ಒಟ್ಟು 9531 ಕಡೆಗಳಲ್ಲಿ , 132 ದಾಸರು , 5434 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರಜನಕ ಮುರಾರಿ ಕಾಣಮ್ಮ ಪ ಅರುಣ ಚರಣ ಕಳದಿರವು ಅಂಕುಶಧ್ವಜ ಅರವಿಂದ ರೇಖಾಂಕ ಪುರುಷನಾರಮ್ಮ ಉರಗಶಯನ ಕರಸರೋಜ ಮಧ್ಯದೊಳಿಟ್ಟು ಸುರರಿಂದರ್ಚನೆಗೊಂಬ ಹರಿಯು ಕಾಣಮ್ಮ 1 ಪೊಳೆವ ಉದಯ ಶಶಿ ಬೆಳಗು ಸೋಲಿಪ ನಾಖಾ ವಳಿಯಿಂದ ಒಪ್ಪುವ ಚಲುವನಾರಮ್ಮಾ ಕುಲಿಶ ಪಾಣಿಗೆ ಒಲಿದಿಳೆಯೊಳು ಬಂದು ಖಂ ಜಲಧಿ ಕಾಣಮ್ಮ 2 ಅಂದುಗೆ ಗೆಜ್ಜೆ ಕಡಗ ಪೊನ್ನೂಪುರ ತೊಡಂದ ಬರುತಿಹ ಪ್ರೌಢನಾರಮ್ಮ ದೃಢ ಭಕ್ತರೆಡೆಯಲಿ ಬಿಡದೆ ನಲಿಯುತಲಿಪ್ಪ ಮೃಡಸುರಪಾದ್ಯರ ಪತಿಯು ಕಾಣಮ್ಮ 3 ಕರಿಗಲ್ಲಿನಂತೆ ಸುಂದರ ಜಂಘೆ ಜಾನುಗ ಳೆರಡು ತರಣಿಯಂತೆ ಇವನಾರಮ್ಮಾ ಪರಮೇಷ್ಠಿ ಪ್ರಳಯದಿ ಸಿರಿಯಿಂದ ನುತಿಗೊಂಬ ಪರಮ ಪುರುಷ ನರಹರಿಯು ಕಾಣಮ್ಮ 4 ಇಭವರಕರದಂತೆ ಉಭಯ ಊರು ಕಟಿ ಪ್ರಭ ವಸನವನುಟ್ಟ ಸುಭಗನಾರಮ್ಮಾ ರಭಸದಿಂದಲಿ ಕಂಭ ಬಿಗಿದು ಪ್ರಹ್ಲಾದಗೆ ಅಭಯವಿತ್ತ ಸುರಪ್ರಭುವು ಕಾಣಮ್ಮ 5 ವಲಿವಿೂಕ ಬಿಲದಂತೆ ಸುಳಿನಾಭಿ ಜಠರತ್ರಿ ವಳಿಗಳಿಂದಲಿ ಬಲು ಪೊಳೆವನಾರಮ್ಮಾ ನಳಿನೋದ್ಭವನ ಪುತ್ರಾಖಿಳ ಲೋಕ ತಾಳಿದಾ ಹಾಲಾಹಲಕಂಠನ ಗೆಳೆಯ ಕಾಣಮ್ಮಾ 6 ಕೌಸ್ತುಭ ವೈಜಯಂತೀ ಸರ ಸಿರಿಯಿಂದಲೊಪ್ಪೋ ನಿರಯನಾರಮ್ಮ ವರಭೃಗುಮುನಿಪನ ಸ್ಪರುಶವನು ತಾಳ್ದ ಕರುಣ ಸಾಗರ ಸಿರಿಧರನು ಕಾಣಮ್ಮ 7 ಅರಿ ಶಂಖ ಸತತ ಪಿಡಿದಿಹ ಚತುರನಾರಮ್ಮ ದಿತಿಜರ ಸದೆದು ದೇವತೆಗಳ ಸಲಹಿದ ಚತುರಾಸ್ಯ ಕೃತಿದೇವಿ ಪತಿಯು ಕಾಣಮ್ಮ 8 ಧರದಿಂದೊಪ್ಪುತಲಿಹ ಪಿರಿಯ ನಾರಮ್ಮಾ ಸಿರಿಯೊಡನೆ ಕ್ಷೀರಶರಧಿ ಯೊಳೊರಗಿಪ್ಪ ವಜ್ರ ಪಂಜರವನು ಕಾಣಮ್ಮ 9 ಸುರಕಪೋಲ ನಾಸ ಸರಸಿಜನಯನ ಪು ಕುಂಡಲಿ ಯುಗಧರನು ಆರಮ್ಮಾ ಶರಧಿ ಮಥನದಲ್ಲಿ ತರುಣಿಯಾಗಿ ಅಸು ರರ ಮೋಹಿಸಿದ ಅಜರನು ಕಾಣಮ್ಮ10 ಬಾಲಶಶಿಯಂತೆ ಫಾಲಕಸ್ತೂರಿನಾಮ ಮೌಳಿ ಸುಳಿಕೇಶ ಬಾಲನಾರಮ್ಮಾ ಮೂಲೇಶನಾದ ಜಗನ್ನಾಥ ವಿಠ್ಠಲ ಮೂರ್ಲೋಕಾಧಿಪ ಶ್ರೀ ಗೋಪಾಲ ಕಾಣಮ್ಮ11
--------------
ಜಗನ್ನಾಥದಾಸರು
ಮಾರಿ ಬೇರೆಂದೇಕೆ ಹಲುಬುವರು ಜಗದಿ ನಾರಿಯೇ ಮಕ್ಕಮಾರ್ಯೆಂದೆನ್ನಬಾರದೆ ಪ ಹಿತದೋರಿ ಮನಸೆಳೆದು ಮತಿಗೆಡಿಸಿ ವಿಧವಿಧ ದು ಷ್ಕøತ ಪೇಳಿ ಬಂಧುಗಳ ಹಿತವನೆ ಮರೆಸಿ ಸತತ ಬೆನ್ನ್ಹತ್ತಿ ಬಿಡದೆ ಕ್ಷಿತಿಮೇಲೆ ಅತಿಯಾಗಿ ವ್ಯಥೆಬಡಿಪ ಮಾರಿ ನಿಜಸ್ಥಿತಿ ವಿಚಾರಿಸದೆ 1 ಮನೆ ಧನ ಗುಣ ಸುಲಿದು ಘನತೆಯನು ಕೆಡಿಸಿ ಮ ತ್ತನುಕೂಲವನು ಇತ್ತು ತನುಶಕ್ತಿ ಹೀರಿ ಕುಣಿಕುಣಿಸಿ ಜಗದೊಳಗೆ ಬಿನಗುರಲಿ ಬಿನುಗೆನಿಸಿ ಘನ ಬಾಧಿಸುವ ಮಾರಿದಿನಿಸು ಕಾಣದಲೆ 2 ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರೆನಿಸಿ ಭುವಿಯೊಳು ಮುಕ್ತಿಕಾಮಿನಿಯ ತೊರೆಸಿ ನೇಮವಿಲ್ಲದ ಕಷ್ಟ ನೇಮಿಯೊಳಳಿಸಲಿಕೆ ಯಮನೊಶಕೆ ಕೊಡುವಂಥ ಈ ಮಾರಿನೊದೆಯದೆ 3
--------------
ರಾಮದಾಸರು
ಮಾರುತ ಒಲಿದವಗೆ ಮಾರಮಣನು ಒಲಿವಾ ಪ ಭಾರತೀರಮಣ ಮುನಿಯೆ ಭವಹರ ಹರಿ ಮುನಿವ ಅ.ಪ. ಸುಗ್ರೀವನು ಬಂದು ಹನುಮನ್ನ ಅನುಸರಿಸೆಶೀಘ್ರದಿಂದ ಹರಿ ವಾಲಿಯ ಕೊಂದನು ||ವಿಗ್ರಹದೊಳಗೆ ಕರ್ಣನ ಗೆದ್ದ ಅರ್ಜುನನುಅಗ್ರಜನ ಕೃಪೆ ಇದ್ದ ಕಾರಣಾ1 ಹನುಮಗ್ಹರಿ ಒಲಿಯಲು ರಾವಣನ ಒಂದುಕ್ಷಣದೊಳಗೆ ಹರಿ ಖಂಡಿಸಿದನು ||ಅನುಮಾನವಿಲ್ಲದೆ ಅವನನುಜ ವಿಭೀಷಣಗೆಘನ ಪದವಿಯನಿತ್ತ ಹನುಮ ಬೋಧಿತ ಹರಿ2 ದಾತ ದಾತ 3
--------------
ಮೋಹನದಾಸರು
ಮಾರುತನ ನಿಜ ಜಾಯೆ ಪ ಬಾರಿ ಬಾರಿಗೆ ನಿನ್ನ ಚರಣವ ಸ್ಮರಿಸುವೆ ಚಾರುಮತಿಯನೀಯೆ ಅ.ಪ. ಮೂರನೆ ಯುಗದಲಿ ಧೀರ ದ್ರುಪದನಧ್ವರದೊಳುದಿಸಿ ಶೂರ ಪಾಂಡವರೈವರ ವೀರಪತ್ನಿಯು ನೀನೆನಿಸಿ ಕೌರವನ ಸಭೆಯಲಿ ಸೀರೆಯನು ಸೆಳೆಯಲು ನೀ ಮಾರಪಿತನ ಭಜಿಸಿ ಭೂರಿವಸನ ಪೊಂದಿದೆ ಧೀರೆ 1 ವೀರ ಮಾರುತಿಯ ಗದೆ ಕುರುಪನ ಊರು ಮುರಿಯಲೆಂದು ವಾರಿಧಿ ಮಿತಿ ಮೀರುತಿರೆ ನೀ ಸಾರಿದೆ ಪತಿಗಳ ಗಂಭೀರೆ 2 ಆ ರಣಾಗ್ರದಿ ಕ್ರೂರ ದುಶ್ಶಾಸನ ಸಾರಿ ಬರುವುದ ನೋಡಿ ದಾರಿ ಹಿಡಿದಪ್ಪಳಿಸವನ ದೋರೆ ಕರುಳ ಹಿರಿದೀಡ್ಯಾಡಿ ಮೋರೆಯಿರಿದು ಪಲ್ಮುರಿದು ಹಂಗಿಸಿದಂಥ- ಸತಿ 3
--------------
ರಂಗೇಶವಿಠಲದಾಸರು
ಮಾರುತಿ ನಿನ್ನಾ ನಿರುತದಿ ಭಜಿಪೆ ತ್ವರಿತದಿ ಹÀರಿ ಸರ್ವೋತ್ತಮನೆಂಬುವ ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು ಪರಿಪಾಲಿಸು ಎಂದು ಶಿರಸದಿ ನಮಿಪೆ ಆರಿಸಿ ನೋಡಲು ಆರಾರು ಇಲ್ಲವೊ ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ ಹರಿ ತಾ ಕರುಣಿಪನೆಂದು ಅರಿತು ನಿನ್ನಯ ದಿವ್ಯ ಚರಣ ಸೇರಿದೆನಯ್ಯಾ ಸರಿಬಂದದ್ದು ಮಾಡೋ ಹರಿ ಕುಲಾವರಿಯಾನೆ ಪರಿಪರಿ ಜನರನ್ನು ಪಾಲಿಸಿ ಎನ್ನನು ದೂರದಿ ಇಟ್ಟರೆ ದೊರೆತನವೇನಯ್ಯಾ ಸಾರುವೆ ಸಾರುವೆ ಸರಸಿಜನಾಭನ ಸುತನೆ ಆರುಮೂರೆರಡೊಂದು ಸಾವಿರಾ ಮೂರೆರಡು ಶತಶ್ವಾಸ ಜಪಗಳನು ಮೂರುಜೀವರಲ್ಲಿ ನೀರಜಜಾಕಲ್ಪ ಪರಿಯಂತರ ಮಾಡಿ ಅವರವರ ಗತಿಯಾ ಮರಿಯದೆ ನೀಡುವಿ ಗಿರಿಶಾನುತಪಾದ ಗುರುಜಗನ್ನಾಥ ವಿಠಲನ್ನ ಅರಿವಂತೆ ಮಾಡೋ ಧೀರಾ ಕರುಣಿಯೇ
--------------
ಗುರುಜಗನ್ನಾಥದಾಸರು
ಮಾರುತೀ ಕೊಡು ಭಕುತಿ ನುಡಿಸು ಕೀರ್ತಿ ಪ ತೋರೊ ನಿನ್ನೊಳು ಇಹ ನಿರ್ಮಲ ಮೂರುತಿಯಅ.ಪ ಶ್ರವಣಮಾಡಲು ಭಕುತಿ ಆವಕಾಲಕು ಇತ್ತು ತವಪದದಾಸರ ದಾಸ್ಯ ಕೊಡಿಸೋ ದೇವ 1 ಕೀರ್ತನದೊಳು ಹರಿಕೀರ್ತಿ ಕೊಂಡಾಡೆ ಸಂ ಕೀರ್ತನ ಭಕುತಿಗೆ ಕರ್ತದಾತ ನೀನೆ2 ಸ್ಮರಣೆಯು ಹರಿಯಲ್ಲಿ ನಿರುತವು ನಿನ್ನಲ್ಲಿ ಕರುಣಿಸಿ ಪೊರೆಯೊ ಗುರುವರ ಸುಂದರ 3 ಪಾದ ಸೇವೆಯ ಕೊಡು ಸಾದರದಿಂದಲಿ ಶ್ರೀಧರನಾ ಕೃಪಾಪಾತ್ರನೆಂದೆನಿಸಯ್ಯ 4 ಅಚ್ಯುತನಿಗೆ ನೀನಚ್ಚುಮೆಚ್ಚಾಗಿಹೆ ನಿಚ್ಚದಿ ಹರಿಪಾದರ್ಚನೆ ಮಾಡಿಸಯ್ಯ 5 ವಂದನಾಭಕುತಿ ಎನ್ನಿಂದ ನೀ ಮಾಡಿಸಿ ನಂದನಂದನಗಾನಂದಪಡಿಸೊ ದೇವ 6 ದಾಸಭಕುತಿ ಭಾಗ್ಯ ಆಶಿಸುವೆನು ನಿನ್ನ ವಾಸುದೇವನ ನಿಜದಾಸನೆ ಸರ್ವದಾ 7 ಸಖ್ಯಭಕುತಿ ಕೊಡೋ ಮುಖ್ಯಪ್ರಾಣೇಶನೆ ಮುಖ್ಯಕಾರಣ ಹರಿಯ ಮುಖ್ಯ ಪ್ರೇಮಪಾತ್ರ 8 ಆತ್ಮನಿವೇದನ ಭಕುತಿಯನ್ನು ಪರ ಮಾತ್ಮನಲ್ಲಿತ್ತು ನಿರ್ಮಲಾತ್ಮನೆಂದೆನಿಸೊ 9 ನವವಿಧ ಭಕುತಿಯ ಕೊಟ್ಟು ಸಲಹೋ ದೇವ ಅವಕಾಲಕು ಪವಮಾನ ನೀನೆ ಗತಿ 10 ಸಂಕಟ ಹರಿಪ ಶ್ರೀ ವೇಂಕಟೇಶನ ದೂತ ಭಂಟನೆಂದೆನಿಸೆನ್ನ ಸಂಕಟ ಹರಿಸಯ್ಯ11
--------------
ಉರಗಾದ್ರಿವಾಸವಿಠಲದಾಸರು
ಮಾರುತೀ ನಮ್ಮಗುರು ಮೂರುತೀ ಪ ಮಾರುತಿ ಕರುಣಿಸು ಜ್ಞಾನಾ ಎನ್ನ ಸೇರಿದ ಸತತ ಅಜ್ಞಾನಾ ಆಹ ದೂರ ಓಡಿಸಿ ಹರಿ ಆರಾಧನೆ ಇತ್ತು ಪಥ ಸರ್ವಾಧಾರ ಉದಾರನೆ ಅ.ಪ. ದ್ವಿತೀಯ ಯುಗದಲ್ಲವತರಿಸಿ ಸೀತಾ ಅತಿ ವೇಗದಿಂದ ಉತ್ತರಿಸಿ ರವಿ ಸುತಗೊಲಿದವನುದ್ಧರಿಸಿ ಆಹಾ ಕ್ಷಿತಿಜದೇವಿಯಳನು ಸ್ತುತಿಸಿ ಮುದ್ರಿಕೆಯಿತ್ತು ದಿವಿಜರ ಸದೆದ ಭಾರತಿಯ ರಮಣನೆ 1 ಕುರುಕುಲದಲ್ಲಿ ಉದ್ಭವಿಸಿ ಬಲು ಗರಳ ಪದಾರ್ಥವ ಸಲಿಸಿ ಚೆಲ್ವ ತರಣಿ ರೂಪವನೆ ಸಿಂಗರಿಸಿ ನೀಚ ತರ ಕೀಚಕನ ಸಂಹರಿಸಿ ಆಹ ಜರೆಯ ಸುತನ ಸೀಳಿ ಧರಣಿಪಾಲಕರನ್ನು ಸೆರೆಯ ಬಿಡಿಸಿ ಕಾಯ್ದ ಪರಮ ಸಮರ್ಥನೆ 2 ಭೂತಳದೊಳಗೆ ಯತಿಯ ರೂಪ ನೀ ತಾಳಿದೆಯೋ ಶುಭಕಾಯ ಮಾಯಿ ವ್ರಾತ ಗೆಲಿದೆ ಮಧ್ವರಾಯಾ ಕಾಯ ಜಾತ ಜನಕಗತಿ ಪ್ರೀಯಾ ಆಹಾ ಭೂತನಾಥನೆ ಪರಮಾತುಮನೆಂಬ ಪಾತಕರರಿ ಜಗನ್ನಾಥವಿಠಲನ ದೂತ 3
--------------
ಜಗನ್ನಾಥದಾಸರು
ಮಾರ್ಗದರ್ಶಕೆ ದೇವಿ ಮಾರ್ಗ ತೋರಮ್ಮ |ಸರ್ವ ಪೂರ್ವದಿ ಕವ್ಯ ಬಾಲನೆಂಬನ ಮಗಳೇ ಪ ಹರಿದೀಕ್ಷೆ ಹರಿತತ್ವ ನಿರ್ಣಯಾದಿಗಳಿರುವನರರು ಕಲಿಯುಗದಲ್ಲಿ ದುರ್ಲಭರು ಎಂದು |ಪರಿಪರಿಯ ಚಿತ್ರಿಸುತ ಸದ್ಬೋಧ ಮಾಡಿರುವೆಹರಿ ಪದಾಬ್ಜದಿ ಭಕುತಿ ಎಷ್ಟಿಹುದೊ ನಿನ್ನಲ್ಲಿ 1 ಶೇಷಾಚಲಕೆ ಬಂದು ಆ ಸುತೀರ್ಥವು ಕಪಿಲಲೇಸಾಗಿ ಮಜ್ಜನವಗೈದು ತಪವಾ |ಸಾಸಿರೊರ್ಷವು ದಿವ್ಯ ಏಕ ಚಿತ್ತದಿ ಗೈದುಭಾಸುರ ಸ್ತೋತ್ರದಿ ಹರಿಯ ತೋಷಿಸಿದೇ 2 ತಂದೆ ತಾಯಿಯು ನೀನು ಬಂಧು ಬಳಗವು ನೀನುಎಂದೆಂದಿU5ಭ್ರಾತ ವಲ್ಲಭನು ನೀನೇ |ಇಂದಿರೇಶನ ಹೊರತು ಮಂದಿ ಬೇರಿಲ್ಲೆನಗೆಎಂದು ನೀತುತಿಸಿ ಹರಿ ಸಂದರ್ಶನವ ಪಡೆದೇ 3 ದ್ವಾಪರದಲಾ ಕವ್ಯ 5À್ನಜಿತು ನೃಪನಾಗೆರೂಪಲಾವಣ್ಯಾತಿಶಯಗಳಿ5 |ಭೂಪ ಕುವರಿಯು ಆಗಿ ನೀಲಾಖ್ಯೆ ಎನಿಸುತ್ತಶ್ರೀ ಪತಿಯ ಕೈ ಪಿಡಿಯೆ ಮನವ ನೀ ಮಾಡ್ಡೇ 4 ದೈತ್ಯ ಸಪ್ತಕರೇವೆ ಗೂಳಿಗಳು ತಾವಾಗಿಸತ್ಯ ಹರಿ ದ್ವೇಷವನೆ ಸಾಧಿಸುವೆವೆಂದೂನಿತ್ಯ ಪುಷ್ಟಾಂಗದಲಿ ಬೆಳೆಯುತ್ತ ನೃಪನಲ್ಲಿಕೃತ್ಯ ಸ್ವಯಂವರ ಕೇಳಿ ಹರ್ಷಿತರು ಆಗೀ 5 ವಿಪರೀತ ಮತಿಯುಳ್ಳ ಅಪರಿಮಿತ ಬಲತೋರ್ವಸಪುತ ಗೂಳಿಗಳನ್ನೆ ಆರು ಬಂಧಿಪರೋ |ನೃಪನೆಂದ ಸುತೆ ನೀಲೆ ಕನ್ಯೆ ಕೊಡುವೆನು ಅವಗೆನೃಪ ನಿಂತು ಪಣತೊಟ್ಟ ಕೌತುಕವ ಕೇಳೀ 6 ಆರು ಬಂದವರೆಲ್ಲ ಹೋರಿಗಳ ಪಿಡಿಯಲ್ಕೆವೀರ್ಯ ಸಾಲದೆ ಮರಳಿ ಹೋಗುತಿರಲೂ |ಮಾರ ಪಿತ ಶಿರಿ ಕೃಷ್ಣ ಹೋರಿ ನಾಸಿಕಗಳಿಗೆದಾರಗಳ ಬಿಗಿಯುತ್ತೆ ಬಂಧವನ ಗೈದಾ 7 ದೇವಿ ಸುಂದರಿ ನೀಲೆ ದಿವ್ಯ ಹಾರವ ಪಿಡಿದು ದೇವ ದೇವೇಶ ಶಿರಿ ಕೃಷ್ಣ ಕಂಠದಲೀಹಾವ ಭಾವದಿ ಬಂದು ಅರ್ಪಿಸಲು ತಕ್ಷಣದಿದೇವ ವಾದ್ಯವು ಮೊರೆಯೆ ಪೂವ ಮಳೆ ಬಿತ್ತು8 ಕೃಷ್ಣ ಮಡದಿಯರಾರು ಮಂದಿಯೊಳು ನೀಲಾಖ್ಯೆಲಗ್ನದುತ್ಸವ ಕೇಳ್ದ ಭಕುತ ಜನರಾ |ಭಗ್ನ ಗೈಸುತ ಪಾಪ ಮಗ್ನವಾಹುದು ಮನವುಕೃಷ್ಣ ಗುರು ಗೋವಿಂದ ವಿಠಲ ಪದದಲ್ಲೀ 9
--------------
ಗುರುಗೋವಿಂದವಿಠಲರು
ಮಾರ್ಗವೇ ಕಾಣಿಸದು ವೈಕುಂಠಕೆ ಪೇರ್ಗಿರಿಗಳ ದಾಂಟಲಾರ್ಗಳವೋ ಕಾಣೆ ಪ ಭೋರ್ಗರೆವುದು ಬಲಮಾರ್ಗದಿ ಜಲನಿಧಿ ಕಾರ್ಗಡಲು ಎಡ ಮಾರ್ಗದಿ ಕಗ್ಗತ್ತಲೆ ಅ.ಪ ಹಿಂದೆ ಮೃಗಂಗಳ ಸಂದಣಿಯಾರ್ಭಟ ದಿಂದ ಮನದ ದೈರ್ಯಕುಂದಿದುದಕಟ ಮ ಹಾಂಧಕೂಪದೊಳೆನ್ನ ಎದೆ ಕುಸಿದು ಬಂಧಿಸಿತೆನ್ನ ಕಾವ ಬಂಧುಗಳಿಲ್ಲ 1 ಕೂಪದಿ ಕ್ರಿಮಿಗಳು ಕೋಪಿಸಿ ತನುವನು ಈ ಪರಿಯೆಲ್ಲವು ತಾಪತ್ರಯಂಗಳ ಧೂಪ ದೀಪಗಳ ಪಾಪದ ಫಲವೋ 2 ದಡವನು ಕಾಣದೆ ತಡಬಡಿಸುವೆನೋ ಮೃಡನು ತಾ ಮಾಂಗಿರಿಯೊಡೆಯ ಶ್ರೀರಂಗ ಕಡುಪಾತಕಿಯ ಕೈಹಿಡಿದೆತ್ತಿ ಕೃಪೆಯಿಂದ ತಡಿಗೆ ಸೇರಿಸಿ ನಿನ್ನ ಅಡಿಯಪಿಡಿಸೋ ದೇವಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾಲೆ ಧರಿಸಿಕೊಂಡೆ ಮಾಧವನೆಂಬ ಮಣಿ ಮಾಲೆ ಧರಿಸಿಕೊಂಡೆ ಪ ಮಾಲೆ ಧರಿಸಿಕೊಂಡೆ ನೀಲಶಾಮನದಿವ್ಯ ಲೀಲೆ ಮೂಲೋಕಕ್ಕೆ ಮೇಲುಮೇಲುಯೆಂಬ ಅ,ಪ ಭವದೂರ ಪಾದವಂದನೆಂಬ ಮುಕುಟ ಧರಿಸಿಕೊಂಡೆ ಮಾದಮರ್ದನನಂಘ್ರಿಸ್ಮರಣೆಂಬ ಕರ್ಣಕುಂಡಲಿಟ್ಟುಕೊಂಡೆ ಭುವನತ್ರಯದ ಮೇಲೆ ಜವನ ನಿರ್ಭಯಕೇಶವನ ದಯವು ಎಂಬ ಭವದೊಳಗೆ ಹೊಕ್ಕು 1 ಜಡಜನಾಭನಚರಣ ದೃಢವೆಂಬ ಮಡಿಯನುಟ್ಟುಕೊಂಡೆ ಕಡಲಶಯನನಡಿಯ ಭಕ್ತೆಂಬ ಕವಚ ತೊಟ್ಟುಕೊಂಡೆ ಪೊಡವಿಗಧಿಕ ಓರ್ವ ಒಡೆಯ ಹರಿ ಅಹುದೆಂಬ ದೃಢನಿಶ್ಚಯದ ಮೇಲ್ಮಾಡಿನೊಳಗೆ ಕೂತು 2 ಅಂಗಜಪಿತನೆಂಬ ಬಂಗಾರ ಕಂಕಣಿಟ್ಟುಕೊಂಡೆ ರಂಗ ಕೃಷ್ಣನೆಂಬ ರತ್ನದ ಉಂಗುರಿಟ್ಟುಕೊಂಡೆ ಮಂಗಲಮಯ ನೀಲಾಂಗ ಶ್ರೀರಾಮನಾಮ ಚಂದ್ರಹಾರ ಹಾಕಿಕೊಂಡು ಶೃಂಗಾರನಾಗಿ ನಿಂತೆ 3
--------------
ರಾಮದಾಸರು
ಮಾಲೆ ಹಾಕುವೆ ಲೋಲ ಪುರುಷಗೆ ಪ ಮಲ್ಲ ಮಲ್ಲಿಗೆ ಜಾಜಿ ಸಂಪಗೆಯ ಅ.ಪ ವ್ಯಾಸಕೋಟ್ ಬನಿಯನ್ ಷರಟು ಜುಬ್ಬಾ ವೀಷರಾಯಿ ಬೂಡ್ಸನು ಧರಿಸುವಗೆ 1 ಇಂಗ್ಲೀಷು ಬುಕ್ಕನು ಕೈಲಿ ಹಿಡಿದು ಬಂಗ್ಲೆಯಲಿ ಓದುತ ಕುಳಿತಿರುವಗೆ 2 ಬೈಸ್ಕಲ್ ಮೇಲೆ ಸವಾರಿ ಮಾಡುತ್ತ ಸೈ ಶಹಭಾಸೆನ್ನಿಸಿಕೊಳ್ಳುವವಗೆ 3 ಮಂದಿಯೊಡನೆ ಮಾತಾಡುತ ನಗುವಗೆ 4 ದ್ವಾಸೆ ಬ್ರೆಡ್ಡುಪ್ಪಿಟ್ಟನು ಭಕ್ಷಿಸಿ ತಾಸುರ್‍ಸುರಯೆಂದು ಕಾಫಿಯಕುಡಿವಗೆ 5 ದೊಡ್ಡ ದೊಡ್ಡ ಪ್ಯಾಸುಗಳನು ಮಾಡಿ ಗುಡ್‍ಮ್ಯಾನ್ ದಿಸ್‍ಮ್ಯಾನ್‍ಯೆನ್ನಿಸಿಕೊಳ್ಳುವಗೆ 6 ಗುರುರಾಮವಿಠಲನು ತೋರಿದನಿವರನು ಹಿರಿಯರ ಪುಣ್ಯವು ಎಷ್ಟೆಂದು ಹೇಳಲಿ 7
--------------
ಗುರುರಾಮವಿಠಲ
ಮಾವನ ಮನೆಯೊಳಗೆ ಇರಬಹುದೆ ಕೋವಿದರು ಪ ಹರಣ ನೀಡಲು ಬಹುದುಬೇವ ಕಿಚ್ಚನು ಹಿಡಿದು ನುಂಗಬಹುದುಭಾವೆಯಳ ತಂದೆ ಮನೆಯಲಿ ಜೀವಿಪುದಕಿಂತಸಾವುದೇ ಲೇಸು ಅಭಿಮಾನಿಗಳಿಗೆ1 ಪರರ ಸೇರಲು ಬಹುದು ಪತಿತರಲ್ಲಿರಬಹುದುಕೊರಳ ಘಾತಕಂಗೆ ಶಿರ ಒಪ್ಪಿಸಬಹುದುತರುಣಿಯಳ ತೌರು ಮನೆಯಲಿ ಇರುವುದಕಿಂತತರುಗಿರಿ ಗುಹೆಯಲ್ಲಿ ಇದ್ದು ಜೀವಿಸಬಹುದು 2 ಮಾವ ಅತ್ತೆಯು ನೊಂದು ಅತ್ತಿಗೆಯು ತಾ ಜರಿದುಹೇವವನಿಕ್ಕಿ ಚೂರ್ಣವ ಮಾಡಲುಆವಾಗ ನೋಡಿದರು ಎನಗೆ ಹಿತರಿಲ್ಲೆಂದುಮಾವ ಹೊರಗಾಡುವನು ಚಿಕ್ಕ ನುಡಿಗಳನು 3 ಬಂದೊಂದು ತಿಂಗಳೊಳು ಬಹುಮಾನ ನಡತೆಗಳುಬಂದೆರಡು ತಿಂಗಳೊಳಗೆ ಹಿತವಾದವುಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟುವುವುಸಂದೇಹವೇಕೆ ಸಂಸಾರಿಗಳಿಗೆ4 ಈ ಪರಿಯಲುಂಬಂಥ ಅಳಿಯ ಭೋಜನಕಿಂತಗೋಪಾಳ ಲೇಸು ಅಭಿಮಾನಿಗಳಿಗೆಶ್ರೀಪತಿ ನೆಲೆಯಾದಿಕೇಶವನ ಚರಣ ಸ-ಮೀಪದಲಿ ವಾಸಿಪುದೆ ವಾಸಿ ಮನವೆ 5 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ಮಾವನ ಮರ್ದನ ಜಗದ ಜೀವನ ಪ ಸೇವಕಜನ ಭಾವದೊಳಿಹ್ಯ ದೇವದೇವ ದೇವಕಿ ಕಂದನೋ ಅ,ಪ ನವನೀತ ಜಾರತನದಿ ಮೀರಿದವನ ನಿರಂಜನ 1 ಅಂಗನೆಯರ ಭಂಗಿಸಿದ ಅಂಗನೆಯಾಗಿ ಸಂಗರವ ಗೆಲಿದ ಪಿಂಗದಿವನಮಹಿಮಾರಿಂದಂಗಜಾರಿ ವಂದ್ಯನೋ 2 ನಾಮರೂಪಿಲ್ಲದವನು ನಾಮಧಾರಿ ಎನಿಸಿದನೆ ಸ್ವಾಮಿ ರಾಮನ ಮಹಿಮೆ ಈ ಕಾಮಿಜನಗಳು ಬಲ್ಲರೇ 3
--------------
ರಾಮದಾಸರು
ಮಾವಿನಕೆರೆ 6 ಮಾಧವನಿವನೋ ಉಮಾಧವನಿವನೋ ಮಧುಸೂದನನೋ ಗಂಗಾಧರನೋ ಪ ವೇದವನುಲಿದನೋ ನಾದಕೆ ಒಲಿದನೋ ಮೇದಿನಿಗೈದಿ ಮಾಂಗಿರಿಯ ಸೇರಿದನು ಅ.ಪ ಹಿರಿಯ ಕಲ್ಲ ಗುಡಾರದೊಳಿರುವ ಒರಳಲಿ ನಲಿವ ಹರನವೊಲೆಸೆವ ಕರಗಳಿಂದೆಳೆದರೂ ಬಾರನೆಂದೆನುವ ಸ್ಮರಿಸುವ ಮಾನವನೆದುರಲಿ ನಿಲುವ 1 ಎರೆದ ಹಾಲಾದರೂ ಸುರಿದ ನೀರಾದರೂ ದೊರಕದು ಕರಕೆ ತೊಟ್ಟೊಂದಾದರೂ ಹರಕೆ ಹೊತ್ತವರು ನೆರೆನಮಿಸುವರು ಹರುಷದಿ ಕುಣಿದು ಕೊಂಡಾಡುತಿಹರು 2 ಸಾವಿರ ನಾಮನು ದೇವನೀನೊಬ್ಬನು ಭಾವದೊಳಿರುವನು ಕಾವವನು ನೋವ ಬಿಡಿಸುವನು ಪಾವನಚರಣನು ಭಾವುಕಗೊಲಿವನು ಗಿರಿಯ ಮೇಲಿಹನು 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾವಿನಕೆರೆ 8 ರಂಗಗಿರಿಯನೇರಿಬರುವಾ ತಂಗಿ ಬರುವೆಯಾ ಪ ಅಂಗನೆಯರು ಕುಣಿದು ಮಣಿವ ಸಂಗದೊಳಿರುವಾ ಅ.ಪ ಅವನ ಪಾದದ ನಡಗೆ ಚಂದ | ಧವಳಹಂಸ ಮನಕಾನಂದಾ ಅವನ ನಲಿವು ನವಿಲಿಗಂದ | ಅವನ ಉಲಿವು ಕೋಗಿಲೆಯಂದಾ 1 ಅವನ ಕರದ ವೇಣುಗಾನ ಭುವನಕೆಲ್ಲ ಅಮೃತಪಾನ ಅವನ ನಗೆಯ ತೋರ್ಪ ಭವವ ಕಳೆವ ಪುಣ್ಯಸದನ 2 ವಾರಿವಾಹ ವರ್ಣದವನು ಹಾರಪದಕ ಧರಿಸಿದವನು ಚಾರುಸುಂದರ ಪೀತಾಂಬರನು 3 ಹಿಂದೆ ನೀನು ನೋಡಲಿಲ್ಲ ಮುಂದೆ ನಾನು ಕರೆವುದಿಲ್ಲ ಇಂದು ಬಂದೆಬರುವನಲ್ಲ ಸಂದೇಹ ಎಳ್ಳಷ್ಟೂ ಇಲ್ಲ 4 ಬೊಮ್ಮನಪ್ಪನವನೆ ನೀರೆ ನಮ್ಮ ಮಾಂಗಿರಿಗೊಪ್ಪುವ ತಾರೆ ಹೊಮ್ಮಿದಾ ಸಂಪ್ರೀತಿಯ ಬೀರೆ ಸುಮ್ಮನೆ ನನ್ನೊಡನೆ ಬಾರೆ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್