ಒಟ್ಟು 24320 ಕಡೆಗಳಲ್ಲಿ , 137 ದಾಸರು , 9123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗಿಂತ ಮಿಗಿಲಾಗಿ ಕರುಣ ನಿನ್ನದಿರೆ ನಿನಗೇನು ಶರಣೆಂಬೆ ಕರುಣಕ್ಕೆ ಹರಿಯೆ ಪ ನಿತ್ಯ ಮುಕ್ತ ಪೂರ್ಣ ಕಾಮ ಒಂದಕು ಸಿಲುಕದ ಮತ್ತೆ ಇದ್ದ ನಿನ್ನ ತನು ದೀನರ ತೋರಿ ಹತ್ತು ಜನುಮವ ಕೊಟ್ಟು ಭಕ್ತ ಜನರ ಬಲು ಕೃತ್ಯ ನಿಮಿತ್ಯ ಕೊಡಿಸ್ಯಾಡಿಸಿದನರಿಯ 1 ಒಂದಕೂ ಸಿಲುಕದಾ ನಿನ್ನ ವತ್ಸದ ದಾವು ಬಂಧದಿ ಬಿಗಿಸಿತೀ ಗೋಪಿಯ ಕೈಯ ವೃಂದಾರಕರ ಸ್ತುತಿಗೊಶವಲ್ಲದವನ ಗೋಪ ಮಂದಿಯ ದೂರಿನ ಪಾತ್ರನ್ನ ಮಾಡಿತು 2 ಪೇಳಿಕೊಂಬಿಯೊ ಲೋಕದೊಡೆಯನು ನಾನೆಂದು ಊಳಿಗತನ ನಿನ್ನ ಕೈಯ ಮಾಡಿಸಿತಯ್ಯ ಕೇಳೊ ಭಕುತರಿನ್ನು ಏನಾಡಿದರನ್ನ ತಾಳಬೇಕಾಯಿತೋ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು
ನಿನಗಿದು ಘನವೆ-ನಿತ್ಯಾತ್ಮಕವನಜಭವಾದಿಗಳನು ಪಾಲಿಪದೇವಪ ಸದಯನೀನಾದರೆ-ಬದುಕಿಸಿ ಪಶುಗಳ ಮುದವನು ತೋರಿಸು ಮಧುಸೂಧನ ಈಗ 1 ಇದಿರಿಗೆ ನೋಡಲಾರದೆ ನಿನ್ನ ದೂರಿದೆ ಇದುವೊಂದು ತಪ್ಪುಯನ್ನದು ಎಂದು ಮುನ್ನಿಸು 2 ವಿಷದ ನೀರನು ಕುಡಿ-ದಸುವನ್ನು ಕಳಕೊಂಡ ಪಶು ಪಾಲಕರಿಗೆ ನೀನಸುವಿತ್ತು ಪೊರೆದೆ 3 ಹೊಟ್ಟೆಯೊಳಗೆ ಸತ್ತು ಹುಟ್ಟಿದ ಶಿಶುವನ್ನು ಮುಟ್ಟಿ ಜೀವನವಿತ್ತೆ ಕೃಷ್ಣಾಕೃಪಾಕರ 4 ಗುರುಸುತನನು ಯಮ ಪುರದಿಂದ ಕರೆತಂದ ಪರಮ ಶ್ರೀ ಪುಲಿಗಿರಿ ವರದ ವಿಠಲರಾಯ 5
--------------
ಸರಗೂರು ವೆಂಕಟವರದಾರ್ಯರು
ನಿನಗಿದು ಹಿತವೇ | ಇದು ಹಿತವೇ ಪ ಕಂಸಾರಿ ಚರಣವ ನಂಬದೇ ಕ್ಷಣಿಕದ | ಸಂಸಾರದಲಿ ಬೆರಿಯಬೇಡಾ 1 ಕನ್ನಡಿಯೊಳಗಿನಾ ಹೊನ್ನಿನಾ ಗಂಟ ನೋಡಿ | ಕಣ್ಣಗೆಟ್ಟಿರುವರೇ ಮೂಢಾ 2 ಬಿಸಿಲಿನ ನೀರಿನಿಂದೆ ತೃಷೆಯಾರಿಸುವದುಂಟೆ | ಹಸಗೆಡದಿರು ವಿಷಯ ಕೂಡಾ | 3 ಕನಸಿನ ಸಂಪದವನೆನೆಸಿ ತಾ ಹಿಗ್ಗುವರೆ | ಮನವೇ ನೀ ಮಥನಿಸಿ ನೋಡು 4 ದಾವನು ಗುರು ಮಹಿಪತಿ ಪ್ರಭು ಭಜಿಸನು | ಅವಗಿಲ್ಲ ಸುಖಸುರವಾಟಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನಗಿದುಸರಿಯೆ ನನ್ನ ದೊರೆಯೆ ಪ ದಯಮಾಡೋ ದಾನವಾಂತಕನೆ ಅ.ಪ ಮಾಯಾಧಾರಿಯೇ ನಿನ್ನಂ ಬಲ್ಲೆನೇಳೆಲೋ ಜಾಣಾ ಪ್ರೀಯರಿಲ್ಲದೆ ನನ್ನ ಪ್ರಾಣಮಳಿವೋದು1 ಬರಿಯ ಮಾತಿನೊಳೆನ್ನಂ ಬೆರಗುಮಾಡಲಿ ಬೇಡಾ ಸುರತಕೇಳಿಗಾಗಿ ಬರಮಾಡಿದೆನು ನಿನ್ನ 2 ವಾಸವಾರ್ಚಿತ ಹರಿ ದಾಸಾ ತುಲಶೀರಾಮಾ ಆಶೆಯ ತೋರಿ ನೀ ಮೋಸಗೈದುದು3
--------------
ಚನ್ನಪಟ್ಟಣದ ಅಹೋಬಲದಾಸರು
ನಿನಗಿನಿತು ಮಮಕಾರವಿರಲೆನಗೆ ಭಯವೇನು ಚಿನುಮಯನೆ ಧನ್ಯ ನಾನು ಪಜನಕ ನೀನೆನಗಾದೆ ತನುಜ ನಾ ನಿನಗಾದೆ ಘನಮಹಿಮ ಕಾಮಧೇನು ನೀನು ಅ.ಪಜನ್ಮಕೋಟಿಗಳಲ್ಲಿ ಪುಣ್ಯಕರ್ಮಗಳನ್ನು ಮುನ್ನ ಮಾಡಿಸಿದೆ ನೀನುಮುನ್ನಿನಾ ದೇಹಗಳು ಭಿನ್ನವಾಗಲು ಕರ್ಮವಿನ್ನುಳಿವ ಬಗೆಯದೇನುಚಿನ್ಮಯನೆ ತನುಕರಣ ಭಿನ್ನವಾದರು ಸಾಕ್ಷಿ ನಿನ್ನೊಳಿಂಬಿಟ್ಟೆಯವನುಸನ್ನುತನೆ ಬಾಲಕನಿಗುಣ್ಣ ಕಲಿಸುವ ತೆರದಿ ನಿನ್ನನಿತ್ತುದೇನೆಂಬೆನು ನಾನು 1ದುಷ್ಟಸಂಗವ ಬಿಡಿಸಿ ದುರ್ಬುದ್ದಿಯನು ಕೆಡಿಸಿ ಶಿಷ್ಟರೊಳು ತಂದು ನಿಲಿಸಿಕಷ್ಟಸಾಧನಗಳನು ಮುಟ್ಟಲೀಸದೆ ಸುಲಭ ನಿಷ್ಠೆಯಲಿ ಚಿತ್ತವಿರಿಸಿಹುಟ್ಟುಹೊಂದುಗಳನ್ನು ಕೊಟ್ಟು ಮೋಹಿಸುತಿರುವ ಪುಟ್ಟ ಫಲಗಳ ತೇಲಿಸಿಮುಟ್ಟಿ ನಿನ್ನಯ ಪದವನಿಟ್ಟು ಹೃದಯಾಂಬುಜದಲಿಷ್ಟಮೋಕ್ಷವ ತೋರಿಸಿ ನಿಲಿಸಿ 2ವಿದ್ಯವಿಸ್ತರವಾದರದ್ದುವದು ಗರ್ವದಲಿ ಬುದ್ಧಿ ನಿಲ್ಲದು ನಿನ್ನಲಿಇದ್ದು ವೃದ್ಧರ ಪಥದಿ ಹೊದ್ದಿ ಶುದ್ಧತ್ವವನು ಶ್ರದ್ಧೆ ಸೇರದು ನಿನ್ನಲಿಉದ್ದುರುಟುತನದಿಂದ ಬಿದ್ದು ವಾದದ ಮಡುಹವದ್ದು ಸುಕೃತವ ಕಾಲಲಿಇದ್ದ ನಿಜಸ್ಥಿತಿುವಗೆ ಸಿದ್ಧವಾಗದುಯೆಂದು ನಿರ್ಧರಿಸಿ ನೀನೆ ದಯದಿ ಇಲ್ಲಿ 3ಅನಿಮಿತ್ತ ಬಂಧು ನೀನೆಂಬುದನು ಫಲುಗುಣನು ಮನದೊಳೆಣಿಸಿದುದಿಲ್ಲವೆಅಣುಮಾತ್ರದುಪಕಾರ ಜನರಿಂದ ನಿನಗುಂಟೆ ಮನಕೆ ದೂರ ನೀನಲ್ಲವೆವನಜಭವ ದಿಕ್ಪಾಲ ಮನುಗಳೈಶ್ವರ್ಯಗಳು ನಿನಗೆ ಗಣನೆಗೆ ಬರುವವೆಇನಿತು ಬ್ರಹ್ಮಾಂಡಗಳ ನೆನದು ನಿರ್ಮಿಸಿ ಬಳಿಕ ಕ್ಷಣದೊಳಳಿಸುವದಿಲ್ಲವೆ ನಿಜವೆ 4ನಿನ್ನ ಭಜಿಸುವ ಭಾವವಿನ್ನುಂಟೆ ಜಡಮತಿಗೆ ಅನ್ಯವಿಷಯದಿ ಮೋಹಿಸೆತನ್ನ ಮರೆದತಿದುಃಖದುನ್ನ ತದ ಸಂಸಾರ ವೆನ್ನದೆನ್ನುತ ದುಃಖಿಸೆನಿನ್ನ ನೆನಯದೆ ಬಹಳ ಜನ್ಮವೇಗದ ನದಿಯಲುನ್ನಿಸುವ ಕರ್ಮ ಹೊದಿಸೆಭಿನ್ನ ಬುದ್ಧಿಯಲೊಂದಿ ತನ್ನ ತಾನರಿಯದಿರೆ ನಿನ್ನಿಂದ ಮುಕ್ತನೆನಿಸೆ ನಿಲಿಸೆ 5ಚಲಿಸದಂದದಿ ಮನವ ನಿಲಿಸಿ ನಿನ್ನೊಳು ಬಾಹ್ಯವಳಿವ ಬಗೆುಲ್ಲವಲ್ಲನಳಿನನಾಭನೆ ನೀನು ಸುಲಭನೇ ಯೋಗಿಗಳು ಬಳಲುವರು ಕಾಣರಲ್ಲನಿಲುವೆ ಮನದಲಿ ನೀನೆ ಸಲಹೆಂದು ಭಜಿಸಿದರೆ ಗೆಲರೆ ಸಂಸೃತಿಯನೆಲ್ಲತಿಳುಹಿ ಸುಲಭದ ದಾರಿಯೊಳಗೆನ್ನ ನೀನಿರಲು ಬಳಲುವಿಕೆುಲ್ಲವಲ್ಲಾ ಲಲ್ಲಾ 6ಬಿನುಗು ಭೋಗವನುಂಡು ಜುಣುಗಿ ಮತ್ತದರಲ್ಲಿ ಮನವೆರಗಿ ಮುಳುಗುತಿಹುದುತನುವಿನಭಿಮಾನದಲಿ ನೆನಹು ತಗ್ಗದು ಮತ್ತೆ ಕನಲಿ ಮುರಿದೇಳುತಿಹುದುಅನುವರಿಯದಂಧತಮದಲಿ ತಾನು ನೆರೆಹೊಕ್ಕು ಘನದುಃಖಬಡುತಲಿಹುದುಇನಿತವಸ್ಥೆಯಲಿರುವ ಮನಕೆ ಸಿಕ್ಕಿರಲೆನ್ನ ದಿನಕರನೆ ಕೈವಿಡಿವುದು ಸೆಳೆದು 7ಧ್ಯಾನ ಧಾರಣೆುಂದ ನಿನ್ನ ಮೂರ್ತಿಯ ನಿತ್ಯ ಮಾನಸದಿ ನಿಲಿಸಬೇಕುಧ್ಯಾನಾಂಗ ನಿಯಮಗಳನಭ್ಯಾಸವಂ ಮಾಡಿ ತಾನು ತಾನಾಗಬೇಕುಏನೊಂದ ಕಂಡರೂ ನಾಮರೂಪವ ಬಿಟ್ಟು ನೀನೆಂದು ನಿಲ್ಲಬೇಕುಏನೆಂಬೆನಿವನೆಲ್ಲ ನೀನೆ ಸಾಧಿಸಿಕೊಟ್ಟು ದೀನನನು ಸಲಹಬೇಕು ಸಾಕು 8ಪರಮ ಕರುಣಾನಿಧಿಯೆ ಪರಿಪೂರ್ಣ ಪರಮೇಶ ಪರಮಸಂವಿದ್ರೂಪನೇಶರಣಜನಸುರಧೇನು ದುರಿತಭೂಧರಕುಲಿಶ ಕರಿವರನ ರಕ್ಷಿಸಿದನೇಮರೆಯೊಕ್ಕೆ ನಿನ್ನಡಿಯ ಮರವೆಯನು ಪರಿಹರಿಸು ಅರಿವಿನೊಳು ಪೊಗಿಸು ನೀನೆತಿರುಪತಿಯ ನೆಲೆವಾಸ ವರದ ವೆಂಕಟರಮಣ ಅರವಿಂದದಳನೇತ್ರನೆ ಅಜನೆ 9ಓಂ ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರ ಕಾಯ ನಮಃ
--------------
ತಿಮ್ಮಪ್ಪದಾಸರು
ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ ಇನಿತು ಶ್ರಮ ಕಳೆಯದಿರೆ ಘನತಿಲ್ಲ ನಿಮದಲ್ಲ ಪ ಹಿಂದೆ ನಿನ್ನ ಅಜ್ಞಾ ನಾ ಒಂದು ಮೀರಿದಕೆ ನೀ ಇಂದು ಭವಭವಣೆ ಬಹುಪರಿಯಿಂದಲೀ ತಂದು ನೋಯಿಸಿ ಮನಸುನಿಂದದಲೆ ಪರರಿಗೆ ಇಂದು ಮೊರೆಯನು ಹೋಗಿಸುವುದು ಥರವೇ ಹರಿಯೇ 1 ಒಂದು ತಿಳಿಯದಲೆ ನಾನು ಅಂದ ಮಾತಿಗೆ ಮನಸು ನೊಂದು ಈ ತೆರದಿ ಮಾಡುವುದು ರೀತೇ ಕಂದನಪರಾಧಗಳ ಒಂದು ನೋಡದ ಜನನಿ ಯಂದದಲಿ ನೀ ಪಾಲಿಸುವುದು ಸ್ವಾಮೀ ಪ್ರೇಮೀ 2 ಜಾತಮಗನನು ನಿಜತಾತ ಪರರಿಗೆ ತಾನು ಆತುರಾದಿಂದಲಿ ಮಾರಿದಂತೆ ದೂತರನು ಜಗದೇಕÀನಾಥ ನೀ ಪರಿಪರಿ ಫಾತಿಸಲು ಇನ್ನಾರು ಪೊರೆªರೈಯ್ಯಾ ಜೀಯಾ 3 ನಂಬಿದವರನ್ನು ನೀ ಅಂಬಿನಲಿ ಹೊಡೆವರೆ ಅರಿ ಪದುಮ ಗದಧರಪಾಣಿಯೆ ತುಂಬಿದ್ಹರಿಗೋಲಲ್ಲಿ ಇಂಬುಗೊಂಡಿರುವಾಗ ಅಂಬುಧಿಮುಣುಗಿಸುವದು ಥರವೇನೋ 4 ಯಾತಕೀಸೊ ಮಾತು ಸೋತೆ ನಾ ನಿನಗೀಗ ವಾತದೇವನ ತಾತ ಸೀತಾನಾಥಾ ನೀತ ಶ್ರೀಗುರುಜಗನ್ನಾಥ ವಿಠ್ಠಲರೇಯ ಮಾತು ಲಾಲಿಸಿ ಪಾಲಿಸುವದು ಇನ್ನಾ ಚೆನ್ನಾ 5
--------------
ಗುರುಜಗನ್ನಾಥದಾಸರು
ನಿನಗೆ ನಾ ಬ್ಯಾಡಾದನೆ ಘನಕೃಷ್ಣ ಮಾನಿನಿಯ ಕಿಂತ ಕೊನೆಯೆ ಪ ಎನ್ನ ಕಣ್ಣಿಗೆ ತೋರದೆ ಬೆನ್ನಲ್ಲಿ ಮಾನಿನಿಗೆ ನೀ ತೋರಿದ್ಯಾ ಮನ್ನಿಸುವ ನಿತ್ಯದಲಿ ಮುನ್ನ ನಿನಗೆ ನಾ ದ್ವೇಷಿಯಲ್ಲವೋ 1 ಒಳಗೆ ನೀನಿರುವಿ ಎಂದೂ ತಿಳಿದು ಬಲು ತೊಳಲಿ ಶರಣು ಬಂದರೆ ಪೊಳೆಯದಲೆ ಮನಸಿನೊಳಗೆ ಕೊಳಲು ಕರೆ ಬಾಲೇಗೆ ನೀ ತೋರಿದ್ಯಾ 2 ಸುಳ್ಳು ಇದು ಎಂದ್ಹೇಳಲು ಸಲ್ಲದೆಲೊ ಕಳ್ಳ ನೀನೆಂದು ಬಂದೆ ಪುಲ್ಲನಾಭನೆ ತೋರೆಲೊ ಮಲ್ಲನೆ ಗಲ್ಲ ಪಿಡಿದು ಮುದ್ದಿಪೆ 3 ನೀರದಸಮ ಕಾಂತಿಯ ನಾರಿಮಣಿ ಬೀರಿದಳೊ ಶ್ರೀಕೃಷ್ಣನೆ ಕರುಣಸಾಗರನೆಂಬೊದು ಮರೆತು ನೀ ದೂರ್ಹೋಗಿ ನಿಲ್ವರೇನೊ 4 ಮೂರು ವಯಸೆಂದ್ಹೇಳರೊ ಚಾರುತರಾಭರಣ ಇಟ್ಟಿಹನೆಂಬುರೊ ಈ ರೀತಿ ಅಬಲೆಯರು ನಿರುತದಲಿ ಧರೆಯೊಳಗೆ ಪೇಳ್ವುದರಿಯಾ5 ಎಂದಿಗಾದರು ನಿನ್ನನು ಪೊಂದದೆಲೆ ಇಂದಿರಾಧವ ಬಿಡುವನೆ ತಂದೆ ಶ್ರೀ ಮಧ್ವರಾಯ ಛಂದದಲಿ ಮುಂದೆ ತಂದೆಳೆವ ನಿನ್ನ 6 ನೀ ಬಿಟ್ಟರೇ ಕೆಡುವೆನೆ ಶ್ರೀ ಭೀಮನೊಬ್ಬ ಬಲ ಸಾಕೆಲೊ ಅಪಾರ ದೈವ ನಿನ್ನ ಕೊಬ್ಬುತ ತಬ್ಬಿ ನಾ ನಿನ್ನೊಲಿಸುವೆ7 ಮಾನದಿಂದಲಿ ತೋರೆಲೊ ನಿನಗಿದು ಘನತೆಯಲ್ಲವೊ ಜೀಯನೆ ಮುನ್ನ ಮಾಡ್ದುಪಕೃತಿ ಮರೆತೆಯಾ8 ಇನಿತು ವಂಚಿಸಿ ಪೋದರೆ ನಾ ನಿನ್ನ ಹೀನ ಗುಣದವನೆನ್ನುವೆ ಮನ್ನಿಸಿ ಸಲಹೋ ಬ್ಯಾಗ ಶ್ರೀ ನರಹರಿಯೆ ನಾ ಭಿನ್ನೈಸುವೆ9
--------------
ಪ್ರದ್ಯುಮ್ನತೀರ್ಥರು
ನಿನಗೆ ನೀನೆ ಕೃಷ್ಣ ದಯಮಾಡಿ ಸಲಹಯ್ಯಎನಗೊಂದು ಸಾಧನ ಲೇಸುಕಾಣಬಾರದು ಪ. ಸ್ನಾನಮಾಡಿಯೆ ನಿನ್ನ ಸಂಪಾದಿಸೇನೆಂದರೆಸ್ನಾನಮಾಡದೇ ಕಪ್ಪೆ ಸರ್ವಕಾಲದಲಿಧ್ಯಾನ ಮಾಡಿಯೇ ನಿನ್ನ ಸಂಪಾದಿಸೇನೆಂದರೆಧ್ಯಾನ ಮಾಡದೇ ಬಕಪಕ್ಷಿಯು ಸರ್ವದಾ 1 ಜಪವ ಮಾಡಿಯೆ ನಿನ್ನ ಕೃಪೆಗೊಳಗಾಗುವೆನೆನೆಜಪದಲ್ಲಿ ಮನಸ್ಸೆನ್ನಾಧೀನವಿಲ್ಲಉಪವಾಸವೇ ಉಚಿತ ಸಾಧನವೆಂಬೆನೆಉಪವಾಸವೇ ಇರದೆ ಉರಗನು ತಾ ಸರ್ವದಾ 2 ಸನ್ನ್ಯಾಸ ಸುಖಸಾಧನವು ಎಂತೆಂಬೆನೆಸನ್ನ್ಯಾಸಿಯಾಗಿರನೆ ರಾವಣನುಕನ್ಯಾದಾನವೆ ಮುಖ್ಯ ಸಾಧನವೆಂಬೆನೆಕನ್ಯಾದಾನವ ಕೊಡನೆ ಕಂಸಗೆ ಜರಾಸಂಧ 3 ದುರುಳ ದುರ್ಯೋಧನ 4 ಬಂಧುತ್ವವೇ ಗತಿ ಸಾಧವವೆಂಬೆನೆಬಂಧುತ್ವವಿರದೆ ಶಿಶುಪಾಲನಿಗೆಒಂದರಿಂದುಚಿತ ಕಾಣೆ ಹಯವದನರಾಯನೆಎಂದೆಂದಿಗೂ ದಾಸನೆಂದೆನಿಸೊ5
--------------
ವಾದಿರಾಜ
ನಿನಗೆ ನೀನೇ ಕೃಷ್ಣ ದಯಮಾಡಿ ಸಲಹೋಎನಗೊಂದು ಸಾಧನ ಲೇಶ ಕಾಣಬರದೋ ಪ ಸ್ನಾನವ ಮಾಡಿ ನಿನ್ನ ಸಮತಿಸುವೆನೆಂದರೆಸ್ನಾನ ಮಾಡದೆ ಕಪ್ಪೆ ಸರ್ವಕಾಲದಲೀಧ್ಯಾನವ ಮಾಡಿ ನಿನ್ನ ಸಮತಿಸುವೆನೆಂದರೆಧ್ಯಾನವ ಬಕ ಸರ್ವಕಾಲದಲೀ 1 ಉರಗ ಸರ್ವ ಕಾಲದಲೀ 2 ಸನ್ಯಾಸವೇ ನಿನ್ನ ಸಾಧನವೆಂದರೆಸನ್ಯಾಸವಿರದೇ ಆ ರಾವಣಗೇಕನ್ಯಾದಾನವೆ ನಿನ್ನಾ ಸಾಧನವೆಂದರೆಕನ್ಯಾದಾನ ಮಾಡಾನೆ ಕಂಸಗೆ ಜರಾಸಂಧ3 ದುರುಳ ದುರ್ಯೋಧನಗೆ 4 ಬಂಧುತ್ವವೇ ನಿನ್ನ ಸಾಧನವೆಂದರೆಬಂಧುತ್ವವಿರದೇ ಆ ಶಿಶುಪಾಲಗೆಒಂದೂ ಸಾಧನ ಕಾಣೇ ಉಚಿತಾವೇ ಶ್ರೀಕೃಷ್ಣಎಂದೆಂದಿಗೂ ನಿನ್ನ ದಾಸನೆನಿಸೊ 5
--------------
ವ್ಯಾಸರಾಯರು
ನಿನಗೇಕೆ ದಯಬಾರದೋ ಪ ನಿನಗಾಗಿ ಕಾದಿರುವೆ ಮನಸಾರೆ ವಂದಿಸುವೆ ವನಜಾಕ್ಷ ಕರುಣಾಳು ನೀನಲ್ಲವೇ ಅ.ಪ ಮನಸಲ್ಲಿ ಕ್ರಿಯೆಯಲ್ಲಿಯಾವಾಗಲೂ ತನುಧ್ಯಾನ ಮನವೆಲ್ಲ ನಿನಗೆ ಅರ್ಪಿತವಯ್ಯ [ಅನುದಿನವು ಕೈಪಿಡಿಯೋ ಮಾಂಗಿರಿರಂಗಯ್ಯ] 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನಗೇನು ಕಡಿಮೆ ಪೇಳೈ ಎನಗೆಲೊ ರಂಗಾ ಪ ಕ್ಷೀರಾಬ್ಧಿ ನಿನ್ನದು ಸಂಸಾರಾಬ್ಧಿ ಎನ್ನದಯ್ಯ ಮೂರೇಳವತಾರ ನಿನಗೆ ನೂರೆಂಟು ಎನಗೇ1 ನಿನಗೆ ಸುರಮುನಿಗಣ ಎನಗೆ ಭೂಸುರಗಣ ನಿನಗೆ ಸತ್ವದ ಗುಣ ಎನಗಾಸೆ ದ್ವಿಗುಣ2 ಜಗವು ಉದರವೆಂದು ಬಗೆದು ಪೋಪೆನೀ ಜಗದ ಸರ್ವಾರ್ಥವ ಮಿಗೆ ಬಯಸುವೆನಾ 3 ನಿನಗೆ ಭಕ್ತರೆ ಪ್ರಿಯ ಎನಗೆ ಮುಕ್ತಿಯೆ ದೈವ ನಿನಗೆ ರಕ್ಷಣೆನಾಮಾ ಎನಗೆ ಭಕ್ಷಣೆ ಕಾರ್ಯಾ 4 ವರಷಡ್ಗುಣವು ನಿನಗೆ ಅರಿಷಡ್ವರ್ಗವು ಯನಗೆ ದುರಿತ ತೃಪ್ತತೆ ಯೆನಗೆ 5 ನಿನಗೆ ನಾನೆಂಬುದಿಲ್ಲ ಎನಗೆ ನಾನೆಂಬುದುಂಟು ರಂಗನಾಥ ಶ್ರೀಶ ತುಂಗವಿಕ್ರಮ ನೀ 6 ಕ್ಷಮಿಸೆನ್ನಪರಾಧವ ವಿಮಲಾಂಗ ಮಾಧವ ಕಮಲಾಕ್ಷ ಪೊರೆದೇವ ರಾಮದಾಸನುತಾ 7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನಗೇನೊ ಭಕುತರ ಚಿಂತೀ ಘನಮಹಿಮ ಮಹÀದಾದಿ ಸುರವಂದ್ಯ ತಿಮ್ಮಾ ಪ ಪರಮೇಷ್ಟಿ ನಿನಪುತ್ರ ಕಿರಿಯ ಮಗನು ಜಗತ್ಪ್ರಾಣದೇವಾ ಹಿರಿಯ ಸೊಸೆಯು ವಾಣಿ ಕಿರಿಯು ಭಾರತೀ ದೇವಿ ಸುರರು ಪರಿವಾರ 1 ಸಕಲಲೋಕಕೆ ಅರಸು ಲಕುಮಿಕಾಂತನು ಎಂದು ನಿಖಿಳವೇದ ಸ್ಮøತಿಯು ಸಾರುತಿಹದೋ ಅಖಿಳವ್ಯಾಪಕನಾಗಿ ಸಕಲಸುರನರರಿಂದ ಭಕುತಿಪೂರ್ವಕÀ ಓಲಗವಕೈಕೊಂಬ ಸಮಯದಲಿ 2 ಸುರನಾಥ ನೀನಲ್ಲದಿತರ ದೇವತೆಯುಂಟೆ ಸರವೋತ್ತಮಾನೆಂಬನಾವನವನೋ ಸರಸಗುಣನಿಧಿಯೆ ಶ್ರೀ ಗುರುಜಗನ್ನಾಥವಿಠಲ ವರಭಾಗ್ಯ ಮಬ್ಬಿನಲಿ ಇರುವೊ ಸಮಯದಲಿ 3
--------------
ಗುರುಜಗನ್ನಾಥದಾಸರು
ನಿನಗ್ಯಾಕೆ ದುರ್ಮತಿ ಎಲೆ ಕೋತಿ ಪ ಅನುದಿನದಿ ನಾನು ನನದೆಂಬ ಅ.ಪ ಮೊದಲಿಂದಲಿ ಅವಿವೇಕದಿಂದ ಮೋಹಪಡುತ ನೀನಿರಲ್ ತುದಿಗೆಯಮನ ಬಾಧೆಯಹುದು ಬಲು 1 ಚಪಲಾತ್ಮರಾದವರಲಿ ಸೇರಿ ಚಾಟು ಮಾತುಗಳಾಡುವೇ ವಿಪರೀತ ಜ್ಞಾನವಿದಲ್ಲವೇ 2 ನಡೆನುಡಿಗಳಾದಿಯಾದ ಎಲ್ಲಕು ನಾಥ ನೀನೆಯೇನಲಾ ದೃಢವಾಗಿ ನಿನ್ನೊಳು ತಿಳಿದು ನೋಡೋ 3 ಸುರರು ಹಿತವಾಗದೆಂದಿಗು ನೀನಲ್ಲ ದೊರೆ 4 ಭಾರ ಗುರುರಾಮವಿಠಲ ಪೊರೆಯುವನು 5
--------------
ಗುರುರಾಮವಿಠಲ
ನಿನಗ್ಯಾಕೋ ಜನರಂಜನೆ | ವಣಾ ಭಂಜನೆ ಪ ಎಲ್ಲವಿದ್ಯವ ಸಾಧಿಸಿ ಮೆರೆಯಬೇಕೆಂಬ | ಬಲ್ಲವಿಕೆ ಹೆಮ್ಮೆಗೆ ಬೀಳುರೆ | ಯಳ್ಳಿಗೆ ಬೆಲ್ಲವ ಹುಯಲು ಹೋದಂತವಯ | ಸುಳ್ಳಿನ ಭ್ರಾಂತಿ ಕಳುವರೇ 1 ಹೆಣಗುತಿ ದೀಕ್ಷಿತನೆಂಬ ಮನ್ನಣಿಗ್ಯಾಗಿ | ದಣಿವರೆ ಕರ್ಮದಿ ದಣ್ಣನೆ | ಮುಣುಗುವವನ ತೆಲಿಮ್ಯಾಲ ಕಲ್ಲನ್ನಿಟ್ಟರೆ | ಗಣಿಸದೇ ದಾಟಲು ಬಲ್ಲನೆ 2 ಶರಣ ಕೊಳಬೇಕೆಂದು ಬೂದಿ ರುದ್ರಾಕ್ಷಿಯ | ಧರಿಸಿ ಕಾವಿಯ ಸೋಗು ಮಾಡುವರೆ | ಹರುಷದಿ ಖಜ್ಜಿಗೆ ಬಿಸಿನೀರು ಹೊಯ್ದಂತೆ | ಮರುಳೆ ಜನ್ಮ ಸಾಧನ ಕೂಡುರೇ 3 ಕಾಲನುಕೂಲವಿದ್ದ ಕೈಯಲಿ ಪರಗತಿ | ಕೀಲವರಿತು ಜ್ಞಾನ ಪಡೆವುದ | ಕೊಳ್ಳೆ ಹೋದ ಬಳಿಕ ಕೂಗುವ ಪರಿಯಲಿ | ಚಾಲವರಿದರಾಗ ಬಾರದು 4 ಒಂದೇ ನಿಷ್ಠೆ ಒಂದೇ ಮಾರ್ಗದಿ ಮನ | ದಂದುಗ ಬಿಟ್ಟು ಶರಣ ಹೊಕ್ಕರೆ | ತಂದೆ ಮಹಿಪತಿ ಸುತ ಪ್ರಭು ಬೀರುವ | ಮಂದನಾಗದೇ ತಿಳಿ ಇನ್ನಾದರೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಅಂಜಿಕೆಯು ಎನಗೇನುದೇವಾ ನಿನ್ನ ಭಕುತರಿಗಲ್ಲದಲೆ ಅಂಜುವೆನೆ ನಾನು ಪ ನಿನ್ನ ಬೈದವನಿಗೆ ಪುಣ್ಯಲೋಕಗಳುಂಟು ನಿನ್ನವರ ನಿಂದಕರಿಗನ್ಯಗತಿಯು ನಿನ್ನ ನಿಂದಿಸಲು ಫಲವ ನೀಡುವಿ ದೇವಾ ಜನ್ಮ ಜನ್ಮಕೆ ನಿನ್ನ ಜನ ದ್ವೇಷಸಲ್ಲಾ 1 ರೂಪಕೆಡಿಸಿದವಗಾಪಾರ ಗತಿಯನೆ ಇತ್ತಿ ಪಾಪಿಯವನಾದರೂ ಪುಣ್ಯಶಾಲೀ ಕೋಪದಿಂದಲಿ ಒದ್ದ ಭೃಗುಮುನಿಯನು ಕಾದ್ಯಾ ಮೋಸದ್ವೇಷವ ಮಾಡೆ ಪಾಪನರಕಾ ಅಹುದು 2 ಧಾತಜನಕನೆ ನಿನ್ನ ಘಾತಿಸಲು ಪರವಿಲ್ಲ ಯಾತಕಾದರು ನಿನ್ನ ದೂತರನ್ನಾ ಮಾತಿನಿಂದಲಿ ದೂರೆ ಪಾತಕವೆ ಬರುವುದು ನಿತ್ಯಲ್ಲ ಗುರುಜಗನ್ನಾಥ ವಿಠಲರೇಯಾ 3
--------------
ಗುರುಜಗನ್ನಾಥದಾಸರು