ಒಟ್ಟು 7546 ಕಡೆಗಳಲ್ಲಿ , 133 ದಾಸರು , 4390 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಕಲ ದಿವಿಜಾರಾಧ್ಯ ಚರಣ ಪ ಕಂದರ್ಪ ಕೋಟಿ ಮೋಹನ್ನ ಕಾಯಾ | ಕಂಸ ಚಾಣೂರ ಮರ್ದನಕಾಲಿಯ ವಿಷಕಲಿಲ ಸಲಿಲಯಾನಕಲಪ್ರಾಣ ಗೋಗೋಪ ಜೀವನಾ | ಈಯ್ಯಾ ಈಯ್ಯಾ || ಗೋಕುಲದಿ ಗೋಪಿಯರ ಮನೆಗಳಲಿ ಗೋರಸ ಚೌರ್ಯ ಸಂಪನ್ನಾ |ಮಧುರ ಮುರಲಿ ನಿನಾದದಿಂದ ಮೋಹಿಪ್ಪ ||ಮೌನಿಗಳ ಮಾನಸಗಳಲ್ಲಿ | ಸಸ ಸಾನಿಸಾನಿ ನಿಸನಿ |ನಿಸನಿ ಸಾಸನಿನಿ ಸರಿಗರಿ ಮಗಗರಿಸ ನಿಧನಿಧ ನಿಧಪಮ || ಧಿಕ್ಕತಾ ಧಿಕ್ಕತಾ ಧಿಮಿ ಧಿಮಿಕಿತಾ ಧಿಮಿಕಿತಾ ಗಿಕಿಟ ತೋಂ |ಗಿಕಿಟ ತೋಂ ಗಿದಿಗದಿಗ ಥೈಯಾ ಥೈಯಾ || ಪರಿ ನಂದನಂಗಳದಲ್ಲಿ ಕುಣಿಕುಣಿದಾಡುವ ಶ್ರೀವಿಠ್ಠಲನಪಾದಾಂಬುಜದ ಭಜನದಿಂದೆ ತರಿಸುವೆನೆಂದು ಪಾಡುವೆನುಗೀತ ಪ್ರಬಂಧ ಬರೆಹಗಾರ ರುಕ್ಮಾಂಗದನು ||
--------------
ರುಕ್ಮಾಂಗದರು
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಕಲಾರ್ಥಕಿದೆ ಸುಖ ಸಾಧಿಸಿನ್ನು ನೋಡಿ ಭಕುತಿ ಭಾವದಿಂದ ಸದ್ಗುರು ಸೇವೆಯ ಪೂರ್ಣಮಾಡಿ ಧ್ರುವ ಭಾವವಿಟ್ಟು ನೋಡಿ ಖೂನ ದೇವದೇವೇಶನ ಕಾವ ಕರುಣನೇ ತೋರುತಿಹ್ಯ ತಾ ನಿಧಾನ 1 ನೋಟ ನಿಜಮಾಡಿ ನೋಡಿ ನೀಟ ನಿಜ ಧ್ಯಾನ ಘಾಟ ತಿಳಿದವರಿಗಿದೆ ಗುರುಕೃಪೆಙÁ್ಞನ 2 ಸವಿದುಣ್ಣಬೇಕು ಇದೇ ಸವಿ ಸವಿಯಿಂದ ಆವಾಗ ಮಹಿಪತಿಗಿದೆ ನೋಡಿ ಬ್ರಹ್ಮಾನಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಕ್ಷಿಪ್ತ ವಿರಾಟಪರ್ವ ಕೇಳು ಜನಮೇಜಯರಾಜ ಭೂಮಿ- ಪಾಲ ಪಾಂಡವರ ಸತ್ಕಥೆಯಪ. ಭೂರಿ ವ- ನಾಳಿಯನು ಸಂಚರಿಸಿ ಸಜ್ಜನ ಕೇಳಿಯಲಿ ವನವಾಸದವಧಿಯ ಕಾಲವನು ಕಳೆಕಳೆದು ಬಂದರುಅ.ಪ. ದರ್ವೀಧರಹಸ್ತನಾಗಿ ಮಹಾ ಪರ್ವತದಂತುರೆ ಮಸಗಿ ನಿರ್ವಹಿಸಿ ಸೂದತ್ವವನು ಸಲೆ ಗರ್ವಿತಾಧಮ ಕೀಚಕನ ಕುಲ ಸರ್ವವನು ಸಂಹರಿಪ ಭೀಮ ಪೆ- ಸರ್ವಡೆದ ಗುರುವರ್ಯ ಬಂದನು 1 ಕಡುಗಲಿ ಕಲಿಮಲಧ್ವಂಸ ಎದ್ದು ನಡೆದು ಬಂದನು ಪರಮಹಂಸ ನಿಡುಕಿ ಮನದಿ ವಿರಾಟರಾಯನ ಪೊಡವಿಗಿಡೆ ಪದ ಕೀಚಕಾಖ್ಯನ ಎಡದ ಭುಜ ಕಂಪಿಸಿತು ಮೂಜಗ ದೊಡೆಯನುಡುಪತಿಕುಲಶಿಖಾಮಣಿ2 ಗಂಗಾದಿ ನದಿಗಳ ತೀರ ಪಟ್ಟ ಣಂಗಳ ಗೈದ ಸಂಚಾರ ತುಂಗಬಲ ಮಲ್ಲರುಗಳನು ಸಲೆ ಸಂಘಟಿಸಿ ಜೀಮೂತವೀರಪ್ಪ ಸಂಗದಲಿ ವೈರಾಟಪುರ ರಾ ಜಾಂಗಣಕೆ ಭದ್ರಾಂಗ ಬಂದನು3 ಇಂತು ಮಲ್ಲರನೆಲ್ಲ ಸದೆದು ಬಲ ವಂತರಿರಲು ನೃಪಗೊಲಿದು ಸಂತಸವ ಬಡಿಸುತ್ತಲಿರಲ್ವಾ ಕುಂತಿತನಯರು ಹರಿಯ ನಾಮವ ಚಿಂತಿಸುತ ದಶಮಾಸ ಕಳೆದಾ ನಂತರದ ವೃತ್ತಾಂತವೆಲ್ಲವ4 ಕಥೆಯಂತೆ ಹಿಂದೆ ರಾವಣನ ಕೆಟ್ಟ ಗತಿಗನುಚರ ಕೀಚಕನ ಸ್ಥಿತಿಯು ದ್ರುಪದಜೆಗಾದ ಮಾನ ಚ್ಯುತಿಗೆ ಕಾರಣನಾದ ಜಡ ದು- ರ್ಮತಿ ಖಳಾಧಮನೊಂದು ದಿನ ನೃಪ ಸತಿಸಭೆಗೆ ಅತಿ ಹಿತದಿ ಬಂದನು5 ಪಾಪಿ ಕೀಚಕನಿಗಿಂತುಸುರಿ ದ್ರುಪದ ಭೂಪಾಲಕನ ಕಿಶೋರಿ ಶ್ರೀಪತಿಯ ನಾಮವನು ಸ್ಮರಿಸುತ- ಲಾ ಪತಿವ್ರತೆ ತೊಲಗಲಂಗಜ ತಾಪತಪ್ತಾಂತಃಕರಣ ನಾ ಪರಿಯ ಮತಿ ವ್ಯಾಪಿಸಿದನು6 ಲಾಲಿಸಿ ಮಾಲಿನಿವಚನ ತೋಷ ತಾಳಿದ ದುರ್ಗುಣಸದನ ಕಾಲಪಾಶದಿ ಬಿಗಿವಡೆದು ಹೇ- ರಾಳ ಮುದಕೀಲಾಲ ಸಲೆ ಕ- ಲ್ಲೋಲಜಾಲದಿ ಮುಳುಗಿ ನರ್ತನ ಶಾಲೆಗಾಗಿ ಕರಾಳ ಬಂದನು7 ಮಥಿಸಿ ಕೀಚಕನ ಮಂಟಪದಿ ದ್ರುಪದ ಸುತೆಗೆ ತೋರಿಸಲತಿ ಮುದದಿ ಸತಿಶಿರೋಮಣಿ ಕಂಡು ಮನದೊಳ- ಗತುಳ ಹರುಷವನಾಂತು ಸರ್ವೋ ನ್ನತಭುಜನ ಚುಂಬಿಸಿದಳು ಪತಿ ವ್ರತೆಯರ ಶಿರೋರತುನೆ ಪಾವನೆ8 ಇತ್ತ ವಿರಾಟನಗರದ ಸರ್ವ ವೃತ್ತಾಂತವೆಲ್ಲವ ತಿಳಿದ ಧೂರ್ತ ದುರ್ಯೋಧನ ದುರಾಗ್ರಹ ಚಿತ್ತಗ್ರಹಿಸಿದ ಕಾರ್ಯಕಾರಣ ವೃತ್ತಿಯಲ್ಲಿ ಪಾಂಡವರು ನಿಜವೆಂ- ದಾಪ್ತಜನರೊಳು ವಿಸ್ತರಿಸಿದನು9 ಕರ್ಣ ದ್ರೋಣ ಕೃಪಾ ದ್ಯರು ಕೂಡಿ ಕುಜನಪ್ರವೀಣ ಪೊರಟ ಪರಮೋತ್ಸಾಹ ಸಾಹಸ ಭರತಿ ಕೌರವರಾಯ ಮತ್ಸ್ಯನ ಪುರವರ ಸಮೀಪದಿ ಸುಶರ್ಮನ ಕರೆದೊರೆದ ಭೂವರ ನಿರ್ಧರ10 ನುಡಿಯ ಕೇಳುತಲಿ ಸುಶರ್ಮ ನಿಜ ಪಡೆಯ ನೆರಹಿ ವೈರಿವರ್ಮ ದೃಢಕರಿಸಿ ದಿನಮಣಿಯು ಪಶ್ಚಿಮ- ಕಡಲ ಸಾರುವ ಸಮಯ ಗೋವ್ಗಳ ಪಿಡಿದು ಗೋಪರ ಕೆಡಹಿ ಬೊಬ್ಬಿ- ಟ್ಟೊಡನೊಡನೆ ಪಡಿಬಲವನರಸಿದ11 ಹಾರಿಸಿದನು ರಥ ಪಾರ್ಥ ನರ ನಾರಿವೇಷದ ಪುರುಷಾರ್ಥ ತೋರಿಸುವೆನೆಂಬುತ್ಸಾಹದೊಳು ಬ್ಬೇರಿ ಮನದೊಳು ಕೃಷ್ಣನಂಘ್ರಿಸ- ರೋರುಹಕೆ ಮಣಿದುತ್ತರನ ಸಹ ಸೇರಿ ನಗರದ್ವಾರ ದಾಟಿದ12 ಭೀತಿಯ ಬಿಡು ಬಾರೆಂದು ಪುರು ಹೂತಸುತನು ಎಳತಂದು ಘಾತಿಸುವೆ ರಿಪುಬಲವನೆಂದು ವ- ರೂಥದಲಿ ಕುಳ್ಳಿರಿಸಿ ನೃಪತನು ಜಾತಸಹ ಪಿತೃವನದ ಮಧ್ಯ ಶ- ಮೀತರುವಿನೆಡೆಗೋತು ಬಂದರು13 ಇಂತು ತಿಳಿಸುತಲರ್ಜುನನು ಬಲ ವಂತನು ಧನುಶರಗಳನು ತಾಂ ತವಕದಿಂ ಧರಿಸಿ ವಿಜಯ ಮ- ಹಾಂತ ವೀರಾವೇಶಭೂಷಣ ವಾಂತು ಶಂಖನಿನಾದದಿಂ ರಿಪು ತಿಂಥಿಣಿಯ ಭಯಭ್ರಾಂತಗೊಳಿಸಿದ 14 ಹೂಡಿ ಬಾಣವನುರ್ಜುನನು ಚೆಂ- ಡಾಡಿದ ರಿಪುಬಲವನ್ನು ಮೂಢ ದುರ್ಯೋಧನನ ಕಣೆಗಳ ಜೋಡಣೆಗಳಿಂ ಬಿಗಿದು ತನ್ನೋಶ ಮಾಡಿಕೊಂಡನು ಗೋಪಗೋವ್ಗಳ ನಾಡಲೇನದ ಪ್ರೌಢತನವನು15
--------------
ತುಪಾಕಿ ವೆಂಕಟರಮಣಾಚಾರ್ಯ
ಸಂಕ್ಷೇಪ ರಾಮಾಯಣ ಶ್ರೀಜಾನಕೀಮನೋಹರ ಚರಿತೆಯನು ಮುನಿ ರಾಜವಾಲ್ಮೀಕರಿಗೆ ನಾರದಂಪೇಳ್ದನದು ರಾಜೀವನೇತ್ರ ಪೇಳಿಸಿದಂತೆ ಸಂಕ್ಷೇಪದಿಂ ಪೇಳ್ವೆನಾಲಿಸುವುದು ವರಮುನಿಯಯಾಗಮಂ ಕಾಯ್ದುತಾಟಕಿಯಸಂ ಮುರಿದು ಭೂಸುತೆಯ ಕರಪಿಡಿದಯೋಧ್ಯಾಪುರಿಗೆ ಬರುತ ಭಾರ್ಗವನ ಗರ್ವವಸೆಳೆದು ತಂದೆಯಂ ಹರುಷಪೊಂದಿಸಿದಂರಘುದ್ವಹಂ ರಾಮಚಂದ್ರನು ಬಾಲಕಾಂಡದಲಿ 1 ಮಾತೆಯನುಡಿಗೆ ಪಿತನಭಾಷೆಯಂ ಸಲಿಸಲ್ಕೆ ತಾತಮ್ಮಲಕ್ಷ್ಮಣ ಧರಾತ್ಮಜೆಯರ್ಸಹಿತ ಪ್ರ ಭರತಬಂದು ಜಾತಂಗೆ ಪಾದುಕವನಿತ್ತು ಮನ್ನಿಸಿಮುನಿ ರಘುವರನಯೋಧ್ಯಾಕಾಂಡದಿ 2 ದಂಡಕಾರಣ್ಯದಿ ವಿರಾಧನಂ ಸಂಹರಿಸಿ ಚಂಡಿ ಶೂರ್ಪಣಖಿ ಕಿವಿಮೂಗನಂ ಕೊಯಿಸಿಯು ಮಾಯಾಮೃಗದವ್ಯಾಜದಿಂ ರಾವಣಂ ಕೊಂಡೊಯ್ಯೆಸೀತೆಯಂಅರುಣಸುತನಿಂದಕೋ ದೀಕ್ಷಾಚಾರ್ಯ ಕೇಳ್ದಸತಿವಾರ್ತೆಯಂ ಕಂಡು ಶಬರಿಯನು ಪಂಪಾತಟಕೆಬಂದ ನಾರಣ್ಯಕಾಂಡದೊಳ್ರಾಮನು 3 ಮರುತಾತ್ಮಜನಕಂಡು ಸುಗ್ರೀವಸಖ್ಯವಾ ಚರಿಸಿ ವಾಲಿಯ ಮುರಿದು ಕಪಿರಾಜ್ಯದೋಳ್ ದಿವಾ ಸೀತೆಯಕುಶಳವಂತಹುದೆನೆ ತೆರಳಲು ಚತುರ್ದಿಕ್ಕಿಗಾಗವಾನರರುಮೂ ವರುಬಂದುಪೇಳ್ದರೆಲ್ಲಿಯು ಕಾಣೆವೆಂದು ವನ ಕಿಷ್ಕಿಂಧಕಾಂಡದಲಿ 4 ಶರಧಿಯದಾಟಿ ಲಂಕೆಯ ಪೊಕ್ಕುಲಂಕಿನಿಯ ಮುರಿದು ಪುರವೆಲ್ಲಮುಂ ತಿರುಗಿವನದೊಳಗೆರಘು ವನಭಂಗಮಂಗೈಯ್ಯುತ ಪರಮ ಸಂಭ್ರಮದೊಳಕ್ಷಾದ್ಯರಂಕೊಂದುವಿಧಿ ಶರಕೆ ಮೈಗೊಟ್ಟುಲಮಂಕಾಪುರವಸುಟ್ಟುಬಂ ಪತಿಗೆಸುಂದರಕಾಂಡದಲ್ಲಿ ಹನುಮಾ 5 ವನಧಿಯೊಳ್ಸೇತುವೆಯಗಟ್ಟಿ ಧುರದೊಳಗೆರಾ ವಣ ಕುಂಭಕರ್ಣಾದ್ಯರೆಲ್ಲರಂ ಸದೆದುತ ಪೊಗಳಲು ಜನಕನಂದನೆಯ ಪಾವಕನಿಂ ಪರಿಗ್ರಹಿಸಿ ಘನಪುಷ್ಪಕವನೇರಿಬರುತ ವಹಿಲದಲಿ ಭರ ಯುದ್ಧಕಾಂಡದಲಿ 6 ಪರಮಧರ್ಮದಲಿ ರಾಜ್ಯವಾಳುತಲಿ ಕಲಿರಾಮಭೂ ವರನು ಹನ್ನೊಂದುಸಾವಿರಲವಣನಂ ಪುತ್ರರಿಗೆ ರಾಜ್ಯವಿತ್ತು ಪುರಜನವ ಪಶುಪಕ್ಷಿ ಕೀಟವ್ರಜ ಸಹಿತ ತೆರಳಿದಂದಿವಿಗೆದೇವರ್ಕಳರಳಿನಮಳೆಯ ಸುರಿದು ಜಯಜಯವೆಂದು ಪೊಗಳಿದರುಹರಿ ಯನುತ್ತರಕಾಂಡದಲಿ ತಿಳಿವದು 7 ಇಪ್ಪತ್ತುನಾಲ್ಕುಸಾವಿರ ಶ್ಲೋಕ ಕಾಂಡಗ ಳೊಪ್ಪುವುದು ಸಪ್ತವೈನೂರುಸರ್ಗಗಳೆಂದು ವಾಲ್ಮೀಕಿ ಮುನಿವಿರಚಿಸಿದನು ತಪ್ಪದೇ ಪಠಿಸುವಗಮುದಿನಂ ಗಾಯತ್ರಿ ಇಪ್ಪತ್ತು ನಾಲ್ಕುಲಕ್ಷದ ಜಪದಫಲಬಹುದು ಚರಿತಸಜ್ಜನ ಕಲ್ಪವೃಕ್ಷವಿದುವೆ 8 ಇಂತಪ್ಪ ಮಹಿಮೆಯುಳ್ಳೀಕಥೆಯ ಸಂಕ್ಷೇಪ ದಿಂ ತರಳನಾಂ ಪೇಳ್ದೆತಪ್ಪಿದ್ದಡೆಯು ತಿದ್ದಿ ಸೇವಕಂಸೇವ್ಯನವನು ಎಂತಾದಡೆಯು ಹರಿಯನಾಮಾಮೃತದರುಚಿಮ ಹಾಂತರರಿವರು ದುರ್ಜನರು ನಿಂದಿಸಿದಡೇನು ಸಂಕ್ಷೇಪರಾಮಾಯಣಂ 9
--------------
ಗುರುರಾಮವಿಠಲ
ಸಖಿ ಕೇಳೇ ಇನ್ನು ಹರುಷದ ಮಾತಾ| ಸಕಲ ಜನರಿಗೆ ಆನಂದ ವೀವಾ| ಪ ಇಂತೆಂದು ಹರಿಯು ನಾನಾಪರಿ ವಿರಹದ| ಸಂತಾಪ ಮಾತವ ನುಡಿಯಲು ಕೇಳಿ| ಅಂತರಂಗದ ಕೋಪವಬಿಟ್ಟು ಎದ್ದು|ಅ| ನಂತನ ಬಿಗಿದಪ್ಪಿದಳು ಅಂಬುಜಾಕ್ಷಿ 1 ಲಲಿತಾಂಗಿ ಆಲಿಂಗನವ ನೀಯೇ ಹರಿಗಾಗಾ| ಒಲಿದು ಉಕ್ಕೇರಿತು ಆನಂದ ಉದಧಿ| ಸತಿ ಮಾತಾಡುವ ದೇವ ಶ್ರೀ| ಲಲನೇಯಾ ಸದ್ಬುವನೆಯಾ ಪೂರಿಸಿದನು 2 ಈ ಪರಿಯಾಡಿದ ಶ್ರೀ ಹರಿ ಚರಿತೆಯಾ| ನಾ ಪೇಳಿದುದು ಭಾವ ಭಕುತಿಯಲಿಂದಾ| ಆ ಪದಿಂದಲಿ ಕೊಂಡಾಡುವ ಮನುಜನ| ತಾ ಪಾಲಿಸುವಾ ಮಹಿಪತಿ ಸುತ ಪ್ರೀಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಖಿ ಬಾರೆ ಬಾರೆ ಬೆಡಗತೋರೆ ನಡೆದು ಬಾರೆಲೆ ಸುಖದ ಸುಗ್ಗಿಯಿದೆಂದು ಸಾರೆ ಭ್ರಮರಕುಂತಲೆ ಪ. ಜಲಜಮುಖಿಯೆ ನಲಿದುಬಾರೆ ಕೋಲವಾಡುವ ಕಲಕೀರಕಂಠದಿಂದ ನಾವು ನಲಿದು ಪಾಡುವ 1 ಇಳೆಯ ಸುಖದ ಗೆಳೆಯ ಬಂದ ಬಳಿರೆ ಬಾಪುರೆ ಬೆಳಗುತಿರ್ಪ ದೀಪಾವಳಿಯೆ ಬಲಿಯ ಕೀರ್ತಿಯೆ 2 ವಿಜಯಯಾತ್ರೆಗೆಂದು ಹರಕೆಯೆತ್ತಿ ಭರದಲಿ ಅಜಸುರಾರ್ಚಿತಾಂಘ್ರಿಯುಗನ ಭಜಿಸಿಮುದದಲಿ 3 ನೀರನೆಮಗೆ ಮಾರತಾತನೆಂದು ಸಾರುವಾ ಶಾರದಾಗಮ ಸಮಯವಿದನು ಸಾರಿಯಾಡುವಾ 4 ಶೇಷಶೈಲಶಿಖರ ಧಾಮನೆಮ್ಮ ಮೆಚ್ಚುವೋಲ್ ಮೀಸಲೆತ್ತಿಯೊಸಗೆ ಪೇಳಿ ಪೊಸತಿದೆನ್ನುವೋಲ್ 5
--------------
ನಂಜನಗೂಡು ತಿರುಮಲಾಂಬಾ
ಸಖಿಯೆ ಲಾಲಿಸು ಎನ್ನ ಸಖನ ವರ್ಣಿಪೆ ಮುನ್ನ ಸುಖದಾತ ಸುಂದರನ ಪ್ರಾಣಸಖನ ಕಡುದೈನ್ಯದಿಂದೆರೆಯಲೊಡನೆ ಬಂದು ವೇದಗಳ್ಳನು ಪೋದ ಹಾದಿಯನೆ ತಾ ಪಿಡಿದು ವಾರ್ಧಿಯೊಳ್ಮುಳುಗಿ ಸಮ್ಮೋದದಿಂದ ಕ್ರೋಧಿರಕ್ಕಸನುರವ ಛೇದಿಸುತೆ ವೇದವ ನ್ನಾದರಿಸಿ ತಂದೀಯುತ ಜಗಕೆನಲವಿಂ ನಿರ್ಮಾಣ ಕಾರ್ಯದೋಳ್ ನಿಯಮಿಸಿದನಾ ಸ್ವರ್ಣಗರ್ಭನನಂತು ಮೀನನಾಗಿ ಅರ್ಣವದಿ ನೆಲೆಯಾಗಿ ನಿಂತ ಸುಗುಣ
--------------
ನಂಜನಗೂಡು ತಿರುಮಲಾಂಬಾ
ಸಂಗ ವಿಡಿ ವಿಡಿ ಸಾಧು ಸಂಗ ವಿಡಿ ವಿಡಿ | ಸಂಗ ವಿಡಿಯಂಗದೊಳಗ | ಮಂಗಳುತ್ಸಾಹ ದೋರುವರಾ ಪ ಹರಿಪದ ಪರಾಗ ನುಂಡು | ಹರುಷವೇರಿ ಭವಶರಧಿಗೆ | ಹರಿಯ ಭಕುತಿ ಸೇತುಗಟ್ಟಿ | ತೋರಿಸಿ ಜನರ ತಾರಿಸುವರ 1 ವೇದ ಶಾಸ್ತ್ರಸಾರವಾದ | ಬೋಧ ಸುಧೆಯ ವೆರದು ಮರದು | ಹಾದಿದೋರಿ ಮನಕ ಗತಿಯ | ಸಾಧನವನು ಬೀರುವರ 2 ಹ್ಯಾವ ಹೆಮ್ಮೆ ಬಿಡಿಸಿ ಸಮ್ಮತಿ | ಭಾವದಿಂದ ಮಹಿಪತಿ ಸ್ವಾಮಿಯಾ | ಸಾವಧಾನದಿಂದಲಿ ಜಗತೀ | ವಲಯದೊಳರಹಿಸುವರು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಗಬೇಡವೈ ಆಶಾ ಪ ಸಂಗದಿಂದ ನಿನಗೆ ಅಂಗವೇ ಭಂಗವಾಹುದೈ ಅ.ಪ ಇದ್ದ ಕಡೆ ಇರಲೀಸದು | ಅ ಶುದ್ಧ ಮನುಜನಾದರೆಯು ಅ - ವಿದ್ಯದಿ ಮುಳುಗಿಸುವುದು 1 ನೋಡಿದುದು ಬಯಸುವುದು | ಬಲು ಮೋಡಿಯಿಂ ತಿರುಗಿಸುವುದು ಮಾಡಿಸಿ ಮಾಡಿಸಿ ದಣಿಸುವುದು 2 ಹಣವಿದ್ದರು ಕಳೆವುದು | ದುರ್ ಮನದಿ ಸಾಲ ಮಾಡಿಸುವುದು ಗುಣಿಯಲಿ ದುರ್ಗುಣವೇ ಕಾಣಿಸಿ ಹೆಣಕೆ ಸಮವೆಂದೆನಿಸುವುದು 3 ಬೋಧೆಯ ಕೇಳಲೀಯದು | ಮನೋ ವ್ಯಾಧಿಯಲ್ಲಿ ಕೃಶಿಸುವುದು ಹಾದಿ ಹೋಕರ ಕಂಡವರಂತೆ ಸಾಧನವ ಮಾಡಿಸುವುದು 4 ಅನ್ನಬಾರದನ್ನಿಸುವುದು ತಿನ್ನಬಾರದ್ದು ತಿನ್ನಿಸುವುದು ನನ್ನದೂ ನಾನೆಂಬ ಗರ್ವದಿ ಇನ್ನೂ ಮುನ್ನೆ ಕೆಡಿಸುವುದು 5 ಆಗೋ ಕಾರ್ಯ ಮಾಡಲೀಯದು ಹೋಗದೂರಿಗೇ ಹೊರಡಿಸುವುದು ಭೋಗಗಳೊಳಪೇಕ್ಷೆ ಪುಟ್ಟಿಸಿ ರೋಗದಿ ಬಳಲಿಸುವುದು 6 ಕೋಪಾದಿಗಳು ಹೆಚ್ಚುವುದು ಪಾಪಬುದ್ದಿ ಪುಟ್ಟುವುದು ಶರಣರಿಗಿದು ಸಲ್ಲದು 7
--------------
ಗುರುರಾಮವಿಠಲ
ಸಂಗಮಾಡೆಲೋ ಶ್ರೀಹರಿ ದಾಸರಾ ಹಿಂಗಿ ಹೋಹುದು ತಾಭವದಾಸರಾ ಮಂಗಳ ಮಂಗಳಾತ್ಮಕ ಕೈಗೂಡಿ ಬಾಹನು ಅಂಗಜ ಜನಕ ಸಚತುರ್ಬಾಹನು 1 ಅವರ ವಾಕ್ಯ ಸುಧಾರಸ ಪಾನವಾ ಶ್ರವಣದಿಂದಲಿ ಮಾಡೆಲೊ ಪಾನವಾ ಭವದ ಜನ್ಮ ಜರಾಲಯ ಜಾರುವೀ ತವಕದಿಂದ ಚಿತ್ಸುಖ ಸೇರುವಿ 2 ಹಲವು ಸಾಧನಭರಿಗೆ ಬೀಳದೇ ಕಲಿತ ವಿದ್ಯತ್ವ ಗರ್ವವ ತಾಳದೇ ಬಲಿದು ಭಕ್ತಿಯ ಹೋಗದೆ ಸಿಂತರಾ ನೆಲಿಯ ಕೇಳೆಲೋಭಾವದಿ ಸಂತರಾ 3 ಮರಹು ಕತ್ತಲಿವೆಂಬುದು ಹಾರಿಸೀ ಅರಿಗಳಾರರೆ ಸಂಕಟ ಹಾರಿಸೀ ಅರಹು ಭಾಸ್ಕರ ತೋರುವ ಬೋಧಿಸಿ ಹೊರವ ಸಜ್ಜನ ಸಂಗವ ಸಾಧಿಸಿ 4 ನೆಲಿಯ ಹೊಂದುವ ಪರಿಯನಿಲ್ಲದೇ ಸುಲಭಸಾಧನ ತೋರಿಪರಲ್ಲದೇ ಬಳಲುವಾಬಾಹಳ ಸಾಪೇಳರು ಬಲಿದು ಪಾಯವ ಸಂತರ ಕೇಳರು 5 ಹರಿಕಥಾ ಮೃತಸಾರಸ ಪೇಳುತಾ ದುರಿತ ದುಷ್ಕøತ ತರುಗಳ ಶೀಳುತಾ ಪರಮ ಭಕ್ತಿಯ ಭಾಗ್ಯವ ಕುಡುವರು ಅರಿತು ಸಂತರ ಸಂಗವ ಬಿಡುವರು 6 ಏಳು ಭೂಮಿಕಿ ಮಾರ್ಗವ ತೋರಿಸಿ ಮಾಲ ಚಿತ್ಸುಖ ಮಂದಿರ ಸೇರಿಸಿ ಕಾಲಕರ್ಮದ ಕೋಟಲೆ ವಾರಿಸೀ ಪಾಲಿಸುವರು ಭವದಿಂತಾರಿಸಿ 7 ಸಂಗದಿಂ ಚಂದನಾಹದು ಪಾಮರಾ ಜಂಗಮೊತ್ತಮನಾಗನೇಪಾಮರಾ ಅಂಗದಿಂಮಾಡು ಸಂತರ ವಂದನಾ ಇಂಗಿಥೇಳಿದ ಮಹಿಪತಿ ನಂದನಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂಗವಾಗಲಿ ಸಾಧು ಸಂಗವಾಗಲಿ ಪ ಸಂಗದಿಂದ ಲಿಂಗದೇಹ ಭಂಗವಾಗಲಿ ಅ.ಪ ಅಚ್ಚುತಾಂಘ್ರಿ ನಿಷ್ಠರ ಯದೃಚ್ಛ ಲಾಭ ತುಷ್ಟರನಿಶ್ಚಯಾತ್ಮ ಜ್ಞಾನವುಳ್ಳ ಅಚ್ಚ ಭಾಗವತರ1 ಸಾರ ಮೂರ್ತಿ ತಿಳಿದವರ2 ಪಂಚಭೇದ ಸಂಸ್ಕಾರ ಪಂಚ ಭೂತಾತ್ಮವಾದಪಂಚಭೇದ ಕೃಷúರಾಯನ ಪಂಚಮೂರ್ತಿ ತಿಳಿದವರ 3
--------------
ವ್ಯಾಸರಾಯರು
ಸಂಗಸುಖವ ಬಯಸಿ ಬದುಕಿರೋ ರಂಗವಲಿದ ಭಾಗವತರ ಪ ಸಂಗಸುಖವ ಬಯಸಿ ಬದುಕಿ ಭಂಗಪಡಿಪ ಭವವ ನೂಕಿ ಹಿಂಗದೇ ನರಸಿಂಗನನ್ನು ಕಂಗಳಿಂದ ಕಾಣುತಿಹರ ಅ.ಪ. ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ನಿತ್ಯ ಮುದ್ದು ಕೃಷ್ಣ ಕೀರ್ತನೆಯನು ಪಾಡುತ ಕಾವ್ಯಕರ್ಮ ಬಿಟ್ಟು ಭಕ್ತಿಯನೆ ಮಾಡುತ ಮಧ್ವಮತವ ಪುಷ್ಟಿಗೈಸಿ ಖಳರ ಕಾಡುತ ಬಂದ ಲಾಭ ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು 1 ಭೂತದಯಾಶೀಲರಾದ ನೀತ ಗುರು ಜಗ- ನ್ನಾಥ ವಿಠಲಾಂಕಿತವನು ಪಡೆದು ಸಂಗೀತ ವೃತ್ತ ಪದ ಸುಳಾದಿಯ ಪೇಳಿ ಪ್ರೇ- ಮಾತಿಶಯದಿ ಒಲಿಸಿಕೊಂಡು ಮಧುವಿರೋಧಿಯ ಒಲಿಸಿಕೊಂಡ ಜಾತರಾಗಿ ಜವನಬಾಧೆಯ ಬಯಲು ಮಾಡಿ ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮರೆಯಸಲ್ಲ 2 ಮೇದಿನಿಯೊಳಗುಳ್ಳ ಗಂಗಾದಿತೀರ್ಥ ಸತಿಗಳಿವರ ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ- ಸಾದದಿಂದ ಹರಿಕಾಥಾಮೃತ ಸಾರತತ್ವ ಸಾಧುಜನರಿಗಾಗಿ ಪ್ರಾಕೃತ ಪದ್ಧತಿಯಲಿ ಸಾದರದಲಿ ಪೇಳಿ ದುಷ್ಕøತ ದೂರಮಾಡಿ ಮೋದಿಸುವರಿಗೆಣೆಗಾಣೆ ಶ್ರೀದವಿಠಲನಾಣೆ 3
--------------
ಶ್ರೀದವಿಠಲರು
ಸಚ್ಚಿದಾನಂದಾತ್ಮ ಪರಿಪಾಹಿ ಪಾಹಿ ಪರಮಾತ್ಮ ಪ ಸಚ್ಚಿದಾನಂದಾತ್ಮ ಮುಕುಂದ ಅಚ್ಯುತಾನಂತ ಗೋವಿಂದ ಆನಂದಾ ಅ.ಪ ಜನರುದ್ಧಾರ ನೀರಜಾಂಡ- ಚರ ಬಾಹಿರಾಂತರ ನಿರುತ ಚರಾಚರದೊಳಗೆ ಸಂಚಾರಾ ಗಂಭೀರ ಗಂಭೀರ ಗಂಭೀರ ವಾರಿವಿಹಾರ ಮಂದರೋದ್ಧಾರಾ ಧರಣಿಸೂಕರ ನರಮೃಗಾಕಾರ ಯಾಚಕ ಧೀರ ನರಪರ ಶಿರತರಿದೆತ್ತಿ ಬಿಲ್ಲನು ದಶಕತ್ತನು ಕ್ಷಣದೊಳು ಕ- ತ್ತರಿಸಿ ತುರುಗಳ ಕಾಯ್ದ ಬತ್ತಲೆ ನಿಂದ ತೊರೆಯುತ ಬಂದ ಗೋವಿಂದಾ ಈ ಭೂ- ಧರದೊಳು ನಲವಿಂದ ಕ್ರೀಡಿಪ ಪರಿಪರಿಯಿಂದ ಸುರಮುನಿಗಣ ಸಂಸ್ತುತಿಯಿಂದ ಗೋವಿಂದ ಗೋವಿಂದ 1 ಕಾಂತಾ ಕಾಂತಾ ಕಾಂತಾ ಕಾಂತಾ ಜಗದಾ- ದ್ಯಂತ ನಿರುತ ನಿಶ್ಚಿಂತ ಗುಣಗಣಭರಿತ ಸಂತತ ನಿನ್ನ ವಾಕ್ ತಂತಿನಾಮ ಧಾಮದಿ ಈ ಜಗ ಬಂಧಿಸಿಹುದು ಆದ್ಯಂತ ಶ್ರೀಕಾಂತ ಶ್ರೀಕಾಂತ ಶ್ರೀಕಾಂತ ಶ್ರೀಕಾಂತ ಶ್ರೀಕಾಂತಾ ಶ್ರೀಕರಾರ್ಚಿತತ್ರಿಗುಣವರ್ಜಿತ ಅನುಪಮಚರಿತ ಆದ್ಯಂತರಹಿತ ಸ್ವರಸಸುಭೋಕ್ತ ಸ್ವಗತಭೇದವಿವರ್ಜಿತ ಅಚ್ಯುತ ಮಚ್ಛಕಚ್ಛಪಾದ್ಯಜಿತಾದಿರೂಪನಿ- ನ್ನಿಚ್ಚೆಯಂತೆ ಸಿರಿಮೆಚ್ಚಿಸಿ ನಿನ್ನ ವಿಚಿತ್ರಕರ್ಮಗಳ ನಿಚ್ಚದಿ ನೋಡಿ ನಲವಿಂದ ಈ ಸೃಷ್ಟಿಲೀಲೆ- ಯ ಚಂದಾ ಚತುಷ್ಟಾತು ನಿನ್ನಯ ದಯದಿಂದ ಈ ಜಗಬಂಧಕ ಶಕುತಿ ನಿನ್ನಿಂದ ಗೋವಿಂದ 2 ದೇವ ದೇವ ದೇವ ದೇವಾದಿವಿಜಯವಂದ್ಯಸ್ವಭಾವ ದೇವ ನಿಜಸದ್ಭಾವ ಭಜಕರ ಕಾವ ಅಭಯವ- ನೀವ ವಿಶ್ವಾದಿ ರೂಪದಿಂದ ಜೀವರ ಭೋ- ಗಾವಸ್ಥಾತ್ರಯದಲಿ ನಡೆಸುತ್ತಿರುವ ಭೂ ದೇವ ಶ್ರೀ- ದೇವ ಭೂದೇವ ದುರ್ಗಾಧವ-ದುರ್ಗಾಧವಾ ನೀವ್ಯಾಪ್ತನು ಸರ್ವ-ತತುವರ ಕ್ರಿ- ಯವಾ ಪ್ರೇರಿಸಿ ನಡೆವ ದೇವ ವ್ಯಾಪಾ ರವ ಮಾಡಿ ಮಾಡಿಸಿ ಎತ್ತಲು ಚೇತನಚಿ- ತ್ತವಿತ್ತು ಪ್ರವೃತ್ತಿಗೈಸಿ ಫಲವಿತ್ತು ಜನು- ಮವ ಸುತ್ತಿಸುತ್ತಿಸಿತಂದಿತ್ತಪೆ ಶ್ರೀಪುರುಷೋತ್ತಮ ನೀನಿರ್ಲಿಪ್ತ ನೀನಂಚಿತ್ಯ ಅನಂತ ಶ್ರೀ ವೇಂಕಟೇಶ ನಿನ್ನಂಥ ಪೊರೆವರಕಾಣೆ ಉನ್ನಂತ ಉರಗಾದ್ರಿವಾಸವಿಠಲ ಶಾಂತ ಮಹಂತ3
--------------
ಉರಗಾದ್ರಿವಾಸವಿಠಲದಾಸರು
ಸಂಜೀವ ದೀಪ್ತಿಪೂರ್ಣ ಪ. ದೇವ ದೇವರದೇವ ನೀನಹುದೊದೇವಕಿಯೊಳವತರಿಸಿ ಗೋಕುಲವನ್ನುಪಾವನ ಮಾಡಿ ಮಡುಹಿಮಾವನ ಮಧುರಾವನಿಯ ಉಗ್ರಸೇನನಿಗಿತ್ತು ದೈ -ತ್ಯಾವಳಿಯ ಸವರಿಜೀವಸಖನಾಗಿ ಪಾಂಡವರೊಳ್ಪಾರ್ಥಸೇವೆ ಕೈಕೊಂಡು ತರಿದು ಕೌರವರ ದ್ವಾ-ರಾವತಿಯಿಂದ ಹಯಮೇಧಕ್ಕೆ ಬಂದದೇವ ನೀನಹುದೊ 1 ಧರ್ಮಾರ್ಜುನರೆಜ್ಞತುರಗರಕ್ಷಕ ಕೃತ-ವರ್ಮಾದ್ಯರುಗೂಡಿ ನಡೆದು ನಿಲ್ಲುತ್ತಮರ್ಮವರಿದು ಮುರಿದು ಹಂಸಧ್ವಜನಧರ್ಮವನು ತಡೆದುಕರ್ಮವಶದಿಂದ ಬಭ್ರುವಾಹನ ಕೈಯ್ಯಾದುರ್ಮರಣವಾದ ವಿಜಯ ಕರ್ಣಾತ್ಮಜಗೆಪೆರ್ಮೆಯಿಂದಸುವಿತ್ತು ಪೊರೆದ ನಿತ್ಯನಿರ್ಮಲಾತ್ಮನಹುದೊ2 ಪಿಂತೆಬಾಹರ್ಜುನರ ಕಂಡು ತಾಮ್ರಧ್ವ -ಜಂ ತಡೆಯೆ ಬಡದ್ವಿಜನಾಗಿ ಶಿಖಿಕೇತು-ವಂ ತಾನು ಬೇಡಿ ವೀರವರ್ಮನ ಗೆಲಿದುಕುಂತಳೇಂದ್ರಗೊಲಿದುದÀಂತಿಪುರಕ್ಕವರನು ತಂದು ಹಯಮೇಧವಂತು ಮಾಡಿಸಿ ಮೈದುನರ ಕಾಯ್ದಹೊಂತಕಾರಿ ಹಯವದನನೆ ಶ್ರೀ ಲಕ್ಷೀ -ಕಾಂತ ನೀನಹುದೊ 3
--------------
ವಾದಿರಾಜ