ಒಟ್ಟು 17313 ಕಡೆಗಳಲ್ಲಿ , 134 ದಾಸರು , 7747 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ರೂರ ವರದ ವಿಠಲ | ಕಾಪಾಡೊ ಇವಳಾ ಪ ಶ್ರೀಕೃಷ್ಣ ನಿನದಾಸ್ಯ ಚೊಕ್ಕ ಪಾಲಿಸುತಾ ಅ.ಪ. ವಿನಯಾದಿ ಗುಣ ಭರಿತೆ ಜನನಿ ಜನಕರಪ್ರೀತೆಮನೊ ಮೈಲಿ ಕಳೆಯುತಲಿ ಮನೊಮಾನಿ ಒಡೆಯಾ ಗುಣ ಉಳ್ಳವಳ ಮಾಡಿ | ಜಾಣ್ಮೆಯಲಿ ಸಂಸಾರಅನುಸರಿಸುವಂತೆಸಗೊ | ಅನಿಲಾಂತರಾತ್ಮಾ 1 ಭಕುತರಾ ಸುರಧೇನು | ಭಕುತಿ ಜ್ಞಾನವನಿತ್ತುಮುಕುತಿ ಪಂಥದಿ ಹಾದಿ | ಯುಕುತಳೆನಿಸೋಕಕುಲಾತಿಯನೆ ಕಳೆದೂ | ಶಕುತಿ ಇದ್ದುದ ತಿಳಿಸಿಸುಕರ ಸತ್ಸಾಧನವ | ಪ್ರಕಟವನೆ ಮಾಡೋ 2 ಪತಿಸುತರು ಹಿರಿಯರಾ | ಸತ್ಸೇವೆ ಕೈಕೊಂಡುಅತುಳ ಹರಿ ಆವರಲ್ಲಿ | ಸ್ಥಿತನೆಂದು ತಿಳಿದೂಹಿತದಿಂದ ಸೇವಿಸಲು | ಗತಿಯ ಆಹುದೆಂದೆಂಬಮತಿಯನೇ | ಕರುಣಿಸುತ | ಕೃತ ಕೃತ್ಯಳೆನಿಸೋ 3 ಕಷ್ಠ ನಿಷ್ಠುರಗಳಲಿ | ಇಷ್ಟಸಂತುಷ್ಠಿಯಲಿದೃಷ್ಟಿ ಸಮತೆಯ ಕೊಟ್ಟು | ಕಾಪಾಡೊ ಹರಿಯೇಸೃಷ್ಠಿ ಕರ್ತನು ಹರಿಯು | ಶ್ರೇಷ್ಠ ದೇವತೆಯೆಂಬ ಸ್ಪಷ್ಟಮತಿ ಕರುಣಿಸುತ | ಪ್ರೇಕ್ಷ ನೀನಾಗೋ 4 ಗಾಮಲ್ಗಣಿ ವರದ | ನೀವೊಲಿಯದಿನ್ನಿಲ್ಲಭಾವದಲಿ ಮೈದೋರಿ | ಭವದ ಸುತ್ತರಿಸೋಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಅಕ್ಷಯ ಗುಣಪೂರ್ಣ ಲಕ್ಷ್ಮೀರಮಣ ಪ ಕುಕ್ಷಿಯೊಳಗೆ ಜಗವಿಟ್ಟು ರಕ್ಷಿಪ ಸ್ವಾಮಿ ಈಕ್ಷಿಸಿ ಕರುಣ ಕಟಾಕ್ಷದಿ ಸತತ ಅ.ಪ. ಏಸೇಸು ಕಲ್ಪದಲ್ಲೂ ಈಶ ನೀನಿಹುದಯ್ಯ ದಾಸರು ಜೀವರ್ಕಳು ಕೃಪಾಳು ಕ್ಲೇಶ ಸುಖಂಗಳಿಗೆ ನೀನೆ ಸ್ವತಂತ್ರನೆಂದು ಸೂಸಿ ಪೇಳುತ್ತಲಿಹರು ಸಜ್ಜನರು ವಾಸುದೇವನೆ ಸರ್ವಾಸುನಿಲಯನೆ ಏಸೇಸು ಬಂದರು ದಾಸರ ಬಿಡದಿರು ನೀ ಸಲಹದೆ ಉದಾಸೀನ ಮಾಡಲು ಆಸರೆ ಯಾರಿನ್ನು ಶಾಶ್ವತ ವಿಭುವೆ 1 ನಿನ್ನಧೀನನÀವನು ನಿನ್ನ ದಾಸರ ಸೂನು ಎನ್ನುವ ಸಥೆಯಿಂದ ಮುಕುಂದ ನಿನ್ನನೆ ಬೇಡುವೆ ನಿನ್ನನೆ ಕಾಡುವೆ ಅನ್ಯಥಾ ಗತಿಗಾಣೆ ನಿನ್ನಾಣೆ ನಿನ್ನ ದಾಸರ ಪದವನ್ನು ಪಿಡಿದು ನಾ ನಿನ್ನನು ಸ್ತುತಿಸಿದೆನೆನ್ನುತ ಕೃಪೆಗೈದು ಬಿನ್ನಪ ಲಾಲಿಸಿ ಬನ್ನವ ಕಳೆದು ಘನ್ನ ಭಕುತಿಯಿತ್ತು ಧನ್ಯನ ಮಾಡೊ 2 ಶರಣರ ಮಹದೇವ ಶರಣರ ಬಿಡದೆ ಕಾವ ಶರಣರ ಉದ್ಧಾರ ಗಂಭೀರ ಶರಣ ರಕ್ಷಾಮಣಿ ಶರಣ ತ್ರಿದಶ ತರು ಶರಣ ಸುರಧೇನು ಎನಿಸಿನ್ನು ನಿರುತದಿ ಪೊರೆಯುವ ಬಿರುದಗಳರಿತು ಶರಣೆಂದು ನಿನ್ನಯ ಚರಣ ಕಮಲವನು ಮರೆಹೊಕ್ಕೆನು ಕಾಯೊ ಪರಮ ದಯಾಕರ ಕರಿರಾಜವರದ ಶ್ರೀಕಾಂತ ನಿಶ್ಚಿಂತ 3
--------------
ಲಕ್ಷ್ಮೀನಾರಯಣರಾಯರು
ಅಕ್ಷಯವಾಗುವುದು ನಿಮಗೆ ಪ ಕುಕ್ಷಿಯೊಳೆಲ್ಲವ ಪೊಂದಿರುವಾತನ ಕುಕ್ಷಿಗೆ ಹಿತಕರ ಭಿಕ್ಷೆಯೆಂದೆನ್ನುತ ಅ.ಪ ಹೊಟ್ಟಿಗೆ ಇಲ್ಲದೆ ಬಂದಿಲ್ಲ ಕೊಟ್ಟರೆ ಪುಟ್ಟದ ಕಟ್ಟನು ತರುವೆವು ಅಷ್ಟು ಪಾಪಗಳ ಮಾಡಲು ಕೃಷ್ಣ ದಯೆಯ ತಂಬಿಟ್ಟನು ಕೊಡುವೆವು 1 ಶ್ರಾವಣ ಮಾಸದ ಶನಿವಾರ ಯಾವನು ಕೊಡುವನೊ ಮನಸಾರ ಜೀವನ ಕ್ಲೇಶದ ಪರಿಹಾರ ಭಾವದಿ ಪೊಂದುವ ಸುಖಸಾರ 2 ಮೋಸವಿಲ್ಲದವು ದಾಸ ಪ್ರಸನ್ನ ತೋಷಣ ವೈಭವ ಶ್ರೀಶನೆ ಬಲ್ಲನು ಸಾಸಿರ ಸಾಸಿರ ನಾಣ್ಯದ ಕಾರ್ಯವ ವೀಸಕೆ ಮಾಡುವ ದಾಸರ ಗುಂಪಿದು3
--------------
ವಿದ್ಯಾಪ್ರಸನ್ನತೀರ್ಥರು
ಅಕ್ಷಯಾತ್ಮ ಹರಿ ಜೈ ಜೈ ರಂಗ ಪಕ್ಷಿವಾಹನಾ ಮಾಂಗಿರಿರಂಗ ಪ ಅಕ್ಷಯ ಸುಖಕರ ಜೈ ಜೈ ರಂಗ ಸಿರಿ ಮಾಂಗಿರಿರಂಗ ಅ.ಪ ಉರಗಶಯನ ಹರಿ ಜೈ ಜೈ ರಂಗ ಸರಸಿಜಲೋಚನ ಮಾಂಗಿರಿರಂಗ ಉರುತರ ಮಹಿಮಾ ಜೈ ಜೈ ರಂಗ ಸನ್ನುತ ಮಾಂಗಿರಿರಂಗ 1 ಮಧುಮೃದು ವಚನಾ ಜೈ ಜೈ ರಂಗ ಬುಧಜನರಂಜನ ಮಾಂಗಿರಿರಂಗ ಮಧುರನಾಯಕ ಜೈ ಜೈ ರಂಗ ಮಧುದೈತ್ಯಾಂತಕ ಮಾಂಗಿರಿರಂಗ 2 ಓಂ ನಮೋ ಕೇಶವ ಜೈ ಜೈ ರಂಗ ದೀನದಯಾಪರ ಮಾಂಗಿರರಂಗ ಶ್ರೀನಾರಾಯಣ ಜೈ ಜೈ ರಂಗ ಸಿರಿ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಅಕ್ಷವಿದ್ಯಾನಿಪುಣ ಅಕ್ಷಯಾತ್ಮಕ ಸುಗುಣ ಅಕ್ಷಯತರ ಸುವಚನ ಲಸಿತವದನ ದ್ಯೂತೋದ್ಯೋಗತರ ಖ್ಯಾತ ಸುಗುಣೋಪೇತ ದೈತ್ಯ ಸಂಕುಲಘಾತ ಪ್ರಾಣನಾಥ ಸುರಸಿದ್ಧ ಸಂಪ್ರೀತ ಮಾರತಾತ ಗೋಪಾಲ ಕುಲರತ್ನದೀಪ ಗೋಕುಲ ಶರಣ ಗೋಪಿಕಾಜನಮನದ ತಾಪಶಮನ ಲೀಲಾ ವಿಭೂತಿಯುಗನಿರತ ಸುಹಿತ ನೀಲಾಂಬರಾವರಜ ರಾಜರಾಜ ಕಾಲಾಂಬುದಾಕಾರ ಖಲಕುಠಾರ ಪಾಹಿಮಾಂ ಶ್ರೀಶೇಷಗಿರಿವಿವಿಭಾಕ್ಷ
--------------
ನಂಜನಗೂಡು ತಿರುಮಲಾಂಬಾ
ಅಂಗಜಪಿತ ಗೋವಿಂದನಿಗೆ ಪ ಗಂಗಾ ಜನಕಗೆ ರಂಗನಾಥನಿಗೆ ಶೃಂಗಾರಮೂರ್ತಿ ಕೇಶವಗೆ ಅ.ಪ ಭೂಮಿಯನುದ್ಧರಿಸಿದವಂಗೆ ಆ ಮಗು ಪ್ರಹ್ಲಾದನ ಕಾಯ್ದಂಥ ಸ ವಾಮನಮೂರ್ತಿ ಉಪೇಂದ್ರಗೆ 1 ಪರಶುರಾಮನಿಗೆ ಸೀತಾರಾಮಗೆ ವರವೇಣುಗಾನಲೋಲನಿಗೆ ಧರಣೀಭಾರ ನಿಳುಹುವಗೆ2 ಪಾಪನಿವಾರಿಸಿಶಿವನಂಕಾಯ್ದಾ ಶ್ರೀಪತಿಪಾವನಮೂರುತಿಗೆ ತಾಪತ್ರಯಹರ ತುಲಸೀಮಾಲಿಗೆ ತಾಪಸನುತ ಜಾಜೀಶನಿಗೆ3
--------------
ಶಾಮಶರ್ಮರು
ಅಂಗನೇರು ಕೂಡಿ ಸ್ವರ ಸಂಗೀತದಿಂದಲೀಗ ಚಾರು ಚರಣಕೆ ಹರುಷದಿಂ ಬೇಗ ಮಂಗಳಾತ್ಮಕನಾದ ಶ್ರೀ ನರಶಿಂಗ ರಾಯನಿಗೆ ಶೃಂಗಾರದಿಂ ಜಯಮಂಗಳವೆಂದು ಪಾಡಿರೆ 1 ನೀನೆ ಗತಿಯೆಂದ ಮಾನಿನಿಯಳ ಮಾನ ಕಾಯ್ದವಗೆ ಸಾನುರಾಗದಿ ಧ್ಯಾನಿಸುತಲಿ ಶ್ರೀನಿವಾಸನಿಗೆ ಬಲು ಛಂದದಿ ಜಯ ಮಂಗಳವೆಂದು ಪಾಡಿರೆÉ 2 ಪೊಂದಿದ ಜನರನು ತ್ವರದಿ ಪೊರೆಯುವ ನಂದಕಂದನಿಗೆ | ವಂದಿಸಿ ಕರುಣದಿ ಸಿಂಧು ಶಯನಗೆ | ಆನಂದದಿಂದಲಿ ಶ್ರೀ ಶಾಮಸುಂದರಗೆ ಘನ ಮೋದದಿಂ ಜಯ ಮಂಗಳವೆಂದು ಪಾಡಿರೆÉ 3
--------------
ಶಾಮಸುಂದರ ವಿಠಲ
ಅಂಗವ ಶಿಂಗರಿಸೊ ಶ್ರೀ ರಾಮಗೆ ಪ. ರಥವೆಂದು ಮಂಗಳ ಮಹಿಮನ ಉಂಗುಟದಿಂದ ಬಂದ ಗಂಗೆಯ ಸ್ನಾನದಿ ಹಿಂಗಿಸು ಭವವೆಂದು ಅ.ಪ. ಗಂಗಾಜನಕನ ಸ್ಮರಿಸುತ ನಿನ್ನ ಅಂಗವನುಜ್ಜಿ ಕಲಿಮಲ ತೊಳೆದು ಭಂಗ ತರದ ಪರಿ ರಂಗುರಂಗುಗಳ್ವಸ್ತ್ರ ರಂಗಗೆ ಪೀತಾಂಬರವೆಂದು 1 ಗೋಪೀ ಚಂದನ ಲೇಪಿಸುತಂಗಕೆ ಶ್ರೀಪ ವಲಿವನೆಂದ್ಹರುಷದೊಳು ಧೂಪಾರತಿ ಅಂಗಾರದಕ್ಷತೆ ಸೊಬಗ ಶ್ರೀಪತಿ ನೋಟಕೆ ಭೂಪನಾಗಿಹೆನೆಂಧು 2 ಮಂಗಳದನ್ನ ವೀಳ್ಯವ ಮೆದ್ದು ತನ್ನ ಅಂಗನೆಯೊಳು ಅನಂಗಜನಕನ ರಂಗನಲೀಲೆಯಂದದಿ ಹರುಷಿಸೀ ಇಂಥಾ 3
--------------
ಸರಸ್ವತಿ ಬಾಯಿ
ಅಂಚಿತ ವಿಕ್ರಮನೆ ಪ ಪೊರೆಯೊಯೆನ್ನ ಅ.ಪ ದುಷ್ಟರೊಳಗೆ ಸೇರಿಕೊಂಡು ಭ್ರಷ್ಟ ಮಾಡುತಿಹರೈ ಶ್ರೇಷ್ಠನು ನಾನೆಂಬಜ್ಞಾನವ ಕೊಟ್ಟು ಕೆಡಿಸುವರೈ 1 ಹಾಸ್ಯಗಾರರಾಟ ನಿಲಿಸು ನೀ ಸಲಹಬೇಕು ಎನ್ನಗುರುವೆ 2 ತಂದೆರಾಮಚಂದ್ರಗಾಗಿ ಮಂದಮತಿ ರಾವಣನ ಮಂದಿ ಎಲ್ಲವನ್ನು ಕೊಂದು ದಂದುಗಾವ ಬಿಡಿಸಿದೆ 3 ಪಾತಕ ದಶಕಂಠನ ಭೂತಗಳ ಪಾಲು ಮಾಡಿಸಿ ಖ್ಯಾತಿಯನ್ನು ಪಡೆದೆ ನೀಂ 4 ಗುರುರಾಮ ವಿಠಲಗೆ ಪರಮಾಪ್ತ ಹನುಮಂತ 5
--------------
ಗುರುರಾಮವಿಠಲ
ಅಚ್ಚರಿಯೊಳಚ್ಚರಿಯು ಅಚ್ಯುತನ ನಾಮವಿದು ತುಚ್ಛ ಬುದ್ಧಿಯ ಬಿಟ್ಟು ಎಚ್ಚೆತ್ತು ನೋಡೊ ಪ ನಿಧಿಯು ತನ್ನೆದುರಿಗಿರೆ ವದರಿ ದುರ್ಯೋಧನನು ಮದಡನಾದನು ಬರಿದೆ ದಳವ ಕೊಂಡು ಸದಮಲಾತ್ಮನ ದಿವ್ಯ ಪದವನರ್ಜುನ ಪಿಡಿದು ಮುದದಿ ಭಾಗ್ಯವ ಪಡೆದನದ್ಭುತವ ನೋಡ 1 ಹರಿಯ ಯೋಗದ ಸಿರಿಯು ಇರುವ ನಿಜವರಿಯದೆ ಕುರುಡನಣುಗನು ಜರಿದು ಹಾಳಾದನು ಉರುತರದ ಭಕ್ತಿಯಿಂದೆರಗಿ ಕರಗಳ ಮುಗಿದು ನರ ತನ್ನ ಹೆಸರನ್ನು ಸಾರ್ಥಕವಗೈದ 2 ನೀಚಯುಕ್ತಿಗಳಿಂದ ಗೋಚರಕೆ ಬಹನಲ್ಲ ವಾಚಾಮಗೋಚರನು ಶ್ರೀಕಾಂತನು ಕೀಚಕಾರಿ ಪ್ರಿಯನ ಶ್ರೀ ಚರಣ ಭಕ್ತಿ ಭವ-ಮೋಚನಕೆ ಸೂಚನೆಯು ಆಚರಿಸಿ ನೋಡೋ 3
--------------
ಲಕ್ಷ್ಮೀನಾರಯಣರಾಯರು
ಅಚ್ಯುತ ಅಡಿಗಡಿ ಗೆಚ್ಚರಿಕ್ಹೇಳುತಾನೋ ಪ ಮೆಚ್ಚಿ ಬಿಡದೆ ಎನಗೆಚ್ಚರಿಕ್ಹೇಳುತಾನೋ ಹುಚ್ಚರಾಗಿ ಇಹ್ಯಮೆಚ್ಚಲು ಮುಂದೆಮ ಕಿಚ್ಚುಕಾಣೆನುತಾನೋಅ.ಪ ನಿಂದೆ ಬಿಡೆನ್ನುತಾನೋ ಜಗವಿದು ಕುಂದುವುದೆನುತಾನೋ ನಿನಗಿದು ಒಂದು ಇಲ್ಲೆನುತಾನೋ ಬಂದದ್ದು ತಿಳೀದಿರೆ ಮುಂದೆ ನಿನಗೆ ಭವಬಂಧ ಬಿಡದೆನುತಾನೋ 1 ನಿಶ್ಚಲಾಗೆನ್ನುತಾನೋ ಮನ ಬಹು ಸ್ವಚ್ಛಮಾಡೆನ್ನುತಾನೋ ತನು ಮುಚ್ಚಿ ಭಜಿಸೆನ್ನುತಾನೋ ಬಚ್ಚಿಟ್ಟು ಭಜಿಸಲು ಇಚ್ಛೆಯಂತಿರ್ದು ನಿನ್ನ ಮೆಚ್ಚಿಕೊಂಬೆನ್ನುತಾನೋ 2 ಮರೆವು ತಾರೆನುತಾನೊ ನಿಚ್ಚವಾ ದರಿವು ತಿಳಿಯೆನುತಾನೋ ಅರಿವಿನ ಕುರಹು ಕಾಣೆನುತಾನೋ ಪರಮ ಶ್ರೀರಾಮನ ತರಣಿ ಕಂಡು ಹರಷದ್ಹಾಡೆನುತಾನೋ 3
--------------
ರಾಮದಾಸರು
ಅಚ್ಯುತ ಅನಂತ ಗೋವಿಂದಾಯ ಕಾಯ ಪೂಜಾ ಪ ದ್ವಾದಶನಾಮದ ನಾರಾಯಣಾರ್ಚನೆ ದ್ವಾದಶಬಾಧೆಯ ಕಳೆಯುವ ಕೀರ್ತನೆ ಅ.ಪ ಕೇಶವಾಯ ನಮಃ ಓಂ ಕೇಶವಾಯ ನಮಃ ಕ್ಲೇಶವು ಕರಗಿ ಈಶನು ಮನದಲಿ ನಿಲ್ಲುವನು 1 ಮಾಧವಾಯನಮಃ ಓಂ ಮಾಧವನೆನೆ ಕ್ರೋಧವು ಅಳಿದು ಮೋದದಿ ಮನ ಮಿಡಿಯುವುದು 2 ವಿಷ್ಣುವೇನ್ನಮಃ ಓಂ ವಿಷ್ಣುವೆನ್ನಿರಿ ಸ- ಕಾಯ ಕರ್ಮನಿಷ್ಠೆಯಲಿ 3 ಮಧುಸೂದನಾಯನಮಃ ಓಂ ಮಧುಸೂಧನಾಯ ಮದಗಳೆಂದೂ ಮಥಿಸೋಡುವವು ತಿಳಿಯ 4 ತ್ರಿವಿಕ್ರಮಾಯನಮಃ ಓಂ ತ್ರಿವಿಕ್ರಮನೆನಲು ಭವಿಯುಕಾಮಮೋಹತೊಲಗಿ ಕೋಮಲನಾಗುವನು 5 ಶ್ರೀಧರಾಯನಮಃ ಓಂ ಶ್ರೀಧರಾಯವೆನ್ನಿ ಸೋದರತ್ವಮೂಡಿ ಮತ್ಸರ ಮರೆಯುವುದು 6 ಹೃಷಿಕೇಶಾಯನಮಃ ಓಂ ಹೃಷಿಕೇಶನೆನು ಹುಸಿಯನಾಡದ ಲೋಭರಹಿತ ತನುವೀಯುವನು 7 ಪದ್ಮನಾಭಾಯನಮಃ ಓಂ ಪದ್ಮನಾಭನೆನಲು ಛದ್ಮವೇಶನ ದ್ವಾದಶಾಪೇಕ್ಷೆಗಳೀಡಾಡುವವು 8 ದಾಮೋದರಾಯ ನಮ:ಓಂ ದಾಮೋದರೆಂದರೆ ಆಮೋದದಿ ಮನ ಶ್ರೀಹರಿಪದಕೆರಗುವುದು9 ವಾಮನಾಯನಮ:ಓಂ ವಾಮನನೆಂದರೆ ಅಮಮ! ನಿಲ್ಲುವ ಕಣ್ಮುಂದೆ ನೆಲಮುಗಿಲೊಂದಾಗಿ 10 ಆಳ್ವಾರಾಚಾರ್ಯರಾದಿ ಗುರುಗಳು ಪೇಳಿದ ಈ ಮಂತ್ರ ಸೂತ್ರ 11 ಅನುದಿನ ಬಿಡದೆ ಮನದಲಂದರು ಸಾಕು ಸನುಮತದಲಿ ಕಾಯ್ವ ನಮ್ಮ ಜಾಜಿಕೇಶವ 12
--------------
ನಾರಾಯಣಶರ್ಮರು
ಅಚ್ಯುತನ ಧ್ಯಾನದೊಳಿರಿ ಅನುದಿನದಿ ಪ ಗುಚ್ಚರಿಸುವೆ ಕಲಿಯ ತುಚ್ಛ ದುರ್ಗುಣಗಳ ಅ.ಪ ನಿತ್ಯ ಕರ್ಮಕೆ ಕ್ಷುಧೆಯು ತಾ ಬಾಧಿಸುತಿಹುದು 1 ವೊಲಿದಂತೆ ನಡೆದು ನಿಜ ಸುಖದಾಸೆಯಿಲ್ಲ 2 ಸಾರ ವರಿತ ಮಹಾತ್ಮರ ಸಂಸರ್ಗವಿಲ್ಲ 3 ನೀತಿ ಪೇಳ್ವರಿಗೆ ಘಾತಕವೆಣಿಸುವುದು 4 ಪರ ಗತಿಯ ಸಾಧನೆಗಳೀ ಕಾಲದೊಳಿಲ್ಲ 5 ಸಾರ ನರಿಯದವನೆ ಪಿತೃಗಳಿಗೆ ವಿರೋಧ 6 ದ್ಗುರುವನ್ನು ಸೇರಿದಡವನೆ ನಿರ್ದೋಷ 7 ಕೃತ್ಯದಿ ನಡೆಯಲವಗಹುದು ಇಷ್ಟಾರ್ಥ 8 ಶ್ರೀ ಗುರುದೇವ ಸದಾನಂದಮಯನು 9
--------------
ಸದಾನಂದರು
ಅಚ್ಯುತಾನಂತನೆ ನಿನ್ನ ನೆಚ್ಚಿಕೊಂಡಿಹೆನು ಇಚ್ಛಾರೂಪ ಸ್ವಚ್ಛಾಭೂಪ ಸ್ವೇಚ್ಛೋಪಾತ್ತ ಸಗುಣ ರೂಪ ಪ. ನಾಮತ್ರಯ ಮಂತ್ರ ಜಪಿಸಿ ಸೋಮಧರನು ತಾನು ಆ ಮಹಾ ಹಲಾಹಲವನು ನೇಮದಿಂದ ಜಯಿಸಿರುವನು ಕಾಮಚಾರ ಕುಮತಿ ಮನುಜರಾ ಮಾಯಾದಿಗಳನು ಶ್ರೀಮಹೀಶ ಸಿಂಧುವಾಸ ನೀ ಮನ್ನಿಸಲು ನಿಲುವದೇನು 1 ನಗಧರ ನಿನ್ನಂಘ್ರಿಕಮಲಯುಗಳ ಒಂದೆ ಸಾಕು ಎನಗೆ ತ್ರಿಗುಣ ವಿಷಯವಾದ ಸರ್ವ ನಿಗಮಕರ್ಮವ್ಯಾಕೊ ಅಗಣಿತಾತ್ಮ ಅಮೃತಾಂಧಸರ ಮಗುವಿನಂತೆ ಪೊರೆವಿ ನಗುತಲೆನ್ನ ನೀ ಕಾಯ್ದದಕೆ ಪೊಗಳಲು ನಾ ಶಕ್ತನಹುದೆ 2 ಪೋರ ಕೆಟ್ಟುಹೋದನೆಂದು ಊರಜನರು ನುಡಿದಾ ಕ್ರೂರ ಮಾತ ಕೇಳಿ ತಾಳಲಾರದೆ ನಾ ಬಂದು ವಾರಿಜಾಕ್ಷ ನಿನ್ನ ಪದಕೆ ದೂರ ಪೇಳಲಂದು ಶ್ರೀರಮಣಿಯ ಸಹಿತಲೆನಗಾಧಾರವಾದಿ ದೀನಬಂಧು 3 ಇಂದ್ರಿಯಂಗಳೆನ್ನ ವಿಷಯಬಂಧದಿಂದ ಬಿಡಲು ಒಂದು ಕರ್ಮದಲು ಸಾಂಗದಿಂದಲೆನಗೆ ನಿಲಲು ಇಂದಿರೇಶ ಈ ಕಾರಣದಿ ಕುಂದಮನಕೆ ತಾರದಿರೊ ತಂದೆ ನೀನೆ ಶರಣನೆಂದು ಹೊಂದಿರುವದನೆಣಿಸಿ ಸಲಹೊ 4 ನಾಮಸ್ಮರಣವಿತ್ತು ಕಾಯಿ ಕಾಮಿತಾರ್ಥದಾಯಿ ನೇಮ ಒಂದು ನಡೆಸದಂಥ ಪಾಮರನಾಗಿಹೆನು ಸೋಮಧರನ ಶುದ್ಧಿಕರಿಸ ಭೂಮಿತೀರ್ಥ ಜನಕರಾಮಕೃಷ್ಣ ವೇದವ್ಯಾಸ ಸ್ವಾಮಿ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಅಂಜನಾಸುತ ವರದ | ವಿಠಲ ಪೊರೆ ಇವನಾ ಪ ಕಂಜಜನಯ್ಯ ಹರಿ | ಸಂಜೆ ಚರಹರನೇ ಅ.ಪ. ಕರ್ಮ | ಮಾಡಿ ಮಾಡಿಸುತಾಮತಿರಹಿತ ಜೀವನಿಗೆ | ಫಲ ಎಂಬ ತೆರಮಾಳ್ವೆಕೃತುಭುಜನೆ ಈ ತರಳ | ನುದ್ಧಾರಗೈಯ್ಯೊ 1 ಆದ್ಯಂತರಹಿತ ಸ | ದ್ಬುದ್ಧಿಗಳ ಪ್ರೇರಕನೆಶ್ರ್ರದ್ಧಾಳು ಎನಿಸಿವನ | ಮಧ್ವಮತದಲ್ಲೀಪದ್ಧತಿಯ ಪ್ರಕಾರ | ಬದ್ದನಾಗಿಹದಾಸಶುದ್ಧ ದೀಕ್ಷೆಯಲಿವನ | ಉದ್ಧರಿಸೋ ದೇವ 2 ಉತ್ತಮಾಧಮರೆಂಬ | ತತ್ವ ತರತಮ ತಿಳಿಸಿಆರ್ಥಿಯಿಂದಿವನ ಭಾವ | ಉತ್ತರಿಸೊ ಹರಿಯೇ |ಕತೃ ಸರ್ವಕೆ ನೀನೆ | ಅತ್ಯಂತ್ಯ ಆಪ್ತ ತಮಮತ್ತೊಬ್ಬರಿಲ್ಲಿವಗೆ | ಸ್ತುತ್ಯ ಶ್ರೀಹರಿಯೇ 3 ಕಂಸಾರಿ ತವತಾಮಶಂಸನಕೆ ಎಡೆಗೊಟ್ಟು | ಸಲಹ ಬೇಕಿವನಾಅಂಶ ಅವತಾರಗಳ | ಶಂಸನದಿ ತವಪಾದಪಾಂಸುವನೆ ಭಜಿಪಂಥ | ಸನ್ಮತಿಯನೀಯೊ 4 ಸತ್ಸಂಗ ದೊರಕಿಸುತ | ಕುತ್ಸಿತರ ದೂರಗೈಮತ್ಸ್ಯಧ್ವಜ ಪಿತ ಶ್ರೀ | ವತ್ಸಲಾಂಛನನೇನಿತ್ಯ ತವ ಸಂಸ್ಮರಣೆ | ಇತ್ತುಪಾಲಿಪುದಿವನಚಿತ್ಸುಖಪ್ರದ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು