ಒಟ್ಟು 413 ಕಡೆಗಳಲ್ಲಿ , 78 ದಾಸರು , 350 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟೇಶನ ಮಹಿಮೆಯ ಹೊಗಳುವಕಿಂಕರಧನ್ಯನಯ್ಯಪ.ಇಳೆಯ ಭಕ್ತರ ನೋಡಿದ ವೈಕುಂಠದಿಂದಿಳಿದು ಶ್ರೀಸಹಿತ ಬಂದಸಲೆ ಸುವರ್ಣಮುಖರಿಯ ತೀರವಒಲಿದು ನಿಂತನು ತಿಮ್ಮ್ಮಯ್ಯ 1ಭೂವರಾಹ ಸ್ವಾಮಿಯ ಸನ್ನಿದಶ್ರೀವತ್ಸಲಾಂಛನಿಹಶ್ರೀವಿಮಾನಸಹಿತ ದೇವಾಧಿದೇವ ತಾನಿಲ್ಲಿ ನಿಂತ 2ಸ್ವಾಮಿ ಪುಷ್ಕರಿಣಿಯೆಂಬ ತೀರ್ಥದನಾಮದ ಮಹಿಮೇನೆಂಬೆಆ ಮಹಾ ದುಷ್ಕøತವು ಸ್ನಾನದನೇಮದಲ್ಲೋಡುವುದು 3ರಾಜಾಧಿರಾಜನಿತ್ಯಉಪಚಾರಪೂಜೆ ಲೋಕಾರ್ಥದೊಳು ತಾಮೂಜಗಕಾನಂದವವರಕರುಣಾಜಲಧಿ ಕೊಡುವ 4ನಿತ್ಯಸ್ವಾರಿಗೈದುವಸುರಋಷಿಮೊತ್ತದಿ ಚರಿಪದೇವಮತ್ತೆ ಆ ಲಕ್ಷ್ಮಿಯ ಕೂಡ ಮುನಿವದೊಂದರ್ತಿಯ ಬುಧರು ನೋಡಿ 5ನುಡಿವ ಸಾವಿರ ಪೇರ್ಗಂಟೆ ಉಬ್ಬುಬ್ಬಿಹೊಡೆವರ್ಯೊಡೆ ಜಾಗಟೆಬಡಿವ ಕರಡೆ ಭೇರಿಯು ಮುಂದೆ ಉಗ್ಗಡಿಪ ಸಾಮಗಾನವು 6ಚಿತ್ರವರ್ಣದ ಸತ್ತಿಗೆ ಸಾಲ್ಗಳುಸುತ್ತಲು ಕೈ ದೀವಿಗೆಉತ್ತಮ ವಾಹನವೇರಿ ವಿಶ್ವದಕರ್ತಬಂದನು ಉದಾರಿ7ಉದಯ ತೋಮಾಲೆ ಸೇವೆ ಪುಳುಕಾಪುಮೊದಲಾದ ದಿವ್ಯಸೇವೆಒದಗಿದವಸರಂಗಳು ನೈವೇದ್ಯಮೃದುಭಕ್ಷ್ಯವರಪೊಂಗಲು8ಅತಿರಸ ಮನೋಹರವುದಧ್ಯನ್ನಅತಿರುಚಿ ಅನ್ನವಾಲವುಕ್ಷಿತಿಯ ಮೇಲಿಹ ಭಕ್ತರು ಶ್ರೀಲಕ್ಷ್ಮೀಪತಿಗೆ ಅರ್ಪಿಸುತಿಹರು 9ಹೂವಿನಂಗಿಯ ತೊಡುವಮೃಗಮದಲಾವಣ್ಯ ತಿಲಕಿಡುವಕಾವನಂತರ ತೇಜವ ಗೆಲ್ಲುವಸಾವಿರ ಹೆಸರ ದೇವ 10ತಪ್ಪದೆ ನುಡಿವಂದನು ಮುಡಿಪಿನಕಪ್ಪವೆಣಿಸಿ ಕೊಂಬನುಚಪ್ಪನ್ನ ದೇಶಸ್ತರು ಬಂದು ಸಮರ್ಪಣೆ ಮಾಡುವರು 11ಕೊಟ್ಟ ವಾಕ್ಯಕೆ ತಪ್ಪನು ವರಭಯವಿಟ್ಟು ಸಾಕುತಲಿಪ್ಪನುಇಷ್ಟಾರ್ಥದಾತನಯ್ಯ ವಿಶ್ವದಶಿಷ್ಟರೊಡೆಯ ತಿಮ್ಮಯ್ಯ 12ಕಿರೀಟ ಕುಂಡಲವಿಟ್ಟನು ತಿಮ್ಮಯ್ಯಕರುಣ ನೋಟದ ಚೆಲ್ವನುಅರಿಶಂಖವನು ಧರಿಸಿದ ಹಾರಕೇಯೂರ ಕೌಸ್ತುಭದಲೊಪ್ಪಿದ 13ತೋಳಬಂದಿಯು ಕಂಕಣಮುದ್ರಿಕೆಕೀಲುಕಡಗಒಡ್ಯಾಣನೀಲಮಾಣಿಕ ಪಚ್ಚದ ಮುತ್ತಿನಮಾಲೆಗಳಿಂದೊಪ್ಪಿದ 14ಮಣಿಮಯ ಕವಚ ತೊಟ್ಟ ಗಳದಲಿಮಿನುಗುವಾಭರಣವಿಟ್ಟಕನಕಪೀತಾಂಬರವು ಕಟಿಯಲ್ಲಿಅಣುಗಂಟೆಗಳೆಸೆದವು 15ರನ್ನದಂದುಗೆಯನಿಟ್ಟಿಹ ಪಾದಕೆಪೊನ್ನಹಾವುಗೆಮೆಟ್ಟಿಹಘನ್ನ ದೈತ್ಯರ ಸೋಲಿಪ ಬಿರುದಿನಉನ್ನತ ತೊಡರಿನಪ್ಪ 16ದಿನಕೆ ಸಾವಿರ ಪವಾಡ ತೋರುವಜನಕೆ ಪ್ರತ್ಯಕ್ಷ ನೋಡಘನಶಾಮ ತಿರುವೆಂಗಳ ಮೂರ್ತಿಯಮನದಣಿಯೆ ಹೊಗಳಿರೆಲ್ಲ 17ಭೂವೈಕುಂಠವಿದೆಂದು ಸಾರಿದಭಾವಿಕ ಭಕ್ತ ಬಂಧುಶ್ರೀ ವಾಯುಜಾತ ವಂದ್ಯ ಶ್ರೀನಿವಾಸಗೋವಿಂದ ನಿತ್ಯಾನಂದ 18ಸೇವಕಜನರಪ್ರಿಯಅರುಣರಾಜೀವಲೋಚನ ತಿಮ್ಮಯ್ಯದೇವಶಿಖಾಮಣಿಯು ಬ್ರಹ್ಮಾದಿದೇವರಿಗೆ ದೊರೆಯು 19ಕಶ್ಚಿಜ್ಜೀವನೆನ್ನದೆ ನನ್ನನುನಿಶ್ಚಯದಲಿ ಹೊರೆವನುಆಶ್ಚರ್ಯಚರಿತ ನೋಡಿ ಶರಣರವತ್ಸಲನ ಕೊಂಡಾಡಿ 20ಆರಾಶ್ರಯಿಲ್ಲೆನಗೆ ದ್ರಾವಿಡವೀರನೆ ಗತಿಯೆನಗೆಭೂರಿಪ್ರಸನ್ವೆಂಕಟಪತಿ ಸುಖತೀರಥವರದ ನಮೊ 21
--------------
ಪ್ರಸನ್ನವೆಂಕಟದಾಸರು
ಶಾಂತ ಶಾಂತವು ಎಂದು ಎಂಬರಿ ನಿಮ್ಮನುಶಾಂತವಿಂತಿರುತಿರೆ ಶಾಂತಶಾಂತವಿಂತಿರೆ ಜೀವ ಮುಕ್ತನುಶಾಂತಿಲಿ ಭ್ರಾಂತಿರೆ ಭಯವುಕೃತಾಂತಪಸತಿಜಾರೆಯಾಗಲು ಗುರುನಾಥಲೀಲೆಯೆಂದುಸತಿಗನುಕೂಲವೇ ಶಾಂತಖತಿಯ ಮಾಡಲು ನಾನಾಜನರು ಚಂಚಲವಾಗದಸ್ಥಿತಿಯೇ ಶಾಂತ ಸತತ ಸಂಸಾರ ಕರಕರೆ ಬಳಲಿಕೆಸಂಗವಿಲ್ಲದಿಹುದೇ ಶಾಂತಅತಿ ಚೋರ ಸುಲಿದೊಯ್ಯೆ ಆನಂದದಲಿನಸುನಗುತಿರುವುದೇ ಶಾಂತ1ವಿಷವನಿಕ್ಕಿದವರನ್ನು ಕಾಣಲು ಅವರೊಳುವಿಶ್ವಾಸವಿಹುದೇ ಶಾಂತದುಶ್ಮನನು ತನ್ನನ್ನು ಕಡಿಯಬರೆ ಇದುಮೋಕ್ಷವೆಂಬುದೆನೆ ಶಾಂತಮುಸುಕಿನ ಮಾತ ಊರ ಮುಂದಿಕ್ಕಲುಮತಿಗೆಡದಿಹುದದು ಶಾಂತಹಸಿದು ಮಕ್ಕಳು ಅಳೆ ಹೆಂಡತಿ ರೋಧಿಸೆಕುಸಿದು ಬೀಳದೊಡದು ಶಾಂತ2ಕೊಟ್ಟಿದ್ದು ಸುಳ್ಳು ಎಂಬುವರೆದುರಿಗೆಕೊಟ್ಟಿಲ್ಲವೆಂಬುದೇ ಶಾಂತಭ್ರಷ್ಟರು ನಾನಾ ನಿಂದೆಯ ಮಾಡಲುಭಯ ಹುಟ್ಟದಿರುವುದೇ ಶಾಂತಬಿಟ್ಟುಹೋಗಲು ತನ್ನಸತಿಸುತರೆಲ್ಲರುಭ್ರಾಂತಿಯ ತೋರುವುದೇ ಶಾಂತದಿಟ್ಟ ಚಿದಾನಂದ ಸದ್ಗುರು ತಾನಾಗಿದೃಢನಾಗಿಹುದದು ಶಾಂತ3
--------------
ಚಿದಾನಂದ ಅವಧೂತರು
ಶಿವಸುಖದಲಿ ನೀ ನಲಿಯೊ |ನಿಜ ಮುಕ್ತಿಯ ಕಲಿಯೊಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನಾಥನೆಂಬುವ ಭಾವವನಳಿಯೊ |ಚಿನ್ಮಯ ಜÕಪ್ತಿ ಪ್ರಕಾಶದಿ ಸುಳಿಯೊ1ಮೋಹ ಮಹತ್ವದ ಕೋಹಂ ಅಳಿಯೋ |ಸೋಹಂ ಚಿನ್ಮಯ ಸ್ತುತಿ ತಿಳಿಯೊ2ಅಷ್ಟರಿಪುಗಳನು ಸುಟ್ಟು ನಿಜ ಉಳಿಯೊ |ಶ್ರೇಷ್ಠ ಪರಮಗುರು ದೀಪ್ತಿಲಿ ಹೊಳೆಯೊ3
--------------
ಜಕ್ಕಪ್ಪಯ್ಯನವರು
ಶ್ರೀ ಕೃಷ್ಣ ಪ್ರಾದುರ್ಭಾವ ಸ್ತುತಿ23ಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖ ಬಲ ಚೇಷ್ಟರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪ.ಅನುಪಮಾದ್ಭುತ ಬಾಲಕನು ಅಂಬುಜೇಕ್ಷಣರತ್ನ ಕಿರೀಟ ಪೊಳೆವಕೌಸ್ತುಭಮಣಿಉರದಿ ಶ್ರೀವತ್ಸ ಚತುರ್ಭುಜನೇ | ಪಾಂಚಜನ್ಯ ಕೌಮೋದಕೀ ಸುದರ್ಶನ ಸರೋಜ 1ಉದ್ದಾಮ ಕಾಂಚನಾಂಗದ ಕಂಕಣಾದಿಗಳ್ಪೀತಾಂಬರ ಪಾದನೂಪುರ | ಪೂರ್ಣೇಂದುಮುದ್ದು ಮುಖ ಮುಗುಳ ನಗೆ ಸುಳಿಗೊರಳು ಶುಭನೋಟ |ಮೋದ| ಚಿನ್ಮಯ ಹೀಗೆ ಪ್ರಾದುರ್ಭವಿಸಿದೆಯೋ2ಈರೂಪವಸುದೇವ ನೋಡಿ ಸ್ತುತಿಸಿದ ನಿನ್ನಅರಿಯೆ ನಾ ವರ್ಣಿಸಲು ನಿನ್ನ ಗುಣರೂಪಶರಣು ಆತ್ಮನೇ ಪರನೇ ಉದ್ದಾಮ ಹರಿಕೃಷ್ಣಶರಣು ಸರ್ವಾಶ್ರಯನೇ ಶ್ರೀಶ ಮಾಂಪಾಹಿ3ಜಯತು ದೇವಕೀತನಯಸತ್ಯಾ ರುಕ್ಮಿಣೀ ಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗತ್ ಜನ್ಮಾದಿಕರ್ತ ಜಗನ್ನಾಥಜಯತು ಜಗತ್ ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ &ಟsquo;ಪ್ರಸನ್ನ ಶ್ರೀನಿವಾಸ&ಡಿsquo; ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಗೋಪಾಲ ದಾಸಾರ್ಯವಿಜಯಶ್ರೀ ಲಕ್ಷ್ಮೀ137ಭಾಗಣ್ಣ ಗೋಪಾಲ ದಾಸಾರ್ಯರ್ ಪಾದಕ್ಕೆಬಾಗಿ ಶರಣಾದೆನು ಸತತ ನಿಶ್ಚಯದಿಜಗದಾದಿಕರ್ತಅಜಅಘದೂರ ಸುಗುಣಾಬ್ಧಿತುರಗಾಸ್ಯವಿಜಯಶ್ರೀನಿವಾಸ ಪ್ರಿಯತಮರು || ಭಾಗಣ್ಣಪನಾರಸುಗುಣಾರ್ಣವನು ಶ್ರೀರಮಾಪತಿ ಹಂಸಸರಿಸಿಜಾಸನಸನಕದೂರ್ವಾಸಇಂಥಾಪರಮೋತ್ಕøಷ್ಟಗುರುಪರಂಪರೆಗೆ ಶರಣೆಂಬೆಪುರುಷೋತ್ತಮಾಚ್ಯುತ ಪ್ರೇಕ್ಷರಿಗೆ ಶರಣು 1ಸದಾಗಮಾಮಾಯಗಳು ಬ್ರಹ್ಮ ಧಾಮವೆÉಂದುಉದ್ಘೋಷಿಸುತಿವೆ ಮುಖ್ಯವಾಯುದೇವಮಾತರಿಶ್ವಸೂತ್ರಪವಮಾನಮುಖ್ಯಪ್ರಾಣಪ್ರತಿರಹಿತ ಬಲಜ್ಞಾನರೂಪಹನುಮ ಭೀಮ ಮಧ್ವನ್ನ2ಪ್ರೋಚ್ಚಸುರವರ ವಾಯುವಿನ ತೃತೀಯಾವತಾರ ಮಧ್ವಅಚ್ಯುತಪ್ರೇಕ್ಷರಲಿ ಸಂನ್ಯಾಸಕೊಂಡುಪ್ರಚ್ಛನ್ನ ಬೌದ್ಧಾದಿ ಮತ ಪಂಕದಿ ಬಿದ್ದಿದ್ದಸಜ್ಜನರನ್ನುದ್ಧರಿಸಿ ಸತ್‍ಜ್ಞಾನವಿತ್ತ 3ಶ್ರೀ ಮಧ್ವಗುರು ವಂಶಸ್ಥಪದ್ಮನಾಭನರಹರಿಮಾಧವಾಕ್ಷೋಭ್ಯಜಯ ವಿದ್ಯಾಧಿರಾಜವಿದ್ಯಾಧಿರಾಜರ ಶಿಷ್ಯರು ಈರ್ವರುಸಾಧು ಉತ್ಕøಷ್ಟರೀ ತೀರ್ಥರ್‍ಗಳಿಗೆ ಶರಣು 4ಶ್ರೀ ವಿದ್ಯಾಧಿರಾಜರ ಪ್ರಥಮ ಶಿಷ್ಯ ರಾಜೇಂದ್ರಹಸ್ತಪದ್ಮ ಜಾತರು ಜಯಧ್ವಜಾರ್ಯಮಾಧವನ ಏಕಾಂತ ಭಕ್ತ ಪುರುಷೋತ್ತಮರುತತ್ಸುತ ಬ್ರಹ್ಮಣ್ಯರೀ ಸರ್ವರಿಗೂ ಶರಣು 5ಪದ್ಮನಾಭತೀರ್ಥಜ ಲಕ್ಷ್ಮೀಧರರ ವಂಶಜಾತ ಸುವರ್ಣವರ್ಣ ತೀರ್ಥಾಭಿದರಸುತಲಕ್ಷ್ಮೀ ನಾರಾಯಣ ಯತಿವರ್ಯ ಶ್ರೀಪಾದರಾಜರು ಈ ಸರ್ವರಿಗೂ ಶರಣು 6ಶಿಂಶುಮಾರಪುಚ್ಛಶ್ರಿತರ ಅವತಾರರೇವಸುಮತೀಖ್ಯಾತ ಶ್ರೀಪಾದರಾಜರಲಿಭಾಷ್ಯಾಧಿಗಳ ಕಲಿಯೇ ಬ್ರಹ್ಮಣ್ಯ ತೀರ್ಥರಶಿಷ್ಯವರ್ಯ ವ್ಯಾಸರಾಜರು ಸೇರಿದರು 7ವಾದಿಗಜಕೇಸರಿಮಧ್ವಮತೋದ್ಧಾರರುಮೇದಿನೀ ಪ್ರಖ್ಯಾತ ಮಹಾಭಾಗವತರುಸಾಧುಜನ ಆಹ್ಲಾದ ಶ್ರೀ ವ್ಯಾಸರಾಜರಲಿಸದಾ ಶರಣು ಪಾಲಿಪರುಪ್ರತಿಕ್ಷಣ ದಯದಿ8ಆನಂದ ಮುನಿಕರ ಅರವಿಂದ ಸಂಜಾತವಿಷ್ಣುತೀರ್ಥ ವಂಶಜ ವಾಗೀಶರಹಸ್ತವನರುಹೋತ್ಪನ್ನರು ಸುಮಹಾಮಹಿಮರುಘನದಯಾನಿಧಿ ವಾದಿರಾಜ ಸ್ವಾಮಿಗಳು9ಯುಕ್ತಿಮಲ್ಲಿಕಾ ಮೊದಲಾದ ತತ್ವಬೋಧಕವಾದಗ್ರಂಥ ಪದ್ಯ ಕೀರ್ತನೆಗಳ್ ಸಜ್ಜನರಿಗಿತ್ತುಸೋದೆಯಲ್ಲಿ ತ್ರಿವಿಕ್ರಮಮೂರ್ತಿ ನಿಲ್ಲಿಸಿಹರುಭೂಧರಹಯಾಸ್ಯಪ್ರಿಯತಮ ಶ್ರೀ ವಾದಿರಾಜಾರ್ಯ10ತೀರ್ಥಪಾದ ಶ್ರೀಪತಿಯು ಬ್ರಹ್ಮ ಶಿವಾದ್ಯಮರ ಸಹಸದಾ ಸನ್ನಿಹಿತವಾಗಿರುವ ಮತ್ತುತೀರ್ಥವನ ಕ್ಷೇತ್ರಗಳೊಳುತ್ತಮ ವೃಂದಾವನದಿಅತ್ಯಕ್ತ ದೇಹದಿ ಕುಳಿತಿಹರು ಗುರುರಾಟ್ 11ಬುಧರು ತಿಳಿದಂತೆಯೇ ಬ್ರಹ್ಮಾಂಡ ಪುರಾಣದಲ್ಲಿವಾದಿರಾಜರು ಭಾವೀಕಲ್ಪ ಮುಖ್ಯವಾಯುಎಂದು ಪ್ರಸಿದ್ಧರೀ ಸುದುಪಾಸ್ಯ ಮದ್ಗುರುವರ್ಯರಲ್ಲಿ ಶರಣಾದೆಸದಾನಮೋ ಲಾತವ್ಯಾಚಾರ್ಯ ಕರುಣಾಬ್ಧೆ 12ವಿದ್ಯಾಧಿರಾಜರ ಎರಡನೇ ಶಿಷ್ಯರುಕವೀಂದ್ರ ಪೀಳಿಗೆಯ ಶ್ರೀರಾಮಚಂದ್ರದ್ವಿತೀಯಶಿಷ್ಯ ವಿದ್ಯಾನಿಧಿ ವಂಶಜಾತರುಆದ್ಭುತಮಹಿಮರು ಕರುಣಿ ರಘೋತ್ತಮರು 13ಕಾಮಿತಪ್ರದ ಟೀಕಾಭಾವ ಬೋಧಾರ್ಯರುಎಮ್ಮಪಾಲಿಪ ರಘೋತ್ತಮರಿಗೆ ಶರಣುರಾಮಚಂದ್ರರ ಮೊದಲನೆ ಶಿಷ್ಯ ವಿಬುಧೇಂದ್ರಈ ಮಹಾತ್ಮರ ವಂಶಜರು ಸರ್ವರಿಗೂ ನಮಿಪೆ 14ದುರ್ಜನರ ಕುಮತಗಿರಿವಜ್ರ ವಿಜಯೀಂದ್ರರುಸಜ್ಜನರುದ್ಧಾಕರು ಸುಧೀಂದ್ರಸೂರಿನಿಜವಿರಾಗಿ ಯಾದವೇಂದ್ರ ವಿಜ್ಞಾನಿಯುಭಜಕಜನಸುರಧೇನುರಾಘವೇಂದ್ರಾರ್ಯ15ಯಾರುಹಿಂದೆ ಏಡಮೂಕ ಬ್ರಾಹ್ಮಣನಾಗಿದ್ದಾಗಯಾರದ್ವಾರಾ ಶ್ರೀ ವಾದಿರಾಜರು ಸ್ವಪ್ನದಲ್ಲಿಉತ್ಕøಷ್ಟ ಶುಭತಮ ವೃಂದಾವನಾಖ್ಯಾನ ತಾವೇ ಹೇಳಿದರುಆಸೂರಿ ವಿಶ್ವಪ್ರಿಯಾರ್ಯರಿಗೆ ಶರಣು 16ಸೂರಿಕುಲತಿಲಕರು ವಾದಿಕರಿಹರಿ ಖ್ಯಾತಸಿರಿವ್ಯಾಸರಾಯರಲಿ ಮುದ್ರಿಕೆಯಕೊಂಡನಾರದರ ಅವತಾರರೆಂದು ಪ್ರಸಿದ್ಧರುಪುರಂದರದಾಸಾರ್ಯ ಕರುಣಾಂಬುಧಿಗೆ ಆನಮಿಪೆ17ನಿರ್ಝರ ವೃಂದ ಋಷಿ ಭೃಗುಮುನಿಯೇ ಧರೆಯಲ್ಲಿವಿಜಯದಾಸಾರ್ಯರಾಗಿ ಮೆರೆದವರ್ಗೆ ಶರಣುವಿಜಯವಿಟ್ಠಲನೊಲಿಯೆ ಜ್ಞಾನ ಭಕ್ತಿಸತ್ತತ್ವಸಜ್ಜನರಿಗೆ ಬೋಧಿಸಿದ ನಿವ್ರ್ಯಾಜ ಕರುಣಿ 18ಆಲಸ್ಯದಿನಾ ಮೈಥಿಲೀಪತಿ ಪಲ್ಲಿಯಲ್ಲಿಮಲಗಿರಲು ಶ್ರೀ ಗೋಪಾಲದಾಸಾರ್ಯರುಬಲುಕರುಣದಲ್ಲಿ ಮುಂದೆ ನಿಂತು ಯತಿಕೃತಮಾಲೋಲ ಪೂಜೆನೋಡಿ ಒದಗಿದ ಗುರುವರ್ಯ 19ಉಮಾಸೂನು ವಿಘ್ನಹರ ಕ್ಷಿಪ್ರಪ್ರಸಾದನುಈ ಮಹೀಯಲ್ಲಿ ಗೋಪಾಲದಾಸರಾಗಿರಮಾಪತಿಯ ಸೇವಿಸಿ ಸಜ್ಜರನ್ನುದ್ಧರಿಸಿಹರುನಮಿಸಿ ಶರಣಾದೆ ಈ ಉದಾರ ಕರುಣಿಗೆ 20ಸುಪವಿತ್ರೆ ಸೌಭಾಗ್ಯಪ್ರದ ಮಂತ್ರಗಳನೆಗೆಉಪದೇಶಮಾಡಿದ ಕಪಿಗೋತ್ರದವರುಸುಪುಣ್ಯ ಶೇಶ್ಲೀಕರು ಉದಾರ ಸಾತ್ವಿಕರುಶ್ರೀಪತಿ ಕೃಷ್ಣಪ್ರಿಯ ಶ್ರೀರಾಮಾಚಾರ್ಯರಿಗೆ ಶರಣು 21ತರುಣತನಾರಭ್ಯ ಹರಿದಾಸತ್ವ ಒದಗಿಸಿಪರಿಪರಿ ವಿಧದಲ್ಲಿ ಔದಾರ್ಯದಿಂದಕಾರುಣ್ಯಬೀರಿ ಕಾಪಾಡುತಿರುವಂಥಾ ಈಹರಿಪ್ರತಿಮಾರೂಪ ಗುರುಸರ್ವರಿಗೂತಂದೆ ತಾಯಿಗೂ ಶರಣು 22ದಧಿಶಿಲಾ ಎಂಬುವರು ಆಡಂಬರ ಪ್ರಿಯರುಮಂದಿಗಳು ಮೊಸರು ಕಲ್ಲೆಂದು ಕರೆಯುವರುಸಾಧುವೈಷ್ಣವವಿಪ್ರಮುರಾರಿರಾಯರುಸಾಧ್ವಿ ವೆಂಕಮ್ಮ ದಂಪತಿ ಇದ್ದ ಕ್ಷೇತ್ರ 23ಪುತ್ರ ರತ್ನಗಳು ನಾಲ್ಕು ಈ ದಂಪತಿಗೆಅಗ್ರಜಭಾಗಣ್ಣ, ಸೀನಪ್ಪ, ದಾಸಪ್ಪತರುವಾಯ ರಂಗಪ್ಪ ನಾಲ್ಕನೆಯವನಾಗಿಗೌರವದಿ ಚರಿಸಿತು ಮುರಾರಿರಾಯರ ಕುಟುಂಬ 24ಸಂಸಾರಾವಸ್ಥೆಯಲ್ಲಿ ನಶ್ವರ ಸುಖ ದುಃಖಮಿಶ್ರವಾಗಿಯೆ ಉಂಟು ಆ ನಿಯತಿಯಲ್ಲಿಭೂಸುರವರ್ಯರು ಮುರಾರಿರಾಯರು ಸ್ವರ್ಗತಾ ಸೇರಿದರುಸತಿಸುತರನ್ನು ಬಿಟ್ಟು25ಬಾಲಕರನ್ನು ಪ್ರಿತ್ರವ್ಯರು ಲೆಕ್ಕಿಸದಿರಲುಮಾಲೋಲ ಪಾಲಿಸುವ ಕರ್ತನ್ನೇ ನಂಬಿಶೀಲೆ ವೆಂಕಮ್ಮ ಮಕ್ಕಳನ್ನ ಕರಕೊಂಡುಒಳ್ಳೆಯ ಜನಪದ ಶಂಖಪುರವೈದಿದಳು 26ಶಂಖಪುರ ಹತ್ತಿರವೇ ಹನೂಮಂತನ ಗುಡಿಮಕ್ಕಳ ಸಹ ಅಲ್ಲಿ ವಾಸಮಾಡಿಮುಖ್ಯ ಪ್ರಾಣದೇವರ ಸೇವಿಸಿದ ಫಲವಾಗಿಚಿಕ್ಕ ಜಮೀನು ಕೊಂಡಳು ದಾನವಾಗಿ 27ದಾನ ಕೊಟ್ಟವನಿಗೆ ಬಲು ಪುಣ್ಯ ದೊರೆಯಿತುದಾನಿಗಳುಭಾಗವತಶ್ರೇಷ್ಠರಾದ್ದರಿಂದಹನುಮ ಗೋಪಾಲಾನುಗ್ರಹದಿಂದ ಐವರೂಧಾನ್ಯಸಮೃದ್ದಿ ತೊರೆದರು ಆತಂಕ 28ಕುಲ್ಕರ್ಣಿ ಎಂಬಂಥ ಸರ್ಕಾರ ಅಧಿಕಾರಿವೆಂಕಮ್ಮನಲ್ಲಿ ಮಾತ್ಸರ್ಯ ದ್ವೇಷ ಬೆಳೆಸಿಸರ್ಕಾರ ಕೆರೆ ನೀರು ಕದ್ದು ಹೊಯಿಸಿದಳೆಂದು ಆಚಿಕ್ಕ ಜಮೀನ ಒಡಮೆ ಕಿತ್ತಿಕೊಂಡ 29ಸಾಧ್ವೀ ವೆಂಕಮ್ಮನಿಗೂ ಮಹಾತ್ಮ ತತ್ಪುತ್ರರಿಗೂಅಧಮ ಅಧಿಕಾರಿ ಮಾಡಿದ ದ್ರೋಹದಿಂದಪುತ್ರ ಸಂತಾನ ವಂಶಕ್ಷೀಣವಾಯಿತು ಅವಗೆಅಂದಿನಿಂದ ಕೆರೆ ಅದ್ಯಾಪಿ ನೀರಿಲ್ಲ ಆ ಕೆರೆಯಲ್ಲಿ 30ದೀನರಿಗೂ ಸಾಧು ಮಹಾತ್ಮರಿಗೂ ಮಾಳ್ಪಸಣ್ಣದೋ ದೊಡ್ಡದೋ ದ್ರೋಹಕ್ಕೆ ದಂಡನಾಅನುಭವ ಕ್ಷಿಪ್ರದಲ್ಲೋ ಮೆಲ್ಲಗೋ ಅಪರಾಧಿ ಮೂರ್ಖಗೆದೀನ ರಕ್ಷಕ ಸತ್ಪತಿ ಶ್ರೀಹರಿಈವ31ಭಾಗಣ್ಣ ಸೀನಪ್ಪ ದಾಸಪ್ಪ ರಂಗಪ್ಪಲೌಕಿಕ ವಿದ್ಯಾ ಕಲಿತು ಉಪಾಧ್ಯಾಯರಲ್ಲಿಭಾಗಣ್ಣನಿಗೆ ಶಾನುಭೋಗ ಮುಂಜಿಮಾಡಿಭಗವದ್ವಿಷಯ ಕಲಿತರೂ ಭಾಗಣ್ಣ 32ತತ್ಕಾಲ ಲೌಕಿಕ ಶ್ರೀತನ ಕೊರತೆ ನೋಡಿಬಂಧುಗಳಿವರನ್ನುದಾಸೀನಮಾಡಿದರುಇಂದಿರಾಪತಿವೆಂಕಟಕೃಷ್ಣಗೋಪಾಲಬಂದು ಶ್ರೀ ಒದಗಿಸಿದ ಕ್ಷಿಪ್ರದಲೆ ಇವರ್ಗೆ 33ಬ್ರಹ್ಮಚಾರಿ ಭಾಗಣ್ಣ ಗಾಯತ್ರೀ ಮಂತ್ರವಅಹರಹ ಸೂಕ್ಷ್ಮಾರ್ಥಅನುಸಂಧಾನವಿಹಿತ ಶ್ರದ್ಧಾ ಉದ್ಭಕ್ತಿಪೂರ್ವಕ ಜಪಿಸೆಶ್ರೀ ಹಯಾಸ್ಸ ನಾರಾಯಣನು ಒಲಿದ ಕ್ಷಿಪ್ರದಲೆ 34ವೇದೋಚ್ಚಾರಣವೇ ಗಾನವು ಜಗದ್ರಕ್ಷಣೆಯೇ ತ್ರಾಣವುಮಾಧವನೇ ಗಾಯತ್ರಿನಾಮ ಹಯಗ್ರೀವಭೂತಪೂರ್ಣವಾಗ್ವಶ್ರೀ ಪೃಥ್ವೀ ಆಶ್ರಯ ಶರೀರವ್ಯಾಪ್ತನುಹೃದಯ ಪ್ರಾಣಾಧಾರದಿವ ಪರಸ್ವರೂಪಪಾದತ್ರಯವು ಜಗತ್ಪಾದಸದೃಶ35ಜ್ಞಾನಸುಖ ಬಲಪೂರ್ಣ ಸರ್ವ ಜಗದಾದಿಕರ್ತದಿನಪತೇಜ ಸ್ಫೂರ್ತಿದ ಚೇಷ್ಟಕಾಧಾರಶ್ರೀ ನಾರಾಯಣದೇವ ನಿನ್ನ ಚಿಂತಿಪೆ ಭಜಿಪೆಅನುಪಮ ಸರ್ವೋತ್ತಮ ನಮೋ ಕೇಶವಾದಿ ನಾಮ 36ಲೌಕಿಕ ವಿಷಯಗಳೊಳ್ ಮನವಾಕ್ಕು ಚಲಿಸದೆಏಕಚಿತ್ತದಿ ಗಾಯತ್ರೀ ಪ್ರತಿಪಾದÀ್ಯಶ್ರೀ ಗಾಯತ್ರೀನಾಮ ನಾರಾಯಣನನ್ನಭಾಗಣ್ಣ ಜಪಿಸಿದರು ಕಂಡರು ಶ್ರೀಕರನ್ನ 37ಏಕಾಂತದಲ್ಲಿ ವೃಕ್ಷಮೂಲದಲ್ಲಿ ಕುಳಿತಿದ್ದಭಾಗಣ್ಣನ ಜಪಕೆಡಿಸಿ ಓರ್ವ ದುಷ್ಟಹಾಕಿದನು ಕುದಿನೀರು ಬೊಬ್ಬೆಗಳ್ ಅವನ ಮೇಲೆದ್ದವುಚಿಕಿತರಾಗಿ ಜನರು ಹೊಗಳಿದರು ಭಾಗಣ್ಣನ 38ಮತ್ತೊಂದುದಿನ ಇದಕೆÀ ಮುಂದೆಯೋ ಹಿಂದೆಯೋಸುತ್ತಿ ಭಾಗಣ್ಣ ವೃಕ್ಷಮೂಲದಲಿ ಸರ್ಪಹಿತದಿ ಆಶೀರ್ವದಿಸಿ ಪೋದಂತೆ ಪೋಯಿತುಇದು ನೋಡಿ ಜನರು ಕೊಂಡರು ಭೀತಿ, ಆಶ್ಚರ್ಯ ಮರ್ಯಾದೆ 39ಅಂದು ಮೃತಸರ್ಪ ಅರಿಯರಿಯರು ಶಮೀಕರು ಸಮಾಧಿಯಲಿಇಂದುತನ್ನ ಸರ್ಪ ಸುತ್ತಿರುವುದು ಭಾಗಣ್ಣ ಅರಿಯರುಇಂದಿರೇಶ ಒಲಿದವನಿವನೆಂದು ಶೇಷನೇ ಆಲಿಂಗಿಸಿದನೋಸ್ಕಂಧ ತನ್ನಯ ಸಹೋದರನೆಂದಪ್ಪಿ ಕೋಂಡನೋ 40ತತ್ವಮಾತೃಕಾನ್ಯಾಸಗಳ ಚರಿಸಿಮಂತ್ರ ಮೂಲಪ್ರಣವಅಷ್ಟಾಕ್ಷರೀ ಗಾಯತ್ರೀಭಕ್ತಿ ಪೂರ್ವಕ ಜಪಿಸಿ ಹೊರ ಒಳಗೆ ಶ್ರೀಹರಿಯವ್ಯಾಪ್ತಿವಿಜ್ಞಾನಪುಟ್ಟಿತು ಈ ಚೌತಾಪರೋಕ್ಷಿಗೆ41ವ್ಯಾಪ್ತಿ ದರ್ಶಿಯು ಇವರು ಶ್ರೀ ವಿಷ್ಣು ಅನುಗ್ರಹದಿಇಂದಿನ ಹಿಂದಿನ ಮುಂದಿನ ವಿಷಯ ಜ್ಞಾನವೇದ್ಯವಾಯಿತು ಹರಿಸ್ಮರಣಾ ಪೂರ್ವ ಆಲೋಚನದಿಬಂದು ಕೇಳುವವರಿಗೆ ಯೋಗ ಪೇಳಿದರು 42ಯೋಗಕ್ಷೇಮ ಸರ್ವಕೂ ನಿಯಾಮಕನು ಹರಿಯೇವೆಭಾಗಣ್ಣ ಈತತ್ವಜ್ಞಾನ ಪೂರ್ವಕದಿಲೌಕಿಕ ಧನ ಅಪೇಕ್ಷಿಸದಿದ್ದರೂ ಜನರುಬಾಗಿ ದ್ರವ್ಯಗಳಿತ್ತು ಬೇಡಿದರು ಸ್ವೀಕರಿಸೆ 43ಭವಿಷ್ಯ ಪೇಳುವುದರಲ್ಲಿ ಖ್ಯಾತಿ ಹರಡಿದ್ದಲ್ಲದೆಸರ್ವೇಶನ ಸ್ತೋತ್ರಕವನ ಪಟು ಎಂದುಸರ್ವರೂ ಕೊಂಡಾಡಿ ಆ ಊರಿಗೆ ಬಂದ ಪ್ರಖ್ಯಾತಕವಿಯನ್ನ ನಿಗ್ರಹಸಿ ಓಡಿಸಿದರು ಧೀರ 44ದಿಗ್ವಜಯ ಜಯಶೀಲನೆಂದು ಖ್ಯಾತ ಆಕವಿಭಾಗಣ್ಣ ಸೋಲಿಸಿ ಓಡಿಸಿದ್ದುಭಾಗಣ್ಣನ ಪ್ರಭಾವವ ಹರಡಿಸಿತು ನಾಡಲ್ಲಿಭಾಗಣ್ಣಗೆ ಸನ್ಮಾನ ಮಾಡಿದರು 45ಗದ್ವಾಲರಾಜನು ಇನ್ನೂ ಬಹು ಪ್ರಮುಖರುಬಂದು ನೇರವಾಗಿ ಭಾಗಣ್ಣನಲ್ಲಿವಂದಿಸಿ ಸನ್ಮಾನ ಪ್ರಶಸ್ತಿಗಳ ಅರ್ಪಿಸಿಪೋದರು ಶ್ಲಾಫಿಸುತ ತಮ್ಮ ತಮ್ಮ ಸ್ಥಳಕೆ 46ಹಿಂದೆ ದ್ರವ್ಯ ಹೀನನಾಗಿದ್ದ ಭಾಗಣ್ಣನಿಗೆಇಂದುಶ್ರೀಕೃಷ್ಣನ ಒಲುಮೆಯಿಂದಬಂದು ಸೌಭಾಗ್ಯ ಶ್ರೀ ದ್ರವ್ಯಗಳುಔದಾರ್ಯದಿ ದಾನಾದಿಗಳ್ ಮಾಡಿದರು 47ಇಷ್ಟರಲ್ಲೇ ಸೀನಪ್ಪ ದಾಸಪ್ಪ ರಂಗಪ್ಪಪ್ರೌಢವಯಸ್‍ಐದಿ ಗದ್ವಾಲು ಹೋಗೆ ಅಲ್ಲಿಮೌಢ್ಯ ಮಾತ್ಸರ್ಯದಿ ರಾಜ್ಯಾಧಿಕಾರಿಗಳುಕಡು ನಿರೋಧ ಮಾಡಿದರು ಮೂವರನ್ನು 48ವೆಂಕಟೇಶನ ಇಚ್ಛಾ ಈಮೂವರು ಅಣ್ಣಭಾಗಣ್ಣ ನಾಶ್ರಯದಲ್ಲೇವೆ ಇದ್ದುಅಗಲದೆ ಶ್ರೀಹರಿಗುಣಾನುವರ್ಣನಾಗಳಸುಗಾನ ಮಾಡುತ್ತಾ ಇರಬೇಕು ಎಂದು 49ಭಾಗಣ್ಣ ಅರ್ಯರು ಗದ್ವಾಲಿಗೆ ಪೋಗಿಸುಗುಣವಂತ ತಮ್ಮಂದಿರನ್ನ ಕರೆತಂದುಅಗಣಿತಗುಣಾರ್ಣವ ಶ್ರೀಯಃ ಪತಿಯ ಸೇವೆಗೆಯೋಗ್ಯೋಪದೇಶ ಪೂರ್ವಕ ತಯಾರು ಮಾಡಿದರು 50ದಾಸಪ್ಪ ಸೀನಪ್ಪ ರಂಗಪ್ಪ ತಮ್ಮ ಜ್ಞಾನಭಕ್ತಿಕಾಶಿಸಿ ವರ್ಧಿಪುದು ದಿನೇ ದಿನೇ ಹೆಚ್ಚಿಶ್ರೀ ಶ್ರೀನಿವಾಸನ ಪ್ರೀತಿಗೆ ಭಾಗಣ್ಣಚರಿಸುವ ಅನ್ನದಾನಾದಿಗಳಲ್ಲಿ ಸೇವಿಸಿದರು 51ದ್ರವ್ಯ ಧಾನ್ಯರಾಶಿಗಳು ತುಂಬಿದ್ದು ಕಂಡುದೇವ ಬ್ರಾಹ್ಮಣ ಸೇವೆಗೆ ಅಕ್ಕಿ ಹೆಚ್ಚು ಬೇಡೆಂದುಯಾವರೂ ಕಾಣದೆ ವೆಂಕಮ್ಮ ಮುಚ್ಚಿಡಲುಯಾವತ್ತೂ ಅಕ್ಕಿಯು ಹುಳುವಾಯ್ತು ಮರುದಿನ 52ಹರಿಬಲುಮೆಯಿಂದ ಭಾಗಣ್ಣ ಈ ರೀತಿ ತೋರಿಸಲುಹರಿಭಕ್ತಿ ವೈರಾಗ್ಯ ಹೆಚ್ಚಿತು ಮಾತೆಗೆಭಾರಿತರ ಕೀರ್ತನಾ ಸೇವೆ ಅತಿಶಯ ಚರ್ಯಅರಿತು ನಾಡೆಲ್ಲವೊ ಕೊಂಡಾಡಿತು ಭಾಗಣ್ಣನ 53ಉತ್ತನೂರು ಸಮೀಪವು ಐಜೀ ಎಂಬುವ ಗ್ರಾಮಉತ್ತಮ ಬ್ರಾಹ್ಮಣ ವೇಂಕಟನರಸಿಂಹಾಚಾರ್ಯದಂಪತಿಗೆ ಪುತ್ರರತ್ನ ವೇಂಕಟರಾಮಾಚಾರ್ಯಮಂದತನ ತೋರಿಸಿದ ಪುಸ್ತಕ ವಿದ್ಯೆಯಲ್ಲಿ 54ಭಾಗಣ್ಣ ಆರ್ಯರ ಪ್ರಭಾವದಲಿ ಆದರವೇಂಕಟನೃಸಿಂಹಾರ್ಯರ ಭಾರ್ಯೆಗೆ ಉಂಟುಭಾಗಣ್ಣನಲಿ ಪೋಗಿ ಮಗನ ತಿದ್ದುವ ಬಗೆಹೇಗೆಂದು ಅರಿಯಿರಿ ಎಂದಳು ಸಾಧ್ವೀ 55ಸಾಧ್ವೀ ಆಸ್ತ್ರೀರತ್ನಳಿಗೆ ಭಾಗಣ್ಣನುಔದಾರ್ಯದಿ ಒದಗುವ ಜ್ಞಾನಿವರ್ಯನೆಂದುಸುದೃಢದಿ ನಂಬಿದರೂ ಆಚಾರ್ಯ ಅರ್ಧಮನಸಿಂಪೋದರು ಕಂಡರು ಭಾಗಣ್ಣನ ಗುಡಿಯಲ್ಲಿ 56ವೇಂಕಟನೃಸಿಂಹಾರ್ಯ ತನ್ನ ಪಾಂಡಿತ್ಯ ಗುರುತನ ನೆನದುಆಕಸ್ಮಿಕ ಬೇಟಿಯಂತೆ ತೋರ್ಪಡಿಸಿವೇಂಕಟೇಶ ತುಳಸೀ ಸನ್ನಿಧಾನದಿ ಸಂಭಾಷಿಸಲುಶೀಘ್ರ ಕಂಡರು ಭಾಗಣ್ಣನ ಜ್ಞಾನಪ್ರಭಾವ 57ಭಾಗಣ್ಣ ಅಭಯವನಿತ್ತು ಆಚಾರ್ಯರನ್ನಹೋಗಿ ಬನ್ನಿ ಆತಂಕಬೇಡ ಮಹಾತ್ಮಮಗ ಸೂರಿಕುಲ ರತ್ನನು ವೇಂಕಟರಾಮಪ್ರಕಾಶಿಪುದು ಆತನ ಜ್ಞಾನಕ್ಷಿಪ್ರದಲೇ ಎಂದರು 58ಭಾಗಣ್ಣ ಆರ್ಯರು ಹೇಳಿದ ರೀತಿಯಲ್ಲೇವೇಂಕಟರಾಮಾರ್ಯ ಏಕವಾರ ಶ್ರವಣದಲ್ಲೇವೇಂಕಟನರಸಿಂಹಾಚಾರ್ಯ ಚಕಿತರಾಗುವಂತೆಅಕಳಂಕ ಪಾಂಡಿತ್ಯಪ್ರೌಢಿಮೆ ತೋರಿಸಿದ 59ಪ್ರತಿದಿನ ಐಜಿಯವರು ಭಾಗಣ್ಣ ದಾಸರೂ ಈರ್ವರುತತ್ವ ವಿಚಾರ ಹರಿಭಜನೆ ಮಾಡಿಒಂದು ದಿನ ಬ್ರಹ್ಮ ಜಿಜ್ಞಾಸ ಸ್ವಾರಸ್ಯದಲಿ ಸಾಯಂಸುಧ್ಯಾಕಾಲ ಅತಿಕ್ರಮವು ಆಯಿತು 60ಸೂರ್ಯಾಸ್ತ ಮನಃಪೂರ್ವಕರ್ತವ್ಯಕರ್ಮಬಿಟ್ಟದೋಷಪ್ರಾಯಶ್ಚಿತ್ತಾಘ್ರ್ಯ ಕೊಡಲಿಕ್ಕೆ ಇರಲುಭಯಬೇಡ ದೋಷವಿಲ್ಲ ಎಂದು ಭಾಗಣ್ಣಾರ್ಯಸೂರ್ಯನ್ನ ತಾನು ನೋಡಿ ತೋರಿಸಿದರು ಐಜೀಗೆ 61ಇಂದ್ರಜಾಲವಲ್ಲವು ಕ್ಷುದ್ರೋಪಾಸನಾದಿಗಳಿಂದಲ್ಲಅರ್ಧರಾತ್ರಿಯಲಿ ಸೂರ್ಯನ್ನ ನೋಡಿ ನೋಡಿಸಿದ್ದುಮಾಧವಶ್ರೀ ಮುಖ್ಯ ವಾಯುದೇವರು ರುದ್ರಸದಾ ಒಲಿದಿರುವ ಭಾಗಣ್ಣಗೆ ಇದು ಆಶ್ಚರ್ಯವಲ್ಲ 62ತೇಜೋಜಲ ಪೃಥ್ವೀಮುನಿಗಳು ಶ್ರೀ ಪ್ರಾಣರುದ್ರರುವಜ್ರ, ಅಗ್ನಿ, ವರುಣ ಪೃಥಿವ್ಯಾದಿ ಸರ್ವರೊಳಗೊರಾಜನೆ ನಿಯಮಿಸುವ ಅನಿರುದ್ಧ ಜಗದೀಶಜಗಜ್ಜನ್ಮಾದಿಕರ್ತ ಗಾಯತ್ರೀ ಭರ್ಗಸರ್ವಗನು 63ತೀರ್ಥಯಾತ್ರೆಯ ತೀರ್ಥರೂಪ ಭಾಗಣ್ಣ ತನ್ನಭ್ರಾತರೊಡಗೂಡಿ ಹೊರಟಿಹರುಮಂತ್ರಾಲಯ ವೇಂಕಟಗಿರಿ ಘಟಿಕಾದ್ರಿಹಸ್ತಿವರದಕಂಚಿ ಮೊದಲಾದ ಕ್ಷೇತ್ರ64ವೇಂಕಟ ಕೃಷ್ಣನ ಮುದ್ರೆಯಿಂ ಕವನಗಳಉತ್ಕøಷ್ಟ ರೀತಿಯಲ್ಲಿ ರಚಿಸಿ ಭಜಿಸುತ್ತಾಭಾಗಣ್ಣ ಆದವಾನೀಯಲ್ಲಿ ತಿಮ್ಮಣ್ಣಾರ್ಯರಲ್ಲಿಮುಕ್ಕಾಮು ಹಾಕಿದರು ಸ್ವಲ್ಪಕಾಲ 65ದಿವಾನು ತಿಮ್ಮಣ್ಣ ರಾಯರ ಉಪಚಾರಸರ್ವ ಅನುಕೂಲ ಆತಿಥ್ಯಕೊಳ್ಳುತ್ತಾದಿವ್ಯಮಾರುತೀ ಗುಡಿಗೆ ಪ್ರತಿದಿನ ಪೋಗಿಸೇವೆಸಲ್ಲಿಸಿದರು ಭಾಗಣ್ಣ ಶ್ರೀಹನುಮನಿಗೆ 66ಶ್ರೀ ವಿಜಯದಾಸಾರ್ಯರು ಶ್ರೀ ವ್ಯಾಸದೇವರ ಕಂಡುಶ್ರೀವರ ಒಲಿದು ಪುರಂದರಾರ್ಯರ ಕೈಯಿಂದದಿವ್ಯನಾಮಾಂಕಿತ ಬೀಜಾಕ್ಷರಗಳ ಹೊಂದಿಭುವಿಯಲಿ ಪ್ರಖ್ಯಾತರಾಗಿ ಬಂದಿದ್ದರಾಗ 67ವಿಜಯವಿಟ್ಠಲದಾಸರಾಯರು ತಮ್ಮನಿಜ ಶಿಷ್ಯವೃಂದದಲಿ ವ್ಯಾಸವಿಜಯಸಾರಥಿಗೋಪಾಲಹಯವದನಭಜನೀಯ ಈ ಮೂರು ಅಂಕಿತಕೊಡಬೇಕಾಗಿತ್ತು 68ಗೋಪಾಲವಿಠ್ಠಲಸುನಾಮಭಾಗಣ್ಣಗೆಸುಪ್ರಿಯ ಮನದಿಂದ ಇತ್ತು ಹಯವದನಸುಪವಿತ್ರ ಅಂಕಿತ ಚೀಕಲಪರವಿ ಆನಂದನಿಗೆಕೃಪಾಂಬುಧಿ ವಿಜಯದಾಸಾರ್ಯ ಇತ್ತರು 69ಶ್ರೀಪುರಂದರದಾಸಾರ್ಯರನುಗ್ರಹದಲಿಸುಪುಣ್ಯವಂತನು ಸಹನ ಶಾಲಿಯಾದಶ್ರೀಪಪ್ರಿಯ ತಿಮ್ಮಣ್ಣ ವೇಣುಗೋಪಾಲನಾಮತಾಪೊಂದಿದ ವಿಜಯದಾಸರು ಕೃಪದಿ ಕೊಡಲು 70ಶೋಭನ ಜ್ಞಾನಪ್ರದ ವ್ಯಾಸ ನಾಮಾಂಕಿತವಸುಬ್ಬಣ್ಣ ಕಲ್ಲೂರು ಪಂಡಿತೋತ್ತಮಗೆಲಭಿಸುವಂತೆ ವಿಜಯದಾಸ ಮಹಂತರುಕೃಪೆಯಿಂದ ಒದಗಿಸಿದರು ಔದಾರ್ಯನಿಧಿಯು 71ಗೋಪಾಲ ವಿಟ್ಠಲಾಂಕಿತದಲಿ ಭಾಗಣ್ಣಶ್ರೀಪಪ್ರಿಯತಮ ಪದ್ಯ ಸುಳಾದಿಗಳ ರಚಿಸಿಸುಪುಣ್ಯವಂತ ಸೀನಪ್ಪ ದಾಸಪ್ಪ ಈರ್ವರಿಗೂಉಪದೇಶ ಮಾಡಿದರು ಮಂತ್ರೋಪೇತ ನಾಮಾಂಕಿತಗಳನ್ನು 72ಕರಿರಾಜವರದನು ಗರುಡವಾಹನಸಿರಿವರವಾಸು ದೇವನೇ ವರದರಾಜನೆಂದೂಧರೆಯಲುತ್ತಮ ಕಂಚೀಪುರದಿ ಇರುವವನು ನಾಮವರದಗೋಪಾಲ ವಿಟ್ಠಲನಾಮ ಶ್ರೀನಿವಾಸನಿಗೆ 73ಇತರಾದೇವಿಯ ಸುತನೆನಿಸಿ ಮಹಿದಾಸನಾಮದಲಿಪ್ರಾದುರ್ಭವಿಸಿದ ಶ್ರೀಯಃಪತಿಗೆ ಪ್ರಿಯತಮವುಬೃಹತೀ ಸಹಸ್ರದಲಿ ವಿಷ್ಣು ನಾಮ ವಿಶ್ವಶಬ್ದಕ್ಕೆವಾಯುದೇವಾಂತರ್ಗತನು ಎಂದು ಜೆÕೀಯ 74ಮಧ್ವಾ ್ಯಖ್ಯ ವಾಯುದೇವರಗುರುಮಹಿದಾಸವೇದವ್ಯಾಸ ಹಂಸಾಖ್ಯ ಕಪಿಲ ಶ್ರೀಪತಿಯಉತ್ತಮನಾಮ ಗುರುಗೋಪಾಲ ವಿಟ್ಠಲನಾಮಅಕಳಂಕ ಯದುಪತಿಯ ನಾಮವ ಕೊಟ್ಟರು 75ಭಂಗಾರದಂಥ ವೈಷ್ಣವ ಸಂತತಿಯ ಪಡೆದುರಂಗನಾಥನನುಗ್ರಹದಿ ಪಾಲಿಸುವಂಥಾರಂಗಪ್ಪರಾಯರಿಗೆ ತಂದೆ ಗೋಪಾಲವಿಟ್ಠಲನಾಮಅಕಳಂಕ ಯದುಪತಿಯ ನಾಮವ ಕೊಟ್ಟರು 76ವಿಜಯರಾಯರ ಪರಮಭಕ್ತಾನುಗ್ರಹಿವಿಜಯಸಾರಥಿಪ್ರಿಯ ಗೋಪಾಲರಾಯರುವಿಜಯಾರ್ಯರ ಸುಪ್ರಸಾದದ ಬಲದಿಂದಅನುಜರಿಗೆ ಒದಗಿಸಿದರುಅಪರೋಕ್ಷ77ಗೋಪಾಲ ವರದಗುರು ಗೋಪಾಲದಾಸರ್ಗಳಅಪರೋಕ್ಷಮಹಿಮೆಗಳ ಸಾಧು ಸಜ್ಜನಗಳತೋರ್ಪಡಿಸಿ ಬೇರೆ ಬೇರೆಯಾಗಿಟ್ಟು ಮೂವರನ್ನುಶ್ರೀಪಪ್ರಿಯ ಕವನವ ರಚಿಸಿಗುರುಹೇಳಿದರು78ಗುರುಅಂತರ್ಗತನಾದ ಗೋಪಾಲನೃಹರಿಯಸ್ಮರಿಸಿ ಮೂವರೂ ಗುರುನಾಮವೂ ತದಂತಸ್ಥಹರಿಗೆ ಸುಪ್ರೀತಿಕರಯೆಂದು ರಚಿಸಿದರುಗುರುಸತ್ಯಬೋಧರ ಪ್ರಭಾವತೋರ್ಪಡಿಸಿ79ಸೂರಿಗಳುಗೋಪಾಲದಾಸಾದಿ ಮೂವರೂಬರೆದ ಕೀರ್ತನೆಯಲ್ಲಿ ಸತ್ಯಬೋಧಾರ್ಯರಸ್ವರೂಪವ ಸೂಕ್ಷ್ಮದಲಿ ಸೂಚಿಸಿಹರು ಎಂದುಅರಿವರು ಜ್ಞಾನಿಗಳು ಬಲ್ಲೇನೇ ನಾನು? 80ನೆರೆÀದಿದ್ದ ಜನರೆಲ್ಲ ಆಶ್ಚರ್ಯ ಚಕಿತರುಪರಿಪರಿ ವಿಧದಲ್ಲಿ ಮೂವರನ್ನು ಕೊಂಡಾಡೆಗುರುಸತ್ಯಬೋಧರು ಯುಕ್ತ ರೀತಿಯಲ್ಲಿಭಾರಿತರ ಭೂಷಣಾನುಗ್ರಹ ಮಾಡಿದರು 81ತಂದೆ ಗೋಪಾಲದಾಸಾರ್ಯರು ಮನೆಯಲ್ಲೇನಿಂದುಸತಿಸುತರಿಗೆ ಹರಿಸೇವೆಯನ್ನಒದಗಿಸುತ ಮಾತ್ರಂತರ್ಯಾಮಿ ಹರಿಯನ್ನ ತಾನುಭಕ್ತಿಪೂರ್ವಕ ಮಾಡುತ್ತಿದ್ದರು ಸೇವಾ ಸುಧ್ಯಾನ ಪರರು 82ಹರಿಕ್ಷೇತ್ರ ಹರಿತೀರ್ಥಯಾತ್ರೆಯಗೈಯ್ಯಲುಸಿರಿವಿಜಯರಾಯರ ಅನುಗ್ರಹ ಕೊಂಡುಹೊರಟರು ಗೋಪಾಲದಾಸಾರ್ಯರುವರದಗುರುಗೋಪಾಲದಾಸರ ಸಮೇತ83ಉಡುಪಿಕ್ಷೇತ್ರಸ್ಥ ಹರಿಮೂರ್ತಿಸ್ಥ ತೀರ್ಥಸ್ಥಕಡಲಶಯನನ್ನ ನೋಡಿ ಸೇವಿಸಲಿಕ್ಕೆಒಡಹುಟ್ಟಿದವರ ಸಹ ನಡೆಯುತ್ತಿರುವಾಗಅಡ್ಡಗಟ್ಟಿದ ಕ್ರೂರನು ಭೀಮಾಭಿದನು 84ಶ್ರೀ ವಿಜಯದಾಸರಿಂ ಮೊದಲೇ ಅನುಗ್ರಹೀತಭಾವುಕಾಗ್ರಣೀ ಗೋಪಾಲಾರ್ಯರು ಹರಿಗುರುಗಳಿತ್ತದಿವ್ಯ ಸಾಮಥ್ರ್ಯದಿಂ ಸಸೈನ್ಯ ಭೀಮನ್ನತೀವ್ರ ನಿಶ್ಚೇಷ್ಟಗೈಸಿ ಶರಣರ ಮಾಡಿದರು 85ಉಡುಪಿಸುಕ್ಷೇತ್ರದಲ್ಲಿ ಗೋಪಾಲಾರ್ಯರುಮಾಡಿದ್ದು ವರ್ಣಿಸಲು ಬಲ್ಲೆನೇ ನಾನು ?ಆಟದಲಿ ಜಗಪಡೆವ ಕೃಷ್ಣ ತಾಸುತನಂತೆಆಟವಾಡಿದ ಬಾಲರೂಪದಿ ಕೃಪಾಳು 86ಪೂರ್ವ ದಕ್ಷಿಣ ವರುಣ ದಿಶೆಯಾತ್ರೆಮಾಡಿಶ್ರೀ ವೇಣೀಸೋಮಪುರಕೆ ಮರಳಿ ಬಂದುಕೋವಿದಕುಲರತ್ನ ವಾಸುದೇವವಿಟ್ಠಲ ರಾಮಶ್ರೀವೇಂಕಟರಾಮಾರ್ಯರನ್ನು ಕಂಡರು 87ಉತ್ತನೂರು ಪೋಗಿ ವೇಂಕಟಕೃಷ್ಣನ್ನವಂದಿಸಿ ಬಂಧುಗಳ ಕೂಡ ತಾ ಇದ್ದುಒಂದುದಿನ ನಿಶ್ಚೈಸಿದರು ಪಂಡರೀಪುರಕ್ಕೆ ಪೋಗಿಇಂದಿರಾಪತಿಯನ್ನ ನೋಡಿ ಸೇವಿಸಲು 88ಪತ್ರಪೂ ಪಲ್ಲವ ಫಲವೃಕ್ಷ ದೇಶವುಸುಪವಿತ್ರ ಶ್ರೀ ತುಳಸೀ ಉತ್ಕøಷ್ಟವನದಿಸುಪುಣ್ಯ ಶ್ಲೋಕ ಶ್ರೀದಾಸಾರ್ಯರನ್ನ ಸುತ್ತಿ ಅಟ್ಟಿಶ್ರೀಪತಿ ಕೇಳ್ದ ಅಲೇನಾಹಿ ಎಂದು 89ಶ್ರೀಹರಿ ಸ್ವೇಚ್ಛೆಯಿಂ ಪ್ರಕೃತಿ ಕ್ಷೋಭಿಸಿ ತ್ರಿಗುಣ ಬೆರೆಸಿಮಹದಹಂಕಾರಾದಿ ತತ್ವ ಸೃಷ್ಟಿಗೈದುಬ್ರಹ್ಮಾಂಡ ನಿರ್ಮಿಸಿ ತದಾಶ್ರಯನಾಗಿ ಇಪ್ಪವನು ತಾನೇಮಹಾದ್ಭುತ ಕುದುರೆ ಸವಾರನಾಗಿ ತೋರಿ ಮರೆಯಾದ 90ಆಲೋಚಿಸಿ ತಿಳಿದು ವಿಟ್ಠಲನೇ ಬಂದವನೆಂದುನೀಲಕುದುರೆ ಎಂಬ ಸ್ತೋತ್ರ ಮಾಡಿದರುಪೇಳ್ವರು ವ್ಯಾಪ್ತೋಪಾಸಕ ಜ್ಞಾನಿಗಳು ಇದರ ರ್ಥಮೊದಲನೇ ನುಡಿಯು ಮೇಲೆ ಹೇಳಿದಹರಿಮಹಿಮೆಯೆಂದು ಬಲ್ಲೆನೇ ನಾನು 91ಭೀಮರಥಿ ಸ್ನಾನವು ಪುರಂದರಾರ್ಯರ ನಮಿಸಿಭೂಯಾದಿ ಗುಣಗಣಾರ್ಣವ ವಿಟ್ಠಲನ್ನಪ್ರೇಮೋತ್ಸಾಹದಲಿ ಸನ್ನಮಿಸಿಸ್ತುತಿಸಿರಮ ರುಕ್ಮಿಣಿಯ ನಮಿಸಿದರು ದಾಸಾರ್ಯ 92ಕೋಲ್ಹಾಪುರ ಪೋಗಿ ಮಹಾಲಕ್ಷ್ಮಿ ಮಂದಿರದಿಶೀಲ ಪರಮಾದರದಿ ಲಕ್ಷ್ಮೀನಾರಾಯಣರನ್ನಕೀಲಾಲಜಾದಿ ಪುಷ್ಪಾರ್ಚನೆಗೈದು ಕಾಪಾಡೆಂದು ಕೀರ್ತನೆಗಳಿಂದ ಸ್ತುತಿಸಿದರು 93ಇನ್ನು ಬಹು ಬಹು ಕ್ಷೇತ್ರಯಾತ್ರೆ ಸೋದರರ ಕೂಡಿಅನವರತಸುವ್ರತ ಧ್ಯಾನಪರರಾಗಿಘನಮಹಿಮ ಗೋಪಾಲ ವಿಟ್ಠಲನ ಸ್ತುತಿಸುತ್ತವೇಣೀ ಸೋಮಪುರಕ್ಕೆ ಬಂದರು ತಿರುಗಿ 94ಗುರುಗಳು ವಿಜಯದಾಸಾರ್ಯರ ದ್ವಾರಾಯಾತ್ರಫಲ ಕೃಷ್ಣನಿಗೆ ಸಮರ್ಪಿಸಿಉದ್ದಾಮಪಂಡಿತವೇಂಕಟರಾಮಾರ್ಯರಲಿಇದ್ದು ಪೋದರು ಉತ್ತನೂರ ಸ್ವಕ್ಷೇತ್ರ 95ಉತ್ತನೂರು ವೇಂಕಟಕೃಷ್ಣನಾಲಯ ಮುಂದೆನಿಂತು ತುಳಸೀ ವನದಿಂದ ಸುಳ್ಳಿ ತೆಗೆವಾಗಬಂದರು ಭ್ಯಾಗವಟ್ಟಿ ಶ್ರೀನಿವಾಸಾಚಾರ್ಯವಂದಿಸಿ ನಿಂತರು ಕೈಮುಗಿದು ವಿನಯದಿ 96ಜ್ಞಾನದಲಿ ಋಜುಮಾರ್ಗ ಗರ್ವದಲ್ಲಿನಿತ್ಯಸಂಸಾರಿಮಾರ್ಗಜ್ಞಾನ ಬೋಧಿಸುವುದರಲ್ಲಿ ಪಂಡಿತರಮಾರ್ಗಮಾನುಷಾನ್ನವನುಂಡು ಮಂದಧೀಯಲ್ಲಿ ಗುರುನಿಂದಾಈ ಶ್ರೀನಿವಾಸಾಭಿದನು ಮಾಡಿ ನರಳುತಿದ್ದ 97ಭಾಗಣ್ಣ ಆರ್ಯರು ಶ್ರೀನಿವಾಸಾಚಾರ್ಯಗೆಅಘನಾಶವಿಜ್ಞಾನಲಭಿಸುವ ಸಾಧನವುನಿಗಮಾರ್ಥ ಬೋಧಕ ಉಪದೇಶ ಮಾಡಿ ಪಂಡರಿಪುರ ಪೋಗಿರಿಜಗನ್ನಾಥ ವಿಟ್ಠಲ ಒಲಿದು ಕಾಂಬ ಎಂದರು 98ಶ್ರೀನಿವಾಸಾಚಾರ್ಯರು ದಾಸಾರ್ಯಾರ್ ಹೇಳಿದಂತೆಸುನಿರ್ಮಲ ಭೀಮ ರಥಿಯಲ್ಲಿ ಸ್ನಾನಗೈದುಇನನಲಿ ಅನಿಲಾಂತರ್ಗತ ನಾರಾಯಣನ್ನಧ್ಯಾನಿಸಿ ಭಕ್ತಿಜ್ಞಾನದಿಂದ ಕೊಟ್ಟರು ಅಘ್ರ್ಯ 99ಐದೆರಡು ಸಾಧು ಭಕ್ತಿ ಪ್ರತಿಪಾದ್ಯ ಶ್ರೀ ನಾರಾಯಣನುವಾಗ್ದೇವಿವರವಾಯುಗಳಿಂದ ಋಕ್‍ಸಾಮದಿಂಸ್ತುತಇಪತ್ತೆರಡಕ್ಷರದಲ್ಲಿ ಎರಡನೇ ಮೂರಕ್ಷರ ಬೋಧಿತಆದಿತ್ಯಸ್ಥ ವಾಯುಸ್ಥನ್ನ ಸ್ಮರಿಸಿಕೊಟ್ಟರು ಅಘ್ರ್ಯ 100ಜಗನ್ನಾಥದಾಸರ್ಗೆ ಗೋಪಾಲದಾಸಾರ್ಯಗುರುಜಗತ್ತಲ್ಲಿ ಕಂಡಿಲ್ಲದ ಉದಾರದಲಿತೆಗೆದು ತನ್ನಾಯುಷ್ಯದಿಂ ಚತ್ವಾರಿವರ್ಷಕೊಟ್ಟರುಗುರುಗ ಶ್ರೀವಿಜಯಗೋಪಾಲ ಶ್ರೀನಿವಾಸನ ಪ್ರೀತಿಗೆ101ಭಕ್ತಿಯಲ್ಲಿ ಭಾಗಣ್ಣನೆಂದು ಸುಪ್ರಖ್ಯಾತಭಕ್ತ ಶಿರೋಮಣಿಯು ಗೋಪಾಲ ದಾಸಾರ್ಯಬೀದಿಯಲಿ ಜರುಗದ ರಥಕೂಢನ್ನ ಬಾರೈಯ್ಯಎಂದು ಸ್ತುತಿಸೆ ರಥ ಓಡೋಡಿ ಬಂತು 102ತಿರುಪತಿ ಶ್ರೀ ಶ್ರೀನಿವಾಸನ ರಥವುಸರಸರ ಬಂದದ್ದು ಜನರು ನೋಡಿಹರಿಭಕ್ತಾಗ್ರೇಸ ಗೋಪಾಲ ದಾಸರನ್ನಪರಿಪರಿ ವಿಧದಿ ಕೊಂಡಾಡಿದರು ಮುದದಿ 103ಕಂಚೀ ವರದರಾಜನ ದೇವಾಲಯದಲ್ಲಿಕಿಚ್ಚು ಸೋಕಿ ಚೀಲ ಉರಿಯಲು ಅದನ್ನದಾಸವರ್ಯ ದೂರದೇಶದಲಿದ್ದರೂ | ತನ್ನ ಚೀಲ |ಕಸಕಿ ಶಾಂತ ಮಾಡಿದರು ಕಂಚಿಯ ಉರಿಯ 104ದಾರಿದ್ರ್ಯ ಋಣರೋಗ ಅಪಮೃತ್ಯು ಅಪಿಚಾರಪರಿಪರಿ ಕಷ್ಟೋಪಟಳ ವಿಘ್ನಗಳಗುರುವಿಜಯರಾಯಾಂತರ್ಗತ ಗೋಪಾಲನ ಒಲುಮೆಯಿಂದಎರಗುವರ್ಗೆ ಕಳೆದಿಹರು ಅದ್ಯಾಪಿ ಒದಗುತಿಹರು 105ಗೋಪಾಲದಾಸರಿಗೆವಿಜಯದಾಸರಲ್ಲಿಇಪ್ಪ ಭಕ್ತಿಯ ವರ್ಣಿಸಲಶಕ್ಯಗೋಪಾಲ ದಾಸರನ್ನು ನಂಬಿದವರನ್ನ ವಿಜಯಾರ್ಯ ಕೈ ಬಿಡರುಗೋಪಾಲವಿಜಯವಿಟ್ಠಲ ಬಂದು ತಾನೇ ಒಲಿವ106ಗೋಪಾಲ ದಾಸಾರ್ಯರೇ ನೀವು ವಿಜಯಾರ್ಯರಲ್ಲಿತಪ್ಪದೇ ಮಾಡಿದ ಭಕ್ತಿಯಿಂದದಿ ಎನಗೆಸ್ವಲ್ಪವಾದರೂ ನಿಮ್ಮಲ್ಲಿ ಪುಟ್ಟುವಂತೆ ಮಾಡಿರಿಗೋಪಾಲ ಪ್ರಿಯತಮರೇ ಪಾಹಿಮಾಂ ಶರಣು 107ಹೆಳವನಕಟ್ಟೆ ಗಿರಿಯಮ್ಮ ಮೊದಲಾದಶೀಲ ಶಿಷ್ಯರು ಬಹುಮಂದಿಗಳುಬಲು ಭಕ್ತಿಶ್ರದ್ಧೆಯಿಂ ಉಪದೇಶಗೊಂಡುಜಲಜನಾಭನ ಒಲುಮೆ ಪಾತ್ರರಾಗಿಹರು 108ಜ್ಞಾನ ಭಕ್ತಿ ವೈರಾಗ್ಯವಂತಳು ಗಿರಿಯಮ್ಮಕ, ೃಷ್ಣ ಮಂತ್ರ ಉಪದೇಶ ದಾಸಾರ್ಯರಿಂದಕೊಂಡು ಶ್ರೀ ರಂಗವಿಟ್ಠಲ ಕೃಷ್ಣನ್ನ ಪ್ರತ್ಯಕ್ಷಕಾಣುವಂಥ ಸೌಭಾಗ್ಯ ಶಾಲಿಯಾಗಿಹಳು 109ಅದ್ವಿಜನು ಶೈವನು ಪತ್ನಿ ಸಹಸೇವಿಸಿಮಂತ್ರಾಲಯ ಗುರುಗಳಿಂ ಅನುಕೂಲ ಹೊಂದಿಕೃತಜÕಭಾವದಿ ಲಕ್ಷ ಬ್ರಾಹ್ಮಣ ಭೋಜನ ಮಾಡಿಸುವೆನುಎಂದು ಹರಕೆ ಮಾಡಿಸಲಿಕ್ಕಾಗಲಿಲ್ಲ 110ಸ್ವಪ್ನದಲಿ ಹೇಳಿದರು ಕರುಣಿ ಶ್ರೀ ರಾಘವೇಂದ್ರಗುರುತಪ್ಪದೇ ಹರಕೆ ಸಲ್ಲುವುದು ಮೂವರು ಬ್ರಾಹ್ಮಣರುಸುಪುಣ್ಯವಂತರು ಮಹಾತ್ಮರು ಮರುದಿನ ಬೆಳಿಗ್ಗೆಈ ಪಥದಿ ಬರುವರ್ಗೆ ಭೋಜನ ಮಾಡಿಸೆಂದು 111ವರದಗುರುಗೋಪಾಲದಾಸರು ದಾಸಾರ್ಯರುಅರಿತುಅಪರೋಕ್ಷಸಾಮಥ್ರ್ಯದಿ ಈ ಸ್ವಪ್ನನೇರಾಗಿ ಬರಲಾಗ ಆಶೈವಗುರುಭಕ್ತನುನಾರೀ ಸಹನಮಸ್ಕರಿಸಿ ಸ್ವಾಗತವನಿತ್ತ 112ಮೂವರಿಗೂ ಅಧಿಕವಾದ ಪದಾರ್ಥಗಳನರ್ಪಿಸಿದೇವರ ನೈವೇದ್ಯ ಮೂವರಿಗೂ ಭೋಜನದೇವಗುರುಬ್ರಾಹ್ಮಣ ಪ್ರೀತಿಯಾಗಲಿ ಎಂದು ನಮಿಸಿದರುಶೈವ ಕುಲೀನ ದಂಪತಿ ಭಕ್ತಿ ಪೂರ್ವಕದಿ 113ಅಂದು ರಾತ್ರಿ ಆ ಭಕ್ತ ದಂಪತಿಗೆ ಸ್ವಪ್ನದಲಿಪ್ರೀತಿ ಆಯಿತು ಕೃಷ್ಣನಿಗೆ ಹರಕೆ ಪೂರ್ಣ ಆಯ್ತುಎಂದು ರಾಘವೇಂದ್ರ ತೀರ್ಥ ಸ್ವಾಮಿಗಳು ಹೇಳಿಮುದದಿ ದಂಪತಿಯ ಕೃತ ಕೃತ್ಯ ಮಾಡಿದರು 114ಮೊದಲು ಆದರ ರಹಿತ ವೆಂಕಟನೃಸಿಂಹಾರ್ಯನಿಂದುಗೋಪಾಲ ದಾಸಾರ್ಯರಹರಿಪೂಜಾಪದ್ಧತಿಯ ನೋಡುತಿರೆ ಹನುಮಂತ ದೇವರುಮೂರ್ತಿಮತ್ ಕುಳಿತಿದ್ದುದು ಕಂಡರು 115ಬಂದು ವೆಂಕಟ ನೃಸಿಂಹಾಚಾರ್ಯರು ಮತ್ತುನಿಂದಿಸಿದ ವೈದಿಕರು ತತ್ವ ಕೀರ್ತನೆಗಳಅದ್ಭುತ ಸುಳಾದಿಕೇಳಿನಿರ್ಮತ್ಸರರಾಗಿಬಂದು ಶಿಷ್ಯತ್ವ ಬೇಡಿದರು ಆರ್ಯರಲಿ 116ವೈರಾಗ್ಯನಿಧಿ ಗಂಗಾಧರನ ಅನುಗ್ರಹದಿವೈರಾಗ್ಯ ಯುಕ್‍ಜ್ಞಾನಹರಿಭಕ್ತಿ ಲಭಿಸಿದ್ದಸೂರಿವರ ಗೋಪಾಲ ದಾಸಾರ್ಯ ಜರಿಗೆ ಶಾಲು ರೇಷ್ಮೆಭಾರಿ ಪಲ್ಲಕ್ಕಿ ವೈಭವದಿ ಮೆರೆದರುಹರಿಪ್ರೀತಿಗಾಗಿ117ಪನ್ನಗಾಚಲಶ್ರೀ ಶ್ರೀನಿವಾಸನ ಭಕ್ತಅನಿಮಿಷಾಂಶರು ಗೋಪಾಲ ದಾಸಾರ್ಯಶ್ರೀನಿವಾಸನಪ್ಪಣೆಕೊಂಡು ಊರಿಗೆ ಬಂದುಅವನೀಸುರರಿಗೆ ಔತಣವಿತ್ತು ಧ್ಯಾನದಿ ಕುಳಿತರು 118ಮುಖ್ಯಕಾರಣ ವಿಷ್ಣು ಸ್ವತಂತ್ರ ಎಂದುತಾ ಭಜಿಸಿಶಿಷ್ಯರಿಗೆ ಬೋಧಿಸಿ ಸಜ್ಜನರ ಪೊರೆದುಪುಷ್ಯ ಬಹುಲಾಷ್ಟಮೀಯಲ್ಲಿ ಪೂಷಯದುಪತಿಧಾಮಕೃಷ್ಣ ಭಕ್ತಿರಿಗೌತಣವಿತ್ತು ಐದಿದರು 119ಗದ್ವಾಲ ರಾಜ ಮೊದಲಾದ ರಾಜ ಪ್ರಮುಖರಿಂದಮೇದಿನೀ ಪ್ರಖ್ಯಾತ ಯತಿಗಳು ಪಂಡಿತರಿಂಎದುರಿಲ್ಲದಸೂರಿಐಜೀಯವರಿಂದಲುಸದಾ ಮರ್ಯಾದೆ ಕೊಂಡವರು ದಾಸಾರ್ಯ 120ವಿಜಯದಾಸಾರ್ಯ ಪೂಜಿಸಿದಹರಿಮೂರ್ತಿವಿಜಯವಿಟ್ಠಲ ಪ್ರತಿಮೆ ಅಂತರ್ಗತನ್ನವಿಜಯಸಾರಥಿಪ್ರಿಯ ಗೋಪಾಲ ದಾಸರು ಪೂಜಿಸಿರಾಜಿಸುತಿಹ ಮೂರ್ತಿಇಹುದುಅವರಮನೆಯಲ್ಲಿ121ಜ್ಞಾನ ಸುಖ ಬಲ ಪೂರ್ಣ ಜನ್ಮಾದಿಕರ್ತಅಜವನರುಹಜ ಪಿತ ಶ್ರೀಶಪ್ರಸನ್ನ ಶ್ರೀನಿವಾಸಅನಘಹಯಮುಖವಿಜಯಗೋಪಾಲ ಸರ್ವಗಗೆಘನ್ನ ಪ್ರಿಯ ಗೋಪಾಲ ದಾಸಾರ್ಯ ಶರಣು 122|| ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ತತ್ತ್ವವಾದ ಮತವ ಪಶ್ರೀ ತತ್ತ್ವವಾದ ಮತವಾರ್ದಿಶುಭಚಂದ್ರಮನ |ಭೂತಲದೊಳಪ್ರತಿಮನೆನಿಪ ಶ್ರೀಯತಿವರನ |ಪ್ರೀತಿಯಿಂ ಭಜಿಸೆ ಇಷ್ಟಾರ್ಥಗಳಸಲಿಸುವವಾತಜಾತನ ಸ್ಮರಿಸಿರೈ ಅ.ಪಶ್ರೀಮಾರುತನು ತ್ರೇತೆಯಲಿ ಹನುಮನೆಂದೆನಿಸಿ |ತಾ ಮುದದಿ ಅಂಜನಾದೇವಿ ಗರ್ಭದಿ ಜನಿಸಿ |ರಾಮಪಾದಾಂಬುರುಹ ಭಜಿಸಿ ಸದ್ಬಕ್ತಿಯಲಿಸ್ವಾಮಿಯಾಜೆÕಯನೆ ಕೊಂಡು |ನೇಮದಿಂ ಸಾಗರವ ದಾಟಿ ಲಂಕೆಯ ಪೊಕ್ಕು |ಪ್ರೇಮದಿಂದೊಯ್ದ ಮುದ್ರೆಯ ಜಾನಕಿಗೆ ಕೊಟ್ಟು |ಆ ಮಹದ್ವನದ ದನುಜರನೆಲ್ಲವಳಿದ - ನಿಸ್ಸೀಮ -ಹನುಮನ ಭಜಿಸಿರೈ 1ದ್ವಾಪರದಿ ಮಾರುತನು ಕುಂತಿದಾರಕನೆನಿಸಿ |ದ್ವಾಪರನ ಯುಕ್ತಯಿಂದುತ್ಕøಷ್ಟರಾಗಿದ್ದ |ಪಾಪಿಗಳನಳಿದು ಕೀಚಕ - ಜರಾಸಂಧಾದಿಭೂಪಾಲಕರನು ತರಿದು ||ದ್ರೌಪದಿಗೆ ಸೌಗಂಧಿ ಕುಸುಮವನು ತರಪೋಗ -ಲಾಪಥದೊಳಸುರಮಣಿಮಂತಕದನವ ಮಾಡೆ|ಕೋಪದಿಂದವನ ಮರ್ದಿಸಿದನತಿಬಲವಂತನಾ ಪುರುಷನಂ ಭಜಿಸಿರೈ 2ಕಲಿಯುಗವು ಪ್ರಾಪ್ತವಾಗಲು ಮಧ್ವನಾಮದಿಂದಿಳೆಯೊಳವತರಿಸಿ ಸೋಹಂ ಎಂಬ ಶಂಕರನಹುಲುಮತಂಗಳಜರಿದುಮಾಯಿಗಳಗೆಲಿದು ಮೋಹನ ಶಾಸ್ತ್ರಬಲೆಯನರಿದುಮತಿತ ದರುಶನವೈದ ನುಂಗಿ ಜೀರ್ಣಿಸಿಕೊಂಡುಪ್ರಲಯ ಭೈರವನೆಂಬ ಬಿರುದ ಅವನಿಯ ಮೇಲೆನೆಲೆಗೊಳಿಸಿ ವಿಷ್ಣು ಪರದೈವವೆಂದರುಹಿದಾಅಲವಭೋದರ ಭಜಿಸಿರೈ 3ಪ್ರತಿವಾದಿಗಿದಿರಾಗಿ ತಲೆಯೆತ್ತದಂತೆ ಸಂ-ತತ ಧರೆಯೊಳದ್ವೈತವಂಕುರಿಸದಂತೆ ದು-ರ್ಮತದ ಮೋಹನಶಾಸ್ತ್ರ ಪಲ್ಲವಿಸದಂತೆ ಮಾಯಿಗಳಮತಗಳ ಮತ ಹೆಚ್ಚದಂತೆ ||ಕ್ಷಿತಿಯೊಳಗೆ ಶ್ರೀತತ್ತ್ವವಾದ ನೆಲಸಿಪ್ಪಂತೆ |ಶ್ರುತಿಶಾಸ್ತ್ರವದ್ವೈತವಂ ಬಿಟ್ಟು ಸೆಳೆವಂತೆಪ್ರತಿಪಾದಿಸುವ ಖಳರ ದುರ್ಭಾಷ್ಯಗಳ ಜರಿದಯತಿರಾಯರು ಭಜಿಸಿರೈ 4ಪರಮವೈಷ್ಣವರ ಮಿಂಚಿಡುವ ರತ್ನದ ಸಾಣೆ |ಪರವಾದಿಗಳ ಬೆನ್ನ ಮುರಿವ ವಜ್ರದ ಸಾಣೆ |ಗುರುಮಧ್ವಮುನಿಯ ಬಲುವಿದ್ಯ ಸಾಮಥ್ರ್ಯಕ್ಕೆಸರಿಗಾಣೆ ಲೋಕದೊಳಗೆ ||ಧರೆಯೊಳಗೆ ಶ್ರೀತತ್ತ್ವವಾಗಿ ನೆಲಸಿಹ ವೀಣೆ |ಚರಿಸದಂತಿಳೆಯಲದ್ವೈತಕಿಕ್ಕಿದ ಆಣೆ |ವರಮೂರ್ತಿ ಚೈತನ್ಯ ವಂದ್ಯ ಸುತ್ರಾಮನೇ |ಪೂರ್ಣಪ್ರಜÕರ ಭಜಿಸಿರೈ 5ಅಕಳಂಕ ಚರಿತನೆ ಮುಮುಕ್ಷ ಮಸ್ತಕದಮಣಿ|ನಿಖಿಳಪೌರಾಣಶ್ರುತಿ ಶಾಸ್ತ್ರದಾಗಮದಖಣಿ|ಸಕಲವಾದಿಗಳ ಜಿಹ್ವೆಯಲಿ ಮೆಟ್ಟಿದಆಣಿಭಾಗವತಚಿಂತಾಮಣಿ ||ಯುಕುತಿ ಪರಿಪೂರ್ಣಯತ್ಯಾಶ್ರಮಕೆಕಟ್ಟಾಣಿ|ಪ್ರಕಟ ಕವಿಜನಕಮಲವ್ಯೂಹಕೆಗಗನಮಣಿ|ಸಕಲ ಜಗವಂದ್ಯ ಚೈತನ್ಯ ಚಿಂತಾಮಣಿಮುಖ್ಯಪ್ರಾಣರ ಭಜಿಸಿರೈ 6ಮುಂದೆ ಅಜನಾಗಿ ಪವಮಾನ ಕೃತಯುಗದಲ್ಲಿ |ಒಂದು ನಿಮಿಷದಲಿ ಸೃಜಿಸುವನು ಸಚರಾಚರವ |ಸಂದೇಹವಿಲ್ಲ ತಪ್ಪದು ವೇದವಾಕ್ಯವಿದುಹಿಂದೆ ಶ್ರೀಹರಿಸೇವೆಯ ||ಒಂದು ಬಯಸದಲೆ ನಿಚ್ಚಟದ ಭಕ್ತಿಯಲಿ ತಾ -ನಂದು ಮಾಡಿದಸುಕೃತ- ಫಲದಿಂದ ಬ್ರಹ್ಮತ್ವ |ಬಂದು ಯುಗ -ಯುಗದೊಳವರಿತರಿಸಿ ದೃಷ್ಟವತೋರ್ಪನಂದ ಮುನಿಪರ ಭಜಿಸಿರೈ 7
--------------
ಪುರಂದರದಾಸರು
ಶ್ರೀ ನರಸಿಂಹ ಸ್ತೋತ್ರ11ವಂದಿಸು ನರಹರಿಯ ಮನವೆ ವಂದಿಸು ನರಹರಿಯವಂದ್ಯವಂದ್ಯನು ಬಹು ಸುಂದರ ಸುಖಮಯಇಂದಿರರಸ ಅರವಿಂದ ಸುನಾಭನ ವಂದಿಸು ನರಹರಿಯ ಪಸಿಂಧುಸಂಚರ ಬಹು ಸುಂದರ ಗಿರಿಧರತಂದನು ವಸುಧೆಯ ಕಂದನ ಕಾಯ್ದ ಪುರಂದರವರದ ಮುನೀಂದ್ರ ಕುಮಾರ ಕಪೀಂದ್ರಗÉ ಒಲಿದಮರೇಂದ್ರಗೆ ಬೋಧಿಸಿನಿಂದ ದಿಗಂಬರಕುಂಭಿಣಿಸುರನುತಮಂದರಗಿರಿ ಎತ್ತಿ ಸಿಂಧುವಿಂದಲಿ ಬಂದುಅಂಧ ಮೂಢರ ತನ್ನ ಅಂದ ಮೋಹದಿಕಟ್ಟಿದಾನ್ತ ಸುರರಿಗೆಲ್ಲ ಚಂದ ಸುಧೆಯನಿತ್ತಇಂದಿರಾಕಾಂತನನಂತ ಸುಗುಣಗಳಚಿಂತಿಸಿ ಯೋಗ್ಯದಿ ಕಂದದ ಪ್ರೇಮದಿವಂದಿಸು ನರಹರಿಯ 1ವೇದಾಂತರ್ಗತಬಾದರಾಯಣಹರಿಪಾದಾರಾಧಕಮೋದಸುತೀರ್ಥರಪಾದಾವಲಂಬಕ ಸಾಧು ಸುಮೇಧರಹೃದಯಾಕಾಶದಿ ಪದುಮದ ಮೂಲದಿಸದಮಲಾತ್ಮನಾದಿತ್ಯನುಪೋಲುವಿಧವಿಧಭಾಸದಿ ಪದೆ ಪದೆ ನೋಡುತವಿಧಿಯ ತಾತನ ಬಹುಮೋದಸುಗುಣಗಳಮುದದಲಿ ಚಿಂತಿಪಕೋವಿದಹಿರಿಯರಪಾದಸುಪಾಂಶುವ ನಿಯಮದಿ ಪೊಂದಿ ನೀಪದುಮೇಶನ ನಿನ್ನ ಹೃದಯದಿ ಚಿಂತಿಸಿವಂದಿಸು ನರಹರಿಯ 3ನಿಜಸುಖಮಾರ್ಗದಿ ಭಜಕ ಬಾಲಕ ಪೋಗೆಅರ್ಜಿತ ದ್ವೇಷದಿ ಮೂರ್ಜಗ ಶತ್ರುಗಜಾದಿಗಳಿಂ ಹೆಜ್ಜೆಜ್ಜೆಗೆ ಬಾಧಿಸೆಧೂರ್ಜಟಸೇವ್ಯ ಜನಾರ್ಧನ ನರಹರಿಗರ್ಜಿಪ ವದನನು ಸಜ್ಜನಪಾಲಕಅಜಸುರರೆಲ್ಲರು ತೇಜೋಮಯ ಅತಿಜ್ವಲಿಸುವ ನಖದಿಂ ದುರ್ಜನ ರಾಜನಜೋಜ್ಜೆಯ ಛೇದಿಸಿ ಭಜಕಗೆ ವರವಿತ್ತುಸೃಜ್ಯಾಸೃಜ್ಯರ ಪ್ರಾಜÕನ ಮರೆಯದೆವಂದಿಸು ನರಹರಿಯ 3ಸೃಷ್ಟ್ಯಾಧೀಶನದೃಷ್ಟನಾಗಿರುತಿಹಸೃಷ್ಟಾಸೃಷ್ಟ ಪ್ರವಿಷ್ಟಾಸೃಷ್ಟನುಶಿಷ್ಟರ ಇಷ್ಟ ಸುದೃಷ್ಟಿಯ ಬೀರುತಶಿಷ್ಟರ ಬಹು ವಿಧ ಕಷ್ಟಗಳಳಿದುಅಭೀಷ್ಟಗಳೀವನು ದುಷ್ಟರ ಶಿಕ್ಷಿಪಭ್ರಷ್ಟಜನರಿಗಿವ ಸ್ಪಷ್ಟನಾಗುವನಲ್ಲಶ್ರೇಷ್ಠೋತ್ತಮಪರಮೇಷ್ಠಿಜನಕನಿವಕಾಷ್ಟಾಗ್ನಿಯವೊಲ್ ಅದೃಷ್ಟಾದೃಷ್ಟನುದುಷ್ಟದೂರ ವಾಸಿಷ್ಠ ಶ್ರೀ ಕೃಷ್ಣನುತಿಷ್ಟನು ನಿನ್ನೊಳುತ್ಕøಷ್ಟನೆಂದರಿತುವಂದಿಸು ನರಹರಿಯ 4ಸರಿಪರರಿಲ್ಲದ ಸಿರಿಯರಸನಚಾರುಚರಣಾರಾಧನ ಪರಸುಖವೀವುದುಸಿರಿದೊರೆ ಸುಹೃದನು ಸಿರಿಸಹ ಮೆರೆಯುತಅರಿತ ಸುಜನರನು ಪೊರೆವನು ದಯದಿಮೊರೆಯನು ಲಾಲಿಸಿ ಪೊರೆದನು ಗರ್ಭವಮರೆತು ನಾರಾ ಎಂದ ನರಸುರಗೊಲಿದನುಪೊರೆದನು ದಯದಿ ನರಾಧಮ ಎನ್ನನುಕರಿವರ ದ್ರೌಪದಿವರದ ವಿಖ್ಯಾತನುಸರಸಿಜಭವತಾತ ಪ್ರಸನ್ನ ಶ್ರೀನಿವಾಸಪೊರೆವನು ನೆನೆವರ ಸಿರಿಭೂದೊರೆಯೆಂದುವಂದಿಸು ನರಹರಿಯ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪ್ರಸನ್ನ ಶ್ರೀನಿವಾಸದಾಸರ ಶ್ರೀಹರಿ ಪ್ರಾದುರ್ಭಾವಗಳುಪ್ರಸನ್ನ ಶ್ರೀ ಮತ್ಸ್ಯಾವತಾರ4ಲೀಲಾವತಾರನೇ ಪ್ರಳಯಾಬ್ದಿ ಸಂಚರನೇಮಾಲೋಲ ಸುಖಚಿತ್ ತನು ಮತ್ಸ್ಯರೂಪಬಾಲಾರ್ಕ ಕೋಟ್ಯಮಿತ ಜ್ಯೋತಿರ್ಮಯ ಸುಂದರನೇಕಾಲಗುಣದೇಶ ಅಪರಿಚ್ಛಿನ್ನ ಪೂರ್ಣ ಸುಗುಣಾರ್ಣವನೇ ಶರಣು ಪಪ್ರಳಯದಲಿ ಭೂರಾದಿ ಲೋಕಂಗಳುಮುಳಗಿರಲು ಹುಯಗ್ರೀವನಾಮ ದಾನವನುಸೆಳೆದು ವೇದಗಳ ತನ್ನೊಳ್ ಅಡಗಿಸಿದ್ದವನಸೀಳ್ದಿ ನೀ ಬಂದು ವೇದೋದ್ಧರನೇ ಮತ್ಸ್ಯ 1ಗೋವಿಪ್ರಸುರ ಸಾಧು ಜನರ ವೇದಂಗಳ-ಕಾವಸರ್ವೇಶ್ವರನೇ ಪುರುಷಾರ್ಥದಾತಸರ್ವರಿಗೂ ಸುಖವೀವುದು ನಿನ್ನ ಸುಚರಿತ್ರೆಶ್ರೀವರನೇ ಮತ್ಸ್ಯರೂಪಿಯೇ ಶರಣು ಶ್ರೀ ಕೃಷ್ಣ 2ಹಂಸ ಐರಾವತ ತಿತ್ತಿರಾ ಶುಕಗಳುಈ ಪಕ್ಷಿಗಳಲ್ಲಿ ತರತಮ ಉಂಟುಸುಸುಖ ಐಶ್ವರ್ಯೋನ್ನಾಹ ಅದರಂತೇವೇಈ ಸುನುಡಿಗಳ ಪಠನ ಮಾಳ್ಪ ಸುಜನರಿಗೆ 3ಗುರುರ್ಗುರ್ರೋಗುರುಮನುಶುಕಮಧ್ವಾಂತಸ್ಥಪರಮಾತ್ಮಹರಿವಿಷ್ಣೋ ಉದ್ದಾಮಸಾಮಅರದೂರಅನಂತೋರು ನಿಜಶಕ್ತಿ ಪರಿಪೂರ್ಣಉರು ಸುಗುಣ ನಿಧಿಯೇ ಶಫರಿರೂಪ ಮಾಂಪಾಹಿ 4ಸರ್ವೋತ್ತಮನು ನಾರಾಯಣನೇ ಎಂದರಿತುದ್ರವಿಡ ದೇಶಾಧಿಪನು ಸತ್ಯವ್ರತರಾಯಸುವಿವೇಕದಿ ನಿನ್ನ ಕುರಿತು ತಪವಚರಿಸಿದನುಭಾವಶುದ್ಧನು ಸಲೀಲಾಶನ ದೃಢವ್ರತನು5ವಿವಸ್ವಾನ್ ಮಗ ಶ್ರಾದ್ಧದೇವನು ಪ್ರಖ್ಯಾತವೈವಸ್ವತಮನುವೇ ಇಂದಿನ ಮನುವುಪೂರ್ವದಲಿ ಈತನೇ ಸತ್ಯವ್ರತ ಸಾಮ್ರಾಟ್0ಅವನಿಗೆ ನಮೋ ಎಂಬೆ ನಿನ್ನವನೆಂದು 6ರಾಜ ಋಷಿ ಈ ಮಹಾನ್ ಕೃತಮಾಲಾ ನದಿಯಲ್ಲಿನಿಜ ಭಕ್ತಿಯಿಂದ ಜಲತರ್ಪಣವ ಚರಿಸೆಅಂಜಲಿಉದಕದಲಿ ಮುದ್ದು ಮರಿ ಮೀನೊಂದುಸರಿಜ್ಜಲ ಸಹಿತದಿ ಬಂದದ್ದು ಕಂಡ 7ಅರಸ ಕರುಣದಲಿ ಅದನು ನದಿಯಲಿ ಬಿಡಲಿರೆಅರುಹಿತು ತನ್ನ ವೃತ್ತಾಂತವ ಆ ಮೀನುಪರಿಪರಿಯಾಗಿ ತನ್ನ ಸಜಾತೀಯರ ಭಯ ತನಗೆ ಎಂದುನೀರು ಪ್ರವಾಹದಲ್ಲಿ ತನ್ನ ಬಿಡಬೇಡವೆಂದು ಪ್ರಾರ್ಥಿಸಿತು ರಾಜನ್ನ 8ನಾರಾಯಣಾದಿ ಸುಮಂತ್ರಿತ ಅಭಿಯಂತ್ರಿತ ತನ್ನಸ್ಫುರತ್ ಕಲಶ ಕಮಂಡಲು ನೀರಲ್ಲಿ ಮೀನು ಮರಿ ಇಟ್ಟುಕೊಂಡುಆಶ್ರಮಕೆ ಕೃತ ಕೃತ್ಯ ಮನದಿ ರಾಜನು ಬಂದಮರುದಿನ ಉದಯದಲಿ ಕಂಡ ಆಶ್ಚರ್ಯವ 9ಕಮಂಡಲ ಕಲಶ ಪೂರಾವು ಏಕ ರಾತ್ರಿಯಲ್ಲೇವೇಆಮತ್ಸ್ಯಮರಿ ಬೆಳೆದಿದ್ದು ಆಶ್ಚರ್ಯ ಕಂಡಕಮಂಡಲು ಸಾಲದೇ ವಿಸ್ತಾರವಾದ ಸ್ಥಳನಿರ್ಮಾಣ ಮಾಡಿ ನೀರು ತುಂಬಿಸಿ ಅದರೊಳ್ ಮೀನನ್ನ ಬಿಟ್ಟ 10ಉದಕತುಂಬಿದ ಕುಂಟೆ ಸರೋವರವನ್ನುಮತ್ಸ್ಯವು ಪೂರ್ಣ ವ್ಯಾಪಿಸಿದ ಆಶ್ಚರ್ಯಅತಿಶಯ ಲೀಲಾ ವಿನೋದವ ಕಂಡ ರಾಜಉದಧಿಯಲಿ ಬಿಡಲು ನಿಶ್ಚಯಿಸಿ ಕ್ರಮಗೊಂಡ 11ಮಹೋದಧಿಯಲ್ಲಿರುವ ಮಕರಾದಿಗಳು ತನ್ನ ನುಂಗುವನೆಂದುಮಹಾರಾಜನಿಗೆ ಆ ಮೀನು ಹೇಳಿ ತಾನುಆದರೂ ರಾಜನು ಅಷ್ಟರಲ್ಲೇ ಉದಧಿಯೊಳು ಬಿಟ್ಟನುಮೀನನ್ನು ಆಗ ದೊಡ್ಡ ಆಶ್ಚರ್ಯವೊಂದನ್ನ ಕಂಡ ಆಮೀನು ಮತ್ತೂ ದೊಡ್ಡದಾಯಿತು 12ಶತಯೋಜನ ಮಹಾವೀರ್ಯ ಜಲಚರಗಳುಯಾವುದೂ ಕಂಡಿಲ್ಲ ಕೇಳಿಲ್ಲ ಜಗದಿಅತಿ ಅದ್ಭುತ ಮಹಾ ಮೀನರೂಪನು ಸಾಕ್ಷಾತ್ಉದಧಿಶಾಯಿ ಶ್ರೀಮನ್ನಾರಾಯಣ ನೀ ಎಂದ 13ಜೀವರುಗಳಿಗೆ ಅನುಗ್ರಹ ಮಾಡಲಿಕ್ಕೇವೇದೇವ ನೀ ಮತ್ಸ್ಯರೂಪ ಪ್ರಕಟಿಸಿರುವಿಕಾವಕಾರುಣಿಯೇ ಪುರುಷಶ್ರೇಷ್ಠ ಸರ್ವೋತ್ತಮನೇಸರ್ವದಾ ನಮೋ ಜಗಜ್ಜ£್ಮ್ಞಧಿಕರ್ತ14ಶ್ರವಣ ಸಂಸ್ತುತಿಸಿ ಮನನ ಧ್ಯಾನಾದಿಗಳು ಮಾಡಿಶ್ರೀವರನೇ ನಿನ್ನ ಮಹಾತ್ಮ್ಯಾ ಜ್ಞಾನಪೂರ್ವಕ ನಿನ್ನಲ್ಲಿ ಸುಸ್ನೇಹರತನಾದವಿವೇಕಿ ಪ್ರಪನ್ನರ ಸಲಹಿಗತಿಈವಿ15ಯಥಾರ್ಥ ಜ್ಞಾನವ ಭಕ್ತಿಮಾನ್ ರಾಜನು ಸ್ತುತಿಸಲುಮುದದಿಂದ ಇನ್ನೂನು ನಿನ್ನವೃತತಿಜೇಕ್ಷಣ ಜಗತ್ಪತಿಯೇ ನೀನು ಆಮತಿವಂತನಿಗೆ ಪೇಳಿದಿ ಅವತಾರಕಾರ್ಯ 16ಏಳುದಿನವಾಗಲು ಭೂರಾದಿ ಲೋಕಗಳುಪ್ರಳಯಜಲದಲ್ಲಿ ಮುಳುಗಿ ಹೋಗುವವುಒಳ್ಳೇ ಓಷಧಿ ಸರ್ವವೀರ್ಯತರ ಬೀಜ -ಗಳಸಪ್ತಋಷಿ ಸಹ ಕಾದಿರು ಎಂದಿ17ಕಾದುಕೊಂಡು ಇರುವಾಗ ವಿಶಾಲ ನೌಕವು ಒಂದುಶ್ರೀದ ನೀ ಕಳುಹಿಸೆ ಜಲದ ಮೇಲ್ ಬರುವದುಅದರಲಿ ಅರೋಹಿಸಬೇಕು ಬೀಜಗಳಸಪ್ತಋಷಿ ಸಹ ರಾಜ ಎಂದು ಬೋಧಿಸಿದಿ 18ಎಲ್ಲೆಲ್ಲೂ ಪ್ರಳಯಜಲತುಂಬಿತುಳಕಾಡುವುದುಲೋಲ್ಯಾಡುವುದು ನೌಕ ಗಾಳಿರಭಸದಲಿಅಲ್ಲಿ ಸಮೀಪಿಸುವ ಮತ್ಸ್ಯರೂಪನ ನಿನ್ನಹೊಳೆವ ಶೃಂಗದಿ ನಾವೆಯನು ಕಟ್ಟು ಎಂದಿ 19ನಾವೆಯನು ಬಂಧಿಸಲುರಜ್ಜುಸರ್ಪವು ಎಂದುಸುವ್ರತ ರಾಜನಿಗೆ ಉಪಾಯ ಪೇಳಿದಸರ್ವಗುಣ ಪರಿಪೂರ್ಣ ನಿರ್ದೋಷ ಪರಬ್ರಹ್ಮವಿಶ್ವವಿಷ್ಣೋ ಸೃಷ್ಟಾ ಪಾತಾ ರಮೇಶ20ಈ ರೀತಿ ಆ ಮಹಾನ್ ಸತ್ಯವ್ರತರಾಜನಿಗೆಹರಿನೀನು ಬೋಧಿಸಿ ಅಂತರ್ಧಾನವು ಆಗೇಆ ರಾಜಋಷಿ ತಾನು ಮತ್ಸ್ಯರೂಪ ಹೈಷಿಕೇಶಸಿರಿವರನೇ ನಿನ್ನನ್ನೇ ಧ್ಯಾನಿಸುತಲಿದ್ದ 21ಯುಕ್ತ ಕಾಲವು ಬಂತು ಉಕ್ಕಿತು ಸಮುದ್ರವುಸುತ್ತು ಮುತ್ತು ಎಲ್ಲೂ ಪೊಕ್ಕಿತು ಭೂಮಿಯಲಿಅತ್ತ ಇತ್ತ ಇಲ್ಲೂ ಸುತ್ತಿ ಸುಳಿವ ನೀರುಭೀತಿಕರ ನೆನೆಯಲಿಕೆ ನೋಡೆ ಮತ್ತೆಷ್ಟೋ 22ಚಂಡಮಾರುತ ಪ್ರಚಂಡ ಮೇಘವುಕರಿಸೊಂಡಲಂತೆ ಹನಿ ಕಂಡಿಲ್ಲ ಇಂಥಾ ಮಳೆಕಂಡು ನಾವೆಯ ರಾಜಕೊಂಡು ಬೀಜಗಳಕರಕೊಂಡು ಋಷಿಗಳ ಏರಿಕೊಂಡನು ಬೇಗ 23ಕೇಶವನೇ ನಿನ್ನ ಧ್ಯಾನಿಸಲು ಆಗಕೌಶೇಯ ಶೃಂಗಿ ಮಹಾಮತ್ಸ್ಯ ನೀ ಬರಲುಈಶ ನಿನ್ನಯ ಶೃಂಗಕ್ಕೆ ನೌಕವಕಟ್ಟಿಸಂಸ್ತುತಿಸಿದನು ಮಧುಸೂಧನನೇ ನಿನ್ನ 24ಶ್ರೀ ಭಾಗವತಾಷ್ಟಮ ತ್ರಯೋವಿಂಶತ್ ಅಧ್ಯಾಯಶುಭತಯವಿಜ್ಞಾನಬೋಧಕವು ಅದರಸೊಬಗರಿತು ಯೋಗ್ಯರು ಪಠಿಸೆ ಪ್ರೇರಿಸು ಸ್ವಾಮಿಸೌಭಾಗ್ಯಪ್ರದ ಶ್ರೀಶ ಮಾಂಪಾಹಿ 25ಏಕಶೃಂಗಧರ ಸ್ವರ್ಣ ಮತ್ಸ್ಯನಿಗೆ ಸರ್ಪದಿಂಲಕ್ಷ ಯೋಜನೆ ಮೇಲಿನ ವಿಸ್ತಾರದಿ ಬಂಧಿಸಿದಸತ್ಯವ್ರತ ರಾಜನು ಸಂತೋಷದಲಿ ಸ್ತುತಿಸಿದಅನಾದಿಅವಿದ್ಯಾಪೀಡಿತ ಜನ ಸಂರಕ್ಷನ್ನ26ಪರಮಹಂಸನ ಮೂಲ ಗುರೋ ಲಕ್ಷ್ಮೀಹಯವದನಮೇರು ಇತರಾ ದೇವಹೂತಿ - ಸುತ ಶರಣುಘೋರಸಂಸಾರ ಬಂಧಮೋಚಕಹರಿಯೇವರಸುಖಪ್ರದ ಸಂರಕ್ಷಕ ಮಾಂಪಾಹಿ27ಶಕ್ರಾದಿ ಜಗತ್ತಿಗೆಗುರುಗಂಗಾಧರನುಗಂಗಾಧರನಿಗೆಗುರುಪ್ರಾಣ ಪದ್ಮಜರುಪಂಕಜಾಸನ ಪ್ರಾಣರಿಗೆಗುರುರಮೇಶನು ಹರಿಯೇಆಗುರುಮೂಲಗುರು ಪರಮಗುರ್ರೋಗುರುವು28ನಿನ್ನ ಅನುಗ್ರಹ ಹೊಂದಿದರು ನೀ ಪರಮಗುರುಎಂದು ತಿಳಿದುಬದ್ಧಜೀವರ ಮೋಕ್ಷ ಪುರುಷಾರ್ಥಅವಿದ್ಯಾsಜ್ಞಾನ ಕಳೆದು ಪುಟವಿಟ್ಟಸ್ವರ್ಣರಜತಪೋಲ್ ಶುಚಿ ಆಗಿಸುವಿ ದಯದಿ 29ಸರ್ವಲೋಕ ಜನರಿಗೆ ಹಿತಕರ ಸುಹೃತ್ ನೀನೇಪ್ರಯೇಶ್ವರ ಆತ್ಮಾಗುರು ಜ್ಞಾನ ಅಭೀಷ್ಟಸಿದ್ಧಿಯುನೀ ಸುಹೃತ್ ಅಂದರೆ ಪ್ರತ್ಯುಪಕಾರ ಶೂನ್ಯನುಇನ್ನೂ ಬಹು ವಿಧದಿ ಪರಮಸಾಧು ಸ್ತುತಿಗೈದಿ 30ಸರ್ವಲೋಕಕೆ ನೀನೇ ಸುಹೃತ್ ಪ್ರಯೇಶ್ವರನುಶರ್ವಅಜಶಕ್ರಾದಿಗಳ ನಿಯಾಮಕನುಸರ್ವಾದಾನಂದಮಯ ಗುಣನಿಧಿ ಆತ್ಮನುಸರ್ವಾಭೀಷ್ಟಪ್ರದ ಜ್ಞಾನಸಿದ್ಧಿದನು 31ದೇವದೇವೋತ್ತಮನೇ ಆದಿಪೂರುಷ ಶ್ರೀಶವಿಶ್ವೇಶ್ವರ ಮತ್ಸ್ಯರೂಪ ಭಗವಂತನೀ ವಿಹಾರವು ಮಾಡಿ ಪ್ರಳಯಾರ್ಣವದಲಿಕವಿವರ್ಯ ರಾಜನಲಿ ಸುಪ್ರೀತನಾದಿ 32ವೇದ ಉದ್ಧರಿಸಿದಿ ಹಿಂದೆ ಅಸುರನ್ನ ಕೊಂದುಯುಕ್ತ ಕಾಲದಿ ಈಗ ಪ್ರಳಯವು ತೀರೆಸಾಧುವರ್ಯನು ಜ್ಞಾನವಿಜ್ಞಾನ ಕೋವಿದನುಸತ್ಯವ್ರತನಿಗೆ ಮನು ಪದವಿಯನು ಇತ್ತಿ 33ಮತ್ಸ್ಯಾವತಾರ ಸಂಕೀರ್ತನೆ ಮಾಳ್ಪರಿಗೆಸಿಧ್ಧಿ ಆಗುವುದು ಸರ್ವೇಷ್ಟ ಸದ್ಗತಿಯುಎಂದು ಪೇಳಿರುವಿ ಶುಕಪದ್ಮಭವಪತಿ ಶ್ರೀಶಸಾತ್ಯವತಿ ಮೀನ ವೇಧಪಿತ ಪ್ರಸನ್ನ ಶ್ರೀನಿವಾಸ 34- ಇತಿ ಶ್ರೀ ಮತ್ಸ್ಯಾವತಾರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಾದಿರಾಜರು82ಪಾದವ ತೋರಿಸಯ್ಯಾ ಹೇ ಜೀಯಾ ಪವೇದವೇದ್ಯ ಯತ್ಯಾರಾಧೀತ ಸುಜ -ಮೇದಿನಿಸುರರಿಗೆ ಸಾದರದಿಂದಭೋಧನೀಡಿದ ಪಾದವೋ ಮಹರಾಯಾ 1ಕಂದರಕೊಟ್ಟಪಾದಯತಿರಾಯಾಮಂದನೀಡುವ ಪಾದವೋ ಸುರನಾಥ2ತ್ಕøಷ್ಟರೆನಿಸಿದ ಪಾದವೋ ಹೇ ಪ್ರಭುವೇ 3ಪುಲ್ಲಲೋಚನಬಲ್ಲಿದಮಮ ಮನೋರಥಸಲ್ಲಿಸ ದೇನೋಪಾದಶ್ರೀಕರಾ4ದಾತಾಗುರುಜಗನ್ನಾಥ ವಿಠಲ ನಿಜದೂತನ ಶುಭಪಾದವೋ ಮನ್ನಾಥಾ 5
--------------
ಗುರುಜಗನ್ನಾಥದಾಸರು
ಶ್ರೀದುಂದುಭಿಸಂವತ್ಸರ ಸ್ತೋತ್ರ154ವಂದೇದುಂದುಭಿಸಂವತ್ಸರ ನಿಯಾಮಕಗೆಇಂದಿರಾಪತಿ ಪೂರ್ಣ ಆನಂದ ಚಿನ್ಮಯಗೆಚಂದಕರದಲಿ ವಂಶ ಇಷ್ಟಿ ಕರುಣಾದೃಷ್ಟಿ ನಂದನಂದನವಸುದೇವ ದೇವಕೀ ಸುತಗೆ ಪ.ರಾಜಾ ಶುಕ್ರನುಬುಧಮಂತ್ರಿ ಮೊದಲಾದವರೊಳು ರಾಜಸುತಏಕÀಸ್ಪರಾತ್ಅಂತರ್ಯಾಮಿಈ ಜಗಜ್ಜನರ ಸಾಧು ಸಾಧನಕ್ಕಾಗಿನಿವ್ರ್ಯಾಜ ಕರುಣದಿ ಮಳೆ ಬೆಳೆ ಸೌಖ್ಯಗಳಈವ1ಅಲ್ಲಲ್ಲಿ ಅಗ್ನಿ ಭಯ ಚೋರ ದುಷ್ಟರ ಭಯಸುಳ್ಳುವಾದಿಗಳ ಚಟುವಟಿಕೆ ಆಗಾಗ ಕಳೆದುಸಜ್ಜನರನ್ನು ಕಾಪಾಡಿ ಲೋಕ ಕ್ಷೇಮ ಮಾಲೋಲಮಾಳ್ಪನು ಪಾರ್ಥಸಖಪಾಂಡವೇಯ ಪಾಲ2ಪುತ್ರ ಸಂತಾನ ಬೇಕೆಂಬ ಸಾಧು ಭಕ್ತರಿಗೆವೈರಾಡಿ ವರದನು ವಿಪ್ರನಿಗೆ ಒಲಿದವನುಚಂದ್ರ ಶೇಖರ ನುತನುವನಜಭವತಾತನುಶ್ರೀ ಪ್ರಸನ್ನ ಶ್ರೀನಿವಾಸನ ದಯದಿಈವಸಂತಾನ ಸಂಪತ್ತು3- ಶ್ರೀ ಕೃಷ್ಣಾರ್ಪಣಮಸ್ತು -
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಪುರಂದರದಾಸಾರ್ಯ ಸ್ತೋತ್ರ133ಹರಿದಾಸ ಶ್ರೇಷ್ಠ ಶ್ರೀಪುರಂದರದಾಸಾರ್ಯರಸರಸೀರುಹಾಂಘ್ರಿಯಲಿ ಶರಣಾದೆ ಸತತ ||ವೈರಾಗ್ಯ ಯುಕ್‍ಜ್ಞಾನ ಭಕ್ತ್ಯಾದಿ ಸಂಪತ್ತುಕರುಣದಲಿ ಒದಗಿಸಿ ಶ್ರೀಕೃಷ್ಣ ನ್ನೊಲಿಸುವರು ||ಈ ಪುಣ್ಯತಮ ಭರತಖಂಡದಲಿ ಪ್ರಖ್ಯಾತ ||ಕೃಪಾಂಬುಧಿ ಜಗನ್ನಾಥವಿಠ್ಠಲ ರುಕ್ಮಿಣೀಶ ||ರೂಪಗುಣ ಭೇಧವಿಲ್ಲದ ಪೂರ್ಣನಿರ್ದೋಷಶ್ರೀಪ್ರಸನ್ನ ವೇಂಕಟನೇ ನಮೋ ಪದ್ಮಾವತೀಶ 1ಪುರುಷರೂಪತ್ರಯ ಕ್ಷರಾ ಕ್ಷರೋತ್ತಮ ಭೂಮ |ಅರದೂರಗುಣನಿಧಿ ನಾರಾಯಣಗೆ ಶರಣು |ಸುಪ್ರೇಮಾತಿಶಯದಲಿ ಸದಾ ಪತಿಯ ಸೇವಿಸುವನಿರಾಮಯಳು ಸುಖಪೂರ್ಣಲಕ್ಷ್ಮಿಗೆ ಶರಣು 2ದ್ವಿಷೋಡಶ ಲಕ್ಷಣದಿ ರಾಜಿಪವಿಧಿದಶಪ್ರಮತಿಗು ವಾಣಿ ಭಾರತಿಯರಿಗು ನಮಿಪೆಶ್ರೀಶನ ಪೂರ್ಣಾನುಗ್ರಹ ಪೂರ್ಣಪಾತ್ರರುಉತ್ಕøಷ್ಟರಜುಸ್ತೋಮಚರಣಕಾನಮಿಪೆ3ಉತ್ತಮ ಶ್ಲೋಕನ್ನ ಜಪಿಸಿ ಪೂಜಿಪ ಶಿವಹೊತ್ತು ಸೇವಿಪಗರುಡಪರ್ಯಂಕಶೇಷಭಕ್ತಾಗ್ರಣಿ ಈ ಸರ್ವರಿಗು ನಮಿಸುವೆನುಮಾಧವನ ಷಣ್ಮುಹಿಷಿಯರಿಗು ನಮಿಪೆ 4ವಿಮಲ ಚರಿತರು ಉಮಾಸೌಪರ್ಣಿ ವಾರುಣಿಗು |ಅಮರೇಂದ್ರ ಮನ್ಮಥಮುನಿಗು ನಮನಮಾಡಿನಮಿಸುವೆ ಅಹುಪ್ರಾಣದೇವನಿಗೆಗುರುಶಚಿಕಾಮಸತಿ ಸುತದತ್ತ ಸ್ವಾಯಂಭುವಗೆ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀರಾಮ ಜಯರಾಮ ಜಯತುಜಯತು ಸೀತಾರಾಮ ರಾಮ ಚರ-ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ-ಣಾರಿ ನೀನಲ್ಲದೆ ಯಾರಿಲ್ಲಗತಿಜಯ ರಾಮ ರಾಮ1ಬುದ್ಧಿ ಜ್ಞಾನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ-ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮಬಿದ್ದೆನಜ್ಞಾನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ-ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ 2ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ-ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ-ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ 3ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ-ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ-ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ 4ಮುಖ್ಯ ಸಚಿವ ಮಹಾ ಮುಖ್ಯಪ್ರಾಣನುಸೀತಾರಾಮ ರಾಮ ದುಷ್ಟ-ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ-ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ 5ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ-ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮವಾಸವಮುಖ್ಯ ವಿಬುಧಾಸುರನುತಸೀತಾರಾಮ ರಾಮ ಸಾಧು-ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ 6ಜ್ಞಾನವಜ್ಞಾನವು ಭಾನುತಿಮಿರ ಸೀತಾರಾಮ ರಾಮ ಸತ್ಯ-ಜ್ಞಾನ ಭಕ್ತಿಭಾಗ್ಯ ನೀನಿತ್ತುಪೊರೆಜಯ ರಾಮ ರಾಮಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ-ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ 7ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮಬತ್ತಿಹೋಗಲಿ ಮೋಹದುತ್ತುಂಗಾರ್ಣವಸೀತಾರಾಮ ರಾಮ ಪರ-ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ 8ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ-ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ 9ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ-ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ 10ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ-ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ-ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ 11ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ-ಸನ್ನ ನಿನ್ನ ಸ್ಮರಣೆಯನಿತ್ತುಪೊರೆಜಯ ರಾಮ ರಾಮಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣುಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ 12ನಿತ್ಯನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ-ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ-ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ 13ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು-ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ-ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ 14ಅಕುಟಿಲಗುಣಗಳ ಪ್ರಕಟಿಸೆನ್ನೊಳುಸೀತಾರಾಮ ರಾಮ ವಾಯು-ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮಲಕ್ಷುಮಿನಾರಾಯಣ ತ್ರಿಕಣಕುದ್ಧಾಮನೆಸೀತಾರಾಮ ರಾಮ ಬ್ರಹ್ಮಾ-ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ 15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀವಿಜಯದಾಸಾರ್ಯ ಚರಿತ್ರೆ135ಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪಅಶೇಷ ಗುಣಗಣಾರ್ಣವಅನಘಶ್ರೀರಮಣಶ್ರೀ ಶ್ರೀನಿವಾಸ ನರಹರಿ ವ್ಯಾಸ ಕೃಷ್ಣಹಂಸ ನಾಮಕ ಪರಂ ಬ್ರಹ್ಮವಿಧಿಸನಕಾದಿದಶಪ್ರಮತಿ ಗುರುವಂಶ ಸರ್ವರಿಗೂ ನಮಿಪೆ 1ವ್ಯಾಸರಾಜರ ಮುಖ ಕಮಲದಿಂದುಪದಿಷ್ಟದಾಸರಾಜರು ಪುರಂದರದಾಸಾರ್ಯವಸುಧೆಯಲ್ಲಿ ನಾರದರೇಪುರಂದರದಾಸರು ಎನಿಸಿಶ್ರೀಶನ್ನ ಸೇವಿಸುತ ಭಕ್ತÀನ್ನ ಕಾಯ್ತಿಹರು 2ಹರಿಸಮೀರರೂ ಸದಾ ಪ್ರಚುರರಾಗಿಹಪುರಂದರದಾಸಾರ್ಯರವರಶಿಷ್ಯರೇವೆಧರೆಯಲ್ಲಿ ಪ್ರಖ್ಯಾತ ವಿಜಯದಾಸಾರ್ಯರುಸುರವೃಂದ ಮಹಾ ಋಷಿಯು ಭೃಗು ಮಹಾ ಮುನಿಯು 3ಋಗ್ ಜಯಾಸಿತ ಯಜುಸ್ ಸಿತ ಯಜುಸ್ಸಾಮಅರ್ಥರ್ವಾಂಗಿರಸಕೆ ಕ್ರಮದಲಿ ಪ್ರವರ್ತಕರುಬಾಗುವೆ ಶಿರ ಪೈಲಗೆ ವೈಶಂಪಾಯನನಿಗೆಅರ್ಕಗೆ ಜೈಮಿನಿಗೆ ಸುಮಂತು ಸಿಂಧುಜಗೆ 4ನಮೋ ಬ್ರಹ್ಮ ವಾಯು ವಿಪ ಫಣಿಪಶುಕಸಂಕ್ರಂದಕಾಮಾರ್ಕ ನಾರದ ಭೃಗು ಸನತ್‍ಕುಮಾರಾದಿಕಾಮಯುಕ್ ಸೂತ ಗಂಧರ್ವನೃಪಶ್ರೇಷ್ಠರಿಗೆಭೂಮಿ ಸುರ ನರರಿಗೆ ಶ್ರೀಶ ಚಲಪ್ರತಿಕ 5ಸ್ವರ್ಣಾಂಡ ಬಹಿರಂತವ್ರ್ಯಾಪ್ತತೇಜಪುಂಜಜ್ಞಾನ ಸುಖ ಪೂರ್ಣ ಶ್ರೀಪತಿ ವೇದ ವ್ಯಾಸಜ್ಞಾನ ಸಂಯುತ ಕರ್ಮಯೋಗ ಪ್ರವರ್ತಿಸುವುದಕೆತಾನೇ ಸೇವಿಸಿದನು ಭೃಗು ಋಷಿಯು ಅಂದು 6ಸುರ ನದಿತೀರದಲಿ ಭೂಸುರರು ಋಷಿಗಳುಸತ್ರಯಾಗ ಎಂಬಂಥ ಜ್ಞಾನಕರ್ಮಚರಿಪೆ ಜಿಜ್ಞಾಸದಲಿ ನಾರದರು ಪ್ರೇರಿಸಿಹೊರಟರು ಭೃಗು ಮುನಿಯು ತತ್ವ ನಿರ್ಣಯಕೆ 7ಶೃತಿಸ್ಮøತಿಪುರಣೇತಿಹಾಸಾದಿಗಳಲ್ಲಿಅದ್ವಿತೀಯನು ಸರ್ವೋತ್ತಮಹರಿಶ್ರೀಶಪದುಮಭವ ರುದ್ರಾದಿಸುರರುತಾರ ತಮ್ಯದಲಿಸದಾ ಅವರಂಬುದನು ಪರಿಕ್ಷೆ ಮಾಡಿದರು 8ನೇರಲ್ಲಿ ತಾ ಪೋಗಿ ಅರಿತು ಪೇಳಿದರುಹರಿಃ ಸರ್ವೋತ್ತಮ ಸಾಕ್ಷಾತ್ ರಮಾದೇವಿ ತzನÀಂತರಸರಸಿಜಾಸನ ವಾಣಿ ರುದ್ರಾದಿಸುರರುತರತಮದಿ ಅವgವÀರು ಸಂಶಯವಿಲ್ಲ ಎಂದು 9ಈ ರೀತಿ ಹಿಂದೆ ಈ ಭೃಗು ಹರಿಯ ನಿಯಮನದಿಅರುಹಿದಂತೆ ಈಗವಿಜಯದಾಸಾರ್ಯನಾರದಪುರಂದರದಾಸಾರ್ಯರನ್ನನುಸರಿಸಿಹರಿಮಹಿಮೆ ಸತ್ ತತ್ವ ಅರುಹಿದರು ಜನಕ್ಕೆ10ವಿಜಯರಾಯರ ಶಿಷ್ಯ ಸೂರಿಗಳೊಳ್ ಪ್ರವರನುಧೂರ್ಜಟೆ ಉಮಾಸುತನುಕ್ಷಿಪ್ರಪ್ರಸಾದಗಜಮುಖನೆ ಗೋಪಾಲ ದಾಸಾರ್ಯರಾಗಿಪ್ರಜ್ವಲಿಸುತಿಹ ನಮೋ ಗುರುವರ್ಯ ಶರಣು 11ಪುರಂದರದಾಸಾರ್ಯರು ವಿಜಯರಾಯರಲ್ಲಿಇರುವರು ಒಂದಂಶದಿಂದ ಜ್ವಲಿಸುತ್ತಬರೆಸಿಹರು ಇಪ್ಪತ್ತು ಮೇಲೈದು ಸಾವಿರಶ್ರೀವರನ ಸಂಸ್ತುತಿ ತತ್ವ ಕವಿತೆಗಳ 12ಕೃತ ತ್ರೇತ ದ್ವಾಪರ ಕಲಿಯುಗ ನಾಲ್ಕಲ್ಲಿಯೂಸುತಪೋನಿಧಿ ಭೃಗು ಮೂಲ ರೂಪದಲುತ್ರೇತಾದಿ ಮೂರಲ್ಲಿಯೂ ಅವತಾರ ರೂಪದಲುಗಾಯತ್ರಿ ನಾಮನ್ನ ಸಂಸೇವಿಸುವರು 13ಪುರಂದರಾರ್ಯರ ಮನೆಯಲ್ಲಿ ಗೋವತ್ಸತರುವಾಯು ಸುಕುಮಾರ ಮಧ್ವಪತಿಯಾಗಿಸರಿದ್ವರ ಶ್ರೀ ತುಂಗಭದ್ರ ತೀರದಿ ಪುನಃಅರಳಿ ನೃಸಿಂಹ ಕ್ಷೇತ್ರದಲಿ ತೋರಿಹರು 14ಅಶ್ವತ್ಥ ನರಸಿಂಹ ಕ್ಷೇತ್ರಕ್ಕೆ ಮತ್ತೊಂದುಹೆಸರುಂಟು ರೂಢಿಯಲಿ ಚೀಕಲಾಪುರಿಯುಕುಸುಮಭವಪಿತಅಂಭ್ರಣಿಪತಿಎನ್ನಪ್ರಶಾಂತ ಚಿತ್ತದಿ ಧ್ಯಾನಿಸೆ ತಕ್ಕ ಸ್ಥಳವು 15ಶ್ರೀಪದ್ಮನಾಭತೀರ್ಥರಕರಕಂಜದಿಂದಉದ್ಭೂತ ಲಕ್ಷ್ಮೀಧರರ ವಂಶಜರುಶ್ರೀಪಾದ ರಾಜರೂ ಈ ಕ್ಷೇತ್ರದಲಿಸ್ಥಾಪಿಸಿದರು ಅಶ್ವತ್ಥÀ ನರಹರಿಯ 16ಹುಂಬೀಜ ಪ್ರತಿಪಾದ್ಯ ಭೂಪತಿಯ ವಕ್ತ್ರದಿಂಸಂಭೂತ ತುಂಗಾ ಸರಿದ್ವರದ ತೀರಗಂಭೀರ ಭೂ ಕಲ್ಪತರುವು ಅಶ್ವತ್ಥ್ಥವುಸಂರಕ್ಷಿಸುವ ನಾರಸಿಂಹ ಭದ್ರದನು 17ನಾರಾಯಣ ಬ್ರಹ್ಮರುದ್ರಾದಿ ದೇವರ್‍ಗಳುಇರುತಿಹರು ಅಶ್ವತ್ಥ್ಥ ಕಲ್ಪ ವೃಕ್ಷದಲಿನಾರಾಯಣ ಶ್ರೀ ನರಸಿಂಹ ಪುರುಷೋತ್ತಮನೆಶರಣಾದೆ ಪೊರೆಯುತಿಹವಾಂಛಿತಪ್ರದನು18ಕಾಶಿ ಬದರಿಯಂತೆ ಇರುವ ಈ ಕ್ಷೇತ್ರದಲಿಭೂಸುರವರರು ಶ್ರೀನಿವಾಸಾಚಾರ್ಯರಲಿಶ್ರೀ ಶ್ರೀನಿವಾಸನ ಪ್ರಸಾದದಿ ಜನಿಸಿಹರುಶ್ರೀಶ ಭಕ್ತಾಗ್ರಣಿ ಈ ಹರಿದಾಸವರರು 19ಕುಸುಮಾಲಯ ಪದ್ಮಾವತಿ ನೆನಪು ಕೊಡುವಕುಸುಮಕೋಮಲ ಮುಖಿ ಆದ ಕಾರಣದಿಕೂಸಮ್ಮ ನೆಂದು ಕರೆಯಲ್ಪಟ್ಟ ಸಾಧ್ವಿಯಈ ಶ್ರೀನಿವಾಸ ಆಚಾರ್ಯಕರಹಿಡಿದರು20ಪತಿವ್ರತಾ ಶಿರೋಮಣಿ ಕೂಸಮ್ಮನ ಗರ್ಭಅಬ್ಧಿಯಿಂ ಹುಟ್ಟಿತು ಉತ್ತಮ ರತ್ನಹತ್ತು ದಿಕ್ಕಲು ಪ್ರಕಾಶಿಸುವ (ದ್ಯುತಿವಂತ) ಕೀರ್ತಿಮಾನ್ಪುತ್ರ ರತ್ನನು ಬೆಳೆದ ದಾಸಪ್ಪ ನಾಮಾ 21ಕೂಸಮ್ಮ ಶ್ರೀನಿವಾಸಪ್ಪ ದಂಪತಿಗೆದಾಸಪ್ಪನಲ್ಲದೆ ಇನ್ನೂ ಕೆಲಪುತ್ರರುಕೇಶವಾನುಗ್ರಹದಿ ಹುಟ್ಟಿ ಸಂಸಾರದಿಈಜಿದರು ಯದೃಚ್ಛಾ ಲಾಭ ತುಷ್ಟಿಯಲಿ 22ಯಾರಲ್ಲೂ ಕೇಳದಲೇ ಅನಪೇಕ್ಷ ದಂಪತಿಯುಹರಿದತ್ತ ಧನದಲ್ಲಿ ತೃಪ್ತರಾಗುತ್ತಅರಳಿ ನೃಸಿಂಹನ್ನ ಸೇವಿಸುತ ಮಕ್ಕಳಲಿಹರಿಮಹಿಮೆ ಹೇಳುತ್ತ ಭಕ್ತಿ ಬೆಳಸಿದರು23ನಮ್ಮ ದಾಸಪ್ಪನಿಗೆ ಹದಿನಾಲ್ಕು ಮಯಸ್ಸಾಗೆಕರ್ಮಸುಳಿಯು ಮೆಲ್ಲ ಮೆಲ್ಲನೆ ತೋರಿಸಮುದ್ರ ಶಯನನ ಅಧೀನವು ಎಲ್ಲ ಎನ್ನುತ್ತಒಮ್ಮೆಗೂ ಲೆಕ್ಕಿಸಲಿಲ್ಲ ಬಡತನವನ್ನ 24ಬದರಮುಖ ಬ್ರಹ್ಮವರ್ಚಸ್ವಿ ದಾಸಪ್ಪಹದಿನಾರುವತ್ಸರದ ಬ್ರಹ್ಮಚಾರಿಮಾಧವನೆ ಹಾದಿ ತೋರುವ ತನಗೆ ಎಂದುಹೋದರು ಪೂರ್ವದಿಕ್ಕಿನ ಕ್ಷೇತ್ರಗಳಿಗೆ 25ಜಲರೂಪಿ ಕೃಷ್ಣನ್ನ ನೆನೆದು ಕೃಷ್ಣಾನದಿಯಲ್ಲಿ ಮಿಂದು ಅಲ್ಲಿಂದ ಮಂತ್ರಾಲಯಅಲ್ಲಿ ಶ್ರೀ ರಾಘವೇಂದ್ರರ ವಾದೀಂದ್ರರ ದಿವ್ಯಜಲಜಪಾದಗಳಿಗೆ ಬಾಗಿದರು ಶಿರವ 26ಆದವಾನಿನಗರನವಾಬನ ಸರ್ಕಾರಅಧಿಕಾರಿ ಡಾಂಭಿಕ ಓರ್ವನ ಗೃಹದಿಮದುವೆ ಪೂರ್ವದ ದೇವರ ಸಮಾರಾಧನೆಯುಹೋದರು ಆ ಮನೆಗೆ ದಾಸಪ್ಪ ಆರ್ಯ 27ಇತ್ತದ್ದು ಹರಿಯೆಂದು ತಂದೆ ಮಾಡುವ ಅತಿಥಿಸತ್ಕಾರ ನೋಡಿದ್ದ ದಾಸಪ್ಪಾರ್ಯನಿಗೆಇಂದುಆದವಾನಿ ಗೃಹಸ್ಥ ದಾಸಪ್ಪನಉದಾಸೀನ ಮಾಡಿದ್ದು ನೂತನಾನುಭವ 28ತೇನ ತ್ಯೆಕ್ತೇನ ಭುಂಜೀಥಾಃ ಮಾಗೃಥೆಃಕಸ್ಯ ಸ್ವಿದ್ಧನಂ ಎಂದು ಮನಸ್ಸಿಗೆ ತಂದುಆದವಾನೀಯಿಂದ ಹೊರಟು ಮಾರ್ಗದಲಿಇದ್ದ ಛಾಗಿ ಎಂಬ ಗ್ರಾಮ ಸೇರಿದರು 29ಉಪೋಷಣದಿ ತನುವು ಬಾಡಿದ್ದರೂ ಮುಖಸ್ವಲ್ಪವೂ ಮ್ಲಾನ ವಿಲ್ಲದೆ ಹರಿಯ ಸ್ಮರಿಸಿಬಪ್ಪ ದಾಸಪ್ಪನ್ನ ನೋಡಿ ಕೇಶವರಾಯಎಂಬ ವಿಪ್ರನು ಕರೆದ ತನ್ನ ಮನೆಗೆ 30ಛಾಗಿ ಗ್ರಾಮದ ಪ್ರಮುಖ ಕೇಶವರಾಯನುಆ ಗೃಹಸ್ಥನ ತಾಯಿ ಕುಟುಂಬಜನರೆಲ್ಲಾಭಗವಂತನ ಶ್ರೇಷ್ಠ ಪ್ರತೀಕ ಇವರೆಂದುಭಾಗಿ ಶಿರ ಆತಿಥ್ಯ ನೀಡಿದರು ಮುದದಿ 31ಆ ಮನೆಯ ದೊಡ್ಡ ಆಕೆಯು ಪಾಕ ಮಾಡಿಶ್ರೀ ಮನೋಹರನಿಗೆ ದಾಸಪ್ಪ ಅದನ್ನಸಂಮುದದಿ ನೈವೇದ್ಯ ಅರ್ಪಿಸಿ ಉಂಡರುರಮಾಪತಿನಿತ್ಯತೃಪ್ತಗೆ ತೃಪ್ತಿ ಆಯ್ತು32ಭಿನ್ನಸ್ವಭಾವಿಗಳು ಭಿನ್ನಜೀವರುಗಳಲಿಭಿನ್ನ ಕರ್ಮವ ಮಾಡಿ ಮಾಡಿಸುವಅನಘಘನ್ನ ಗುಣನಿಧಿ ಸರ್ವ ಜಡಜೀವ ಭಿನ್ನಶ್ರೀನಿಧಿಯ ಸ್ಮರಿಸುತ್ತೆ ಹೊರಟರು ವೇಂಕಟಕೆ 33ಭೂವೈಕುಂಠ ಈ ತಿರುಪತಿ ಕ್ಷೇತ್ರದಲಿದೇವದೇವೋತ್ತಮ ದೇವಶಿಖಾಮಣಿಯಮೂವತ್ತೆರಡು ಮುವತ್ತಾರುಬಾರಿಮೇಲೆಸೇವಿಸಿಹರು ಎಂದು ಕೇಳಿಹೆನು 34ದಾಸಪ್ಪ ನಾಮದಲೂ ವಿಜಯರಾಯರೆನಿಸಿಯೂದೇಶದೇಶದಿ ಹರಿಕ್ಷೇತ್ರ ಪೋಗಿಹರುಕಾಶೀಗೆ ಮೂರು ಸಲ ಪೋಗಿ ಬಂದಿರುವರುಕಾಶಿ ಬದರಿ ನಮಗೆ ಇವರ ಸಂಸ್ಮರಣೆ 35ಪಂಕೇರುಹೇಕ್ಷಣವರಾಹವೆಂಕಟ ಪತಿಯವೇಂಕಟಗಿರಿಯಲ್ಲಿ ಭಕ್ತಿಯಿಂ ಪುನಃತಾ ಕಂಡು ಆನಂದಪುಲಕಾಶ್ರು ಸುರಿಸಿಶಂಕೆಯಿಲ್ಲದೆ ಧನ್ಯ ಮನದಿ ತಿರುಗಿದರು 36ತಿರುಗಿ ಚೀಕಲಪುರಿ ಬಂದು ಹೆತ್ತವರಚರಣಪದ್ಮಗಳಲ್ಲಿ ನಮಿಸಿ ಅಲ್ಲಿನರಹರಿ ಶ್ರೀ ಶ್ರೀನಿವಾಸನ್ನ ಸೇವಿಸುತಪರಿತೋಷಿಸಿದರು ಗಾರ್ಹ ಧರ್ಮದಲಿ 37ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೇ ಸತತ 38-ಇತಿಃ ಪ್ರಥಮಾಧ್ಯಾಯಃ-ದ್ವಿತೀಯಾಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪತಿರುಪತಿ ಘಟಿಕಾದ್ರಿ ಕಾಶಿ ಮೊದಲಾದಕ್ಷೇತ್ರಾಟನೆ ಮಾಡಿ ಬಂದ ಪುತ್ರನಿಗೆಭಾರಿಗುಣ ಸಾಧ್ವಿಯ ಮದುವೆ ಮಾಡಿಸಿದರುವಿಪ್ರರ ಮುಂದೆಶುಭಮುಹೂರ್ತದಲಿ ತಂದೆ1ಗುಣರೂಪವಂತಳು ವಧು ಅರಳಿಯಮ್ಮಘನಮಹಾ ಪತಿವ್ರತಾ ಶಿರೋಮಣಿಯು ಈಕೆತನ್ನ ಪತಿಸೇವೆಯ ಪೂರ್ಣ ಭಕ್ತಿಯಲಿಅನವರತಮಾಡುವ ಸೌಭಾಗ್ಯವಂತೆ2ಪುತ್ರೋತ್ಸವಾದಿಶುಭಸಂಭ್ರಮಗಳು ಆದುವುನಿತ್ಯಹರಿತುಳಸೀಗೆ ಪೂಜಾ ವೈಭವವುತ್ರಾತಹರಿ ಸಾನ್ನಿಧ್ಯ ಅನುಭವಕೆ ಬರುತ್ತಿತ್ತುಶ್ರೀದಹರಿವಿಠ್ಠಲನು ತಾನೇವೆ ಒಲಿದ 3ಧನಸಂಪಾದನೆಗಾಗಿ ಅನ್ಯರನು ಕಾಡದೆಅನಪೇಕ್ಷ ಮನದಿಂದ ಹರಿಕೊಟ್ಟದ್ದಲ್ಲೇದಿನಗಳ ಕಳೆದರು ಹೀಗೆ ಇರುವಾಗಫಣಿಪಗಿರಿವೇಂಕಟನು ಮನದಲ್ಲಿ ನಲಿದ 4ನರಹರಿಗೆ ಸನ್ನಮಿಸಿ ಅಪ್ಪಣೆ ಪಡೆದುಹೊರಟರು ವೇಂಕಟನಾಥನ್ನ ನೆನೆದುಸೇರಿದರು ಶೇಷಗಿರಿ ನಮಿಸಿ ಭಕ್ತಿಯಲಿಏರಿದರು ಎರಗಿದರು ನಾರಸಿಂಹನಿಗೆ 5ನರಸಿಂಹನಿಗೆ ಗುಡಿ ಗಾಳಿಗೋಪುರದಲ್ಲಿಕರೆವರು ಬಾಷಿಂಗನರಸಿಂಹನೆಂದುಹರಿದಾಸರಿಗೊಲಿವ ಕಾರುಣ್ಯಮೂರ್ತಿಯುಕರುಣಿಸಿದ ಜಗನ್ನಾಥದಾಸರಿಗೆ ಪೀಠ 6ದಾಸಪ್ಪ ವಿಜಯದಾಸರು ಆದ ತರುವಾಯಈಶಾನುಗ್ರಹವ ಬ್ಯಾಗವಟ್ಟಿಯವರ್ಗೆಶಿಷ್ಯರದ್ವಾರಾ ಒದಗಿ ಜಗನ್ನಾಥದಾಸರಾಗಿ ಮಾಡಿಹರು ಪರಮದಯದಿಂದ 7ನರಸಿಂಹನಪಾದ ಭಜಿಸಿ ಅಲ್ಲಿಂದಗಿರಿ ಅರೋಹಣವನ್ನ ಮುಂದುವರಿಸಿಶ್ರೀ ಶ್ರೀನಿವಾಸನ ಭೇಟಿ ಒದಗಿಸುವಂತೆವರಅಂಜನಾಸೂನು ಹನುಮಗೆರಗಿದರು8ಮಹಾತ್ಮ್ಯೆ ಶ್ರೀ ನಿಧಿ ಶ್ರೀ ಶ್ರೀನಿವಾಸನ್ನಮಹಾದ್ವಾರ ಗೋಪುರದಲ್ಲಿ ಸಂಸ್ಮರಿಸಿಮಹಾದ್ವಾರದಲಿ ಕರಮುಗಿದು ಉತ್ತರದಿಇಹ ಸ್ವಾಮಿತೀರ್ಥದಲಿ ಸ್ನಾನ ಮಾಡಿದರು 9ಭೂರ್ಭುವಃ ಸ್ವಃಪತಿಭೂಧರವರಾಹನ್ನಉದ್ಭಕ್ತಿ ಪೂರ್ವಕದಿ ವಂದಿಸಿ ಸರಸ್ಯಇಭರಾಜವರದನ್ನ ಸ್ಮರಿಸುತ್ತ ಸುತ್ತಿಶುಭಪ್ರದಪ್ರದಕ್ಷಿಣೆ ಮಾಡಿದರು ಮುದದಿ 10ಪ್ರದಕ್ಷಿಣೆಗತಿಯಲ್ಲಿ ಸಾಕ್ಷಿಅಶ್ವತ್ಥನ್ನಭೂಧರನ್ನ ನೋಡುತ್ತ ನಿಂತ ಹನುಮನ್ನವಂದಿಸಿ ಮಹಾದ್ವಾರ ಸೇರಿ ಕೈಮುಗಿದುಇಂದಿರೇಶನ ಆಲಯದೊಳು ಹೋದರು 11ಬಲಿಪೀಠ ಧ್ವಜಸ್ತಂಭ ತತ್ರಸ್ಥ ಹರಿಯನೆನೆದುಬೆಳ್ಳಿ ಬಾಗಿಲದಾಟಿ ಗರುಡಗೆ ನಮಿಸಿಒಳಹೋಗೆ ಅಪ್ಪಣೆ ಜಯವಿಜಯರಕೇಳಿಬಲಗಾಲ ಮುಂದಿಟ್ಟು ಹೋದರು ಒಳಗೆ 12ಬಂಗಾರ ಬಾಗಿಲ ದಾಟಲಾಕ್ಷಣವೇಕಂಗೊಳಿಸುವಂತ ಪ್ರಾಜ್ವಲ್ಯ ಕಿರೀಟಚಂಚಲಿಸುವ ತಟಿನ್ನಿಭಕರ್ಣಕುಂಡಲವಿಟ್ಟಗಂಗಾಜನಕವೆಂಕಟೇಶನ್ನ ನೋಡಿದರು13ಆನಂದಜ್ಞಾನಮಯ ಪಾದಪಂಕಜತತ್ರಸುನೂಪುರ ಉಡಿವಡ್ಯಾಣಕೌಶೇಯಮಿನುಗುವಾಂಬರ ಸಾಲಿಗ್ರಾಮದ ಹಾರಘನಮಹಾ ಹಾರಗಳು ಸರಿಗೆ ವನಮಾಲೆ14ಶ್ರೀವತ್ಸ ಕೌಸ್ತುಭಮಣಿ ವೈಜಯಂತೀದಿವ್ಯ ಪ್ರಜ್ವಲಿಸುವ ಪದಕಂಗಳುಕಿವಿಯಲ್ಲಿ ಮಿಂಚಿನಂದದಿ ಪೊಳೆವಕುಂಡಲಸರ್ವಾಭರಣಗಳ ವರ್ಣಿಸಲು ಅಳವೇ 15ಅಕಳಂಕ ಪೂರ್ಣೇಂದು ಮುಖಮುಗುಳುನಗೆಯುಕಂಗಳುಕಾರುಣ್ಯ ಸುರಿಸುವನೋಟಕಾಕುಇಲ್ಲದ ನೀಟಾದ ಫಣೆ ತಿಲಕವುಚೊಕ್ಕ ಚಿನ್ನದಿ ನವರತ್ನ ಜ್ವಲಿಪ ಕಿರೀಟ 16ಬ್ರಹ್ಮಪೂಜಿತಶ್ರೀ ಶ್ರೀನಿವಾಸನ್ನಮಹಾನಂದದಿ ನೋಡಿ ಸನ್ನಮಿಸಿ ಮುದದಿಬಹಿರದಿ ಬಂದು ಮತ್ತೊಮ್ಮೆ ಪ್ರದಕ್ಷಿಣೆ ಮಾಡಿಮಹಾಪ್ರಾಕಾರದಲಿ ಕೊಂಡರು ಪ್ರಸಾದ 17ಹೇಮಮಯ ಆನಂದನಿಲಯ ವಿಮಾನ ಗೋಪುರದಿಶ್ರೀಮನೋಹರ ಶ್ರೀ ಶ್ರೀನಿವಾಸನ್ನ ಪುನಃನೆಮ್ಮದಿದಿ ನೋಡಿ ಸನ್ನಮಿಸಿ ಶ್ರೀನಾರಸಿಂಹನ್ನ ವಂದಿಸಿ ಹೋದರು ಒಳಗೆ 18ಏಕಾಂತ ಸೇವೆ ಶಯ್ಯೋತ್ಸವವ ನೋಡಿಅಕಳಂಕ ಭಕ್ತಿಯಲಿ ಮನಸಾ ಸ್ತುತಿಸಿಶ್ರೀಕರಾಲಯ ಪ್ರಕಾರ ಮಂಟಪದಲ್ಲಿಭಕುತವತ್ಸಲನ್ನ ನೆನೆದು ಮಲಗಿದರು 19ಬಂಗಾರಬಾಗಿಲು ಅರ್ಧಮಂಟಪವುಪುರಂದರದಾಸಾರ್ಯರುಯೋಗ ನಾರಸಿಂಹನ ಸ್ಥಾನ ಬಲಪಾಶ್ರ್ವಏಕಾಂತ ಮಂಟಪವುಪುರಂದರದಾಸಾರ್ಯರುಶ್ರೀಕರನ ಭಜಿಸುತ್ತಾ ಇರುವರು ಅಲ್ಲಿ 20ಅರ್ಧ ಮಂಟಪ ಹೊರಗೆ ಉತ್ತರ ಪ್ರಾಕಾರದಿಎತ್ತರ ಮಂಟಪದ ಜಗುಲಿಯಲ್ಲೂಆಸ್ಥಾನ ಮಂಟಪಕೆ ಪಶ್ಚಿಮ ಮಂಟಪದಲ್ಲೂಆಸ್ಥಾನ ಶ್ರೇಷ್ಠರು ಕುಳಿತದ್ದು ಉಂಟು 21ಮನುಷ್ಯ ಲೋಕದಿ ಹುಟ್ಟಿ ಮಾನುಷಾನ್ನವನುಂಡುಮಾನುಷಾನ್ನದ ಸೂಕ್ಷ್ಮ ಭಾಗ ಪರಿಣಮಿಸಿಮನಖಿನ್ನನಾದಂತೆ ಇದ್ದ ದಾಸಪ್ಪನಿಗೆಶ್ರೀ ಶ್ರೀನಿವಾಸನು ಬಂದು ತಾ ಒಲಿದ 22ಶ್ರೀನಿಧಿಃ ಶ್ರೀ ಶ್ರೀನಿವಾಸವೇಂಕಟಪತಿಘನದಯದಿ ಸೂಚಿಸಿದ್ದು ತಿಳಕೊಂಡರುಸ್ವಪ್ನದಿ ಭಾಗೀರಥಿಯಪುರಂದರದಾಸಾರ್ಯರಬಿಂದುಮಾಧವ ಅಂಭ್ರಣೀಶನ್ನ ನೋಡಿದರು 23ಭೂವರಾಹವೆಂಕಟರಮಣನ್ನ ಮರುದಿನಸೇವಿಸಿ ಹನುಮಂತನಿಗೆ ನಮಸ್ಕರಿಸಿದೇವಾನುಗ್ರಹದಿ ಐದಿದರು ವಾರಣಾಸಿದೇವ ತಟಿನೀಸ್ನಾನ ಮೂರ್ತೀ ದರ್ಶನವು 24ಜಾಗ್ರತೆ ಅಲ್ಲ ನಿದ್ರೆಯೂ ಅಲ್ಲ ಸಂಧಿಆ ಕಾಲದಲಿ ಆನಂದ ಅನುಭವವುಹೇಗೆಂದರೆ ವಿಠ್ಠಲ ಶ್ರೀನಿವಾಸನುಝಗಿಝಗಿಸಿ ತೋರ್ವನು ವಿಜಯಸಾರಥಿಯು 25ತೃಟಿಮಾತ್ರದಲಿ ಮುಂದೆ ನಿಂತರುಪುರಂದರವಿಟ್ಠಲ ದಾಸರು ಕೃಪೆಯ ಬೀರುತ್ತತಟ್ಟನೇ ಎದ್ದರು ದಾಸಪ್ಪ ಆರ್ಯರುಸಾಷ್ಠಾಂಗ ನಮಿಸಿದರು ಗುರುವರ್ಯರೆಂದು 26ಕರಕೊಂಡು ಹೋದರು ಆಚೆದಡದಲ್ಲಿರುವಕ್ಷೇತ್ರಕ್ಕೆ ಅಲ್ಲಿ ಶ್ರೀಪತಿವ್ಯಾಸನ್ನತೋರಿಸಿದರು ಆ ವ್ಯಾಸ ಮೂರ್ತಿಯಲ್ಲಿಸುಪ್ರಕಾಶಿಪಹರಿರೂಪಗಳ ಕಂಡರು27ವಿಜಯಸಾರಥಿಕೃಷ್ಣ ವಾಶಿಷ್ಠಮಾಧವಅಜಭುಜಗಭೂಷಣಾದಿಗಳಿಂದಸೇವ್ಯರಾಜರಾಜೇಶ್ವರಿ ಶ್ರೀನಿಧಿಯ ಮನದಣಿಯಭಜಿಸಿ ಸ್ತುತಿಸಲು ಯತ್ನಿಸಿದರು ದಾಸಪ್ಪ 28ಸೌದಾಮಿನಿಗಮಿತ ರಂಜಿಸುವ ಜ್ಯೋತಿಯುಬದರೀಶನಿಂ ಪುರಂದರದಾಸರ ದ್ವಾರಬಂದು ನೆಲಸಿತು ದಾಸಪ್ಪನ ಜಿಹ್ವೆಯತುದಿಯಲ್ಲಿ ವಿಜಯಾಖ್ಯ ಸುಶುಭನಾಮ 29ರಾಜೀವಜಾಂಡದೊರೆ ರಾಜೀವಾಲಯಪತಿವಿಜಯವಿಠ್ಠಲ ನಿಮ್ಮ ಹೃದ್‍ರಾಜೀವದಲಿಪ್ರಜ್ವಲಿಸುತಿಹ ಸರ್ವತೋಮುಖನೆಂದುನೈಜವಾತ್ಸಲ್ಯದಿ ಪೇಳಿದರು ಗುರುವು 30ಗುರುಗತುರಗಾಸ್ಯ ವಿಠ್ಯಲವ್ಯಾಸ ತನ್ನ ಹೊರವೊಳುಪ್ರಕಾಶಿಪುದು ಅನುಭವಕೆ ಬಂತುಎರಗಿದರುವಿಜಯದಾಸರು ಪುರಂದರಾರ್ಯರಿಗೆಸರಿ ಏಳು ಎಂದರು ಗುರುವರ್ಯ ಹಿತದಿ 31ಎದ್ದರು ಎಚ್ಚರಿಕೆ ಆಗಿ ವಿಜಯಾರ್ಯರುವೇದ್ಯವಾಯಿತು ಶ್ರೀಯಃಪತಿಯು ಗುರುವುಹಿತದಿ ತಾವೇ ಬಂದು ಅನುಗ್ರಹ ಮಾಡಿದ್ದುಇಂಥ ಭಾಗ್ಯವು ಎಲ್ಲರಿಗೂ ಲಭಿಸುವುದೇ 32ಶ್ರೀಕಾಂತ ಕಪಿಲ ಶ್ರೀ ಶ್ರೀನಿವಾಸನ್ನಹಿಂಕಾರ ಪ್ರತಿಪಾದ್ಯ ಕೃತಿಪತಿ ಪ್ರದ್ಯುಮ್ನಶ್ರೀಕರ ವಿಠ್ಠಲ ವ್ಯಾಸಹಯಮುಖನ್ನ ಸ್ಮರಿಸುತ್ತಗಂಗೆಯ ಸೇರಿದರು ಮಿಂದರು ಮುದದಿ 33ವಿಧಿಪೂರ್ವಕ ಸ್ನಾನ ಅಘ್ರ್ಯಾಧಿಗಳಿತ್ತು ಅಘ್ರ್ಯಾದಿಆ ದೇವತಟನೀಯ ದಡದಲ್ಲಿ ಕುಳಿತುಸದ್ವೈಷ್ಣವಚಿನ್ನಾಲಂಕೃತರು ಜಪಿಸಿದರುಮಧ್ವಸ್ಥ ವಿಜಯವಿಠ್ಠಲಶ್ರೀಪತಿಯ 34ಪದುಮಜನ ಸುತ ಭೃಗುವೆ ಅವನಿಯಲಿ ಅವತರಿಸಿಬಂದಿಹನು ಮಾಧವನು ಒಲಿದಿಹನು ಎಂದುಮಂದಾಕಿನಿವ್ಯಜನಚಾಮರಗಳ್ ಬೀಸುವಂತೆಬಂದು ಪ್ರವಹಿಸಿದಳು ದಾಸರ ಆವರಿಸಿ 35ಜನರೆಲ್ಲ ನೋಡುತಿರೆ ಪ್ರವಾಹವು ಉಕ್ಕಿಪೂರ್ಣ ಆವರಿಸಿತು ವಿಜಯರಾಯರನ್ನಏನು ಅದ್ಭುತ ಇದು ಶಾಂತವಾಗಲು ಕ್ಷಣದಿನೆನೆಯಲಿಲ್ಲ ವಸ್ತ್ರ ಊಧ್ರ್ವ ಪುಂಡ್ರಗಳು 37ಹರಿಆಜೆÕಯಲಿಸುರರುಸಜ್ಜನೋದ್ಧಾರಕ್ಕೂಪ್ರಾರಬ್ಧಕರ್ಮ ಕಳೆಯಲು ಜನಿಪರು ಭುವಿಯೋಳ್ಇರುವುವು ಅಣಿಮಾದಿಗಳು ಶಕ್ತ್ಯಾತ್ಮನಾಗುರುಒಲಿಯೆ ವ್ಯಕ್ತವಾಗುವುವು ಆಗಾಗಾ38ಸುರರುಭೃಗುದಾಸಪ್ಪ ಜಾತಾಪರೋಕ್ಷಿಗೆಪುರಂದರದಾಸ ನಾರದರೊಲಿದ ಮೇಲೆಇರುತ್ತಿದ್ದಅಪರೋಕ್ಷಅಣಿಮಾದಿ ಮಹಿಮೆಯುಸುಪ್ರಕಟವಾದವು ಶ್ರೀಶನ ದಯದಿ 39ವರ್ಣಪ್ರತಿಪಾದ್ಯಹರಿಒಲಿಯೆ ವರ್ಣಂಗಳುಆಮ್ನಾಯನಿಗಮತತಿ ಸತ್‍ತತ್ವಜ್ಞಾನಅನಾಯಸದಿಂದೊದಗಿ ವಿಜಯದಾಸಾರ್ಯರುಅನಿಲಸ್ಥ ಶ್ರೀವರನ್ನ ಸ್ತುತಿಸಿ ಹಾಡಿದರು 40ಜನಗಳು ವಿಜಯದಾಸಾರ್ಯರು ಶ್ರೀಹರಿಯಧ್ಯಾನಿಸಿ ಶ್ರೀಪತಿಯ ರೂಪಕ್ರಿಯೆಗಳನ್ನುಗುಣಗಳನ್ನು ಗಂಗಾದಡದಲ್ಲಿ ಕುಳಿತುಗಾನಮಾಡುವುದನ್ನ ಕೇಳಿದರು ಮುದದಿ 41ಘನಮಹಾತ್ಮರು- ಇವರು ಸಜ್ಜನೋದ್ಧಾರಕರುಶ್ರೀನಿಧಿಯ ಸತ್‍ತತ್ವಜ್ಞಾನ ಪೂರ್ವಕದಿಗಾನಮಾಡಿ ಲೋಕಕ್ಷೇಮಕೆÀ್ಕೂದಗುವರೆಂದುಧನ ದ್ರವ್ಯಕಾಣಿಕೆಇತ್ತರು ಜನರು42ಪೋದಕಡೆ ಎಲ್ಲೆಲ್ಲೂ ಮರ್ಯದೆ ಪೂಜೆಗಳುಸಾಧುಸಜ್ಜನರ ಕೈಯಿಂದ ತಾ ಕೊಂಡುಮಾಧವಮಧ್ವಮುನಿ ಪುರಂದರಾರ್ಯರ ಭಾಗ್ಯಎಂದು ಶ್ರಿ ಕೃಷ್ಣಂದೇ ಸರ್ವವೆಂಬುವರು 43ಭಾರಿ ಬಹು ಬಹುವುಂಟು ವಿಜಯರಾಯರ ಮಹಿಮೆಅರಿಯೆನಾ ಅಲ್ಪಮತಿ ಹೇಗೆ ವರ್ಣಿಸಲಿಹರಿಗೆ ಪ್ರಿಯತರ ಈ ಸುಮಹಾತ್ಮರು ತನಗೆಎರಗಿದವರನ್ನ ಕಾಯ್ವರು ಕೈಬಿಡದೆ 44ವಾರಣಾಸಿರಾಜ ಪೂಜಿಸಿದ ಇವರನ್ನಎರಗಿ ಜನರು ಶಿಷ್ಯ ರಾದರಲ್ಲಲ್ಲಿಊರಿಗೆ ಬರುವಷ್ಟರಲ್ಲೇ ಇವರ ಕೀರ್ತಿಹರಡಿತು ಹರಿದಾಸಜ್ಞಾನಿವರರೆಂದು 45ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೇ ಸತತ 46-ಇತಿಃ ದ್ವಿತಿಯಾಧ್ಯಾಯಃ-ತೃತೀಯಾಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪಕಾಶಿ ಗಯಾ ಪಿತೃಕಾರ್ಯ ಪೂರೈಸಿ ಬರುವಾಗದೇಶ ದೇಶದಿ ಹರಿಯ ಮಹಿಮೆ ತೋರುತ್ತಾಅಸಚ್ಚಾಸ್ತ್ರ ವಾದಗಳ ಕತ್ತರಿಸಿ ಬಿಸುಡುತ್ತಸುಚ್ಛಾಸ್ತ್ರ ಬೋದಿಸುತ್ತ ಬಂದರು ಮನೆಗೆ 1ಸಕುಟಂಬ ತಿರುಪತಿಗೆ ಪೋಗಿ ಶ್ರೀನಿಧಿಯಭಕುತಿಯಿಂದಲಿ ಸ್ತುತಿಸಿ ಊರಿಗೆ ತಿರುಗಿಶ್ರೀಕರನ ಪ್ರೀತಿಕರ ಶಿಷ್ಯೋದ್ಧಾರಕ್ಕೆಬೇಕಾದ ಯತ್ನಗೈದರು ದಾಸ ಆರ್ಯ 2ಈ ಪುಣ್ಯ ಶ್ಲೋಕರು ಷಷ್ಠ್ಯುಪರಿಸಂಖ್ಯಾಸುಪುಣ್ಯ ಶಿಷ್ಯರಿಗೆ ಬಲುದಯದಿಂದಅಪರೋಕ್ಷಒದಗಲು ಉಪದೇಶವಿತ್ತಿಹರುಅಪವರ್ಗಯೋಗ್ಯರಿಗೆಮಾರ್ಗತೋರಿಹರು3ಮೊದಲು ಗೋಪಾಲ ವೇದವ್ಯಾಸ ಹಯವದನಶ್ರೀದನ ಈ ಮೂರು ಉತ್ಕøಷ್ಠನಾಮಅಂಕಿತವ ನಾಲ್ವರಿಗೆ ವಿಜಯದಾಸಾರ್ಯರುಉತ್ತುಂಗಮಹಿಮರು ಇತ್ತಿಹರು ದಯದಿ 4ಸಾಧುವರ್ಯ ತಮ್ಮನಿಗೆ ಹಯವದನಾಂಕಿತ ನಾಮಉತ್ತನೂರು ಭಾಗಣ್ಣ ರಾಯರ್ಗೆ ಗೋಪಾಲಆದವಾಣಿ ತಿಮ್ಮಣ್ಣರ್ಗೆ ವೇಣುಗೋಪಾಲಆದವಾಣಿಯವರದ್ವಾರಾ ವ್ಯಾಸ ಸುಬ್ಬಣ್ಣರ್ಗೆ 5ಗುರುವರ್ಯ ಗೋಪಾಲದಾಸಾರ್ಯರಚರಣಸರಸಿಜಯುಗ್ಮನಾ ನಂಬಿದೆ ನಿಶ್ಚಯದಿಕಾರುಣ್ಯ ಔದಾರ್ಯ ನಿಧಿಗಳು ಇವರಲ್ಲಿಶರಣಾದೆ ಸಂತತಸ್ಮರಿಸೆ ಪಾಲಿಪರು 6ಗಾಯತ್ರಿಯಲಿ ಕೇಶವಾದಿ ಇಪ್ಪತ್ತನಾಲ್ಕುಹಯಗ್ರೀವರೂಪಗಳು ಆರನ್ನೂ ಸ್ಮರಿಸಿಗಾಯತ್ರಿನಾಮ ಶ್ರೀವೇಂಕಟಕೃಷ್ಣನಿಗೆಪ್ರಿಯಗಾಯತ್ರಿಮಂತ್ರ ಸಿದ್ಧಿಪಡೆದವರು 7ಇಂಥಾ ಮಹಾಭಕ್ತ ಭಾಗಣ್ಣನ ಬಳಿಬಂದು ವಿಜಯಾರ್ಯರು ಇತ್ತರು ದಯದಿಸೌಂದರ್ಯಸಾರ ಗೋಪಾಲವಿಠ್ಠಲ ನಾಮಇಂದಿರಾಪತಿ ಅಖಿಳಪ್ರದನ ಅಂಕಿತವ 8ಆದವಾಣಿಸುಲ್ತಾನನ ಮಂತ್ರಿಯುಸಾಧುಶೀಲನು ತಿಮ್ಮಣ್ಣರಾಯಈತನು ವೀರ ವೈಷ್ಣವಮಾಧ್ವಬ್ರಾಹ್ಮಣನುಭಕ್ತಿಮಾನ್ ಜ್ಞಾನವಾನ್ ವೈರಾಗ್ಯಶಾಲಿ 9ಹಿಂದಿನ ಜನ್ಮದಿ ಆದಿಕೇಶವನನ್ನವಂದಿಸಿ ಸ್ತುತಿಸಿದ ರಾಮಾನುಜೀಯಇಂದುಸದ್ವೈಷ್ಣವಕುಲದಲ್ಲಿ ಹುಟ್ಟಿಹನುಇಂದಿರೇಶನ ನಾಮಾಂಕಿತ ಬೇಡಿದ್ದ ಮೊದಲೇ 10ಮೊದಲೇವೆ ತಾಳೆಂದು ಹೇಳಿ ಈಗ ವಿಜಯಾರ್ಯಇತ್ತರೂ ಶ್ರೀ ವೇಣುಗೋಪಾಲವಿಠ್ಠಲ ಈಉತ್ತಮ ಈ ನಾಮ ಉಪದೇಶ ಮಾಡಿದರುಈ ತಿಮ್ಮಣ್ಣ ರಾಯರಿಗೆ ನಮೋ ನಮೋ ಎಂಬೆ 11ಕಲ್ಲೂರು ಸುಬ್ಬಣ್ಣಾಚಾರ್ಯರು ನ್ಯಾಯಸುಧಾಮಂಗಳ ಅನುವಾದ ಚರಿಸಿ ವಿಜಯಾರ್ಯಅಲ್ಲಿ ಪಾಚಕ ವೇಷದಲಿ ಪೋಗಿ ಮಂಡಿಗೆಗಳಮಾಡಿದರು ಮಧುಸೂದನನ ಪ್ರೀತಿಗೆ12ಸುಬ್ಬಣ್ಣಾಚಾರ್ಯರು ಮಹಾದೊಡ್ಡ ಪಂಡಿತರುಶುಭತಮಸುಧಾಮಂಗಳದ ಅನುವಾದಸಂಭ್ರಮದಿ ಕದಡಿದ್ದ ಬಹು ಬಹು ಮಂದಿಯಸಭೆಯೊಳು ಪ್ರವೇಶಿಸಿದರು ವಿಜಯಾರ್ಯ 13ನೆರೆದಿದ್ದವರಲ್ಲಿ ವಿಜಯರಾಯರ ಮಹಿಮೆಅರಿತಿದ್ದಜನ ನಮ್ರಭಾವದಲಿ ಎದ್ದುಮರ್ಯಾದೆ ಮಾಡಿದರು ಅದನೋಡಿ ಆಚಾರ್ಯಪ್ರಾಕೃತಹಾಡುವವಗೆ ಪೂಜೆಯೇ ಎಂದ14ವ್ಯಾಸಪೀಠದ ಮುಂದೆ ವಿಜಯರಾಯರು ಪೋಗಿವ್ಯಾಸಗೆ ಮಧ್ವಗೆ ಜಯಾರ್ಯಗೆ ನಮಿಸಿಸಂಶಯ ಕಳೆದು ಯಥಾರ್ಥಜ್ಞಾನವನೀವಶ್ರೀಸುಧಾ ಕೇಳುವೆ ಎಂದು ಪೇಳಿದರು 15ಕನ್ನಡ ಕವನಮಾಡುವ ನಿಮಗೆ ಈ ಸುಧಾಘನವಿಷಯಗಳು ತಿಳಿಯಲಿಕೆ ಬೇಕಾದಜ್ಞಾನನಿಮಗೆ ಏನು ಇದೆ ಹೇಳಿ ಎಂದು ಆಚಾರ್ಯತನ್ನ ಪಾಂಡಿತ್ಯದ ಗರ್ವದಿ ಕೇಳಿದನು 16ಸುಬ್ಬಣ್ಣಾಚಾರ್ಯನ ಈ ಮಾತುಕೇಳಿಒಬ್ಬ ಪರಿಚಾರಕನ ಕರೆದು ವಿಜಯಾರ್ಯಅವನಿಗೆ ವಿಧ್ಯಾಭ್ಯಾಸ ಉಂಟೇ ಎನ್ನೆಅಪದ್ಧಅಡದೇ ಅವ ವಿದ್ಯಾಹೀನನೆಂದ17ಸಭ್ಯರು ನೋಡುತಿರೆ ವಿಜಯದಾಸಾರ್ಯರುಕಪಿಲ ಖಪತಿ ಗರುಡಾಸನ ಘರ್ಮಶ್ರೀಪತಿ ಆಜ್ಞಾಸಾರ ವರಾಹನ್ನ ಸ್ಮರಿಸಿದರುಆ ಪರಮದಡ್ಡನ ಶಿರದಿ ಕರವಿಟ್ಟು 18ಕರವಿಡಲು ವಿಜಯರಾಯರ ಜ್ಞಾನಪೀಯೂಷಧಾರೆ ಆ ಪುರುಷನ ಶರೀರದೊಳು ಪೊಕ್ಕುರುಧಿರನಾಳಂಗಳು ತನುನರನಾಡಿ ಶಾಖೆಗಳುತೀವ್ರಸುಪವಿತ್ರವಾದವು ತತ್ಕಾಲ 19ವರ್ಣಾಭಿಮಾನಿಗಳು ಭಾರತೀ ಸಹವಾಯುವರ್ಣಪ್ರತಿಪಾದ್ಯ ಹರಿರಮಾಸಮೇತತನು ಮನವಾಕ್ಕಲ್ಲಿ ಪ್ರಚುರರಾಗಿ ಅವನುಘನತರ ಸುಧಾಪಂಕ್ತಿಗಳ ಒಪ್ಪಿಸಿದನು 20ಅಣುವ್ಯಾಖ್ಯಾನ ಸುಧಾ ನ್ಯಾಯ ರತ್ನಾವಳೀಇನ್ನು ಬಹುಗ್ರಂಥಗಳ ವಾಕ್ಪ್ರವಾಹದಲಿಘನಮಹ ವಿಷಯಗಳಸಂದೇಹಪರಿಹರಿಪಅನುವಾದಮಾಡಿದ ಅದ್ಭುತ ರೀತಿಯಲ್ಲಿ 22ಸುಬ್ಬಣ್ಣಾಚಾರ್ಯರು ದಾಸಾರ್ಯರಲ್ಲಿಉದ್ಭಕ್ತಿಗುರುಭಾವದಿಂದೆದ್ದು ನಿಲ್ಲೆಸೌಭಾಗ್ಯ ಪ್ರದಸುಧಾ ಮಂಗಳವ ಪೂರೈಸುಶುಭೋದಯವು ನಿನಗೆಂದು ಪೇಳಿದರು ದಾಸಾರ್ಯ 23ಮಂಗಳಪ್ರಸಾದವ ಸಭ್ಯರಿಗೆ ಕೊಟ್ಟಮೇಲ್ಕಂಗಳಲಿ ಭಕ್ತಿಸುಖ ಬಾಷ್ಪ ಸುರಿಸುತ್ತಗಂಗಾಜನಕಪ್ರಿಯ ವಿಜಯರಾಯರಪಾದಪಂಕಜದಿ ಶರಣಾದರು ಸುಬ್ಬಣ್ಣಾರ್ಯ 24ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೆ ಶರಣು 25-ಇತಿಃ ತೃತೀಯಾಧ್ಯಾಯಃ-ಚತುರ್ಥ ಅಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪರಾಜರು ಸ, ಂಸ್ಥಾನ ಮಂಡಲೇಶ್ವರರೆಲ್ಲವಿಜಯದಾಸಾರ್ಯರಿಗೆ ಎರಗಿ ತಮ್ಮರಾಜಧಾನಿಗೆ ಕರೆದು ಕೃತಕೃತ್ಯರಾದರುವಿಜಯಸಾರಥಿಒಲುಮೆ ಏನೆಂಬೆ ಇವರೊಳ್1ಅಲ್ಲಲ್ಲಿ ಪೋದ ಸ್ಥಳದಲ್ಲಿ ನರಹರಿ ಮಹಿಮೆಎಲ್ಲ ಸಜ್ಜನರಿಗೂ ಕೀರ್ತಿಸಿ ತೋರಿಸಿಕಲಿಕಲ್ಮಷ ಪೀಡಿತ ಜನರ ಕಷ್ಟಗಳಎಲ್ಲವ ಪರಿಹಾರ ಮಾಡಿ ಕಾಯ್ದಿಹರು 2ಹರಿನಾಮಾ ಐನೂರು ಸಾವಿರ ಕೀರ್ತನೆ ಗ್ರಂಥಗಳೊಳುತಾನೇ ಸ್ವತಮಾಡಿದ್ದಲ್ಲದೆ ಮಿಕಿಲಾದ್ದುಇನ್ನೂರೈವತ್ತುನೂರು ವಿಜಯರಾಯರಲಿ ನಿಂತುಪೂರ್ಣ ಮಾಡಿಸಿಹರು ಶ್ರೀ ಪುರಂದರದಾಸಾರ್ಯ 3ಹರಿನಾಮ ಜಿಹ್ವೆಯಲಿ ಭೂತದಯಾ ಮನಸಿನಲ್ಲಿಹರಿಮೂರ್ತಿ ಗುಣರೂಪ ಅಂತಃಕರಣದಲಿಪುರಂದರಾರ್ಯರು ಇವರು ರಚಿಸಲೆ ಬಿಟ್ಟಿದ್ದಭಾರಿ ಸಂಕೀರ್ತನೆಗಳನ್ನ ಹಾಡಿಹರು 4ಪ್ರಿಯತಮ ಶಿಷ್ಯರು ಗೋಪಾಲ ದಾಸರೊಡೆತೋಯಜಾಕ್ಷನ ಸ್ಮರಿಸಿ ನಡಿಯುತಿರುವಾಗಬಾಯಾರಿಕೆ ಪೀಡಿತ ಕತ್ತೇಗೆ ದಯಮಾಡಿತೋಯವನು ಕುಡಿಸಿಹರು ಕಾರುಣ್ಯಶರಧಿ5ಬಹುಕಾಲದ ಹಿಂದೆ ತಾ ಕೇಶವರಾಯನಗೃಹದಲ್ಲಿ ಹುಗ್ಗಿಯ ಉಂಡದ್ದು ನೆನಪಾಗಿಆ ಗೃಹಕ್ಕೆ ಪೋದರು ಗೋಪಾಲ ದಾಸರ ಸಹಹಾಹಾ ಅಲ್ಲಿಸ್ಥಿತಿ ಏನೆಂಬೆ ಆಗ 6ಏಳು ಜನ್ಮದಕರ್ಮಗತಿಸುಳಿಯಲ್ಲಿಸಿಲುಕಿ ಆ ಮನೆಯ ಯುವಕನುಅಸುಬಿಟ್ಟತಲೆ ಸ್ಫೋಟನವಾಗಿ ತಾಕಿ ಬೋದಿಗೆಗೆಅಳುತ್ತಿದ್ದರು ಜನರು ದುಃಖದಲಿ ಮುಳಗಿ 7ಕರುಣಾ ಸಮುದ್ರರು ಭೂತದಯಾ ಪರರುಎರದರು ತಮ್ಮ ಆಯುಷ್ಯದಿ ಮೂರು ವರುಷವರಾಹಭಿಷಕ್ ನರಹರಿಯ ಜಪವನ್ನು ಗೈದುನರಸಿಂಹನ ಸ್ತುತಿಸಿ ಬದಕಿಸಿದರು ಯುವಕನ್ನ 8ಅಳುತ್ತಿದ್ದ ಜನರೆಲ್ಲ ಆನಂದ ಬಾಷ್ಪದಮಳೆ ಸುರಿಸಿ ಬಲು ಕೃತಜÕತೆ ಭಾವದಿಂದಮಾಲೋಲ ಪ್ರಿಯವಿಜಯದಾಸರ ಪದಯುಗಳನಳಿನದಲಿ ನಮಿಸಿದರು ಭಕ್ತಿ ಪೂರ್ವಕದಿ 9ಚೀಕಲ ಪರವಿಯಿಂದಲಿ ನಾಲಕು ಕ್ರೋಶನಗರವು ಮಾನವಿ ಎಂಬುದು ಅಲ್ಲಿಪ್ರಖ್ಯಾತ ಪಂಡಿತನು ಶ್ರೀನಿವಾಸಾಚಾರ್ಯನುಪುಷ್ಕಲ ಶ್ರೀಮಂತ ಬಹು ಶಿಷ್ಯಸೇವ್ಯ10ಸುರಗಂಧರ್ವಾಂಶರು ಬ್ಯಾಗವಟ್ಟೀಯವರುನರಸಿಂಹ ದಾಸರುಅವರಮಗನುಈ ಶ್ರೀನಿವಾಸನು ಕೇಳಿದ್ದ ಮೊದಲೇವೇಹರಿದಾಸವರ್ಯ ವಿಜಯಾರ್ಯರ ಪ್ರಭಾವ 11ಹರಿಭಕ್ತಾಗ್ರಣಿ ಪ್ರಹ್ಲಾದನ ಭ್ರಾತನುಧೀರ ಸಂಹ್ಲಾದನೆ ಈ ಧೀರ ಶ್ರೀನಿವಾಸಭಾರಿ ಸಾಧÀನೆ ಇವಗೆ ಒದಗಿಸ ಬೇಕೆಂದುಹರಿದಾಸವರ್ಯರು ಪೋದರು ಮಾನವಿಗೆ 12ಮಾನವಿಯಲ್ಲಿ ವಿಜಯಾರ್ಯರು ಮುಖಾಂ ಹಾಕಿಜನರಲ್ಲಿ ಹರಿಭಕ್ತಿ ಜ್ಞಾನ ಬೆಳಸುತ್ತದೀನರಿಗೆ ಯೋಗ್ಯ ವಾಂಛಿತವ ಒದಗಿಸುತ್ತಘನಮಹಿಮಹರಿಸೇವೆ ಮಾಡುತ್ತ ಇದ್ದರು13ಶ್ರೀನಿವಾಸಾಚಾರ್ಯನಿಗೆ ಉದ್ಧಾರ ಕಾಲವುಶ್ರೀನಿಧಿಯ ನಿಯಮನದಿ ಬಂದಿಹುದು ಎಂದುಶ್ರೀನಿವಾಸಾಚಾರ್ಯನಲಿ ಪೋಗಿ ವಿಜಯಾರ್ಯರುಬನ್ನಿರಿ ಹರಿಪ್ರಸಾದ ಕೊಳ್ಳಿರಿ ಎಂದರು 14ವಿಜಯದಾಸಾರ್ಯರ ಆಹ್ವಾನ ಲೆಕ್ಕಿಸದೆರಾಜಸದಿ ತಾನು ಪಂಡಿತನೆಂಬ ಗರ್ವದಿವಿಜಯಾರ್ಯರ ಕುರಿತು ಅವಜÕ ಮಾಡಿದನುಬೊಜ್ಜೆಯಲಿ ರೋಗವು ತನ್ನಿಮಿತ್ತ ಬಂತು 15ಸೋತ್ತಮಾಪರಾಧದಿಂ ವ್ಯಾಧಿ ಪೀಡಿತನಾಗಿಸೋತು ತತ್ ಪರಿಹಾರ ಯತ್ನ ಸರ್ವದಲೂಬಂದು ವಿಜಯಾರ್ಯರಲಿ ಶರಣಾಗಿ ಕ್ಷಮಿಸೆನ್ನೆಹಿತದಿಂದ ವಿಜಯಾರ್ಯರು ಕರುಣಿಸಿದರು 16ಗೋಪಾಲ ದಾಸರು ಉದ್ಧರಿಸುವರು ಪೋಗೆಂದುಕೃಪೆಯಿಂದಲಿ ವಿಜಯಾರ್ಯರು ಪೇಳಿ ಶ್ರೀನಿವಾಸಗೋಪಾಲದಾಸರಲಿ ಪೋಗಿ ಶರಣಾಗಲು ದಾಸಾರ್ಯರಲಿಶ್ರೀಪನ್ನ ಸ್ತುತಿಸೆ ಗುರುಗಳು ಒಲಿದರು ಆಗ 17ಗೋಪಾಲವಿಜಯವಿಠ್ಠಲನನ್ನ ವಿಜಯಾರ್ಯಸುಪವಿತ್ರ ಚೀಕಲಪರವಿಯಲಿ ಸ್ತುತಿಸೆಗೋಪಾಲ ದಾಸಾರ್ಯರು ಅರಿತು ಶ್ರೀನಿವಾಸನಿಗೆಉಪದೇಶ ಮಾಡಿದರು ತನ್ನಗುರುಪೇಳ್ದ ರೀತಿ18ಶ್ರೀನಿವಾಸಾಚಾರ್ಯರು ಗೋಪಾಲ ದಾಸಾರ್ಯರ ದಯದಿಪುನರಾರೋಗ್ಯ ಆಯುಷ್ಯವು ಹೊಂದಿಶ್ರೀನಿಧಿ ಭೀಮರತಿ ತೀರಸ್ಥ ವಿಠ್ಠಲನ್ನಸನ್ನಮಿಸಿ ಸಂಸ್ತುತಿಸಿ ಖ್ಯಾತರಾದರು ಜಗನ್ನಾಥ ದಾಸರೆಂದು 19ವಿಜಯನಗರಾದಿ ರಾಜ ಜಮೀನುದಾರಗಳುವಿಜಯರಾಯರನ್ನ ತಮ್ಮ ಸ್ಥಳಕ್ಕೆ ಕರೆತಂದುನಿಜಭಕ್ತಿಯಲಿ ಮರ್ಯಾದೆಗಳ ಮಾಡಿದರುವಿಜಯದಾಸರ ಮಹಿಮೆ ನೇರಲ್ಲಿ ಕಂಡು 20ತಿರುಗಿ ಬರುವಾಗ ಶ್ರೀದಾಸ ಮಹಂತರುಚಕ್ರತೀರ್ಥದಿ ಸತ್ರಯಾಗ ಮಾಡಿದರುಪುರಂದರದಾಸಾರ್ಯರು ಇದ್ದ ಸ್ಥಳ ಈ ಕ್ಷೇತ್ರಹರಿಶಿರಿಗೆ ಹನುಮಗೆ ಶಿವಗೆ ಆನಮಿಪೆ 21ಸತ್ರಯಾಗ ಕಾಲದಲಿ ಒಂದು ದಿನ ರಾತ್ರಿವಿಧವೆ ಓರ್ವಳು ತನ್ನ ಕಜ್ಜಿ ಮಗು ಸಹಿತನದಿಯಲ್ಲಿ ಬೀಳಲು ಯತ್ನಿಸಲು ಅದು ಕಂಡುಇತ್ತು ಅಭಯವ ವಿಜಯಾರ್ಯರು ಕಾಯ್ದರು 22ಭೀಮಪ್ಪನಾಯಕಧನವಂತ ಬ್ರಾಹ್ಮಣನಧರ್ಮಪತ್ನಿಯು ಆಕೆ ಪತಿಯ ಕಳಕೊಂಡ್ಲುತಾಮಸಪ್ರಚುರಮೈದುನ ಬಂದು ಬಹಳ ಕ್ರೂರಹಿಂಸೆ ಕೂಡಲು ನದಿಯೊಳು ಬೀಳೆ ಬಂದಿಹಳು 23ಸಾಧ್ವಿಯೂ ಆಕೆಯೂ ಶಿಶು ಮಹಾಭಾಗವತಎಂದು ಜ್ಞಾನ ದೃಷ್ಟಿಯಲಿ ಅರಿತರು ವಿಜಯಾರ್ಯಎಂಥವರು ಆದರೂ ಆತ್ಮಹತ್ಯೆ ಶಿಶುಹತ್ಯಯತ್ನ ತಡೆದು ರಕ್ಷಿಪುದು ಭೂತದಯವು 24ತಾಯಿಶಿಶು ಈರ್ವರನು ಮಠಕೆ ಕರಕೊಂಡು ಹೋಗಿಭಾರ್ಯೆ ಅರಳಿಯಮ್ಮ ಕೈಲಿ ಒಪ್ಪಿಸಿ ಆಕೆಹಯವದನ ಆಕೆಯ ಮೃತಮಗನ ಪ್ರತಿಯಾಗಿದಯದಿ ಕೊಟ್ಟಿಹ ಶಿಶುವ ಎಂದು ಪೋಷಿಸಿದಳು 25ಔದಾರ್ಯ ಕರುಣದಿ ಶಿಶುವನ್ನು ತಾಯಿಯನ್ನುಆದರಿಸಿ ದಾಸಾರ್ಯೆ ದಂಪತಿಯು ಮಗುವಹಿತದಿ ಮೋಹನನೆಂದು ಹೆಸರಿಟ್ಟು ಆಶಿಸಿಒದಗಿದರು ಇಹಪರಉದ್ಧಾರವಾಗೆ26ಯುಕ್ತ ಕಾಲದಿ ಮುಂಜಿ ಮದುವೆ ಮೋಹ ಮೋಹನನಿಗೆಶ್ರೀಕರನ್ನ ಅನುಗ್ರಹದಿ ಮಾಡಿಸಿ ಹರಿಯುಉತ್ಕøಷ್ಠ ನಾಮಾಂಕಿತ ಮೋಹನ ವಿಠಲ ಎಂದುಕೃಪಾಕರ ದಾಸಾರ್ಯರು ಇತ್ತರು ಮುದದಿ 27ಒಂದು ಸಮಯದಿ ಮೋಹನನಿಗೆ ಅಪಮೃತ್ಯು ಬರಲಿರಲುಶ್ರೀ ದಾಸರಾಯರು ಮೊದಲೇ ಹೇಳಿದರುಶ್ರೀ ಬಿಂದು ಮಾಧವನ್ನು ಸೇವಿಸೆ ಹೋಗಿ ನಾ ಬರುವೆಮೃತನಾದ ದೇಹವ ಕಾಪಾಡು ಹರಿಯ ಸ್ಮರಿಸೆಂದು 28ಅದರಂತೆ ಮೋಹನಗೆ ಅಪಮೃತ್ಯು ಸೋಕಲುಸಾಧ್ವಿಸತಿ ದೇಹವ ಹೊರತಂದು ರಕ್ಷಿಸೆಕದನಗೈದು ಓರ್ವ ಸಾಗಿಸಲು ಯತ್ನಿಸೆಸತಿಯು ವಿಜಯಾರ್ಯರನ್ನು ಸ್ಮರಿಸಿ ಮೊರೆಯಿಟ್ಟಳು 29ಶ್ರಿಬಿಂದುಮಾಧವನ್ನ ಸೇವಿಸಿ ದಾಸಾರ್ಯರುತಾಪೋಗಿ ಧರ್ಮರಾಜನಲಿ ಅರಿಕೆ ಮಾಡಿಕ್ಷಿಪ್ರದಲಿಅಸುತಿರುಗಿ ತÀರಿಸಿ ಬದುಕಿಸಿದರುಆರ್ಭಟದಿ ಬಲುತ್ಕಾರ ಮಾಡಿದವ ಬಿದ್ದ 30ಈ ರೀತಿ ಅಪಮೃತ್ಯು ಪರಿಹರಿಸಿದ್ದನ್ನಕೇಳಿಮೋಹನಭಾರಿ ಕರುಣಾಳು ವಿಜಯಾರ್ಯರ ಸ್ತುತಿಸಿಉತ್ಕøಷ್ಟ ಕೀರ್ತನೆ ಹಾಡಿರುವುದು ಲೋಕಅರಿವುದು ಅದ್ಯಾಪಿ ಹೋಗಳುವರು ಜನರು 31ಶ್ರೀ ವಿಜಯದಾಸರ ಅನುಗ್ರಹದಿ ಮೋಹನಕೋವಿದವರ್ಯನು ಶ್ರುತಿಯುಕ್ತ ಯುತವಾದತತ್ವಬೋಧಕ ಕೀರ್ತನೆಗಳು ಶ್ರೀಹರಿಯಅವತಾರಲೀಲಾನು ವರ್ಣನ ಮಾಡಿಹರು 32ರಾಜೀವಾಸನ ಪಿತ ಪ್ರಸನ್ನ ಶ್ರೀನಿವಾಸ ಶ್ರೀರಾಜೀವಾಲಯ ಪತಿಗೆ ಪ್ರಿಯಕರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣು ಶರಣಾದೆ 33- ಇತಿ ಚತುರ್ಥಾಧ್ಯಾಯ ಸಮಾಪ್ತಿ -ಪಂಚಮ ಅಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿವಿನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪವಿಜಯದಾಸಾರ್ಯರು ದೇವ ವೃಂದದವರೆಂದುನಿಜವಾಗಿ ಅರಿವುದಕೆ ಇತಿಹಾಸ ಬಹು ಉಂಟುನಿಜಭಕ್ತರಲ್ಲದೆ ಪಾಮರರು ಸಹ ಅರಿತಸಜ್ಜನರು ಹೊಗಳುವ ಇತಿಹಾಸಕೇಳಿ1ಬಾಲ ವಿಧವೆಯುಕರ್ಮಸುಳಿಯಲ್ಲಿ ಸಿಲುಕಿಬಲು ನೀಚ ವೃತ್ತಿಯವಳಂತೆ ತೋರಿಕಲುಷವಂತಳು ಎಂದು ಬಹಿಷ್ಕøತಳಾದವಳಆಲಯದಿ ವಿಜಯಾರ್ಯ ಕೊಂಡರು ಅವತನವ 2ತಮ್ಮ ಆಹ್ವಾನವ ಲೆಕ್ಕಿಸದೆ ಮೊದಲೇ ಈಆಧಮಳ ಆಹ್ವಾನ ಮನ್ನಣೆÉ ಮಾಡಿಆ ಮನೆಯಲ್ಲಿ ಪೂಜಾನೈವೇದ್ಯ ಮಾಡಿದರೆಂದುಶ್ರೀಮಠದ ಭೂಸುರರು ಕೋಪ ಹೊಂದಿದರು 3ಶ್ರೀವರನು ವಿಧಿವಾಯು ಅಮರ ಶ್ರೇಷ್ಠರ ಸಹಯಾವ ದಾಸಾರ್ಯರಲಿ ಪ್ರಚುರನಾಗಿಹನೋಯಾರನ್ನ ಸ್ಮರಿಸಲು ದುರಿತಹರ ಪುಣ್ಯದವೋಅವರು ಭೋಜನ ಮಾಡುತಿರೆ ನಿಂತಳು ಬಾಲೆ 4ಮಹಾನ್ ದಾಸರಿಗೆ ಆಕೆ ಮಾಡಿಸಿದ ಪೂಜೆಯಿಂದೇಹಜದುರಿತಗಳು ಪರಿಹಾರವಾಗಿಶ್ರೀ ಹರಿಯದಾಸರಿಗೆ ಮನಸಾ ಸನ್ನಮಿಸಿದೇಹೇಂದ್ರಿಯಗಳ ಲಯವ ಚಿಂತಿಸಿದಳು 5ದಾಸಾರ್ಯರು ಭೋಜನವ ಪೂರೈಸಲುಅಸುಆಕೆಗಾತ್ರಬಿಟ್ಟು ಹೊರಟು ಹೋಯಿತುದಾಸವರ್ಯರು ತಾವೇ ಆಕೆಗೆ ಸಂಸ್ಕಾರಶ್ರೀಶಹರಿಪ್ರೀತಿಯಾಗಲಿಕೆ ಮಾಡಿದರು6ದೂಷಿತ ಬಹಿಷ್ಕøತ ಸ್ತ್ರೀ ಮನೆಯಲ್ಲಿ ಉಂಡುದೂಷಣಾರ್ಹ ಕ್ರಿಯಾ ಚರಿಸಿಹರು ಎಂದುದೀಕ್ಷಾ ಪ್ರವರ್ಧಕ ಶ್ರೀ ಮಠಾಧಿಕಾರಿಗಳುಬಹಿಷ್ಕಾರ ಮಾಡಿದರಂತೆ ದಾಸಾರ್ಯರಿಗೆ 7ತಪೋನಿಧಿಗಳುಸೂರಿವರಸ್ವಾಮಿಗಳುಶ್ರೀಪನ್ನ ಪೂಜಿಸಿ ಪ್ರತಿಮೆಯಲ್ಲಿಅಪರೋಕ್ಷಜ್ಞಾನದಿ ಸರ್ವವ ಅರಿತುಶ್ರೀಪ ಪ್ರಿಯ ವಿಜಯಾರ್ಯರನ್ನು ಬರಮಾಡಿದರು 8ಜ್ಞಾನಿವರ್ಯ ದಾಸಾರ್ಯರು ಇದು ಮೊದಲೇ ಅರಿತುತನ್ನ ಶಿಷ್ಯರೊಡೆ ಹೇಳೆ ಆಹ್ವಾನ ಬಂದುತನ್ನವರ ಸಹ ಶ್ರೀ ಮಠಕೆ ಪೋಗಿ ಸ್ವಾಮಿಗಳಅನುಗ್ರಹ ಹೊಂದಿ ಸಂಭಾಷಿಸಿದರು ಮುದದಿ 9ಪ್ರತಿಮೆಯಲಿ ಶ್ರೀಹರಿಯ ಸಾನ್ನಿಧ್ಯ ಲಕ್ಷಣವೇದ್ಯವಾಗುವಿಕೆ ದಾಸಾರ್ಯರು ಒದಗಲಿಕ್ಕೇ ಎಂದುಸುತಪೋನಿಧಿ ಸ್ವಾಮಿಗಳು ಹೇಳಿ ದಾಸಾರ್ಯರುಇಂದಿರೇಶ ಸುಪ್ರಚುರ ವ್ಯಾಪ್ತನೂ ಎಂದರು 10ಪ್ರತಿಮೆಯಲಿ ಹಿಂದಿನ ದಿನಕ್ಕಿಂತ ಆಗಆದಿಯಂತೇವೆಯೇ ಶ್ರೀಯಃಪತಿ ಜ್ವಲಿಸಿಮುದಮನದಿ ಶ್ರೀಗಳು ಪೂಜಾದಿ ಪೂರೈಸಿಕೇಳ್ದರು ದಾಸರನ್ನ ಬಾಲೆಯ ವೃತ್ತಾಂತವ 11ದಾಸವರ್ಯರು ಹೇಳಿದರು ಆ ಬಾಲೆಯುಸುಮನಸವೃಂದದಿ ಓರ್ವಳು ಪೂರ್ವವಸುಧೆಯಲಿ ಪುಟ್ಟುವೆನು ಎನ್ನನುದ್ಧರಿಸಿರಿವಾತ್ಸಲ್ಯದಿ ಎಂದು ಬೇಡಿದ್ದಳೆಂದು 12ತತ್ಕಾಲ ಮುಗಿಯಬೇಕಾದ ಪ್ರಾರಬ್ಧಕರ್ಮಆಕೆಗೆ ಮುಗಿಯುವ ಸಮಯ ವಿಜಯಾರ್ಯಆಕೆ ಮನೆಗೆ ಹೋಗಿ ಸಾಧನ ಸಂಪತ್ತೊದಗಿಆಕೆಗೆ ಗತಿಯ ಕಲ್ಪಿಸಿಹರು ದಯದಿ 13ಪ್ರಾರಬ್ಧ ಕಳೆಯಲಿಕೋ ಶಾಪ ನಿಮಿತ್ತವೋಸುರರುಭುವಿಯಲ್ಲಿ ಪುಟ್ಟಿ ಒಮ್ಮೊಮ್ಮೆ ನಿಷಿದ್ದಕರ್ಮಚರಿಸಿದರೂ ಪಾಪ ಲೇಪವಾಗವುಇತರರಿಗೆ ಲೇಪವುಂಟುಹರಿಪರಾನ್ಮುಖರ್ಗೆ14ಹರಿಗೆ ಪ್ರಿಯಕರ ವಿಜಯರಾಯ ಪ್ರಭಾವತೋರಿಸಿದ ಈವೃತ್ತಾಂತದಿಕ್ಕು ದಿಕ್ಕುಹರಡಿತು ಜನರೆಲ್ಲ ವಿಜಯದಾಸಾರ್ಯರುಸುರರೇವೇ ನರರಲ್ಲೆಂದು ನಿಶ್ಚಯಿಸಿದರು 15ತಿರುಪತಿಯಲ್ಲಿ ಶ್ರೀ ಶ್ರೀನಿವಾಸನ ರಥದಾರಿಯಲ್ಲಿ ನಿಲ್ಲಲು ವಿಜಯದಾಸಾರ್ಯರುಹರಿತತ್ವ ಮಹಿಮೆಯ ಕವನ ರೂಪದಿ ಸ್ತುತಿಸೆಗರುಡ ಗಮನನು ರಥದಿ ಸರಸರನೆ ಬಂದ 16ಮೂರುಬಾರಿಕಾಶಿಗೆ ಹೋದಾಗಲೂ ಗಂಗೆಅರಿತು ಭೃಗುಮುನಿ ಅವತಾರವೆಂದುಹರುಷ ತೋರಿ ಉಕ್ಕಿದಳು ಭೃಗು ವಿಜಯರಾಯರುವರಅತಿಥಿ ಶಿವತಾತ ಪ್ರಿಯರೆಂದು17ವೇದ ವೇದಾಂತ ಪುರಾಣಾರ್ಥ ರಹಸ್ಯಗಳುಸದಾಗಮ ಸರ್ವರ್ಥಗಳ ಸಾರೋದ್ಧಾರವುಈ ದಾಸ ಮಹಂತರ ಗ್ರಂಥ ಸುಳಾದಿಗಳುಓದಿ ಕೇಳ್ವವರಿಗೆ ಇಹಪರಉದ್ಧಾರ18ಇಂದ್ರಾದಿ ಜಗದ್ಗುರು ಸದಾಶಿವನ್ನ ಸೇವಿಸುತ್ತರುದ್ರಾಂತರ್ಯಾಮಿ ನರಹರಿಯ ಅರ್ಚಿಸುತ್ತವಂದಿಸುತ್ತ ಚಿಪ್ಪಗಿರಿ ವಾಸಿಷ್ಠ ವಿಜಯವಿಠ್ಠಲ ಕೃಷ್ಣನ್ನಹೊಂದಿದರು ದಾನವಾಗಿ ಆಕ್ಷೇತ್ರವನ್ನು ಮೂರ್ತಿಯನ್ನು 19ಪಾಲಸಾಗರಪೋಲು ಆ ವಾಪಿ ಸುಪವಿತ್ರತಟದಲ್ಲಿಯೇ ವಾಸಸ್ಥಾನ ಮಾಡಿಕೊಂಡುಅಲ್ಲೇ ಇದ್ದರು ದಾಸಾರ್ಯರು ಪಾಠ ಪ್ರವಚನ ಭಜನೆಮಾಲೋಲ ಸುಪ್ರೀತಿಕರವಾಗಿ ಮಾಡುತ್ತ 20ಮೋದಮಯ ಶ್ರೀ ಶ್ರೀನಿವಾಸನ್ನ ಸೇವಿಸುತಮೇದಿನಿಯಲಿ ಸುಜರನ್ನ ಉದ್ಧರಿಸಿಕಾರ್ತೀಕ ಶುಧ್ಧ ದಶಮಿಯಲ್ಲಿ ಸ್ವಸ್ಥಾನಯೈದಿದರು ಹರಿಪಾದ ಧ್ಯಾನಿಸುತ್ತ ಧೀರ 21ವಿಜಯರಾಯರ ನೆನೆದರೆ ಆಯುಷ್ಯ ಆರೋಗ್ಯಶ್ರೀನಿಜಭಕ್ತಿ ಜ್ಞಾನವುವಿಜಯಎಲ್ಲೆಲ್ಲೂವಿಜಯದಾಸಾಂತಸ್ಥ ಮಧ್ವಾಂತರ್ಗತ ಶ್ರೀಶವಿಜಯಸಾರಥಿ ಶ್ರೀನಿವಾಸನುಈವ22ಧೀರ ಭಕ್ತಾಗ್ರಣಿ ಶ್ರೀಮದ್ ಗುರುವರ್ಯರುಭೂರಿಕರುಣಿಯು ಗೋಪಾಲದಾಸಾರ್ಯಹರಿದಾಸವರ ಹಯವದನ ವಿಠ್ಠಲವಿರಾಗಿ ವೇಣುಗೋಪಾಲ ಜಗನ್ನಾಥದಾಸರು 23ಹರಿದಾಸ ವೃಂದದಿ ಖ್ಯಾತ ಸೂರಿಗಳೆಲ್ಲರೂಗುರುಶ್ರೀಶ ವಿಠ್ಠಲಾಂಕಿತ ಕುಂಠೋಜಿ ಆರ್ಯಶ್ರೀ ರಘುಪತಿ ವಿಠ್ಠಲ ಇಂಥ ಸರ್ವರೂನೂಪರಿಪರಿ ವಿಧದಿ ಸ್ತುತಿಸಿಹರು ವಿಜಯಾರ್ಯರನ್ನ 24ವಿಜಯಾರ್ಯ ರಕ್ಷಿತ ಪೋಷಿತ ಉಪದಿಷ್ಟನಿಜದಾಸವರ್ಯ ಮೋಹನ್ನ ದಾಸಾರ್ಯವಿಜಯದಾಸಾರ್ಯನುಗ್ರಹದಿ ಬಹುಕವನಗಳಭುಜಗಭೂಷಣ ಈಡ್ಯನ್ನ ಸ್ತುತಿಸಿ ರಚಿಸಿಹರು25ಉತ್ತಮಶ್ಲೋಕ ಸ್ತುತಿಶತ ಸಹಕೀರ್ತನೆಗಳ್ಭಕ್ತಿಜ್ಞಾನ ವರ್ಧಿಪುದು ಮಹಾನ್ ಮೋಹನ್ನ ರಚಿಸಿದ್ದುಗ್ರಂಥಗಳುಪಂಡಿತಪಾಮರರಿಗೂ ಸಹ ಸುಬೋಧಕವುಸುಧಾರಸ ಪೋಲು ಹಾಡಿ ರಸಿಕರೇ ಪಠಿಸಿ 26ನಿರ್ಮತ್ಸರ ಸಾತ್ವಿಕನು ಹರಿಭಕ್ತನುವಿಮಲ ಹರಿದಾಸ ಸಾಹಿತ್ಯ ಸೂತ್ರಭಾಷ್ಯಕ್ರಮದಿ ಕಲಿತ ಆನಂದಾಚಾರ್ಯ ಎನ್ನಲಿ ಬಂದುಪ್ರೇಮದಿಂ ಪಠಿಸೆ ನಾಕೇಳಿಸುಖಿಸಿಹೆನು27ಪ್ರಸನ್ನರಾಮ ಶ್ರೀನಿವಾಸಅಖಿಳಸದ್ಗುಣನಿಧಿಯೇದೋಷದೂರನೇ ಗುರಗ ದಯದಿ ಸಲಹೋ ಇವನ್ನದಾಸದೀಕ್ಷೆ ಜ್ಞಾನ ಪ್ರವಚನ ಪಟುತ್ವವೀಯೋಕುಸುಮಭವ ಪಿತ ನಮೋ ಶ್ರೀ ಪ್ರಸನ್ನ ಶ್ರೀನಿವಾಸ 28 ಪ- ಇತಿ ಪಂಚಮೋದ್ಯಾಯ ಸಮಾಪ್ತ-
--------------
ಪ್ರಸನ್ನ ಶ್ರೀನಿವಾಸದಾಸರು
ಷಷ್ಠಿಯ ದಿವಸ(ಶ್ರೀ ವೆಂಕಟೇಶನ ಅವಭೃಥ ಸ್ನಾನ)ಮುಕುತಿದಾಯಕ ಮೂಲಪುರುಷಗೆ 1ಭೇರಿಶಬ್ದವು ನಗಾರಿಘರ್ಜನೆಮೌರಿತಾಳವು ಮೃದಂಗಶಬ್ದವು 2ಉದಯಕಾಲದಿ ಒದಗಿ ಭಕುತರುಪದುಮನಾಭನ ಪಾಡಿ ಪೊಗಳ್ವರು 3ಭೂರಿಮಂಗಲಕರದ ಶಬ್ದವುಸೇರಿ ಕಿವಿಯೊಳು ತೋರುವುದಲ್ಲೆ 4ನಿದ್ದೆಬಾರದು ನಿಮಿಷಮಾತ್ರಕೆಎದ್ದು ಪೇಳೆಲೆ ಏಣಲೋಚನೆ 5ಸುಮ್ಮನೀನಿರು ಸುಳಿಯಬೇಡೆಲೆಎಮ್ಮುವುದು ನಿದ್ರೆ ಏನ ಪೇಳಲಿ 6ಬೊಮ್ಮಸುರರಿಗು ಪೊಗಳತೀರದುತಿಮ್ಮರಾಯನ ಮಹಿಮೆ ದೊಡ್ಡಿತು 7ನಿನ್ನೆ ದಿವಸದ ನಿದ್ರೆವಿಹುದೆಲೆಕಣ್ಣಿಗಾಲಸ್ಯ ಕಾಂಬುವದಲ್ಲೇ 8ಬಣ್ಣಿಸುವದೆಲೆ ಬಹಳವಿಹುದಲೆಪನ್ನಗವೇಣಿ ಪವಡಿಸೆ ನೀನು 9ಏಳು ಏಳಮ್ಮ ಅಲಸ್ಯವ್ಯಾತಕೆಕಾಲಿಗೆರಗುವೆ ಹೇಳಬೇಕಮ್ಮ 10ಜಯಜಯ ವಾಧಿಶಯನಜಯಜಯ ದೈತ್ಯವಿನಾಶ ಜಯಜಯ ಶ್ರೀನಿವಾಸ 1ಗಂಧಕಸ್ತೂರಿಪುಣುಗಚಂದನಪನ್ನೀರುಗಳಹೊಂದಿಸಿ ತೋಷದಿ ಮಂದರಧರಗೆ 2ಆಕಾಶರಾಯನ ಮಗಳು ಹರುಷದಿಂದೊಡಗೂಡಿಶ್ರೀಕರ ವೆಂಕಟಪತಿಯು ಸರಸವಾಡಿ 3ಶ್ರೀದೇವಿ ಭೂದೇವಿಮಾಧವಸಹಿತಲಿಸಾದರದಿಂದಲಿ ಸರಸವಾಡಿ 4ಬಡನಡು ಬಳುಕುತಲಿ ಎಡಬಲದಲಿ ಸುಳಿದುಕಡಲೊಡೆಯಗೆ ಲಕ್ಷ್ಮಿ ಚೆಲ್ಲಿದಳಾಗ 5ಛಲದಿ ಪದ್ಮಾವತಿಯು ಜಲಜನಾಭನ ಮೇಲೆಒಲವಿನಿಂದಲಿ ಬಂದು ಚೆಲ್ಲಿದಳಾಗ 6ಭರದಿ ಶ್ರೀದೇವಿಯು ಸರಸಿಜಮುಖದಲ್ಲಿಪರಮಸುಸ್ನೇಹದಿ ಬೆರಸಿದಳಾಗ7ಭೂದೇವಿ ಭುಲ್ಲವಿಸಿ ಮಾಧವನ ಮುಖದೊಳಗೆಮೋದದಿಂದಲಿ ಬಂದು ಚೆಲ್ಲಿದಳಾಗ 8ಸುತ್ತುಮುತ್ತಲು ಇವರ ಆರ್ತಿಯಿಂದಲಿ ಹರಿಯುವೃತ್ತಕುಚವ ನೋಡಿ ಚೆಲ್ಲಿದನಾಗ 9ಝಣಝಣಾಕೃತಿಯಿಂದ ಮಿನುಗುವಾಭರಣದಧ್ವನಿಯ ತೋರುತ ಬಲು ಸರಸವಾಡಿ 10ಓಕುಳಿಯಾಡಿದ ನೀರಾನೇಕಭಕ್ತರು ಮಿಂದುಏಕಮಾನಸರಾಗಿ ಪೊರಟರು ಕಾಣೆ 11* * *ಆಡಿದರೋಕುಳಿಯ ಶರಣರೆಲ್ಲಆಡಿದರೋಕುಳಿಯ ಪ.ಕಾಡುವ ಪಾಪವ ಓಜಿಸಿ ಹರಿಯೊಳ-ಗಾಡಿನಿತ್ಯಸುಖಬೀಡಿನ ಮಧ್ಯದಿ1ಅಬ್ಬರದಿಂದಲಿ ಉಬ್ಬಿ ಸಂತೋಷದಿಒಬ್ಬರ ಮೈಗಿನ್ನೊಬ್ಬರು ಚೆಲ್ಲುತ 2ಚೆಂಡು ಬುಗರಿನೀರುಂಡೆಗಳಿಂದಲಿಹಿಂಡುಕೂಡಿ ಮುಂಕೊಂಡು ಪಿಡಿಯುವರು3ಸುತ್ತುಮುತ್ತ ಒತ್ತೊತ್ತಿ ಮುತ್ತಿ ಜಲ-ವೆತ್ತಿ ಚಿತ್ತತನುನೆತ್ತಿಗೆ ಸೂಸುತ್ತ 4ರಂಭೆ : ನಾರಿ ಕೇಳೀಗ ಭೂರಿಭಕುತರುಶ್ರೀರಮಾಧವ ಸಹಿತ ಬಂದರು 1ಭಾವಶ್ರೀಹರಿ ಪ್ರತಿರೂಪದೋರುತದೇವ ತಾನೆ ನಿದ್ರ್ವಂದ್ವನೆನ್ನುತ 2ಹೇಮಖಚಿತವಾದಂದಣವೇರಿಪ್ರೇಮಿಯಾಗುತ ಪೊರಟು ಬರುವನು 3ವಲ್ಲಭೆಯರ ಕೂಡಿ ಈ ದಿನಫುಲ್ಲನಾಭನು ಪೊರಟನೆತ್ತಲು 4ಊರ್ವಶಿ : ನಾರಿ ನೀ ಕೇಳಿದರಿಂದ ಈಗಭೂರಿಭಕುತರಾನಂದಶ್ರೀರಮಾಧವ ಮಿಂದ ನೀರಿನೊಳಾಡುತ್ತಓರಂತೆ ತುಳಸಿಮಾಲೆಯ ಧರಿಸುತ್ತಭೇರಿಡಂಕನಗಾರಿಶಬ್ದ ಗಂ-ಭೀರದೆಸಕವ ತೋರಿಸುತ್ತ ವೈ-ಯಾರದಿಂದಲಿ ರಾಮವಾರ್ಧಿಯತೀರದೆಡೆಗೆಲೆ ಸಾರಿ ಬಂದರು 1ವರದಭಿಷೇಕವ ರಚಿಸಿ ಬಕು-ತರ ಸ್ನಾನವನನುಕರಿಸಿಭರದಿಂದ ಪೂಜಾಸತ್ಕಾರ ಸೇವೆ ಕೈಗೊಂಡುತ್ವರಿತದಿ ನಗರಾಂತರಕನುವಾದನುಬರುತ ದಿವ್ಯಾರತಿಗೊಳ್ಳುತಚರಣಸೇರಿದ ಭಕ್ತರಿಷ್ಟವನಿರುತ ಪಾಲಿಸಿ ಮೆರೆವ ಕರುಣಾ-ಕರಮನೋಹರ ಗರುಡವಾಹನ2ರಂಭೆ : ಸರಸಿಜಾನನೆ ಈ ಸೊಲ್ಲ ಲಾಲಿಸೆಕರವಮುಗಿಯುತ್ತಕೈಯ ತೋರುತ1ಪರಮಪುರುಷ ಗೋವಿಂದ ಎನುತಲಿಹೊರಳುತುರಳುತ ಬರುವದೇನಿದು 2ಭಂಗಿಪ ಸೇವೆಯೆಂಬುದನುಅಂಗಜಪಿತಚರಣಂಗಳ ರಜದಲಿ 1ಹೊಂಗಿ ಧರಿಸಿ ಲೋಟಾಂಗಣ ಎಂಬರುರಂಗನಾಥನ ಸೇವೆಗೈದ ಜ-ನಂಗಳಿಗೆ ಭಯವಿಲ್ಲವದರಿಂ-ದಂಗವಿಪ ಲೋಲೋಪ್ತಿ ಕೋಲಾ-ಟಂಗಳನು ನೀನೋಡುಸುಮನದಿ2* * *ಕೋಲು ಕೋಲೆನ್ನಿರೊ ರನ್ನದಕೋಲು ಕೋಲೆನ್ನಿರೊ ಪ .ಪಾಲಾಬ್ಧಿಶಯನ ನಮ್ಮಾಲಯಕೆದ್ದು ಬಂದಲೀಲೆಗಳಿಂದ ಜನಜಾಲಗಳೆಲ್ಲರು 1ಗುಂಗಾಡಿತಮನನ್ನು ಕೊಂದು ವೇದವ ತಂದುಬಂಗಾರದೊಡಲನಿಗಿಟ್ಟನು ನಮ್ಮ ದೇವ 2ಅಡ್ಡಿಮಾಡದೆ ಸುರವಡ್ಡಿಗೆ ಸುಧೆಯಿತ್ತುಗುಡ್ಡೆಯ ಬೆನ್ನಿಲಿ ಧರಿಸಿದ ನಮ್ಮ ದೇವ 3ರೂಢಿಯ ಕದ್ದನ ಓಡಿಸಿ ತನ್ನಯದಾಡೆಯಿಂದಲೆ ಸೀಳ್ದ ಕಾಡವರಾಹನಮ್ಮ 4ಸಿಂಗನ ರೂಪತಾಳಿ ಹೊಂಗಿ ಕಂಬದಿ ಬಂದುಬಂಗಾರಕಶ್ಯಪುವಂಗವ ಕೆಡಹಿದ 5ಗಿಡ್ಡನಾಗುತ ಕೈಯೊಡ್ಡಿ ದಾನಕೆ ಮನ-ಸಡ್ಡಿಮಾಡದೆ ಮೇಣು ದೊಡ್ಡವನಾದನಮ್ಮ 6ಕಾಮಧೇನುವಿಗಾಗಿ ಕಾರ್ತವೀರ್ಯನ ಕೊಂದುಭೂಮಿಯ ಬುಧರಿಗೆ ಪ್ರೇಮದಿನಿತ್ತನಮ್ಮ 7ಬೆಟ್ಟಗಳೆಲ್ಲ ತಂದೊಟ್ಟಿಸಿ ಶರಧಿಯಕಟ್ಟಿದೈತ್ಯರ ತಲೆ ಕುಟ್ಟಿದ ನಮ್ಮ ದೇವ8ಚಂಡಗೊಲ್ಲತಿಯರ ಹಿಂಡುಗಳೊಳು ಕೂಡಿಉಂಡ ಪಾಲ್‍ಬೆಣ್ಣೆಯ ಪುಂಡ ಗೋಪಾಲನಮ್ಮ 9ಯುವತಿಯರ ವ್ರತವ ತವಕದಿ ಖಂಡಿಸಿಶಿವನ ರಕ್ಷಿಸಿ ತ್ರಿಪುರವನು ಕೆಡಹಿಸಿದ 10ಕುದುರೆಯ ಮೇಲೇರಿ ಕುಮತಿ ಮ್ಲೇಂಛರನೆಲ್ಲಸದೆಬಡಿಯುವ ನಮ್ಮ ಮಧುಕೈಟಭಾರಿ ದೇವ 11ಕಲಿಯುಗದೊಳು ಬಂದು ನೆಲೆಯಾಗಿ ತಿರುಪತಿ-ಯೊಳಗೆ ಭಕ್ತರನೆಲ್ಲ ಸಲಹುವ ನಮ್ಮ ದೇವ 12ದುಷ್ಟರ ಬೇಗ ಕಂಗೆಟ್ಟು ಓಡುವ ಭಕ್ತ-ರಿಷ್ಟವ ಕೊಡುವರೆ ದೃಷ್ಟಿಗೋಚರನಾದ 13ತಪ್ಪದೆ ಸ್ವಪ್ನದಿ ಬಪ್ಪೆನೆನ್ನುತ ಪೇಳಿಸರ್ಪಪರ್ವತದಿಂದ ಒಪ್ಪಿಲ್ಲಿ ಬಂದನಮ್ಮ 14ಸೃಷ್ಟಿಯೊಳುತ್ತಮ ಶ್ರೇಷ್ಠ ಕಾರ್ಕಳದಲ್ಲಿಪಟ್ಟದರಸ ತಿಮ್ಮ ಸೆಟ್ಟಿಯೆಂದೆನಿಸಿದ 15ಊರ್ವಶಿ :ನಾರೀರನ್ನಳೆ ಕೇಳಿದ್ಯಾ ಶ್ರೀಹರಿನಿತ್ಯಭೂರಿಸೇವೆಗೆ ಸಾನ್ನಿಧ್ಯತೋರುತ ಆರತಿಯ ಶೃಂಗಾರದೋರುತ ಕಾಣಿಕೆಯ ಕಪ್ಪುವು ಸೇರಿತುಸೇರಿದಾನತಜನರ ಮನಸಿನಕೋರಿಕೆಗಳನ್ನಿತ್ತು ಸಲಹುವವೀರವೆಂಕಟಪತಿಯ ಸದನ-ದ್ವಾರ ದಾಟುತ ಸಾರಿಬಂದನು 1ಬಳಿಕಲ್ಲಿ ತುಲಾಭಾರದ ಹರಕೆಯನ್ನು ಕೈ-ಗೊಳುತಲೀಪರಿ ಮೋದವನಲವಿನಲಿ ಮಂಗಲದ ವಿಭವದಗೆಲುವಿನಲಿ ವಿಧಕಲಶ ವೇದದನಲವಿನಲಿ ಸುಲಲಿತಭಿಷೇಕವನು ಕೊಳುತಲಿಜಲಜನಾಭನು ಸುರಚಿರದ ನಿ-ಶ್ಚಲಿತ ಸಿಂಹಾಸನದಿ ಮಂಡಿಸಿಒಲಿದ ವಂದಿತ ಜನರ ಭಕ್ತಿಗೆ 2ವಲ್ಲಭೆಯರ ಸಹಿತ ಸಮರ್ಪಿಸಿ-ದೆಲ್ಲ ಸ್ವೀಕರಿಸಿ ಮತ್ತಾಪಲ್ಲವಪಾದಗಳ ತೋರಿಸಿಎಲ್ಲವ ರಕ್ಷಿಸಿ ದಯಾರಸವುಳ್ಳವಫುಲ್ಲನಾಭನು ಪೂರ್ಣಕಾಮ ಶ್ರೀ-ವಲ್ಲಭನು ನರನಾಟಕದಿ ಜಗ-ಎಲ್ಲ ರಕ್ಷಿಸಿ ಮೆರೆವ ಭಕ್ತರಸುಲ್ಲಭನು ಸುಮನೋನುರಾಗನು 3ಶರದಿಯೇಳರ ಮಧ್ಯದ ಧಾರಿಣಿಯೊಳುಮೆರೆವ ಹೇಮಾಚಲದಸ್ಫುರಿತದಾ ಮಹಾಜಂಬುದ್ವೀಪ ವಿ-ಸ್ತರಿತದಾ ಭರತಾಖ್ಯ ಖಂಡದಿಹರುಷದಿ ನಿರುತ ತೌಳವದೇಶಮಧ್ಯದಿಮೆರೆವ ಕಾರ್ಕಳಪುರವರವೆ ಪಡುತಿರುಪತಿಯು ಎಂದೆನಿಸಿ ಭಕುತರನೆರವಿಯನು ಪರಿಪಾಲಿಸುವನೆಲೆ 4ಈಪರಿವಿಭವದಲಿ ಪ್ರತಿವರುಷಕೆಶ್ರೀಪರಮ್ಮಾತನಲ್ಲಿವ್ಯಾಪಿಸಿ ಭಕ್ತರನುಕಾವನಿ-ರೂಪಿಸಿ ಸೇವೆಯನು ಕೈಕೊಂಡೊಪ್ಪಿಸಿಪಾಪವೆಲ್ಲವ ಪರಿಹರಿಸಿ ಚಿ-ದ್ರೂಪನಂದದಿ ಹೊಳೆವ ಪರತರ-ರೂಪಕರುಣಾಲಾಪ ಸದ್ಗುಣ-ದೀಪ ಚಪ್ಪರ ಶ್ರೀನಿವಾಸನು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಲಹು ವೆಂಕಟರಮಣ ದಯಾಂಬುಧಿಸಲಹು ವೆಂಕಟರಮಣ ಪ.ಮಸ್ತಕದೊಳೊಪ್ಪುವ ಮಾಣಿಕ ಮಕುಟದಕಸ್ತೂರಿನಾಮದ ಚೆಲುವವಿಸ್ತರ ಕದಪಿಲಿ ಹೊಳೆವಕುಂಡಲಪ್ರಶಸ್ತವದನಜಗಜೀವ1ಎಳೆನಗೆ ತಿಂಗಳ ಕಾಂತಿಲಿಹೃತ್ತಾಪಕಳೆವ ಕರುಣಿ ಸಿರಿಕಾಂತಗಳದೊಳು ವನಮಾಲೆವೈಜಯಂತಿಪದಕಗಳೊಲೆವ ಮಂಗಳಮೂರ್ತಿಮಂತ 2ಮುತ್ತಿನ ಸರ ಸರಪಳಿ ಭುಜಕೀರ್ತಿಯುಎತ್ತಿದ ಶಂಖಾರಿಪಾಣೆರತ್ತುನ ಮೇಲೊಡ್ಯಾಣ ಕಂಕಣ ಮುದ್ರೆಒತ್ತೆ ಅಭಯವರದನೆ 3ಉಟ್ಟು ಪೊಂದಟ್ಟಿ ಕಠಾರಿ ಕಟ್ಟಿರುವದುಷ್ಟರ ರಣಜಿತವೀರಇಟ್ಟ ವಜ್ರದ ಕಾಲಂದಿಗೆ ಪಾವುಗೆಮೆಟ್ಟಿದ ಸುರರಮಂದಾರ4ಅಗರುಚಂದನಕಪ್ಪುರ ಕೇಶರ ಸುರಭಿಗಳಿಗೆ ಅತಿಪ್ರಿಯ ಅಂಗಮಘಮಘಿಸುವ ಮಲ್ಲಿಗೆ ಸಂಪಿಗೆಯಮಾಲೆಗಳ ಪ್ರಸನ್ವೆಂಕಟ ರಂಗ 5
--------------
ಪ್ರಸನ್ನವೆಂಕಟದಾಸರು