ಒಟ್ಟು 15641 ಕಡೆಗಳಲ್ಲಿ , 133 ದಾಸರು , 7446 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದನೇಳೆ ದೇವಿ ರಂಗ ಮನೆಗೇ| ಇಂದು ಮುಖಿ ನಿನ್ನ ಮನದಾ ನಂದ ಕೊಡಲು ಪ ಭಾಗವತ ರೊಡಗೂಡಿ| ಭಕ್ತಿರಂಗದೊಳಾಡಿ ಸುಖವ ಸೂರ್ಯಾಡಿ 1 ಗರುಡವಾಹನ ಪರಾಕೆಂಬ ಶೃತಿ ಭಟರು| ಮೂರಾರು ಸಾಲ ಪಂಜಿನ ಬೆಳಗಿನಿಂದ 2 ಸಕಲ ಸುಂದರ ರಾಶಿಯೆ ಎನಿಪ ಮೋಹನರೂಪ| ಅಕಳಂತಕ ಬ್ರಹ್ಮಾದಿ ಸುರರೊಡೆಯಾ 3 ದುರಿತ ಹರನೆಂಬ| ಬಿರದ ಜಾಂಗಟೆ ಶಂಖ ಕೌಸಾಳರವದಿ 4 ತನ್ನ ಭೃತ್ಯರ, ಭೃತ ಭೃತ್ಯನ ಕರೆದು| ಮನ್ನಿಸುವ ಮಹಿಪತಿ ಸುತಪ್ರಾಣ ಪದಕಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದನೊ ಸುಜನರ ಸಂದಣಿಯೊಳಗತಿಸುಂದರ ರಥವೇರಿ ಗುರುವರ ಬಂದನೊ ಪ ಬಂದಿ ಜನರು ಮುದದಿಂದ ಬಹುಪರಾಕೆಂದು ನುಡಿಯಲಾನಂದ ಬೀರುತ ಬಂದನೊ ಅ.ಪ. ಕ್ಷಿತಿ ಸುರಪತಿ ಶುಭಮತಿ ಬಲ್ಮತದವರೊಯತಿ ಪರರತಿಶಯ ದಶಮತಿ ಸಂ-ಸ್ಕøತ ಭಾಷಣದವರೊ ಭಯಹರಣನೆಂಬೊ ವಾ-ರುತಿಯ ಕೀರುತಿಯ ಪೂರುತಿಯ ಕೇ-ಳುತ ಮಹಿಮಾಂಗಣಕಥಿಸುತ ಗ್ರಂಥಿಸುತ ತುತಿಶುತನುತಿಸಿ ಯತಿ ಶಿರೋಮಣಿಗೆರತುನ ಖಚಿತವಾದಾರುತಿಯ ಬೆಳಗಿರೆ 1 ಸುರತರು ಶುಭ ಧೊರೆಯೋ ವಾಗ್ಝರಿಯೋಸರಸಾರ್ತಿ ಜನಗಳ ನೆರೆಸುತಾದರಿಸುತಾಬಲು ಸುಖ ಸುರಿಸುತಾ ದರಿದ್ರವ ತರಿದುಪೊರೆದೂ ಕರೆದವರಿಗೆ ಕೈ-ಶರೆಯಾಗುವೆನೆಂಧರುಷದಿ ಗುರುವರ ಬಂದನೊ 2 ವಾಲಗ ಘೊರ್ಮಿಡೆ ಭಟರುಗಳ ಹೆಗಲ ಮ್ಯಾಲೆಝಗ ಝಗಿಸುವ ಛಡಿಗಳೊ ಕುಣಿಕುಣಿದಾಡುವವರಹಿ ವೇಣಿಗಳೋ ವಾಣಿಗಳು ಶ್ರೀಣಿಗಳು ಶೋಭಿಸೆಸುಜನರು ಕೈ ಮುಗಿವರು ನಗುವರುಸಂಭ್ರಮದಿಂದ ಬಿಗಿವರು ದೃಗಾರೋಢನದಿಜಿಗಿದು ಅಘದೂರೊಗೆದ ಜನರೊಳುವೆಗ್ಗಳದಲಿಂದಿರೇಶನ ಭಕುತಾಗ್ರಣಿ ಬಂದನೊ 3 ಇಲ್ಲಿ ವರ್ಣಿತವಾದ ಯತಿಗಳು ಯಾರೆಂದು ತಿಳಿಯದು.
--------------
ಇಂದಿರೇಶರು
ಬದರೀನಾಥ ವಿಠಲ | ಪೊರೆಯ ಬೇಕಿವನಾ ಪ ಸದಯ ಹೃದಯನೆ ಇವಗೆ | ಮುದವನ್ನೆ ಬೀರತಲಿಹದುಳದಲಿ ಕೈಪಿಡಿದು | ಕಾಪಾಡೊ ಹರಿಯೇ ಅ.ಪ. ಮೇಶ ಮಧ್ವೇಶ ಮಹಿ | ದಾಸ ನಿನ್ನಡಿ ದಾಸ್ಯಆಸಿಸುವ ಬಾಲಕನ | ಆಶೆಯನು ಸಲಿಸೀ |ಕ್ಲೇಶಗಳ ಪರಿಹರಿಸಿ | ನೀ ಸಲಹೆ ಭಿನ್ನವಿಪೆಹೇಸದಾಗತಿ ವಂದ್ಯ | ವಾಸವಾನುಜನೇ 1 ಲೌಕಿಕದ ಸಂಪತ್ತು | ಬೇಕಾದ ವರವಿತ್ತುಕಾಕು ಸಂಗವ ಕೊಡದೆ | ನೀಕಾಯ ಬೇಕೋ ||ತೋಕನಿಗೆ ನಿನ್ನಲ್ಲಿ | ಭಕುತಿ ಜ್ಞಾನಗಳಿತ್ತುಲೌಕಿಕವನೆಲ್ಲ ವೈ | ದೀಕ ವೆಂದೆನಿಸೋ 2 ಮೋದ ಕೊಡು ಸತತಾ 3 ಸ್ವಾಪದಲಿ ಮತ್ಸ್ಯಾದಿ | ರೂಪಗಳ ಸ್ತೋತ್ರವೆನೆವ್ಯಾಪಾರ ಮಾಡಿಸುತ | ಕೃಪೆ ತೋರ್ದೆ ಹರಿಯೇವೈಪರೀತ್ಸದ ಮನದ ಚಾಪಲ್ಯ ಕಳೆಯಲ್ಕೆಸ್ವಾಪದಲಿ ಸೂಚಿಸುತ | ನೀಪೇಳ್ದೆ ಧೃಡವಾ 4 ಪತಿ ವಿನುತ | ನಾರಾಯಣಾಖ್ಯ ಹರಿಘೋರಭವ ಕೂಪಾರ | ಪಾರಗಾಣಿಸುವಾಭಾರ ನಿನ್ನದು ಎಂದು | ಪೋರನ್ನ ಒಪ್ಪಿಸಿಹೆಧೀರ ಗುರು ಗೋವಿಂದ | ವಿಠಲ ಪೊರೆ ಇವನಾ 5
--------------
ಗುರುಗೋವಿಂದವಿಠಲರು
ಬಂದರು ನಾರದರ್ಹರುಷದಲಿ ನಿಂದು ಯಜ್ಞ ನೋಡುತ ಮುದದಿ ಇಂದು ಯಾರಿಗರ್ಪಣೆ ಮಾಡುವಿರೆನೆ ಬಂದಿತು ಸಂಶಯ ಋಷಿಗಳಿಗೆ ಮಂಗಳಂ ಜಯ ಮಂಗಳಂ ಪ ತ್ವರದಿಭೃಗು ಮುನಿಗಳು ಹೊರಡುತಲಿ ಹರಬ್ರಹ್ಮರು ಸರಿಯಲ್ಲೆನುತ ಹರಿವೈಕುಂಠದಿ ಮಲಗಿರೆ ನೋಡುತ ಭರದಿಂದೊದೆಯೆ ವಕ್ಷಸ್ಥಳಕೆ ಮಂಗಳಂ ಜಯ ಮಂಗಳಂ 1 ನೊಂದಿತು ಪಾದವೆಂದುಪಚರಿಸೆ ಇಂದಿರಾದೇವಿ ಕೋಪಿಸಿ ತೆರಳೆ ಬಂದು ಋಷಿಗಳಿಗರುಹಿದರು ಶ್ರೀಗೋ- ವಿಂದಗೆ ಸಮರಿಲ್ಲೆಂದೆನುತಾ ಮಂಗಳಂ ಜಯ ಮಂಗಳಂ 2 ಮಡದಿ ಇಲ್ಲದೆ ಬೇಸರ ಪಡುತಾ ಪೊಡವಿಗಿಳಿದು ಹುತ್ತದೊಳಗಿರಲು ಕೊಡಲಿಯ ಗಾಯಕೌಷಧ ಹುಡುಕುತ ಹರಿ ಅಡವಿಗಳಲಿ ಸಂಚರಿಸಿದಗೆ ಮಂಗಳಂ ಜಯ ಮಂಗಳಂ3 ಭೂಮಿಗೊಡೆಯ ವರಹನನು ನೋಡಿ ಕಾಮಿನಿ ಬಕುಳೆ ಸೇವೆಗೆ ಮಾಡಿ ಕಾಮಜನಕ ಬೇಟೆಗೆ ಹೊರಟನು ಬಹು ಪ್ರೇಮದಿಂದಲಂಕರಿಸಿದ ಹರಿಗೆ ಮಂಗಳಂ ಜಯ ಮಂಗಳಂ4 ವನವನ ಚರಿಸಿ ಸ್ತ್ರೀಯರ ನೋಡಿ ವನಜಾಕ್ಷೇರು ನಡುಗುತ ಭಯದಿ ಘನಮಹಿಮಗೆ ಕಲ್ಲು ಕಲ್ಲೆಸೆಯೆ ಹಯ ವನದಿ ಮೃತಿಸೆ ಗಿರಿ ಏರಿದಗೆÉ ಮಂಗಳಂ ಜಯ ಮಂಗಳಂ 5 ಕಾಮಿನಿ ಬಕುಳೆಗೆಲ್ಲವ ಪೇಳಿ ಕೋಮಲೆ ಕೊರವಿ ರೂಪವ ತಾಳಿ ವ್ಯೋಮರಾಜನ ಪುರದಲಿ ಧರಣಿಗೆ ಸಾಮುದ್ರಿಕೆ ಪೇಳಿದ ಹರಿಗೆ ಮಂಗಳಂ ಜಯ ಮಂಗಳಂ 6 ವಶಿಷ್ಟ ಕಶ್ಯಪರು ಶುಕರುಗಳು ವಿಶಿಷ್ಟ ಬಂಧುಗಳ ಕರೆಸುತಲಿ ಪಟ್ಟದರಸಿ ಲಕುಮಿಯು ಬರೆಹರುಷದಲಿ ಕಟ್ಟಿ ಮಾಂಗಲ್ಯ ಹರಿ ಪದ್ಮಿನಿಗೆ ಮಂಗಳಂ ಜಯ ಮಂಗಳಂ 7 ಜಯ ಜಯ ವೆಂಕಟ ಪದ್ಮಿನಿಗೆ ಜಯ ಜಯ ಪದ್ಮಾವತಿಪ್ರಿಯಗೆ ಜಯ ಜಯ ಕಮಲನಾಭ ವಿಠ್ಠಲಗೆ ಜಯ ಜಯ ಶ್ರೀ ಶ್ರೀನಿವಾಸನಿಗೆಮಂಗಳಂ ಜಯ ಮಂಗಳಂ 8
--------------
ನಿಡಗುರುಕಿ ಜೀವೂಬಾಯಿ
ಬಂದರು ಹರಿದಾಸರು ಅಲ್ಲಿ | ಗೋವಿಂದನಾಮವ ನೆನೆಯುತಲಿ ಪ ಬರುತಿಹರೂ ಹರುಷಿಪರೂ ತಿರುಪತಿಯಾತ್ರೆಗೆ ಹೋಗುವರು 1 ತಾಳದಲೀ ಮೇಳದಲೀ ಶ್ರೀ ಲೊಲಾಯೆನ್ನುತ ಕುಣಿಯುತಲಿ 2 ನೇಮದಲೀ ಪ್ರೇಮದಲೀ ಗುರು ರಾಮವಿಠಲ ಸಲಹೆನ್ನುತಲಿ 3
--------------
ಗುರುರಾಮವಿಠಲ
ಬಂದಳು ಭಾಗ್ಯನಿಧಿ ಶ್ರೀವರನಿಧಿ ಬಂದಳು ಭಾಗ್ಯನಿಧಿ ಪ. ಅರಿಶಿಣ ಕುಂಕುಮ ಪರಿಮಳ ಗಂಧವು ನಿನಗರ್ಪಿಸುವೆನು ತಾಯೆ ಶ್ರೀವರನಿಧಿ 1 ಜಾಜಿ ಮಲ್ಲಿಗೆ ರೋಜಾ ಸಂಪಿಗೆ ಸೋಜಿಗಮಾಗಿಹ ಸುರಗಿ ಅರ್ಪಿಸುವೆನು 2 ಜರಿಯ ಪೀತಾಂಬರ ಝಗಝಗಿಸುತಲಿ ಜಗದೊಡೆಯನ ರಮಣಿ ಶ್ರೀ ವರಲಕ್ಷ್ಮಿ 3 ಕದಳಿ ಖರ್ಜೂರವೂ ಬದಳಿ ದಾಳಿಂಬವು ಮುದದಿ ತೆಂಗಿನಕಾಯಿ ಫಲವ ಅರ್ಪಿಸುವೆನು 4 ಶುಕ್ರವಾರದಿ ಭಕ್ತರ ಮನೆಯೊಳು ನಿತ್ಯ ಪೂಜೆಯಗೊಳ್ವ ಶ್ರೀ ವರನಿಧಿ 5 ಶ್ರೀ ಶ್ರೀನಿವಾಸನ ಪ್ರೀತಿಯ ಲಕ್ಷ್ಮಿ ನೀ ಕರುಣದಿ ಸಲಹೆ ಶ್ರೀ ವರಲಕ್ಷ್ಮಿ 6
--------------
ಸರಸ್ವತಿ ಬಾಯಿ
ಬಂದಾ ಗೋವಿಂದನು ಗೋಕುಲದಿಂದ ಆನಂದ ಮುಕುಂದನು ಪ ಅಂದಿಗೆ ಕಿರುಗೆಜ್ಜೆಯು ಘಲುಘಲುರೆನೆ ಮಂದಹಾಸನಗೆಯಿಂದಲಿ ಶ್ರೀಹರಿ ಅ.ಪ ಕರದಿ ಕಂಕಣ ವಂಕಿಯು ಹೊಳೆಯುತಲಿ ಸಿರದಿ ಕಿರೀಟ ಮುಂ- ಗುರುಳು ಮುಖ ಬೆವರಿನ ಹೊಸ ಕಾಂತಿಯಲಿ ಬೆರಳುಗಳಲಿ ಉಂಗುರ ಥಳಥಳಥಳ ಹೊಳೆಯುವ ಸೊಬಗಿನಲಿ ಕೊರಳೊಳು ಸರಿಗಿಯ ಸರ ಪರಿ ಸರ ಪದಕಗಳ್ಹೊಳೆಯುತಲಿ ಜರಿ ಪೀತಾಂಬರದ ನಡುವಿಲಿ ಕಿರು ಗೆಜ್ಜೆಗಳ್ಹೊಳೆಯುತಲಿ ತರುತುರು ತರುಣೇರು ಮರುಳಾಗುವ ತೆರ ಪರಿಪರಿ ರಾಗದಿ ಮುರಳಿಯ ನುಡಿಸಲು ಸುರರು ಪುಷ್ಪ ವೃಷ್ಟಿಯ ಸುರಿಸುತಲಿರೆ ತುರುಕರು ಮಧ್ಯದಿ ಪೊಳೆವೊ ಚಂದ್ರಮನಂತೆ1 ತುಂಬುರು ನಾರದರೆಲ್ಲರು ಕೂಡಿ ಅಂಬರದಲಿ ನೆರೆದರು ಗಂಧರ್ವಪ್ಸರ ಸ್ತ್ರೀಯರು ಕುಣಿದಾಡಿ ಪರಮಾತ್ಮನ ಸ್ತುತಿಸುತ ರಂಭೆ ಊರ್ವಶಿ ಮೇನಕೆಯರು ಕೂಡಿ ಆನಂದದಿ ನರ್ತಿಸೆ ಇಂದಿರೆ ರಮಣನ ಗುಣಗಳ ಪಾಡಿ ಅಂಬರದಲಿ ದೇವ ದುಂದುಭಿಗಳು ಮೊಳಗಲು ಕಂದರ್ಪನ ಪಿತ ಕರುಣದಿ ಭಕುತರ ಚಂದದಿ ದುರ್ಮತಿ ನಾಮ ವತ್ಸರದಲಿ ಕುಂದಿಲ್ಲದೆ ಸಲಹುವೆನೆನುತಲಿ ತ್ವರ 2 ಸೃಷ್ಟಿಗೀಶನ ಗುಣಗಳ ಪಾಡುತಲಿ ವ- ಶಿಷ್ಠರು ವಿಶ್ವಾಮಿತ್ರ ಕಶ್ಯಪ ಭಾರದ್ವಾಜ ಮುನಿಗಳು ದೇವೇಶನ ಸ್ತುತಿಸುತ ಅತ್ರಿ ಜಮದಗ್ನಿ ಜಾಬಾಲಿಗಳು ಶ್ರೀಕೃಷ್ಣನೆ ಪರನೆಂದು- ತ್ತಮ ಋಷಿಗಳು ಪೊಗಳುತಲಿರಲು ಪರಮೇಷ್ಠಿ ಪಿತನ ತ- ನ್ನಿಷ್ಟ ಭಕುತರನು ಸಲಹಲು ಕಂಕಣ ಕಟ್ಟಿಹ ಕಮಲನಾಭವಿಠ್ಠಲ ತ್ವರ ಶಿಷ್ಟರ ಸಲಹಲು ಸರಸರ ಓಡುತ 3
--------------
ನಿಡಗುರುಕಿ ಜೀವೂಬಾಯಿ
ಬಂದಾ ಬಂದಾ ಉಡುಪಿಲಿ ನಿಂದ ನಿಂದಾ ಪ. ಬಂದ ಗೋಪೇರ ವೃಂದಗಳ ತಾ ನಂದು ದಣಿಸುತ ಸುಂದರಾಂಗನು ಮಂದರೋದ್ಧರ ಬೃಂದೆಯಿಂದಲಿ ಅ. ಮುದ್ದುಸುರಿಸುತ ಗೋಕುಲದೊಳಿರೆ ಕದ್ದು ಬೆಣ್ಣೆಯ ತಿಂದನೆನುತಲಿ ಸುದ್ದಿ ತಾಯಿಗೆ ಪೇಳಿ ಸತಿಯರು ಗದ್ದಲದಿ ತನ್ನ ಗಾರು ಮಾಡಲು ಮುದ್ದು ಯತಿಗಳು ಎದ್ದು ಪೂಜಿಸಿ ಮುದ್ದಿ ಬೆಣ್ಣೆ ನೇವೇದ್ಯವಿಡುತಿರೆ ಸದ್ದು ಇಲ್ಲದೆ ತಿಂದು ಸುಖದಲಿ ಇದ್ದೇನೆಂಬುವ ಬುದ್ಧಿಯಿಂದಲಿ 1 ಭಾರವಿಳುಹಲು ಕೋರೆ ಭೂಮಿಯು ನಾರದಾದ್ಯರ ನುತನು ತಾ ಬರೆ ನಾರಿಯರು ಮನ ಬಂದ ತೆರದಲಿ ಜಾರ ಚೋರನೆನುತ್ತ ಬೈಯ್ಯಲು ಧೀರ ಯತಿಗಳು ಸೇರಿ ಪರಬೊಮ್ಮ ಶ್ರೀರಮಣನೆನ್ನುತ ಸ್ತುತಿಸುವೋ ವಾರುತಿಗೆ ಮೈದೋರಿ ಭಕುತರ ಪಾರಿಗಾಣಿಪೆನೆಂಬ ನೆವದಲಿ 2 ಹಸಿದುಗೋಪರÀ ಯಜ್ಞವಾಟಕೆ ಅಶನ ಬೇಡಲು ಕಳುಹೆ ಗೊಲ್ಲರ ಪಸುಳರಿಗೆ ನೈವೇದ್ಯವಿಲ್ಲದೇ ವಶವೆ ಕೊಡಲೆಂದೆನ್ನೆ ಋಷಿಗಳು ವಸುಧಿಪತಿ ಸರ್ವೇಶನೆಂದರಿ ದಸಮಯತಿಗಳು ಕ್ಷಣ ಕ್ಷಣಕ್ಕೆ ಷ ಡ್ರಸದ ಆರೋಗಣೆಯ ಮಾಡಿಸೆ ಕುಶಲದಲಿ ಮೃಷ್ಟಾನ್ನ ಭುಜಿಸಲು 3 ಬಾಲ ಕಂದಗೆ ತೊಡಿಗೆ ತೊಡಿಸಲು ಲೀಲೆಯಿಂದಲಿ ಗೋಪಿದೇವಿಯು ಕಾಳ ಮಡುವಿಲಿ ಧುಮಿಕಿ ಎಲ್ಲವ ಕಳೆದು ಬರೆ ಆಟಗಳ ಪರೆವೆಲಿ ಶೀಲಯತಿಗಳು ವಾರ ವಾರಕೆ ಬಾಲ ತೊಡಿಗೆ ಶೃಂಗಾರಗೈಯ್ಯಲು ಆಲಯವ ಬಿಟ್ಟೆಲ್ಲಿ ಪೋಗದೆ ಓಲಗವ ಕೈಕೊಳ್ವೆನೆನ್ನುತ 4 ಗೋಪಜನ ಗೋವ್ಗಳನೆ ಕಾಯಲು ಗೋಪಿಯರು ತನ್ನ ಗುಲ್ಲು ಮಾಡಲು ಪಾಪಿ ಕಂಸ ಅಟ್ಟುಳಿಯ ಪಡಿಸಲು ಭೂಪತಿಯ ಪದವಿಲ್ಲದಿರಲು ಈ ಪರಿಯ ಬವಣೆಗಳ ತಾಳದೆ ಗೋಪ್ಯದಿಂದಿಲ್ಲಡಗಿ ನಿಂತು ಗೋಪಾಲಕೃಷ್ಣವಿಠಲ ಯತಿಗಳ ಗೌಪ್ಯಪೂಜೆಯಗೊಂಬ ವಿಭವಕೆ 5
--------------
ಅಂಬಾಬಾಯಿ
ಬಂದಾ ಸುಂದರವದನ ಮಂದಹಾಸದಿ ರಘು ನಂದನ ಧನು ಬಳಿಗೆ ಪ ವಂದಿಸಿ ಕೌಶಿಕಗೆ ತಂದೆಯ ನೆನೆದು ಆ ನಂದ ಮನದಲಿ ಮುಂದೆ ಮುಂದಕೆ ನಡೆದು ಚಂದದಿ ಬರುತಿಹ ಅಂದನೋಡಿ ಮುನಿ ವೃಂದ ಮನದೊಳಾನಂದವ ಪೊಂದುತ ಇಂದಿರೇಶನಿವನೆಂದು ತಿಳಿದು ಭೂ ನಂದನೆ ಇವನವಳೆವಂದು ಪೇಳುತಿರೆ ಅ.ಪ. ಸಿಂಧುಶಯನ ಭಜಕ ಮಂದಾರ ಮುನಿಜನ ವೃಂದ ಕುಮುದ ಚಂದ್ರ ಮಂದಜಾಸನ ವಂದ್ಯ ಸಿಂಧುಸುತಾಲೋಲ ಸಿಂಧೂರ ಪರಿಪಾಲ ಸಿಂಧೂರ ಗಮನದಿ ಸಿಂಧೂ ಗಂಭೀರ ಬರೆ ಇಂದುವದನೆಯರು ಚಂದವ ನೋಡುತ ಇಂದೀವಗೇ ಜಯವೆಂದು ನುಡಿಯುತಿರೆ ಇಂದುಧರನ ಧನು ಬಂಧನ ಮಾಡಲು ಇಂದಿರೇಶ ಶ್ರೀ ಕರಿಗಿರಿ ಮಂದಿರ 1
--------------
ವರಾವಾಣಿರಾಮರಾಯದಾಸರು
ಬಂದಾನು ಬಂದಾನು ಪ ಬಂದನಾಗ ಗೋವಿಂದ ಯದುಕುಲಾ ನಂದ ಮುಕುಂದನು ಮಂದಹಾಸದಲಿ ಅ.ಪ. ಬೀದಿ ಬೀದಿಯೊಳು ಬಲು ಶೃಂಗಾರ ಬಗೆ ಬಗೆ ತೋರಣದಿಂದಲಂಕಾರ ಕಾದುನಿಂತಿಹ ಜನ ಪರಿವಾರ ಮೋದದಿ ಮಾಡುವ ಜಯ ಜಯಕಾರ ಮೇದಿನಿ ಸುರರಾಮ ಮಂತ್ರದ ಉಚ್ಚಾರ ಸೌಧಗಳಲ್ಲಿಹ ಸ್ತ್ರೀಯರಪಾರ ಸಾಧರದಿಂದೀಕ್ಷಿಸೆ ಜನನಿ ಕರವು ಮೋದವೆ ಬೀರುತ ಯಾದವ ಕುಲಮಣಿ 1 ಸುಂದರಿಯರು ನಲವಿಂದ ನಿಂದಿಹರು ಗಂಧ ಪರಿಮಳದ ಜಲವೆರಚಿಹರು ಅಂದದರಳ ಪುಷÀ್ಪಗಳ ವರ್ಷಿಪರು ಕುಂದಣದಾರತಿಗಳ ಪಿಡಿದಿಹರು ವಂದಿಮಾಗಧರು ಪೊಗಳುತಿಹರು ಚಂದದಿ ಮಣಿಮಯ ಸ್ಯಂದನದಲಿ ಅರ ವಿಂದ ನಯನ ಬಲು ಸುಂದರಾಗನು 2 ಬಂಗಾರದ ರಥವೇರಿ ಬರುತಿಹನು ಕಂಗಳಿಗುತ್ಸವ ತಾ ತರುತಿಹನು ಮಂಗಳಕರ ತಿಲಕವನಿಟ್ಟಿಹನು ಬಂಗಾರದ ಮಕುಟ ಧರಿಸಿಹನು ಶೃಂಗಾರದ ಶಿಸ್ತಲಿ ಶೋಭಿಪನು ಅಂಗಜಕೋಟಿ ನಿಭಾಂಗನಾಗಿಹನು ಮಂಗಳಾಂಗ ಶ್ರೀರಂಗ ಕರಿಗಿರಿ ನೃಸಿಂಗನು ಕರುಣಾಪಾಂಗವ ಬೀರುತ 3
--------------
ವರಾವಾಣಿರಾಮರಾಯದಾಸರು
ಬಂದಾರೆ ಅತ್ತಿಗೆಯರು ಚಂದನೋಡಿರೆಚಂದ ನೋಡಿರೆ ಇಂದಿರೇಶನ ಮುದ್ದುತಂಗಿಯರು ಕರೆಯಲು ಬಂದಾರೆ ಪ. ಸಾಲು ದೀವಿಗೆಯಂತೆ ಬಾಲೆಯರು ನಿಂತಾರೆ ಮ್ಯಾಲೆ ಸುಭದ್ರೆ ದ್ರೌಪತಿಯೆ ಇಂದೀವರಾಕ್ಷಿಮ್ಯಾಲೆ ಸುಭದ್ರೆ ದ್ರೌಪತಿ ನುಡಿದಳು ಮೇಲೆಂದು ನಿಮ್ಮ ದೊರೆತನ ಇಂದೀವರಾಕ್ಷಿ 1 ಕೃಷ್ಣನ ಮಡದಿಯರು ಎಷ್ಟು ದಯವಂತರು ಅಷ್ಟೂರಲ್ಲಿದ್ದ ಗರುವನೆಅಷ್ಟ್ಟೂರಲ್ಲಿದ್ದ ಗರುವನೆ ತುರುಬಿಗೆ ಮಲ್ಲಿಗೆ ಮಾಡಿ ಮುಡಿದಾರೆ2 ಫುಲ್ಲನಯನರ ದೈವ ಎಲ್ಲಿವರ್ಣಿಸಬೇಕುಎಲ್ಲರಲ್ಲಿದ್ದ ಗರುವನೆ ಎಲ್ಲರಲ್ಲಿದ್ದ ಗರುವನೆ ತಮ್ಮಲ್ಲಿಟ್ಟುಕೊಂಡಾರೆವಿನಯದಿ ಸಖಿಯೆ ಇಂದೀವರಾಕ್ಷಿ 3 ಹಿರಿಯ ಅತ್ತಿಗೆ ತಾನು ಗರುವಿನ ಸೀರೆಯನುಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಕರೆಯಲಿ ನಮ್ಮ ಇದುರಿಗೆ ಇಂದೀವರಾಕ್ಷಿ4 ಮಡದಿ ಸತ್ಯಭಾಮೆ ಬಡಿವಾರದ ಸೀರೆಯನುಟ್ಟುಕಡುಕೋಪವೆಂಬೊ ಕುಪ್ಪುಸವಕಡುಕೋಪವೆಂಬೊ ಕುಪ್ಪುಸವ ತೊಟ್ಟುಒಡಗೂಡಿ ನಮ್ಮ ಕರೆಯಲು ಇಂದೀವರಾಕ್ಷಿ5 ಅಷ್ಟು ಮಡದಿಯರು ಅತಿ ಸಿಟ್ಟಿನ ಸೀರೆಯನುಟ್ಟುಅಷ್ಟ ಮದವೆಂಬೊ ಕುಪ್ಪುಸವಅಷ್ಟ ಮದವೆಂಬೊ ಕುಪ್ಪುಸವ ತೊಟ್ಟುಧಿಟ್ಟಯರು ನಮ್ಮ ಕರೆಯಲು ಇಂದೀವರಾಕ್ಷಿ6 ಭಾಪುರಿ ಅತ್ತಿಗೆಯರು ಕೋಪದೊಸ್ತಗಳಿಟ್ಟುಭೂಪರಾಮೇಶನ ಮಡದಿಯರುಭೂಪರಾಮೇಶನ ಮಡದಿಯರು ಬಂದರೆದ್ರೌಪತಿ ದೇವಿಯ ಕರೆಯಲು ಇಂದೀವರಾಕ್ಷಿ 7
--------------
ಗಲಗಲಿಅವ್ವನವರು
ಬಂದಾಳು - ಬಂದಾಳು ಕನ್ನಿಕೆಯಾಗ || ಮೋಹನ್ನ ರೂಪದಿ ಪ ಪತಿ ಸುರವೃಂದ ಪೊರೆಯಲುಮಂದರಧರ ಆನಂದವ ಬೀರುತ ಅ.ಪ. ಪರಿ ಪರಿ ಭಾವದಿ 1 ಘಲು ಘಲ್ಲು ಘಲಿರೆನ್ನಲು ಗೆಜ್ಜೆಯನಾದ | ಅಸುರರಿಗುನ್ಮಾದ |ಕೆಲಸಾರಿ ಕೆಲ ಸಾರೆನ್ನುತಲೀ ನಾದ | ಆಯಿತು ವಿವಾದ ||ಘಳಿಗೆಯೊಳಮೃತದ | ಕಲಶ ಕನ್ನಿಕೆ ಕರತಲದೊಳಗಿರಿಸುತ | ಬಲು ಬಲು ವಂದಿಸೆ 2 ಸಾಲು ಸಾಲಾಗಿ ಕುಳ್ಳಿರಲಾಗ | ಕಣ್ಮುಚ್ಚಿರೆಂದಳಾಗ ಕಾಲಾಲಂದಿಗೆ ಝಣಿ ಝಣಿಸುವ ಸೋಗ | ಹಾಕಿದಳ್ ತಾನಾಗ | ಕೈಲಿ ಕಲಶ ಸೌಟು | ಚಾಲಿಸುತಲಿ ಸುರಪಾಳಯ ಕುಣಿಸುತ | ಜಾಲ ಮಾಡಿದ ಹೆಣ್ಣು3 ದಿವಿಜಾರ ಮಧ್ಯದಿ ರಾಹುವು ತಾನು | ಎತ್ತಲು ತನ ಗೋಣುರವಿಯು ಚಂದ್ರಮರ ಸೂಚನೆಗಳನು | ಅನುಸರಿಸುತ ಪೆಣ್ಣುಹವಣಿಸಿ ಚಕ್ರದಲವನ ಕೊರಳನೂಜವದಿ ಕಡಿಯೆ ಗ್ರಹವೆರಡೇರ್ಪಟ್ಟವು 4 ಸುರರು ಅಸುರರಿಗೇ | ಆದಾವು ಫಲ ಬೇರೊಬ್ಬಬ್ಬರಿಗೆ | ಸ್ವರ್ಯೂಪ್ಯೋಗ್ಯತೆಗೇ ||ವೇದ ವೇದ್ಯ ಗುರು ಗೋವಿಂದ ವಿಠಲನುಸಾಧು ಪೆಣ್ಣು ಸಮ ವೈಷಮ್ಯ ರಹಿತ 5
--------------
ಗುರುಗೋವಿಂದವಿಠಲರು
ಬಂದಿರುವೆನು ಭೂಜಾತೆ | ಶರ- ದಿಂದುವದನೆ ವೋ ಸೀತೆ ಪ ಕೂಗುವುದೇತಕೆ ನಿಮ್ಮಯ ಪೆಸರೇ ನೀಗ ತಿಳಿಸಿರೈ ಸ್ವಾಮಿ | ನುಡಿ ಭಾಗವತ ಜನಪ್ರೇಮಿ ಅ.ಪ ಹೀನತಮವ ಮುರಿದಜಗೆ ಶೃತಿಗಳಿತ್ತ ಮೀನಾವತಾರನೆ ನಾನು | ಬಾ ಜಾನಕಿ ಬೇಗನೆ ನೀನು ಮೀನಾದರೆ ನೀರೊಳಗಿರುವುದು ಸರಿ ಮಾನಿನಿಯಲಿ ಕಾರ್ಯವೇನು | ನಡಿ ದೀನ ಜನರ ಸುರಧೇನು 1 ಕಮಲನಯನೆ ನಾ ಪೂರ್ವದಿ | ಗಜ- ಗಮನೆಯೆ ನೋಡನುರಾಗದಿ ಭ್ರಮೆಯಾತಕೆ ಕೇಳ್ ಕಠಿಣಾಂಗಗೆ ನಾ ಸಮಳೆ ನಿನಗೆ ನೀ ನೋಡು | ಸಂ ಭ್ರಮವಿದ್ದಲಿ ನಲಿದಾಡು 2 ವರಹಾರೂಪನೆ ಕಾಮಿನಿ | ಓ ತರುಣಿಯರೊಳಗೆ ಶಿರೋಮಣಿ ವರಾಹನಾದರೆ ಅಡವಿಯ ತಿರುಗುತ- ಲಿರದೇತಕೆ ಇಲ್ಲಿ ಬಂದೆ | ನಡಿ ಪರಿಪರಿ ಮೃಗಗಳ ಹಿಂದೆ 3 ಕರುಳ ಬಗೆದ ನರಸಿಂಹ | ನಾನು ಪರಮ ಪುರಷ ಪರಬ್ರಹ್ಮ ನರಸಿಂಹನು ನೀನಾದರೆ ನಡಿನಡಿ ಗಿರಿಗುಹೆಯೊಳಗಿರು ಹೋಗೈ | ಬಹು ಪರಿನುಡಿಗಳು ನಿನಗೇಕೈ 4 ಭೂಮಿಯ ದಾನವ ಬೇಡಿ ಬಲಿಯ ಗೆದ್ದ ವಾಮನ ನಾನೆಲೆ ನಾರಿ | ಸು ತ್ರಾಮಾದ್ಯರಿಗುಪಕಾರಿ ಬ್ರಾಹ್ಮಣನಾದರೆ ನಮಿಸುವೆ ಚರಣಕೆ ಹೋಮಧ್ಯಾನ ಜಪಮಾಡೈ | ನಿ ಷ್ಕಾಮ ಜನರ ಪಥನೋಡೈ 5 ದುರುಳನೃಪರ ಸಂಹರಿಸವನಿಯ ಭೂ ಸುರರಿಗೆ ಕೊಟ್ಟೆನೆ ದಾನವು | ಕೇಳ್ ಪರಶುರಾಮಾಭಿದಾನವು ವರಮಾತೆಯ ಶಿರವರಿದವ ನೀನಂತೆ ಸರಸವೇತಕೆನ್ನಲ್ಲಿ | ಮನ ಬರುವಲ್ಲಿಗೆ ತೆರಳಲ್ಲಿ 6 ತಾಯನುಡಿಗೆ ತಮ್ಮಗೆ ರಾಜ್ಯವ ಕೊಟ್ಟು ಪ್ರಿಯದಿ ವನದೊಳಗಿದ್ದೆನೆ | ದೈ ತ್ಯೇಯ ನಿಕರವನು ಗೆದ್ದೆನೆ ಸ್ರೀಯರಲ್ಲಿ ಹಿತವೇನು | ಕಮ ಲಾಯತಾಕ್ಷ ನಡಿ ನೀನು 7 ನಾರಿಯರನು ಕೂಡಿ ರಾಸ ಕ್ರೀಡೆಯೊಳ್ ತೋರಿದೆ ಪರಿಪರಿ ಚಿತ್ರವ | ವಿ- ಜಾರ ಪುರಷನಿಗೆ ಹೋಲುವಳಲ್ಲವು ಸಾರ ಪತಿವ್ರತೆ ನಾನು | ಇ- ನ್ನ್ಯಾರು ತಿಳಿಸು ಮತ್ತೆ ನೀನು 8 ಪತಿವ್ರತೆಯರ ಸದ್‍ವ್ರತವ ಕೆಡಿಸಿದಾ ಪ್ರತಿಮ ಬುದ್ಧನೆ ಲತಾಂಗಿ | ಓ ಮತಿವಂತಳೆ ಮೋಹನಾಂಗಿ ಕೃತಕವಾಡದಿರು ಒಲ್ಲೆ | ಕೇ ಳತಿ ಮೋಹಕ ನೀ ಬಲ್ಲೆ 9 ಹಲವು ನುಡಿಗಳೇನು ಕಲಿಯುಗಾಂತದಲಿ ಮಲೆತ ಮನುಜರನು ಕೊಲ್ವೆನೆ | ಓ ಲಲನೆ ನೋಡು ಬಲು ಚೆಲ್ವನೇ ಕಲಿತನವ ತೋರಿಸದಿರು ಈ ಪರಿ ಹಲವು ವೇಷ ನಿನಗೇಕೆ | ಕೇ ಳೆಲವೊ ಸ್ವಾಮಿ ನುಡಿ ಜೋಕೆ 10 ವೇಷವಲ್ಲ ಸರ್ವೇಶ ನಾನು ಪರಿ- ಪೋಷಿಸುವೆನು ನಿಜಭಕ್ತರ | ಸಂ- ತೋಷಿಸುವೆನು ಧರ್ಮಯುಕ್ತರ ಪೋಷಿಸುವನು ನೀನಾದರೆಲ್ಲಿ ನಿನ್ನ ವಾಸಪೇಳು ನಿಜವೀಗಾ | ಪರಿ ಹಾಸವೇಕೆ ನುಡಿಬೇಗ 11 ಪರಮಾತ್ಮನು ನಾ ಕೇಳೆ | ಎನ್ನ ಮರತೆಯೇನೆ ಎಲೆ ಬಾಲೆ ಅರಿತೆನೀಗ ಬಹು ಸಂತಸವಾಯಿತು ಎರಗುವೆ ಚರಣಕೆ ನಾನು | ನಿನ್ನ ಸರಿಯಾರೈ ದೊರೆ ನೀನು 12 ಧರೆಯೊಳಯೋಧ್ಯಾ ಪುರದರಸನ ಮಗ ಗುರುರಾಮವಿಠಲನೆ ನಾನು | ಓ ತರುಣಿ ನಿನಗೊಲಿದು ಬಂದೆನು ಧರಣಿ ತನಯೆ ನಸುನಾಚಿಕೆಯಿಂದಲಿ ಣಗಳನು ತೊಳೆದಳು ಬೇಗ 13
--------------
ಗುರುರಾಮವಿಠಲ
ಬಂದಿಹೆ ನಂತರಂಗದಿ ನಡಿರಕ್ಷಿಸೊ ನಡಿ ರಕ್ಷಿಸೊ ಪ ಕಚ್ಛಪ ಚಿನ್ನಲಿ ಉಚ್ಛಸೂಕರನಿಂದಾಶ್ರಿತವಾಗಿಹೆ 1 ಶಿರದೊಳು ನರಹರಿ ಧರಿಸಿ ವಾಮನ ಮುಖದಿ ಕರದಿ ಪರಶುರಾಮನ್ನಿರಿಸಿಹೇನೋ ಸ್ವಾಮಿ 2 ಬುದ್ಧ ಕಲ್ಕಿ ಸದಾ ನರಸಿಂಹವಿಠ್ಠಲ ಧ್ಯಾನದೋಳಿಹೆ3
--------------
ನರಸಿಂಹವಿಠಲರು
ಬಂದು ನಿಮ್ಮಡಿಗಳ ನಾಶ್ರಯಿಸಿದೆ ಪ್ರಭುವೆ ಭವ ಬಂಧನಗಳ ಬಿಡಿಸಿ ನೀ ಕಾಯೊ ಸದ್ಗುರುವೇ ಪ ಎಲ್ಲೆಲ್ಲಿಯೂ ತಿರುಗಿ ಕಾಯುವರ ಕಾಣದೆಲೆ ತಡಮಾಡದೆಮ್ಮಯ ದುಗುಡಗಳ ಪರಿಹರಿಸಿ ಕರುಣದಿಂದಲಿ ಕಾಯೊ ಗುರುರಾಘವೇಂದ್ರಾ 1 ನಿಶೆ ಹಗಲು ನಿನ್ನನು ಸ್ತುತಿಸಿ ಬೇಡುವೆ ಪ್ರಭುವೆ ಗತಿಗಾಣೆ ನಿನ್ಹರತು ಈ ಪೃಥುವಿಯೊಳಗೆ ಅತಿವ್ಯಥೆಯಲೀ ನೊಂದು ಮತಿಯಿಲ್ಲದಂತಿಹೆನು ತ್ವರಿತದಿಂದಲಿ ಕಾಯೊ ಹೇ ಗುರುರಾಜ ಪ್ರಭುವೇ 2 ಜಗವೆಲ್ಲ ನಿಮ್ಮ ಮಹಿಮೆ ಸಾರುತಿರುವುದ ಕೇಳಿ ಭರದಿಂದ ಬಂದೆನೋ ಗುರುರಾಘವೇಂದ್ರಾ ಇಂದೆಮ್ಮ ಅಪರಾಧಗಳ ಎಣಿಸದೆಲೆ ಸಲಹೈಯ್ಯಾ ಕಾರುಣ್ಯಮೂರ್ತಿ ಶ್ರೀ ಗುರುರಾಘವೇಂದ್ರಾ 3
--------------
ರಾಧಾಬಾಯಿ