ಒಟ್ಟು 932 ಕಡೆಗಳಲ್ಲಿ , 51 ದಾಸರು , 858 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲಭ್ರಷ್ಟಮಾನವ ಹಣೆಯ ಬರಹವನ್ನದೆ ಇಲ್ಲ ಪಸಿರಿವಂತನ ಸ್ನೇಹಮಾಡಿ ನಡೆದರಿಲ್ಲಪರಿಪರಿಯಲಿ ವಿದ್ಯ ಕಲಿತರಿಲ್ಲನರಿಯ ಬುಧ್ಧಿಯಲಿ ನಡೆದುಕೊಂಡರು ಇಲ್ಲಅರಿಯದೆ ಹಲವ ಹಂಬಲಿಸಿದರಿಲ್ಲ 1ಕೊಂಡೆಗಾರಿಕೆಯನ್ನು ಹೇಳಿ ನಡೆದರಿಲ್ಲಕಂಡಕಂಡವರಿಗೆ ಕೈ ಮುಗಿದರಿಲ್ಲಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲಚಂಡನಾದರೂ ಇಲ್ಲ ಪರಿಹಾಸ್ಯವಲ್ಲ 2ಕಟ್ಟಾಳು ಕಂಡು ಜಾಣನಾಗಿ ಪುಟ್ಟಿದರಿಲ್ಲಬೆಟ್ಟಗಳನು ಕಿತ್ತಟ್ಟರಿಲ್ಲಸೃಷ್ಟಿಯೊಳು ಪುರಂದರವಿಠಲರಾಯ
--------------
ಪುರಂದರದಾಸರು
ಕಳವು ಕಲಿಸಿದೆಯಮ್ಮಗೋಪಿಕಮಲನಾಭಗೆ |ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವಹಚ್ಚಿಹಾರವ ಹಾಕಿ ||ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ 1ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ 2ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ 3ವಾರಿಜಾಕ್ಷ ಮಾಡಿದಂಥ ದೂರು ಹೇಳಿದರೆ ನಿಮಗೆ |ದೂರುಬಡಕರೆಂದುಗೋಪಿಬಯ್ವೆ ನಮ್ಮನು ||ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ |ವಾರಿಜನಾಭನ ಕರೆದು ಬುದ್ಧಿಯ ಹೇಳೆ 4ಹೊಟ್ಟೆಬಾಕನಿವ ಬೆಟ್ಟದೊಡೆಯಗೆ ಪ್ರಿಯ |ಇಟ್ಟುಕೊಂಡೀರೇಳುಭುವನಉದರದಲ್ಲಿಯೆ ||ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು |ಕಟ್ಟು ಮಾಡಿಸಲುಬೇಕು ಪುರಂದರವಿಠಲಗೆ 5
--------------
ಪುರಂದರದಾಸರು
ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |ಕೋಗಿಲೆಯು ಸ್ವರಗೈಯ್ಯಲು-ಕೃಷ್ಣ-|ನಾಗಸಂಪಿಗೆ ಅರಳಲು ಪಎದ್ದು ಮುಖ ತೊಳೆಯೇಳು ತಿದ್ದು ಕಸ್ತುರಿ ತಿಲಕ |ಮುದ್ದೆಬೆಣ್ಣೆಯ ನಿನಗೆ ನಾನು ಕೊಡುವೆ ||ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ |ನಿದ್ದೆ ತಿಳಿದೇಳಯ್ಯ ಕೃಷ್ಣ 1ಬಿಸಿಯ ದೋಸೆಯ ಹೊಯ್ದು ಮೊಸರುಗಡ್ಡೆಯ ತೆಗೆದು |ಹೊಸದಾದ ಹಸುವಿನೀ ತುಪ್ಪವನ್ನು ||ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |ಹಸುಳೆ ನಿನಗಾರೋಗಣೆಗೆ ಮಾಡುವೆ 2ಎಂದಿಲ್ಲದಾ ಹಟವನಿಂದೇಕೆ ಮಾಡುತಿಹೆ |ಕಂದರೊಳಗತಿ ನೀನು ಹಟಿಯಾದೆಯ ||ಇಂದುನೀನತ್ತರೇ ಎತ್ತಿಕೊಳ್ಳುವರಿಲ್ಲ |ಕಂದ ಅಳಬೇಡವೊ ಪುರಂದರವಿಠಲ 3
--------------
ಪುರಂದರದಾಸರು
ಕಾಯಬೇಕೆನ್ನ ಗೋಪಾಲ ಬಂದು |ಪಾಯವನರಿಯೆನು ಭಕುತರ ಪಾಲಪಹಲವು ಜನ್ಮಗಳೆತ್ತಿ ಬಂದೆ-ಮಾಯಾ-|ಮಲವೆಂಬುದರಿಯದೆ ಭವದೊಳು ನೊಂದೆ ||ಬಲು ಭಯವಾಯಿತು ಮುಂದೆ-ನೀನು-|ಸುಲಭನೆಂದುಕೇಳಿಶರಣೆಂದೆ ತಂದೆ1ವಿತ್ತದೊಳಗೆ ಮನವಿಟ್ಟು-ನಿನ್ನ-|ಉತ್ತಮ ನಾಮದ ಸ್ಮರಣೆಯ ಬಿಟ್ಟು ||ಮತ್ತನಾದೆನು ಮತಿಗೆಟ್ಟು-ಇದ-|ಚಿತ್ತದಲಿ ತಿಳಿದಿ ಬಲು ದಯವಿಟ್ಟು 2ಜರುಗಿದ ಪಾಪಂಗಳೆಲ್ಲ-ಅನ್ಯ-|ನರರೇನ ಬಲ್ಲರು ಯಮಧರ್ಮ ಬಲ್ಲ ||ನರಕಕೆ ಒಳಗಾದೆನಲ್ಲ-ಸಿರಿ-|ವರನಾರಾಯಣ ಪುರಂದರವಿಠಲ 3
--------------
ಪುರಂದರದಾಸರು
ಕಾಯಲಾರೆನು ಕೃಷ್ಣಕಂಡವರ ಬಾಗಿಲನು |ನಾಯಿ ಕುನ್ನಿಗಳಂತೆ ಪರರ ಪೀಡಿಸುತೆ ಪಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು |ಪದುಮನಾಭನ ಪಾದಸ್ಮರಣೆ ಮೊದಲಿಲ್ಲದೆ ||ಮುದದಿ ನಿನ್ನರ್ಚಿಸದೆ ನರರ ಸದವನ ಪೊಕ್ಕು |ಒದಗಿ ಸೇವೆಯ ಮಾಡಿಅವರಬಾಗಿಲನು1ಕಲ್ಲಕರಗಿಸಬಹುದು ಹುರಿಗಡಲೆಯನು ಅರೆದು |ತೈಲವನು ತೆಗೆದಾದರುಣಲು ಬಹುದು ||ಬಲ್ಲಿದವರಾ ಮನಸು ಮೆಚ್ಚಿಸಲರಿಯೆನೈ |ಹಲ್ಲು ಕಿರಿಯುತಲಿ ಹಂಬಲಿಸಿ ಬಾಯ್ಬಿಡುತ 2ಇಂತು ನಾನಾ ಚಿಂತೆಯಲಿ ನಿನ್ನ ನೆನೆಯದೆ |ಭ್ರಾಂತಿಯೆಂತೆಂಬ ಹೆಬ್ಬಲೆಯೊಳು ಸಿಲುಕಿ |ಅಂತ್ಯವ ನಾ ಕಾಣೆ ಆದರಿಸುವರಿಲ್ಲ |ಚಿಂತೆಯ ಬಿಡಿಸಯ್ಯಪುರಂದರವಿಠಲ3
--------------
ಪುರಂದರದಾಸರು
ಕಾಶಿ ಪಿತಾಂಬರ ಕೈಯಲಿ ಕೊಳಲು |ಪೂಸಿದ ಶ್ರೀಗಂಧ ಮೈಯಲಿ ||ಲೇಸಾದ ಪುಷ್ವಮಾಲಿಕೆ ಹಾಕಿದ-ನಮ್ಮ-|ವಾಸುದೇವಹರಿಬಂದ ಕಾಣಿರೇನೆ? 2ಕರದಲಿ ಕಂಕಣ ಬೆರಳಲಿ ಉಂಗುರ |ಕೊರಳಲಿ ಹಾಕಿದ ಹುಲಿಯುಗರಮ್ಮ ||ಅರಳೆಲೆ ಕನಕಕುಂಡಲ ಕಾಲಲಂದಿಗೆ-ನಮ್ಮ-|ಉರಗಶಯನ ಬಂದ ಕಾಣಿರೇನೆ? 3ಹದಿನಾರು ಸಾವಿರ ಗೋಪಸ್ತ್ರೀಯರ ಕೂಡಿ |ಚದುರಂಗ-ಪಗಡೆಯನಾಡಿದನ ||ಮದನಮೋಹನರೂಪ ಎದೆಯಲ್ಲಿ ಕೌಸ್ತುಭ-ನಮ್ಮ |ಮಧುಸೂದನ ಬಂದ ಕಾಣಿರೇನೆ? 4ತೆತ್ತೀಸಕೋಟಿ ದೇವತೆಗಳು ಕೂಡಿ |ಹತ್ತವತಾರವ ಧರಿಸಿದನ ||ಸತ್ಯಭಾಮೆಯ ಅರಸ ಶ್ರೀ ಪುರಂದರವಿಠಲ |ನಿತ್ಯೋತ್ಸವ ಬಂದ ಕಾಣಿರೇನೆ? 5
--------------
ಪುರಂದರದಾಸರು
ಕಾಳಬೆಳದಿಂಗಳು - ಈ ಸಂಸಾರ -ಕತ್ತಲೆ ಬೆಳುದಿಂಗಳು ಪ.ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |ವ್ಯರ್ಥ ಭಂಢಾರವೆಲ್ಲವನು ಸೋತು ||ಬತ್ತಲೆ ಪೋಗಿ ವಿರಾಟನ ಮನೆಯೊಳು |ತೊತ್ತಾದಳು ದ್ರೌಪದಿ ಒಂದು ವರುಷ 1ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |ಬೆಂಬತ್ತಿ ತಿರುಗುತಲಿಪ್ಪರು ||ಎಂಬಾತಗೆ ನೋಡಿ ಬಡತನ ಬಂದರೆ |ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |ಬಂಟರಂತೆ ಬಾಗಿಲ ಕಾಯ್ವರು |ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |ಹೆಂಟೆಯಾಗಿ ತಿರುಗುತಿಪ್ಪರಯ್ಯ 3ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |ಕೊಂಡು ಸಾರಥಿಯಾದ ಫಲ್ಗುಣನ ||ಮಂಡಲವಾಳವ ಹರಿಶ್ಚಂದ್ರರಾಯನು ||ಕೊಂಡು ಕಾಯ್ದ ಚಂಡಾಲನ ಮನೆಯ 4ನೊಂದಿತು ಕಾಯವು ಬೆಂದಿತುಒಡಲು |ಬೆಂದ ಒಡಲಿಗಾಗಿ ಹಾಸ್ಯಮಾಡಿ ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |ತೊಂಡನಾಗಿ ನೀ ಸುಖವಾಗಿ ಬಾಳು 5
--------------
ಪುರಂದರದಾಸರು
ಕಾಳಿಯಮರ್ದನ ರಂಗಗೆ- ಹೇಳೆ ಗೋಪಮ್ಮ ಬುದ್ಧಿ |ಕೇಳಲೊಲ್ಲನು ಎನ್ನ ಮಾತನು ಪದಿಟ್ಟ ನೀರೊಳು ಕಣ್ಣ ಮುಚ್ಚನೆ-ಹೋಗಿ |ಬೆಟ್ಟಕೆ ಬೆನ್ನಾತು ನಿಂತನೆ ||ಸಿಟ್ಟಿಲಿ ಕೋರೆದಾಡೆ ತಿಂದನೆ-ಅಹ |ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ 1ಮೂರಡಿ ಭೂಮಿಯ ಬೇಡಿದನೆ-ನೃಪರ |ಬೇರನಳಿಯೆ ಕೊಡಲಿ ಪಿಡಿದನೆ ||ನಾರಮಡಿಯನುಟ್ಟು ಬಂದನೆ-ಅಹ |ಚೋರತನದಿ ಪಾಲ್ಬೆಣ್ಣೆಯ ತಿಂದನೆ 2ಬತ್ತಲೆ ನಾರಿಯರನಪ್ಪಿದ-ಹೋಗಿ ||ಉತ್ತಮಾಶ್ವವನು ಹತ್ತಿದ ||ಹತ್ತವತಾರವ ತಾಳಿದ-ನಮ್ಮ |ಭಕ್ತವತ್ಸಲ ಸ್ವಾಮಿ ಪುರಂದರವಿಠಲನು 3
--------------
ಪುರಂದರದಾಸರು
ಕುಳಿತೆಯ ಕೃಷ್ಣ ಕುಳ್ಳಿರ ಕಲಿತೆಯ |ಕುಳಿತೆಯ ಎನ್ನೊಡೆಯ ಪಇಳೆಯೊಳು ಭಕುತರ ಹೃದಯ ಕಮಲದೊಳು |ಕುಳಿತೆಯ ಎನ್ನೊಡೆಯ ಅ.ಪಜಲಚರರೂಪದಿ ನಿಗಮಗಳೆಣಿಸುತ ಕುಳಿತೆಯ ಎನ್ನೊಡೆಯ |ಕುಲಗಿರಿಗಳನೆಲ್ಲ ನೆಗಹಿಕೂರ್ಮನಾಗಿ ಕುಳಿತೆಯ ಎನ್ನೊಡೆಯ ||ಛಲದಿ ವರಾಹನಾಗಿ ಭೂಮಿದೇವಿಯ ತಂದುಕುಳಿತೆಯ ಎನ್ನೊಡೆಯಖಳಹಿರಣ್ಯಾಖ್ಯನ ಕರುಳಬಗಿವೆನೆಂದುಕುಳಿತೆಯ ಎನ್ನೊಡೆಯ 1ತೊಡೆ ವಟುವೇಷವ ಸುರರ ರಕ್ಷಿಪೆನೆಂದು ಕುಳಿತೆಯ ಎನ್ನೊಡೆಯ |ಪೊಡವಿಯ ಕ್ಷತ್ರಿಯ ವಂಶ ಸವರುವೆನೆಂದು ಕುಳಿತೆಯ ಎನ್ನೊಡೆಯ ||ಮಡದಿಯ ಒಯ್ದನ ಕೆಡಹಿ ಲಂಕೆಯಲಿಕುಳಿತೆಯ ಎನ್ನೊಡೆಯ |ಕಡುಮೂರ್ಖ ಕೌರವನನ್ನು ಕೊಲುವೆನೆಂದು ಕುಳಿತೆಯ ಎನ್ನೊಡೆಯ 2ತ್ರಿಪುರರ ಸತಿಯರ ವ್ರತವ ಕೆಡಿಪೆನೆಂದು ಕುಳಿತೆಯ ಎನ್ನೊಡೆಯ |ಉಪಸನಿಷದ್ವಾಹನ ತೇಜಿಯ ಬೆನ್ನಲಿ ಕುಳಿತೆಯ ಎನ್ನೊಡೆಯ |ಕೃಪೆಯಿಂದಲಿ ಮನದೊಳು ನೆನೆವವರಲಿಕುಳಿತೆಯ ಎನ್ನೊಡೆಯ |ಕಪಟನಾಟಕಸಿರಿ ಪುರಂದರವಿಠಲ ಕುಳಿತೆಯ ಎನ್ನೊಡೆಯ3
--------------
ಪುರಂದರದಾಸರು
ಕೂಗದೆ ಉಸುರಿಕ್ಕದೆ- ನೀವು |ಬೇಗನೆ ಬನ್ನಿ ರಂಗ ಮನೆಯ ಪೊಕ್ಕ ಪಹೆಜ್ಜೆಗಳಿವೆಕೋ ಮನೆಯಲಿ-ಕಾಲ |ಗೆಜ್ಜೆಯ ದನಿ ಕೇಳಬರುತಲಿದೆ ||ನಿರ್ಜರಪತಿ ತನ್ನ ಮನಸಿಗೆ ಬಂದಂತೆ |ಮಜ್ಜಿಗೆ ಓಕುಳಿ ಆಡಿಹನಕ್ಕ 1ಸೂರಿನ ಕೆಳಗೆ ಕುಳ್ಳಿರಿಸಿ-ತನ್ನ |ಓರಗೆ ಮಕ್ಕಳುಗಳ ನಿಲ್ಲಿಸಿ ||ಕೇರಿಕೇರಿಯಿಂದ ಗೋಡೆ ಧುಮುಕಿ ಪೋಗಿ |ಸೂರೆಗೊಳ್ಳುತಾನೆ ಸುಮ್ಮಗೆ ಬನ್ನಿ 2ಹಾಲು ಚೆಲ್ಲಿ ಹಳ್ಳ ಹರಿದಿಹವೆ-ಮೊಸರ |ಮೇಲಿನ ಕೆನೆಗಳು ಬಳಿದಿಹವೆ ||ಬಾಲಚೋರ ಶ್ರೀ ಪುರಂದರವಿಠಲನು |ಚಾಲುವರಿದರಿನ್ನು ಬಿಡಬಾರದಕ್ಕ 3
--------------
ಪುರಂದರದಾಸರು
ಕೂಡಿಕೊಂಡಾಡಲೊಲ್ಲರೊ-ರಂಗಯ್ಯ ನಿನ್ನ |ಕೂಡಿಕೊಂಡಾಡಲೊಲ್ಲರೊ ಪಕೇಡಿಗನಿವ ನಮ್ಮ ಕೆಲಸ ಕೆಡಿಪನೆಂದು ಅ.ಪತನ್ನ ತಾಯ ಒಡಹುಟ್ಟಿದಣ್ಣನ ಕೊಂದವನಿವ |ಅನ್ನಿಗರ ಬಿಡುವನೆ? ಎಂದೆಲ್ಲರು ಮಾತಾಡಿಕೊಂಡು 1ತರಳಪುಟ್ಟನೆಂದು ಕರೆದು ಸಲಹಿದರೆ |ಬೆರಳನೆಣಿಸಿ ಕೊಂದ ಕೊಲೆಗಾರನೆಂದು ನಿನ್ನ 2ಆವ ಕಾಯುತ ಹೋಗಿ ಹಾವಿನ ಮಡುವ ಧುಮುಕಿ |ಠಾವವಿಲ್ಲ ಮಾಡಿದ ಕೇವಲ ಹೀನನೆಂದು 3ಗೊಲ್ಲತಿಯರ ಮನೆ ಪೊಕ್ಕು ಪಾಲ್ಬೆಣ್ಣೆ ಮೊಸರುಗಳು |ನಿಲ್ಲದೆ ತಿಂಬುವನಿವ ಕಳ್ಳ ಕೃಷ್ಣನೆಂದು 4ಕರುಣಾಕರಸಿರಿಪುರಂದರವಿಠಲನೆ |ಧರೆಯ ನರರು ನಿನ್ನಚರಿಯಪರಿಯ ಕಂಡು5
--------------
ಪುರಂದರದಾಸರು
ಕೂಸನು ಕಂಡಿರಾ-ಮುಖ್ಯಪ್ರಾಣನ ಕಂಡಿರಾ ಪಅಂಜನೆಯುದರದಲಿ ಹುಟ್ಟಿತು ಕೂಸುರಾಮರ ಪಾದಕ್ಕೆರಗಿತು ಕೂಸು ||ಸೀತೆಗೆ ಉಂಗುರ ಕೊಟ್ಟಿತು ಕೂಸುಲಂಕಾಪುರವನು ಸುಟ್ಟಿತು ಕೂಸು 1ಬಂಡಿಯನ್ನವನುಂಡಿತು ಕೂಸು |ಬಕನ ಪ್ರಾಣವ ಕೊಂಡಿತು ಕೂಸು ||ವಿಷದ ಲಡ್ಡುಗೆಯ ಮೆದ್ದಿತು ಕೂಸು |ಮುಡದಿಗೆ ಪುಷ್ಪವ ತಂದಿತು ಕೂಸು 2ಮಾಯಾವಾದಿಗಳ ಗೆದ್ದಿತು ಕೂಸು |ಮಧ್ವಮತವನ್ನುದ್ಧರಿಸಿತು ಕೂಸು ||ಮುದ್ದು ಶ್ರೀಪುರಂದರವಿಠಲನ ದಯದಿಂದ |ಉಡುಪಿಯಲ್ಲಿ ಬಂದು ನಿಂತಿತು ಕೂಸು 3
--------------
ಪುರಂದರದಾಸರು
ಕೂಸು ಕಂಡೆವಮ್ಮ-ಅಮ್ಮ ನಿಮ್ಮ-ಕೂಸು ಕಂಡೆವಮ್ಮ ಪಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು |ಶೇಷಗಿರಿಯ ಮೇಲೆ ವಾಸವಾಗಿಪ್ಪನೆ 1ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು |ಕಂಚಿ ಪಟ್ಟಣದಿ ಮಿಂಚಾಗಿಪ್ಪನೆ 2ಗುಡ್ಡ ಬೆರಳಲ್ಲೆತ್ತಿ ದೊಡ್ಡಿ ಗೋಗಳ ಕಾಯ್ದ |ಒಡ್ಡಿಜಗನ್ನಾಥ ಗಿಡ್ಡಾಗಿಪ್ಪನೆ3ದುಡುಕು ಮಾಡಿ ಹಾಲು ಮಡಕೆಗಳನ್ನೊಡೆದು |ಹಡಗನೇರಿ ಬಂದು ಉಡುಪಿಯಲಿಪ್ಪನೆ 4ಮಂಗಳರೇಖೆ ಪದಂಗಳುಳ್ಳ ನಿಮ್ಮ |ರಂಗ ಪುರಂದರವಿಠಲ ಶ್ರೀ ಕೃಷ್ಣ 5
--------------
ಪುರಂದರದಾಸರು
ಕೃಷ್ಣ ಮಂತ್ರವ ಜಪಿಸೊ - ಏ ಮನುಜ |ಕೃಷ್ಣ ಮಂತ್ರವ ಜಪಿಸೊ ಪ.ವೈಷ್ಣವೋತ್ತಮನಾಗಿ ವಿಷ್ಣುವೆ ಗತಿಯೆಂದು ಅಪಜಪತಪಾನುಷ್ಟಾನ ಸ್ನಾನಕ್ಕೆ ಈ ಮಂತ್ರ |ಕಪಟಬುದ್ದಿಗಳನ್ನು ಕಟ್ಟುವ ಮಂತ್ರ ||ಉಪದೇಶದಲಿ ಜ್ಞಾನಕೊಟ್ಟು ಸಲಹುವ ಮಂತ್ರ |ಸುಪವಿತ್ರ ಮಾಡಿ ಸ್ವರ್ಗ ಸೂರೆಗೊಡುವ ಮಂತ್ರ 1ಸಕಲ ಸಾಧನೆಗಳಿಗೆ ಸಾರಭೂತದ ಮಂತ್ರ |ನಿಖಿಳ ದೇವರಿಗೆಲ್ಲ ಸಾಕ್ಷಿ ಭೂತದ ಮಂತ್ರ ||ಭಕುತಿಯಲಿ ದ್ರೌಪದಿಯ ಭಜಿಸಿದ ಈ ಮಂತ್ರ |ಮುಕುತಿಯ ಕೊಟ್ಟು ಜನರ ಪೋಷಿಸುವ ಮಂತ್ರ 2ಭಾವಿಸಲಣುರೇಣು ಪರಿಪೂರ್ಣವಾದ ಮಂತ್ರ |ಜೀವಗಳಿಗೆಲ್ಲ ಸಂಜೀವ ಮಂತ್ರ ||ಪಾವನ ಮಾಡಿ ಪಾಲಿಪುದೀ ಮಂತ್ರ |ದೇವ ಪುರಂದರವಿಠಲ ಮಹಾ ಮಂತ್ರ 3
--------------
ಪುರಂದರದಾಸರು
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿರೆ ಪಮಸ್ತಕದಲಿ ಮಾಣಿಕದ ಕಿರೀಟಕಸ್ತುರಿ ತಿಲಕವು ಹೊಳೆವಲಲಾಟ||ಹಸ್ತದಿ ಕೊಳಲನೂದುವ ನರೆ ನೋಟಕೌಸ್ತುಭದೆಡ ಬಲದೊಳು ಲೋಲಾಟ 1ಮಘಮಘಿಸುವ ಸೊಬಗಿನ ಸುಳಿಗುರುಳುಚಿಗುರು ತುಳಸಿವನ ಮಾಲೆಯಿಟ್ಟ ಕೊರಳುಉಗುರಿಗೆ ಹೊನ್ನ ಮುದ್ರಿಕೆಯಿಟ್ಟ ಬೆರಳುಸೊಗಸಿನ ನಾಭಿಯು ತಾವರೆಅರಳು2ಉಡುದಾರಒಡ್ಯಾಣಸಕಲಾಭರಣಬೆಡಗಿನ ಪೀತಾಂಬರ ರವಿಕಿರಣ ||ಕಡಗಗಗ್ಗರಗೆಜ್ಜೆ ಇಕ್ಕಿದಚರಣಒಡೆಯಪುರಂದರವಿಠಲನ ಕರುಣ3
--------------
ಪುರಂದರದಾಸರು