ಒಟ್ಟು 517 ಕಡೆಗಳಲ್ಲಿ , 93 ದಾಸರು , 466 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶತ್ರುಭಯ ಪರಿಹರಿಸೊ ಭೂತರಾಜ ಪ ಭವಕೆ ಭೀಕರ ಭಾವಿ ಭೀಮನ ಭಜಿಪ ಭೋಜಾ ಸುತೇಜಾ ಅ.ಪ. ಇಂದು ನೀನೆ ನಾನೆಂದು ಕಮರಿ ಕೂಪದಿ ನೊಂದೆನೊ ಭಾವಿ ನಂದಿವಾಹನ ಮಂಗಳ ಪ್ರದ ನೀಲಕಂಠಾ 1 ಇಲ್ಲೆಲ್ಲಿ ಸರ್ವಸ್ಥಳದಲ್ಲಿ ವ್ಯಾಪ್ತವಾಗಿಹ ನಿನ್ನ ಲೋಲ ಮೂರುತಿಯ ನೆನೆವೆ ಫಾಲನಯನಾ ಪಾಲಿಗೇ ಪಾಲನೆಂತೆಂದು ಕಾಲಮೀರದೆ ಚಲಿಸದೆಲೆ ಬಾರೊ ಗರಳಧಾರಿ 2 ಶ್ರೀಕೃಷ್ಣದಾಸನೆ ನಿನ್ನ ಇಷ್ಟನೆಂತೆಂದು ಮನಮುಟ್ಟಿ ಭಜಿಸುವೆನೊ ಚಾರುದೇಷ್ಣೆಪಾಲಾ ದಿಟ್ಟ ಗುರು ಕೃಷ್ಣವಂದಿತ ತಂದೆ-ವರದಗೋಪಾಲವಿಠ್ಠಲನ ಸಹಜ ಬಂದು 3
--------------
ತಂದೆವರದಗೋಪಾಲವಿಠಲರು
ಶಂಭೋ ಚಂದ್ರಶೇಖರ ಪ ವಂದಿಪೆ ನಿನ್ನಂಘ್ರಿಯುಗಳವ ಅ.ಪ ಭಜಿಸುವೆ ನಾನ ನಿನ್ನ ಶಂಕರ ಶಂಭೊ 1 ಶೈಲಸುತಾ ಚಿತ್ತಚೋರನೆ ಶೂಲಧರಾಘ ವಿದೂರನೆ 2 ಕರುಣಿಸೆನ್ನ ಸುಚರಿತ್ರನೆ ಶಂಭೊ 3
--------------
ಗುರುರಾಮವಿಠಲ
ಶರಣು ಶರಣು ಶ್ರೀ ರಾಮಚಂದ್ರನೆ ಶರಣು ಸುರಮುನಿ ವಂದ್ಯನೆ ಪ. ಶರಣು ಶ್ರೀ ರಘುಕುಲಾಬ್ಧಿಚಂದ್ರನೆ ಶರಣು ಸದ್ಗುಣ ಸಾಂದ್ರನೆ ಅ.ಪ ಕಮಲನಾಭನೆ ಕಮಲನೇತ್ರನೆ ಅಮರವಂದಿತ ವಿಮಲಚರಿತನೆ ಕುಮುದಸಖಸಮಾನ್ಯನೆ 1 ಅಂಬುಜಾಸನ ಶಂಭುವಂದಿತ ಶಂಬರಾರಿಯ ಜನಕನೆ ಕಂಬುಕಂದರ ನಂಬಿ ಭಜಿಸುವೆ ಬೆಂಬಿಡದಲೆ ಪಾಲಿಸೈ 2 ಪಕ್ಷಿವಾಹನ ರಕ್ಕಸಾಂತಕ ಲಕ್ಷ್ಮೀರಮಣ ಶುಭಲಕ್ಷಣ ಲಕ್ಷ್ಮಣಾಗ್ರಜ ಸತ್ಯವಿಕ್ರಮ ರಕ್ಷಿಸೈ ಪುರುಷೋತ್ತಮ 3 ಪರಮಪಾವನ ಶೇಷಗಿರಿಯೊಳು ನಿರುತ ನೆಲೆಸಿಹ ಶ್ರೀಶಗೆ ಶರಣ ಜನರ ಸಚ್ಚರಿತೆಯೋದುವ ವರವ ಪಾಲಿಸು ದೇವನೇ 4
--------------
ನಂಜನಗೂಡು ತಿರುಮಲಾಂಬಾ
ಶರಣು ಶ್ರೀ ನಂದನೇಶ್ವರ | ಪಾಲಿಸು ಜಗದೀಶ್ವರ | ಶರಣು ಶ್ರೀ ನಂದನೇಶ್ವರ ಪ ಶರಣು ಶ್ರೀ ಗುರುವರ ಗಂಗಾಧರ | ಕರ ಕಪಾಲಧರ ಹರ ಮೃತ್ಯುಂಜಯ ಅ.ಪ. ತಂದೆ ನಿನ್ನಯ ಪಾದವ | ಮರೆತಿಹುದರಿಂದ | ನಿಂದ ಹಲವಂಗದಲಿ ಭವಭವದಿ || ನೊಂದು ಬಂದೆ ನಾನಿಂದೀ ಭವದೊಳು | ಹೊಂದಿ ತವಾಂಘ್ರಿಯನಂದದಿ ಭಜಿಸುವೆ 1 ಭೇದ ಬುದ್ಧಿಯ ಮಾನವರು | ವೇದ ಶಾಸ್ತ್ರದ| ಹಾದಿಯರಿಯದ ಮತ್ಸರರು || ಸಾಧುಗಳೊಡನೆ ವಿರೋಧವನೆಣಿಸುವ | ಬಾಧಕರಾದರು ಹೇ ದಯಾನಿಧಿಯೇ 2 ತೊಡಕುಗಳನ್ನೆ ಬಿಡಿಸಿ | ಬಾಧೆಗಳ ವಾರಿಸಿ | ಕಡು ದುಷ್ಟಾತ್ಮರ ಶಿಕ್ಷಿಸಿ | ಎಡೆಬಿಡದೆನ್ನ ಮನೋರಥ ಸಲಿಸುತ | ದೃಢತರ ಭಕುತಿಯ ಕೊಡು ಕೃಪೆಯಿಂದಲಿ 3 ಪಾದ | ಮುಕುತಿ ಸಂಪದ ಪಾಲಿಸೊ || ಶಕುತಿಯೊಳಗೆ ನೀ ಯುಕುತಿಯಿಂದ ನಿಜ | ಸುಖದ ಪದವಿಯೊಳು ಪ್ರಕಟದಿ ಪೊರೆಯೈ4 ಯೋಗಿಗಳರಸ ನೀನೆಂಬ | ಬಿರುದುಗಳ ತೋರಿಸು- | ತೀಗೆನ್ನಪರಾಧವ ಕ್ಷಮಿಸೆಂಬ || ರಾಗದ ನುಡಿಯೊಳೆನ್ನಾಗಮನವೊಪ್ಪಿಸು- | ತೀಗ ಸದಾನಂದ ಯೋಗಾಂತರ್ಗತ 5
--------------
ಸದಾನಂದರು
ಶಾಂಭವಿ ದಯಮಾಡೆ ಸಿಟ್ಟು ಬಿಡು | ಮುನಿಯದೆ ಎನ್ನ ಕೂಡ |ಕೋಪವು ಮಾಡಬೇಡ ಎನಗಾರ |ಕರುಣ ದೃಷ್ಟಿಲಿ ನೋಡ ಪ ಮೂರ್ತಿ 1 ರಜ ತಮ ಸಂಗದಲಿ ನಾ ಕೆಟ್ಟೆ | ನಿನ್ನ ಸ್ಮರಣೆಯ ಬಿಟ್ಟೆ | ಕಾಮ ಕ್ರೋಧದಲಿ ಬಹು ಸುಟ್ಟೆ |ತಿಳಿಯದು ನಿನ್ನ ಗುಟ್ಟೇ 2 ಮನಸಿಗೆ ತರದಿರೆ ಎನ್ನ ದೋಷ |ಮಾಡೆನ್ನ ದುರಿತವಿನಾಶಾ |ಕಲಿಕಾಲಸುತನಾ ಭವಪಾಶಾ | ಭಜಿಸುವೆ ನಿನ್ನ ಮಹೇಶಾ 3
--------------
ಭೀಮಾಶಂಕರ
ಶಾರದೆ ನಿನ್ನ ಪಾದವ ಆರಾಧಿಸುವೆವುವಾರಿಜ ಭವಕ್ಕೆ ಸೇರಿಸು ಹರಸು ಪ. ನಿತ್ಯ ಭಜಿಸುವೆವುಸಚ್ಚಿದಾನಂದನ ಚಿತ್ತದಿ ನಿಲ್ಲಿಸ1 ರಂಭೆ ನಮ್ಮಯ ಹೃದಯ ಅಂಬರದೊಳು ನಿಂತುಅಂಬುಜನಾಭನ ತುಂಬಿಸು ಮನದಿ2 ಅರಿಷಿಣ ಕುಂಕುಮ ಬೆರೆಸಿದ ಪರಿಮಳಸರಸದಿ ಕೈ ಕೊಂಡು ಅರಸಿಯರ ಗೆಲಿಸ 3 ಅತ್ತಿ ಹೂವಿನಸೀರೆ ಮುತ್ತಿನಾಭರಣವಅರ್ಥಿಲೆ ಕೈ ಕೊಂಡು ಮಿತ್ರೆಯರ ಗೆಲಿಸ4 ಪತಿ ಸೌಭಾಗ್ಯವ ರಚಿಸಲುಶೀಘ್ರದಿ ತೋರಿಸೆ ಕುಗ್ಗದೆ ನಮಗೆ 5 ಪತಿ ನಿತ್ಯ ರಾಮೇಶನ ತತ್ವವ ರಚಿಸುವೆ ಸತ್ಯವ ನುಡಿಸೆ ಶಾರದಾದೇವಿ6
--------------
ಗಲಗಲಿಅವ್ವನವರು
ಶಾರದೆ ಪೊರೆಯೆನ್ನಾ - ಮಾತೆಯೆತೋರಿಸಿ ತವ ಚರಣಾ ಪ ಶಾರದೆ ತವ ಪದ | ಸಾರಿ ಭಜಿಸುವೆನುದೊರಗೈವುದೆನ್ನ | ಭಾರಿ ಅಜ್ಞಾನವ ಅ.ಪ. ವೀತ ದುರಿತೆ ಖ್ಯಾತೇ | ಶಿವಮಾತೆಯೆ ಸದ್ಗುಣ ಗಣ ವ್ರಾತೇ ||ಶಾತಕುಂಭೋಧರ | ಪ್ರೀತಿ ವಿಷಯ ಜಗನ್‍ಮಾತೆಯೆ ಹರಿಗುಣ | ಗಾಥೆಯ ಗೀತೆಯೆ 1 ಹಯಾಸ್ಯ ಪದದಲಿ 2 ಈಶಾಹಿ ವಿಹಗೇಂದ್ರಾ | ಸ್ವರ್ಗಾಧೀಶಾಧಿಪರು ಛಂದಾ ||ಮೀಸಲು ಮನದಲಿ | ಕ್ಲೇಶಗಳಿಲ್ಲದೆತಾಸು ತಾಸಿಗೆ ನಿನ್ನೆ | ಸೂಸಿ ಭಜಿಸುವರು 3 ನರಹರಿ ಗುರುಭಕ್ತೀ | ಬ್ರಾಹ್ಮೀಸರಸ್ವತಿ ಗಾಯಿತ್ರೀ ||ಅರ ವಿದೂರ ನರ | ಹರಿಯನು ಭಜಿಸುವಸುರ ಚಿರ ವಾಣಿಯ | ಕರುಣಿಸು ವಾಣೀ 4 ಪರ ಬೊಮ್ಮಾ |ಭಾವಜ ಪಿತ ಗುರು | ಗೋವಿಂದ ವಿಠಲನಓವಿ ಭಜಿಸುವಂಥ | ಭಾವವ ನೀಯೇ 5
--------------
ಗುರುಗೋವಿಂದವಿಠಲರು
ಶಿರಿ ಮುದ್ದು ಕೃಷ್ಣವಿಠಲ | ಪೊರೆಯ ಬೇಕಿವಳಾ ಪ ಪಾದ | ಸಾರಿ ಭಜಿಸುವಳಾ ಅ.ಪ. ಪರಿಪರಿಯ ವಿಧದಿಂದ | ತೈಜಸನೆ ನೀನಾಗಿವರಸೂ ರೂಪಗಳಿಂದ | ವಸುದೇವ ಸುತನೇತರಳೆಗತಿ ಆಶ್ಚರ್ಯ | ತೋರಿ ಅಡಗಿದೆ ದೇವಶಿರಿಮುದ್ದು ಕೃಷ್ಣನೇ | ಮರುತಂತರಾತ್ಮ 1 ಸುಪ್ತಿಯಲಿ ಗುರುಪಾದ | ಭಕ್ತಿಯಲಿ ನಮಿಸುತ್ತತೀರ್ಥವನೆ ತಕ್ಕೊಂಡು | ಧನ್ಯನಾನೆಂದುಅತ್ಯಂತ ಹರ್ಷದಲಿ | ಸ್ತೋತ್ರವನೆ ಮಾಡುತ್ತಸಕ್ತಿಯನೆ ತೋರಿಹಳು | ದಾಸಪಂಥದಲೀ 2 ಭುವನ ಪಾವನವೆನಿಪ | ಮಧ್ವಮತದಾಸಕ್ತಿಶ್ರವಣಕಾನಂದವೆನೆ | ಕವನ ಸಂಸ್ಪೂರ್ತೀಜೀವೊತ್ತಮರ ಭಕುತಿ | ವಿಷಯದಲಿ ವಿರಕ್ತಿಹವಣಿಸೋ ಶ್ರೀಹರಿಯೆ | ಭವಕರಿಗೆ ಹರಿಯ 3 ಪತಿಸುತರು ಹಿತರಲ್ಲಿ | ಮತಿಮತಾಂವರರಲ್ಲಿರತನು ಶ್ರೀಹರಿಯೆಂಬ | ಸುಜ್ಞಾನವನ್ನುಕೃತಿಪತಿಯ ಕರುಣಿಸುತ | ಸಾಧನವ ಗೈಸುವುದುಚತುರಾಸ್ಯಪಿತ ಹರಿಯೆ | ದುರಿತವನ ದಾವಾ 4 ಮಾನನಿಧಿ ಶ್ರೀಹರಿಯೆ | ಧ್ಯಾನಾನುಕೂಲಿಸುತಸಾನುರಾಗದಿ ನಿನ್ನ | ರೂಪಹೃದ್ಗುಹದೀಕಾಣಿಪಂತಸಗೊ ಗುರು | ಗೋವಿಂದ ವಿಠಲನೆಆವಾದದನ್ಯವನು | ಬೇಡ ಬಂದಿಲ್ಲ5
--------------
ಗುರುಗೋವಿಂದವಿಠಲರು
ಶಿರಿದೇವಿಯೆ ಪೊರಿಯುವದೆನ್ನನು ತಾಯೆ ಭಾ ಸ್ಕರ ಪುರ ನಿಲಯೆ ಪ ಧರಣಿಸುರವರÀನಿಗೊಲಿದು ಶ್ರೀಗಂಧದ ವರ ಶಿಲೆಯೊಳು ನೆಲಿಸಿರುವ ಶುಭಾಂಗಿಯೆ ಅ.ಪ ಲಕುಮಿಯೆ ತವ ದರುಶನ ವರುಷಂಪ್ರತಿ ಮಾಡುವ ನೇಮಾಸಕ್ತ ಶ್ರೀ ಲಕ್ಷ್ಮೀಕಾಂತ ತತ್ಕರಸಂಪೂಜಿತ ಸತಿ 1 ಪದ್ಮೇ ಪ್ರಣಮಾಮಿ ಭವತ್ಪದ ಪದ್ಮೆ ವಾರಿಜದಳ ಸದ್ಮೆ ಪದ್ಮಾನನೆ ಸ್ಮರಿಸುವೆ ಕರಧೃತ ಪದ್ಮೆ ವಾಸಯಿ ಮಮಸದ್ಮನಿ ಪದ್ಮಾವತಿ ಪದ್ಮಜನುತ ಪದಪದ್ಮೇ ಉದ್ಭವಿಸಿದ ಪದ್ಮದಿ ಪದ್ಮನಾಭ ಹೃತ್ಪದ್ಮನಿವಾಸಿನಿ 2 ಸಿಂಹಧ್ವಜ ಶೋಭಿತೆ ಸಾನುರಾಗದಿ ಭಜಿಸುವರಿಗೆ ಪ್ರೀತೆ ಕಾಮಿತ ಫಲದಾತೆ ಜ್ಞಾನಾ ಸದ್ಭಕುತಿಯು ಕರುಣಿಸು ಮಾತೆ ವರದಾಭಯಹಸ್ತೆ ರಾಣೆಯೆ ನಮಿಸುವೆ 3 ವಂದಾರುಜನ ಮಂದಾರಾಮಿಂದಿರಾ ಸುಂದರಾನನಾಂ
--------------
ಕಾರ್ಪರ ನರಹರಿದಾಸರು
ಶಿವ - ಪಾವ9ತಿಯರು ಪರಮೇಶ್ವರಾ ಮಹದೇವಾ | ಗಿರಿಜಾವರ ಶಿವ ಶಂಭೋ | ಪರಮೇಶ್ವರ ಮಹದೇವಾ ಪ ಹರಶವ9 ಕಾಲಕಾಲ | ವಿರೂಪಾಕ್ಷ ರುಂಡಮಾಲಾ | ಶರಣು ಜನರಪಾಲಾ | ಗಿರಿ ಶೋಭಾವಾ ನೀ ಲೋಲಾ 1 ಭೂತೇಶ ವ್ಯೊಮಕೇಶಾ | ಶಿತಿಕಂಠ ಕೃತ್ತಿವಾಸಾ | ಕ್ರತು ಧ್ವಂಸಿ ದುಷ್ಟ ನಾಶಾ 2 ಈಶಾನ್ಯ ಭಗ9ರುದ್ರಾ | ಪಶುಪತೇ ವೀರಭದ್ರಾ | ಕೃಶಾನು ರೇತಸ್ ರೌದ್ರಾ | ಶಶಿಧರಾ ಯೋಗನಿದ್ರಾ 3 ಪಿನಾಕಿ ಮೃತ್ಯುಂಜಯನೇ | ನಾ ನಿನ್ನ ಮರತಿಹನೇ| ದೀನರ ಪಾಲಿಸುವನೇ | ನೀನೆನ್ನ ಕಾಯೋ ಭವನೇ 4 ಗಜಮುಖ ತಾತ ಬಾರೋ | ಭಜಿಸುವೆನೀ ಮೈದೋರೋ | ನಿಜದಾ ಸದಾನಂದ ಬಾರೋ | ರಜತಾದ್ರಿವಾಸ ತೋರೊ 5
--------------
ಸದಾನಂದರು
ಶುಕ್ಕುರವಾರದಿ ಭಕ್ತಿಲಿ ಭಜಿಸುವೆ ಲಕ್ಕುಮಿ ದೇವಿಯನುರುಕ್ಮಾಭರಣ ವಿಲಕ್ಷಣ ಶೋಭಿಪ ಸುಲಕ್ಷಣ ಮೂರ್ತಿಯನುರಕ್ಕಸರಿಪು ಬಲಪಕ್ಕದಿ ಕೂತಿಹ ರುಕ್ಮಿಣಿ ದೇವಿಯನು ಪ ಸಂತತ ಭಜಿಸುವ ಸಂತರ ಹತ್ತಿರ ನಿಂತು ರಕ್ಷಿಸುತಿಹಳುಶಾಂತಳು ಸದ್ಗುಣವಂತಳು ಕಮಲಾಕಾಂತನ ಸುಪ್ರಿಯಳೂ ಕರವೀರಪ್ರಾಂತ್ಯದೊಳಿರುತಿಹಳು ಹೃತ್ಕಮಲಂಚಳ ಸಂಸ್ಥಿತಳು 1 ಮಾಧವ ಭೂಮಿಯ ಮಂಗಳ ಮೂರ್ತಿಯು ಸುಖರಾಶಿ2 ಆಸ್ಯಾಂಬುಜತನು ಹಾಸಸುಕುಂತಳೆ ಭೂಷಿತ ಬಿಂಬೋಷ್ಠೀಕೂಸಿಗೆ ಕೊಡು ಇಂದಿರೇಶನ ಸಹಜಗದೀಶಳೆ ತವ ಭೆಟ್ಟಿ3 ಅಗಣಿತ ಮಹಿಮನಸುಗುಣದೊಳಾಡುವ ಮಿಗೆ ಹರುಷವ ಕೊಡುನಗೆಮುಖದವಳೇ 4 ಸಂದರವದನೆ ಸಿಂಧುರಗಮನೆ ಕುಂದದ ಅಸುರರನೆಮಂದರಮಾಲಾ ಭೂಷಿತವೇಣಿ ಇಂದಿರೇಶನ ಪಾದದ್ವಂದ್ವತೋರಿಸು ನಿನಗೊಂದಿಸುವೆನು ಶರದಿಂದು ಸುಮನಸೆ 5
--------------
ಇಂದಿರೇಶರು
ಶೇಷದೇವ ವಾರುಣೀಪತಿ ಪಾಹಿ ಪ ಶೇಷದೇವ ತ್ರೈಘೋಷಣ ಮುಖ ಪರಿ ಪೋಷಿಸು ಎಮ್ಮಭಿಲಾಷೆಯ ಸಲಿಸಿ ಅ.ಪ. ಭಜಿಸುವೆ ಸರ್ವದಾ ಸುಜನರಭೀಷ್ಟವ ಸುಜನಾರಾಧಕ ಭುಜಗೋತ್ತಂಸ 1 ಪುಣ್ಯ ಚರಿತ ಸುಶರಣ್ಯಗೆ ಸುಬ್ರ ಹ್ಮಣ್ಯದೇವ ಕಾರುಣ್ಯ ಮೂರುತಿ 2 ವಾರುಣಿ ಸುಮುಖ ಸರೋರುಹ ದಿನಕರ ತೋರು ತವಾಂಘ್ರಿ ಮಹೋರಗ ರಾಜ3 ಅಸಿತವಸನ ಹಲಮುಸಲಾಯುಧ ಧರ ದ್ವಿಸ [ಹ] ಸ್ರೇಕ್ಷಣ ಸುಶರಣ ಪಾಲ 4 ಪಾತಾಳಪ ಪುರುಹೂತನುತ ಜಗ ನ್ನಾಥ ವಿಠಲನ ಪ್ರೀತಿ ವಿಷಯನೆ 5
--------------
ಜಗನ್ನಾಥದಾಸರು
ಶೌರಿ ಅಡಿಗಳನು ಧ್ಯಾನಿಸುವ ಮತಿ ಕೋರಿ ಪ ಮೃಡ ಪುರಂದರರೊಡೆಯ ಶ್ರೀಹರಿ ಕಡಲಶಯನನ ಬಿಡದೆ ಭಜಿಪರ ಸಡಗರದಿ ಸನ್ಮಾರ್ಗ ತೋರುವ ಬಡವರ ಆಧಾರಿ ನರಹರಿ ಅ.ಪ ನಿನ್ನ ದಾಸರ ಸಂಗದೊಳಿರಿಸೆನ್ನ ಬೇಡುವೆನು ನಿನ್ನ ನಿನ್ನ ನಾಮಸ್ಮರಣೆ ಅನುದಿನ ನಿನ್ನ ಚರಣವ ಭಜಿಪ ಭಕ್ತರನು ಕೊಂಡಾಡುವಂಥ ಅ- ಚ್ಛಿನ್ನ ಭಕ್ತರ ಕೂಟದಲಿರಿಸೆನ್ನ ಸನ್ನುತಾಂಗನೆ ಸರ್ವವ್ಯಾಪಕ ನಿನ್ನ ಮೊರೆ ಹೊಕ್ಕಿರುವೆ ಪಾಲಿಸು ಪನ್ನಗಾದ್ರಿವಾಸ ವೆಂಕಟ ಆ- ಪನ್ನ ಜನರನು ಪೊರೆವ ಕರುಣಿಯೆ 1 ಗಜ ನೀ ಕೇಳಿ ತ್ವರದೊಳು ಬಿಡದೆ ರಕ್ಷಿಸಿ ಪೊರೆದ ಕರುಣಾಳು ಬಡವ ವಿಪ್ರಗೆ ಒಲಿದೆ ಕ್ಷಿಪ್ರದೊಳು ಸೌಭಾಗ್ಯವಿತ್ತೆ ಹುಡುಗ ತಪವಿರೆ ಅಂದು ಅಡವಿಯೊಳು ತಡೆಯದಲೆ ನೀನೊಲಿದೆ ಭಕುತಿಗೆ ಒಡೆಯರೈವರ ಮಡದಿ ಮೊರೆ ಕೇಳಿ ಬಿಡದೆ ಅಕ್ಷಯವೆಂದು ಸಲಹಿದೆ ದೃಢ ಭಕುತರನು ಬಿಡದೆ ಪೊರೆಯುವೆ 2 ರಂಗನಾಥ ನಿನ್ನಂಘ್ರಿ ಕಮಲಗಳ ಭಜಿಸುವವರ ಭವ ಹಿಂಗಿಸುತ ಪೊರೆದಂಥ ಚರಿತೆಗಳ ಸಂಗರಹಿತನೆ ಬಿಡಿಸು ಬಂಧಗಳ ಸಲಹೆಂದು ಪ್ರಾರ್ಥಿಪೆ ಅಂಗಜನಪಿತ ತರಿದೆನ್ನಪರಾಧ ಮಂಗಳಾಂಗ ಪ್ಲವಂಗ ವತ್ಸರ ಗಂಗಾಜನಕ ನಿನ್ನಂಘ್ರಿ ಭಜಕರ ಹಿಂಗದಲೆ ಪಾಲಿಸುತ ಪೊರೆ ಕೃಪಾ-ಪಾಂಗ ಕಮಲನಾಭ ವಿಠ್ಠಲನೆ 3
--------------
ನಿಡಗುರುಕಿ ಜೀವೂಬಾಯಿ
ಶ್ರೀ ಕೃಷ್ಣನಾ ಚರಣಾ ನಂಬಿ ಭಜಿಸುವುದು ಬಲು ಲೇಸು ಪ ಭಾವನೆ ದೇವಕಿ ಉದರದಿ ಬಂದಾ| ದೇವ ಹೃದಯ ಗೋಕುಲದಲಿ ಬೆಳೆದಾ| ಅವಿದ್ಯ ಪೂತನಿಯನು ಕೊಂದಾ 1 ಭವರೂಪದ ಸಗಟಾಸೂರನೊದೆದಾ| ಅವಗುಣಿಬಕ ಕೇಶಾದ್ಯರ ತರಿದಾ| ಅವಿವೇಕಿ ಕಾಳಿಂಗನ ತುಳಿದಾ 2 ಭಕ್ತಿಯ ಗೋರಸ ಕಳವಿಲಿ ಸುರಿದಾ| ಮುಕ್ತಾಂಗದ ಗೋಪೀಜನ ನೆರೆದಾ| ಸಕ್ತಿಯ ಗೋವರೋಳು ನಲಿದಾ3 ಭ್ರಾಂತಿಯ ಹಮ್ಮಿನ ಕಂಸನ ಬಡಿದಾ| ಸ್ವಾಂತ ಸುಖ ದ್ವಾರಕೆಯಲಿ ನಿಂದಾ| ಶಾಂತಿಯ ರುಕ್ಮಿಣಿ ಕೈವಿಡಿದಾ 4 ತಂದೆ ಮಹಿಪತಿ ಗುರುವಾದಾ ಕಂದುದ್ಧವನನು ತೋರಿಸಿ ಹೊರೆದಾ| ಛಂದದಿ ಪಾದುಕವಿತ್ತನು ಪದದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗಣಾಧಿನಾಥಾಶ್ರಿತ ಸೌಖ್ಯಧಾತ ಪ ನಾಗಭೂಷಣಸುತ ನಾರದಾದಿವಂದಿತ ಅ.ಪ ಗಜವದನ ಗಣೇಶ ಲಂಬೋದರ ಗಿ- ರಿಜಾಮಲ ಸಮುದ್ಭವ ಭೂತೇಶ ಭೂರಿ ಭಜಿಸುವೆ ನಾನಿನ್ನ ಸುಜನರ ಕಾರ್ಯಕೆ ಬರುತಿಹ ವಿಘ್ನ ರಜಗಳಿಗೆ ನಮೊ ನಮೋ ಎಂಬುವೆನಾಂ 1 ಇಂದುಧರನ ತನಯಾ ರವಿ ಶಶಿ ಸಂ- ಕ್ರಂದನ ಮುಖ ಸುರಬೃಂದ ಸೇವ್ಯಮೃದು ಮಂದಹಾಸ ಪೂರ್ಣೇಂದುವದನ ಸ್ಫುರಿ- ತೇಂದೀವರನಯನಾ ಇಂದಿನದಿನ ಸಕಲ ದೇಶದವರು ಮುದ- ದಿಂದ ನಾಟಿ ಭೈರವಿ ಶ್ರೀರಾಗಗ- ದ್ವಂದ್ವಗಳನು ಕೊಂಡಾಡುತಲಿಹರೊ 2 ಪಾಶಾಂಕುಶಗಳ ಕರದಿ ಹಿಡಿದು ನಿಜ- ದೋಷದೂರ ಗುರುರಾಮವಿಠಲನ ದಾಸರದಾಸ್ಯವನಿತ್ತು ಸದಾಸಂ- ತೋಷದಿಂದ ಪಾಲಿಸು ಎನ್ನನು ಸ- ರ್ವೇಶ ಮೋದಕ ಪ್ರಿಯ ವಿಘ್ನೇಶಾ 3
--------------
ಗುರುರಾಮವಿಠಲ