ಒಟ್ಟು 17313 ಕಡೆಗಳಲ್ಲಿ , 134 ದಾಸರು , 7747 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಯ ಗಂಗಾಧರಪ್ರಿಯ ರಮಣಿ ಬಾಲಾಂಬಿಕೆ ಫಣಿವೇಣಿ ಕಲ್ಯಾಣಿ ಪ ಶ್ರೀಲಲಿತೆ ವರದಾಯಕ ಮಹಿತೆ ಬಾಲಗೋಪಾಲ ಸೋದರಿ ಶುಭಚರಿತೆ 1 ದೇವಿ ಭವಾನಿ ಶಿವೆ ಕಾತ್ಯಾಯಿನಿ ಪಾವನಿ ಭಾಮಿನಿ ತ್ರಿಜಗನ್ಮೋಹಿನಿ 2 ಮಂಗಳದಾಯಕಿ ಶಂಕರನಾಯಕಿ ಮಾಂಗಿರಿರಂಗ ಕೃಪಾಂಬರದಾಯಕಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಯ ನರಕೇಸರಿ ಸತತಂ ಪರಿಪೂರ್ಣ ಗುಣಾಕರ ಪ ವಿನುತ ಸಂಜೀವ ದೇವ ಲೀಲಾ ಖೇಲನ ಸ್ತಂಭ ವಿದಾರಣ 1 ರಾಕ್ಷಸ ಗರ್ಭ ನಿರ್ಭೇದನ ನಿಪುಣ ಸಿಂಹನಾದ ಶ್ರೀದ ದಕ್ಷೀ ವಿಪಕ್ಷಸು ಶಿಕ್ಷಣ ದಕ್ಷನೆ 2 ಶೂರ ಹಿರಣ್ಯಕ ಹೃದಯ ದಳನಸಂಹಾರ ವೀರ ಸಾರ ಪೊರ ಹರೆ 3 ಕಾಲ ಲೋಲ ಭಂಜನ ರಂಜನ 4 ಶ್ರೀ ಲಕ್ಷ್ಮೀ ಕುಚ ಕುಂಕುಮ ಪಂಕಿಲ ದೇಹ ದೇವ ನೀಲ ನಿಭಾಕೃತಿ ಧೇನುನಗರ ಪತೇ 5
--------------
ಬೇಟೆರಾಯ ದೀಕ್ಷಿತರು
ಪಾಲಯಮಾಂ ಪಾರ್ವತಿಯೆ ಪಾಪ ವಿನಾಶಿನಿ ತಾಯೆ ಶೀಲ ಮೂರುತಿ ಶಿವೆ ಈ ಜಾಲ ಸಂಸಾರದಿ ಪ. ತ್ರಿಜಗ ಪೂಜಿತೆ ನಿನ್ನ ಭಜಿಸೂವಾಮನವಿತ್ತು ಸುಜನರಾಪ್ತೆಯೆ ಎನ್ನಾ 1 ರಾಗ ರಾಗದಿ ನಿನ್ನ ಅನುರಾಗದಿಂ ಪೂಜಿಪೆ ಭಾಗ್ಯವನು ಕೊಟ್ಟು ನೀ ವೈರಾಗ್ಯ ಭಕ್ತಿಯನು 2 ಅರಿಶಿಣ ಕುಂಕುಮವನ್ನು ವರ ಮಾಂಗಲ್ಯದಾ ಭಾಗ್ಯ ನಿರುತದಿ ನೀಡುತ ಪೊರೆಯೆ ಶ್ರೀ ಶ್ರೀನಿವಾಸ ಸಹೋದರಿಯೆ3
--------------
ಸರಸ್ವತಿ ಬಾಯಿ
ಪಾಲಯಮಾಂ ಶ್ರೀ ರಾಮಾ ಮೂಲ ಸುಗುಣ ಶೀಲನೆ ಪ ನೀಳ್ಗರೆವ ಹೃದಯನಿವಾಸಾ ಕಾಲಾಂತಕ ಕರ್ಮನಾಶಾ ಚಾಳಿಕ ಚಿನ್ಮಯ ಸುರೇಶ ಹರೀ ಲೋಲಗುಣಾತೀತನೆ 1 ಚಂಡಕಿರಣ ಕುಲಜರಾಘವಾ ಸುಂದರಶ್ರೀ ಸೀತಾಧವಾ ಛಂಧ ನಿಜಾನಂದ ವೀಯುವಾ ಬಂದಭಯನಿವಾರನೇ ನೀ 2 ದಶಮುಖರಾವಣ ನಿವಾರಣಾ ಅಸುರಾಸುರ ನಿಕ್ರಂದ ನಾ ಋಷಿಯಾಗವ ಕಾಯ್ದ ದೇವಾ 3 ಅಂಬುಜಾಕ್ಷಾನಂತರೂಪಾ ತುಂಬಿಹ ಸದ್ಗುರು ಸ್ವರೂಪಾ ನಂಬಿದ ಭಕ್ತರನೆ ಪಾಲಿಪಾ ಚಿದಂಬರ ಶಾಂತಿದಾಯಕಾ 4
--------------
ಶಾಂತಿಬಾಯಿ
ಪಾಲಯಮಾಂ ಸುಶೀಲೇಂದ್ರ ಸನ್ಮಹಿಮ ಶಾಲಿ ಶ್ರೀವರದ ಕೂಲ ನಿವಾಸ ಪ ಅನಿಲಮತಾಂಬುಧಿ | ಅನಿಮಿಷಧೀರ ಅನುಪಮ ಚರಿತ ಸದ್ಗುಣ ಗಂಭೀರ ಮುನಿ ಸುವೃತೀಂದ್ರ ಸನ್ಮಾನಸ ನಿಲಯ 1 ಕರುಣ ಭರಿತ ಶರಣು ಸುಪ್ರೀತ ಪರಮ ಪುರುಷ ಸುವೃತೀಂದ್ರ ಕುಮಾರ ಕುಲಿಶ ಸುಧೀರ 2 ಕೋವಿದರೊಡೆಯ ಪಾವನಕಾಯ ಭೂವಿಭುದಾವಳಿ ಸೇವಿತ ಸದಯ ಶ್ರೀವರ ಶಾಮಸುಂದರಗತಿ ಪ್ರೀಯ 3
--------------
ಶಾಮಸುಂದರ ವಿಠಲ
ಪಾಲಯಾ ಉರಗಾರಿ ಗಮನಾ | ಶ್ರೀ ಲಕ್ಷುಮಿ ರಮಣಾ | ಭಂಜನ ಸಾಗರ | ಕೀಲನ ಫಣಿಶಯನಾ | ಭಾಲಲೋಚನ ವಂದಿತ ಚರಣಾ | ತ್ರಿಲೋಕ ಜೀವನಾ | ವಾಲಿ ಮರ್ದನ ಶರಣಾಗತ ಜನ | ಕಮಲ ನಯನಾ 1 ವಾರಜಾನನ ವಾರಿಜ ಭ್ರಮರಾ | ಕರಿಭಯ ನಿವಾರಾ | ನೀಲ - ಶರೀರಾ | ಕೇಶವ ಕೇಯೂರ ಕೌಸ್ತುಭಧಾರ | ನೀರಜಾಸನನುತ ಯದುವೀರಾ | ಶ್ರೀರಂಗ ಗದಾಧರಾ | ಸುಜನ | ಹೃದ್ವನಜ ವಿಹಾರ ಧರಣೀಧರಾ 2 ಮಂದರೋದ್ದರ ಪತಿತ ಪಾವನ | ಕುಂದ ಕುಟುಲಮರದನಾ | ಸ್ಯಂದ ಜನಕ ಸಖಸ್ಮರಪಿತಹರಿ | ಗೋವಿಂದ ಧುರಿತ ಹರಣಾ | ನಂದಕಿಶೋರ ಶ್ರೀ ನಾರಾಯಣಾ | ಸುಂದರ ವದನಾ | ಮಂದರಕುಲರಿಸಹೋದರ ಮಹಿಪತಿ | ನಂದನ ಪ್ರಭು ಕೃಷ್ಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಯಾನಂತ ಶಯನಾ| ಶ್ರೀ ಲೋಲಂಬುಜ ನಯನಾ ಪ ಸರಸಿಜಾಸನ ಜನಕಾ ವರ ಯದುಕುಲ ತಿಲಕಾ| ಸುರಮುನಿಜನ ಪ್ರೀಯ ಪಾಂಡವ ರಕ್ಷಕ| ಶರಣಾಗತ ವತ್ಸಲಾ ವಿಶ್ವವ್ಯಾಪಕಾ 1 ಭವ ಪಾಶಾ| ಮುರಹರ ಸರ್ವೇಶಾ| ಕರುಣಾ ಸಾಗರ| ಮುಕುಂದ ಹೃಷಿಕೇಶಾ| ಸರಸಿರುಹ ಸಖ| ಕೋಟಿ ಪ್ರಕಾಶ2 ನವನೀತ ಚೋರಾ| ಗಿರಿವೈರಿ ಸೋದರಾ| ದುರಿತ ನಿವಾರಣ| ಪೀತಾಂಬರ ಧರಾ| ಗುರುವರ ಮಹಿಪತಿ| ಸುತ ಮನೋಹರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಯಾಂಶು ಭೂಮಿಸುತೇ ಪುಷ್ಪಮಾಲಾ ಶೋಭಿತೇ ಪನೀಲ ಮೇಘಶ್ಯಾಮ ಮಹಿತೇ ಶ್ರೀಪ್ರಬಂಧ ವಿಲಸಿತೇ ಅ.ಪವಿಷ್ಣುಚಿತ್ತ ಪರಿಪೋಷಿತೇ ಕೃಷ್ಣ ಸುಧಾಮೃತ [ವಿಸ್ತ]ರತೇಕೃಷ್ಣಭಕ್ತ ಸ್ತುತಿಭಾಜಿತೇ ವಿಷ್ಣುಲೋಕದಾತೆ ಮಾತೇ 1ಮಂಗಳಾಂಗಿ ಸುಗುಣಭರಿತೇಇಂಗಿತಾರ್ಥದಾತೆ ಪ್ರೀತೆರಂಗನಾಯಕೀ ಸಮೇತ ಮಾಂಗಿರೀಶ ದಯಿತೇ ಮಹಿತೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಸಾಗರ ಸಂಭೂತೆ ಕೈವಲ್ಯದಾತೆ ಪಾಲಿಸೆನ್ನನು ನಿಜಮಾತೆ ಪ ಆಲಿಸು ನಿನ್ನಯ ಬಾಲನ ನುಡಿ ಈ ಕಾಲದಿ ಮನ್ಮನ ಆಲಯದೊಳು ನಿಂದು ಅ.ಪ ನಿತ್ಯ ನಿರ್ಮಲೆ ಈ ಮಹಾಮಹಿಮ ವಿಶಾಲೆ ಕಾಮನ ಜನನಿ ಸುಲೀಲೆ ಜಲಜಸುಮಾಲೇ ತಾಮರಸಾಂಬಕೆ ಸಾಮಜಭವ ಸು - ತ್ರಾಮ ಪ್ರಮುಖ ಸುರಸ್ತೋಮ ನಮಿತಗುಣ - ಪಾದ ಯಾಮ ಯಾಮಕೆ ನಿತ್ಯ ನೇಮದಿ ಭಜಿಪೆ ಶ್ರೀರಾಮನ ತೋರೆ 1 ವೇದಾಭಿಮಾನಿ ಅಂಬ್ರಾಣಿ ಸುಗಣಸನ್ಮಣಿ ವೇದವತಿಯೆ ರುಕ್ಮಿಣಿ ವೇದವಂದ್ಯಳೆ ಗುಣಪೂರ್ಣೇ ನಿತ್ಯಕಲ್ಯಾಣಿ ಖೇದಗೊಳಿಸುವ ಭವೋದಧಿ ದಾಟಿಸಿ ಮೋದ ಕೊಡುವ ಪಂಚಭೇದಮತಿಯನಿತ್ತು ಯಾದವಗುಣವನುವಾದ ಮಾಡಿಸಿ ನಿತ್ಯ ಮೋದಬಡಿಸು ಶ್ರೀ ಮಾಧವರಾಣಿ 2 ಜಾತರೂಪಾಭಾಶುಭಗಾತ್ರಿ ಈ ಜಗಕೆ ಧಾತ್ರಿ ಸೀತೆ ನೀನೆ ಲೋಕಪವಿತ್ರೆ ಧಾತಾಪ್ರಮುಖಸುರಸ್ತೋತ್ರೇ ನೀರಜನೇತ್ರೆ ವೀತಭಯಳೆ ತ್ರಿನೇತ್ರೇ ಪಾತಕವನಕುಲವಿತಿಹೋತ್ರ ಸುರ - ವಿನುತ ಸುಖವ್ರಾತ ಕೊಡುವ ನಮ್ಮ ದಾತ ಗುರುಜಗನ್ನಾಥವಿಠಲಗೆ ನೀ ನೀತಸತಿಯೆ ಎನ್ನ ಮಾತೆ ವಿಖ್ಯಾತೆ3
--------------
ಗುರುಜಗನ್ನಾಥದಾಸರು
ಪಾಲಿತ ಸುರನರ ಜಾಲಸುಚರಿತ ಪ ಫಣಿ ಮಾಲಶ್ರೀಲೋಲ 1 ಜಾಲವಿಮೋಹಿತ ಬಾಲಾನು ಕೂಲ 2 ಧಾರಾಧರಾಭ ಶರೀರ ತಿರಸ್ಕøತದೂರ ವಿಹಗಸಂ ಚಾರವುದಾರ3 ನಿಗಮ ವಿಚಾರ ವಿಹಾರ 4 ಸುಖಕರಣ ಶ್ರೀರಮಣ 5 ಮನೋಹರಭೂಷ ಸುವೇಷ 6 ದ್ವಿರದವರದ ಶ್ರೀವರದ ವಿಠಲ 7
--------------
ಸರಗೂರು ವೆಂಕಟವರದಾರ್ಯರು
ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ ಪ ನೀಲಮೇಘಶ್ಯಾಮ ಬೇಲಾಪುರಾಧೀಶ ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ ಪರಮಪದನಾಥ ಇಂದಿರೆಯರಸ ಸಕಲ ನಿ ರ್ಜರರು ಪೂಜಿಸುವಂಘ್ರಿಯಾ [ವರ]ನೇಮದಿಂ ಪಾಡೀ ಆಡೀ ದುರಿತಭವ ಶರಧಿಯಾ ಪಿರಿದು ದಾಟುವೆನೆಂದು ಭರದೊಳೈದಿದವಗಾ ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ 1 ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು ದಿಂದು ಊನನಲ್ಲಾ ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ ನಂದವಳಿದುಬ್ಬಸದೊಳು ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ ವೃಂದಗಳು ನಿಂದಿರುವವೆ ಸ್ವಾಮಿ 2 ಮನುಜ ಮಾಡಿದ ಪಾತಕಗಳನು ಎಣಿಸುವಡೆ ಘಣಿರಾಜಗಳವಡುವುದೇ ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ ರಣಜನರೊಳೇಂಪುರುಳಿರುವುದೇ ಚಿನುಮಯನೆ ಭಕ್ತವತ್ಸಲನೆ ಅಚ್ಚುತz ಸನವಗುಣಗಳನೀ ಮರೆದು ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ ಧನ್ಯನೆಲೊ ವೈಕುಂಠರಮಣಾ 3
--------------
ಬೇಲೂರು ವೈಕುಂಠದಾಸರು
ಪಾಲಿಸಗಸ್ತ್ಯ ಪುರವಾಸಾ ಸಂತತ ಲೇಸಾ ಲಾಲಿಸೋ ಭಾರತೀಶಾ ಪ ಪದ್ಯ ನಿತ್ಯ ನಿರ್ಧೂತಮಾಯಾ ಕವಿಜನ ವರಗೇಯಾ, ಕಾಮಿತಾರ್ಥಾಭಿಧೀಯಾ ದಿವಿಭುವಿ ನಿಜಗೇಯಾ, ನೀತ ಸದ್ಭಕ್ತ ಪ್ರೀಯಾ ತ್ರಿವಿಧಜನ್ವ ಸುಕಾಯಾ ನಿಲಯ ವಾಙ್ಮನೋ ಪ್ರೀಯಾ ನಿಗಮ ವಂದಿತ ಮುಖ್ಯಗುಣಧಾಮಾ ಸ್ವಾಶ್ರಿತಪ್ರೇಮಾತೋಷಿತ ಶ್ರೀರಾಮಾ ಜಗಕೆ ಜೀವನÀನಾದ ಹನುಮಾ ಕಾಮದ ಭೀಮಾ ಮೋಕ್ಷದ ಮಧ್ವನಾಮಾ ಮುಗಿವೆ ಕರದ್ವಯ ನಿಮಗಯ್ಯಾ ನಮೋ ನತಜೀಯಾ ಸಂತತ ಪಿಡಿ ಕೈಯಾ 1 ಪದ್ಯ ಜಲರುಹಭವಪೋತಾ ಭೂತನಾಥೈಕತಾತಾ ಸುಲಲಿತಜನದಾತಾ ಶುದ್ಧಸತ್ತಾ ್ವಧಿನಾಥಾ ಕಲಿಮಲ ಪ್ರವೀಫಾತಾ ವಿಶ್ವಕೋಶವ್ಯತೀತಾ ವಿಲುಲಿತ ದಿತಿಜಾತಾ ಧೂತ ಸರ್ವತ್ರಾಭೀತಾ ಪದ ಏಕವಿಂಶತಿ ಸಹಸ್ರ ಷಟ್‍ಶತಾ ಜಪಮಾಡುತಾ ತ್ರಿವಿಧರೊಳಿರುತ ಎಕೋ ನಾರಾಯಣನುತ್ತಮಾ ಸರ್ವ ಸುರೋತ್ತಮ ಜೀವಗಣವೆಂಬೋದು ಅಥವಾ ಎಕೋ ಭಾವಭಕ್ತಿವಿಜ್ಞಾನಾ ಭವದೊಳು ಜ್ಞಾನಾ ಕಲ್ಪಿಸಿ ಅಜ್ಞಾನಾ ಏಕವಾಗಿತ್ತು ಸತ್ವರಾ ಭವದಿಂದ ಮುಕ್ತರಾ ಮಾಡುವಿ ಸತ್ವರಾ 2 ಪದ್ಯ ಶ್ರುತಿತತಿಸ್ಮøತಿವೇದ್ಯಾ ಸೂತ್ರನಾಮಾಮರಾದ್ಯಾ ವಿತತವಿಮಲಗಾತ್ರಾ, ವೀಶಶೇಷತ್ರಿನೇತ್ರಾ ಶತಮಖ ಮುಖಧ್ಯಾತಾ, ಧೀತವೇದಾಂತಜಾತಾ ಪದ ವಿಶ್ವೇಶ ವಿಶ್ವಾಂತರಾತುಮಾ ಚಿÉಚ್ಛುಕಾತುಮಾ ಸರ್ವಜೀವರುತ್ತಮಾ ವಿಶ್ವಾಸದಿಂದಲಿ ತವಪಾದಾ ಮೋದ ದಾಯಕ ಮುಕ್ತಿಫಲದಾ ವಿಶ್ವನಾಟಕ ವಿಷ್ಣುಪದ ಭಕ್ತಾ ಸಜ್ಜನಸಕ್ತ ಪಾಲಿಸು ನಿನ ಭಕ್ತಾ ವಿಶ್ವೇಶÀ ಗುರುಜಗನ್ನಾಥ ಮೋದ 3
--------------
ಗುರುಜಗನ್ನಾಥದಾಸರು
ಪಾಲಿಸಬೇಕಯ್ಯ ಪವಮಾನ ದೂತಾ ಪ. ಬಾಲಕನು ಮಾಡಿರುವ ಅಪರಾಧವೆಣಿಸದೆಲೆ ಅ.ಪ. ಕಾಲ ಶಿಷ್ಟರೊಡೆಯಮುಟ್ಟಿ ಭಜಿಸುವ ನಿನ್ನ ಘಟ್ಟಿ ಜ್ಞಾನಮೃತವಕೊಟ್ಟು ಸಲಹಲಿ ಬೇಕು ದಿಟ್ಟ ಪುರುಷ 1 ಮಧ್ವ ದಾಸರೊಳ್ ನಿಂದು ತಾರತಮ್ಯ ಪಂಚಭೇದಪದ್ಧತಿಗಳನುಸರಿಸಿ ತಿದ್ದಿ ತಿಳುಹಿದೆಯೋ ಶ್ರೀಮಧ್ವರಾಯರೇ ಜಗಕೆಲ್ಲ ಗುರುವೆಂಬಶ್ರದ್ಧೆಯನು ಪುಟ್ಟಿಸಿದೋ ಶೇಷಪದ ಯೋಗ್ಯ 2 ಮಂದಮತಿಯೆಂದು ನಾ ನಿಂದ್ಯ ಮಾಡದೆ ಮನಮಂದಿರದಿ ಛಂದದಲಿ ಪೊಳೆಯಬೇಕುಮಂದರೋದ್ಧರನ ಪದ ಕುಂದದಲೆ ಭಜಿಸುವಸಿಂಧುಶಯನ ತಂದೆವರದವಿಠಲದಾಸ 3
--------------
ಸಿರಿಗುರುತಂದೆವರದವಿಠಲರು
ಪಾಲಿಸಮ್ಮ ತುಳಸಿ ಹೂ ತಡವ ಮಾಡದೆ ನಿನ್ನ ವಾರಿ ತುರುಬಿನಲ್ಲಿ ಇರುವ ಪಾರಿಜಾತವಾ ಪ. ಒಂದೊಂದು ದಳದಲ್ಲಿ ಒಂದೊಂದು ಮೂರುತಿ ಒಂದನೇ ಕಾಲದಲ್ಲಿ ವರವ ಕೊಡುವಳು 1 ಎರಡೆರಡು ದಳದಲ್ಲಿ ಎರಡು ಮೂರುತಿ ಎರಡನೆ ಕಾಲದಲ್ಲಿ ವರವ ಕೊಡುವಳು 2 ಮೂರನೇ ಕಾಲದಲ್ಲಿ ಮೂರು ಮೂರುತಿ ಸಾರಿ ಶ್ರೀ ಶ್ರೀನಿವಾಸ ಸಲಹುವನೆ 3
--------------
ಸರಸ್ವತಿ ಬಾಯಿ
ಪಾಲಿಸಮ್ಮ ಶ್ರೀ| ಮೂಕಾಂಬಿಕೆಯೆ|| ಹಿಮಶೈಲಸಂಭವೆ|| ಪಾಲಿಸಮ್ಮ ಶ್ರೀ| ಮೂಕಾಂಬಿಕೆಯೇ|| ಪ ಸುಲಲಿತೆ| ದೇವಿ ಮಂಗಳೆ|| ಬಾಲೆಯನುಪಮ| ಲೀಲೆ ಶುಭಚರಿತೆ|ಭೂಲೋಕಪಾಲೆ ಸುಶೀಲೆ ಕಾತ್ಯಾಯಿನಿ 1 ಅಂಬುಜಾಕ್ಷಿ ಸ್ವ| ಯಂಭುಮುನಿ ನಿಕು| ರುಂಬನುತೆ ಜಗ|ದಂಬೆ ಶಂಕರಿ|| ಶುಂಭಧ್ವಂಸಿ ನಿ|ಶುಂಭಮರ್ದಿನಿಯೆ|ನಂಬಿದೆ ನಿನ್ನ ಹೇರಂಬನ ಮಾತೆಯೆ 2 ವೀವುದನುದಿನ|| ಭಾವವಿರಿಸುತ | ಪಾವನಾತ್ಮಕಿಯೆ| ದೇವಿ|ಮೃಡಾನಿ|ಭವಾನಿ|ಶರ್ವಾಣಿಯೆ 3
--------------
ವೆಂಕಟ್‍ರಾವ್