ಒಟ್ಟು 3042 ಕಡೆಗಳಲ್ಲಿ , 124 ದಾಸರು , 2171 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತಕೆ ನೀ ಚಿಂತಿಸುವೆ ಹೇಡಿ ಜೀವವೇ ಪ ವೀತಮೋಹರಾಗನಾಗಿ ವಿಧಿಪಿತ ದಾತತಾನೆಂದು ತಿಳಿಯಲು ಹೃತ್ತಾಪನಾಶನಾ ಅ.ಪ ಹೊನ್ನು ಹೆಣ್ಣು ಮಣ್ಣು ಮೂರು ನಂಬಬ್ಯಾಡಲೊ ನಿನ್ನೊಳಿರುವ ಮೂರ್ತಿಯನ್ನು ಅರಿತು ಬಾಳೆಲೊ 1 ವಂದಿಸುತ ಸಜ್ಜನರ ಕಂಡರಾನಂದ ಪೊಂದುತ ಸಂದೇಹಗಳೆಲ್ಲ ತೊರೆದು ಸತತ ನಲಿಯುತ 2 ಆತ್ಮವತ್ ಸರ್ವಭೂತನೆಂಬೊ ವಚನವು ಆತ್ಮನಲ್ಲಿ ಸಮರ್ಪಿಸಿದರೆ ಪಡೆವೆ ಸೌಖ್ಯವು 3 ಸಾಮಜೇಂದ್ರ ವರದ ಶ್ರೀ ಗುರುರಾಮವಿಠಲನ ಪ್ರೇಮದಿಂ ನಿಷ್ಕಾಮನಾಗಿ ಸೇವಿಸುನುದಿನ 4
--------------
ಗುರುರಾಮವಿಠಲ
ಏತಕೆ ಸಂತತ ಚಿಂತಿಸುವೆ ಪ ಕೋತಿಗೆ ಮದ್ದಿಕ್ಕಿದ ರೀತಿಲಿ ಮನವೆಅ.ಪ ಹಾನಿ ವೃದ್ಧಿಗಳು ತಾನಾಗಿ ಬರುವುದು ಏನೇನು ಮಾಡಲು ಬಿಡಲೊಲ್ಲದು ಜ್ಞಾನವಿಲ್ಲದೆ ವೃಥಾ ಧೇನಿಸಿ ಧೇನಿಸಿ 1 ದೇಹಸಂಬಂಧಿಗಳ ಮೋಹ ಪಾಶಕ್ಕೆ ಸಿಕ್ಕಿ ಸಾಹಸ ಮಾಡುವುದೇನು ಫಲ ಊಹಿಸಿ ನೋಡಲು ಭ್ರಾಂತಿಯದಲ್ಲವೆ 2 ಪೂರ್ವ ಕರ್ಮಾನುಸಾರ ನಡೆಸುವನು ಗರ್ವವಿರಹಿತನು ಗುರುರಾಮವಿಠಲನು 3
--------------
ಗುರುರಾಮವಿಠಲ
ಏತರಿಂದ ಬ್ರಾಹ್ಮಣಿಕೆ ಪರಮಾತ್ಮನೆತಾನೆಂದು ತಿಳಿಯದ ನರನಲಿ ಪ ಜನಿವಾರ ನೋಡಿ ಬ್ರಾಹ್ಮಣ ನೆಂದರೆ ಸು-ಮ್ಮನೆ ಮರಕೆ ಬಳ್ಳಿ ಸುತ್ತಿಲ್ಲವೆಹಣೆಯ ಬಟ್ಟದ ನೋಡಿ ಬ್ರಾಹ್ಮಣ ನೆಂದರೆಹಾದಿ ಕಲ್ಲಿಗೆ ಸುಣ್ಣ ಬರೆದಿಲ್ಲವೆ1 ಜುಟ್ಟು ನೋಡಿ ಇವ ಬ್ರಾಹ್ಮಣ ನೆಂದರೆಜುಟ್ಟಿನ ಗುಬ್ಬಿಯು ತಾನಿಲ್ಲವೆಉಟ್ಟ ಧೋತ್ರವ ನೋಡಿ ಬ್ರಾಹ್ಮಣ ನೆಂದರೆಉಟ್ಟುದಿಲ್ಲವೆ ಮನೆಯ ನಡುಗಂಬ 2 ಬ್ರಾಹ್ಮಣನಾದರೆ ಬ್ರಹ್ಮ ಸರ್ವವು ಆಗಿಬ್ರಹ್ಮವಖಂಡದಿ ಭೇದವಿಲ್ಲದೆಬ್ರಹ್ಮ ಚಿದಾನಂದ ಗುರುನಾಥನಾಗಿಯೆಬ್ರಹ್ಮವ ಕಂಡವನೀಗ ಬ್ರಾಹ್ಮಣ3
--------------
ಚಿದಾನಂದ ಅವಧೂತರು
ಏನ ಹೇಳಲಿ ಈತನಿರವ ಭಕ್ತರ ಮನಾ- ಧೀನ ಹೆಳವನಕಟ್ಟೆ ರಂಗ ದೇವೋತ್ತುಂಗನ ಪ. ಹೊಳೆವ ಮೈಯ್ಯವ ಕಲ್ಲಹೊರುವ ಕಡಲೊಳಾಡುವ ತಿಳಿಯ ಎರಡಂಗನೆ ತಿರಿವ ಪರುಶುವಿಡಿವ ಕೋಡಗ ಕುಲವನಾಳುವ ಗೋವಕಾಯ್ವ ಕಾಂತೆಯರ ವ್ರತವ- ನಳಿವ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ ಜಲವಪೊಕ್ಕು ದೈತ್ಯನ ಸಂಹರಿಸಿ ಕಲಕಿ ಸಮುದ್ರವ ಕಾರಣಕಾಗಿ ನೆಲಗಳ್ಳನ ಮರ್ದಿಸಿ ಹಿರಣ್ಯಾಕ್ಷನ ಚಲುವ ಚೆಳ್ಳುಗುರಿಂದೊಡಲನೆ ಬಗಿದು ಸುಲಭನಾಗಿ ಶುಕ್ರನ ಕಣ್ಣಿರಿದು ಬಲುಸಾಹಸದಿ ಕ್ಷತ್ರಿಯರನು ಗೆಲಿದು ಗೆಲವ ತೋರಿ ಗೋಪಿಗೆ ಸುತನಾಗಿ ನಿಲುವ ದಿಗಂಬರಧರ ರಾವುತನಾಗಿ ಇಳೆಯೊಳು ಚರಿಸುವ ಈತ ಕಾಣೆ ಅಮ್ಮಯ್ಯ 1 ನಿಲ್ಲದಾಡುವ ನಗವ ಪೊರುವ ಮಣ್ಣಬಗೆವ ಕಲ್ಲ ಕಂಬವನೊಡೆವ ಇಳೆಯನಳೆವ ಭಾರ್ಗವ ವಲ್ಲಭನವರಗೆಲುವ ಲಜ್ಜೆನಾಚಿಕೆ- ಯಿಲ್ಲದೆ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ ಎಲ್ಲ ವೇದವನುದ್ಧರಿಸ್ಯಂಬುದಿಯ ಜಲ್ಲಿಸಿ ಧಾರುಣಿಯನು ತಂದಿರುಹಿ ತಲ್ಲಣಿಸುವ ಪ್ರಹಲ್ಲಾದನ ಪೊರೆÀದು ಬಲ್ಲಿದ ಬಲಿಯ ಬಂಧಿಸಿ ಪಿತನಾಜ್ಞೆಯ ಸಲ್ಲಿಸಿ ಮಾತೆಯ ಶಿರವ ಚೆಂಡಾಡಿ ಬಿಲ್ಲನ್ನೆತ್ತಿ ಭೂಮಿಜೆಯೊಡಗೂಡಿ ಮಲ್ಲರ ಮಡುಹಿ ಮುಪ್ಪುರದ ಬಾಲೆಯರ ಜಳ್ಳು ಮಾಡಿ ಧರ್ಮವ ಹೋಗ್ಯಾಡಿ ಹಲ್ಲಣಿಸುವ ತೇಜಿಯನೇರಿದ ಶಿರಿ ವಾಸುದೇವ ಕಾಣೆ ಅಮ್ಮಯ್ಯ 2 ಎವೆ ಇಕ್ಕ ಬೆನ್ನಲ್ಹೊತ್ತು ಗಿರಿಯಕೊ- ನೆವಲ್ಲ ಮಸೆವ ಸಮಯದಿ ಬಹವಿಪ್ರ ಮುನಿ ಭವ ಶ್ರೀರಾಘವ ನವನೀತಚೋರ ನಾರಿಯರ ಮೋಹಿಸಿ ತವಕದಿ ತುರಗವನೇರಿ ಮೆರೆವನ್ಯಾರೆ ಪೇಳಮ್ಮಯ್ಯ ತಮನ ಮರ್ದಿಸಿ ಸಾಮವನಜಗಿತ್ತು ಸುಮನಸರಿಗೆ ಸುಧೆಯನು ತಂದೆರದು ಅವನಿಗಳೆದ ಅಸುರನ ಸಂಹರಿಸಿ ಮಮತೆಯಿಂದ ಪುಟ್ಟ ಮಗುವನೆ ಸಲಹಿ ಗಮಕದೊಳಗಿದ್ದ ಬಲಿಯನು ಕೆಡಮೆಟ್ಟಿ ಸಮರಂಗದಿ ಸುರಧೇನುವ ತಂದು ದಿನಕರ ವಂಶೋದ್ಧಾರಕನಾಗಿ ಕಂಸ- ನ ಮಡುಹಿ ಮುಪ್ಪುರದ ಬಾಲೆಯರು ಭ್ರಮಿಸುವಂತೆ ಬೌದ್ಧಾವತಾರನಾದ ಕಲ್ಕಿ ಹೆಳವನಕಟ್ಟೆರಂಗ ದೇವೋತ್ತುಂಗನ 3
--------------
ಹೆಳವನಕಟ್ಟೆ ಗಿರಿಯಮ್ಮ
ಏನ ಹೇಳಲಿ ನರಹರಿ ನಿನ್ನ ಮಹಿಮೆಯ ಪ. ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ ಅ.ಪ. ಸಚ್ಚಿದಾನಂದನ ಪಾದಾರವಿಂದವಮೆಚ್ಚಿ ಹಸನಾಗಿ ಇರು ಎಂದೆಡೆಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಲಿಕಿಚ್ಚುಕಂಗೊಂಡು ಎನ್ನ ಕಾಡುತಿದೆ ರಂಗ 1 ವಾಸುದೇವನ ಗುಣಗಳ ಸ್ತುತಿಸದೆ ದು-ರಾಸೆಯೊಳು ಬಿದ್ದು ಕಾಡುತಿದೆಲೇಸಾಗಿ ನಾಯಿಬಾಲಕೆ ನಾರಾಯಣ ತೈಲಏಸುಬಾರಿ ತೀಡಿದರೆ ನೀಟಾಗುವುದೊ2 ಸಾಧು ಸಜ್ಜನರ ಸಂಗವ ಮಾಡಲೊಲ್ಲದೆಬಾಧಿಸುತಿದೆ ದುಷ್ಟಸಂಗದಿಂದಮಾಧವ ಭಕ್ತವತ್ಸಲ ಹಯವದನನೆನೀ ದಯಮಾಡಿ ನಿನ್ನಂತೆಮಾಡೆನ್ನ ಮನ 3
--------------
ವಾದಿರಾಜ
ಏನಂತ ನರನೆನ್ನಬೇಕೋ ಜಾನಕೀಶನ ಧ್ಯಾನ ಮನದೊಳಿಲ್ಲದವಗೆ ಪ ಸುಕೃತ ಒಡಗೂಡಿ ಮಾನವನಾದದ್ದು ಖೂನವಿನತಿಲ್ಲದೆ ಜ್ಞಾನಶೂನ್ಯನಾಗಿ ಶ್ವಾನನಂದದಿ ಕೂಗಿ ಹೀನಭವಕೆ ಬಿದ್ದು ನರಕಕ್ಹೋಗುವನಿಗೆ 1 ತಾನಾರೆಂಬ ವಿಚಾರವು ಇಲ್ಲದೆ ಏನೇನು ಸುಖವಿಲ್ಲದ್ಹೇಯಸಂಸಾರದ ಕಾನನದೊಳು ಬಿದ್ದು ಕುನ್ನಿಯಂದದಿ ಮಹ ಜಾಣರ ಜರೆಯುತ ಜವಗೀಡಾಗುವನಿಗೆ 2 ಹೇಸಿಪ್ರಪಂಚದ ವಾಸನ್ಹಿಡಿದು ಹಿಂದ ಕ್ಕೇಸೇಸು ಜನಮದಿ ಘಾಸಿಯಾದಂಥಾದ್ದು ಸೋಸಿಲಿಂ ತಿಳಕೊಂಡು ದಾಸಾನುದಾಸರ ದಾಸನಾಗದೆ ಕಾಲಪಾಶಕ್ಹೋಗುವನಿಗೆ 3 ಮಿಥ್ಯೆ ಕಾಣುವುದೆಲ್ಲ ನಿತ್ಯವಲ್ಲೆನ್ನುತ ಸತ್ಯವೃತ್ತಿ ತನ್ನ ಚಿತ್ತದೋಳ್ಬಲಿಸಲು ನಿತ್ಯ ಸುಖವನೀವ ಉತ್ತಮವಾದಂಥ ಹೊತ್ತನು ಕಳಕೊಂಡು ಮೃತ್ಯುವಶನಾಗುವಗೆ 4 ಸುಮನಸಕಲ್ಪದ್ರುಮ ತಂದೆ ಶ್ರೀರಾಮ ನಮಿತ ಚರಣ ಕಂಡು ನಮಿಸಿ ಪ್ರಾರಬ್ದವ ಕ್ರಮದಿ ಗೆಲಿದು ನಿಜ ವಿಮಲಪದ ಪಡೆವ ಸಮಯವನರಿಯದೆ ಯಮಲೋಕ ಸೇರುವಗೆ 5
--------------
ರಾಮದಾಸರು
ಏನನಿತ್ತಪೆ ನಿನಗೆ ಶ್ರೀನಿವಾಸ ಶ್ರೀನಿಧಿಯು ನೀನಾಗಿರಲು ಸರ್ವೇಶ ಪ. ಅನುದಿನದಿ ನಿನ್ನ ಪದ ಅನುವಿನಲಿ ಸ್ತುತಿಪೆನೆನೆ ಅನುದಿನದಿ ನಿನ್ನಾದಿಶೇಷ ಸ್ತುತಿಪ ಘನಮಹಿಮ ನಿನ್ನನರ್ಚಿಪೆನೆಂದೊಡೆ ಆ ಘನ ಮಹಾ ಶ್ರೀದೇವಿ ನಿನ್ನರ್ಚಿಸಿ ಮೆಚ್ಚಿಸಿಹಳರಿಯೆ 1 ಭಕ್ತಿರಸವನು ಭಕ್ತ ಪ್ರಹ್ಲಾದ ನಿನಗಿಂತಧಿಕ ಭಕ್ತಿಯನು ಮಾಡಲರಿಯನೋ ದೇವ ದೇವ ಯುಕ್ತಿಯಲಿ ನಿನ್ನ ಸ್ತುತಿ ಮಾಳ್ಪೆನೆಂದರೆ ನಿನ್ನ ಭಕ್ತ ನಾರದ ಮಾಳ್ಪ ಸ್ತುತಿಗಧಿಕವೇ ಕೃಷ್ಣ 2 ನಿನ್ನ ಪದ ಸೇವಿಪೆನೆನೆ ನಿನ್ನ ಭಕ್ತ ಹನುಮ ಇನ್ನು ನಿನ್ನಡಿ ಬಿಡನೊ ನಿನ್ನರಿವತನಕ ಪನ್ನಗಾದ್ರಿನಿವಾಸ ಸಂಪನÀ್ನ ಶ್ರೀ ಶ್ರೀನಿವಾಸ ನಿನ್ನ ಕೃಪೆಯನೆ ತೋರೋ ಶ್ರೀ ರಮೇಶ 3
--------------
ಸರಸ್ವತಿ ಬಾಯಿ
ಏನಬೇಡಲೊ ಕೃಷ್ಣ ನಾಚಿಕಿಲ್ಲದೆ ಪ ಜ್ಞಾನಶೂನ್ಯನಾಗಿ ಬಹಳ ಹೀನ ಕಾರ್ಯ ಮಾಡಿ ನಾನು ಅ.ಪ. ಪರರ ವನಿತೆ ಧನಗಳಿಂಗೆ ಅರಿತು ಅರಿತು ಆಶೆಪಡುತ ದುರಿತಕೋಟಿಗಳನು ಮಾಡಿ ಪರಮ ನೀಚನೆನಿಸಿದವನು 1 ವನಗಳನು ಕಡಿಸಿ ಹಿರಿದು ಮನೆಗಳನ್ನು ರಚಿಸಿಕೊಂಡು ವನಿತೆ ಮಾತು ಕೇಳಿ ಜನನಿ ಜನಕರನ್ನು ತೊರೆದ ಪಾಪಿ 2 ಸತ್ಯ ಮತವನು ತುಚ್ಛಗೈದು ನಿತ್ಯಕರ್ಮಗಳನು ಬಿಟ್ಟು ಮತ್ತನಾಗಿ ತಿಂದು ಮಲಗಿ ಕತ್ತೆಯಂತೆ ಹೊರಳುವವನು 3 ಆರ್ತರಾದ ಜನರ ಸಲಹಿ ಕೀರ್ತಿಯನ್ನು ಹೊಂದಿ ದೇಹ ಸಾರ್ಥಕವನು ಮಾಡಿಕೊಳದೆ ಧೂರ್ತನೆನಿಸಿಕೊಳುವ ನರನು 4 ವಾಸುದೇವ ಸಕಲ ದೋಷ ರಾಸಿಗಳನು ದಹಿಸುವ ರಂ- ಗೇಶವಿಠಲರೇಯ ನಿನ್ನ ದಾಸನೆಂದು ಪೇಳದವನು 5
--------------
ರಂಗೇಶವಿಠಲದಾಸರು
ಏನಾಗುವುದು ತಾನಾಗಿದೆ ಜಗ ನೀನ್ಯಾಕದರೋಳ್ಪಾಲಿಡುವ್ಯೋ ಪ ಕಾಣುಕಾಣುತಲಿ ಶೂನ್ಯವೆನಿಪುದೆಲ್ಲ ಜಾಣನಾಗಿ ಭವಗೆಲಿಯೆಲವೋ ಅ.ಪ ಸತತದಿ ಸತಿಸುತರ್ಹಿತಕಾಗಿ ಬಲು ಮತಿಗೆಟ್ಟತಿಯಾಗ್ವ್ಯಥೆಬಡುವ್ಯೋ ಪೃಥಿವಿ ಮೇಲೆ ನಿನ್ನ ಮತಿಯಲಿಂದ ಮಣ್ಣು ಪ್ರತಿಮೆಮಾಡಿ ಸೃಷ್ಟಿಗೊಳಿಸಿದೆಯೋ 1 ಹಲವುವಿಧದಿ ನಾನೆ ದುಡಿದು ಧಾನ್ಯಧನ ಗಳಿಸಿದೆನೆಂದು ಬಲು ಭ್ರಮಿಸುವೆಯೋ ತಿಳಿದುನೋಡೆಲೆ ಬೀಜದೊಳಗೆ ಮೊಳಕೆ ತಿದ್ದಿ ಬೆಳೆಯ ಬೆಳೆಸಿ ಸ್ಥಿತಿಮಾಡಿದೆಯೋ 2 ಎಷ್ಟುದಿನಿರ್ದರು ಬಿಟ್ಟು ಹೋಗುವುದನು ಗಟ್ಟಿಮಾಡ್ಯಾಕೆ ಭ್ರಷ್ಟನಾಗುವೆಯೋ ಸೃಷ್ಟಿಸ್ಥಿತಿಲಯಕರ್ತ ಶ್ರೀರಾಮನ ನಿಷ್ಠೆಯಿಂ ಪಾಡಿ ಮುಕ್ತಿಸುಖ ಪಡೆಯೋ 3
--------------
ರಾಮದಾಸರು
ಏನಾರಿಸುವಿ ಹರಿಯೇ ಎನ್ನವಗುಣಾ ಅನಂತಾನಂತ ತಪ್ಪು ಮಾಡಿದ ಪಾಮರೊಳೇನಾ ಪ ಉದಯ ಉದ್ಯೋಗನೆನುವೆ ಮಧ್ಯಾಹ್ನಕ ಕ್ಷುಧೆ ತೃಷೆಯಲ್ಲಿ ದಣಿವೆ ಇರುಳಿಗಿನ್ನು ವದಗಿ ನಿದ್ರೆ ಯನುವೆ ಇದರೊಳು ನಿನ್ನ ನಾಮನೆನೆಯದೆ ದಿನಗಳೆದೇನಾ 1 ನಿನ್ನ ಕಥೆಯಾ ಕೇಳದೇ ಮಂಗಳಂಗುಟ ಕಣ್ಣಿನೊಳಿಟ್ಟು ನೋಡದೇ ಸರ್ವಾಂಗದಿ ಚೆನ್ನಾಗಿ ಮಾಡದೇ ಎನ್ನ ಕಾಯವು ಸತಿಸುತರಿಗೆ ಮಾರಿದೇನಾ 2 ಹರಿ ಭಕ್ತಿ ಮುದ್ರೆ ಧರಿಸೀ ಹೆಮ್ಮಿಲಿ ದುರಾಚರಣೆ ಮಾಡಿದ ಕ್ಷಮಿಸೀ ಸತ್ಸಂಗದಿ ಅರಿವಿಗೆ ಮನನೀಲಿಸೀ ಹೊರೆವದು ಗುರು ಮಹಿಪತಿಸ್ವಾಮಿ ಕರುಣಿಸಿ ಎನ್ನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಿದೆತ್ತಣ ಬಯಕೆ ಎಲೊ ಮಂಕು ಜೀವನೀನು ಅರಿತರೆ ಪೇಳು ನಿಜವನೆನಗೆ ಪ ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲುನಂಟರೈವರು ಕೂಡಿ ಆಕ್ರಮಿಸುತಿಹರುದಾಂಟುವುದು ಅಸದಳವೊ ಎರಡೊಂದು ಬಲೆಗಳಲಿಕಂಟಕದಿ ಬಲು ತಾಪದಿಂದ ಬಳಲುವರು 1 ಆರೆರಡು ದಂತಿಗಳು ದಾರಿಯೊಳು ನಿಂತಿಹವುಆರು ಮೂರು ತುರುಗಗಳು ದಾರಿಯನು ಕೊಡವುಮೂರೆರಡನೀಡಾಡಿ ತೋರುವುದು ಎನ್ನಾಣೆಸಾರಿ ಏನೇನಹುದು ಎಂಬುದನು ನೋಡು 2 ಪರರನು ನಿಂದಿಸದೆ ಪರಯೋಗ್ಯ ನೀನಾಗಿಪರರ ಪಾಪಗಳ ನೀ ಕಟ್ಟಿಕೊಳದೆಪರಮಾತ್ಮ ಕಾಗಿನೆಲೆಯಾದಿಕೇಶವರಾಯಪರಹಿತಕೆ ಸಖನೆಂದು ಭಜಿಸೆಲೊ ಮನುಜ 3
--------------
ಕನಕದಾಸ
ಏನು ಕಡಿಮೆ ನಿನಗೆ ಗಣಪತಿ ಜ್ಞಾನವ ಕೊಡು ಎನಗೆ ಪ ನೀಲ ಮೇಘದ ಕಾಂತಿ ಬಾಲಕೇಳಿ ವಿಲಾಸ ನೀಲ ಕಂಠನ ಸುತ ಸ್ಥೂಲಶರೀರಿ 1 ಹೊನ್ನಾ ಭರಣ ಶೃಂಗಾರ ಕಟಿಗೆ ಚಿನ್ನದ ಉಡುದಾರ | ಚೆನ್ನಾಗಿ ಸುತ್ತಿದ ಪನ್ನಗಭೂಷಣ ಹೊನ್ನ ಕಡಗ ಕೈಯ ಬೆರಳ ಉಂಗುರವು 2 ಹೊತ್ತು ನಡೆವ ಮೂಷಿಕವು 3 ಹೊಂದಿಕೆಯಿಂದ ಕಿವಿಯಲಿಟ್ಟ ಕುಂಡಲ ಗಂಧ ಚಂದನ ಸರ್ವಾಂಗ ಲೇಪಿತನ 4 ಪರಿ ನೀಧೀರ ಉದಾರ 5
--------------
ಕವಿ ಪರಮದೇವದಾಸರು
ಏನು ಕಾರಣವೆಮ್ಮ ದೂರಕೆ ನೀನು ನೂಕಿದನೆನಿಸಿದೆಹಾನಿ ವೃದ್ಧಿಗಳನ್ನು ಕಾಣಿಸಿ ದೀನಧೀರರ ಮಾಡಿದೆ ಪಎಲ್ಲರೊಳು ನೀ ಪೂರ್ಣ'ರುತಿಲ್ಲವೆಮ್ಮೆಡೆಯೊಳಗೆನುವ ಭ್ರಮೆಯಲ್ಲಿ ಬಂದುದು ಎಮಗೆ ಠಾ'ನ್ನೆಲ್ಲಿ ನಿನ್ನನಗಲುವರೆಉಳ್ಳವನೆ ನಿನಗಿಂತು ಬರುತಿರುವಲ್ಲಿ ನ'್ಮುರವನ್ನು ಪೇಳ್ವದುಜಳ್ಳು ನೀನಿದಿರಿಟ್ಟು ತೊಲಗಿದೆಯಲ್ಲ ಶ್ರೀಗುರುವರ್ಯನೆ 1ಹಲವು ಪರಿಯಲಿ ಚಿತ್ತಪಾಕವ ತಿಳಿದು ಶ್ರುತಿತಾ ಸಾರಿದರ್ಥವುಹೊಳೆಯದೊಂದೊಂದರ್ಥದಲಿ ಮನತೊಳಲಿ ಮಾರ್ಗವ ಕಾಣದೆನಲುಗಿ ಭವಮೃತಿಯೊಂದಿ ಜೀವರು ಬಳಲುತಿರಲವತರಿಪನೆಂಬರುತಿಳಿ'ಯಗಲುವನೆಂದರ ನುಡಿಯಳವಡದು ಗುರುವರ್ಯನೆ 2ಕೊರಗಿ ಕರಗುವ ಜೀವರಾರೈ ಬರುವೆ ನೀನೆಲ್ಲಿಂದ ಸಮಯಕೆಇರುವೆ ನೀನಾವೆಡೆಯೊಳಜ್ಞತೆ ಬರುವದಿವರಿಂಗೇತಕ್ಕೆಹರೆವದೆಂತದರಂದತೋರದು ಧರಿಸುತಿಹೆ ನೀನೆಂತು ತನುವನುಮರೆಯ ಮಾಳ್ವೆಯದೇಕೆ ಮೂರ್ತಿಯ ಕರುಣಿಸೈ ಗುರುವರ್ಯನೆ 3ನಿನ್ನ ನಿನ್ನೊಳು ನೀನೆ ನಾನೆಂದೆನ್ನದೆಂಬುದರಿಂದ ತಿಳಿದರೆನನ್ನ ನಿನ್ನೊಳು ಕಾಣ್ಬೆ ಅಂದು ಪ್ರಸನ್ನನಾಗಿಯೆ ಕರುಣಿಸಿಎನ್ನೊಳಗೆ ಸರ್ವವನು ಸರ್ವರೊಳೆನ್ನ ತಿಳಿದನ್ಯಾರ್ಥವನೆ ಮರತುನ್ನತಾಮಲ ಪೂರ್ಣನಹೆಯೆಂದಿನ್ನು ತೋರದು ದೇವನೆ 4ಸಾಕು ಸನಿಯವ ಸೇರಿಸೆಮ್ಮೊಳು ನೂಕು ಕ'ದಿಹ ತಮವ ಸುಖವನುಸೋಕಿಸೈ ಕಡೆಗೊಳಿಸು ಚಿಂತೆಯ ಬೇಕು ನಿನ್ನಡಿ ಸೇವೆಯುಶ್ರೀಕರನೆ ಚಿಕನಾಗಪುರ ವರದರಸನೆ ಗುರುವಾಸುದೇವನೆತಾಕು ತಡೆ ಬರದಂತೆ ನಿನ್ನೊಳಗೇಕತೆಯ ದಯಮಾಡಿಸೈ 5
--------------
ವೆಂಕಟದಾಸರು
ಏನು ಧನ್ಯನೋ ನಾನೇನು ಮಾನ್ಯನೋ ಪ ದೀನಪಾಲಗಿರಿಯಪರಮಕರುಣಾನಿಧಿಯಕನಸೊಳ ಕಂಡೆನು ಅ.ಪ ಬಾಲನಾಗಿ ಮುದ್ದುಮುಖದೆ ಶ್ರೀಲತಾಂಗಿಯೊಡನೆಬಂದು ಲೋಲತೆಯಿಂ ಮುಗಳುನಗೆಯ ಲೀಲೆಯನ್ನು ತೋರಿಸಿದನ 1 ನಿನ್ನ ತಂದೆ ತಾಯ್ಗಳಾರು ಎನ್ನಲಾಗ ನೀನುಪಿತನು ಎನ್ನ ತಾಯಿಜಗನ್ಮಾತೆ ಸನ್ನುತಕೇಳ್ ಪ್ರವರವೆಂದೆ2 ದುರಿತದೂರ ಶ್ರೀನಿವಾಸ ಶರಣಜನರ ಪೊರೆವ ತ್ರಾಣ ಕರವ ಮುಗಿದು ಧ್ಯಾನಿಸಿದೆನು 3
--------------
ಶಾಮಶರ್ಮರು
ಏನು ನಿನ್ನ ಹಿತವಾ ಪಡೆದ್ಕೋ ಯಲೆ ಜೀವವೇ | ಶ್ರೀನಾಥನಂಘ್ರಿ ನಂಬಿ ಸುಖಿಸಲಾರೆಯಾ ಪ ಶ್ವಾನ ಸೂಕರಾದಾ ನಾನಾ ಯೋನಿಯಲ್ಲಿ ತೊಳಲಿ ಬಂದು | ಮಾನವ ಜನ್ಮ ಪುಣ್ಯದಿಂದ ಬಂದುದಾ | ಭವ | ಕಾನನದ ಮಾರ್ಗವನು ಜರೆಯಲಾಪೆಯಾ 1 ಕಾಮ ಕ್ರೋಧ ಲೋಭವೆಂಬಾ ತಾಮಸದ ಬಲಿಗೆ ಸಿಲುಕಿ | ನೇಮಗೆಟ್ಟಾ ವ್ಯರ್ಥನಾದೆ ಹರಿಯ ನಾಮವಾ | ಪ್ರೇಮದಿಂದ ಸ್ಮರಿಸಿ ಭಕ್ತಿ ಸೀಮೆಯೊಳು ಪಡೆದು ಮುಕ್ತಿ | ಸಾಮರಾಜ್ಯ ಪದವಿಯನು ಸಾರಲಾಪೆಯಾ 2 ಮರದು ತನ್ನ ನಿದ್ರೆಯೊಳು ಅರಸು ರಂಕನಾಗಿವಂತೆ | ಶರೀರ ತಾನೆಂಬ ವಿದ್ಯಾವಳಿದು ಜಾಗಿಸೀ | ಗುರು ಮಹಿಪತಿಸ್ವಾಮಿ ಕಿರಣವೆಲ್ಲರೊಳು ಕಂಡು | ಶರಣರಾ ವೃತ್ತಿಯೊಳು ಬರಸಲಾಪೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು