ಒಟ್ಟು 29424 ಕಡೆಗಳಲ್ಲಿ , 137 ದಾಸರು , 9577 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಗಮ ಆಗಮಗೋಚರ ಜಗನ್ಮೋಹ ಜಗದೀಶ ಪಾಲಿಸು ಎನ್ನ ಪ ಖಗವರಗಮನ ಜಗದ ಜೀವನ ಪೊಗಳುವೆ ನಗಧರ ಅನಘನೆ ನಿನ್ನ ನಗೆ ಮೊಗದೋರೆನಗಗಲದೆ ಅನುದಿನ ನಗಜನಮಿತ ಮಿಗಿಲಗಣಿತ ಮಹಿಮ ಅ.ಪ ಕದನಕಂಠೀರವ ಉದಧಿಸದನ ಮಹ ಅಧಮಕುಲದ ಮದಸಂಹರ ಹದಿನಾರುಸಾವಿರ ಸುದತಿಯರ ಮನ ವಿಧ ವಿಧ ಸುಲಿದ ಸುಂದರ ಸದಮಲರಾಧೇಯ ಮದನಕದನದಿಂ ಕದಲದ ಆನಂದ ಮಂದಿರ ಕುದುರೆ ತಿರುವಿ ಪಾದಪದುಮದಾಸನ ಘೋರ ಕದನಗೆಲಿಸಿದ ಗಂಭೀರ ಯುದುಕುಲಪಾವನ ಮದನನಯ್ಯ ರಮಾ ಪದುಮಾವತಿಯ ಪಂಚಜೀವನಸದನ ಪದುಮವದನ ಸದಸದುಗುಣಗಳ ಸದ್ಹøದಯ ಉದಯ ಮುದ ವುದಯಾಗೆನ್ನೊದನದಿ1 ನಲಿದು ನಲಿದು ಪೊಂಗೊಳಲುನೂದುವ ಬಲುಚೆಲುವ ಚಿದ್ರೂಪನಾಟಕ ಒಲದು ಭಜಕಜನರ್ಹೊಲಬು ತಿಳಿವ ಚಿ ತ್ಕಳಾಭರಿತ ವಿಶ್ವವ್ಯಾಪಕ ಜಲಜಮಿತ್ರ ಕೋಟಿಕಳೆಕಿರಣಗಳಿಂ ಖಳಕುಲಭೀತ ಸುಫಲಪ್ರದ ಪರತರ ಇಳೆಮಂಡಲತ್ರಯ ಪಾಲಕ ಕಲಿಮಲಹರ ನಿರ್ಮಲನಿಜಚರಿತ ಮಲಿನ ಕಳೆದು ನಿರ್ಮಲನೆನಿಸೆನ್ನ ಒಲಿದುಪಾಲಿಸು ಸ್ಥಿರ ಚಲಿಸಿದಚಲಮನ ಸುಲಭಭಕುತ ಬಲ ವಿಲಿಸಿತಕರುಣಿ 2 ಸಿಡಿಲುಕೋಟಿಸಮ ಫಡಫಡಸ್ತಂಭವ ಒಡೆದು ಮೂಡಿದ ತ್ರಿವಿಕ್ರಮ ಕಡುರೋಷದಿ ಕೆಂಗಿಡಿಗಳನುಗುಳುವ ಕಡುಗಲಿಗಳಗಲಿ ನಿಸ್ಸೀಮ ಘುಡುಘುಡಿಸುತ ಆರ್ಭಟಿಸುತ ದುರುಳನ ಒಡಲಬಗಿದ ಕಡುಪರಾಕ್ರಮ ಗಡಗಡ ನಡುಗುವ ದೃಢತರ ಬಾಲನ ಪಿಡಿದು ಪೊರೆದ ಭಕ್ತ ಸುಖಧಾಮ ಉಡುಮಂಡಲ ವರಗಡರಿದ ಶಾಪವ ತಡೆಯದೆ ಹಡೆಹಾಯ್ಸ್ಹಿಡಿದೆಲೋಕವರ ಜಡಜಭವ ತೊಡರನು ಗಡ ಕಡಿದೆನ್ನಯ ನುಡಿಯೊಳೊಡೆದು ಮೂಡು ಒಡೆಯ ಶ್ರೀರಾಮ ಪ್ರಭು 3
--------------
ರಾಮದಾಸರು
ನಿಗಮ ತಂದುಸುವುಸಿ ಜಗದೊಳಗೆ ಧ್ರುವ ನಗ ಬೆನ್ನೆಲಿ ತಾಳಿದ ನೀನಾರೋ ಜಗವ ಕದ್ದೊಯಿದಸುರನ ನೀ ಕೊಂಡು ಬಗೆದು ತರಳಗೊಲಿದವ ನೀನಾರೊ 1 ಧರಣಿ ನೀ ಮೂರಡಿಯನೆ ಮಾಡಿ ಹಿರಿಯಳ ಶಿರ ಹರಿಗಡಿದವನಾರೊ ಪರ ದೇವತೆಗಳ ಸೆರೆಯ ಬಿಡಿಸಿ ತುರುಗಳಗಾಯ್ದ ಗೋವಳ ನೀನಾರೊ 2 ನಾರಿಯರ ವ್ರತಗಳನೆ ಹಳಿದು ಏರಿ ಹಯವನು ಸುಳಿವವನಾರೊ ತರಳ ಮಹಿಪತಿ ಮನೋಹರವ ಮಾಡಿ ಗುರುತುತೋರಿದ ಗುರು ಮಹಿಮ ನೀ ಬಾರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಗಮನುಳುಹಿಸಿ ನಗನೆಗದಿಹಗೆ ಜಗದೋದ್ದಾರ ಸುಭಗತ ಪ್ರಿಯಗೆ ಸುಗಮ ಧರಿ ಮೂರಡಿಯ ಮಾಡಿ ಸುಗೊಡಲ ಪಿಡಿದಿಹಗೆ ಬಗೆದು ಜಲಿಧಿಲಿ ಸೇತು ಗಟ್ಟಿದ ಖಗವಾಹನ ಯದುಕುಲ ಲಲಾಮಗೆ ಜಗಮೋಹಿಸುವ ಬೌದ್ಯಕಲ್ಕಿಗೆ ಶರಣು ಸುಶರಣು 1 ಸಿರಿಯನಾಳುವ ದೊರಿಯೆ ನಿನ್ನ ಮರೆಯ ಹೊಕ್ಕಿಹ ಚರಣಕಮಲ ಸರಿಯ ಬಂದ್ಹಾಂಗೆನ್ನ ಹೊರವದು ನಿನ್ನ ದಯ ಘನವು ಬಿರುದು ನಿನ್ನದು ಸಾರುತಿಹುದು ಕರಿಯ ವರದಾನಂದ ಮೂರುತಿ ಸುರಿಸಿ ಕರುಣಾಮೃತವುಗರೆವುದು ತರಳ ಮಹಿಪತಿಗೆ 2 ಮೂರ್ತಿ ಸದ್ಗುರು ನೆನೆವರನುದಿನ ಸಾರ್ಥ ಸದ್ಗುರು ಜನವನದೊಳನುಕೂಲ ಸದ್ಗುರು ತಾನು ತಾಂ ಎನಗೆ ಸಾರ ನೀಡುತ ತನುಮನದೊಳನುವಾಗಿ ಸಲಹುವ ದೀನಮಹಿಪತಿ ಸ್ವಾಮಿ ಭಾನುಕೋಟಿ ತೇಜನಿಗೆ 3 ಶರಣಜನಾರಾಭರಣವಾಗಿಹ ಮೂರ್ತಿ ಸದ್ಗುರು ತರಣೋಪಾಯದ ಸಾರಸುಖವಿರುವ ನಿಜದಾತ ಪರಮಪಾವನ ಗೈಸುತಿಹ ವರ ಶಿರೋಮಣಿ ಭಕ್ತವತ್ಸಲ ಚರಣ ಸ್ಮರಣಿಲೆ ಪೊರೆವದನುದಿನ ತರಳ ಮಹಿಪತಿಗೆ 4 ನೋಡದೆನ್ನವಗುಣದ ದೋಷವ ಮಾಡುವದು ಸದ್ಗುರು ದಯ ಘನ ನೀಡುವುದು ನಿಜ ಸಾರಸುಖವನು ಕರುಣದೊಲವಿಂದ ಬೇಡುವÀದು ನಿನ್ನಲ್ಲಿ ಪೂರಣ ಪ್ರೌಢ ಘನಗುರುಸಾರ್ವಭೌಮನೆ ಮೂಢ ಮಹಿಪತಿ ರಕ್ಷಿಸನುದಿನ ಸರ್ವಕಾಲದಲಿ 5 ಸ್ವಾಮಿ ಸದ್ಗುರು ಸಾರ್ವಭೌಮನೆ ಕಾಮ ಪೂರಿತ ಕಂಜನಾಭನೆ ಸಾಮ ಗಾಯನ ಪ್ರಿಯ ಸಲವ್ಹೆನ್ನಯ ಶ್ರೀ ನಿಧಿಯೆ ಮಾಮನೋಹರ ಮನ್ನಿಸೆನ್ನ ನೀ ನೇಮದಿಂದಲಿ ಹೊರೆವದನುದಿನ ಕಾಮಧೇನಾಗಿಹ ಕರುಣದಿ ದೀನಮಹಿಪತಿಗೆ 6 ಕುಂದ ನೋಡದೆ ಬಂದು ಸಲಹೆನ್ನಯ್ಯ ಪೂರ್ಣನೆ ಇಂದಿರಾವಲ್ಲಭನೆ ತಂದಿ ತಾಯಿ ನೀ ಎನಗೆ ಬಂಧು ಬಳಗೆಂದೆಂದು ನಿನ್ನನೆ ಹೊಂದಿ ಕೊಂಡಾಡುವ ಮೂಢ ನಾ ಬಂದ ಜನ್ಮವು ಚಂದಮಾಡು ನೀ ಕಂದ ಮಹಿಪತಿಗೆ 7 ದೀನಬಂದು ದಯಾಬ್ಧಿ ಸದ್ಗುರು ಭಾನುಕೋಟಿ ತೇಜಪೂರ್ಣನೆ ನ್ಯೂನ ನೋಡದೆ ಪಾಲಿಸೆನ್ನ ನೀ ಘನಕರುಣದಲಿ ನೀನೆ ತಾಯಿತಂದೆಗೆ ನೀನೆ ಬಂಧುಬಳಗ ಪೂರಣ ನೀನೆ ನೀನಾಗ್ಹೊರೆವದನುದಿನ ದೀನಮಹಿಪತಿಗೆ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು ಪ ನಿಚ್ಚಮಾಡುವ ದೋಷರಾಶಿಗಳಳಿದು ನಿಚ್ಚಳಾಗಲಿ ಬೇಕು ಅ.ಪ ಪಾಪವೆಂಬುದು ಹೊರಗಿಹುದೆ ತನ್ನ ಅಪವರ್ಗಕೆ ಮಾರ್ಗವಹುದೆ ಬಲು ತಾಪಸಿಗಾದರು ಅದು ಸಾಧನವಹುದೆ 1 ಪುಣ್ಯವೆಂಬದು ಬೇರೆಯಿಲ್ಲಾ ನಾನಾ ರಣ್ಯ ಚರಿಸಿದರು ದೊರಕುವದಲ್ಲಾ ಮನ್ಯು ಬಿಡದೆ ಮತ್ತೊಂದಲ್ಲಾ ನಿರುತ ಅನ್ಯರಾಶಿ ಬದಲು ಗತಿಗವಸಲ್ಲಾ 2 ವೈಕುಂಠವೆಂಬೋದು ಅಲ್ಲೆ ಬರಿದೆ ಲೌಕೀಕ ತೊರದರೆ ಇಪ್ಪದು ಇಲ್ಲೆ ಈ ಕಲಿಯೊಳಗೆ ಈ ಸೊಲ್ಲೆವೊಲಿಸ ಬೇಕೆನೆ ಮಾರಿ ಓಡುವುದು ನಾ ಬಲ್ಲೆ 3 ಹರಿಸ್ಮರಣೆಗೆ ಪೋಪ ದೋಷ ಬಲು ಪರಿ ಧರ್ಮವ ಮಾಡಲು ಲೇಶ ಸರಿಯಾವು ತರುವಾಯ ಮೋಸದಿಂದ ತಿರುಗಿ ತಿರುಗಿ ಪುಟ್ಟಿ ಬಡವನು ಕ್ಲೇಶಾ4 ಒಬ್ಬರ ಸರಿಗಟ್ಟದಿರೊ ನಿನ ಕರ್ಮ ಸುಖವೆಂದು ಸಾರೊ ಉಬ್ಬಲ ದಾಡಿಪರಾರೊ ಎಲೆ ಲ್ಹಬ್ಬಿದ ವಿಜಯವಿಠ್ಠಲನೆಂದು ಸಾರೋ 5
--------------
ವಿಜಯದಾಸ
ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ. ಹಸ್ತಿವರದನು ತಂಗಿಯರ ನೋಡಬೇಕೆಂದು ಹಸ್ತಿನಾಪುರಕೆ ಬಂದ್ಹರುಷದಿಂದ ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1 ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ ಎನ್ನ ಭಾಗದ ದೈವ ಸಲಹೆಂದು ನುತಿಸೇ 2 ಅಂತರಂಗದ ಭಕ್ತಿ ಆನಂದಮಯ ತಿಳಿದು ಕಂತುಪಿತ ಕರಗಿದಾ ಮಮತೆ ಪ್ರೇಮದಲಿ ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3 ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ ಬಾಲೆ ನಿಜ ತಂಗಿ ನಾನಿರಲು ಐವರಿಗೆ ಲೋಲೆಯಾದವಳೆ ಬಲು ಮೇಲಾದವಳೆ ಎಂದು ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4 ಕಂಡು ಕಮಲಾಕಾಂತ ವಡಹುಟ್ಟಿದಳ ಬೆಂಡಾದ ತೆರವ ಪೇಳೆನಲು ಖತಿಯಿಂದಾ ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5 ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ ದಚ್ಚರಿಯ ಕೌತುಕವ ತೋರ್ವೆನೆಂದೂ ಅಚ್ಛಿದ್ರ ಅಕ್ಲೇಶ ಆನಂದಮಯ ತಾನು ಕ್ಲೇಶ ಪಡುತ ವರಲಿದನೂ 6 ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ ಸೋರುತಿದೆ ಬೇಗೊಂದು ಚಿಂದಿ ತಾರೆ ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ ಬಟ್ಟೆ ಕಂಗೆಡುತಾ 7 ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು ಕಂಚುಕ ಮಕುಟ ಮೆರೆಯೇ ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8 ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ ವರ ತಂಗಿ ಬೇಗ ಕೊಡೆ ಹರಕು ಬಟ್ಟೆ ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9 ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ ನಿಂದು ನೋಡಿದಳೂ ದ್ರೌಪತಿಯ ಕೃತಿಯಾ ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು ಇಂದಿರೇಶನು ಇದರ ವಿವರ ತೋರಿದನು 10 ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11 ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು ಎನ್ನ ಅಭಿಮಾನ ಕಾಯುವ ದೈವ ನೀನೂ ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12 ಹೇ ನಾರಿ ನಾನನಾಥರಿಗೆ ನಾಥನು ಮುಂದೆ ನೀನಿತ್ತ ವಸನ ಅಕ್ಷಯವಾಗಲೆಂದು ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13
--------------
ಅಂಬಾಬಾಯಿ
ನಿಜ ವೈಷ್ಣವಾ ಅವನೇ ನಿಜ ವೈಷ್ಣವಾ ಪ ಇತರರ ದುಃಖವು ತನಗೆಂದರಿವಾಸತತದಿ ಸೇವೆಗೆ ತತಪರನಿರುವಾ 1 ತೊರೆದು ಹೆಮ್ಮೆಯಾ ಸರುವರು ನಮಿಸುವ ಪರರನು ಜರಿಯಾ ನಿರುಮಲನಿರುವಾ 2 ಧನ್ಯನವನು ತಾಯನ್ಯ ಸತಿಯರನುತನ್ನ ತಾಯಿಯೊಲು ಮನ್ನಿಸುತಿರುವಾ 3 ಸಟಿಯನು ನುಡಿಯಾ ಪರಧನವೆಡಿಯಾಕಟ್ಟಿಲಿ ಸಿಕ್ಕದೆ ಸಮಮನನೆನವ 4 ನಡೆನುಡಿಗಳಲಿ ಮಡಿಯಿಂದಿರುವಾದೃಢ ಮನದಿಂ ಬಹು ಶಾಂತಿಯಲಿರುವಾ 5 ಪ್ರತಿಪ್ರಾಣಿಯಲಿ ಹರಿಯನು ನೋಡುವಾಅತಿಶಯ ದಯವನು ತೋರುತಲಿರುವಾ 6 ಕಾಮಕ್ರೋಧಗಳ ಗಡ ಜೈಸಿರುವರಾಮನಾಮವ ನೇಮದಿ ಭಜಿಸುವ 7 ಗದುಗಿನ ವೀರನಾರಾಯಣನಹೃದಯದಿ ಸತತ ಮುದದಲಿ ಪಿಡಿವ 8
--------------
ವೀರನಾರಾಯಣ
ನಿಜದಿ ಸುಖಪದ ಕೊಡುವೆಯೋ ಭಜಕರಿಗೆ ಶುಭದಾಯಿಯೋ ಪ ತ್ರಿಜನ ಪೂಜೆಯಗೊಂಬೆಯೋ ಅಂ- ಗಜಜನಕ ಗೋಕಾಯ್ದೆಯೋ ಅ.ಪ ಸುತನಕೊಂದೇ ಸತಿಯ ತೊರೆದೇ ಅತಿಯ ದುಃಖವ ನಟಿಸಿದೇ ಸತತ ಸರ್ವವ್ಯಾಪಿಯೆಂಬರು ಹಿತನೆ ಕಾಣಿಸೆಯೆಲ್ಲಿಹೇ 1 ನಾರಿಯರ ಸೆರೆ ನೀಗಿಸೀ ಹದಿ ನಾರು ಸಾವಿರ ಸೇರ್ದೆಯೋ ಚೋರನೆನ್ನಿಸಿ ಸೀರೆಕದ್ದು ಮಾರಕನೆ ತಾಮಮೃತನೇ 2 ಕೂರ್ಮ ವರಾಹನೇ ನರ ಕೇಸರೀ ವಾಮನನು ನೀ ಹಸ್ತಪರಶು ಶ್ರೀ ರಾಮಕೃಷ್ಣನೆ ವಿಶ್ವ ಬುದ್ಧನೆ ಕಲ್ಕಿಯೇ 3 ಘೋರ ದೈತ್ಯ ವಿದಾರಿಯೋ ಹರಿ ಸಾರಿ ಹಲವವತಾರದಿಂ ತೋರಿದವ ನೀನಾದರೂ ಜಾ ಮಾಧವ ನಂಬಿದೇ 4
--------------
ಶಾಮಶರ್ಮರು
ನಿಟಿಲಾಕ್ಷ ಪ. ಹರ ರುದ್ರಾಕ್ಷನೆ ಕರುಣದಿ ರಕ್ಷಿಸು ಅ.ಪ. ಅವನಿ ಪಾಲಕಗೆ 1 ದೂರೆಂದೆನಿಸಿದ | ಮಾರುತ ನಿಂದಲಿಸಾರತತ್ವ ಶ್ರುತ | ದೂರ್ವಾಸಾಭಿಧ 2 ಪರಿ | ಲೋಲಾಯತ ಮನಪಾಲಿಸು ಹರಿಯಲಿ | ಶೈಲಜೆ ರಮಣಾ 3 ದೈತ್ಯಾರಾಧಿತ | ದೈತ್ಯವರದ ಶಿವತೊತ್ತಿನ ಪಾಲಿಸಿ | ಮೃತ್ಯುಂಜಯಾಭಿದ4 ಗುಪ್ತ ಮಹಿಮ ಗುರು | ಗೋವಿಂದ ವಿಠಲನಭೃತ್ಯನ ಸುತನು | ಚಿತ್ತವ ಪಾಲಿಸು 5
--------------
ಗುರುಗೋವಿಂದವಿಠಲರು
ನಿಂತ ಕಾರಣ ಪೇಳು ಹಣುಮಂತರಾಯಾ ಪ ಶಾಂತನಾಗಿ ವಿಶ್ರಾಂತಿಯಗೋಸುಗಕಂತುಪಿತನ ಮಹಮಂತ್ರವ ಜಪಿಸುತಅ.ಪ. ದಾಶರಥಿಯ ದೂತಾ ದಶಮುಖಪುರವಸ್ವಾಹೇಶಗೆ ದಾತಾ ಗುರುತು ಕೊಟ್ಟು ದಾತನ ಎದುರಿಗೆ ಬಂದು1 ಶಂಖ ಕುಲದಲಿ ಜನಿಸಿ ನಿಃಶಂಖದಿ ಖಳರನು ವರಿಸಿ ಶಂಕರಾದಿನುತ ಪದ ಶಂಬಧರನ ಕಾಜಲ್ಕದಿ ಸ್ಮರಿಸುತ 2 ಮೂರನೇ ರೂಪವ ಧರಿಸಿ ಧರೆಯೊಳು ಬಂದು ಅವತರಿಸಿ ಬೋಧಿಸಿ ಮಾರ್ಗವ ತೋರಿಸಿ ತಂದೆವರದಗೋಪಾಲವಿಠ್ಠಲನಸೇವಿಸಿ 3
--------------
ತಂದೆವರದಗೋಪಾಲವಿಠಲರು
ನಿಂತ ಭಾವದ ಬಗೆಯನೆಂತು ಬಣ್ಣಿಪೆನುಚಿಂತಾಯಕನೆ ನೀನು ಚಿತ್ಸ್ವರೂಪದಲಿ ಪಸಕಲ ಲೋಕವ ಸೃಜಿಸಿ ಸಕಲದೊಳು ನೀ ನೆಲಸಿಸಕಲವನು ನಿನ್ನೊಳಗೆ ಸಲೆ ಸೇರಿಸಿಪ್ರಕಟಿಸಿದ ಜಗವೆಲ್ಲ ಪರಿಪರಿಯ ಕಲ್ಪದಲಿಪ್ರಕೃತಿಯಲಿ ಲಯವಾಗೆ ಪರಮ ಸದ್ರೂಪದಲಿ 1ಚಿತ್ರಕರ್ಮಗಳಿಂದ ಚರಿಸಿ ನಾನಾತ್ವದಲಿಚಿತ್ರದಂದದಿ ತೋರಿ ಚೈತನ್ಯವಾಗಿಕರ್ತೃಭೋಕ್ತøತ್ವದಲಿ ಕರಣಾದಿ ರೂಪದಲಿಚಿತ್ರರಚನೆಗೆ ಸಾಕ್ಷಿ ಚಿತ್ಸ್ವರೂಪದಲಿ 2ಹರಿ ಹರ ಬ್ರಹ್ಮ ಯಮ ಹರಿ ವರುಣ ಧನದಾದಿಸುರಮುನಿಗಳೊಳಗಿರುವ ಸುಖವೆಲ್ಲ ನಿನ್ನನಿರತಿಶಯ ಸುಖದಲ್ಲಿ ಲೇಶನೀನಿತ್ತವರವರದರವರೆಂದೆನಿಸಿ ಮೆರೆದು ಸುಖರೂಪದಲಿ 3ಈ ವಿಧದ ದೇವತೆಗಳಿರವ ನೋಡಿದರವರುದೇವ ನೀನೊಲಿದು ದಯಮಾಡಿದವರುಭಾವಿಸುತ ನಿನ್ನಂಘ್ರಿಕಮಲವನು ಭಕ್ತಿಯಲಿಭಾವ ನಿನ್ನೊಳು ನಿಲಲು ಭುವನೇಶ ನಿತ್ಯದಲಿ 4ಪರಿಪೂರ್ಣ ಪರಮೇಶ ಪರಮ ಮಂಗಳರೂಪಪರನೆನಿಸಿ ದೇಶಕಾಲಾದಿಗಳಿಗೆಗುರುಮೂರ್ತಿ ಶ್ರೀ ವಾಸುದೇವಾರ್ಯರೆಂದೆನೆಸಿತಿರುಪತಿಯ ವೆಂಕಟನೆ ಹೃದಯಕಮಲದಲಿ 5ಓಂ ಸರ್ವತೀರ್ಥಾತ್ಮಕಾಯ ನಮಃ
--------------
ತಿಮ್ಮಪ್ಪದಾಸರು
ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು ನೋಡಿ ತಲೆಯ ದೂಗಬೇಕ ಪ ಆಶೆಯಲಿ ತಾನು ಕುಳಿತು ಹಾಕುದೇನು | ಘಾಸಿಯಾಗುವ ಆರುಮಂದಿಯಾ ಕೂಡಿದರೇ ನೀನು 1 ಗರುವ ತನ ಬಿಟ್ಟು ತಿರುಗಣೆಯಾ ನುಟ್ಟು | ಆರಹು ಶರಗಿನಿಂದ ಬಿಗಿದು ಹಾಕ ಮಲಕ ಗಂಟು 2 ಲಜ್ಜೆ ವಳಿದು ನೋಡೇ ಹರಿಯಸ್ತುತಿ ಮಾಡಿ | ಘಜ್ಜಿಗೆ ಬಂಡಮ್ಯಾಲ ಯಚ್ಚರ ಮೈಯ್ಯ ಮರೆಯಿಬ್ಯಾಡೇ 3 ಎರಡು ಸವೆ ನಿನೆಹಾ ಜ್ಞಾನ ಸಖೀ ಕೈಯ್ಯಾ | ಜರಿಯದಂತೆ ಹಿಡಿದು ತಿರುಗು ನಡವಿಧ ಪರಿಯಾ 4 ಫುಗಡಿ ಇದೇ ಆಡೀ ಪ್ರೇಮಭಾವ ಕೂಡೀ | ಮುಗುತಿ ಕೊಡುವ ತಂದೆ ಮಹಿಪತಿ ಸ್ವಾಮಿ ದಯಮಾಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿಂತು ಲಾಲಿಸಲಿ ರಾಧಾ ಕಂತುಪಿತನ ಪದನಾದ ಪ ಬಲದ ಕಾಲೆಡದೊಳಿಟ್ಟು ಇಳೆಗೆ ಎಡದ ಪದ ಕೊಟ್ಟು ಒಲಿದು ಮುರಲಿ ಮುಖವಿಟ್ಟು ಉಲಿಯೆ ಮಧುರ ರವ ಪುಟ್ಟಿ ಬಲಬಾಲರೆಲ್ಲ ನಲಿಯುತಲಿಗೋ ಪೂರ್ವ ಮಳೆಗರೆವುತಲಿ ನಾನೆಂತು ಬಣ್ಣಿಸಲಿ ಹರಿಯ ಲೀಲೆಗಳ ಉಲಿಯುವ ಶ್ರುತಿನಾದ ಬಲದ ಸಿಂಹದ ನಾದ ಸಲೆ ವಟುವಿನ ನಾದ ಬಲವಾದ ಪರಶುವಿನತಿನಾದವು ಯಶೋಜಿತ ನಾದವು ಬಲು ವಾಜಿನಾದಗಳ್ ಕೊಳಲಲಿ ಕೇಳುತ ನಿಂದು 1 ಪಾಲು ಮೊಸರುಗಳನುಂಡು ಲೀಲೆಯಾಡುತಿರೆ ಕಂಡು ಬಾಲೆಯರತಿ ಖತಿಗೊಂಡು ಗೋಳಿಡುತಲೆ ಹಿಂಡಿಂಡು ಎಮ್ಮಾಲಯದೊಳು ಬೆಣ್ಣೆ ಮೆಲುತಲಿ ಸಣ್ಣ ಬಾಲೆರಿಟ್ಟ ಪಾಲ್ ಕುಡಿವುತಲಿ ಕೆಳಮೇಲಾಗಿ ಧದಿಯನು ಸುರಿವುತಲಿ ಜಲದೊಳು ಧುಮುಕಿದ ಕಲಕದ ಚಲವಿಡಿದ ಬಲುಬೇರ ಕೋರೆಯಿಂದಗಿದು ತಿಂದಾ ಒಲಿದು ಕಂಬವ ನೋಡಿದಾ ಬಲಿಗೆ ಬಾಯಿ ತೆರೆದಾ ಮೊಲೆ ಕೊಟ್ಟ ಜನನಿಯ ಶಿರಕಡಿದಾ ಕುಲಹೀನೆಂಜಲ ತಿಂದಾ ಖಳಪೂತನಿಯಳಿದಾ ತಿಳಿಗೆಟ್ಟು ಮೈಬಟ್ಟೆ ಕಳೆದೊಗೆದಾ ಬಲು ಮಿಂದೇರಿ ವಾಜಿ ಭಟರ ಬೆನ್ನಟ್ಟಿದಾ ನಿಂತು 2 ಸುರಿವುತಿರಲು ಮಳೆ ಭಾರಿ ಚರಿವಾವ್ಗಳು ಹೌಹಾರಿ ಮರೆಯ ಕಾಣದೆಲೆ ಹೋರಿ ಕರವುತಿರಲು ಮುರವೈರಿ ಕಿರಿಬೆರಳಲಿ ಕೊಡೆವಿಡಿವುತಲಿ ಸಣ್ಣ ಕರಗಳಾವುಗಳ್ ಸಲಹುತಲಿ ಮುದ ಗೋವುಗಳ ನೋಡುತಲಿ ನಾನೆಂತು ಬಣ್ಣಿಸಲಿ ಶಿರಿವರನಾನಂದ ಭರದಿ ವೇದವ ತಂದ ನೆರೆಶೈಲನೆಗಹಿದ ಧರಾಲಲನೀಯ ನಾಸದಿ ಪಿಡಿದ ಸುರನದಿ ದ್ವಿಜರಿಗೆ ದಾನವ ಮಾಡಿದಾ ಹರಿಗೆ ಯಜಪದ ನೀಡ್ದಾ ಗುರುಪುತ್ರರನೆ ಪಡಿದಾ ಹರಿಯೇರಿ ಮೆರೆವುದು ನಿಂತು 3
--------------
ನರಸಿಂಹವಿಠಲರು
ನಿತ್ಯ ಇಂದಿರಾಧವನೊಲಿಮೆ | ಸಂಧಿಸುವುದೂ ಪ ಪರಮ ಪ್ರಿಯ ಗುರುವರ್ಯ ನರಸಿಪುರ ದಾಸರಪರಮ ಮಂಗಳ ನಾಮ ಸುಸ್ತವನದೀ ||ಉರುತರದ ಸಂಚಿತವು ಮಿಂಚಿನಂದದಿ ಕರೆಗುಗರುವ ವೇತಕೊ ಮನುಜ ಭಜಿಸೊ ನಿತ್ಯಾ 1 ಪಥ ದೊರಕಿತೆನಗೆ2 ಶ್ರೀದಾಸಗುರುತಿಲಕ | ಮೋದತೀರ್ಥರ ಪ್ರೀಯಭೇದಾಗಮಜ್ಞಾನಿ ಪ್ರಾಜ್ಞ ಮೌಳೀ ||ಆದರಿಸಿ ಉದ್ಧರಿಸು | ಮೋದಮಯ ರತ್ನನೇವಾದಿಗಜ ಪಂಚಾಸ್ಯ | ಬುಧಜನರ ಪ್ರೀಯಾ 3 ಜ್ಞಾನ ಪ್ರಕಾಶನೇ | ಜ್ಞಾನ ಮಾರ್ಗವ ತೋರ್ವಪೂರ್ಣೇಂದು ಮತ್ತುದಯ | ಘನಗುಣಜ್ಞಾ ||ಮೌನಿವರ ಕರುಣಿಸಿ | ನಿನ್ನಕಾಂಬುವ ಹದನನೀನೆ ತಿಳಿಸಲಿ ಬೇಕು | ಆ ನಮಿಪೆ ನಿನ್ನ 4 ಮುದ್ದು ಮೋಹನ ದಾಸ ಪದಕಮಲ ಭೃಂಗನೇಸಿದ್ಧಜನ ಸನ್ಮೌಳಿ | ತಿದ್ದಿ ಮನ್ಮನವಾಮಧ್ವಾಂತರಾತ್ಮಗುರು | ಗೋವಿಂದ ವಿಠಲನಮದ್ಗುರುವೆ ಮನ್ನನದಿ | ಸಿದ್ಧಿಸೋ ಜೀಯಾ 5
--------------
ಗುರುಗೋವಿಂದವಿಠಲರು
ನಿತ್ಯ ತೃಪ್ತಾ ಅನ್ಯರಿಂದಲಿ ಎನಗೆ ಏನು ಪ್ರಯೋಜನವೊ ಪ ದರುಶನಕೆ ಬಂದವ ನಾನಲ್ಲವೆಂದು ನಾನಂದು ಹರಿ ನಿನಗೆ ನುಡಿದದ್ದು ಮನಸ್ಸಿನೊಳಗೆ ಇರುತಿಪ್ಪದೇನಯ್ಯಾ ಬಿನ್ನಪವೆ ಲಾಲಿಸು ಶರಣ ಜನರ ಅಭಿಪ್ರಾಯವೊಂದು ಬಗೆ ಇಪ್ಪದೊ1 ನಿರುತ ವ್ಯಾಪ್ತತ್ವ ಕರುಣತ್ವ ಅಣುಮಹತ್ತು ಸರುವ ಚೇತನ ಜಡ ಮತ್ತೆ ಮತ್ತೆ ಪರಿ ಪರಿಯಿಂದಲಿ ನಿನ್ನಲಿ ಉಂಟು ನಿನ್ನ ವರ ಮೂರ್ತಿಗಳ ಪೇಳದೆ ಇದಷ್ಟು ವಿನಯದಲಿ 2 ಧ್ಯಾನಕ್ಕೆ ನೀನು ಪ್ರಧಾನನೆಂದು ನುಡಿದೆ ಅಪ್ರಮೇಯ ಕ್ಷೋಣಿಜನಕಿಂತ ದ್ವಾರದವರು ವೆಗ್ಗಳವಾಗೆ ಏನೆಂಬೆ ತಿರುವೇಂಗಳೇಶ ನಿನ್ನಾಟಕ್ಕೆ 3 ಮಿಕ್ಕ ಮಂದಜನಕೆ ನಿನ್ನ ಭಕುತರ ಮೇಲೆ ಭಕುತಿ ಪುಟ್ಟುವುದಕ್ಕೆ ನಾ ಪೇಳಿದದ್ದು ಅಕಟಕಟ ನಿನ್ನ ದೊರೆತನಕೆ ಏನೆಂಬೆ ತಕ್ಕ ಮಾತುಗಳೇನೊ ಆಲೋಚಿಸಿ ನೋಡೆ 4 ಹೊನ್ನು ಹಣ ತೂಗಬೇಕಾದರೆ ಮೊದಲಿಗೆ ಚಿನ್ನ ಹಾಕುವರೇನೊ ಚಿನ್ಮಯರೂಪ ಮುನ್ನೆ ನಿನ್ನವರ ದರುಶನವಾದ ಮೇಲೆ ಪಾ ವನ್ನ ಶಾರೀರನೆ ನಿನ್ನ ಕಾಂಬುವದುಚಿತ 5 ಜರೆಮರಣರಹಿತ ಸುಜನರ ಪರಿಪಾಲಾ ನಿ ನಿತ್ಯ ವಜ್ರಪಂಜರಾ ಜರಗೆ ವರವಿತ್ತ ದನುಜರ ವಂಶನಾಶಾ ನಿ ರ್ಜರ ನದಿ ಜನಕಾಂಬುಜ ರವಿ ನಯನ ದೇವಾ 6 ಸ್ಥೂಲಮತಿಯಿಂದ ಪೇಳಿದೆನೆಂದು ಚನ್ನಾಗಿ ಲಾಲಿಸು ಲಲಿತಾಂಗಿ ಲಕುಮಿ ರಮಣಾ ನೀಲಗಿರಿ ನಿವಾಸ ವಿಜಯವಿಠ್ಠಲ ವೆಂಕಟವಾಲಗವ ಕೈಗೊಳ್ಳು ಎನ್ನ ಯೋಗ್ಗಿತವರಿತು7
--------------
ವಿಜಯದಾಸ
ನಿತ್ಯ ನಿಜಾಲಂಕಾರ ಶರೀರಾ | ಕ | ಳಂಕ ಮತಿದೂರಾ ಪ ವಿಭುವೆ ಇಭರಾಜಾ ವರದಾ ಸಾರಾ | ನಭರತುನ ತೇಜಾ | ಅಭಯ ಮೂರುತಿ ಸು | ಲಭ ದಾಯಕ | ವಿಬುಧವಂದಿತ ಸರ್ವಾ | ಶುಭಗುಣಶೀಲಾ 1 ಹೂವ್ವಿನಂಗಿಯ ತೊಟ್ಟು ಮೆರೆವಾ ಶ್ರೀವರ ಗಿರಿಯಾ | ಭಾವಕ್ಕೆ ಬಿಗಿದಪ್ಪಿ ತಾ ವೊಪ್ಪುತಿಹ | ಲೋಕ ಪಾವನ ಸ್ವತಂತ್ರ ಗೋವುಗಳ ಕಾಯ್ದಾ2 ವರಪರ್ವತ ವಾಸಾ ವಾಸುದೇವಾ | ಮಂಗಳವೀವ ವಿಜಯವಿಠ್ಠಲರೇಯಾ | ಗರುವ ದೇವರ ದೇವ ಜ್ಞಾನಾನಂದ ಪರಿಪೂರ್ಣ 3
--------------
ವಿಜಯದಾಸ