ಒಟ್ಟು 713 ಕಡೆಗಳಲ್ಲಿ , 82 ದಾಸರು , 594 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮನಾಮ ಕೀರ್ತನೆ ಮಾಡೊ ಮುದಗೊಡೊ ಪ ಹೃತ್ತಾಮರಸದಿ ನೋಡೋ ಕೊಂಡಾಡೊ ಅ.ಪ ವರಋಷಿ ಎನ್ನಿಸಿದಾತನ ಮರುತಾತ್ಮಜಾದಿ ನುತನ ಸುಚರಿತನ 1 ಬ್ರಹ್ಮಾದಿದೇವ ವಂದ್ಯನಾ ರಾಜೇಂದ್ರನಾ 2 ಭರತ ಶತೃಘ್ನ ಲಕ್ಷ್ಮಣ ಸೇವ್ಯನ ಸರಸಿಜಗಾಪ್ತಜ ಭಾವ್ಯನ ನೃಪಾಗ್ರಗಣ್ಯನಾದನ ವಿನೋದನಾ 3
--------------
ಗುರುರಾಮವಿಠಲ
ರಾಯ ಕಳುಹಿದ ರಂಗ ರಾಯ ಕಳುಹಿದ ಪ್ರಿಯಭಾವೆ ರುಕ್ಮಿಣಿಯರಪ್ರೇಮಭಾಳೆ ನಿಮ್ಮ ಮ್ಯಾಲೆ ಪ. ಕೇಳೋರಾಯ ನಿಮ್ಮ ಮ್ಯಾಲಿ ಬಹಳ ಪ್ರೇಮಕೃಷ್ಣರಾಯ ಹೇಳಲ್ಪಶವೆಮುಯ್ಯ ತಂದು ಏಳು ದ್ವಾರ ದಾಟಿ ಬಂದು1 ಚಂಚಲಾಕ್ಷಿ ಅರಸಿಯರು ನಿಮಗೆ ಪಂಚಪ್ರಾಣ ಕೃಷ್ಣರಾಯ ಕೆಂಚಿ ರುಕ್ಮಿಣಿಮುಯ್ಯ ತಂದುಮುಂಚಿ ಬಾಗಿಲಮನೆಯೊಳು ಇಳಿದರು 2 ಕುಂತಿದೇವಿಯರ ಅರಮನೆಗೆ ಚಿಂತಾಮಣಿಯ ತಾನೆ ಬಂದ ಎಂಥ ಸುಕೃತರಾಯ ನಿಮ್ಮಇಂಥ ಭಾಗ್ಯ ಎಲ್ಲಿ ಕಾಣೆ 3 ಸುದ್ದಿ ಕೇಳಿ ಧರ್ಮರಾಯ ಗದ್ಗದಿ ನುಡಿಯನೆ ನುಡಿದಾನಮುದ್ದು ಮುಖವ ನೋಡಿಪಾದಕೆ ಬಿದ್ದು ಧನ್ಯರಾದೆವಮ್ಮ 4 ಅಂದ ಮಾತು ಕೇಳಿರಾಯ ನಂದ ಬಟ್ಟು ನಂದ ಭಾಷ್ಪಬಿಂದು ಉದುರಿ ಬಿಗಿದು ಕಂಠಛಂದದಿ ರೋಮಗಳು ಉಬ್ಬಿ 5 ಇಂದು ಭದ್ರೆ ದ್ರೌಪತಿಗೆ ತಂದರಮ್ಮ ರುಕ್ಮಿಣಿ ಮುಯ್ಯಆನಂದದಿಂದ ಭಾವೆ ಕೃಷ್ಣಇಂದು ನಿಮ್ಮ ಅರಮನೆಗೆ 6 ಎಷ್ಟು ಸುಕೃತರಾಯ ನಿಮ್ಮ ಧಿಟ್ಟ ರಾಮೇಶತಾನೆ ಬಂದ ಅಷ್ಟ ಸೌಭಾಗ್ಯದ ಮುಯ್ಯ ಶ್ರೇಷ್ಠ ತೋರೋದಮ್ಮ ಸಭೆಯು 7
--------------
ಗಲಗಲಿಅವ್ವನವರು
ರುದ್ರದೇವರು ಸಾಂಬ ಸದಾಶಿವ | ಸಾಂಬ ಶಿವ ಪ ಶಂಭೋಶಂಕರ | ಶಶಾಂಕಶೇಖರ | ಸಾಂಬ ಶಿವ ಅ. ಪ. ಗಂಗಾಧರ ವರ | ಅಂಗಜ ಮದಹರ | ಸಾಂಬ ಶಿವ || ಸಂಗರಹಿತನೇ ಭು| ಜಗಭೂಷ ವರ | ಸಾಂಬ ಶಿವ 1 ವ್ಯೋಮಕೇಶಭವ | ಭಕ್ತಪರಾಯಣ | ಸಾಂಬ ಶಿವ || ವಾಮದೇವ ಪ್ರಮ | ಥಾಧಿಪ ಶಂಕರ | ಸಾಂಬ ಶಿವ2 ಖಂಡ ಪರಶು ಮಾ | ರ್ತಾಂಡಸಮಪ್ರಭ | ಸಾಂಬ ಶಿವ || ದಂಡಧರ ಹರ | ಮೃತ್ಯುಂಜಯ ಭೂ | ಸಾಂಬ ಶಿವ3 ಜಟಾ ಮಕುಟ ಸುರ | ತಟನೀ ಧರ ವರ | ಸಾಂಬ ಶಿವ || ಸ್ಫಟಿಕಸನ್ನಿಭ | ಖಲತ್ರಿಪುರಾಂತಕ | ಮೃಡ ಸಾಂಬ ಶಿವ 4 ನಕ್ತಂಚರ ಹರ | ಶತ್ರುಭಯಂಕರ | ಸಾಂಬ ಶಿವ || ಭಕ್ತವಶಂಕರ | ಭಜಕಸುಖಂಕರ | ಸಾಂಬ ಶಿವ 5
--------------
ವೆಂಕಟ್‍ರಾವ್
ಲಕ್ಷ್ಮೀದೇವಿ ದಾಸನಲ್ಲವೇ ನಿನ್ನ ದಾಸನಲ್ಲವೆ ಪ ದಾಸನಾದ ಮೇಲೆ ಎನ್ನ ಘಾಸಿಗೊಳಿಸುವುದುಚಿತವೇನೇ ಘೋಷ ರೂಪನ ಪೆತ್ತ ತಾಯಿ ಅ.ಪ. ಮಾರ ಮುಖ್ಯ ಶರತಾಪವ ಹರಿಸುತ ಮಾನದಿಂದ ಕಾಂiÉಮಾರನ ತಾಯೇ 1 ಶರಧಿ ನಾನು ತಿದ್ದಿ ತೋರೆ ಹೃತ್ಪದ್ಮನಿವಾಸಿಯ ಶಿರಿಪದ್ಮನ ರಮಣಿಯೆ 2 ಭವ ಕಟ್ಟು ಬಿಡಿಸಿ ನೋಡೇ ಯೆಷ್ಟೆಂದು ಪೇಳಲಿ ಗುರುಕೃಷ್ಣನ ಪೆತ್ತ ಶಿಷ್ಟ ಶಿಖಾಮಣಿಯೆ 3 ಸಾರಶಾಸ್ತ್ರ ತೊರೆದೂ ದಿವ್ಯ ಮಾರಶಾಸ್ತ್ರ ಸುರದೂ ಶಾಸ್ತ್ರಾ ಶಾಸ್ತ್ರದ ದಾರಿಯ ತೋರಿಸಿ ಶತ್ರು ನಿವಾರಿಸು 4 ಇಂದು 5
--------------
ಸಿರಿಗುರುತಂದೆವರದವಿಠಲರು
ಲಕ್ಷ್ಮೀಲೋಲ ವಿಠಲ ರಕ್ಷಿಸಲಿ ಬೇಕು ಹರಿಯೇಪಕ್ಷ್ಮಗಳು ಅಕ್ಷಿಗಳ ಅಗಲದಿಪ್ಪಂತಿವನಾ ಪ ದಾಸತ್ವ ದೀಕ್ಷೆಯಲಿ ಕಾಂಕ್ಷೆಯನು ತೋರ್ದವಗೆಮೀಸಲಿಂದಿದ್ದೆನ್ನ ಮನದಿ ತೈಜಸನೇಲೇಸು ಹರಿಕಥೆ ಸುಧೆಯ ಸಾರವನು ನೋಡೆಂದುಶ್ರೀಶತವ ಕ್ರೀಡಾ ವಿಲಾಸದಿ ಮಾರ್ಗ ತೋರೋ 1 ಕಂಕಣಾಕಾರೇಶ ಅಂಕಿತವ ನಿತ್ತಿಹೆನುಕೊಂಕುಗಳ ತಿದ್ದುತಲಿ ಕಿಂಕರನ ಸಲಹೊ |ಪಂಕಜ ಸುರರೆಲ್ಲ ಕಿಂಕರನು ನಿನಗೆಂಬಶಂಕೆ ವಿರಹಿತ ಜ್ಞಾನ ತರತಮವ ತಿಳಿಸೊ 2 ಹಿಂದಿನ ಸುಸಂಸ್ಕಾರದಿಂದಿವನ ಸಂದೋಹಬಂದುದನೆ ರಕ್ಷಿಸ್ಯಾನಂದಕರ ಮತದಲೀ |ಬಂಧು ಬಳಗವು ನೀನೆ | ತಂದೆ ತಾಯಿಯು ನೀನೆಎಂದೆಂಬ ಸುಜ್ಞಾನ ಕರುಣಿಸೈ ಹರಿಯೇ 3 ಕರ್ಮ ವೈದೀಕ ವೆನಿಸುತ್ತಕರುಣಿಸೋ ತವರೂಪ ಹೃತ್ಕಂಜದೊಳಗೇ 4 ಸರ್ವಜ್ಷ ಸರ್ವೇಶ ಸರ್ವಾಂತರಾತ್ಮಕನೆಶರ್ವವಂದ್ಯನೆ ಹರಿಯೆ ನಾಪೇಳ್ವುದೇನೋದುರ್ವಿಭಾವ್ಯನೆ ಗುರು ಗೋವಿಂದ ವಿಠ್ಠಲನೆದರ್ವಿಜೀವನು ಗೈವ ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ಲವಕುಶರ ಹಾಡು ಹರಿಹರ ಬ್ರಹ್ಮ ತ್ರಿಮೂರ್ತಿಗಳ ಬಲಗೊಂಡು *ಗುರುಹಿರಿಯರ ಪಾದಕ್ಕೆರಗೀ | ಅಜನ ಪಟ್ಟದ ಶ್ರೀ ಸರಸ್ವತಿಯನೆ ಬಲಗೊಂಡು ತೊಡಗುವೆ ರಾಮರ ಕಥೆಯಾ 1 ಬಣ್ಣದ ಅಕ್ಷತೆ ಕಣ್ಣು ತುಂಬೆ ಪುಷ್ಪ ಸು ವರ್ಣ ದಕ್ಷಿಣೆ ತಾಂಬೂಲಾ | ಉಮ್ಮಿಯ ಪುತ್ರ ಗಣೇಶಗೆ ಅರ್ಪಿಸಿ ವರ್ಣಿಪೆ ಲವಕುಶರ ಕಥೆಯಾ 2 ಕುಲದ ಸ್ವಾಮಿ ಕದ್ರಿ ನರಸಿಂಹನ ಬಲಗೊಂಡು | ಗುರು ಮಧ್ವರಾಯರ ನೆನೆದು | ಮನದಲ್ಲಿ ವಿಷ್ಣು ದೇವತೆಗಳ ಬಲಗೊಂಡು ತೊಡಗುವೆ ರಾಮರ ಕಥೆಯಾ 3 ವೇದಪಾರಾಯಣ ಅಂತ್ಯದ ಪೀಠಕ ಮಾಧವ ಹರಿ ಸುಗೋತ್ರ | ವೇದ ಮೂರುತಿ ಕೊಂಡಪ್ಪನ ಪುತ್ರಿಕೆಗೆ (?) ಹೇಳಿದಳುಹರಿನಾಮ ಕಥೆಯಾ 4 ಯಗ್ನ ಸಂತತಿಯೂ ಪೀಠಕವೂ | ಅಜ್ಞಾನಿ ಮೂಢಜೀವರಿಗೆ 5 ಹರುವುಳ್ಳ ನಿರಯಾಗಿಗಳೂ | ಹರವುಳ್ಳ ಕೈ(?)ಮುನಿವಳ್ಳೇರು ಜಾಣರು ತಿಳಿವೂದು ಅರ್ಥಸಂದೇಶ 6 ನಾಡನ ಕಥೆಯಲ್ಲ ಬೇಡುಂಬ ಪದನಲ್ಲ ನಾಡೊಳಗೆ ಹರಿನಾಮ ಕೇಳಿದ ಜನರಿಗೆ | ವಿಲ್ಲವಾಗುವುದು 7 ಪ್ರಚಂಡರು ರಾಮಲಕ್ಷ್ಮಣರು | ಇತ್ತಬೇಟೆಯನಾಡುವ ಕ್ರಮಗಳ ಚಂದವಿನ್ನೆಂತು ವರ್ಣಿಸಲೆ 8 ತಾಂಬೂಲ ಶ್ರೀಮೊಗದಿಂದೆ | ಇಂದುವದನೆಯ ಬಿಗಿದಪ್ಪಿ ಮುದ್ದಾಡಿದ ಇಂದುವದನೆ ಗರ್ಭವೆಂದ 9 ನಳಿನನಾಭನು ತನ್ನ ಲಲನೇಯ ಮುಖನೋಡಿ ಲಲನೆ ನಿನ್ನ ಪ್ರೇಮವೇನೆ | ಮುನಿಯು ಆಮುನಿಗಳು ಕೂಡಿದ ನಂತ್ರ ವನಭೋಜನ ತನಗೆಂದ್ಲೂ 10 ಹಲವು ಕಾಲವು ಸೀತೆ ಅಸುರರ ವಡನಾಡಿ ನೆನದಳು ಋಷಿಗಳಾಶ್ರಮವಾ | ಹಸನವಲ್ಲವು ಸೀತೆ ಇನ್ನು ನೀನುಳಿವದು ಋಷಿಗಳಾಶ್ರಮಕೆ ಹೋಗೆಂದಾ 11 ಅಯೋಧ್ಯಾಪುರದ ವಾನರರೆಲ್ಲಾ ಬಿಟ್ಟು ಕೈಹಿಡಿದ ಪುರುಷನ ಬಿಟ್ಟು | ನೆನದಾಳು ಋಷಿಗಳಾಶ್ರಮವ 12 ಅಂದು ಶ್ರೀರಾಮರು ಬೇಟೆಗ್ಹೋದೇವೆಂದು ಇಂದು ಡಂಗುರವ ಸಾರಿದರೂ | ಒಂದು ಗಳಿಗೆ ಮುಹೂರ್ತತಡೆಯಲಾಗದು ಎಂದು ಮಂದಿ ಮಕ್ಕಳ ಕರಸಿದರೂ 13 ಬಂದರು ಮಂತ್ರಿ ಮಾನ್ಯರು ಪ್ರಹಸ್ತರು ಬಂದರು ಪ್ರಧಾನೇರು | ಬಂದರು ರವಿಗುರಿನವಿಗುರಿಕಾರರು (?) ಬಂದರು ವಾಲಗದೋರೊಪ್ಪಿದರು 14 ಆಟಪಾಟದೋರು ನೋಟಕ್ಕೆ ದಾರಾರು ಸೂತ್ರದವರು ಸುವ್ವಿಯವರು | ಪಾಟಕ್ಕೆ ದಾರಾರು ಪೊಗಳುವ ಭಂಟರು ರಘು ನಾಥನೋಲಗದಲೊಪ್ಪಿದರೂ 15 ಹೊನ್ನು ಹಲಗೆಯವರು ಬೆನ್ನಬತ್ತಲೆಯವರು ಚಿನ್ನಬಿನ್ನಾಣನಾಯಕರೂ | ಚೆನ್ನಿಗರಾಮರ ಪೊಗಳುವ ಭಂಟರು ಬಿನ್ನಾಣದಿಂದೊಪ್ಪುತಿಹರೂ 16 ಪಟ್ಟಾವಳಿ ಹೊಸಧೋತರವು ಇಟ್ಟರು ಆಭರಣವನ್ನೂ | ಮಕರಕುಂಡಲ ಕಿರೀಟವೂ ಇಟ್ಟರು ನೊಸಲ ಕಸ್ತುರಿಯಾ 17 ಹಾರಮಾಣಿಕನಿಟ್ಟು ಕಾಲುಪೆಂಡೆಯನಿಟ್ಟು ನ್ಯಾವಳದ ಉಡುದಾರನಿಟ್ಟು ಸೂರ್ಯನ ಕುಲದ ಕುಮಾರರು ನಾಲ್ವರು ಏರಿದರು ಹೊನ್ನ ರಥವಾ 18 ವಾಯುವೇಗ ಮನೋವೇಗವೆಂಬೋ ರಥ ಏರಿದರೆ ರಾಮಲಕ್ಷ್ಮಣರೂ | ಸೂರ್ಯ ತಾನೆ ರಥವ ನಡೆಸೆ ಕೂಡ ಬೇಟೆಗೆ ತೆರಳಿದರು 19 ಅತ್ತಿ ಆಲದ ಮರ ಸುತ್ತ ಹೆದ್ದುಮ್ಮರಿ ಉತ್ತತ್ತಿ ಬೆಳಲು ದಾಳಿಂಬ ಉತ್ತಮ ಅಶ್ವತ್ಥ ಇಪ್ಪಿಯ ವನಗಳು ವಿಸ್ತರವನವೊಪ್ಪುತಿಹವೂ 20 ನಾರಂಗ ಬೆರಸಿದ ಕಿತ್ತಳಿ ಹರಿಸಿಣದ ತೋಪು ಎಲಿತ್ವಾಟ ಅರಸುಮಕ್ಕಳು ರಾಮಲಕ್ಷ್ಮಣರೆಲ್ಲರು ಬೆರಸಿ ಬೇಟೆಯ ನಾಡುತಿಹರೂ 21 ಯಾರಾಡಿಗಿಡಗಳು ಕ್ಯಾದೀಗಿವನಗಳು ನಾಗಸಂಪಿಗೆಯ ತೋಪುಗಳು | ಜೋಡೀಲಿ ಭರತ ಶತ್ರುಘ್ನರೆಲ್ಲರು ಕಾಲಾಳು ಬೇಟೆನಾಡಿದರೂ 22 ಉದ್ದಂಡ ಕೇಕಾಪಕ್ಷಿ ಚಂದಾದ ಬಕನ ಪಕ್ಷಿಗಳೂ | ಅಂದಾದ ಆಲಿವಾಣ ಆಲಹಕ್ಕಿಯು ರಾಮ ಚಂದ್ರನು ಬೇಟೆಯಾಡಿದನು 23 ಬೇಟೆನಾಡಿ ಬಂದು ನಿಂತಾರು ನೆರಳಲ್ಲಿ ಒಂದುಗಳಿಗೆ ಶ್ರಮವ ಕಳೆದು ನಂದನವನದಲ್ಲಿ ತನಿಹಣ್ಣು ಮೆಲುವೋರು ಗಂಗೆಯ ಉದಕ ಕುಡಿಯುವೋರು 24 ನಳಿನನಾಭನು ತಾನು ಬಳಲಿ ಬೇಟೆಯನಾಡಿ ನೆರಳಲ್ಲಿ ತುರಗ ಮೇಯಿಸಿದ ಕಿರಿಯಲಕ್ಷ್ಮಣ ದೇವ ತೊಡೆಯನ್ನೆ ಕೊಡು ಎಂದು ಮಲಗೀದ ಒಂದು ನಿಮಿಷವನೂ 25 ಮುಂದಿನ ಆಗೆಂತ್ರವ(?) ಕಂಡನು ಕನಸಿನಲಿ ರಾಮ ಕಂಗೆಟ್ಟು ಮೈಮುರಿದೆದ್ದಾ | ಕಂದ ಲಕ್ಷ್ಮಣ ಕೇಳೊ ಇಂದೆನ್ನ ಸೊಪ್ನದಲಿ ಬಂದಿಹಳೊಬ್ಬ ತಾಟಕಿಯೂ 26 ಇಂದುವದನೆಮುಡಿ ಪಿಡಿದಳೆವೊ ದುಕಂಡೆ ತುಂಡರಾವಣ ಕುಯೋದು ಕಂಡೆ | ಇಂದು ನೀ ಸೀತೆಯ ಕರೆದೊಯಿದು ಕಾನನದಿ ದಿಂಜಾರಿಳಿಸೋದು ಕಂಡೆ 27 ಮುನ್ನ ಅರಿಯದೆ ನಾವು ಬಂದೆವೋ ಲಕ್ಷ್ಮಣ ಇನ್ನು ಸೀತೆಗೆ ಜಯವಿಲ್ಲಾ | ಅಂದು ಶ್ರೀರಾಮರಾ ಬೇಟೆ ಮೂಲಕದಿಂದೆ ಬಂದಾಳು ಮಾಯದ ಗರತಿ | 28 ಬಂದು ಅಯೋಧ್ಯಾಪುರದ ಬೀದಿಯವಳಗೆ ಚಂದದಿ ಕುಣಿದಾಡುತಿಹಳು | ಅಂದು ಶ್ರೀ ರಾಮರ ಅರಮನೆ ಬಾಗಿಲಿಗೆ ಚಂದುಳ್ಳ ದ್ವಾರಪಾಲಕರೂ 29 ಬಂದು ಅಸುರೆ ನಿನ್ನ ಬಿಡವಲ್ಲೆನೆಂದರೆ ಬಂದಡರಿದಳರಮನೆಗೆ ಕಂಡು ಜಾನಕಿ ತಾನು ಕರಸಿದಳಾಗಲೆ ಬಂದಳು ಮಾಯದ ಗರತಿ 30 ಬಂದು ಪಾದಕ್ಕೆರಗಿ ಕೈಮುಗಿದು ನಿಂತಳು ತಂದಳು ನಾಗ ಸಂಪಿಗೆಯಾ | ಅಂಗನೆ ಜಾನಕಿ ನೀಮುಡಿಯೆಂದು ಕೊಟ್ಟರೆ ಸಂದೇಹ ಬಟ್ಟಳಾ ಸೀತೆ 31 ಈನಾಡ ಗರತಿ ನೀನಲ್ಲ | ದಾರು ಬಂಧುಗಳುಂಟು ದಾರ ಬಳಿಗೆ ನೀ ಬಂದೀ 32 ಈರೇಳು ಲೋಕವ ಸುತ್ತಿ ತಿರುಗಿ ಬಂದೆ ನಾಗಲೋಕಕ್ಕೆ ಬಾಹೆನೆಂದು ನಾಗಲೋಕದಿಂದ ದೇವಲೋಕಕ್ಕೆ ಬಂದೆ ದೇವಿಗೆ ಕಾಣಿಕೆ ತಂದೇ 33 ಹೊನ್ನು ಹಣವನೀವೆ ಅನ್ನವಸ್ತ್ರವನೀವೆ ಇನ್ನು ನೀವಲಿದದ್ದು ಈವೆ | ಇನ್ನು ನೀವಲಿದದ್ದು ಚೆನ್ನಾಗಿ ಕೊಡುವೆನು ಬಿನ್ನವಿಸೆ ಗರತಿ ನೀ ಅಂದ್ಲೂ 34 ಹೊನ್ನು ಹಣವನೊಲ್ಲೆ ಅನ್ನವಸ್ತ್ರವನೊಲ್ಲೆ ನಿನ್ನ ಭಾಗ್ಯವು ನಾನೊಲ್ಲೆ | ಮುನ್ನಿನ ಅಸುರರೂಪ ಇನ್ನು ನೀಬರೆದರೆ ಹರಣ ಹೊರುವೆನು 35 ಮುನ್ನವನು ಕಂಡು ಕೇಳರಿಯ | ಪನ್ನಂಗಧರ ರಾಮ ಬಂದರೆ ಬೈದಾರು ಗಮನ ಮಾಡಂದ್ಲೂ36 ಅಂದರೆ ಸೀತೆ ತನ್ನಂಗಕ್ಕೆ ಬರಲೆಂದು ತಂದು ತೊಡೆದಳು ಭಸುಮವನು | ಅಂದೆನ್ನ ವನಕೆ ಪ್ರದಕ್ಷಿಣೆ ಬರುವಾಗ ಉಂಗುಷ್ಟವನು ಕಂಡುಬಲ್ಲೆ 37 ಉಂಗುಷ್ಟದಂದಕ್ಕೆ ಮುಂದೆ ಪಾದವ ಬರಿ ಹಿಂದೆ ಹಿಂಬುಡ ಮೊಣಕಾಲು | ಹೊಂದಿಸಿ ಬರೆ ಎಂದಳವಳು 38 ಚಂದಾದ ಕಾಗದ ಲೆಕ್ಕಣಿಕೆ ಪಿಡಿದು ತಂದು ಕೊಟ್ಟಳು ಸೀತೆ ಕೈಗೆ | ಒಂದು ಕಾಯಕೆ ಹತ್ತು ಸಿರಗಳ ಬರೆದಳು ಮುಂದೆರಡು ಪಾದವ ಬರೆದಳು 39 ಒಂದರ ಹಿಂದೊಂದು ವರ್ಣಿಸಿ ಬರೆದಳು ತಂದು ನಿಲಿಸಿದಳು ರಾವಣನಾ | ಚಂದವಾಯಿತು ದೇವಿ ವರವಕೊಡೆನುತಲಿ ಎಂದೆಂದಿಗೂ ಅಳಿಯದ್ಹಾಗೇ 40 ಅಳಿದು ಉಳಿಯದಿರು ಉಳಿದು ನೀ ಕೆಡದಿರು ಧರಿಯವಳಗೆ ಅಡಗದಿರು | ಕಿರಿಯ ಲಕ್ಷ್ಮಣದೇವ ಹೊಡೆದರೆ ಮಡಿ ಎಂದು ವರವ ಕೊಟ್ಟಳು ಸೀತೆ ಪಠಕೆ 41 ಮರೆ
--------------
ಹೆಳವನಕಟ್ಟೆ ಗಿರಿಯಮ್ಮ
ಲಾಲಿ ಪಾವನ ಚರಣ ಲಾಲಿ ಅಘಹರಣಲಾಲಿ ವೆಂಕಟರಮಣ ಲಲಿತ ಕಲ್ಯಾಣ ಪ ಮಾಧವ ವಸುದೇವ ತನಯಸನಕಾದಿ ಮುನಿವಂದ್ಯ ಸಾಧುಜನಪ್ರಿಯಇನ ಕೋಟಿಶತತೇಜ ಮುನಿಕಲ್ಪ ಭೂಜಕನಕಾದ್ರಿನಿಲಯ ವೆಂಕಟರಾಯ ಜೀಯ 1 ಜಗದೇಕನಾಯಕ ಜಲಜದಳನೇತ್ರಖಗರಾಜವಾಹನ ಕಲ್ಯಾಣ ಚರಿತಸಗರತನಯಾರ್ಚಿತ ಸನಕಾದಿ ವಿನುತರಘುವಂಶ ಕುಲತಿಲಕ ರಮಣೀಯ ಗಾತ್ರ2 ನವನೀತ ಸತಿ ವಿನುತ ವಿಶ್ವಸಂಚಾರನಂದ ಗೋವಿಂದ ಮುಚುಕುಂದ ನುತಸಾರ 3 ಅಖಿಳ ಲೋಕೇಶಲಕ್ಷಣ ಪರಿಪೂರ್ಣ ಲಕ್ಷ್ಮೀ ಪ್ರಾಣೇಶ4 ನರಮೃಗಾಕಾರಿ ಹಿರಣ್ಯಕ ವೈರಿಕರಿರಾಜ ರಕ್ಷಕ ಕಾರುಣ್ಯಮೂರ್ತಿಹರಿ ಆದಿಕೇಶವ ಗುರು ಅಪ್ರಮೇಯಸಿರಿಧರ ಶೇಷಗಿರಿ ವರ ತಿಮ್ಮರಾಯ 5
--------------
ಕನಕದಾಸ
ಲೋಕನೀತಿ 1 ಕಾಮಧೇನು ಕಲ್ಪತರು ಕಾಮಿತಾರ್ಥವನೀವ ಹರಿಯೇ ಎನಗಿರೆ ಎನಗ್ಯಾತಕೆ ಚಿಂತೆ ಕಾಮಿತಾರ್ಥವನೀವ ದೊರೆಯಿರಲು ಯನಗ್ಯಾತರ ಕೊರೆತೆ ಹರಿಕಾವದೇವ ನೀನಿರಲು ಕೋಳಿ ತನ್ನ ಮರಿಗೆ ಹಾಲುಕೊಟ್ಟು ಸಾಕುವದೆ ಕಾಳ ರಾತ್ರಿಯು ಕಳೆದು ಹರಿ ಉದಿಸುವನೆಂದು ಕೋಳಿಕೂಗಿದರೂ ಏಳದೆ ಮಲಗಿ ಕಾಲಕಳೆವರು ಮನುಜರುಹರಿಯೆ ಕಾಲಕೂಟ ಸಮ ಕಾಮಿತಾರ್ಥವ ಬೇಡುವರು ಕಾಲದೂತರು ಬರುವ ವ್ಯಾಳೆತನಕ ನಿನಧ್ಯಾನಿಸದೆ ಕಾಲಕಳೆವರು ಮನುಜರು ಕಾಲಮೂರುತಿ ನೀನೆ ಎಂದರಿಯರು ಹರಿ ಕಾಲ ಅಕಾಲ ನಿನಗುಂಟೆ ಎನಗುಂಟೆ ದೇವ ನೀ ಎನಗೆ ಇಂಥಾ ಕೀಳು ಬುದ್ಧಿಯ ಕೊಡದಿರೊ, ಏಳು ಬೆಟ್ಟದ ಒಡೆಯ ಶ್ರೀ ಶ್ರೀನಿವಾಸ 2 ಬೆಳಗೆದ್ದು ಹರಿ ನಿನ್ನ ಧ್ಯಾನಿಸದೆ ಪರಧ್ಯಾನ ಪರನಿಂದೆಯಲ್ಲಿಹರು ನಿತ್ಯ ನಿನ್ನ ಧ್ಯಾನ ಬಿಟ್ಟು ಬೆಳಗಾಗೆ ನಿನ್ನ ಸೂರ್ಯರಶ್ಮಿ ಬಿದ್ದರೂ ಏಳರು ಶಯನ ಬಿಟ್ಟು ಈ ಜಗದಿ ದೇವ ಈ ಕಲಿ ಜನರು ಇಂಥಾ ಬೆಳಗ ಎನಗೀಯದೆ ನೀ ಎನ್ನೊಳಗಿದ್ದು ಬೆಳಗಿನ ಜಾವದಿ ನಿನ್ನ ಕಳೆಕಳೆರೂಪ ಎನಗೆ ತೋರೋ ಘಳಿರನೆ ಶ್ರೀ ಶ್ರೀನಿವಾಸ 3 ಎರಡನೆ ಜಾವದಲಿ ಹುಂಜ ಹರಿಪೂರ್ವದಲಿ ಬರುವ ಏಳಿರೆಂದು ಕೂಗಲು ಸತಿ ಸಹಿತ ಕಾಮಕೇಳಿಯಲಿಹರು ಮೂರನೆ ಝಾವದಲಿ ಹರಿ ಉದಿಸಿ ಬ್ರಾಹ್ಮೀಮುಹೂರ್ತದೊಳು ಹರಿ ಬೆಳಕೀವ ಲೋಕಕೆ ಎಂದು ಕೂಗುವುದು ಕೋಳಿ ಕೇಳಿ ಕರ್ಣದಲಿ ಶಯನ ಬಿಟ್ಟೇಳರೊ ಈ ಜಗದಿ ಮೂರೆರಡು ಶತಶ್ವಾಸ ಜಪ ಮಾಡಿಸುವ ಹರಿಭಕ್ತ ಹನುಮನೆಂದರಿಯದೆ ಮಲಗಿ ಕಾಲ ಎರಗಿ ಬರುವುದು ಆಯುಷ್ಯವೆಂದರಿಯದೆ ಭಾರತೀಪತಿ ಅಂತರ್ಯಾಮಿ ನಿನ್ನಧ್ಯಾನಿಸದೆ ಇಹರಲ್ಲೋ ಈ ಜಗದಿ ಶ್ರೀ ಶ್ರೀನಿವಾಸ ಎನ್ನ ನೀನವರ ಸಂಗ ಸೇರಿಸದೆ ಕಾಯೊ ಹರಿಯೆ ಎನ್ನ ದೊರೆಯೆ 4 ಸೂರ್ಯನಂತರ್ಯಾಮಿ ನೀನಲದೆ ಮತ್ಯಾರಿಹರು ಹರಿ ಸೂರ್ಯಾಂತರ್ಗತ ಸೂರ್ಯನಾರಾಯಣ ಸೂರ್ಯಕೋಟಿ ತೇಜದಿ ಮೆರೆವೆ ಸೂರ್ಯ ಸಹಸ್ರ ಉದಿಸಿದಂತೆ ಬರುವೆ ಕರ್ಮ ನೀ ಮಾಡಿಸಿ ಪೆರ್ಮೆಯಿಂದವರ ಕಾಯ್ವ ಶರ್ವಾದಿವಂದಿತ ಗರ್ವರಹಿತ ವೈಕುಂಠಪತಿ ನೀ ನಿನ್ನವರ ಕಾಯಲು ಸರ್ವದಾ ಅವರಿಗೆ ವಲಿದು ಕಾವೆ ಆದಿನಾರಾಯಣ ಶ್ರೀ ಶ್ರೀನಿವಾಸ ಕಾಯೆನ್ನ ಸೂರ್ಯಾಂತರ್ಗತ ವೆಂಕಟೇಶಾ 5 ಹಗಲಿರುಳು ಎನ್ನದೆ ನಿನ್ನ ಸ್ತುತಿಪರು ಭಕ್ತರು ಅಘಹರನೆ ನಿನ್ನ ಪ್ರೇರಣೆಯಿಂದಲವರಿರಲು ಬಗೆಬಗೆಯ ರೂಪದಿ ಬಂದವರ ಸಲಹುವೆ ನಗೆ ಮೊಗದ ಶ್ರೀ ರಮೆಯರಸ ಲಕ್ಷ್ಮೀಶ ನಿನ್ನ ಬಗೆ ಅರಿತಿಹರಾರಿರೀಜಗದಿ ಪಗಲಿರುಳೆನ್ನದೆ ನೀನವರಲ್ಲಿದ್ದು ಸಲಹಲು ಬಗೆವರೆ ಅನ್ಯರಿಗೆ ಅಲ್ಪರಿವರೆ ನಿನ್ನವರು ಜಗದಾಖ್ಯ ವೃಕ್ಷನೀನಿರಲು ನಿನ್ನ ಭಕ್ತರು ನಿನಗಲ್ಲದೆ ಜಗದೊಡೆಯ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ಲೋಕನೀತಿ (ಅ) ಅಂಟಿ ಅಂಟದ ಹಾಗೆ ಇರಬೇಕು ಪ ಈ ತಂಟೆ ಸಂಸಾರದ ಬುದ್ಧಿ ಉಂಟಾದವರಿಗೆಲ್ಲಾ ಅ.ಪ ಎಂಟು ಮದಗಳನ್ನು ಬಿಡಬೇಕು | ಹದಿ- ನೆಂಟನೇ ತತ್ವ ತಿಳಿಯಬೇಕು ಭಂಟನಾಗಿ ವೈಕುಂಠ ಸೇರುವದಕೆ 1 ಶತ್ರುಗಳಾರ್ವರ ಗೆಲ್ಲಬೇಕು | ನಿಜ- ಮಿತ್ರರಾರ್ವರೊಳು ನಿಲ್ಲಬೇಕು ರಾತ್ರಿ ಹಗಲು ಪತ್ನೀಪುತ್ರರೊಡನೆ ಕಮಲ- ಪತ್ರದಿ ನೀರಿದ್ದ ರೀತಿಯಿಂದಲಿ ತಾನು 2 ಮಾನವಮಾನ ಒಂದಾಗಬೇಕು | ಅನು- ಮಾನವಿಲ್ಲದೆ ತಿರುಗಲುಬೇಕು ಇನ್ನೇನಾದರು ಗುರುರಾಮವಿಠಲನಾ- ಧೀನನೆನುತ ಮದ್ದಾನೆಯಂದದಿ ತಾನು 3
--------------
ಗುರುರಾಮವಿಠಲ
ಲೋಕನೀತಿಯ ಪದಗಳು 448 ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡುನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳುಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗ ಪ್ರ-ಸನ್ನ ಮೂರುತಿಯಾಗುರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನುಭೂಸುರರಿಗಿತ್ತು ಮನ್ನಿಸು ಉದಾರನಾಗುಮನ್ನೆಯರೆಲ್ಲರು ಬಂದುನಿನ್ನನೋಲೈಸಲೆಂದು ಅಪರ್ಣೆಪರಿಸಿದಳು 1 ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚಕೋಟಿ ಗಜದಾನ ಶತಕೋಟಿಯಶ್ವದಾನಗಳಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-ರೀಟ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿಧಾಟಿಯಾಗಿರುವನಾಗುಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿಜೂಟ ಭಕ್ತನಾಗು 2 ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗುಪೆತ್ತವರ ನೋಡಿ ನಲಿವುತ್ತಿರಲು ಭೂಸುರರುಮುತ್ತಿನಕ್ಷತೆಯನಾಂತುಪೃಥ್ವಿಯ ವೊಳಗೆಲ್ಲಾ ಸ-ರ್ವೋತ್ತಮ ಪುರುಷನಾಗೆನುತ್ತಮಸ್ತಕದಿ ತಳಿವುತ್ತ ಪರಸಿದರು 3 ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-ಗೇಂದ್ರ ನೀನಾಗುಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗಇಂದಿರೆ ಪರಸಿದಳು4 ಧೀರನಾಗುದಾರನಾಗು ಸೂರಿಜನವಾರಕೆ ಮಂ-ದಾರನಾಗು ಸಂಗರ ಶೂರನಾಗು ವೈರಿ ಜ-ಝ್ಝೂರನಾಗು ಮಣಿಮಯ ಹಾರನಾಗುವೀರಾಧಿವೀರ ನೀನಾಗುಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗುಕಾರುಣ್ಯಸಾಗರನಾಗು ಕಾಮಿತಫಲಿದನಾಗುಶ್ರೀ ರಾಮೇಶನಪಾದಾಬ್ಜ ವಾರಿಜ ಭಕ್ತನಾಗೆಂದುಶಾರದೆ ಪರಸಿದಳು5
--------------
ಕೆಳದಿ ವೆಂಕಣ್ಣ ಕವಿ
ವಂದಿಪೆ ಮುದದಿಂದಲಿ ನಾನು ವಂದಿಪೆ ಮುದ್ದು ಗಣಪಗೆ ವಂದಿಪೆ ಪ ನಂನಂದನನಾಮ ಮನದೊಳು ಆ- ನಂದದಿ ಭಜಿಸುವ ಚಂದ್ರಶೇಖರಸುತಗೆ ಅ.ಪ. ಆಕಾಶಕಭಿಮಾನಿ ಶ್ರೀಕಂಠವರಪುತ್ರ ರಾಕೇಂದುವದನ ಶ್ರೀಕಾಂತ ನಿಜಭಕ್ತ ಏಕಾಂತದಲಿ ಹರಿ ಆಕಾರತೋರಿಸಿ ನೂಕುತಭವಪಾಶ ಸಾಕು ಸಾಕು ಎಂದು 1 ವರವರದಾಯಕ ಸುರಗಣಪೂಜಿತ ವರಕರಿಮುಖವೇಷ ವರಸರ್ಪಕಟಿಸೂತ್ರ ಸಿರಿಕಾಂತಸೇವೆಗೆ ಬರುವ ವಿಘ್ನಂಗಳೆಲ್ಲ ಭರದಿಂದ ತರಿಯುತ ಕರುಣದಿ ಸಲಹೆಂದು 2 ವೇದವ್ಯಾಸರಶಿಷ್ಯ ಮೋದಕಗಳ ಪ್ರಿಯ ಮದನನಸೋದರ ಮುದವಿದ್ಯೆದಾಯಕ ಮಧ್ವಾಗಮದಲಿ ಅದ್ದುತ ಎಮ್ಮನು ಶುದ್ಧರನು ಮಾಡೋ ಸಿದ್ಧಿ ವಿನಾಯಕನೆಂದು 3 ಏಕದಂತನೆ ವರ ಆಖುವಾಹನ ಭಕ್ತರ ಶೋಕ ಹರಿಸೊ ಬೇಗ ಲೋಕ ವಂದಿತನೆ ರಕ್ತಾಂಬರ ತನು ರಕ್ತಗಂಧಪ್ರಿಯ ವಿ - ರಕ್ತಿನೀಡುತ ಹರಿಭಕ್ತನೆಂದೆನಿಸು ಎಂದು 4 ಪಾಶಾಂಕುಶ ಶಶಿದರ್ಪಭಂಜನ ಶ್ರೀಶನಾಭಿವಾಸ ವಿಶಾಲಕರ್ಣಯುತ ನಾಶಗೈಸುತವಿಷಯ ವಾಸನೆಗಳೆಲ್ಲ ವಿಶ್ವೋಪಾಸಕ ಪ್ರಭು ಶ್ವಾಸಾವೇಶಯುತನೆಂದು 5 ಚಾರುದೇಷ್ಣನೆ ನಿನ್ನ ಚರಣಕ್ಕೆ ಶರಣೆಂಬೆ ಸರಿನೀನು ಧನಪಗೆ ಗುರುಶೇಷಶತರಿಗೆ ತರಿದು ತಾಪತ್ರಯ ವರಜ್ಞಾನ ವೈರಾಗ್ಯ ಹರಿಭಕ್ತಿ ಹರಿ ಧ್ಯಾನ ನಿರುತ ಕೊಡು ಎಂದು 6 ಜಯತೀರ್ಥ ಹೃದಯದಿ ವಾಯುವಿನೊಳಿಪ್ಪ ಸಿರಿ ತಾಂಡವ ಕೃಷ್ಣವಿಠಲ ರಾಯನ ಧ್ಯಾನ ಕಾಯಾ ವಾಚಾ ಮನಸಾ ದಯಮಾಡಿ ಸಲಹೈಯ್ಯ ಜೀಯಾ ಗಣಪನೆಂದು7
--------------
ಕೃಷ್ಣವಿಠಲದಾಸರು
ವರದಾತೀರದಿ ನೆಲಸಿಹ ಗುರುವರನ್ಯಾರೆ ಪೇಳಮ್ಮಯ್ಯ ಪ ವರದಾಯ ಶ್ರೀ ರಾಘವೇಂದ್ರರ ಕರುಣ ಪಡೆದ ಸುಶೀಲೇಂದ್ರ ಮುನಿಪನೆ ಅ.ಪ ದರಪೋಲುವ ಕಂಧರದಿ ತುಲಸಿ ಮಣಿಹಾರ | ಪೇಳಮ್ಮಯ್ಯ ಅರಶಶಿಸಮ ಸುವಿಶಾಲ ಫಾಲದಲಿ ತಿಲಕ ಪೇಳಮ್ಮಯ್ಯ ಪರಿ ಪರಿ ವಿಭವದಿ ಮೆರೆದ ಕರುಣವರ ಪುಣ್ಯ ಪುರುಷನ 1 ಮಾರ್ಗಣ ತೃಣ ಸಮವೇಣಿಸಿಹನು ಪೇಳಮ್ಮಯ್ಯ | ಅನಿಮಿಷ ಲೋಚನೆ ಅನುಮಾನಿಸದಿರು ಅನಿಮಿಷಾಮಶರಿವರನನುದಿನ ಸೇವಿಸು 2 ಯತಿ ಶಿರೋಮಣಿ ಧೀರೇಂದ್ರರ ಹಿತಕತಿ ಪಾತ್ರ ಪೇಳಮ್ಮಯ್ಯ ಅತುಳ ಮಹಿಮೆ ಸುಕೃತೀಂದ್ರ ಹೃದಯಶತಪ್ರ ಪೇಳಮ್ಮಯ್ಯ ಸತತ ರವಿ ಎನಿಸಿ ಶಾಮಸುಂದರನ ಅತಿ ಭಕುತಿಲಿ ತುತಿಪ ಗುಣನಿಧಿ 3
--------------
ಶಾಮಸುಂದರ ವಿಠಲ
ವರವಾಮನಾಕಾರ ಪರಮಕರುಣಾಸಾರ ಶರಣಜನಮಂದಾರ ಭಯವಿದೂರ ಶತಯಾಗ ಸಹಜಾತ ದಿತಿಜಾಳಿ ಘನವಾತ ಶತಪತ್ರದಳನೇತ್ರ ಚಾರುಗಾತ್ರ ಕಶ್ಯಪಾತ್ಮಜಯೋಗ ವಶ್ಯ ಸದ್ಗುಣಭೂಷ ನಿತ್ಯ ಮಾಧುರ್ಯವಾಗ್ವಿಹಿತ ಭೇದರಹಿತ ಅನಂತ ಕಲ್ಯಾಣಗುಣಾಪ್ರಮೇಯ ಸನಕಾದಿ ಮುನಿನಿಕರವಂದ್ಯ ಚರಣ ಮನ್ಮೋಹನಾಂಗ ಪರಿಪಾಹಿರಂಗ
--------------
ನಂಜನಗೂಡು ತಿರುಮಲಾಂಬಾ
ವಾಜಿ ವದನ ವಿಠಲ ಕಾಪಾಡೊ ಇವಳಾ ಪ ತೈಜಸೀ ರೂಪದಲಿ | ಆಶಿಷವನಿತ್ತೇ ಅ.ಪ. ಕಾಮಿತಾರ್ಥದನೆ ಸ | ತ್ಕಾಮ ಫಲಿಸುತಲಿವಳಕಾಮ ಜನಕನೆ ದೇವ | ಕಾಪಾಡೊ ಹರಿಯೇ |ಕಾಮ ಮದ ಮಾತ್ಸರ್ಯ | ಶತ್ರು ವರ್ಗವ ಕಡಿದುಕಾಮಿನಿಯ ಕೈ ಪಿಡಿದು | ಕಾಪಾಡೊ ಹರಿಯೇ 1 ಜ್ಞಾನಾನು ಸಂಧಾನ | ಪಾಲಿಸುತಲಿವಳೀಗೆಪ್ರಾಣೇಶ ತವನಾಮ | ಸತತ ಸ್ಮರಿಸೂವಾ |ಜಾಣೆ ಎಂದೆನಿಸಿ ಸಂ | ಧಾನ ಸುಖವೀಯೊ ಹರಿಮಾನನಿಧಿ ಮಧ್ವಾಖ್ಯ | ಪ್ರಾಣಸನ್ನುತನೇ 2 ನೀವೊಲಿಯದಿನ್ನಿಲ್ಲ | ದೇವ ದೇವನೆ ಹರಿಯೆಗೋವತ್ಸದನಿ ಕೇಳಿ | ಆವು ಬರುವಂತೇ |ಧಾವಿಸೀ ಬಾರೋ ಗುರು | ಗೋವಿಂದ ವಿಠ್ಠಲನೆಭಾವುಕಳ ಪೊರೆಯಲ್ಕೆ | ದೇವ ಹಯವದನಾ 3
--------------
ಗುರುಗೋವಿಂದವಿಠಲರು
ವಾಣಿ ಬ್ರಹ್ಮನ ರಾಣಿ ಕಲ್ಯಾಣೀ| ಫಣಿವೇಣಿ ಸದ್ಗುಣ | ಶ್ರೇಣಿ ವೀಣಾ ಪುಸ್ತಕ ಪಾಣಿ ಪ ಜಾಣೆ ಶ್ರೀ ಜಗತ್ರಾಣಿ ಶಾಸ್ತ್ರ ಪ್ರ- ವೀಣೆ ವೇದ ಪ್ರಮಾಣಿ ನಿನಗೆಣೆ | ಗಾಣೆ ಸಂತತಕೇಣವಿಡದೆನ್ನಾಣೆ | ನೆಲಸಿರು ಮಾಣದೆನ್ನೊಳು ಅ.ಪ. ತ್ರಿಜಗ ಶುಭ ಕಾಯೇ | ಓಂಕಾರರೂಪಿಣಿ | ಮಾಯೆ ಮುನಿಜನಗೇಯೆ ಸುಖದಾಯೇ || ತೋಯಜಾಂಬಕಿ ಶ್ರೀಯರ ಸೊಸೆ | ಆಯದಿಂದಲಿ ಶ್ರೇಯಸ್ಸುಖಪದ - ವೀಯೆ ಸಂತತ ಕಾಯೆ ಶತಧೃತಿ ಪ್ರೀಯೆ | ನೀನೆನಗೀಯೆ ವಾಕ್ಸುಧೆü 1 ಅಕ್ಷರ ಸ್ವರೂಪೆ ನಿರ್ಲೇಪೇ | ಮೌನಿಜನ ಮಾನಸ | ಪಕ್ಷ ಸಕಲಾಧ್ಯಕ್ಷೆ ಶುಭಚರಿತೇ | ಸೂಕ್ಷ್ಮ ಸ್ಥೂಲ ಸುಲಕ್ಷಣಾನ್ವಿತೆ | ಮುಮುಕ್ಷು ಜನ ನಿಜ | ಭಕ್ತಿ ಭುಕ್ತಿವರ ಪ್ರದಾಯಕಿ | ಮುಕ್ತಿ ಸುಖ ಸೌಖ್ಯ ಪ್ರದಾಯಕಿ 2 ಸುಂದರಾಂಗಿ ಆನಂದ ಗುಣ ಭರಿತೇ | ವಂದಿಸುವೆ ತವಪದ -| ದ್ವಂದಕಾನತನಾಗಿ ಸಚ್ಚರಿತೇ | ಯೆಂದು ಮದ್‍ಹ್ವನ್ ಮಂದಿರದಿ ನೀ | ನಿಂದು ಆಪದ್ ಬಂಧು ಕರುಣಾ | ಸಿಂಧುವನು ನಾನೆಂದು ಪೊಗಳ್ವಾ -| ನಂದವರ ಸದಾನಂದ ಪಾಲಿಸೇ 3
--------------
ಸದಾನಂದರು