವ ಪ್ರೀತನೆ ಕೋಮಲಾಂಗ ಸತತಂ ಧೇನುನಗರ ಸಂರಕ್ಷಣ ದಕ್ಷನೆ ಸಾನುರಾಗದಲನಿಶಂ 3 ಇಂದ್ರಾದಿ ದಿವಿಜರೆಲ್ಲ ಕುಂದುತ್ತ ದೈತ್ಯ ಭಯದಿಂ ಸುಂದರಿ ನಿನ್ನ ಭಜಿಸೆ ನಿಂದೆಲ್ಲರನ್ನು ಪೊರೆದೆÀ 4 ಕಮಲಾಕ್ಷಿ ವಿಮಲಪಾಣಿ ಕಮಲಾಪ್ತ ಮುಖ್ಯರಮಣೆ ಸುಮಶೋಭಮಾನವೇಣಿ ಕಮನೀಯ ದಿವ್ಯಪಾಣಿ 5 ಶಾಕಿನಿರೂಪೆ ದೇವಿ ಲೋಕೈಕ ವೀರ್ಯ ಧೈರ್ಯ ಬೇಕಾದ ವರಗಳಿತ್ತು ಶ್ರೀಕಾರ ಶಕ್ತಿಯೆನ್ನ 6 ಜ್ಞಾನವು ಮೌನ ಜಯವುಂ ಧ್ಯಾನ ಸುಮಂಗಲತ್ವಂಮಾನ ಸುಪುತ್ರ ಹಿತಮಂ ಧೇನು ಪುರೀಶೆ ಕೊಟ್ಟು 7
--------------
ಬೇಟೆರಾಯ ದೀಕ್ಷಿತರು
ಪಾಲಿಸೋ ಶ್ರೀ ಗುರುರಾಯಾ ಪ ಕಾಯ - ಭವ ಜಾಲ ತಪ್ಪಿಸೊ ಮಹರಾಯ - ಆಹಾ ಪಾಲಗು ಜನರ ಸು - ಪಾಲಕ ಹರಿಪಾದ ಭವ - ತೂಲಕಾನಲನೆ ಅ.ಪ ಶೇಷಾಂಶ ಪ್ರಹ್ಲಾದ ವ್ಯಾಸಾ - ಮುನಿ ವೇಷ ತಾಳಿದೆಯೊ ಯತೀಶಾ - ಜಾಗು ಪೋಷಣೆ ಗೈಯ್ಯೊ ಮನೀಷಾ - ಎನ್ನಾ - ಶೇಷ ಕ್ಲೇಶವಳಿದೀಶಾ - ಆಹಾ ಭವ ನಿ - ಸ್ಸೇಷ ಮಾಡಿ ಎನ್ನ ಪೋಷಿಸೊ ನಿರುತ ಧೃ - ತಾಷಾಢ ಗುರುವರ 1 ಕಾಮಧೇನು ಕಲ್ಪವೃಕ್ಷಾ - ನಿನ್ನ ಈ ಮಹಮಹಿಮೆ ನಿರೀಕ್ಷಾ - ಮಾಡಿ ಈ ಮಹಿ ಯಾಕೆಂದುಪೇಕ್ಷಾ - ಮಾಡಿ ಧಾಮ ಸೇರಿದವೊ ಭಕ್ತಪಕ್ಷಾ - ಆಹಾ ಸಾಮಜನಾಥನ ಪ್ರೇಮ ಪಾತ್ರನೆ ನಿನ್ನ ಈ ಮಹ ಮಹಿಮೆಗೆ ನಾಮಾಳ್ಪೆ ನಮೊ ನಮೊ 2 ಆಸೇತು ಹಿಮಾದ್ರಿ ತನಕಾ - ನಿನ್ನ ಆಸೆಯ ಮಾಳ್ಪರನೇಕಾ - ಅಂಥ ದಾಸಜನರಿಗೆ ಅನೇಕಾ - ಫಲ ರಾಶಿಯ ಕೊಡುವಿ ಮಜ್ಜನಕಾ - ಆಹಾ ಮಾನವ ಜನ್ಮ ಈಸೆ ಸಾಕೆಲೊ ಸ್ವಾಮಿ ಎಸು ಪೇಳಲಿ ನಿನ್ನ ದಾಸರ ದಾಸನೋ 3 ಎಲ್ಲಿ ಪೋದರು ಕಾಯ್ವರಿಲ್ಲ - ಜಗ - ದ್ವಲ್ಲಭ ಬಲ್ಲಿ ನಿನೆಲ್ಲಾ - ಬಹು ಬಲ್ಲಿದನೆಂಬುವರೆಲ್ಲಾ - ಜನ ಸೊಲ್ಲು ಕೇಳಿಬಂದೆನಲ್ಲಾ - ಆಹಾ ಪುಲ್ಲಲೋಚನ ನೀ - ನಲ್ಲದೆ ಎನ ಭವ ಣೆಲ್ಲ ಮಾತ್ರವು ಕಳೆಯೊ - ರಿಲ್ಲವೊ ಎನ್ನಜೀಯಾ 4 ನಾಥ ನಿನ್ನೊಳು ಜಗಕೆಲ್ಲ - ಮಹ ಪ್ರೀತಿಯು ಇರುತಿಹುದಲ್ಲ - ಸದ - ತಾತ ನೀನಾಗಿ ಜಗಕೆಲ್ಲಾ - ಮತ್ತೆ ಪೂತ ಫಲ ಕೊಡುವಿಯಲ್ಲಾ - ಆಹಾ ದಾತ ಗುರುಜಗ - ನ್ನಾಥವಿಠಲ ಸದಾ ಪ್ರೀತಿಂದ ಇರುವೊನು5
--------------
ಗುರುಜಗನ್ನಾಥದಾಸರು
ಪಾವನ್ನೆ ಪಾವನ್ನೆ ಪ ನಗ | ಗೋವರ್ಧನಧರಶ್ರೀ ವರನಿಗೆ ಪ್ರಿಯೆ | ಪಾವನೆ ತುಳಸೀ ಅ.ಪ. ದಳ ದಳ ರೂಪಂ | ಗಳ ಬಹು ಧರಿಸುತನೆಲಿಸಿಹ ನಿನ್ನಲಿ | ಆಲವ ಪೂರ್ಣ ಹರಿ 1 ತೀರ್ಥಮಾನಿ ಸುರ | ಜಾತರೆಲ್ಲ ಸಂ-ಪ್ರೀತಿಯಿಂದ ಇಹ | ರಾತು ಮೂಲದಲಿ 2 ಕಂಡವರಘಗಗಳ | ಖಂಡಿಸಿ ಬಹು ತನುದಿಂಡುಗೆಡೆಹೆ ಹರಿ | ತೊಂಡರ ಗೈಯ್ಯುವ 3 ನೀರನೆರೆಯೆ ತರು | ಬೇರಿಗೆ ಸಂಸ್ಕøತಿಪಾರು ಮಾಳ್ಪ ಹೆ | ದ್ದಾರಿಯ ತೋರುವೆ 4 ಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ವಲಿಸಿಹೆ | ದೇವಿ ಜಾಂಬುವತಿ 5
--------------
ಗುರುಗೋವಿಂದವಿಠಲರು
ಪಾಹಿ ಶ್ರೀ ನರಸಿಂಹಾ ಪಾವನ್ನ ಮಾಡೆನ್ನಾ ನರಹರಿ ಪ. ಅತಿಶಯವಾದ ಪಿತನ ಬಾಧೆಗೆ ಸುತ ಪ್ರಹ್ಲಾದ ಖತಿಯಿಂದ ಕೂಗೆ ದಿತಿಸುತನ ಅಸುನೀಗೆ ಉದಿಸಿದೆಯೊ 1 ಸ್ಥಂಭದಿಂದುದಿಸ್ಯವನ ಡಿಂಭವ ಬಗೆದು ಅಂಬುಜಾಕ್ಷ ಕರುಳಾ ಹಾರವ ಧರಿಸೇ ಅಂಬರದೀ ಸುರರೆಲ್ಲಾ ಸ್ತುತಿಗೈಯ್ಯೆ 2 ಕಂದನ ಸಲಹಿದ ತಂದೆ ಶ್ರೀ ಶ್ರೀನಿವಾಸ ನಿಂದು ನಾ ಪ್ರಾರ್ಥಿಪೆ ಬಂಧನ ಬಿಡಿಸಿ ಬಂದು ನೀ ಕಾಯೊ ಶ್ರೀ ಹರಿಯೆ 3
--------------
ಸರಸ್ವತಿ ಬಾಯಿ
ಪುರಂಜನೋಪಾಖ್ಯಾನ ಲಾವಣಿ ಗೆರಗಿ ಮಹೇಶ್ವರನಾ ಶಾರದೆಯ ಸರಸಿಜಸಂಭವನಾ | ಇಂದಿರೆ ಪರಮಭಕ್ತಿಯಲಿ ಪ್ರಾರ್ಥಿಸಿ ಸತ್ಕವಿ ಕರುಣಿಪುದು ಜ್ಞಾನ | ಚರಣಗಳಿಗೆ ಬಿನ್ನೈಸುವೆನಾ 1 ಯತಿಗಣಪ್ರಾಸೊಂದಾದರು ತಿಳಿಯದು ಮತಿಹೀನನು ನಾನು | ನಾನಾಚಮ- ತ್ಕøತಿಗಳರಿಯದವನು | ಆದರೀ ಕೃತಿಯಲಿ ತಪ್ಪೇನು | ಮತಿವಂತರಾಲಿಸುವುದು ನೀವಿದನು 2 ಒಂದರೊಳಗೆ ಎರಡಾಗಿ ಎರಡರೊಳು ಹೊಂದಿ ಮೂರ್ನಾಲ್ಕೈದಾಗಿ ಆರೇಳೆಂಟೊಂಬತ್ತುಗಳಾಗಿ | ಸಕಲದೊಳು ಹೊಂದಿರುವುದುತಾಗಿ ಕುಂದಿಲ್ಲದೆ ಇರುತಿರುವ ಮಹಾತ್ಮನ ರಂದವ ಚನ್ನಾಗಿ | ತಿಳಿದು ಸುಖ ತಂದವನೇಯೋಗಿ 3 ಮೊದಲು ಮಹತ್ ಸೃಷ್ಟಿಯಲಿ ಎಲ್ಲತ- ತ್ವದಲಿ ತೋರುತಿಹುದು ಬೇರೆಬೇರಾಗಿ ಕಾಣಿಸುವುದು ಅದುಭುತವಾಗಿಹ ಅನಾದಿ ಕರ್ಮತ್ರಿ- ವಿಧದಿ ಭಾದಿಸುವುದು | ಅದರೊಳು ಬಿ- ಡದೆ ತಾ ಮುತ್ತುವುದು ಎಂದಿಗು ನಿಜವತಿ ರಹಸ್ಯವಿದು 4 ಮೊಟ್ಟೆವೊಂದು ದಶಸಾವಿರವರುಷಗ ಳಿಟ್ಟು ಜಲದಿತಾನು | ಅದಕೆ ಕೈ- ಗೊಟ್ಟು ಎಬ್ಬಿಸಿದನು | ನಾನಾ ವಿಧ ವೆಷ್ಟಿ ಸಮಷ್ಟಿಗಳೆರಡೆಂದದರೊಳು ಗುಟ್ಟಂಗಡಿಸಿದನು | ಗುರಿಯಮಾ ಡಿಟ್ಟು ಚೇತನಗಳನು | ಅನೇಕವು ಪಟ್ಟಣ ರಚಿಸಿದನು 5 ಈ ಪಟ್ಟಣಕಾರ್ ಮಂದಿ ಇರುವರತಿ ಕಾಪಾಡುವರದರೊಳು ವ್ಯಾಪಾರಗಳನು | ಬಹುವಿಧಮಾಡುವ- ರಾಪುರ ಜನರುಗಳು | ಇವರುನಡೆ ಕೋಪಿಸೆ ಹಗಲಿರುಳು 6 ಎರಡು ಮಾರ್ಗದೊಳಿರುತಿಹರೆಲ್ಲರು ಹುರುಡಿಲ್ಲವುನೋಡೆ | ಗಜಿಬಿಜಿಯು ತರತರದಲಿಮಾಡೆ | ನಮಗಿದೆ ಸ್ಥಿರವೆನ್ನುತ ಕೂಡೆ | ಪರಿಪರಿ ಬಗೆಯಲಿ ಭೇದ ಪುಟ್ಟುವುದು ಕರೆಕರೆಯಂದುಡೆ | ವಳಗೆಕೆಲ ಬರುಹರುಷದಿ ನೋಡೆ | ಯುವಶೃಂ- ಗರುವು ಇದಕೆ ಈಡೆ 7 ಇದೆತನ್ನದೆನುತೋರ್ವಳು ಮಾನಿನಿ ಚದುರತನದಿ ಬಂದು | ಊರ ಮುಂದಿರುವ ವನದಿ ನಿಂದು | ಅವಳಿಗಿರು ವುದು ಜನ ಹನ್ನೊಂದು ಚದುರೆಯೈದುತಲೆ ಸರ್ಪವಾಡಿಸುತ ಜಾಣೆಯಿರುವಳಂದು | ತಾನೊಬ್ಬನ ಇಂದು | ಸುಖದೊಳಾ- ಳ್ಬೇಕುರಾಜ್ಯವೆಂದು 8 ಅರಸನೊಬ್ಬ ವಿಜ್ಞಾತನೆಂಬ ಭೂ- ಸುರನಸಹಿತನಾನಾ | ದೇಶಗಳ ತಿರುಗುತ ಉದ್ಯಾನ | ವನದಿಕಂ- ಡನು ಆತರುಣಿಯನ ಪರಮ ಮಿತ್ರನಹ ಬ್ರಾಹ್ಮಣನ ಮರೆತು ಹರುಷದಿ ಪೊಕ್ಕುವನ | ಸ್ಮರಶರಕೆ ತರಹರಿಸುತಲಿರೆ ಮನ | ಕೇಳಿದನು ನಗುತಲಿ ನಾರಿಯನ 9 ಯಾರೆ ಹುಡುಗಿ ನೀನ್ಯಾರೆ ನಿನ್ನ ಪೆಸ- ರೇನು ಪೇಳೆ ಹೆಣ್ಣೆ | ಮಾತನಾ- ಡೆಲೆ ತಾವರೆಗಣ್ಣೆ | ನಿನ್ನ ಮೈ- ಸುಲಿದ ಬಾಳೆಯ ಹಣ್ಣೆ ಯಾರದು ಈ ಜನ ಉರಗವೇನು ವನ- ವಾರದು ಶಶಿವದನೆ | ಈ ಪುರವ- ನಾಳುವನಾವವನೆ | ಒರ್ವಳಿ- ಲ್ಲಿರುವುದಕೇನ್ಹದನೆ 10 ಎನಲು ನಸುನಗುತವನಿತೆನುಡಿದಳೀ ಜನಗಳು ನನ್ನವರು | ಇಲ್ಲಿಕಾ- ಣುವ ಪುರ ನನ್ನೂರು | ಸರ್ಪನ- ನ್ನದು ಇದಕಿನ್ನಾರು | ಅರಸರಿಲ್ಲ ನಾನೊಬ್ಬಳಿರುವೆನೀ ವನದೊಳು ನೀನ್ಯಾರು | ನಿನ್ನಕಥೆ ವಿವರಿಸೆನಗೆ ತೋರು | ಯನ್ನ ಬಳಿ- ಗಿಷ್ಟವಿರಲುಸಾರು 11 ಎಲ್ಲಿ ನೋಡೆ ಸ್ಥಳವಿಲ್ಲವೆನಗೆ ನಿ- ನೆನ್ನ ಪುಷ್ಪಶರನು | ನೀನುಪೇ- ಪರಿ ವಲ್ಲಭನನು ಮಾಡಿಕೊ ಎನ್ನನು ಬಹು ಬಲ್ಲಿಯಳೆ ನೀನು | ನಿನ್ನಸರಿ ಚಲ್ವೆಯರಾರಿನ್ನು | ಇಬ್ಬ- ರಾಳ್ವೆಯೀವೂರನ್ನು 12 ಎನಲು ಹರುಷಗೊಂಡಾಕೆ ಸಮ್ಮತಿಸಿ ಜನವೆರಗಿತಂದು | ನುಡಿದಳಾಮೊಗದ- ಲಿನಗೆತಂದು | ನಿನ್ನಮೇಲ್ ಮನಸಾಯಿತುಯಿಂದು ನಿನ್ನನು ಮಾನವೇತಕಿಂದು | ಆಳು ಜನಸಹಿತ ಪುರವ ಮುಂದು ನೀನು ನಾನಿರುವೆವಾಗಿವಂದು 13 ಸರ್ವವನ್ನು ಭವದಿ ಆದರಿಸುತತತ್ಪುರ ಮಧ್ಯ | ದೊ ಳುಪ್ಪರಿಗೆಯೇರಿ ತ್ವರದಿ | ಸರ ಸಗಳನಾಡಿ | ಬಹುತರದಿ ಮುಳುಗಿ ಸಂಸಾರವೆಂಬಶರಧಿ 14 ಅನ್ನಪಾನಾಭರಣ ಕುಸುಮ ವಿನ್ನು ಗಂಧಧೂಪ | ತಾಂಬೂಲಗಳ ಮನ್ನಣೆಯಲಿ ಭೂಪ | ಪೊಂದಿದ ಸುಖ ವನು ನಾನಾರೂಪ | ನನ್ನದು ಎನ್ನುತಲಿ ಪ್ರತಾಪ | ಶಾಲಿತಾ- ರಾಜ್ಯವಾಳಿದನಾಗುತಭೂಪ 15 ದ್ವಾರಗಳೊಂಭತ್ತಾಪುರಕಿರುವುದು ಮೂರು ಪೂರ್ವದಲ್ಲಿ | ಮೇ- ಲೆರಡು ಕಿಟಕಿಗಳಿಹವಲ್ಲಿ | ಬಿಗಿಸಿ ಕಟ್ಟಿಹುದು ಕನ್ನಡಿಯಲಿ ತೋರುವುದುತ್ತರದಕ್ಷಿಣದೊಳೆರಡು ದ್ವಾರ ಪಶ್ಚಿಮದಲಿ ಕಾರಣವದರಲ್ಲಿ 16 ಮತ್ತದರೊಳಗಾರ್ಸುತ್ತು ಕೋಟೆ ಒಂ- ಬತ್ತು ಬಾಗಿಲ ಪುರದಿ | ಅನೇಕವು ಗೊತ್ತನಾವವಿಧವಿ | ಉತ್ತಮವಹಪುರದಿ | ಮುಖ್ಯವಾ- ಗಿರುವದೆರಡು ಬೀದಿ | ದೊರೆಯಮನೆ- ಯಿರುವುದು ವಿಸ್ತರದಿ17 ಇಂತರಮನೆಯಲಿ ದೊರೆ ಕಲಿಯಾಗುತ ಕಾಂತೆಯೊಡನೆ ಸೇರಿ | ಸದಾಸು- ಸ್ವಾಂತನಾಗಿಮೀರಿ | ಸೌಖ್ಯಹೊಂ- ದುತಲಾವೈಯ್ಯಾರಿ ನಿಂತರೆ ನಿಲುವನು ಕುಳಿತರೆ ಕೂಡುವ ಮಲಗಿದರೆ ನಾರಿ | ತಾನು ಮಲಗುವಯೇಕದಿ ಸೇರಿ | ಉಂಡ- ರುಣ್ಣುವನು ಅವಳನುಸಾರಿ 18 ಮನದಿಯೋಚಿಸದನೂ | ಈಗಲೆ ಮೃಗಯಾತ್ರೆಗೆತಾನೂ | ಸೊಗಸಿಂದ ಸೈನ್ಯವ ಕೂಡುತ ಪುಂ- ಚಪ್ರಸ್ಥವನವನು | ಪೊಕ್ಕು ಅ- ಲ್ಲಿರುವಮೃಗಗಳನ್ನು | ಹೊಡೆದು ಸಂ- ತೋಷದಿ ಸುಖಿಸುವೆನು 19 ಮೂರೆರಡು ಕುದುರೆಯೈದು ಮೇಲ್ ಮೂರು ಪತಾಕಿಗಳು | ಅ- ಚ್ಚೆರಡು ಎರಡು ಕೂಬರಗಳು | ಚಕ್ರ ವೆರಡುವರೂಥಗಳೇಳು ಆರಥಕೊಪ್ಪುವದೇ- ಕರಶ್ಮಿನಾಲ್ಕೊಂದು ವಿಕ್ರಮಗಳು | ಒಬ್ಬ ಸಾರಥಿ ಎರಡು ಗತಿಗಳು | ಬಿಗಿಸಿಹುದು ಕನಕಭೂಷಣಗಳು 20 ಪುರಂಜನ ಭೂ- ಕಾಂತಕರದಿ ಧನುವ | ಪಿಡಿದುಸು- ಸ್ವಾಮತದಿಂದಲನುವಾ | ಗಿಬಹ ಹನ್ನೊಂ- ದು ತನ್ನ ಜನನ | ಸಂತಸದಲಿ ಕೂ- ಡುತ ಹೊರಡುತ ತಾ ಪೊಕ್ಕನು ಕಾನನವಾ | ಶರಗಳಿಂ- ದ್ಹೊಡದು ಮೃಗನಿವಹವಾ | ಮೇರೆಯಿಲ್ಲ- ದೆ ತಟ್ಟುತ ಭುಜವಾ 21 ಇನಿತು ಬೇಟೆಯಾಡುವ ಕಾಲದಿ ತನ್ನ ಮನದಿ ನೆನೆದು ಸತಿಯಾ | ತಕ್ಷಣವೇ ಬಂದು ಸೇರಿ ಮನೆಯ | ಕಾಣದೆ ಹುಡುಕಿದನು ಯುವತಿಯ ಮಂಚದೊಳಿಹ ಸತಿಯ | ಕಂಡುಲಾ- ಲಿಸುತ ಚಮತ್ಕøತಿಯಾ | ನುಡಿಯಲುಪ- ಚರಿಸಿದನಾಕಾಂತೆಯ 22 ನೂರುವರುಷವೀರೀತಿಯವಳೊಡನೆ ನೂರುಹನ್ನೊಂದು ಮಕ್ಕಳನ್ನು | ಪಡೆದು ಸಂ- ಸಾರದಿ ಕಾಲವನು | ಯಾರೆ- ಮೀರಿ ಹೋದುದಿನ್ನು | ಮೊಮ್ಮಕ್ಕಳ ಪಡೆದನನೇಕರನು ದೇಶತುಂಬಿಸಿದ ತನ್ನ | ವರನು 23 ಉತ್ತರ ದಕ್ಷಿಣ ಪಾಂಚಾಲಗಳಾ ಳುತ್ತಲಿವನು ತನ್ನ | ಸುತರಬೆರೆ- ಯುತ್ತಸದಾ ಚಿನ್ನ | ಬೆಳ್ಳಿ ನವ- ರತ್ನರಾಶಿಗಳನಾ | ಮತ್ತೆ ಮತ್ತೆ ಕೂಡಿ- ಸುತೈಶ್ವರ್ಯದಿ ಮತ್ತನಾ | ಗುತಲನ್ಯಾ ಚಿಂತೆಯಿಲ್ಲದೆ ನಾ | ಬಲು ಪುಣ್ಯವಂತನೆ | ನ್ನುತ್ತತಿಳಿದಿರುವನಾ 24 ಚಂಡವೇಗವೆಂಬುವರಾ ತಮ್ಮತಮ್ಮ ಹೆಂಡಿರುಗಳು ತಾವು | ಸೇರಿಮು- ನ್ನೂರರವತ್ತು ಜನವು | ಗಂಧರ್ವರು ಬಂಡೆಬ್ಬಿಸಿ ಪುರವು | ದಂಡು ಮುಂದಾಗೆ ರಿಪುಬಲವು | ಕ್ಷೀಣಗತಿ ಹೊಂದುತಲಿರೆ ಪುರವು 25 ಸ್ತ್ರೀಜಿತನಾಗಿಹಕಾರಣದಲಿಯಾ ರಾಜಪುರಂಜನಗೆ | ಯತ್ನವಿ- ಲ್ಲದೆ ತನ್ನಯಪುರಿಗೆ | ಕೇಡುಬಂ- ದರು ತೋರದು ಕೊನೆಗೆ | ಶೋಕದಿ ಮನದೊಳಗೆ | ಮಿ ಡುಕುತಲಿರಲಾನೃಪತಿಮೇಗೆ | ಮತ್ತು ಶತ್ರುಗಳುನೆರೆಯೆ ಹೀಗೆ 26 ಯವನೇಶ್ವರನೊಬ್ಬನುಭಯಪ್ರಜ್ವಾ ರಾದಿ ಸೈನಿಕರನು | ಕಾಲಕನ್ಯಾಖ್ಯ ಯುವತಿಯನ್ನು | ಕರೆದುಕೊಂ- ಡೀಪುರವ ಸೇರಿದನು | ಬವರದಿ ಗೆದ್ದನು ಭವಿಸಿದನಾ ಕನ್ಯಾಮಣಿಪಟ್ಣವನು | ಭೋಗಿಸಿದ- ಳಾಪ್ರಜ್ವಾರನನು | ಸುಡಲುಪುರಿ ಕಂಡು ಪುರಂಜನನು 27 ಕಾಲಕನ್ಯೆ ತಾ ಲೀಲೆಯಿಂದಲಿ ನೃ- ಪಾಲನ ಹತ್ತಿಗೆಯಾ | ಪಿಡಿಯೆ ಹಾ- ಹಾಯೆನಲಾರಾಯಾ | ಅಬಲತೋ- ರದು ಮುಂದೆ ಉಪಾಯ | ಬಾಲಕರನು ಪತ್ನಿಯ | ನುಕೂಗಿಬಿಡು-
--------------
ಗುರುರಾಮವಿಠಲ
ಪುರಂದರ ದಾಸರಾಯಾ | ನಮಿಸೆ ನಿಮ್ಮಚರಣ ಸರಸೀರುಹವಾ ಪ ಮೊರೆಹೊಕ್ಕ ಜನರ ನೀ | ಪೊರೆಯದೆ ಬಿಡುವರೆವರಪ್ರಹ್ಲಾದ್ ಗರುಹಿದಂ | ತರುಹು ಮಂತ್ರಾರ್ಥಿವ ಅ.ಪ. ದ್ವಾರಕ ಪುರದೊಳಗೆ | ನರ್ತನ ಗೈಯ್ಯೆವಾರ ಕಾಂತೆಯರೆಲ್ಲರೂ |ಭೋರಿಟ್ಟು ಮೊರೆಯುವ | ಸ್ವರಕೇಳಿ ಸುರರೆಲ್ಲಹರಿಯ ಓಲಗವಾರು | ಹೊಗುವರು ಎಂದರು1 ಓಲಗ ಸೇರ್ದ 2 ಷೋಡಶದ್ವಯ ಸ್ವರದಿ | ಮೈ ಮರೆಯುತ್ತಪಾಡಿ ಪೊಗಳಿ ಮುದದೀ |ಮೃಡವಂದ್ಯ ಹರಿಯವನ | ಕಡುಭಕುತಿಗೆ ಮೆಚ್ಚಿನೀಡುವೆ ವರವ ನೀ | ಬೇಡು ಬೇಡನೆ ಪೇಳ್ದ3 ಎಚ್ಚತ್ತು ಮುನಿ ನೋಡಿದ | ನಗುತಿರ್ಪಅಚ್ಚ್ಯುತನ್ನಾ ಬೇಡಿದ |ಸಚ್ಛಾರಿತ್ರನೆ ಕೇಳು | ನಿಚ್ಚಾಟೆನ್ನಯ ಕೂಡೆಪೆಚ್ಚ ಪೇರ್ಮಲಿ ಆಡು | ಲಕ್ಷಣಾಗ್ರಜನೇ 4 ಪುರಂದರ | ಗಡದಲ್ಲುದೀಸಿದ 5 ಚಿನಿವಾರ ವರದನಲ್ಲೀ | ಜನಿಸುತ್ತಧನ ನವಕೋಟಿಯ ಗಳಿಸೀ |ಘನ ಲೋಭಿ ದ್ವಿಜನ | ಜ್ಞಾನೋದಯ ಮಾಡುತಘನಗುಣ ಸಿರಿಪತಿ | ಅಣುಗನ್ನ ಪೊರೆದ 6 ಪುರಂದರ ದಾಸರ 7 ಹಿರಿಯ ವೈರಾಗ್ಯ ಪೊಂದಿ | ಸಕಲವನ್ನುಸಿರಿಕೃಷ್ಣಗರ್ಪಣೆಂದೀ |ಗುರು ವ್ಯಾಸರಲಿ ಪುರಂ | ದರನೆಂಬಂಕಿತ ಪೊಂದಿಪರಿಸರ ಮತ ಸರ್ವೋತ್ತಮವೆಂದು ಬರೆದಂಥ8 ಸಾರ ವಿಸ್ತಾರದಿವೇದ ಗಮ್ಯಾನಂದ | ಮಯನ ಬೋಧಿಸಿದ 9ನಾಲ್ಕಾರು ಜನ ಶಿಷ್ಯರ | ಜ್ಞಾನೀಗಳ ಲೋಕೋದ್ದಾರಕೆ ಈಯುತೆ ಕಾಕು ಮಾಯ್ಮತಗಳ | ಸಾಕಷ್ಟು ಖಂಡಿಸಿಮಾಕಳತ್ರನ ಮಹಿಮೆ | ಮನೆಮನೆ ಬೀರಿದ 10 ಮಾಸ ಪುಷ್ಯವದ್ಯದೀ | ಪರಮೋತ್ತಮಶಶಿ ರವಿಗಳ ಮೇಳದೀ |ರಸೆಯ ತ್ಯಜಿಸಿ ಗುರು ಗೋವಿಂದ ವಿಠಲನಎಸೆವ ಪಾದಗಳ್ಬಿಸಜ | ಸೇರುತ ಮೆರೆದಾ 11
--------------
ಗುರುಗೋವಿಂದವಿಠಲರು
ಪುರಂದರದಾಸರ ಸ್ತೋತ್ರ ಪಾದ ಪದ್ಮಕ್ಕೆ ಎರಗುವೆನು ಸಲಹೆಮ್ಮ ಪ ಸುರಮುನಿಯು ನಾರದರೆ ಹರಿಯಾಜ್ಞದಿಂದ ಶ್ರೀಪುರಂದರಾ ಗಡದಲ್ಲಿ ಅವತರಿಸಿದೆತರುಣಿ ಮಕ್ಕಳು ಕೂಡೆ ಪರಮ ಸೌಖ್ಯದಲಿರುತಹರುಷದಲಿ ಮನೆಧನವ ಭೂಸುರರಿಗರ್ಪಣೆ ಮಾಡ್ದೆ 1 ಆದಿಕಾರಣ ನೀವು ದಾಸಮಾರ್ಗಕೆ ಪ್ರ-ಹ್ಲಾದನವತಾರ ಶ್ರೀ ವ್ಯಾಸಮುನಿಯಾಪಾದಕೆ ನಮಿಸಲುಪದೇಶವನು ಕೈಕೊಂಡುಮೋದತೀರ್ಥರ ಚರಣ ನಾದದಿಂದಲಿ ತುತಿಪೆ 2 ಅದ್ವೈತ ಮತವ ಕಾಲಿಲೊದ್ದು ಶ್ರೀ ಗುರುಮಧ್ವ ಸಿದ್ಧಾಂತವನು ಮಾಡಿದಶುದ್ಧ ಭಕ್ತಿ ಜ್ಞಾನ ವೈರಾಗ್ಯ ಪರರಾಗಿಮಧ್ವ ವಲ್ಲಭನ ಪದ ಹೃದ್ಗುಹದಿ ಪೂಜಿಸುವ 3 ಪಂಚಭೇದ ಸತ್ಯವೆಂದು ಪೇಳಿಹರಿಪುರವ ಸಾರ್ದ ಶ್ರೀ ಪುರಂದರರಾಯ 4 ತತ್ತ್ವ ಶೋಧನ ಮಾಡಿ ತತ್ತ್ವೇಶರನು ತಿಳಿದುತತ್ತತ್ಕಾಲಕೆ ಮಾಳ್ಪ ಕರ್ಮಗಳನಾಉತ್ತಮ ಶ್ಲೋಕ ಪುರುಷೋತ್ತಮನಿಗರ್ಪಿಸಿಮುಕ್ತಿ ಮಾರ್ಗವ ಪಿಡಿದೆ ಅತ್ಯಂತ ಮಹಾಮಹಿಮ 5 ಸಿರಿ ಬ್ರಹ್ಮ ವಾಯುಗರುಡ ಭುಜಂಗ ಮಾರಹರ ಇಂದ್ರ ಸುರರೆಲ್ಲ ತರತಮದಿ ದಾಸರೆಂಬುವ ಜ್ಞಾನ ಕರುಣಿಸುವುದು 6 ದಾಸವರ್ಯರೆ ವಿಜಯದಾಸರಾಯರಿಗುಪದೇಶಿಸಿದ ಪುರಂದರದಾಸರಾಯಶೇಷಗಿರಿವಾಸ ವೆಂಕಟ ವಿಠ್ಠಲನ ನಿಜದಾಸರಾ ದಾಸನೆಂದೆನಿಸೆನ್ನ 7
--------------
ವೆಂಕಟೇಶವಿಟ್ಠಲ
ಪುರಂದರದಾಸರು ಜಿಪುಣರೈ ನೀವೆಂದು ಹೇಳಿದುದು ಸುಳ್ಳಲ್ಲ ಪ ಪುರಂದರ ದಾಸಮಲ್ಲ ಅ.ಪ. ಘನತರದ ವೈರಾಗ್ಯ ತಳೆದು ದ್ವಿಜರಿಗೆಲ್ಲಧನಕನಕ ಸಂಪತ್ತು ದಾನ ಮಾಡಿದರೆಲ್ಲವನಜನಾಭನ ಸ್ತುತಿಗೆ ಶಬ್ದ ಸಂಪತ್ತೆಲ್ಲಒಸೆದು ನೀವೇ ಬಳಸಿ ನನಗೇನು ಕೊಡಲಿಲ್ಲ 1 ಖಂಜೂತನದ ಕಥೆಯನು ಹೇಳಲಾಸಲ್ಲಕಂಜನಾಭನ ಮಹಿಮೆ ಬಣ್ಣಿಸುವ ನೆವದಲ್ಲಿರಂಜನೆಯ ಶಬ್ದಗಳ ಸವಿದುಂಡೆಯಲ್ಲಿಎಂಜಲವನುಳಿದೆನಗೆ ಕಿಂಚಿತ್ತು ಬಿಡಲಿಲ್ಲ 2 ಕೃಪೆಮಾಡಿ ಕ್ಷಮಿಸುವುದು ವಿಪುಲ ಭಕ್ತಿಗಳಿಂದಜಪತಪದಿ ಕನ್ನಡದ ನಿಮ್ಮ ಭಾರತಮಲ್ಲ ಕೃಪಣವತ್ಸಲ ಗದುಗು ವೀರನಾರಾಯಣನ ಸಫಿಲ ಜ್ಞಾನವ ಗಳಿಸಿ ನಮಗೇನು ಕೊಡಲಿಲ್ಲ 3
--------------
ವೀರನಾರಾಯಣ
ಪುರುಷರಾದವರೆಲ್ಲ ಪುರುಷರೆನಿಸುವುದೋಪುರುಷರೊಳಗೂ ಪುಣ್ಯಪುರುಷನೇ ಪುರುಷ ಪ ಪರಮ ದಿವ್ಯ ಜ್ಞಾನಪೂತ ಭಸಿತವಿಟ್ಟುಸ್ಥಿರವೆಂಬ ಸಿಂಹ ಪೀಠದಲಿ ಕುಳಿತುನಿರುತ ನಿತ್ಯಾನಂದ ನಿರಾಮಯ ತಾನೆಂದುಭರದಿ ಪೂಜಿಸುತಿರುವನು ಪುರುಷ 1 ಪಥ ಸೇರಿದವನವ ಪುರುಷ2 ಅಂಗ ಕಾಣುವ ವಿಷಯಗಳ ಆತ್ಮಗರ್ಪಿಸುತಸಂಗ ರಹಿತನಾಗಿ ತಾನಾಗಿ ಇರುತಮಂಗಳವು ಎನಿಸಿಯೇ ಮರೆತು ಬಾಹ್ಯವನುವಿಹಂಗಪಥದಿ ನಿಂತಿರುವನವ ಪುರುಷ 3 ಶಾಂತರಸವಂ ಕುಡಿದು ಸರ್ವಕ್ಕೂ ಬೆದರದೆಭ್ರಾಂತು ಎನಿಪ ಬೆಳಗ ತರಿದುಸಂತ ಸಾಲೋಕ್ಯ ಮೊದಲು ಸಾಯುಜ್ಯವನೆಲ್ಲಪಂಥದಿ ಮೀರಿ ಪರಿವನವನೆ ಪುರುಷ 4 ಪರಿ ಪರಿ ಕೇಳುತನಾದ ಸಾಕ್ಷಿಕ ತಾನು ಚಿದಾನಂದ ಗುರುವಾಗಿನಾದದಾನಂದದಲಿ ಮುಳುಗಿರುವನವ ಪುರುಷ 5
--------------
ಚಿದಾನಂದ ಅವಧೂತರು
ಪುಷ್ಪಸೇವೆಯ ಗೀತೆ ಪುಷ್ಪಸೇವೆಯ ನೋಡುವಾ ಬನ್ನಿರೆ ನ ಮ್ಮಪ್ರಮೇಯ ರಂಗನಾ ಪ. ಕ್ಷಿಪ್ರದಿಂದಲೆ ಬಂದು ಚಪ್ಪರದಲಿ ನಿಂದು ವಿಪ್ರರೆಲ್ಲರು ತಂದು ಪುಷ್ಪ ಸಮರ್ಪಿಸುವ ಅ.ಪ. ಮೇಷರಾಶಿಗೆ ರವಿಯು ಬರಲು ವಾಸುದೇವ ಹರಿಯು ಆಗ ಬೇಸಿಗೆ ತಾಪವ ಪರಿಹರಿಸುವೆನೆಂದು ವಾಸನೆಗಂಧವ ಮೈಯೊಳು ಪೂಸಿದ 1 ಕರ್ಪೂರದ ಕಸ್ತೂರಿ ಗಂಧವ ತಂದು [ಒಪ್ಪದಿಂ] ವಕ್ಷಸ್ಥಳದಿ ಧರಿಸಿ ವಕುಳ ಪುಷ್ಪಗಳಿಂದ ಮೌಳಿಯ [ಲಂಕ]ರಿಸಿದ ರು ಪನ್ನೀರವಲ್ಲಿಯ ಚೆನ್ನಾಗಿ ಪ್ರೋಕ್ಷಿಸಿದರು2 ಮರುಗ ಮಲ್ಲಿಗೆ ಜಾಜಿ ಮುಡಿವಾಳ ಇರವಂತಿಗೆ ಪಚ್ಚೆ ದವನ ಕೇದಿಗೆ ಪಾ ಕಮಲ ಸಂಪಿಗೆ ಪುಷ್ಪಮಾಲೆಯ ಧರಿಸಿ ಪನ್ನೀರ ತಳಿದರಾಗ 3 ಪುಷ್ಪದ ದುಬಟಿಯನು ತಂದು ನಮ್ಮ ಸರ್ಪಶಯನನಿಗ್ಹೊದ್ದಿಸೆ ಕ್ಷಿಪ್ರದಿಂದಲೇ ತೀರ್ಥಪ್ರಸಾದವನಿತ್ತು ಎ ನ್ನಪ್ಪ ರಂಗನು ಬಂದ ಒಯ್ಯಾರ ನಡೆಯಿಂದ 4 ಪರಿಪರಿ, ವಾದ್ಯಂಗಳು ಭೋರಿಡುತಿರೆ ವರಾಂಗನೆಯರು ಪಾಡೆ ಸುರರು ಭೂಸುರ ನರರೆಲ್ಲರ ಕೂಡಿ ದೊರೆಯುಮಂಟಪಕ್ಕಾಗ ಪರಮಪುರಷ ಬಂದ 5 ಅಲ್ಲಿ ಪೂಜೆಯ ಗ್ರಹಿಸಿ ರಂಗಯ್ಯ ತಾ ಎಲ್ಲರೊಡನೆ ಪೊರಟಿರೆ ವಲ್ಲಭನನು ವೀಣೆಸೊಲ್ಲಿನಿಂ ಪಾಡುತಿರೆ ಲಕ್ಷ್ಮೀ ಮೆಲ್ಲಮೆಲ್ಲನೆ ಬಂದ ಏಕಾಂತದಿ ರಂಗ 6 ಚಿತ್ರಪೌರ್ಣಮಿಯಲ್ಲಿ ಶ್ರೀರಂಗ ವಿ ಚಿತ್ರದಿಂದಲೆ ಪೊರಟು ಉತ್ತರಕಾವೇರಿ ತೀರದ ಮಂಟಪದಲಿ ನಿಂದು ಭಕ್ತವತ್ಸಲನು ಮಜ್ಜನವ ಮಾಡಿದನಾಗ 7 ಮಕರಿ ಕಾಲ್ಪಿಡಿಯಲಾಗ ಮತಂಗ ವು ಕರೆಯೆ ನಿಮ್ಮನು ಅತಿ ವೇಗದಿಂದ ಚಕ್ರದಿ ನಕ್ರನ ಕೊಂದು ಕರಿಯ ರಕ್ಷಿಸಿ ಬಂದ ಕರುಣದಿಂದಲೇ ರಂಗ 8 ಕಲಿಯುಗದೊಳಗಿರುವ ಕರ್ಮಿಗಳನ್ನು ಸಲಹುವೆನೆಂದೆನುತಾ ಕರುಣದಿಂ ದಲೆ ಅರ್ಚಾವತಾರವ ಮಾಡಿ [ಸಲೆ] ಬಿರುದು ಧರಿಸಿ ಬಂದ ವರದವೆಂಕಟರಂಗ 9
--------------
ಯದುಗಿರಿಯಮ್ಮ
ಪೂಜಿಸ ಬಲ್ಲೆನೆ ನಾನು ನಿನ್ನಂಘ್ರಿಯ ರಾಜೀವದಳ ನಯನ ಪ ಭಂಜನ ಭವ ರಾಮಚಂದ್ರ ಸೀತಾ ಹೃತ್ಕುಮುದ ಚಂದ್ರ ಅ.ಪ ಪಾರಿಜಾತ ಪುನ್ನಾಗ ಬಕುಳ ಮಂ- ದಾರ ಮಲ್ಲಿಕ ಕೇತಕೀ- ಸಾರಸ ಜಾಜಿ ಚಂಪಕ ತುಳಸಿಯುಕರ- ವೀರವೇ ಮೊದಲಾದ ದಿವ್ಯ ಪುಷ್ಪಗಳಿಂದ 1 ವಿಶ್ವಾದಿ ಸಾಹಸ್ರನಾಮಂಗಳಿಂ ನಿನ್ನ ಶಾಶ್ವದ್ರೂಪವ ತಿಳಿದು ಅಶ್ವಮುಖಾನಂದಮಯ ಪರಮಾತ್ಮ ನಿ- ನ್ನರ್ಚಿಸುವಡೆ ಚಪಲ ಚಿತ್ತಗೆ ಸಾಧ್ಯವೆ 2 ಸೂರ್ಯ ಚಂದ್ರರು ದೀಪ ನೀರೆಲ್ಲ ಅಭಿಷೇಕವೂ ತೋರೂವದಿಗ್ವಸ್ತ್ರ ಪೃಥ್ವಿಗಂಧವು ಸರ್ವ ಸಾರ ಭೋಕ್ತಗೆ ಗುಣಗಳ ತಾಂಬೂಲಾದಿಗಳಿಂದ3 ಕಮಲ ಸದನ ಹಂಸಾಖ್ಯ ಕು- ಡಿದ ನೀರು ಅಭಿಷೇಕವೂ ಮುದದಿ ನಿತ್ಯದಿ ಉಂಬುವುದೆ ನೈವೇದ್ಯವು ಪ್ರತಿ ಪದ ಪ್ರದಕ್ಷಣೆ ಮಲಗುವದೆ ವಂದನೆಯೆಂದು 4 ಒಂದು ಅರಿಯದ ಉಭಯಾಂಧನು ನಾನು ಗೋ- ವಿಂದ ನಿನ್ನಯ ಭಕ್ತಾರಾ ಸಂದೋಹದೊಳಗಿಟ್ಟೆನ್ನರ್ಚನೆ ಕೈಕೊಂಡು ತಂದೆ ಪಾಲಿಸೋ ಗುರುರಾಮ ವಿಠಲ ಸ್ವಾಮಿ 5
--------------
ಗುರುರಾಮವಿಠಲ