ಒಟ್ಟು 17313 ಕಡೆಗಳಲ್ಲಿ , 134 ದಾಸರು , 7747 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಗುವೇ ಶ್ರೀಗುರೋ ಸತ್ಯಸ್ವರೂಪಾ ಓ ಜ್ಞಾನಿಯೇ ಪರಾತ್ಮರೂಪನೇ ನೀ ಬೋದಿಸೈ ನಮೋ ಮಹಾತ್ಮನೇ ಶರಣಾದೆ ಕರುಣಿಸು ನೀ ಭವದಬಾಧೆ ನೀಗಿಸೈ ಈ ದರುಶನಾ ಪಾದಾಭಿವಂದನಾ ಈ ಸ್ಪರ್ಶನಾ ಪುನೀತವೀಮನಾ ಭಾಗ್ಯವಿದೇ ಜೀವನದೀ ನಿನ್ನಂಥ ಗುರು ದೊರಕಿದಿ ಆನಂದದಾ ಸುಬೋಧ ನೀಡುವಾ ಈ ಬುಧವಾ ನಿವಾರಿಸುವ ಮಹಾ ಬೋಧಾತ್ಮ ಶಂಕರಗುರು
--------------
ಶಂಕರಭಟ್ಟ ಅಗ್ನಿಹೋತ್ರಿ
ಬಾಗೋ ಬಾಗೋ ಜೀವನೇ ಸಾಗರನಿಲಯಗೆ ಪ ಬಾಗೋ ಮನಸಿನ ನೀಗಿ ಕಲ್ಮಷ ಬೇಗ ತಿಳಿದು ನೀಜೋಗಿವಂದ್ಯಗೆ ಅ.ಪ ಕನಸಿದು ಜಗಮೋಹ ಕಾಣು ಕಾಣೋ ನಿನಗೆ ವೈಕುಂಠ ಒಂದೇ ಗೇಣೋ ಚಿನುಮಾಯಾತ್ಮನ ತ್ವರ ಕಾಣು ಕಾಣೋ ತನುಮನವರ್ಪಿಸಿ ನೆನವು ನಿಲ್ಲಿಸಿ ನಿಜ ಘನಮಹಾತ್ಮನ ಹಿಡಿ ಖೂನ ಖೂನೋ 1 ಕಾಯ ಕಾಯ ಗುರುತಿಟ್ಟರಿಯಿದರ ನೆಲೆಯ ನೆಲೆಯ ಮರುಳನೆ ನರಕದ ಕುಣಿಯು ಕುಣಿಯೋ ನೆರೆದು ತೋರಿ ಸಂತೆ ಹರಿದು ಹೋಗುವಂತೆ ಧರೆ ನಿನಗೊಂದಿನ ಮಾಯ ಮಾಯ 2 ಬಂದದ್ದು ವಿಚಾರ ಮಾಡೋ ಮಾಡೋ ಇಂದಿನ ಸಮಯ ಕಳಿಬೇಡೋ ಬೇಡೋ ಬಂಧುರಸುಖಕೆ ಮನ ನೀಡೋ ನೀಡೋ ಇಂದು ನಾಳೆನ್ನದೆ ತಂದೆ ಶ್ರೀರಾಮನ ಬಂಧುರಚರಣವ ಪಾಡೋ ಪಾಡೋ 3
--------------
ರಾಮದಾಸರು
ಬಾಟ ಪಕಡೊ ಸೀದಾ | ನ ಘಡೆ ತೇಥೆ ಬಾಧಾ ಇದುವೆ ಗುರು ನಿಜಬೋಧ | ಸ್ವಸುಖ ಸಮ್ಮತವಾದಾ ಧ್ರುವ ಬಂದಗೀ ಕರ್ತಾ ಕರಕೇ ಝೂಟಾ | ತಿಳಿಯದು ನಿಜ ಘನದಾಟಾ ಮರ್ಮನ ಕಳತಾ ಕರಣೀ ಖೋಟಾ ಕೇಳಿ ಶ್ರೀ ಗುರುವಿಗೆ ನೀಟಾ 1 ಜಾನಭೂಜಕರ ಚಲನಾ ಭಾಯಿ ಲಕ್ಷ ಲಾವುನೀ ಗುರುಪಾಯೀ ಇದು ಎಲ್ಲರಿಗೆ ದೋರುದೇನಯ್ಯ ಹೇ ಸಮಝೆ ವಿರಲಾ ಕೋಯೀ2 ತಿಳಿದು ನೋಡಿ ಶ್ರೀ ಗುರುಕೃಪೆಯಿಂದಾ ಹುವಾ ಖುದಾಕಾ ಬಂದಾ ಮಹಿಪತಿಗಾಯಿತು ಬಲು ಆನಂದಾ ಹರೀ ಮ್ಹಣಾ ಗೋವಿಂದಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾದರಾಯಣ ಮದದಿ ಮರೆತೆನೊ ಸದಯದಿಂ ಮುದ ಪಾಲಿಸೊ ಪ ಬೋಧ ಮೂರುತೆ ಭಕ್ತರಾ ನುಡಿ ಸಾದರದಿ ನೀನಾಲಿಸೋ ಅ.ಪ ವೇದಭಾಗವ ಮಾಡಿ ವೇದವ್ಯಾಸನೆಂದೆನಿಸಿದಿ ಸದಮಲಾಭಾವದಲಿ ನಿನ್ನಯ ಪಾದಕಮಲವ ತೋರಿದಿ 1 ಗಾತ್ರ ಎನ್ನಯ ಖೇದ ಭಾವವನೋಡಿಸೊ ಮೋದತೀರ್ಥ ಹೃದಾಬ್ಜ ಮಂದಿರ ಸಾಧು ಸಂಗವ ಮಾಡಿಸೋ 2 ತರ್ಕಮುಧ್ರಾಧರನೆ ಎನ್ನ ಕುತರ್ಕ ಬುದ್ಧಿಯನೋಡಿಸೋ ಅರ್ಕಸನ್ನಿಭ ಬ್ರಹ್ಮ ಸುತರ್ಕ ಮಾರ್ಗವ ಬೋಧಿಸೋ 3 ಅಭಯಪ್ರದಕರ ಎನ್ನಭವ ಭಯ ತ್ರಿಭುವನೇಶ್ವರ ಓಡಿಸೀ ಇಭವರದ ಮಧ್ವೇಶ ಸಂತತ ಸಭೆಯ ಸಹನೀ ತೋರೆಲೊ4 ಯೋಗ ಪೀಠನೆ ನೀಗಿಸೆನ್ನಯ ಭೋಗಬುದ್ಧಿಯ ಸರ್ವದಾ ಯೋಗಿಕುಲವರ ಬಾಗಿ ನಮಿಸುವೆ ಯೋಗಮಾರ್ಗವ ತೋರಿಸೊ5 ಮಾ ಕಮಲಜ ಭವೇಂದ್ರವಂದಿತ ಮಾಕಳತ್ರ ನಮೋಸ್ತುತೇ ಯಾಕೆ ಎನ್ನಲಿ ನಿರ್ದಯವು ನೀ ಸಾಕಲಾರದ ಪಾಪಿಯೇ 6 ಸನ್ನುತಿಸಿ ನಾ ನಿನ್ನ ಬೇಡುವೆ ಸನ್ನುತಾಂಘ್ರಿಯ ಸೇವೆಯಾ ಸನ್ಮುನೀವರ ಶ್ರೀ ನರಹರೆ ದಾಸದಾಸರ ದಾಸ್ಯವಾ 7
--------------
ಪ್ರದ್ಯುಮ್ನತೀರ್ಥರು
ಬಾಬಾ ಭಾಮಿನಿ ಬಾಬಾ ಭಾಮಾಮಣಿ ಪೀಠಕೆ ಪ. ರತ್ನ ಮಂಟಪದೊಳು ಮುತ್ತಿನಮಣೆನ್ಹಾಕಿ ಮಿತ್ರೆಯರ್ ಕರೆವರು ಈಗ ಎತ್ತ ನೋಡಿದರೂ ಸುತ್ತ ಜ್ಯೋತಿಗಳು ಶಿಸ್ತಿಲಿ ಬೆಳಗುತಿಹುದು 1 ವÀರ ಜರತಾರಿ ಪೀತಾಂಬರನುಟ್ಟು ಸರಗಳು ಹೊಳೆಯುತಲೀಗ ಬೆರಳಿನುಂಗುರ ಥಳಥಳಿಸುತಲಿ ಬೆಡಗನು ತೋರುತಲಿ 2 ಕಡಗ ಕಿಂಕಿಣಿ ಕರದಲಿ ಪೊಳೆಯೆ ಅಡಿ ಇಡುತಲಿ ನೀ ಬೇಗ ಮುಡಿದ ಮಲ್ಲಿಗೆ ಎಡಬಲಕುದುರುತ ಒಡೆಯ ಶ್ರೀ ಶ್ರೀನಿವಾಸನ ಮಡದಿ 3
--------------
ಸರಸ್ವತಿ ಬಾಯಿ
ಬಾಯತೋರೋ ರಂಗ ಬಾಯತೋರೋ ಮುದ್ದು ಬಾಯಲಿ ತುತ್ತು ಅನ್ನವನಿಡುವೆ ಬಾಯತೋರೋ ಪ ಕತ್ತಲಿನಂತಿರುವ ತುಟಿಗಳ ತೆರೆಯುತ ಬಾಯತೋರೋ ಜ- ಗತ್ತಿನ ಬೆಳಕನು ನೋಡುವೆ ಒಮ್ಮೆ ಬಾಯತೋರೋ ಒತ್ತೊತ್ತಿನ ತುತ್ತನಿಡಲು ಬಂದಿರುವೆ ಬಾಯತೋರೋ ತುತ್ತೇ ತುತ್ತನು ತಿನ್ನುವೆ ಜಾಣ ಬಾಯತೋರೋ 1 ಭಂಜಿಸಿ ಬಲಿಯ ದಾನವ ಬೇಡಿದ ಬಾಯತೋರೋ ಅಂಜಿದ ನರನಿಗೆ ಗೀತೆ ಬೋಧಿಸಿದ ಬಾಯತೋರೋ ಗಂಜಿಯಕುಚೇಲಗವಲಕ್ಕಿ ಬೇಡಿದ ಬಾಯತೋರೋ ಅಂಜದ ಕರ್ಣಗೆ ಗುಟ್ಟು ಹೇಳಂಜಿಸಿದ ಬಾಯತೋರೋ2 ಅಮ್ಮ ಯಶೋದೆಯ ಮೊಲೆಹಾಲನುಂಡ ಬಾಯತೋರೋ ಗುಮ್ಮ ಪೂತನಿಯ ಅಸುಮೊಲೆ ಜಗಿದ ಬಾಯತೋರೋ ಸುಮ್ಮಸುಮ್ಮನೆ ಅಂಗನೆಗೆ ಮುತ್ತನಿಟ್ಟ ಬಾಯತೋರೋ ಗಮ್ಮನೆ ಅಪ್ಪಿ ಗೋಪಿಯರ ಪೀಡಿಸಿದ ಬಾಯತೋರೋ3 ಮೋಹನಮುರಳಿಯಮೋದದಿನುಡಿಸಿದಬಾಯತೋರೋ ಮೋಹನಾಂಗನೆಯರ ಮಾಟದಿ ಮಿಡಿಸಿದ ಬಾಯತೋರೋ ಮೋಹನ ರಾಗದಿ ಗೋವುಗಳ ಕರೆದ ಬಾಯತೋರೋ ಮೋಹಿಪ ರಾಧೆಯ ಮೈಯುಲಿಯೆ ಪಾಡಿದ ಬಾಯತೋರೋ 4 ಬಳಕುವ ಗೋಪಿಯರ ಚೇಡಿಸಿದಾ ತುಂಟ ಬಾಯತೋರೋ ಬಲರಾಮನನ್ನು ಗೋಳಾಡಿಸಿದ ಆ ಬಾಯತೋರೋ ಬುಳುಬುಳು ಮಣ್ಣನೆ ಮೆಲ್ಲುವಾ ಪುಟ್ಟ ಬಾಯತೋರೋ ಭಲರೆ ಅಮ್ಮನಿಗೆ ಬ್ರಹ್ಮಾಂಡ ತೋರಿದ ಬಾಯತೋರೋ 5 ಪುರಂದರ ಬಾಯಾಗಿ ಹಾಡಿದ ಬಾಯತೋರೋ ಸೂ ಕುಮಾರ ಲಕ್ಷ್ಮೀಶರಲಿ ಬರೆದಾಡಿದ ಬಾಯತೋರೋ ಶ್ರೀಕಾಂತ ನಮ್ಮ ಜಾಜಿಪುರೀಶನೆ ಬಾಯತೋರೋ ಸಾಕಾಯಿತೋ ಭವದ ಬವಣೆನೀಗಲು ಬಾಯತೋರೋ6
--------------
ನಾರಾಯಣಶರ್ಮರು
ಬಾಯಿಂದಾಗುವುದು ಭವಾಭವ ತಿಮ್ಮ ರಾಯನ ನಾಮವ ನುಡಿಯುತಲಿರು ಜೀವಾ ಪ. ರಸನೆಯ ಗೆಲಿದರೆ ವಿಷಯ ನಿವರ್ತಿಸಿ ವಶವಾಹುದಿತರೇಂದ್ರಿಯಗಳೆಂದು ವಸುದೇವ ಸುತನು ವಾಸವಿಗೆಂದು ನುಡಿಯ ಧ್ಯಾ- ನಿಸುತ ಜಾಗೃತನಾಗು ಮುಸುಕಿನೊಳಿಹ ಜೀವಾ 1 ಭವ ಕಂಡು ನಿಂದೆಯ ಮಾಡಿ ಪಿಕವದು ಕೊಂಡಾಡುವುದಾ ಮಾಡದಿದ್ದರೆ ನಗೆಗೀಡಾಹುದಿದರಿಂದ 2 ಮಧ್ವವಲ್ಲಭನಿಗರ್ಪಿತವಾದ ನೈವೇದ್ಯ ಶುದ್ಧ ತೀರ್ಥ ತುಳಸಿಯ ಸಹಿತ ಮೆದ್ದರೆ ಬಹಿರಂತಃ ಶುದ್ಧಿಯಾಗುವುದು ನಿ- ಷಿದ್ಧ ಭಕ್ಷಣದಿಂದ ನೀಚನೆಂದೆನಿಸುವ 3 ಶ್ರೀಯರಸನ ಜಿಹ್ವೆಯಲಿ ಪೊಗಳಲು ಯಮ ರಾಯನಾಳ್ಗಳು ನೋಡಲಂಜುವರು ಮಾಯಾ ಪ್ರಪಂಚದಿ ಮರುಳಾದ ಜನರೊಳು ನ್ಯಾಯವಾಡಲು ನಾನಾಪಾಯವ ಘಟಿಸುವ 4 ಕ್ಷೇತ್ರ ಕಳತ್ರಾದಿಗಳ ಬಿಟ್ಟು ತಿರುಗುವ ತೀರ್ಥಯಾತ್ರೆಯ ಮಾಡುವುದಕಧಿಕಾ ಸ್ತೋತ್ರದಿಂದ ಶ್ರೀ ಕಳತ್ರನ ಕರುಣೈಕ ಪಾತ್ರರ ಮಾಳ್ಪ ವಿಚಿತ್ರ ಸನ್ನಹವಾದ 5 ಹಲವು ಕರ್ಮದ ಶಾಸ್ತ್ರ ನೆಲೆಯರಿಯದೆ ತ- ತ್ಫಲವಾಗಬೇಕೆಂಬ ಛಲವಿಡೀವ ಕಲಿಯೊಳಗುದಿಸಿದ ಜನರಿಗೆ ಗತಿಯಾಗಿ ಜಲಜನಾಭನ ನಾಮ ನೆಲೆಯಾಗಿ ನುಡಿವಂಥ 6 ನಾಮಕೀರ್ತನೆಗೈಯ್ಯೆ ನಲಿವುತ ಬಹ ನಮ್ಮ ಶ್ರೀಮಹೀಯರಸ ವೆಂಕಟರಾಜನು ಕಾಮಿತಾರ್ಥವ ನೀಡಲ್ಲಧಿಕ ಸಾಧನವಿದು ಪಾಮರತೆಯ ಬಿಟ್ಟು ಪರಮಾರ್ಥದ ಗುಟ್ಟು 7
--------------
ತುಪಾಕಿ ವೆಂಕಟರಮಣಾಚಾರ್ಯ
ಬಾಯೊಳು ಉಂಗುಷ್ಟವನಿಟ್ಟಮಾಯವ ನÉೂೀಡಮ್ಮಾ ಪ ಶ್ರೀಯರಸನೀಲಮೇಘಛ್ಛಾಯ ಕೃಷ್ಣರಾಯತನ್ನ ಅ.ಪ. ನಿರಂಜನ ತಾ ಲೀಲೆಯಿಂದ1 ಪುಟಿತ ಹಾಟಕ ಮಣಿಘಟಿತ ಕಂಕಣಾಂಗದಕಟಿಸೂತ್ರಗಳನಿಟ್ಟು ನಟನಂದದಿವಟಪತ್ರ ಶಾಯಿ ಓಷ್ಠಪುಟದಿ ಪಾದವನಿಕ್ಕಿಕಟಬಾಯೊಳಮೃತವ ಸ್ಫುಟವಾಗಿ ಸುರಿಸುತ 2 ನಿತ್ಯ ಮಂಗಳ ದೇವಿಯರಗಂಗೆಯ ಪಡೆದ ಶಿವನಂಗ ಶುದ್ಧಿಗೈಸಿದಾತನ3 ಗೋಪಿ ಗೃಹಕರ್ಮರತಳಾಗಿರಲು ಒಮ್ಮನದಿಂದಅಮರಗಣಾರಾಧೀತ ಕ್ಷಮೆಯನಳೆದ ಪಾದಸುಮ್ಮನೆ ಕರದೊಳೆತ್ತಿ ಕಮ್ಮಗಿಹದೆಂದು ತನ್ನ 4 ಕರಪಲ್ಲವಾಮೃತ ಲೋಕವಂದ್ಯರೂಪ ಫಣಿಶೇ-ಖರಾದ್ರಿವಾಸ ಭಕ್ತನಾಕ ಭೂರುಹ ನೀಕರೆಸಿ ದುರಿತವ ಸೋಕದಂತೆ ನಮ್ಮನೀಗಸಾಕುವ ಪರಮ ಕರುಣಾಕರ ಶ್ರೀಕೃಷ್ಣ 5
--------------
ವ್ಯಾಸರಾಯರು
ಬಾರದೇನೆಲೋ ಕರುಣಿ ನಿನಗೆ ಅ ಪಾರಮಹಿಮ ಸಾರಸಾಕ್ಷ ಪ ದುರಿತನಾಶ ಬಾ ಸರ್ವೇಶ ಸ್ಮರಿಪಜನವಿವಾಸ ಈಶ ಕರುಣವಿಟ್ಟು ಪೊರೆ ಪ್ರಕಾಶ 1 ಜಯವ ನೀಡೋ ಜವದಿ ಮನಕೆ ಭಯನಿವಾರಣ ಕರುಣಾಭರಣ ದಯದಿ ನೋವ ಗೈ ನಿವಾರಣ2 ಬೇಗೀ ಬಂಧನ ನೀಗಿಸಭವ ನಾಗಶಯನ ಶ್ರೀರಾಮ ಸ್ವಾಮಿ ಬಾಗಿದೆನು ನಿನ್ನಡಿಯ ನಂಬಿ 3
--------------
ರಾಮದಾಸರು
ಬಾರದ್ಯಾಕೊ ಕೃಪಾಧರ ದೇವ ನಿನಗೆನ್ನೊಳ್ಕರುಣಾ ಪ. ಸರಸಿಯೊಳಂದು ಬೆದರಿದ ಕರಿರಾಜನನು ಪೊರೆದ ಬಿರುದ ನೀ ಮರೆವುದು ನೀತಿಯೇನೊ ವರದ 1 ತಾಳಲಾರದಂಥ ವೇದನೆ ಇನ್ನು ಪೇಳಲೇನು ಕಂಸಸೂದನ ಇಳೆಯ ಮ್ಯಾಲೇಳಲಾರದಂತಾಯ್ತೆನ್ನ ಹದನ2 ಸಂಕಟಾಬ್ಧಿ ಪರಿಶೋಷಣಾ ಶ್ರೀ ವೆಂಕಟೇಶ ಚಕ್ರಭೂಷಣ ಕಿಂಕರರಾತಂಕವನ್ನು ದೂರಿಸುತಿಹದಯ್ಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರಪ್ಪ ನೀ ಬಾರಪ್ಪಾ ಭಾರತಿರಮಣಾ ಮುಖ್ಯಪ್ರಾಣಾಗೋ'ನದಿನ್ನಿ ಹಣ್ಣಮಪ್ಪಾ ನೀ ಗಾಲವ ಕ್ಷೇತ್ರಕೆ ಬಾರಪ್ಪಾ ಪಗಾಲವಕ್ಷೇತ್ರಕ್ಕೆ ಬಾರಪ್ಪಾ ನೀ ಹೋಳಿಗೆತುಪ್ಪಾ ಹೊಡೆಯಪ್ಪಾಕೃಷ್ಣವೇಣಿಯ ತಟದ ಶಿಲೆಯೊಳು ಒಡಮೂಡುತ ನೀ ಇದ್ದೆಪ್ಪಾ1ಶಿಷ್ಟರಾದ ಶ್ರೀ ಉಮರ್ಜಿ ಆಚಾರ್ಯರ ನಿಷ್ಠೆಗೆ ಒಲಿದು ಬಂದೆಪ್ಪಾಶರಧಿಗೆ ಜಿಗಿದು ಸೀತಾದೇ'ಗೆ ರಾಮಮುದ್ರಿಕೆಯ ಕೊಟ್ಟೆಪ್ಪಾದುರುಳ ರಾವಣನ ಲಂಕಾಪಟ್ಟಣ ಸುಟ್ಟ ಕಪಿವರನು ನೀನಪ್ಪಾದುಷ್ಟ ಕೌರವನ ತೊಡೆಯ ಒಡೆದು ಗದೆಪಿಡಿದ ಭೀಮ ನೀ ಹೌದಪ್ಪಾ 2ದುಃಶಾಸನನ ಕರುಳ ಬಗೆದು ನರಸಿಂಹನ ಪ್ರೀತಿ ಪಡೆದೆಪ್ಪಾಹರಿಯದ್ವೇಗಳ ದುರ್ಮತಗಳನು ಮುರಿದು ಮಧ್ವಯತಿ ಆದೆಪ್ಪಾರಾಶಿ ರಾಶಿ ಸದಗ್ರಂಥ ರಚಿಸಿ ನೀ ವ್ಯಾಸರ ಸನ್ನಿಧಿ ಪಡೆದೆಪ್ಪಾಕೃಷ್ಣವೇಣಿತಟ ನರಾಹರಿ ಇರುವನು ರಾಯರು ಇರುವರು ಬಾರಪ್ಪಾ 3ಎಲ್ಲಿ ನರಹರಿ ಎಲ್ಲಿ ರಾಯರು ಅಲ್ಲಿ ನೀ ಇರಬೇಕಪ್ಪಾಪಾಪಿಷ್ಠರ ಗತಿಭಯಂಕರನು ನೀಪುಣೈವಂತರಿಗೆ ಸುಲಭಪ್ಪಾಭೂಪತಿ'ಠ್ಠಲನ ಭಕ್ತರ ಪೊರೆಯಲು ನೀ ಗಾಲವ ಕ್ಷೇತ್ರಕೆ ಬಾರಪ್ಪಾ 4ರುದ್ರದೇವರು
--------------
ಭೂಪತಿ ವಿಠಲರು
ಬಾರಮ್ಮ ಇಂದಿರಮ್ಮ ಪ ನೀರೇಜ ಪದಯುಗಕೆ ಸಾರಿ ವಂದಿಪೆನಮ್ಮ ಹಾರಗಳನರ್ಪಿಸುವೆ ಸ್ವೀಕರಿಪುದಮ್ಮ ಅ.ಪ ಆವ ತೆರದಲಿ ನಿನ್ನನರ್ಚಿಸಿದರೂ ಕೊರೆಯೆ ಭಾವಶುದ್ಧಿಯಲಿ ಪೂಜೆಗೈವೆನಮ್ಮ ಓವರಿಗೆ ದಯಮಾಡು ದೇವಗಂಗಾ ಜಲದಿ ಪಾವನ ಪಾದಾಂಬುಜವ ತೊಳೆವೆನಮ್ಮಾ 1 ತವದಿವ್ಯ ಭೂಷಣವ ನವರತ್ನ ಹಾರಗಳ ಸುವಿಲಾಸದಿಂದಿತ್ತು ಮಣಿವೆನಮ್ಮ ಪವಳಪದುಮಾಸನ ವಿಶ್ರಾಂತಳಾಗಮ್ಮ ನವಪುಷ್ಪ ಕುಂಜಗಳ ಧರಿಪೆನಮ್ಮ 2 ಅಗರು ಚಂದನ ಧೂಪಮಿಗೆ ದಿವ್ಯ ಗಂಧಗಳ ಬಗೆಬಗೆಯ ದೀಪಗಳ ನೀಡುವೆನಮ್ಮಾ ಸೊಗಸಾದ ಭಕ್ಷ್ಯ ಭೋಜ್ಯಂಗಳನು ಅರ್ಪಿಸುವೆ ನಗುನಗುತ ಸ್ವೀಕರಿಸಿ ಪಾಲಿಸಮ್ಮ3 ದೇವಕನ್ಯೆಯರೆಲ್ಲ ದಿವ್ಯಗಾನವ ಪಾಡಿ ದೇವಿ ತವಕರುಣೆಯನು ಬೇಡುತಿಹರು ಶ್ರೀವನಿತೆ ನಾನೀವ ತಾಂಬೂಲವನು ಸವಿದು ಜೀವಕೋಟಿಗೆ ಸುಖವನೀವುದಮ್ಮಾ 4 ಪೊಡಮಡುವೆ ನಿನ್ನಡಿಗೆ ಕೊಡು ಭಕ್ತಿಭಾಗ್ಯವನು ಎಡೆಬಿಡದೆ ಹರಿಪಾದ ಸೇವೆಗೈದು ಕಡುಮುದದಿ ನಿನ್ನ ಸಂಕೀರ್ತನೆಯ ಪಾಡಿಸು ಬಡವರಾಧಾರಿ ಮಾಂಗಿರಿಯೊಡೆಯನ ರಾಣಿ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾರಮ್ಮ ಭಾಗ್ಯನಿಧಿಯೆ | ಸಿರಿಯೆ ಪ ಬಾರಮ್ಮ ನಿನ್ನ ಪಾದಾರವಿಂದ ತೋರಲು ಅ.ಪ ಸರಸಿಜಾಕ್ಷನ ವಕ್ಷ ಮಂದಿರೆ ಇಂದಿರೆ ಸರಸಿಮುದವೆರಸಿ ನಿನ್ನರಸನೊಡನೆನೀ 1 ಸೀತಾರುಕ್ಮಿಣ್ಯಾದ್ಯವತಾರಿಣಿ ಬುಧ- ವ್ರಾತ ಮನಃ ಪದ್ಮ ವಿಹಾರಿಣಿ ಚೇತೋದ್ಭವ ಜನನೀ ಶ್ರೀತರುಣೀಮಣಿ 2 ಬ್ರಹ್ಮರುದ್ರೇಂದ್ರಾದಿ ಸುರಸೇವಿತೆ ಬ್ರಹ್ಮಾಣಿ ಗಿರಿಜಾ ಶಚೀವಂದಿತೆ ಪರ- ಬ್ರಹ್ಮ ಗುರುರಾಮವಿಠಲನ ದಯಿತೆ 3
--------------
ಗುರುರಾಮವಿಠಲ
ಬಾರಮ್ಮ ಸರಸ್ವತಿ ಬಾ ದ್ರುಹಿಣಯುವತಿ ಬಾ ನಿರ್ಮಲಮತಿ ತೋರಿ ಭಾರತಿ ಪ. ಭುಜಗ ಸದೃಶ ವೇಣಿ ಭಜಕರ ಚಿಂತಾಮಣಿ ಕೀರವಾಣಿ 1 ವೇದಾಂತರಂಗಿಣಿ ನಾದಸ್ವರೂಪಿಣಿ ಪ್ರಾದುರ್ಭವಳಾಗು ಸಾಧ್ವೀಕಲ್ಯಾಣಿ 2 ಅಕ್ಷಯ ಸುಖಭಾಷೆ ಆಶ್ರಿತಕಜನಪೋಷೆ ಲಕ್ಷ್ಮೀನಾರಾಯಣನ ಸೊಸೆ ಸುವಿಲಾಸೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರಮ್ಮಾ ಬಾರಮ್ಮಾ ಭಾಗ್ಯದನಿಧಿಯೇ ತೋರಮ್ಮಾ ತೋರಮ್ಮಾ ಕರುಣಾನಿಧಿಯೇ ಪ. ಬಾರಮ್ಮಾ ಮಹಲಕ್ಷ್ಮಿ ತೋರುತ ಕರುಣವ ಬೀರುತ ತವಕದಿ ಸೇರುತ ಪತಿಸಹ ಅ.ಪ. ಶ್ರೀ ರಮಾದೇವಿ ಇನ್ನಾರು ಸಮನಾಗರೇ ಭೂ ರಮೇಶನ ಸೇವೆಗೆ ನಿಲ್ಲಲು ಬಾರಮ್ಮಾ ಭಕ್ತರುದ್ಧಾರ ಮಾಡಲು ಎಲ್ಲಾ ಕಾರಳು ನೀನಾಗಿ ವಾರುಧಿಶಯನಗೆ ಸೇವಿಸಲು ಘೋರತರ ಸಂಸಾರ ಸಾಗರ ಪಾರುಗಾಣಿಪ ಹರಿಯು ನಿನ್ನೊಳು ಸೇರಿಯಿರುತಿಹನೇ ತೋರಿ ಭಕ್ತರಿಗೆ ಚಾರುಕಮಲ ಕರಾರವಿಂದದಿ ಧೀರೆಯೆತ್ತುಪಕಾರ ಮಾಡಲು ವಾರಿಜಾಕ್ಷಿಯೆ ಸಾರುತೀಗಲೆ 1 ಪುಲ್ಲಲೋಚನೆ ನಿನ್ನ ಗಲ್ಲ ಮಿಂಚಿನ ಸೊಬ ಗೆಲ್ಲ ನೋಡುತ ನಿನ್ನ ಒಡನಾಡುವ ಪಲ್ಲವಾಧರೆ ನಿನ್ನ ವಲ್ಲಭ ಹರಿಯಲ್ಲಿ ಎಲ್ಲ ಭಕ್ತರ ಮನಸಲ್ಲ ಅರುಹು ತಾಯೆ ನಿಲ್ಲದೆಲೆ ಕಾನಲ್ಲಿ ಇಹ ಹರಿ ಎಲ್ಲಿ ಭಕ್ತರು ಕರೆ ದಲ್ಲಿ ಬರುತಿಹನೆ ಮಲ್ಲಮರ್ಧನ ಶ್ರೀ ನಲ್ಲ ಕೃಷ್ಣನು ಚೆಲ್ಲಿ ಕರುಣವ ಬಲ್ಲೆ ನಿನಪತಿ ಗುಣಗಳನೆಲ್ಲ ಕಾಯೆ 2 ರಂಗನರ್ಧಾಂಗಿಯೆ ಮಂಗಳ ಮೂರುತಿ ನಿ ನ್ನಂಗಜನಯ್ಯನ ಕಾಣೆ ಕಾಯೆ ಗಂಗಜನಕ ಸಹ ಸರ್ವರಂಗದೊಳಿದ್ದು ನೀ ರಂಗನ ಲೀಲೆಯತಿಸಂಭ್ರಮದಲಿ ನೋಳ್ಪೆ ತುಂಬುರು ನಾರದರು ಪಾಡಲು ರಂಭೆ ಊರ್ವಶಿ ನಾಟ್ಯವಾಡಲು ಸಂಭ್ರಮದಿ ಶ್ರೀ ಶ್ರೀನಿವಾಸನ್ನ ಇಂಬತೋರಿಸೇ ಅಂಬುಜಾಕ್ಷಿಯೇ ಬೆಂಬಿಡದೇ ಎನ್ನ ನಂಬಿರುವೇ ನಿನ್ನ ಕಂಬುಕಂಧರೆ ಕುಂಭಿಣೀಪತಿ ಸಹಿತ ಬೇಗನೆ 3
--------------
ಸರಸ್ವತಿ ಬಾಯಿ