ಒಟ್ಟು 5604 ಕಡೆಗಳಲ್ಲಿ , 127 ದಾಸರು , 3762 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾ ಬಾ ಬಾ ಹರಿಯೇ ಮೂರ್ಲೋಕದ ದೊರೆಯೇ ಪ.ಸರ್ವೋತ್ತಮ ಸರ್ವಾಂತರ್ಯಾಮಕಸರ್ವಾಧಾರ ಪ್ರವೀರ ಶೂರವರ 1ನಿತ್ಯಮುಕ್ತ ಪರಿಪೂರ್ಣಗುಣಾರ್ಣವಸತ್ಯನಿಯಾಮಕ ಸತ್ಯವಾದರೆ ತ್ವರೆ 2ರೂಪತ್ರಯ ಭವತಾಪಶಮನ ಸ-ದ್ವ್ಯಾಪಕ ಸ್ಥಾಪಕ ಶ್ರೀ ಪುರುಷೋತ್ತಮ 3ಭಜಕರ ಭಾಗ್ಯನಿಧಿಯು ನೀನೆಂಬುದುನಿಜವಾಗಿರೆ ಶ್ರೀ ರುಜುಗಣೇಶಪತಿ 4ಶ್ರೀಲಕ್ಷ್ಮೀನಾರಾಯಣ ನಿರ್ಗುಣಮೂಲೇಶ ಮುಕುಂದ ಮುನೀಂದ್ರವಂದಿತ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾರದೇತಕೋ ತವದಯ ಭಗವತಿಭಾರ್ಗವಿದೇವೀಪಘೋರದುರಿತಪರಿಹಾರಿಣಿ ಭಕ್ತೋದ್ಧಾರಿಣಿ ಭಾಗ್ಯ ವಿಹಾರಿಣಿ ಜನನೀ 1ವಂದಿಪೆ ಪಾದದ್ವಂಧ್ವ ಸರೋಜವಇಂದಿರೆಹರಿಯುರಮಂದಿರ ವಾಸಿನಿ2ನಾರಿಶಿರೋಮಣಿ ನಂಬಿದೆ ನಿನ್ನನುನಾರಾಯಣೀ ಭವನಾಶಿನಿ ಶಾರ್ಙಣಿ 3ದಾರಿದ್ರ್ಯಾಪಹ ಧನಧಾನ್ಯಪ್ರದಕ್ಷೀರಾರ್ಣವ ಸುತೇ ಶ್ರೀಮಹಾಲಕ್ಷ್ಮೀ 4ಹೇಮಗಿರೀಶ್ವರಿ ಭಾಮಾ | ತುಲಸೀರಾಮದಾಸನುತ ಸುಕ್ಷೇಮವು ನಿನ್ನದು 5
--------------
ತುಳಸೀರಾಮದಾಸರು
ಬಾರಮ್ಮ ಮನೆಗೆ ಸೌಭಾಗ್ಯದ ಮಹಲಕ್ಷ್ಮಿ ಪಬಾರಮ್ಮ ಮನೆಗೆ ಭಕ್ತರು ನಿನ್ನ ಸ್ತುತಿಪರುಮಾರನಯ್ಯನ ಕೂಡಿ ಮನ ಹರುಷದಿ ಬೇಗ ಅ.ಪಶಂಖು ಚಕ್ರ ಗದ ಪದ್ಮವು ಧರಿಸಿದಪಂಕಜಾಕ್ಷನಸಿರಿಪಟ್ಟದರಸಿದೇವಿಕುಂಕುಮಾಂಕಿತೆ ಸರ್ವಾಲಂಕಾರ ಶೋಭಿತೆಬಿಂಕಮಾಡದಲೆ ಬಾ ವೆಂಕಟನರಸಿಯೆ1ಶುಕ್ರವಾರದಿ ನಿನ್ನ ಭಕ್ತಿಲಿ ಸ್ತುತಿಪರಇಷ್ಟ್ಯಾರ್ಥಗಳ ಕೊಟ್ಟುದ್ಧರಿಪಭಾರ್ಗವಿತಾಯೆಭಕ್ತವತ್ಸಲನೊಡಗೂಡುತ ಬಾರಮ್ಮಮಿತ್ರೇರು ಕರೆವರು ಕೃಷ್ಣವೇಣಿಯೆ ನಿನ್ನ 2ಕನ್ನಡಿ ಕದುಪಿನ ಕಡು ಮುದ್ದು ಮಹಾಲಕ್ಷ್ಮಿರನ್ನ ಪವಳ ಹಾರಾಲಂಕೃತ ಶೋಭಿತೆಸ್ವರ್ಣಮಂಟಪದಿ ಕುಳ್ಳಿರು ಬಾರೆಂದೆನುತಲಿಕರ್ನೇರು ಕರೆವರು ಕಮಲಾಕ್ಷನೊಡಗೂಡಿ 3ನಿಗಮವೇದ್ಯಳೆ ನಿನ್ನಅಗಣಿತಗುಣಗಳಪೊಗಳುವ ಸುಜನರಅಘಪರಿಹರಿಸುತ್ತಬಗೆ ಬಗೆ ನಾಮಗಳಿಂದ ಪೂಜೆಯಗೊಂಬಖಗವಾಹನನ ರಾಣಿ ಲಗುಬಗೆಯಿಂದಲಿ 4ತಡಮಾಡದಲೆ ಬಾ ಬಾ ಮುಡಿದ ಹೂವು ಉದರುತ್ತಬಡನಡು ಬಳುಕುತ್ತ ಕೊಡುತ ವರಗಳನ್ನುಬಿಡಿಮಲ್ಲಿಗೆಯ ತಂದು ನಡೆಮುಡಿ ಹಾಸುವರುಕಡಲೊಡೆಯನ ರಾಣಿ ಸಡಗರದಿಂದೊಮ್ಮೆ 5ಕ್ಷೀರವಾರಿಧಿಯ ಕುಮಾರಿಯೆ ಬಾರೆಂದುಸಾರಸಮುಖಿಯರು ಸರಸದಿ ಕರೆವರುಮೂರ್ಲೋಕ ವಿಖ್ಯಾತೆ ಮಾರಮಣನ ಪ್ರೀತೆಚಾರುಮಂಗಳೆ ಸತ್ಯ ಶ್ರೀ ಭೂದುರ್ಗಾಂಬ್ರಣೆ 6ಕಮಲಾಕ್ಷಿ ಕೇಳಮ್ಮ ಶ್ರಮ ಪರಿಹರಿಸೆಂದುನಮಿಸಿ ಬೇಡುವೆ ನಿನ್ನಭ್ರಮರಕುಂತಳೆ ತಾಯೆಕಮಲನಾಭ ವಿಠ್ಠಲನ ಕೂಡಿ ಹರುಷದಿಸುಮನಸರೊಡೆಯನಸತಿಸಾರ್ವಭೌಮಳೆ7
--------------
ನಿಡಗುರುಕಿ ಜೀವೂಬಾಯಿ
ಬಾರಮ್ಮ ಶೇಷಾದ್ರಿ ಭಾರ್ಗವಿದೇವಿ ಪತೋರಮ್ಮ ಮೃದುಪದ ತೋಯಜಕೇಳೆಜನನಿಅ.ಪದುಷ್ಟನು ನಿನ್ನ ಕ ನಿಷ್ಟ ಕುಮಾರನೂಕಷ್ಟವ ಪರಿಹರಿಸು ಇಷ್ಟು ಸಂಪದ ಕೊಡು 1ಕಾರುಣ್ಯ ರೂಪಿಣಿ | ಕಾಮಿತ ದಾಯಿನೀಸಾರಸದಳನೇತ್ರಿ | ಸೌಂದರ್ಯ ಗಾತ್ರೀ2ವಾಸವದುಃಖ ನಿವಾರಿಣಿ ಶ್ರೀತುಲಸೀದಾಸ ಹೃತ್ಸರಸಿಜ | ವಾಸಿನಿ ರುಕ್ಮಿಣಿ 3
--------------
ತುಳಸೀರಾಮದಾಸರು
ಬಾರೆ ಶ್ರೀ ಮಹಾಲಕ್ಷ್ಮಿದೇವಿಯೆ ಬೇಡುತಿರ್ಪೆವು ಪಸಾರಸಾಕ್ಷಿಯೆ ಸರ್ಪವೇಣಿಯೆನಾರಿಯೆ ವೈಯ್ಯಾರಿಯೆ ಶ್ರೀಹರಿ ಸಹಿತದಿ ಅ.ಪಯಜÕನಾಮಕ ಹರಿಯ ರಾಣಿಯಜÕ ಇಂದಿರಾಹಿರಣ್ಯಹರಿಣಿಸುಜÕರಾದ ಜನರ ಪೊರೆವೆಸತ್ಯಾಶ್ರಿ ನಿತ್ಯಾಶ್ರೀ ಸುಗಂಧಿ ಸುಂದರಿ 1ಪ್ರಾಜÕಸುಖಾ ಸುಗಂಧಿ ಸುಂದರಿವಿದ್ಯಾ ಶ್ರೀ ಸುಶೀಲದೇವಿಸುಜÕರಾದ ಜನರೊಳಿರಿಸುತಕ್ಷಣ ಈಕ್ಷಿಸು ಸುಲಕ್ಷಣ ದೇವಿಯೆ 2ಶಾಂತಿಮಾಯೆಕೃತಿಯೆಇಂದಿರೆಶಾಂತಚಿತ್ತದಿ ಧ್ಯಾನಿಸುವರಾ ನಿ-ರಂತರದಿ ಪೊರೆವೆ ಜಯಮಂಗಳೆ ಉತ್ತುಂಗಳೆ ಶೃಂಗಾರ ರೂಪಳೆ 3ನಗುತ ನಗುತ ಬಾರೆ ಬೇಗನಗಧರನ ಸನ್ನಿಧಿಗೆ ಈಗಖಗವಾಹನನ ಮಡದಿ ನಿನ್ನಅಡಿಗಳ ಪೂಜಿಪೆ ಸಡಗರದಿಂದಲಿ 4ಪರಿಮಳೋದಕದಿಂದ ನಿನ್ನಚರಣಗಳನು ತೊಳೆದು ದಿವ್ಯವರಮಣಿಯ ಪೀಠದಲಿ ಕೂಡಿಸಿಪರಿಪರಿ ಪುಷ್ಪದಿ ಪೂಜಿಸಿ ನಲಿಯುವೆ 5ಹರಿಯರಾಣಿ ನಿನಗೆ ದಿವ್ಯಹರಿದ್ರಾಕುಂಕುಮಾಕ್ಷತೆಗಳಿಂದವರಕಲ್ಹಾರಪೂವ್ಗಳಿಂದಲಿಸುರಗಿ ಶಾವಂತಿಗಿ ತುರುಬಿಗೆ ಮುಡಿಸುವೆ 6ಎಣ್ಣೂರಿಗೆ ಹೋಳಿಗೆಯು ಕಡಬುಸಣ್ಣನಕ್ಕಿ ಶಾಲ್ಯನ್ನಗಳುಇನ್ನು ಬಗೆ ಬಗೆಯ ಭಕ್ಷಂಗಳನೂಸ್ವರ್ಣ ಪಾತ್ರೆಗಳಲ್ಲಿ ಇರಿಸುತ ನಲಿವರು 7ಕ್ಷೀರಘೃತದಧ್ಯಾನ್ನ ಮಂಡಿಗೆಶಾವಿಗೆ ಪರಮಾನ್ನಗಳನುಶ್ರೀರಮೇಶನಿಗರ್ಪಿಸೆನುತಬೇಡುವೆ ಪಾಡುವೆ ಕೊಂಡಾಡುತ ನಲಿಯುವೆ 8ಮುದ್ದು ಮಹಾಲಕ್ಷ್ಮಿ ನಿನಗೆಇಡಲಿ ದೋಸೆಗಳ ಸಹಿತಪದ್ಮನಾಭನಿಗರ್ಪಿಸೆನುತಶ್ರದ್ಧೆಯಿಂ ನಮಿಸುತ್ತಾ ಬೇಡುತಲಿರುವರು 9ಗಂಗಾಜನಕನರಸಿ ನಿನಗೆಮಂಗಳಾರುತಿಗಳ ಮಾಡಿಹಿಂಗಿಸುವೆ ಪಾಪಗಳೆನುತಾವಂದಿಸಿ ಸಾಷ್ಟಾಂಗದಿಂ ಚಂದದಿ ಪ್ರಾರ್ಥಿಪೆ 10ಕರ್ಪೂರದ ಅಡಿಕೆ ವೀಳ್ಯಅರ್ಪಿಸುತಲಿ ನಿನ್ನ ಪೂಜಿಸಿಮುಪ್ಪುರಾಂತಕ ಕಮಲನಾಭವಿಠ್ಠಲ ವಿಠ್ಠಲ ವಿಠ್ಠಲನರಸಿಯೆ 11
--------------
ನಿಡಗುರುಕಿ ಜೀವೂಬಾಯಿ
ಬಾರೆ ಸುಬುದ್ಧಿ ನಿನ್ನ ಕಾಣದೆ ಇರಲಾರೆ ಕಾಣೆ ಸಖಿ ಜಾಣೆ ಪ್ರವೀಣೆ ಪ.ಮಾರನ ಶರಗಣ ದಾರುಣ ನೀಗವ್ವನಾರಿ ನಾರೀಮಣಿ ಕಾಳಾಹಿವೇಣಿತೋರೆ ನಿನ್ನಧರದಸಾರಸುಧೆಯೆನಗೆಚಾರುಹಿತಾನಂದ ಕಾರಣ ನೀರೆ1ಮಂದಗಮನೆ ಕೇಳೆ ಇಂದಿಗೆ ನಿನ್ನರವಿಂದಶರನಿಟ್ಟಧ್ವರ್ಯ ಕುಚದ್ವಂದ್ವವಹೊಂದಲು ಬಂದಿಹ ಅವನೊಳುಹಿಂದುಮುಂದಾಡಲಿ ಬೇಡೆನಿಂದುಮಾತಾಡೆ2ಪಂಕಜಗಂಧಿ ಮುದಾಂಕಿತಳೆ ನಿನ್ನಸೋಂಕಲು ಪ್ರಸನ್ವೆಂಕಟೇಶಭೋಂಕನೆ ಬಂದಿಹ ಚಿಂತಾಯಕ ಹೃದಯಪರಿಯಂಕದಿ ಸುಖಿಸೇಳೇಣಾಂಕ ಮುಖಿ 3
--------------
ಪ್ರಸನ್ನವೆಂಕಟದಾಸರು
ಬಾರೊ ಬಾರೊ ಕೃಷ್ಣಬಾರೊ ಬಾರಯ್ಯಚಾರುನವರತ್ನದ ಹಸೆಯ ಏರು ಬಾರಯ್ಯಪ.ನಾರುವ ಮೈಯವನೆ ನೀರು ಬಿಟ್ಟು ಬಾರಯ್ಯಭಾರಹೊರೆಸೋದಿಲ್ಲ ಹಸೆಯ ಏರು ಬಾರಯ್ಯಕ್ವಾರಿ ಮಸೆದು ಕೋಪಿಸಬ್ಯಾಡದಾರಿಗಾಲ ಪರಿಯಬ್ಯಾಡಭಾರಕೊಡಲಿ ಧರಿಸಿ ನೀನು ಭೋರಾಡ ಬ್ಯಾಡ1ಮಡದಿಯ ಹಂಬಲದಿ ಅಡವಿ ಹಿಡಿಯ ಬ್ಯಾಡಯ್ಯತುಡುಗತನದಿ ಹಾಲು ಮೊಸರು ಕುಡಿಯ ಬ್ಯಾಡಯ್ಯಒಡವೆ ವಸ್ತ್ರ ಕಾಣೆ ನಿನಗೆ ಹಿಡಿದೇಜಿಎಲ್ಲವೂ ಕೃಷ್ಣಬಡಿವಾರಸಾಕೊನಿನ್ನ ಸಡಗರ ರಂಗಯ್ಯ 2ಅರ್ಥಿಲೆ ಪುರುಷ ರಾಮೇಶ ಮತ್ತೆ ಬಾರಯ್ಯಜಾರವೃತ್ತಿಗಳ ಜರೆದು ಹಸೆಯ ಹತ್ತ ಬಾರಯ್ಯಮಿತ್ರಿ ರುಕ್ಮಿಣಿ ಸತ್ಯಭಾವೆಯರುಮತ್ತೆ ಉಳಿದ ನಾರಿಯರು ಅತ್ಯಂತ ಶೋಭಿಸುತಲೆಮುತ್ತಿನ ಹಸೆಯ ಏರು ಬಾರಯ್ಯ ಕೃಷ್ಣ ಬಾರೊ ಬಾರೊ 3
--------------
ಗಲಗಲಿಅವ್ವನವರು
ಬಾರೋ ವಾರಣವದನಾ ತ್ರೈಲೋಕ್ಯ ಸನ್ಮೋಹನತೋರೋ ಕಾರುಣ್ಯ ಸದಾನಂದಾ ಪಮಾರಹರನ ಪರಿವಾರಕಧೀಶನೆನಾರಿ ಗಿರಿಜೆ ಸುಕುಮಾರನೆ ಧೀರನೆ ಅ.ಪಪೊಡಮಡುವೆನು ನಿನ್ನಯಾ ಚರಣಕ್ಕೆ ದೇವಾಎಡಬಿಡದೀಗಲೆನ್ನಯಾತೊಡರ್ಕಿ ಅಡವಿಯ ಕಡಿಕಡಿದಡಸುತಕಡುಬಡವಗೆ ತಡವಿಡದ್ವರ ಕೊಡುವಂತೆ 1ಝಗಝಗಿಸುವ ಪೀಠದಿ ಮಂಡಿಸಿಕೊಂಡುಸೊಗಸೊ ಸಾಗಿ ಊಟದೀಬಗೆಬಗೆ ಭಕ್ಷವ ತೆಗೆತೆಗೆದು ಮೊಗೆವಂತೆಮೃಗದೃಗಯುಗವರ ನಗೆಮೊಗ ಸುಗುಣನೆ 2ಫಣಿಶಾಯಿ ಗೋವಿಂದನಾ ದಾಸರ ವಂದ್ಯತ್ರಿನಯನಮೂರ್ತಿ ನಂದನಾಕಣುದಣಿ ನೋಡುವೆಮಣಿಗಣಭೂಷಣಝಣಝಣ ಕುಣಿಂiÀುುತ ಗುಣಮಣಿ ಗಣಪತಿ 3
--------------
ಗೋವಿಂದದಾಸ
ಬಿಡು ಮೂಢತನವ ಚಿತ್ತಷÀಂಡ ನಮ್ಮಕ್ರೀಡಾದ್ರಿಪನನೋಡುಕಂಡಪ.ಬೇಡಿದೀಪ್ಸಿತವೀವ ಗೂಢ ಸುರಮಣಿಯುಗೂಡಿನೊಳಿರೆ ಅರೆಗೋಡಿಯಾಡದೆ ಬಿಡು 1ಅರಸನೊಲಿದು ತಳವರನ ಓಲೈಸುವಪರಿಯಲಿ ಚಿರಧನಿಪರ ಆರಾಧನೆ ಬಿಡು 2ಗುರುದ್ವಿಜವೈಶ್ವಾನರಸಾಕ್ಷ್ಯದಿ ಗ್ರಹಿತತರುಣಿ ಇರೆ ಪರನಾರಿಯರ ಪಂಬಲವ ಬಿಡು 3ಸಿರಿವರದನವರ ಬಿರುದು ಹೊಗಳುತಲವರನಿತ್ಯಬೆರೆಯೋಣ ತರಕದಾರಿಯ ಬಿಡು4ದೊರೆಗಳ ದೊರೆ ನನ್ನರಸ ಪ್ರಸನ್ನವೆಂಕಟರಮಣನಿರೆ ಅನ್ಯಾಸುರ ಭೂತಾರ್ಚನೆ ಬಿಡು 5
--------------
ಪ್ರಸನ್ನವೆಂಕಟದಾಸರು
ಬಿನ್ನಪಲಾಲಿಸಯ್ಯ ಭಕ್ತಪರಾಧ-ವನ್ನು ಕ್ಷಮಿಸಬೇಕಯ್ಯ ಪ.ಅನ್ಯಾಯ ಕಲಿಕಾಲಕ್ಕಿನ್ನೇನುಗತಿಸುಪ್ರ-ಸನ್ನ ನೀನಾಗು ಸುಬ್ರಹ್ಮಣ್ಯ ಪಾವನಚರಿತ ಅ.ಪ.ಮಕ್ಕಳ ಮಾತೆಯಂದದಿ ಕಾಯುವ ಮಹ-ದಕ್ಕರದಿಂದ ಮುದದಿಸೊಕ್ಕಿನಿಂ ನಡೆವರ್ಗೆ ತಕ್ಕ ಶಿಕ್ಷೆಯನಿತ್ತುರಕ್ಕಸಾರಿಯೆ ಹಿಂದಿಕ್ಕಬ್ಯಾಡೆಮ್ಮನುದಿಕ್ಕಿಲ್ಲದವರ ಧಿಕ್ಕಾರ ಗೈದರೆಮಿಕ್ಕವರೆಮ್ಮನು ಲೆಕ್ಕಿಪರಿಲ್ಲ ದೇ-ವರ್ಕಳಮಣಿ ನಿನಗಕ್ಕಜವಲ್ಲವುಕುಕ್ಕುಟಧರವರ ಮುಕ್ಕಣ್ಣತನಯ 1ಜಾತಿ ನೀತಿಯನು ಬಿಟ್ಟು ಡಾಂಭಿಕತನದರೀತಿಗೆ ಪ್ರೀತಿಪಟ್ಟುಸೋತು ಹಣವ ಕೊಟ್ಟು ಖ್ಯಾತರೆಂಬುವಗುಟ್ಟುಮಾತು ಮಾತಿಗೆ ತೋರಿ ಘಾತವ ಗೈವರ್ಮೀರಿಯಾತುಧಾನರಗುಣಯಾತಕ್ಕರಿಯದುಭೂತೇಶ್ವರಸಂಜಾತ ಸುರನರ-ವ್ರಾತಾರ್ಚಿತ ಪುರಹೂತಸಹಾಯಕನೂತನಸಗುಣವರೂಥಪುನೀತ2ಯಾವ ಕರ್ಮದ ಫಲವೋ ಇದಕಿ-ನ್ಯಾವ ಪ್ರಾಯಶ್ಚಿತ್ತವೋಯಾವ ವಿಧವೊ ಎಂಬ ಭಾವವರಿತ ಪುರುಷಈ ವಸುಧೆಯೊಳಿಲ್ಲ ಶ್ರೀವಾಸುದೇವ ಬಲ್ಲದೇವ ಲಕ್ಷ್ಮೀನಾರಾಯಣನಪಾದಸೇವಕನೀ ಮಹಾದೇವನ ಸುತ ಕರು-ಣಾವಲಂಬಿಗಳಕಾವನಮ್ಮಯ ಕುಲ-ದೇವ ವಲ್ಲೀಪತಿ ಪಾವಂಜಾಧಿಪ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಿಲ್ವೊದೇಶ್ವರ ಶ್ರೀ ಮದುಮಾವಲ್ಲಭಸಂತತ ಪಾಲಯಮಾಂಪ.ನಾಕಪವಂದ್ಯ ಕೃಪಾಕರ ಪಾಪನೇಕ ನಿವಾರಕ ಮೂಕಹರಲೋಕೇಶೇಶ ನಿಶಾಕರ ಶೇಖರಶ್ರೀಕರಕಾಯ ಪಿನಾಕಧರ 1ಭುಜಗಾಭರಣ ಗಜಮದಹರಣಗಜಚರ್ಮಾಂಬರ ಸುಜನವರದ್ವಿಜರವಿ ವೃಷಧ್ವಜಾಸಮಲೋಚನರಜನೀಚರ ತ್ರಿಪುರಜಮಥನ 2ದುರ್ಧರ್ಷಾಂಧಕ ಮದರ್Àಕ ಶಂಭೊನಿರ್ದೋಷ ಶ್ವೇತಾದ್ರಿ ಪ್ರಭೊಸ್ವರ್ಧುನಿಸಹಿತ ಕಪರ್ದಿನ್ ಶಿವಶಿವಊಧ್ರ್ವ ಪಟಾರ್ಚಕವದನಭೋ3ಗರಕಂಧರ ವೃಷಚರ ಅದ್ಭುತ ನಿಕರಪರಿಚರ ಪಾಂಡುರಗಾತ್ರಶಿರಮಾಲಾನ್ವಿತ ಸ್ಫುರತ್ಕಪಾಲಿನ್ಹರಹರಭವಸುಖಕರ ಮೂರ್ತೆ4ಶಂಕರ ಸುಗುಣಾಲಂಕೃತ ಭಕ್ತಾತಂಕವಿದೂರಕ ಶಂಖ ರಥಾಂಗಾಂಕಿತ ಪ್ರಸನ್ವೆಂಕಟನಾಯಕಕಿಂಕರಜನಪ್ರಿಯ ತ್ವಂ ಕೃಪಯಾ5
--------------
ಪ್ರಸನ್ನವೆಂಕಟದಾಸರು
ಬೇಡುವೆ ನಿನ್ನನು ಜೋಡಿಸಿ ಕರಗಳ |ಕೂಡಲೆ ವರಗಳ | ನೀಡುವದೀಶನೆ ಪನಂದನ ಕಂದ ಮುಕುಂದ ಮುರಾರೆ |ಸುಂದರ ಶುಭಕರ | ಮಂದರೋದ್ಧಾರ 1ಶಂಕರ ಹಿತನೇ ಪಂಕಜನಾಭನೇ |ವೆಂಕಟರಮಣನೆ | ಶಂಖಚಕ್ರಧರನೇ 2ಸುರನರಕಿನ್ನರ| ತುಂಬುರ ನಾರದರ್ |ಪರಿಪರಿಯಲಿ ನಿನ್ನ | ಸ್ಮರಿಸುತಲಿಹರೂ 3ಅಸುರರ ಬಾಧೆಯೊಳ್ | ಸುರರೆಲ್ಲ ಭಜಿಸಲು |ಕುಶಲದಿ ಭಕ್ತರ|ಪೊರೆದೆ | ಗೋವಿಂದನೇ 4
--------------
ಗೋವಿಂದದಾಸ
ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ಪ.ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿ 1ನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ 2ಕರ್ಪರಭಾಂಡಕಂದರ್ಪಹರೆನ್ನಿಸರ್ಪಭೂಷಣ ಸುಖದರ್ಪಣನೆನ್ನಿ 3ಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ 4ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿ5ಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ 6ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆವರ್ಧಕನೆನ್ನಿ 7ಶರಣು ಸುರಾರ್ಚಿತ ಚರಣನೆ ಎನ್ನಿಶರಣಾಗತರಾಭರಣನು ಎನ್ನಿ 8ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿ 9ದಕ್ಷಯಜÕವೀಕ್ಷಕನೆನ್ನಿಪಕ್ಷಿಗಮನ ಭಟರಕ್ಷಕನೆನ್ನಿ 10ಈಪರಿನೆನೆದರೆ ಪಾಪದೂರೆನ್ನಿಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ 11
--------------
ಪ್ರಸನ್ನವೆಂಕಟದಾಸರು
ಭಕ್ತವತ್ಸಲ ಬಂದು ಬಾಗಿಲಲಿ ನಿಂತುಎತ್ತ ಹೋದನೆಂದು ಧಿಗಿಲು ಎನುತಮತ್ಯಾಕೆ ಬರಲಿಲ್ಲವೊ ಅರ್ಜುನರಾಯ ಪ.ವೀರರಾಯರÀ ಸೇವೆ ಪರಿಪರಿ ಮಾಡಿದ್ದುಮರೆತುಕೊಂಡು ಧರ್ಮ ದೊರೆಯಾಗಿ ಕುಳಿತ 1ಪಾಂಚಾಲಿ ರಮಣನು ಪಂಚ ಪಗಡೆಯನಾಡಿವಂಚನೆ ಮಾಡದೆ ಹಂಚಿಕೆಯಲಿಕುಳಿತ 2ಧಿಟ್ಟ ಭೀಮರಾಯ ಹುಟ್ಟು ಬಚ್ಚಿಟ್ಟುಕೊಂಡುಸಿಟ್ಟಿಲಿಂದ ಮೈ ಮುಟಿಗ್ಯಾಗಿ ಕುಳಿತ 3ಪುಂಡ ಭೀಮರಾಯ ಮಂಡಿ ಕೆದರಿಕೊಂಡುಖಂಡಗನ್ನವ ಉಂಡು ದಿಂಡೆನ್ಹಾಂಗ ಕುಳಿತ 4ಚಲ್ವ ಅರ್ಜುನರಾಯ ಬಿಲ್ಲು ಮೂಲೆಗೆ ಇಟ್ಟುಒಲ್ಲಿಯ ಮುಸುಕು ಹಾಕಿ ಎಲ್ಲೋ ಹೋಗಿ ಕುಳಿತ 5ಹೆÀಚ್ಚಿನ ಗಾಂಡೀವ ಬಚ್ಚಿಟ್ಟು ಕೋಣ್ಯಾಗೆಹುಚ್ಚನ್ಹಾಂಗೆಮಾರಿಮುಚ್ಚಿಕೊಂಡು ಕುಳಿತ6ಚದುರ ನಕುಲರಾಯ ಎದುರಿಗೆ ಬಾರದೆಹೆದರಿಕೊಂಡು ತಾನು ಕುದುರೆ ಮನೆಯ ಹೊಕ್ಕ 7ಧನವೆತ್ತಿಸಹದೇವಘನವಿದ್ಯಾನರಿಯದೆದನಕರುಗಳನ್ನೆಲ್ಲ ಅನುಸರಿಸಿ ಇರುವ 8ಪಾಂಡವರೆ ಶ್ರೇಷ್ಠರು ಧೈರ್ಯವೆ ಇರಲೆಂದುಶೌರಿಕುರುರಾಯಗೆ ತಾ ನುಡಿದನು9ಇಷ್ಟೂರು ಹರಿಗಂಜಿ ಬಿಟ್ಟರು ಕೈಕಾಲುಧಿಟ್ಟ ಬಲರಾಮ ತಾ ‌ಘಟ್ಯಾಗಿ ಕೈ ಹೊಯಿದನು 10ಇಷ್ಟೊಂದು ಗಾಬರಿ ದಿಟ್ಟೆಯರೆ ಆಗದಿರಿಕೊಟ್ಟನುಅಭಯದಿಟ್ಟ ರಾಮೇಶ11
--------------
ಗಲಗಲಿಅವ್ವನವರು
ಭಜಿಸಿ ಬಹು ಭಕುತಿಯಿಂದತ್ಯಜಿಪ ಭವಬಂಧನವ ಹರಿಯ ಪದವ ಪ.ಮನವೈರಿಯಂ ಪಿಡಿದು ಮಿತ್ರನಂ ಮಾಡಿ ಕೊಂಡನುನಯದಿ ವೈರಾಗ್ಯ ಘನಸಿರಿಯೊಳುದಿನದಿನಕೆ ಮುದವೇರಿ ತಾತ್ವಿಕರೊಡನೆ ಮಧ್ವಮುನಿರಾಯನೊರೆದಪರಿಹರಿಯ ಪಾದವ1ತುದಿಮೊದಲೆ ಸರ್ವಕಾಲಕೆ ಚಿಂತನೆಯ ಬಲಿದುಪದುಮಾಕ್ಷನಾಕೃತಿಯ ನೋಡಿ ದೃಢದಿಕದಲಗುಡದಂತಃಕರಣ ಸ್ನೇಹ ಸಾರವನುಹೃದಯ ಮಂಟಪದೊಳಗೆ ಹರಿಯ ಪದವ 2ಹರಿಪರಾತ್ಪರ ಲಕುಮಿ ಅರಸಿ ಅಜಕುವರ ಹರವರಪೌತ್ರ ಸುರಮುನಿಜನರು ದಾಸರುತರತಮದ ತಂತ್ರಸಾರ್ಥದಿಂನೆರೆನಂಬಿಅರಸ ಪ್ರಸನ್ವೆಂಕಟ ಶ್ರೀಹರಿಯ ಪದವ 3
--------------
ಪ್ರಸನ್ನವೆಂಕಟದಾಸರು