ಒಟ್ಟು 8021 ಕಡೆಗಳಲ್ಲಿ , 132 ದಾಸರು , 4501 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಗುರುವರ್ಯರಿಗೆ ಜಯಮಂಗಳ ನಿತ್ಯ ಭೋಗಿಶಯನಪ್ರಿಯಗೆ ಶುಭಮಂಗಳ ಪ. ಆನಂದರತ್ನರು ಜ್ಞಾನಪ್ರಕಾಶ ಎಂದು ನಾನಾ ವಿಧದಿ ಬಿರುದು ಪೊತ್ತವಗೆ ಶ್ರೀನಿವಾಸನನು ಧ್ಯಾನವ ಮಾಳ್ಪಂಥ ಜ್ಞಾನಪೂರ್ಣರಾದ ಗುರುಗಳಿಗೆ 1 ಪರಮಪ್ರಿಯರು ಪರಿಮಳರೆಂದೆನಿಸುತ ಪರಿ ನಾಮವ ಧರಿಸಿಹಗೆ ನರಸಿಂಹನನು ಹೃತ್ಸರಸಿಜದಲಿ ಕಂಡು ಹರುಷವ ಪಡುವಂಥ ಗುರುಗಳಿಗೆ 2 ತಂದೆ ಮುದ್ದುಮೋಹನವಿಠ್ಠಲನೆಂಬಂಕಿತ ಚಂದದಿಂದ ಗುರುಗಳಿಂ ಪಡೆದವಗೆ ಬಂದ ಭಕ್ತರಿಗೆಲ್ಲ ಅಂಕಿತಕೊಟ್ಟು ಭವ ಬಂಧನವ ಬಿಡಿಸುವ ಗುರುಗಳಿಗೆ 3 ಚಂದ್ರನ ತೆರದಿ ಪರಮಾರ್ಥ ಚಂದ್ರೋದಯವ ನಿರ್ಮಿಸುವರಿಗೆ ಚಂದದಿಂದ ಪರತತ್ವ ಪೇಳುವ ಸುಂದರ ಮೂರುತಿ ಗುರುಗಳಿಗೆ 4 ಅಪಾರ ಕರುಣಾಜಲಧಿ ಎಂದೆನಿಪರಿಗೆ ಶ್ರೀಪತಿ ಪಾದವ ತೋರ್ವಂಗೆ ಗೋಪಾಲಕೃಷ್ಣವಿಠ್ಠಲನ ಧ್ಯಾನವನಿತ್ತುಕಾಪಾಡುವಂಥ ಶ್ರೀ ಗುರುಗಳಿಗೆ 5
--------------
ಅಂಬಾಬಾಯಿ
ಶ್ರೀ ಗುರುವಿನ ಮನೆಯ ಮುಂದಣ ಬಾಗಿಲ ಕಾಯ್ದಿರುವೆ ಪ ತ್ಯಾಗಿಸಿ ಸಂಸಾರಾ ಶ್ರೀ ಗುರುವಿನ ಯೋಗಾಸನವಹೆನು ಅ.ಪ. ಕೊಪ್ಪರಿಗೆಯಾಗಿಹೆ ನಾನು ಜಲಹರಿಯಾಗಿಹೆ ನಾನು ಗುರುವಿನ ಚರಣಾಲಂಕರಿಸುವ ಕೇತಕಿ ಗರಿಯಾಗಿದೆ ನಾನು ಗುರು ಮಂತ್ರವನುಚ್ಚರಿಸಿ ಜಪಿಸುವ ಸರವಾಗಿಹೆ ನಾನು 1 ಗುರುವಿನ ಕೊರಳೊಳಗಿಹ ರುದ್ರಾಕ್ಷದ ಸರವಾಗಿಹೆ ನಾನು ಭರಣಿಯಾಗಿಹೆ ನಾನು ಘಟ ಪರಿಯಾಗಿಹೆ ನಾನು ಗುರುವಿನ ಭುಂಜಿಸಿ ಮಿಕ್ಕ ಪ್ರಸಾದಕೆ ಗುರಿಯಾಗಿದೆ ನಾನು2 ನಡೆವ ಹಾವಿಗೆಯಾಗಿಹೆ ನಾನು ಮಿಗೆ ನಿರ್ಮಲದೊಳು ಪವಡಿಸುತ್ತಿಹ ಹಾಸಿಗೆಯಾಗಿಹೆ ನಾನು ಹೊರಜರುಲಿಯ ಸಾರಿಹೆ ನಾನು ಜಗದೀಶ್ವರ ವಿಮಲಾನಂದ ಗುರುವಿಗೆ ಮಗನಾಗಿಹೆ ನಾನು 3
--------------
ಭಟಕಳ ಅಪ್ಪಯ್ಯ
ಶ್ರೀ ಗುರುವೇ ನೀ ತೋರಿಸೋ ದಯದಿಂದ ಲೆನಗೆ | ಬೇಗದಿ ಬಂದೆನ್ನ ದೇವನೀಗ ಪ ತೈಲ ಯಂತ್ರ ದೊಳಿಪ ಪಶುವಿನಂದದಿ ಜೀಯಾ | ಹಲವು ಜನ್ಮವ ತಾಳಿದೆನಯ್ಯಾ 1 ನಿನ್ನ ಸ್ಮರಣೆ ಮರೆದು ನಾನಾ ಉಪಾಸನೆ ವಿಡಿದು | ಬನ್ನ ಬಟ್ಟೆನೋ ಯಚ್ಚರ ಜರಿದು2 ಭವ ಬಂಧನ ಹರಿವಾ | ಸೂರೆಗೊಳಲಿಲ್ಲಾ ಭಕ್ತಿ ಸುಖವಾ3 ಸರ್ವಾಪರಾಧವಾ ಕ್ಷಮಿಸಿ ಯನ್ನುದ್ಧಾರವಾ | ಉರ್ವಿಲಿ ಮಾಡು ಪಿಡಿದು ಕರವಾ 4 ಇಹಪರ ಸಹಕಾರ ಕರುಣಾಬ್ದಿ ಪಾರಾವಾರಾ | ಮಹಿಪತಿ ಸುತ ಪ್ರಭು ಉದಾರಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗುರುವೇ ಮಹಾಮಹಿಮಾ ಪೂರ್ಣಾತ್ಮಸುಖಧಾಮಾ ಬಾಗಿ ನಮಿಪೆ ಪ್ರಶಾಂತಕಾಮಾ ಬೇಗ ನೀ ಬೋಧಿಸೈ ಅನುಭಾವಪೂರ್ಣ ಜ್ಞಾನದಾ ದಾರಿಯಾ ತೋರು ನೀ ದಯೆದೋರು ಜ್ಞಾನ ನಿಧಿಯೇ ವಂದಿಪೆ ಬೋಧಿಸೈ ಸಂಸಾರ ಘೋರವಾರಿಧಿ ದಾಂಟಿಪಾ ಧೀರ ನೀ ನಿಜರೂಪನಿಷ್ಠ ವಿಭುವೇ ವಂದಿಪೆ ಬೋಧಿಸೈ ಗುರುಸಾರ್ವಭೌಮ ನಿನ್ನ ಈ ಪಾದವಾ ನಂಬಿದೆ
--------------
ಶಂಕರಭಟ್ಟ ಅಗ್ನಿಹೋತ್ರಿ
ಶ್ರೀ ಗೋಪಾಲದಾಸರು ಕಾಪಾಡು ಕಾಪಾಡು | ಗೋಪಾಲರಾಯಾ ಪ ತಾಪತ್ರಯಗಳ ಕಳೆದು | ಶ್ರೀ ಪತಿಯ ತೋರಿಅ.ಪ. ಕಾಮಮದ ಮಾತ್ಸರ್ಯ ಸೀಮೆ ಮೀರುತ ಚರ್ಯಕಾಮಿಸುತ ಮನ್ಮನದ ಸೀಮೆಯೊಳು ನೆಲೆಸೀ |ನೇಮ ನಿಷ್ಠೆಗಳಳಿದು ಭೂಮಗುಣಿ ಸುಸ್ತವನಕಾಮನಕೆ ಪ್ರತಿ ಬಂಧ ಸ್ತೋಮದಂತಿಹುದೊ 1 ಕರ್ಮ ಕೆಸರ ಕಳೆಯುತಲೀ 2 ಭಕ್ತಿಸಾಕಾರಿ ಹರಿ | ಭಕ್ತಿ ಗುರು ಭಕ್ತಿಗಳವ್ಯಕ್ತಗೈವುದು ಮನದಿ ತ್ಯಕ್ತದೋಷಾದಿ |ಗುಪ್ತ ಮಹಿಮಾ ಗುರು ಗೋವಿಂದ ವಿಠ್ಠಲನವ್ಯಕ್ತ ಕಾಣುವ ಹದನ ಬಿತ್ತರಿಸೊ ಕರುಣಾ 3
--------------
ಗುರುಗೋವಿಂದವಿಠಲರು
ಶ್ರೀ ಗೋಪಾಲದಾಸರು ನಿನ್ನ ದಯದಿಂದಲೇ ಎನ್ನ ಜೀವನವು ಘನ್ನ ಗೋಪಾಲ ವಿಠ್ಠಲ ದಾಸರಾಯ ಪ ತುಂಗೆ ಕೃಷ್ಣೆ ಮಧ್ಯರಂಗ ಕ್ಷೇತ್ರದಿ ಮುದದಿ ತುಂಗ ವಿಜಯಾರ್ಯರ ಪದಂಗಳಿಗೆ ಎರಗಿ ಗಂಗೆಪಿತ ಮಾತಂಗ ವರದನಾಮನ ಅಂತ ರಂಗದಿ ನೋಡಿ ಗುಣಗಳನು ಪಾಡಿದೆಯೊ 1 ಅನುಜರಿಗು ಅಚಲ ಮಾತೆಗು ಶರಣು ಸುಜನರಿಗು ಮೌನಿ ಪಂಡಿತರಿಗೂ ಎನ್ನಂಥ ಪಾಮರಗು ಜ್ಞಾನ ಸುತತ್ವ ಸನ್ಮಾರ್ಗ ಬೋಧಿಸಿ ಜಗ ನ್ನಾಥನ ಮನಸಿನ ಅನುಭವಕೆ ತಂದೆ 2 ಬೇಸರದಿ ನಾ ಸೀತಾಪತಿಪಲ್ಲಿಯಲಿ ಮಲಗೆ ಏಸು ಕರುಣವೊ ದಾಸರಾಜ ನೀ ಬಂದು ವ್ಯಾಸಮುನಿಮಠ ಗುರುಪೂಜೆಗೆ ಕರೆದೊಯ್ದು ದಶಪ್ರಮತಿ ಭಾಷ್ಯಪಠನಾರ್ಚನೆಯ ತೋರಿಸಿದೆ 3 ಗೋ ಎನಲು ಗರುಡವಾಹನ ಪೀಡೆ ಪರಿಹರಿಪ ಪಾ ಎನಲು ಪರಮಪೂರುಷ ಪಾಲಿಸುವ ಲ ಎನಲು ಲಕ್ಷ್ಮೀಶ ನಿಖಿಳೇಷ್ಟಗಳನೀವ ಅನವರತ ಗೋಪಾಲದಾಸರಿಗೆ ಶರಣು 4 ಆನಂದಮುನಿಹೃಸ್ಥ ವನಜಸಂಭವಪಿತ ಪ್ರ ಸನ್ನ ಶ್ರೀನಿವಾಸ ಜಗನ್ನಾಥ ನಿನ್ನ ಪಾದ ಸಂಸ್ಮರಿಸುವ ಸುಜನರನು ಅನವರತ ಪಾಲಿಸುವ ಸಂದೇಹವಿಲ್ಲ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಗೋವಿಂದ ವಿಠಲನೆ | ಕಾಪಾಡ ಬೇಕಿವಳಾ ಪ ಹೇ ಗರುಡ ಧ್ವಜನೆ ಹರಿ | ನಿನ್ನ ಮೊರೆ ಹೊಕ್ಕವಳಾ ಅ.ಪ. ಪರಿ ಆಪನ್ನ ಪರಿಪಾಲಾ 1 ಲೌಕಿಕದ ಮಮತೆಗಳ | ನೀ ಕಡಿದು ಕಾಪಾಡೊಏಕಮೇವನ ದೇವ | ಪ್ರಾಕ್ಕು ಕರ್ಮವ ಕಳೆದುಭಕುತಿ ಜ್ಞಾನವನಿತ್ತು | ಕಾಪಾಡೊ ಹರಿಯೇಯುಕುತಿಯಲಿ ನಿನ್ನಂಥ | ದೇವರನ ಕಾಣಿಸಯ್ಯ 2 ಪಾಂಚ ಭೌತಿಕ ದೇಹ | ಅಸ್ಥಿರತೆ ತಿಳಿಸುತ್ತಪಂಚಾತ್ಮ ನಿನ ಧ್ಯಾನ | ಮಗ್ನಳೆಂದೆನಿಸೊ |ಸಂಚಿತಾಗಾಮಿಗಳ | ನಾಶ ಗೈಸುತಲಿತ್ತಕೊಂಚಮಾಡೊ ಪ್ರಾರಬ್ಧ | ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಶ್ರೀ ಗ್ರಂಥಮಾಲಿಕ ಮಧ್ವಸ್ತೋತ್ರ ಜಯ ಮಧ್ವ ಮುನಿರಾಯ ನಿನ್ನ ಚಾರು ತೋಯಜಾಂಘ್ರಿಯಲಿ ನಾ ಶರಣು ಅಹ ಮಾಯೇಶನಿಗೆ ಪ್ರಿಯ ಮುಖ್ಯಪ್ರಾಣನೇ ಎನ್ನ ಕರ್ಮ ದೋಷ ಮನ್ನಿಸಿ ಕಾಯೋ ಪ ಭಾವಿ ವಿರಂಚಿ ಮಹೋಜ ಜಯಾ - ದೇವಿ ಸಂಕರ್ಷಣ ತನೂಜ ಸೂತ್ರ ಸಂವಿದ್ ಬಲಾದಿ ಸುಭ್ರಾಜ ಶ್ರಧ್ಧಾ - ದೇವಿ ಹೃದಬ್ಜವಿರಾಜ ಅಹ ಇನಶಶಿ ಋಷಿಕುಲ ತಿಲಕ ಶ್ರೀವರನಂಘ್ರಿ ವನರುಹ ನಿಷ್ಠ ಹನುಮಭೀಮ ಮಧ್ವ 1 ಜಯತು ಶ್ರೀಹರಿ ರಾಮಚಂದ್ರ ಭಕ್ತ ಜಯದ ಮೋದದ ಅರ್ತಿಹಂತ ಕೃಷ್ಣ ಜಯತು ಕಾರುಣ್ಯ ಸಮುದ್ರ ಭಕ್ತ ಜಯದ ಕ್ಷೇಮದ ಜ್ಞಾನ ಸುಖದ ಅಹ ರಾಮವಚನ ಕಾರ್ಯರತ ಹನುಮಗೆ ನಮೋ ನಮೋ ಕುರುಕುಲ ಹರ ಭೀಮ ಕೃಷ್ಣೇಷ್ಟಗೆ 2 ಜಯತು ಶ್ರೀಹರಿ ವೇದವ್ಯಾಸ ಭಕ್ತ ಜಯದ ಹೃತ್ತಿಮಿರ ನಿರಾಸ ಮಾಳ್ಪ ಸೂರ್ಯ ಸ್ವಕಾಂತಿ ಪ್ರಕಾಶ ಮಧ್ವ - ರಾಯಗೆ ನಿಜಗುರು ಶ್ರೀಶ ಅಹ ವೈದಿಕಶಾಸ್ತ್ರದಿಂದಲೇ ವೇದ್ಯ ಶ್ರೀಶನ ಹಿತದಿ ನಮಗೆ ತೋರ್ಪಾನಂದ ಮುನಿಗೆ ನಮೋ 3 ಅಸುರರು ಪುಟ್ಟಿ ಭೂಮಿಯಲಿ ಸಾಧು ಭೂಸುರರೆಂದು ತೋರುತಲಿ ವೇದ ಶಾಸ್ತ್ರಕ್ಕೆ ಅಪಾರ್ಥ ಪೇಳಿ ಮೋಹ ವಶವಾಗೆ ಸುಜನರಲ್ಲಿ ಅಹ ಶ್ರೀಶನಾಜೆÉ್ಞ ಯತಾಳಿ ಮಧ್ವಾಭಿದಾನದಿ ಮೋಸ ದುರ್ಮತ ಧ್ವಾಂತ ಭಾಸ್ಕರನುದಿಸಿದಿ 4 ಮಧ್ಯಗೇಹರ ಮನೆಯಲ್ಲಿ ಮುಖ್ಯ ವಾಯುವೇ ಶಿಶುರೂಪ ತಾಳಿ ಬಲ ಸಂನ್ಯಾಸ ಸುಪ್ರಮೋದದಲಿ ಅಹ ಮಧ್ಯಗೇಹರ ಪುರುಷೋತ್ತಮತೀರ್ಥರ ಭಾಗ್ಯಕ್ಕೆ ಎಣೆವುಂಟೇ ಮೂರ್ಲೋಕದೊಳಗೆ 5 ಪುರುಷೋತ್ತಮಾಚ್ಚ್ಯುತಪ್ರೇಕ್ಷ ತೀರ್ಥ ಗುರುಗಳ ಸೇವಿಸಿ ಮೋಕ್ಷ ಮೋದ ಉರುಗುಣಸಿಂಧು ನಿರ್ದೋಷನಾದ ಶಿರಿವರನು ಕಮಲಾಕ್ಷ ಅಹ ಭಾರಿ ಪ್ರಸಾದವ ದಯದಿ ಬೀರಲ್ಲೇವೆ ದೊರೆಯುವದೆಂದು ಬೋಧಿಸಿದೆಯೋ ಮಧ್ವ 6 ಶ್ರೀಶ ವೇದವ್ಯಾಸನಲ್ಲಿ ಗೀತಾ ಭಾಷ್ಯ ಸಮರ್ಪಿಸಿ ಅಲ್ಯಿಲ್ಲಿ ಉಪ - ದೇಶಕೊಂಡು ಮತ್ತಿಲ್ಲಿ ಬಂದು ವ್ಯಾಸನಭಿಪ್ರಾಯದಲ್ಲಿ ಅಹ ಸರಿಯಾದ ತತ್ವಬೋಧಕ ಗ್ರಂಥಗಳ ಮಾಡಿ ಬೀರಿದ ಅಧಿಕಾರಿಗಳಿಗೆ ನೀ ದಯದಿ ಮೂಲಗ್ರಂಥಗಳು ಮೂವತ್ತು ಏಳು 7 ಳಾಳುಕ ಪ್ರಿಯತಮವಾದ್ದು ಭಕ್ತಿ ಪರ - ಕೈವಲ್ಯ ತೋರುವುದು ಅಹ ಪುನರಪಿ ಬದರಿಗೆ ಪೋಗಿ ಶ್ರೀಶನ ಕಂಡು ಧನ್ಯ ಮನದಿ ಬಂದು ಶಾಸ್ತ್ರ ಬೋಧಿಸಿದಿ 8 ಸೂತ್ರ ಭಾಷ್ಯಗೀತಾ ತಾತ್ಪರ್ಯ ಸೂತ್ರಾಣುಭಾಷ್ಯ ವಿಷ್ಣು ತತ್ವನಿರ್ಣಯಾ ಋಗ್ಭಾಷ್ಯ ತತ್ವೋ - ಭಾಗವತ ತಾತ್ಪರ್ಯ ಅಹ ನಿರ್ಣಯ ಶ್ರೀಮಹಾಭಾರತ ತಾತ್ಪರ್ಯ ಕರ್ಮ ನಿರ್ಣಯ 9 ಸನ್ನ್ಯಾಯ ವಿವರಣ ತಂತ್ರಸಾರ ಅನುವ್ಯಾಖ್ಯಾನವು ಸದಾಚಾರ ಸ್ಮøತಿ ಅನುತ್ತಮ ದ್ವಾದಶಸ್ತೋತ್ರ ಯತಿ ಪ್ರಣವ ಕಲ್ಪದಿ ಪ್ರಣವಸಾರ ಅಹ ಉಪನಿಷದ್ಭ್ಬಾಷ್ಯವು ಹತ್ತು ಉತ್ಕøಷ್ಟವು ಷಟ್ಟ್ರಶ್ನಕಾಠಕ ಬೃºದಾರಣ್ಯಾಖ್ಯ 10 ಮನನ ಮಾಡಲು ಐತರೇಯ ಪುನಃ ಶ್ರವಣ ಮಾಡಲು ತೈತಿರೀಯ ಸಂ - ಚಿಂತಿಸಲು ಈಶಾವಾಸ್ಯ ಬಹು ಘನವಿದ್ಯಾಯುತವು ಛಾಂದೋಗ್ಯ ಅಹ ಅರ್ಥವಣಮಾಂಡೂಕ್ಯ ತಲವ ಕಾರೋಕ್ತವು ಸತತ ಸಂಸ್ಮರಣೀಯ ಜ್ಞಾನದಾಯಕವು11 ಕೃಷ್ಣಾಮೃತ ಮಹಾರ್ಣದಿ ಬಾಲ ಕೃಷ್ಣ ಜಯಂತಿ ನಿರ್ಣಯದಿ ಭಕ್ತಿ ಜ್ಞಾನ ಸಾಧನವ ಬೋಧಿಸಿ ನರ - ಸಿಂಹನ ನಖಸ್ತುತಿ ಮುದದಿ ಅಹ ಪಠಿಸೆ ಭದ್ರದ ಕಥಾಲಕ್ಷಣದಲಿ ವಾದ ಮಾಡುವ ಬಗೆ ತೋರ್ದಿಯೈನೃಹರಿಯ ನಮಿಸಿ 12 ಅವಿದ್ಯಾ ಆವೃತವು ಬ್ರಹ್ಮ ಅದ್ಯಸ್ಥ ಜಗತೆಂಬ ಮತವ ತರಿದು ಮಾಯಾವಾದ ಖಂಡನವ ಮಾಡಿ ನ್ಯಾಯ ಪ್ರಮಾಣ ಲಕ್ಷಣವ ಅಹ ನುಡಿದು ಪ್ರಪಂಚ ಮಿಥ್ಯಾತ್ವಾನುಮಾನ ಖಂ - ಡನವ ಉಪಾಧಿಖಂಡನ ಸಹಗೈದಿ 13 ಪಂಚಭೇದ ಸತ್ಯ ಹರಿಯೇ ಸರ್ವೋತ್ತಮ ಸುಹೃದ ಶಿರಿ ವರನೇ ಸ್ವತಂತ್ರ ಪ್ರಮೋದ ಸ್ವಾಮಿ ಸೃಷ್ಟಾ ಪಾತಾ ಅತ್ತಾತ್ರಾಹ ಅಹ ತತ್ವ ವಿವೇಕವು ತತ್ವ ಸಂಖ್ಯಾನವು ನಿತ್ಯ ಸುಪಠನೀಯ ಹರಿ ಸರ್ವೋತ್ಕøಷ್ಟ 14 ನೀನಿಂತು ನುಡಿಸಿದೀ ನುಡಿಯು ನಿನ್ನ ಸನ್ನಿಧಾನದಿ ಸಮರ್ಪಣೆಯು ನಾನು ಏನೂ ಓದದ ಮಂದಮತಿಯು ನೀನು ಪೂರ್ಣಪ್ರಜ್ಞನು ಜೀವೋತ್ತಮನು ಅಹ ಎನ್ನ ಕೊರತೆಗಳ ನೀಗಿಸಿ ಹೃಸ್ಥಶ್ರೀ 'ಪ್ರಸನ್ನ ಶ್ರೀನಿವಾಸ' ನ್ನೊ ಲಿಸೋ ಎನಗೆ ಜೀಯ 15
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಚಂದ್ರಿಕಾಚಾರ್ಯ ಗುರುವೇ ಪ ಯಾಚಿಪೆ ನಿನ್ನ ಶ್ರೀ ಚರಣ ಸೇವೆ ಅ.ಪ ಜಲಧಿ ಚಂದ್ರ ಯತೀಂದ್ರ ಭೂಪೂರ್ವ ಪ್ರಹ್ಲಾದ ಸಜ್ಜನಾಹ್ಲಾದ ಗೋಪಾಲಕೃಷ್ಣ ಚರಣಾಂಬುರುಹ ಲೋಲ ಶ್ರೀಪಾದರಾಜಪ್ರಿಯ ಬಾಲಸುಶೀಲ 1 ಸಮೀರನ ರಾಶಿಯನು ರಚಿಸಿ ಸನ್ಮಾನ್ಯರೆನಿಸಿ ದಾಸಕೂಟಕೆ ನೆಲೆಯಿತÀ್ತು ಪುರಂದರ ದಾಸರನು ಕರುಣಿಸಿದೆ ಧೀರ ಉದಾರ 2 ಕುಹುಯೋಗ ಪರಿಹಾರಗೈದ ಮಹಾಯೋಗಿವರ ಕುಹಕ ವರ್ಜಿತ ಚಿತ್ತ ಶೋಭಿತ ಸುಖಾಂತ ಪಾದ ಧ್ಯಾನಿಪರ ಸಹವಾಸವೆನಗಿತ್ತು ಸಲಹುವುದು ಸತತ 3
--------------
ವರಾವಾಣಿರಾಮರಾಯದಾಸರು
ಶ್ರೀ ಜಗನ್ನಾಥದಾಸ ನಮಿಪೆ ಗುರುರಾಜ ಸಾತ್ವಿಕವಪುಷ ಪ ಈ ಜಗದೊಳು ನಿಮಗೆಣೆಗಾಣೆ ಸತತ ನಿ - ವ್ರ್ಯಾಜದಿ ಹರಿಯ ಗುಣೋಪಾಸನೆ ಮಾಳ್ಪ ಅ.ಪ. ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ ಚರಿಸುತ ಧರೆಯೊಳು ಮೆರೆವ ಮಹಾತ್ಮರ ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ ದುರಿತರಾಶಿಗಳಿರಗೊಡದೆ ನೆರೆ ಪರಮಮುಕ್ತಿಯ ದಾರಿ ತೋರುತ ಸಿರಿಸಹಿತ ಹರಿ ತೋರುವಂದದಿ ಕರುಣ ಮಾಳ್ಪ ಸುಗಣಮಹೋದಧಿ 1 ರವಿಯು ಸಂಚರಿಸುವಂತೆ ಭೂವಲಯದಿ ಕವಿಶ್ರೇಷ್ಠ ಚರಿಸಿದೆಯೋ ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ ಭುವನೈಕ ವೇದವದ್ಯನ ಶ್ರವಣಭಕುತಿಯಿಂದ ದಿವಸ ದಿವಸದಿ ಪ್ರೀತಿ ಬಡಿಸುತ ಧ್ರುವವರನಂಘ್ರಿಗಳಿಗರ್ಪಿಸಿ ಭುವನ ಪಾವನ ಮಾಡಲೋಸುಗ ಅವನಿ ತಳದಿ ವಿಹರಿಸುತಿಹ ಗುರು 2 ಅಹೋ ರಾತ್ರಿ ಕ್ಷಣ ಬಿಡದೆ ಸನ್ಮನ ಹೃ - ದ್ಗುಹಾಧೀಶನನು ಬಿಡದೆ ಅನುದಿನ ಸ್ಮರಿಸುತ ಸಹನದಿ ಶಮದಮಯತು ನಿಯಮಗಳನ್ನು ವಹಿಸಿ ಶ್ರೀದವಿಠಲನಂಘ್ರಿಯ ಮಹಿಮೆ ತೋರುತ ಪೂಜಿಸುತ ಬಲು ಮಹಿತಪೂರ್ಣಾನಂದತೀರ್ಥರ ವಿಹಿತ ಶಾಸ್ತ್ರಗಳರಿತು ಬೋಧಿಪ 3
--------------
ಶ್ರೀದವಿಠಲರು
ಶ್ರೀ ಜಗನ್ನಾಥದಾಸರ ಸ್ತೋತ್ರ ರಾಯರ ನೋಡಿರೈ ದಾಸರಾಯರ ಪಾಡಿರೈ |ಮಾಯ ರಮಣಪ್ರಿಯಾ |ಇವರ ಮನದೊಳಗೆ ಸುಳಿದಾ | ಶ್ರೀರಂಗವಲಿದ ಪ ಮೋದ |ಕಾಣಿಸುವದು ಜಗದೊಳಗೆ, ಇವರಿಗೆ ಕೀರುತಿಯ |ಪುಣ್ಯ ಮೂರುತಿಯು |ಧೇನಿಸಿ ಎರಡನೆ ಜನ್ಮದಿ, ಈತನೆ ಶಲ್ಯಾ |ತತ್ವವ ಬಲ್ಲಾ 1 ಮೂರನೆ ಜನ್ಮದಿ ಕೊಂಡಪ್ಪ, ರಾಜನದೂತ | ಸುಪ್ರಖ್ಯಾತಾ |ಸಾರ ಜನರ ಪ್ರಿಯ ಶ್ರಿ ಪುರಂದರದಾಸಾರ್ಯ |ಸುತ ಆಶ್ಚರ್ಯ |ತೋರುವ ಐದನೆ ಜನ್ಮದಿ ಶ್ರೀಹರಿದೂತ |ಗುರು, ಜಗನ್ನಾಥ 2 ನರಹರಿಯ ತುತಿಪ ವಂದಂಶದಿ ಸಾಂಶರೆಂದುಖಂಬದಿ ನಿಂದು |ಮೆರೆವರು ಊಧ್ರ್ವಪುಂಢವು ತುಲಸಿಯಮಾಲಾ |ಅಕ್ಷ ಸುಶೀಲಾ |ಪರಿಪರಿ ಸೇವಿಪ ಜನರಿಗಭೀಷ್ಟವ ಗೆರೆವಾ |ದುರಿತವ ತರಿವಾ 3 ದೇಶದೇಶವ ಜನರುಗಳೆಲ್ಲರು ಬಂದು |ನೋಡಲು ನಿಂದು |ಸೋಸಿಲಿ ದರುಶನಕೊಳಲವರಿಗೆ ಆನಂದ |ವಾಹುದು ಛಂದ |ಮೀಸಲಹುದು ಮನ, ಕೈಸೇರುವ ಶ್ರೀಪತಿಯೂ |ಹರ ಅಘತತಿಯು 4 ಎಷ್ಟು ಪೇಳಲಿ ಇವರ ಮಹಿಮೆ ತುತಿಸಲ್ಕೆ |ವಶವಲ್ಲ ಮನಕೆ |ನಿಷ್ಠಿಯಿಂದಿವರನು ತುತಿಸಲು ಶ್ರೀವರತುಷ್ಟಾ |ಪಾಪವು ನಷ್ಟಾ |ಸೃಷ್ಟಿಯೊಳಗೆ ಶ್ರೀಶ ಪ್ರಾಣೇಶವಿಠಲನ ದಾಸ |ದಾಸೋತ್ತಂಸ 5
--------------
ಶ್ರೀಶಪ್ರಾಣೇಶವಿಠಲರು
ಶ್ರೀ ತಂದೆ ಮುದ್ದು ಮೋಹನದಾಸರು ಕರುಣದಿ ಕಾಯೊ ಮದ್ಗುರುವೆ | ಬೇಡುವೆ ನಿಮ್ಮಚರಣ ಸೇವಕನು ನಾನೂ ಪ ಮೊರೆ ಹೊಕ್ಕವರ ಆರ್ತ | ಸ್ವರವ ಕೇಳುತ ನೀವುಕರುಣ ರಹಿತರಂತೆ | ಇರುವುದು ಉಚಿತೇ ಅ.ಪ. ಕರ ಅದ್ವೈತ ಗಜಸಿಂಹಮದ್ಗುರುವೆ ತೋರೆನ್ನ | ಹೃದ್ಗುಹಸ್ಥಿತನಾ 1 ಯಕುತಿ ಶಾಸ್ತ್ರವನರಿಯೆ | ಮುಕುತಿ ಮಾರ್ಗದಿ ಸಿರಿಲಕುಮಿ ಪತಿಯ ನಾಮಕೆದುರೇ |ಭಕುತಿಯಿಂದಲಿ ತವ | ಉಕುತಿಯ ಚಿಂತಿಪಶಕುತಿ ಇತ್ತೆನ್ನ | ನೀ ಕಾಯೊ ಗುರುವೆ 2 ಭೃಂಗ | ಪೊರೆಯೊ ಕೃಪಾಪಾಂಗಾ 3
--------------
ಗುರುಗೋವಿಂದವಿಠಲರು
ಶ್ರೀ ತಾಂದೋಣಿ ವೆಂಕಟರಮಣ ಇಂದು ವೆಂಕಟನ ಕಂಡು ಅನ್ಯರೊಬ್ಬರು ಇವಗೆ ಸರಿಪರರು ಇಲ್ಲ ಪ ಅಮರರಿಗು ಮನುಜರಿಗು ಸರ್ವ ಪ್ರಾಣಿಗಳಿಗು ಸ್ವಾಮಿ ರಕ್ಷಕ ಸರ್ವ ಪ್ರೇರಕನು ದೇವ ಅಮರಾವತಿ ಸರಿತತೀರ ಗಿರಿಯಲಿ ನಿಂತ ಪ್ರೇಮದಿಂದಲಿ ಭಜಿಸೆ ಅಭಯ ವರವೀವ 1 ಎನ್ನ ಕುಲದೇವನು ತಿರುಪತಿ ವೆಂಕಟನು ತಾನೇವೆ ಭಕ್ತರಿಗೆ ಒಲಿಯೆ ಬಂದಿಹನು ಅನಂತ ಗುಣಪರಿಪೂರ್ಣ ತನ್ನ ಸೇವಿಸುವರ ಅನುಗಾಲ ರಕ್ಷಿಸುವ ಅನಿಮಿತ್ತಬಂಧು 2 ಮಧ್ವಮುನಿ ಹೃತ್ಸದನ ದೇವದೇವೋತ್ತಮನು ಮಧ್ವಮುನಿ ಗುರುಸ್ವಾಮಿ ವಿಧಿತಾತ ಶ್ರೀಶ ಶುದ್ಧಕಾರುಣ್ಯನಿಧಿ ಪ್ರಸನ್ನ ಶ್ರೀನಿವಾಸ ಉದ್ಧರಿಪ ಸಂಸ್ಮರಿಸೆ ಇಹಪರದಿ ಎಂದೂ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ತುಳಜಾ ಮಹಾತ್ಮೆ ಅಧ್ಯಾಯ ಒಂದು ರಾಗ:ಸೌರಾಷ್ಟ್ರ ತಾಳ:ತಿವಿಡೆ ಸಿರಿಯ ಸಹಿತಾಗಿರುವ ವೆಂಕಟಗಿರಿಯ ರಮಣನ ಮರೆತು ಎಲ್ಲವನು|| ಚರಕೆರಗುವೆನು|| 1 ಧರೆಯೊಳಗವನ ಮೆಟ್ಟಿ ಹಾರುವ ಹಿರಿಯ ಕವಿಗಳಿಗೆಲ್ಲಾ ನಾನೇ ಕಿರಿಯನೆಂದೆನಿಸಿ ಅವರನು ಮರೆಯದಲೆ ನೆನೆವೆ|| ಕಿರಿಯನಾದರೇನು? ನಾ ಈ ಧರೆಯೊಳಗೆ ಎಲ್ಯಿದ್ದರೇನು? ಮರೆಯದಲೇ ಮಾಡುವರು ಗುರುಗಳು ಮಮತೆ ಎನ ಮೇಲೆ||2 ಕೇವಲಾನಂತಾದ್ರಿ ರಮಣನ ಭಾವ ತಿಳಿಸುವ ನಮ್ಮ ಗುರುಗಳು ಭಾರ ಭಾವದಲ್ಲಿ ಪೇಳುವೇನು ತುಳುಜಾದೇವಿಯ ಮಹಿಮೆಯನು|| 3 ಪದ್ಯ ಪೂರ್ವದಲಿ ಕೃತಯುಗ ಪೂರ್ವದಲ್ಲಿ| ದ್ವಿಜವಯ ನೀರ್ವಕದ್ರುಮನೆಂದು ಊರ್ವಿಯಲ್ಲಿ ಪ್ರಖ್ಯಾತ ಸರ್ವದಾ ಮಾಡುವನು ಸರ್ವರಿಗೆ ಸಮ್ಮತಪೂರ್ವಧರ್ಮವು ಭಕ್ತಿ ಪೂರ್ವಕವಾಗಿ|| ಸರ್ವ ಸ್ತ್ರೀಯ ರೊಳಗ ಪೂರ್ವ ಸುಂದರಿಯಾಗಿ ಇರ್ವಳಾತನ ಮಡದಿ ಊರ್ವಶಿಯ ಪೋಲುವಳು ಊರ್ವಿಯಲಿ ಪತಿಸೇವೆ ಸರ್ವದಾ ಮಾಡುತಲೆ ಇರ್ವಳಾತೆಯು ಮನಃ ಪೂರ್ವಕವಾಗಿ||1 ಆ ಕಾಂತನಿಂದಲ್ಲಿ ತಾಕೂಡಿ ತನ್ನ ಮನಕೆ ಬೇಕಾದ ಸೌಖ್ಯದನೇಕ ವರ್ಷಗಳಲ್ಲಿ ಸ್ವೀಕಾರ ಮಾಡಿದಳು ಶ್ರೀಕಾಂತನ ದಯದಿ ಆಕೆಯ ಹೆಸರುಂಟು ಅನಭೂತಿ ಯಂತೆಂದು|| ಆ ಕರ್ದಮಾಖ್ಯ ದ್ವಿಜತಾಕಾಲದಿಂದ ಭೂತೋಕವನು ಬಿಟ್ಟು ಪರಲೋಕಕೆ ಪೋಗುತಿರೆ ಆಕೆ ಪತಿವುತೆಯು ಎಂಬಾಕೆ ಸಹಗಮನವೆಂಬ ಸಹಗಮನೆಂಬೊ ಆಶಾರ್ಯ ಮಾಡುತಿರೆ| ಆ ಕಾಲದಲ್ಲಿ ಆಯಿತಾಕಾಶವಾಣಿ|| ಪದ ಬ್ಯಾಡ ಬ್ಯಾಡಮ್ಮ ಬ್ಯಾಡದು || ನೀ ಮಾಡೋಕಾರ್ಯ ಬ್ಯಾಡ|| ಬ್ಯಾಡು ಬ್ಯಾಡುಮ್ಮ ಕೇಳು ಮಾಡತಕ್ಕ ಕಾರ್ಯದೂರ ನೋಡಿ ಮಾಡುಬೇಕು ಇಂಥ ಮೂಢ ಬುದ್ಧಿ ಮಾಡುವದು||ಪ ಪತಿಯ ಸರಿಯು ಹಿತಕರಿಲ್ಲವು || ಪತಿವ್ರತೆಗೆ ತನ್ನ ಪತಿಯ ಹೊರತು ಗತಿಯು ಇಲ್ಲವು || ಸುಳ್ಳಲ್ಲವು|| ಪತಿಯು ಇಲ್ಲದಿದ್ದರೇನು ಸುತರು ಸುಗುಣರುಂಟು ನಿನಗೆ ಸುತರು ಇರಲು ಪತಿಯ ಕೂಡಿ ಗತಿಯಸಮ್ಮತವು ಅಲ್ಲ|| 1 ಪತಿಯ ಬಿಟ್ಟು ಸ್ಥಿತಿ ಅಧರ್ಮವೇ| ಆ ಸತಿಗೆ ತನ್ನ ಪತಿಯ ಕೂಡೆ ಗತಿಯು ಧರ್ಮವೇ|| ಸತ್ಕರ್ಮವೇ|| ಪತಿಯ ಮ್ಯಾಲೆ ಸತಿಯು ಊಂಟು ಸತಿಗೆ ಸಮ್ಮತವು ಸತ್ಯ ಪತಿಯಿಂದಲೇ ಪತಿಯಲೋಕ ಗತಿಯು ಪತಿವುಲೆಯೇ ನಿನಗೆ||2 ಮುಖ್ಯಮಾತು ನೀನು ಕೇಳಿದ್ದು|| ಗರ್ಭಿಣಿಯು ಮತ್ತು ಮಕ್ಕಳುಳ್ಳ ಸ್ತ್ರೀಯು ಮಾಳ್ಪುದು || ಧರ್ಮಲಿಲ್ಲದ್ದು|| ಮಕ್ಕಳುಳ್ಳವಳು ನೀನು ಮಕ್ಕಳನ್ನು ಪಾಲಿಸುವುದು ಮುಖ್ಯನಂತಾದ್ರಿ ರಮಣ ತಕ್ಕ ಮುಕ್ತಿಕೂಡುವ ನಿನಗೆ|| 3 ಪದ್ಯ ಆ ಕಾಲಕ್ಕಾಗಿರುವ ಆಕಾಶವಾಣಿಯನ್ನು ತಾ ಕೇಳಿ ಅನುಭೂತಿ|| ಕಾಲ ಮೇರು ಶೈಲದಲ್ಲಿ|| 1 ಚಾರು ಮಂದಾಕಿನಿಯ ತೀರದಲ್ಲಿ ಪರ್ಣದ ಕುಟೀರವನ್ನು ಹಾರಿಸುತಾ ಬಂದನಾ ನಾರಿ ಇದ್ದಲ್ಲಿ||2 ಆಗ ಆಕೆಯ ಕಂಡು ಹೋಗಿ ಬದಿಯಲಿ ನಿಂತು ಹೀಗೆಂದು ಮನಸಿನಲಿ ಯೋಗಿಯಂತಲಿ ನಿಶ್ಚಳಾಗಿಹಳು ದಾವಾಕಿ ದೈವಯೋಗದಲ್ಲಿ ನೋಡಿದರೆ ಯೋಗಿಗಳು ತಮ್ಮ ಉದ್ಯೋಗಿವನ್ನು ಬಿಡುವರು ಹೀಗೆಂದು ಅನುಭೂತಿಯಾಗಿ ಮೋಹಿಸಿ ನುಡಿದ ಭೋಗ ಬಯಸುತಲೇ|| 3 ಪದ ರಾಗ:ಶಂಕರಾಭರಣ ನೀಪೇಳೆ ದಾವದಾವದು ನಿನ್ನ ಜೀವಕ್ಕ ಬೇಕು ಹೇಳೆ|| ಪ ನಿತ್ಯ ಶೋಷಣ ಮಾಡುಬ್ಯಾಡೇ|| 1 ದೇವತೆಗಳು ಎಲ್ಲಾರು ಬಿಡದೆ ಎನ್ನ ಕೋಕರಾಗಿಹರು|| ಸಾವಿರ ಸ್ತ್ರೀಯರು ಸೇವಿಸುವರು ಎನ್ನ ಸೇವಿಸುವರು ನಿನ್ನನ್ನು 2 ಚಿಕ್ಕ ಪ್ರಾಯದಲ್ಲಿ ನೀನು ಇರುವಿ ನಿನ್ನ ತಕ್ಕ ಪುರುಷನು ನಾನು|| ಮುಖ್ಯನಂತಾದ್ರೀಶ ಸಿಕ್ಕ ನಿನಗೆ ನಿನ್ನ ತಕ್ಕಂತೆ ಆಯಿತ್ಹೇಳೆ|| 3 ಪದ್ಯ ಧ್ಯಾನದಲ್ಲಿರಲು ದುಷ್ಟ ದನುಜೇಶ್ವರನು ತಟ್ಟನೆ ಮಾಡಿ ದುಕೃಷ್ಟ ತಾಳ ಧ್ವನಿಯು ಕಟ್ಟು ಇಲ್ಲದೇ ಒಳ್ಳೆ ಗಟ್ಟಿ ವದರಿಸಿ ನೋಡಿ ಒಂದಿಷ್ಟು ನುಡಿಯದೆ ಇರಲು, ದಿಟ್ಟಾಗಿ ತನಗೆ ರೀತಿ|| ಸಿಟ್ಟಲೇ ನುಡಿದಾಳು ಆ ಪತಿವುತೆ|| 1 ದಾ ಪೇಳಲೋ ನೀ ಧಿಟ್ಟ ದಾರಿಲ್ಯಾತಕೆ ಬಂದ್ಯೊ ನೀ ಪಾಪಿಷ್ಠ|| ದೂರದಲ್ಲಿ ಇರೋ ನೀ ದುಷ್ಟ || ಧೈರ್ಯದಿ ನೀ ಎನ್ನ ಮುಟ್ಟಿದ್ಯೋ ಭ್ರಷ್ಟ|| 2 ಸುಖಭರಿತ || ಲಗುಬಗೆಯಲಿ ಮೋಹಿಸುತ || ಬಗೆ ಬಗೆಯಲ್ಲಿ ಮಾತನಾಡಿದನು ನಗುನಗುತ| 3 ಪದ, ರಾಗ:ಶಂಕರಾಭರಣ ಮರುಳು ಗೊಂಡೆನೇ || ತರುಳೆ ನೊಂದೆನೆ|| ಮರಳು ಗೊಂಡೆ ತರುಳೆ ನಿನ್ನ ಹೊರಳಿ ನೋಡುವ ಯ್ಹರಳಿನೋಟಕೆ|| ಪ ಮಾನ್ಯ ಮಾನಣಿ || ರನ್ನೆ ಶಿರೋಮಣಿ || ಚೆನ್ನವಾದ ಚಿನ್ನದಂಥ ನಿನ್ನ ದೇಹವನ್ನು ಕಂಡು|| 1 ಮಾತುಲಾಲಿಸೆ|| ಪ್ರೇತಿ ತೋರಿಸೆ ||ಪ್ರೀತಿ ಎಂಬೊದ್ಯಾತಕಿನ್ನ ಸೋತು ಕಾಮಾಪೂರದಲ್ಲಿ|| 2 ನಿಂತು ಮರೆತೆನಾ || ಅನಂತಾದ್ರೀಶನಾ || ಎಂಥಹವರಿಗೆ ಭ್ರಾಂತಿ ಬಿಡಿಸುವಂಥ ನಿನ್ನ ಕಾಂತಿ ನೋಡಿ|| 3 ಆರ್ಯಾ ಇಂಥಾ ಮಾತವು ಕೇಳಿ || ಚಿಂತಾಕ್ರಾಂತಳಾದಳಾಗ ಆಗ ಆ ಬಾಲಿ|| ಬಂದಿತು ಇಂಥಾ ಘೋರಾ || ಚಿಂತಿಸ ಬೇಕಿನ್ನು ಇವನ ಸಂಹಾರಾ|| 1 ಶಾಪಿಸ ಬಾರದು ಜ್ಞನಿ || ಶಾಪಿಸಿದವರ ಅಗುವುದು ತಪಹಾನಿ|| ಪರಿ ಮನಸಿಗೆ ತಂದು ವ್ಯಾಪಾರವು ಮಾಡಿದಳು ಮತ್ತೊಂದು| 2 ಎಂಬಾಕೆ ನಾಮವೇ ತುಳಜಾ|| 3 ಪದ ರಾಗ :ಸಾರಂಗ ತಾಳ :ತಿವಿಡಿ ಸ್ವರಷಡ್ಜ ಸಲಹಬೇಕೆಂದು ನಿಲ್ಲದೆ|| ಪ ಪಾಶಾಕೃಷ್ಟ ಧರಿಸುತಾ||1 ವರೆಂದು || ದಯಮಾಡಿ ವರಗÀಳ ನೀಡುವಳು ಹಿಡಿಯಂದು|| ಕಾರುಣ್ಯಸಿಂಧು|| ಗಾಢನೆ ಧ್ವನಿ ಮಾಡುತಲೇ ಹಾರ್ಯಾಡುತಲೇ ತ್ವರ ಮಾಡಿಸುತಲೇ ಓಡಿ ಬರುತಿಹ ಪ್ರೌಢಗಣಗಳ ಕೂಡಿ ಸಿಂಹಾರೂಢಳಾಗಿ||2 ಎಂತು ಪೊಗಳಲಿ ನಾನು|| ಅತ್ಯಂತ ಬಹಳಾದಂತ ಮಹಿಮೆಗಳನು ಎಂತೆಂಥವರು ಬೇಕಂತ ಹುಡುಕಿದರೇನು|| ಹಿಗಂತ ಆಕೆಯ ಅಂತೂ ತಿಳಿಯದು ಇನ್ನು|| ಗುಣವತಿ ತಾನು|| ಶಾಂತಿಯಿಂದ ಅನಂತಾದ್ರೇಶನ ಕಾಂತಯಳ ಪೋಲುವಂತ ದೇವಿಯು ಚಿಂತೆಯಲಿ ತನ ಚಿಂತಿಸಿರುವಳ ಚಿಂತೆ ಬಿಡಿಸ ಬೇಕಂತ ಧಾವಿಸಿ|| 3 ಆರ್ಯಾ ಸಾರ ಪರಮಾದರದಿಂದ ಕೂತು ಕೇಳಿದವರು || ಪರಿಪೂಜಿಸುತಾ ತುಳಜಾ ತಾನಾಗುವಳು ಪ್ರತ್ಯಕ್ಷ|| 1 ವರಕವಿತಾ ರಚನಕ್ಕೆ|| ತುಳಜಾದೇವಿಯ ದಿವ್ಯ ಚರಿತಕ್ಕೆ || ಚರಿಸದು ಎನ್ನ ಉಪಾಯ|| ಗುರು ಕೃಪೆಯಿಂದಾಯಿತೊಂದಧ್ಯಾಯ|| ಶ್ರೀಹರೇ ಪ್ರಸೀದ||
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀ ತುಳಸಿ ದೇವಿ ತಾಯಿ ಶ್ರೀ ತುಳಸೀಯೆ | ಕಾಯೆ ಭಕ್ತರ ಪ್ರೀಯೆಕಾಯೆ ಶ್ರೀಹರಿ ಜಾಯೆ | ತಾಯೆ ವರವ ನೀಯೇ ಪ ಪಾದ | ತೋಯಜ ಕಾಂಬುವದಾಯವಿತ್ತೆನ್ನ ನೀ | ಪ್ರೀಯದಿಂದಲಿ ಕಾಯೇ ಅ.ಪ. ಅಮೃತ ಕಲಶಹರಿಯು ಉದುಭವಿಸಲು | ವರ ಧನ್ವಂತ್ರೀಯೂ ||ಹರುಷೋದ್ರೇಕದಿ ನಯನ | ವರಬಿಂದು ಉದುರಲುಶಿರಿ ತುಳಸಿ ಎನಿಸೀದೆ | ಶರಣರ್ಗೆ ಗತಿ ಕೊಡುವ 1 ಓಲಗ ಗೈವರು 2 ಕಲುಷ ಸುಜನ | ಮಲಗಳ ಕಳೆದೂ |ಆಲವ ಭೋದರೆ ಶಾಸ್ತ್ರ | ವಲಿಸಿ ಕೀರ್ತಿಪ ನರಗೆನೆಲೆಯ ಕಾಣಿಪ ತನ್ನ | ಚೆಲುವ ವೈಕುಂಠದಿ 3 ಕರುಣಿಸು ಹರಿಪಾದ | ವರ ಪದ್ಮ ದ್ವಯದಲ್ಲಿನಿರುತ ಭಕುತಿಯನ್ನೆ | ವರಗುಣ ಸಂಪನ್ನೆ |ಕರವೀರ ಪುರದರಿಸಿ | ವರ ಸನ್ನಿಧಾನಕ್ಕೆನಿರುತದಿ ಸತ್ಪಾತ್ರೆ | ಪರಮ ಪಾವನ ಗಾತ್ರೆ 4 ಹಂಬಲೊಂದೆನಗುಂಟು | ಜಾಂಬುವತಿಯೆ ತುಳಸಿಇಂಬಿಟ್ಟು ಸಲಹುವೆ | ನೆಂಬ ಮತಿಯು ಇರೇ |ಬಿಂಬನು ಗುರು ಗೋ | ವಿಂದ ವಿಠಲ ಪಾದಅಂಬುಜದ್ವಯ ತೋರಿ | ಸಂಭ್ರಮದಲ್ಲಿ ಇರಿಸೆ 5
--------------
ಗುರುಗೋವಿಂದವಿಠಲರು