ಒಟ್ಟು 14277 ಕಡೆಗಳಲ್ಲಿ , 133 ದಾಸರು , 6728 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬದುಕು ಬದುಕು ನಂಜುಂಡಾ ಮ ಪರಿಯಂತ ಪ ಜನನಿಯ ಮಾತನು ಮೀರದೆ ಪರ ವನಿತೆಯರಿಗೆ ಮನಸೋಲದೆ ಬಿನುಗು ದೈವಂಗಳಿಗೆರಗದೆ ದು ರ್ಜನರ ಸಂಗಗಳ ನೀ ಮಾಡದೆ ನಂಜಾ 1 ತಪ್ಪುದಾರಿಯಲಿ ನೀ ಪೋಗದೆ ಆರು ಒಪ್ಪದ ಕರ್ಮವ ಮಾಡದೇ ತಪ್ಪು ಕಥೆಗಳನು ಕೇಳದೆ ಬಲು ಸಪ್ಪೆ ವಾಕ್ಯಂಗಳನಾಡದೆ ನಂಜಾ 2 ಹರಿಗೆರಗುತ ಹರಿಶರಣರ್ಗೆ ನಮಿಸುತ ಹರಿಯ ಕಥೆಗಳನ್ನು ಕೇಳುತಾ ಹರಿಯೆ ಸರ್ವೋತ್ತಮನೆಂದು ನೀನಿರುಕಂಡ್ಯ ಸಿರಿ ವೈಕುಂಠಕೇಶವ ರಕ್ಷಿಪ ನಂಜಾ 3
--------------
ಬೇಲೂರು ವೈಕುಂಠದಾಸರು
ಬಂದೆ ನಾ ನಿಂದೆ ಇಂದೇ | ವಂದಿಸಿದೆನೊ ವಂದೆ | ಮಾಧವ ತಂದೆ | ಆನಂದ ಇಂದಿರೇಶ ಬಂದೆ ಪ ಪುರುಹೂತ ಜಾತ ಸೂತ | ಸರಸಿಜ ತಾತಾ | ಪರಮ ಪುರುಷ ಖ್ಯಾತ | ಸರವಂದ್ಯ ದೈತ್ಯ ಘಾತಾ | ಹಾಹಾ ಚರಣವ ನಿರುತರ ನೆರೆನಂಬಿದೆ | ದು ಸ್ತರ ಭವಶರಧಿ ಉತ್ತರಿಸೊ ಉರಗಶಾಯಿ 1 ಮೂರ್ತಿ ವರದೇಶಾ ಶರಣರ ಪರಿತೋಷಾ | ತರತಮ್ಯ ಜ್ಞಾನ ಕೋಶ | ಹಹ | ಪುರಹರಗೀಕಾಶಿಪುರ ಕರುಣಿಸಿದ ಸುಂ | ದರಗಾತುರ ಗೋತುರ ಧರ ಧರಣೀಶಾ 2 ಅವಿಮುಕ್ತಿ ಕ್ಷೇತ್ರವಾಸಾ | ನವನವ ಗುಣಭೂಷಾ | ಅವಿಕಾರ ನಾನಾ ವೇಷಾ | ರವಿಜವನ ಪೊರೆವ ಮಿರುವ ಮಹಸತ್ಕಥಾ ಶ್ರವಣವೆ ಕೊಡು ಕೇಶವ ವಿಜಯವಿಠ್ಠಲಾ 3
--------------
ವಿಜಯದಾಸ
ಬಂದೆ ಭಗವತ್ಪಾದಯುಗಾರ ವಿಂದಕೆ ಮಿಳಿಂದನಾಗಿ ವಂದನೀಯರೆ ಯತಿಕುಲಾಬ್ಧಿ ಚಂದ್ರರ ಭುವನೇಂದ್ರತೀರ್ಥರೆ1 ಪರಮ ಪಾವನ ಭುವನೇಂದ್ರರ ಕರಸಂಜಾತ ವರದೇಂದ್ರರ ಕರಸರೋರುಹಭವರೆ ಮಹಾ ಕರುಣಾಂತಃಕರಣ ಧೀರರೆ2 ಸುಮತೀಂದ್ರಾದಿ ಯತೀಂದ್ರರ ವಿಮಲ ಹೃದಯಕಮಲಭಾಸ್ಕರ ಅಮಮ ನಿಮ್ಮ ಕಾಂಬ ಯೋಗ ಸುಕೃತ ಭೋಗಪೂಗ3 ಪೂರ್ಣಪ್ರಜ್ಞಾಚಾರ್ಯವರ್ಯ ಸನ್ನುತ ಮತಧೈರ್ಯ ಧುರ್ಯ ಧನ್ಯನಾದೆನು ನಾನಿಂದು ಸನ್ನಿಧಾನವನು ಕಂಡೆನು4 ಶ್ರೀಶ ಲಕ್ಷ್ಮೀನಾರಾಯಣ ವ್ಯಾಸ ರಘುಪತಿಯ ಚರಣೋ- ಪಾಸಕರೆ ಪಾವನರೆ ಕಾಶೀವiಠಾಧೀಶ್ವರರೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಂದೆ ರಂಗಯ್ಯ ನಿನ್ನಬಳಿಗೆ ಪ ನೊಂದು ಮನ ಬೇಡುವೆ ನಿನ್ನ ಶ್ರೀಪಾದಂಗಳಿಗೆ ಅ.ಪ Àಕ್ತಜನರು ಬಂದು ಕಾಡುವರೆಂತೆಂದು ಯುಕ್ತಿಯಿಂದಿಲ್ಲಿ ಬಂದು ಸಪ್ತಬೆಟ್ಟದ ಮಧ್ಯದೊಳ್ ವಿ ರಕ್ತಿಯ ಕೈಕೊಂಡು ನಿಂತಿರೆ ಭಕ್ತರ ಪಾಡೇನು ಪೇಳೆಲೊ 1 ಶ್ವೇತಾದ್ರಿಯಲಿ ಭಕ್ತವ್ರಾತ ಪಾಲಿಸಿದಂಥಾ ಪ್ರೀತಿವಚನ ಕೇಳಿ ಭೂತನಾಥನ ಭಯವ ಬಿಡಿಸಿ ಖ್ಯಾತಿಯನು ಪಡೆದಂಥ ವಾರ್ತೆಯ ರೀತಿಯನು ನಾ ಕೇಳಿ ಬಂದೆನೊ ಮಾತುಳಾಂತಕ ಮಾರಮಣ ಹರೇ 2 ಪಾದ ಧ್ಯಾನ ಮಾಡುವರ ಸಂಗವಿತ್ತು ಸಾನುರಾಗದಿ ಸಲಹೊ ಎನ್ನನು ದೀನನಾದ ಗಜೇಂದ್ರನ ಬಹು ಮಾನದಿಂದಲಿ ಕಾಯ್ದ ಪ್ರಭುವೆಂದು ಬಂದೇ 3
--------------
ಬಾಗೇಪಲ್ಲಿ ಶೇಷದಾಸರು
ಬಂದೆನಿಲ್ಲಿಗೆ ಸಂದರುಶನಕ್ಕೆ ಬಂದೆನಿಲ್ಲಿಗೆನ್ನ ಮನದಿ ಬಂದು ನಿಲ್ಲೆಂದು ನಿನ್ನ ವಂದಿಸ್ವರವ ಬೇಡುವೆ ನಾ ನಂದನ ಸುಂದರ ಕೃಷ್ಣ ಬಂದೆನಿಲ್ಲಿಗೆ ಪ ಪಾಲಶರಧಿ ಆಲದೆಲೆಯಲ್ಯೋಗನಿದ್ರೆ ಮಾಡಿ ನಿನ್ನ ನಾಭಿಕಮಲನಾಳದಿಂದ ಆಗ ಅಜನ ಪಡೆದ ಹರಿಯೆ 1 ಸಾಗರವ ಬಿಟ್ಟು ನಾಗಶಯನ ಶೂರಸುತನಲ್ಲುದಿಸಿ ಯೋಗಿಗಳ ಹೃದಯಕಮಲ ಆಲಯವ ಮಾಡಿದ್ದ ದೊರೆಯೆ2 ಕಂದನಾಗಿ ಬಂದು ಕಾಳಿಂದಿ ದಾಟಿ ನಂದಗೋಕುಲ ವೃಂದಾವನದಿ ಗೋವುಕಾಯ್ದ ಇಂದಿರೇಶ ಅಜನಪಿತನೆ 3 ಅಷ್ಟಮಠದ ಯತಿಗಳಿಂದ ಮುಟ್ಟಿಪೂಜೆಗೊಂಬುವಂಥ ಶ್ರೇಷ್ಠರೊಳಗೆ ಶ್ರೇಷ್ಠ ನಿನ್ನುತ್ಕøಷ್ಟಮಹಿಮೆ ನೋಡಲೀಗ4 ಧ್ವಜ ವಜ್ರಾಂಕುಶ ರೇಖವುಳ್ಳ ಪದುಮಪಾದ ನೋಡಲೀಗ5 ದೊಡ್ಡ ಮುತ್ತು ವಜ್ರದ್ಹರಳಿನಡ್ಡಿಕೆ ಉಡಿದಾರ ಹೊಳೆಯೆ ಒಡ್ಯಾಣವನೆಯಿಟ್ಟ ಜಂಘÉ ಜಾನುದ್ವಯವ ನೋಡಲೀಗ6 ಉದರದಲ್ಲೀರೇಳುಲೋಕ ಅಡಗಿಸಿದನಂತಶಯನ ಪದುಮ ಪೊಕ್ಕಳಿಂದ ಬ್ರಹ್ಮನ ಪಡೆದ ಪರಮಾತ್ಮನ್ನ ನೋಡ7 ವಂಕಿ ಬಾಹುಪುರಿಗಳಿಂದ ಕಂಕಣ ಭೂಷಣಗಳೊಪ್ಪೆ ಕರವ ನೋಡ8 ನೀಲವರಣ ನಿನ್ನ ಬೆರಳು ಸಾಲು ಮಾಣಿಕ್ಯ ಮುದ್ರಿಕಿಂದ್ಹೊಳೆಯೆ ಲೀಲೆಯಿಂದ ಗಿರಿಯೆತ್ತಿದ ಗೋಪಾಲಕೃಷ್ಣ ನಿನ್ನ ನೋಡ 9 ವೈಜಯಂತಿ ತೋರ ಮುತ್ತಿನೆಳೆÀಗಳ್ಹೊಳೆವೋ ಶ್ರೀದೇವೇರಿಗಾಶ್ರಯವಾಗಿದ್ದಿ ್ವಶಾಲ ವಕ್ಷಸ್ಥಳವ ನೋಡ10 ಪಚ್ಚೆಪದಕ ಪಾರಿಜಾತ ಅಚ್ಚ ಮಲ್ಲಿಗೆ ತುಳಸಿಮಾಲೆ ಶ್ರೀ- ಕೌಸ್ತುಭ ಶೃಂಗಾರ ಕೊರಳ ಸಿರಿಯರಸು ನಿನ್ನ ನೋಡ11 ಮಧ್ವರಾಯರು ಕೈಯ ಬೀಸೆ ಎದ್ದು ಬಂದು ಹಡಗದಿಂದಿ ಲ್ಲಿದ್ದಾನುಡುಪಿಕ್ಷೇತ್ರದಿಯೆಂದು ಮುದ್ದುಕೃಷ್ಣನ ಮುಖವ ನೋಡ12 ಕ್ರೂರಕಂಸನ(ಅ)ಪ್ಪಳಿಸಿ ದ್ವಾರಾವತಿಯಲ್ಲಿದ್ದ ಅಷ್ಟಭಾರ್ಯೇರಿಂದ್ವಿ- ಹಾರ ಮಾಡಿದ್ವಾರಿಜಾಕ್ಷನ್ವದನ ನೋಡ 13 ಚಂದ್ರನಂತೆ ಹೊಳೆವೊ ಮುಖದಿ ದುಂಡು ಮುತ್ತಿನ ಮೂಗುತಿನಿಟ್ಟು ಕುಂದಣದ್ವಜ್ರ ಬಿಗಿದ ಕರ್ಣಕುಂಡಲವನ್ನು ನೋಡಲೀಗ14 ಕೇಸರಿ ಗಂಧ ಕಸ್ತೂರಿಯ ನಾಮ ತಿಲಕ ಒಪ್ಪೋವಜ್ರದರಳೆಲೆ ದೇವಕೀಸುತನ (ನೋಡ) 15 ಬಾಲಭಾಸ್ಕರ ಕೋಟಿಲಾವಣ್ಯರೂಪಗೆಲುವ ಕಾಂತಿ ಸಾಲುದೀವಿಗೆ ಸೊಬಗು ಕಮಲದಳಾಯತಾಕ್ಷ ಹರಿಯ ನೋಡ16 ಕೆಂಪುಹರಳು ಝಗ ಝಗಿಸುವೊ ಪಂಚರತ್ನದ ಕಿರೀಟ ಚಂಚಲಾಕ್ಷ ಹರಿಯ ಶಿರದಿ ಮುಂಚೆ ನೋಡಿ ಮುಗಿವೆ ಕೈಯ17 ಅಸುರರ್ವಂಚಿಸಮೃತ ಬೀರಿ ಪಶುವಾಹನಗೆ ಮೋಹ ತೋರಿ ಮೋಸದಿಂದ ಭಸ್ಮಾಸುರನ ನಾಶಮಾಡಿದ ನಾರಿ ನೋಡ18 ಲವಣಶರಧಿತೀರ ಮಧ್ವ ಸರೋವರದಲಿ ಶುದ್ಧಸ್ನಾನ ಪರಮ ಮಂತ್ರ ಜಪಿಸೋ ನಿನ್ನ ಶರಣು ಸುಜನಜನರ ನೋಡ19 ಉತ್ತಮ ವೈಕುಂಠ ಬಿಟ್ಟೀ ಉಡುಪಿಯಲ್ಲಿ ವಾಸವಾಗಿ ಭಕ್ತಜನರಭೀಷ್ಟಕೊಡುವೋ ನಿತ್ಯಮುಕ್ತ ನಿನ್ನ ನೋಡ20 ಶ್ರೀಶನೊಲಿಸಿದ್ಹನುಮ ಭಾರತೀಶನಾದ ಮಧ್ವರಾಯರ ದಾಸರ ದಾಸತ್ವಕೊಡು ಭೀಮೇಶಕೃಷ್ಣಂದಯದಿ ನೋಡ 21
--------------
ಹರಪನಹಳ್ಳಿಭೀಮವ್ವ
ಬಂದೆಯಾ ಕೃಷ್ಣಯ್ಯಾ ಬಂದೆಯಾ ಪ ಸುಂದರ ನರರೂಪದಿಂದಲೀ ಧರೆಯೊಳು ಅ.ಪ. ಲೋಕೈಕ ದೇವನೆಂದು ಜ್ಞಾನಿಗಳೇಕಾಗಿ ಸಾರ್ವರಿಂದುಆಕಾರ ರಹಿತನ ಲೋಕ ಸಾಮಾನ್ಯರುಸ್ವೀಕರಿಸರು ಎಂದು ಸಾಕಾರನಾಗಿ 1 ಪೂರಾ ವಿಶ್ವದಲ್ಲೆಲ್ಲ ತುಂಬಾ ನಿಂತಿಹ ನಿನ್ನ _ನಾರು ನಂಬರು ಎಂತೆಂಬಕಾರಣ ಜಗಕೆ ತೋರರೆಲ್ಲಾ ಗುಣಸಾರ ಸಂಗ್ರಹಿಸಿ ನೀ ಧೀರ ಮಾನವನಾಗಿ2 ಜಗದೊಳಂದದ್ಭುತ ಶಕ್ತಿ ಇರುವುದೆಂ _ದುಗಮಿಕೆ ಜನದೊಳಾಸಕ್ತಿಜಗದೊಳು ಗದುಗಿನ ವೀರನಾರಾಯಣಬಗೆ ಬಗೆ ಮಹಿಮೆಯ ಸುಗುಣ ಮಾನವನಾಗಿ 3
--------------
ವೀರನಾರಾಯಣ
ಬಂದೆವಯ್ಯ ಗೋವಿಂದಶೆಟ್ಟಿ - ನಿಮ್ಮಹರಿವಾಣ ತೀರ್ಥಪ್ರಸಾದ ಉಂಟೆನಲಾಗಿ ಪ ಅಪ್ಪವು ಅತಿರಸ ತುಪ್ಪವು ಚಿನಿಪಾಲುಒಪ್ಪುವ ಸಕ್ಕರೆ ಯಾಲಕ್ಕಿಯುಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ1 ತುಂಬಿ ಮಿಕ್ಕ ಅನ್ನವ ಮಾರಿಸಿಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ 2 ಶೇಷಗಿರಿಯಲ್ಲಿ ವಾಸ ಮಾಡಿಕೊಂಡುದೇಶದೇಶಕ್ಕೆ ಹೆಸರಾದ ಶೆಟ್ಟಿಕಾಸುಕಾಸಿಗೆ ಬಡ್ಡಿ ಗಳಿಸಿಕೊಂಬ ಆದಿಕೇಶವ ನಾರಾಯಣ ತಿಮ್ಮಶೆಟ್ಟಿ 3
--------------
ಕನಕದಾಸ
ಬಂದೊದಗಿತು ಪುಣ್ಯಫಲವು ಮುಚುಕುಂದವರದ ವಾಸುದೇವಾರ್ಯರೊಲವು ಪಸಂಚಿತಾಗಾಮಿಪ್ರಾರಬ್ಧವೆಂಬ ಕಂಚುಕಿಯಾದ ಕರ್ಮದ ಬಹುಬದ್ದದಂಚುಗಾಣುವುದಾವ ಸಿದ್ಧ ಇದು ಕಿಂಚಿದಾದುದು ಗುರುಚರಣರೇಣಿಂದ 1ಏನು ಸುಕೃತವ ಮಾಡಿದೆನೊ ನಿನಗಾನತ ನಾನಾದ ಬಗೆಯು ತಾನೇನೊನೀನೆ ಕರುಣವಿತ್ತುದೇನೊ ನಾನು ಜ್ಞಾನವೆಂತೆಂಬ ಸ್ವರೂಪವನರಿಯೆನೊ 2ಪರಿಹರಿಸಿತು ಜನ್ಮ ಮರಣ ದುಃಖ ದುರವಣೆ ದಹಿಸಿತು ಲಕ್ಷ್ಮಿಯರಮಣತಿರುಪತಿ ವೆಂಕಟರಮಣ ನೀನೆ ಗುರು ವಾಸುದೇವರೂಪಿನಲಿತ್ತೆ ಕರುಣ3ಓಂ ನರನಾರಾಯಣಾತ್ಮಕಾಯ ನಮಃಕಂ||ಭೃಗುವಾರದರ್ಚನೆಯನಿದನಿಗಮಾಗಮವೇದ್ಯ ಗ್ರಹಿಸಿ ಸಿರಿ ಧರಣಿಯು ಸಹಭಗವಂತ ನಿನ್ನ ಭಕ್ತರೊಳಗಲದೆ ನಾನಿಹುದ ಮಾಡು ವೆಂಕಟರಮಣಾ
--------------
ತಿಮ್ಮಪ್ಪದಾಸರು
ಬಂದೊದಗಿತು ಪುಣ್ಯಫಲವೂ ಮುಚುಕುಂದ ವರದ ವಾಸುದೇವಾರ್ಯರೊಲವು ಪಸಂಚಿತಾಗಾ'ು ಪ್ರಾರಬ್ಧವೆಂಬಕಂಚುಕಿಯಾದ ಕರ್ಮದ ಬಹು ಬದ್ಧದಂಚುಗಾಣುವುದಾವ ಸಿದ್ಧ ಇದುಕಿಂಚಿದಾದುದು ಗುರುಚರಣರೇಣಿಂದಾ 1ಏನು ಸುಕೃತವ ಮಾಡಿದೆನೊ ನಿನಗಾನತ ನಾನಾದ ಬಗೆಯು ತಾನೇನೋನೀನೆ ಕರುಣ'ತ್ತುದೇನೋ ನಾನುಜ್ಞಾನವೆಂತೆಂಬ ಸ್ವರೂಪವನರಿಯೆನೊ3ಪರಿಹರಿಸಿತು ಜನ್ಮ ಮರಣ ದು:ಖದುರವಣೆ ದ'ಸಿತು ಲಕ್ಷ್ಮಿಯ ರಮಣತಿರುಪತಿ ವೆಂಕಟರಮಣ ನೀನೆಗುರು ವಾಸುದೇವ ರೂಪಿನಲಿತ್ತೆ ಕರುಣ 3
--------------
ತಿಮ್ಮಪ್ಪದಾಸರು
ಬಂಧನ ಬಿಡಿಸು ಶ್ರೀಶಾ ಇಂದಿರೇಶಾ ಪ. ಇಂದು ಈ ಭವದಲ್ಲಿ ನೊಂದು ನೊಂದೆನೊ ದೇವಾ ಗೋವಿಂದಾ ಪಾಲಿಸಬೇಕಯ್ಯಾ ಗೋಗಳರಾಯ ಅ.ಪ. ಇಂದಿರೇಶನೆ ನಿನ್ನ ಒಂದಿನಾದಿ ನಾನು ದೈನ್ಯದಿ ಭಜಿಸದೆ ಸುಂದರ ಮೂರುತಿ ನೀನು ಯನ್ನ ಹೃದಯ ಮಂದಿರದಲ್ಲಿ ಸಂದರುಶನ ಕೊಡೊ ಇಲ್ಲಿ 1 ಸದೋಷಿಯು ನಾನು ದೋಷರಹಿತ ನೀನು ಶೇಷಶಯನ ನಿಮ್ಮ ನಾಮವೇ ಭೂಷಣ ಸ್ವರಮಣನೀ ನಿನ್ನ ಸ್ಮರಣೆಯಾ ಮಾಡದೆ ಹಾಳು ಮಾತುಗಳಿಂದ ಹೊತ್ತುಗಳದೆ ಮುಕುಂದಾ 2 ಮತ್ಗ್ಯಾದ್ಯನಂತವತಾರ ನೀನು ತುಚ್ಛದೈತ್ಯಸ ಸಂಹಾರ ಇಚ್ಛಾದಿಂದಲಿ ನೀನು ಸುರರಿಗಾಧಾರ ಕಾಳಿಯಮರ್ದನ ಕೃಷ್ಣಧೀರ ಗಂಭೀರಾಸುತಸುಕುಮಾರಾ 3
--------------
ಕಳಸದ ಸುಂದರಮ್ಮ
ಬನ್ನ ಪರಾಕು ಭಾಗ್ಯದ ನಿಧಿಯೆ ಪ. ನಿನ್ನ ನಂಬಿದೆ ನೀರಜಾಕ್ಷ ಪರಾಕು ನಿನ್ನ ರನ್ನೆಯ ಒಲುಮೆ ಬೇಕು ಪರಾಕು ಅನ್ಯರ ಸಂಗವನೊಲ್ಲೆ ಪರಾಕು ಪರಾಕು 1 ಶೇಷಶಯನ ಶ್ರೀನಿವಾಸ ಪರಾಕು ಸಾಸಿರನಾಮದ ಒಡೆಯ ಪರಾಕು ದೋಷ ದುರಿತಹರ ಸ್ವಾಮಿ ಪರಾಕು ವಾಸುದೇವ ಪರಾಕು 2 ರತಿಪತಿಪಿತ ಮಾಧವನೆ ಪರಾಕು ಅತಿರೂಪ ಎನ್ನಯ್ಯನೆ ಪರಾಕು ಹಿತ ವಿರಹಿತರ ಕಾಯೊ ಪರಾಕು ಪರಾಕು 3
--------------
ಹೆಳವನಕಟ್ಟೆ ಗಿರಿಯಮ್ಮ
ಬನ್ನ ಬಡಿಸುವುದು:ಖನೀಗುವಂತೆ ಸಿರಿ ಮನ್ನಣೆಯ ಪಡಿಯ ಕಂಡ್ಯಾಮನವೆ ಪ ಘನ್ನವಿದ್ಯದಮಬ್ಬಿಲಿನ್ನ ಖಳಜಗದ ಜೀ ವನ್ನ ಮಲಗಿದೆರೊಳಗ ಮುನ್ನ ಮಾಡಿದ ಸುಕೃತ ಪುಣ್ಯ ತಂಗಾಳಿ ಸಂಪನ್ನ ಗುರು ಕರುಣೋದಯ ದುನ್ನತೆಯ ಬೆಳಗು ಕಂಡು ಸನ್ನುತುದಯರಾಗಸ್ತವನ್ನು ಪಡುತಜ್ಞಾನ ಚನ್ನ ನದಿಯೊಳುಮಿಂದು ತನ್ನ ಸಂಚಿತದ ತ್ರೈಯ ಘ್ರ್ಯನ್ನೆರದು ಮೆರುವುತಿಹ ನಿನ್ನ ಸಿರಿಕರ ನೋಡು ಇನ್ನು ನಾಚಿಕೆ ಬಾರದೇ 1 ಬಂದು ನರದೇಹದಲಿ ನಿಂದಾಗ್ರ ಜನ್ಮದಲಿ ಹೊಂದುಪಥವನೆ ಬಿಟ್ಟು ಛಂದ ಹೊಲಬದಿ ಕೆಟ್ಟು ಮಂದಮತ ತನವೆರಿಸಿ ಮಂದಿಯೊಳಗಲ್ಲೆನಿಸಿ ಪರಿ ಪರಿಯ ಬಯಸೀ ಬೆಂದ ವಡಲನೆ ಹೊರೆದಿ ಕುಂದದಾಟಕೆ ಬೆರೆದಿ ತಂದಾಯುಷವ ಹೊತ್ತು ಇರದಯೇರಿತು ಬೆರೆತು ಮುಂದ ನಿನ್ನಯ ಗತಿಯ ಯಂದು ಘಳಿಸುವೆ ಸ್ಥಿತಿಯಾ ಇಂದಿರೇಶನ ವಲುಮೆಯಾ 2 ಮರಹು ಮುಸುಕವ ತೆಗೆದು ಅರಹುನಯನವ ತೆರೆದು ಪರಮ ಭಾವನೆ ಬಲಿದು ವರ ಭಕುತಿಗಳ ಜಡಿದು ತರಣೋಪಾಯವ ಕೂಡು ಹರಿಯ ಸೇವೆಯ ಮಾಡು ನೆರೆ ಸಾಧು ಸಂಗ ಬೇಡು ಸುರಸ ಬೋಧವ ಕೇಳು ಸರಕುಮಾತನೆ ಕೀಳು ಧರಿಯೊಳಗ ಸಾರ್ಥಕಲಿ ಪರಿಬಾಳುತಲಿರಲಿ ಗುರು ಮಹಿಪತಿಸ್ವಾಮಿ ಹೊರೆವದಯದಲಿ ನೇಮಿ ಶರಣ ಜನರಂತರ್ಯಾಮೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬನ್ನ ಮಂದ ಸಿಂಧು ವಕ್ತ್ರ ಭಾಗವತ ಸಿರಿ ಪಾದ ಕರ ಕಮಲ ಭಾರತೀಶ ಭವ ಕಾಲ ವಜ್ರ ವಿಧಿ ಸಖನೋ ಗುರುರಾಜ ವಾದಿಗಳ ಕುಲವದ್ದು ದಶರಥ ಹೇಯನೆನಿಸಿದ ಬೌದ್ಧದೇವನ ಗುರುರಾಜ ಶ್ರದ್ಧೆಯಿಂದಲಿ ಸಿದ್ಧಪಡಿಸುವದೆಂದು ಗುರುರಾಜ ಜನರ ಬುದ್ಧಿ ಭೇದವ ಮಾಡಿ ದಿವದಿ ಕದ್ದು ದೇವನಭಾವದಿಂದಲಿ ಪೂಜಿಸಲು ನೀ ಗುರುರಾಜಅದು ಬಲು ಸುದ್ದಿಯ ತಿಳಿಯಲು ಸದ್ದು ಇಲ್ಲದೆ ಬೌದ್ಧ ಜನರು ಬಂದು ನೋಡೆ ಗುರುರಾಜ ತಿದ್ದಿ ವಿಗ್ರಹ ತೋರಿ ಸರ್ವ ಸುರರನು ಸಲಹಿ ಅಸುರರ ವದ್ದ ಪಲ್ಗಳ ಮುರಿದು ಮೆರೆದೇ ಗುರುರಾಜ ನೀ ಪದ್ಮಜಾತನ ಪದವಿ ಪೊಂದುವಿ ಎಂದು ನಿನ್ನಯಪದ್ಮಪಾದಕೆ ಬಿದ್ದೆನಾ ಗುರುರಾಜ ನೀ ಗುರು ಮಧ್ವವಲ್ಲಭನಿಂದ ರಮಣವ ಕೊಂಡು ಭಜಿಸುವೆ ಗುರುರಾಜ ಸಿದ್ಧ ಶೇಖರ ಸೋಮ ವಂದ್ಯನೊ ನೀ ಗುರುರಾಜ ಹರುಷದಿಂದಲಿ ನಿನ್ನ ದರುಶನವಾದ ದಿನದಾರಭ್ಯ ಗುರುರಾಜ ಮನದಲಿ ಮಿಂಚಿನಂತೆ ಪೊಳೆವೊ ಸುಂದರ ಸುಂದರಾಂಗಿಯ ಸಹಿತ ವಂದಿಪೆನೊ ಗುರುರಾಜ
--------------
ಗುರುತಂದೆವರದಗೋಪಾಲವಿಠಲರು
ಬನ್ನವನಾ ನೀಗಿದೆ ಜವದಿ ಧನ್ಯನಾದೆ ಶ್ರೀ ಗುರುವೆ ಧನ್ಯನಾದೆ ಸದ್ಗುರುವೇ ಧನ್ಯನಾದೆ ಪ ಭವಸಾಗರವಾ ದಾಟಿದೆ ಜವನ ಬಾಧೆಯ ನೀಗಿದೆ ಜೀವಭಾವವು ಸಟಿಯೆಂದೆನಿಸಿ ದೇವನಾದೆ ಪಾವನನೆ ಧನ್ಯನಾದೆ 1 ಅರಿತೆನೆನ್ನಯ ನಿಜರೂಪವನಾ ದುರಿತವ ನೀಗಿದೆ ಅರಿವಿನ ಬಲದಿ ದೊರಕಿತು ಮುಕುತಿ ಧನ್ಯನಹುದು ನಾ ನೀನೆ ನಾನೈ ಶಂಕರನೇ ಧನ್ಯನಾದೆ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಬನ್ನಿರಿ ಬನ್ನಿರಿ ದಾಸರೊಂದಾಗಿ ಚನ್ನ ಕೇಶವನರಮನೆಗೆ ಮುಂದಾಗಿ ಪ ಬನ್ನಿರಿ ಹರುಷದಿ ಪೋಗುವಾ ಬೇಗದಿ ಸನ್ನುತ ತಾತನ ಮೆನೆಯೊಳಗಿರುವಾ ಅ.ಪ. ನಿತ್ಯ ನೀಲಾಂಜನೆ ಪರಮ ಪಾವನನ ಭೃತ್ಯರ ಸಲಹುವ ಬರ ಶ್ರೀಧರನ ಪ್ರತ್ಯುಪಕಾರವ ಬೇಡದೆ ಸಲಹುವ ಸತ್ಯನಾರಾಯಣ ದೇವರ ಗುಡಿಗೆ 1 ನಗಧರ ರಂಗನ ಖಗವಾಹನನ ಜಗದೊಳು ಮೆರೆಯುವ ಗೋವಳ ಹರಿಯ ಅಗಣಿತಮದನನ ಸನಕ ವಂದಿತನ ಭೃಗಕುಲ ಶ್ರೇಷ್ಠನ ದೇವರ ಗುಡಿಗೆ 2 ತರಳರ ಸಲಹುವ ಭಜಕರ ಪೊರೆಯುವ ಪರಿಪರಿ ರೂಪದಿ ಮೆರೆಯುವ ಪರಿಯ ಪರಮಾತ್ಮನನ್ನು ಭಕ್ತಿಯಲಿ ಕೀರ್ತಿಸಲಾಗ ಸರಸದಿ ದಾಸರಿಗೊಲಿವ ಕೇಶವನ 3
--------------
ಕರ್ಕಿ ಕೇಶವದಾಸ