ಒಟ್ಟು 1652 ಕಡೆಗಳಲ್ಲಿ , 100 ದಾಸರು , 1233 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುತ್ಸ್ಸಿತರೊಲ್ಲದ ಮತ್ಸರವಿಲ್ಲದ ಸತ್ಸಭೆ ಕೇಳಲೀ ಕೃತಿಯ ಪ. ಈ ಯುಗದವರಿಗೆ ಕಲಹ ಮಂಡಿಸಿದಗೆ ಆ ಯುಗದವರುಕ್ತಿ ಬೇಕು ನ್ಯಾಯದವರ ಕೇಳು ಪೂರ್ವಶಾಸನ ಸಾಕ್ಷಿ ಹೇಯವೆಂದಾರು ಪೇಳುವರು1 ನಿಮ್ಮವರಾಗಮ ನಮ್ಮವರಿಗೆ ಸಲ್ಲ ನಮ್ಮೋಕ್ತಿ ನಿಮಗೆ ಮೆಚ್ಚಲ್ಲ ಇಮ್ಮನದವರಿಗೆ ಇನ್ನೊಬ್ಬ ಹಿರಿಯರ ಸಮ್ಮತಿ ಬೇಕು ನಿರ್ಣಯಕೆ2 ಯುಕ್ತಿ ಮಾತ್ರವ ನಂಬಿ ನಡೆವುದುಚಿತವಲ್ಲ ಯುಕ್ತಿ ಸರ್ವತ್ರ ಬಂದಿಹುದು ಕುತ್ಸಿತ ದೇಹಬಂಧವ ಬಿಡಿಸುವ ನರ- ರುತ್ತಮರೆಂದರೇನೆಂಬೆ 3 ಹಿಂಸೆ ಸಲ್ಲದು ಗಡ ಕರದ ಚಿಮುಟಿಯಿಂದ ಏಸು ಕೂದಲ ಕೀಳುತಿರಲು ಏಸೋ ಜೀವಗೆ ನೋವು ಅದು ಹಿಂಸೆ ದೋಷದ ಒಂದಂಶಕ್ಕೆ ಸರಿ ಬಂದಿಹುದೆ 4 ಕೇಶ ಆಚ್ಛಾದನ ಸಂಕಟದಿಂದೆಂದ ಕ್ಲೇಶ ಸೂಸುವ ನಯನಾಂಬುಧಾರೆ ಆ ಸಮಯದಿ ಪರಮಸುಖವೆಂಬ ಮಾತು ಸತ್ಯವ್ರತಕೆ ಎಂತೊಪ್ಪಿಹುದೊ 5 ವೇದಶಾಸ್ತ್ರವ ಬಲ್ಲ ಹಾರವನಲ್ಲ ಹು- ಟ್ಟಿದ ದಿವಸ ಮೊದಲಾಗಿ ಪಾತಕಿ ತಮ್ಮೊ - ಳಾದನೆಂಬುದು ಬಲು ಚೋದ್ಯ6 ಪಾಪ ಸಲ್ಲದು ಗಡ ಪರನಿಂದೆಯಿಂದಾದ ಪಾಪವೆ ತಾವು ಶುದ್ಧರೆಂಬ ಪರಿ ಆತ್ಮಸ್ತುತಿಯಿಂದೊಂದಾ ಪಾಪ ಲೇಪಿಸದಿಹುದೆ ತಮ್ಮವರ 7 ಸ್ಥಾವರಜೀವರ ಸಾವಿರ ಕೋಟಿಯ ಆವಾಗ ಕೊಂದು ತತ್ತನುವ ಜೀವಿಪೆನೆಂದು ಬೇಯಿಸಿ ತಿಂಬ ಪಾಪವ ಆವ ನಿಮಗೆ ಅಹುದೆಂದ 8 ಇಂದ್ರಿಯಹತ್ತಿಲ್ಲದವರ ಕೊಲ್ಲುವುದಕ್ಕೂ ಹಾ- ಗೆಂದ ಗುರುವ ನಾನೇನೆಂಬೆ ಅಂದಚೆಂದಗಳ ಮೂಕರ ಪಕ್ಷ್ಷಿಯಂಡದ ನಿಂದ್ಯ ಹಿಂಸೆಯ ಸಲಿಸುವರೆ 9 ಸಂಗೀತಶ್ರವಣದಿ ಧೂಪಾಘ್ರಾಣದಿ ಮೂಲ ಹಿಂಗೂಡಿದುದಕ ಸ್ವಾದನಾದಿ ಅಂಗನೆ ಈಕ್ಷಣ ಸ್ಪರ್ಶನದಿಂ ಸ್ಥಾವ- ರಂಗಳು ಜಂಗಮದಂತೆ 10 ತಮ್ಮ ಕರ್ಮದಿ ತಾವೆ ಸಾವರೆಂಬ ಮತದಿ ಕಮ್ಮಿಯಾದ ವ್ರಣಕ್ಕೆ ಮದ್ದನಿಕ್ಕಲು ನಿರ್ಮಾಯನದೊಳಗೇಸೊ ಹಿಂಸೆ 11 ಅಕ್ಕಿಯ ಕುಟ್ಟಲು ಬಕ್ಕು ಜೀವರ ಹಿಂಸೆ ಮಕ್ಕಳುಂಬುದು ಮಾಂಸ ಪ್ರಿಯಳ ಚೆಂದುಟಿ ಮಾಂಸ ಇಕ್ಕು ಬಾಯೊಳು ದಂತದೆಲುವೆ 12 ಕರದ ತುಂಬವಿದೇನು ಕೊರಳ ಹಾರವಿದೇನು ಚರಣದ ನಖಪಂಕ್ತಿಯಿದೇನು ಖರ ಭೂತಪಂಚಕ ಅನ್ನ ಮಾಂಸಗಳೊಳು ಬರಿದೆ ನಿಂದಿಸಲೇಕೆ ಪರರ 13 ಉಪ್ಪಿನೊಳಗೆ ತೋರ್ಪ ಚಿಪ್ಪ ನೋಡದೆ ಪರ- ರಲ್ಪ ದೋಷಗಳರಸುವರೆ ಒಪ್ಪುವುದೆಂತೊ ಶತ್ರುಗಳ ನಿಂದನೆ ಕೊಲು- ತಿಪ್ಪ ನೃಪಗೆ ಜಿನಮಾರ್ಗ 14 ಬಸ್ತಿಯ ಕಟ್ಟಲು ಭೂಸ್ಥ ಜೀವರ ಹಿಂಸೆ ಸುತ್ತ ಯಾತ್ರೆಯ ಮಾಡಲೇಸೊ ತತ್ತಜ್ಜೀವರ ಹಿಂಸೆ ತೈಲಸ್ನಾನದಿ ಹಿಂಸೆ ವಸ್ತ್ರ ಒಗೆಯಲೇಸೋ ಹಿಂಸೆ 15 ಸಲ್ಲದ ಹಿಂಸೆಯ ಸಲಿಸಿದರೆಂಬರ ಬಲ್ಲವಿಕೆಯ ನಾನೇನೆಂಬೆ ಬಲ್ಲಿದ ಹಿಂಸೆಗೆ ಒಳಗಾದರು ಎಲ್ಲ ತಾ- ಕೈವಲ್ಯ ಸಾಧಕರು 16 **** ತೊಳೆಯದ ಬಲುಹಿರಿಯರ ನಾತಕ್ಕೆ ಸೋತು ಬೆಂಬಿಡದೆ ಆತುರದಿಂ ಬಪ್ಪನೊಣಗಳ ಗೀತವ- ನೋತು ಕೇಳುವ ಶಿಷ್ಯ ಧನ್ಯ 17 ಮೂತ್ರ ದ್ವಾರದ ಮಲ ಶ್ರೋತ್ರನೇತ್ರದ ಮಲ ಗಾತ್ರ ನಾಸಿಕದ ಮಲ ಯಾತ್ರೆಯ ಮಾಡುವರಕ್ಷಿಗೆ ಕೌತುಕ ಪಾತ್ರವಾಯಿತು ಬಲು ಚಿತ್ರ 18 ******************* 19 ಏಕ ಭಾಗದೊಳು ಸ್ತ್ರೀ ವಾಸ ಏಕಾಂತದಿಪ್ಪುದು ಲೋಕಸಲ್ಲದೆಂಬರ ಈ ಕಾಮನೆಂತು ಬಿಟ್ಟಿಹನು 20 ಬಸ್ತಿಯ ಪ್ರತಿಮೆಯಲಿಪ್ಪ ದೇವನದಾರು ಮುಕ್ತರಿಗೀಭೋಗ ಸಲ್ಲ ಮುಕ್ತರÀಲ್ಲದ ಜೀವ ದೇವರೆಂತಹರೆಂದು ವ್ಯರ್ಥವಾಯಿತು ನಿನ್ನುತ್ಸಾಹ 21 ನೋಡುವ ನಯನಕ್ಕೆ ಮಾಡುವ ಪೂಜೆಗೆ ಕೂಡಿದ ಬಹುವಿತ್ತ ವ್ಯಯಕ್ಕೆ ಈಡಾಯಿತಂಶ ಕೇವಲ ಬೊಂಬೆ ಶಿವಶಿವ ಆಡುವ ಶಿಶುಗಳ್ಪೇಳಿದರೆ 22 ಹೆಂಡಿರೆ ಸಂಸಾರವಾದರೆ ಹಸಿತೃಷೆ ಉಂಡು ಮಲಗುವುದು ಮುಕ್ತರಿಗೆ ಮಂಡೆಯ ಬೋಳಿಸಿ ದೇಹದಂಡನೆ ಮಾಡಿ ಕೈ- ಕೊಂಡ ಮಾತ್ರದಿ ಮುಕ್ತರಹರೆ 23 ಮತ್ರ್ಯ ದೇಹವಿರಲು ಮುಕ್ತರೊಬ್ಬರು ಅಲ್ಲ ಸತ್ತಮೇಲೇನಾದರೆಂತೊ ಅತ್ತು ಕಾಡುವ ಶಿಷ್ಯರೆಂತರು ಕಾಂಬರು ಸರ್ವ- ಕರ್ತೃ ಶ್ರೀಹರಿ ತಾನೆ ಬಲ್ಲ 24 ದುಃಖವೆ ಸಂಸಾರ ದುಃಖವಿಲ್ಲದ ಸುಖ ಮುಕ್ತಿಯೆಂಬುದು ಬುಧರ್ಗೆ ಮಾತ್ರ ಮಿಕ್ಕದೆ ದುಃಖವಿತ್ತರೆ ಭವವೆನಿಪುದು ದುಃಖವೆ ದೂರ ಮುಕ್ತರಿಗೆ 25 ಪುನರ್ಭವವೆÉನ್ನೆ ಶ್ರುತಿ ಅಮೃತವುಂಡರೆ ಮೋಕ್ಷ ಜನನ ಮರಣವಿಲ್ಲದಖಿಳ ಜನರ ದುಃಖವನವತರಿಸಿ ಕಳೆವ ನಾರಾ- ಯಣನೆ ನಿರ್ದೋಷ ನಿತ್ಯಸುಖಿ 26 ಪಾತಕ ವ್ರತವ ಕೈಗೊಂಡ ಸ್ತ್ರೀ- ಜಾತಿಯ ಮುಟ್ಟಲ್ಲೆಂಬುವನು ಖ್ಯಾತ ಶ್ರೀಹರಿಗೆ ಪಾತಕಮುಟ್ಟದೆಂಬರ ಮಾತನದೇಕೆ ಮನ್ನಿಸನು 27 ಕೆಸರ ತೊಳೆದ ನೀರು ಕೆಸರ ಬಾಧಿಪುದೆ ತಾ- ವೈರಿ ಸೂರ್ಯನೊಳು ತಮವೆ ವಿಷಹರ ಗರುಡಗೆ ವಿಷ ಲೇಪಿಸುವುದೆ ಕ- ಲುಷ ಮುಟ್ಟುವುದೆ ಪಾಪಾಂತಕನ 28 ಸುಡುವಗ್ನಿ ಕಡಿವಸ್ತ್ರ ಕಡುಕೋಪಿ ಸರ್ಪನ ತಡೆಯಬಲ್ಲರೆ ತುಡುಕುವರೆ ಬಿಡು ಮನಭ್ರಾಂತಿಯ ಹಯವದನನೆ ಜಗ- ದೊಡೆಯ ಸರ್ವತ್ರ ನಿರ್ದೊಷ 29
--------------
ವಾದಿರಾಜ
ಕುದುರೆ ಬಂದಿದೆ ಚೆಲುವಕುದುರೆ ಬಂದಿದೆ ಪ. ಕುದುರೆ ಬಂದಿದೆ ವಾದಿರಾಜಗೆಮುದದಿ ಜ್ಞಾನ ಭಕುತಿ ಕೊಡುವ ಅ.ಪ. ಹಿಂಗಾಲಿಂ ರಕ್ಕಸರ ಒದೆವ ಕುದುರೆಮುಂಗಾಲು ಕೆದರಿ ಬಾಲವ ಬೀಸಿತಗ್ಗಿಸಿ ತಲೆಯ ಅಡಿಗಡಿಗೆಜಿಗಿದು ಹಾರಿ ಹುಂಕರಿಸುವ1 ಗರುವಿ ಮಹಲಕ್ಷ್ಮಿ ತನ್ನವರನೆಂದು ಒಲಿದು ಬರುವಉರದಿ ಶ್ರೀವತ್ಸ ಕೌಸ್ತುಭಧsÀರಿಸಿ ತಾಂ ಮೆರೆಯುವಂಥ 2 ಹಲ್ಲಣವಿಲ್ಲದೆ ನಿಲ್ವುದು ಕುದುರೆಒಲ್ಲದು ಕಡಿವಾಣ ಕುದುರೆಬೆಲ್ಲಕಡಲೆ ಮೆಲ್ಲುವ ಕುದುರೆಚೆಲುವ ಹಯವದನನೆಂಬೊ ಕುದುರೆ 3
--------------
ವಾದಿರಾಜ
ಕೂಗಿತು ತಾಮ್ರದ ಚೂಡ ಪರ ಇಲ್ಲ್ಲೆಂದು ಪ ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ ಸೂಕ್ಕಿದವರ ಎದೆ ಜರ್ಝರಿಸೆ ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು1 ಒಂದು ಝಾವದಿ ಓಂಕಾರನೆಂದು ಕೂಗೆ ಇಂದಿರಾಪತಿ ವಿಧಿಜನಕನೆಂದೂ ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ ಬಿಂದುಮಾಧವನಲ್ಲದಿಹಪರವಿಲ್ಲವೆಂದು 2 ಎರಡು ಝಾವದಿ ಪುರುಷೋತ್ತಮನೆಂದು ಗರುಡಾಚಲ ನರಸಿಂಹನೆಂದು ಮೂರನೆ ಝಾವಕ್ಕೆ ವೀರನಾರಾಯಣ ಹÀರಿಗಯಾಗದಾಧರನಲ್ಲದಿಲ್ಲವೆಂದು3 ಏಕೋ ನಾರಾಯಣ ದೇವನೆಂದು ಗೋಕುಲಪತಿಯಲ್ಲದಿಹಪರ ಇಲ್ಲವೆಂದು 4 ಯಾಮ ಆರರೊಳು ವ್ಯಾಸಮೂರ್ತಿ ಎಂದು ರೋಮಕೋಟಿ ಬ್ರಹ್ಮರುದ್ರರೆಂದು ಸಾಮಗಾಯನ ಕಾವೇರಿ ರಂಗೇಶ ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು 5 ಏಳು ಝಾವದಿ ವೇಣಿಮಾಧವನೆಂದು ಮೇಲಗೋಟೆ ಚಳ್ಳಾಬಳ್ಳನೆಂದು ಶ್ರೀಲೋಲ (ಆಯೋಧ್ಯಾ) ರಘುರಾಮ ಗಂಡಕಿ ಪರ ಇಲ್ಲೆಂದು6 ಶ್ವೇತ ವರಾಹನೆಂದು ಮಾವ ಮರ್ದನ ಜನಾದರ್Àನನೆಂದು ಶ್ರೀ ಉಡುಪಿಯ ಕೃಷ್ಣ ವಿಜಯವಿಠ್ಠಲ ತಿಮ್ಮ ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು 7
--------------
ವಿಜಯದಾಸ
ಕೂಗಿದರು ಒಳಗೇ ಕದವ ತೆಗೆಯಂದು ಪ ಸತಿಯರು ತಾವು ಆಗ ಆನು- ನಿನ್ನ ನಾವು ಬಲ್ಲೆವು 1 ಮೆಲ್ಲನÉ ಬಾರೆ ನೀ ನಿಜವ ಮಾಡೀಗ 2 ಮನೆಯೊಳಿರಲು ' ಮಾರಜನಕನೆಂಬೊದು ಬಲ್ಲೆನೆ 3 ಇನ್ನು ನೀರೆ ನಿನ್ನ ಗಂಡನೆ ನಾನು ಓಯನ್ನ ಪ್ರಾಣಸಖಿ ಬೇಗ ಬಂದು ಕದವ ತೆಗೆ ಈಗ 4 ಎಲ್ಲಿಯವನು ಭಂಡತನ ಬಿಡುಇನ್ನು 'ಓಹೆನ್ನೆ ವಿಠಲ’ ಮಾಡುವದು ಇದು ರೀತಿಯಲ್ಲವು 5 ಚಂಡಿನಾಟ ಬಾ ಸಭಯದಿ ಓಯನ್ನ ಪ್ರಾಣಸಖಿ ಚಲುವೆ ಹೊರಗೆ ಬಾರದಿರುವೇ 6 ಅಷ್ಟು ಜಗದಲ್ಲಿ ಬಲ್ಲಿ 'ಓಹೆನ್ನೆ ವಿಠಲ’ ಚೇಷ್ಟಿಮಾಡದಲೆ ನಡಿಯಯ್ಯಾ 7 ದೇವರನ್ನು ಕೂಡಿತೆ ಓಯನ್ನ ಪ್ರಾಣಸಖಿ ಈಗ ಆಣಿ ಮಾಡಿಸಿ ಕೇಳು 8 ಅತ್ತಿಯನ್ನು ಕೂಡಿದವನೆ ಉತ್ತಮನೆ ನೀನು ಇನ್ನು ಎತ್ತಲ ಆಣೆಯು ನಿನಗೇ 'ಓ ಹೆನ್ನೆ ವಿಠಲ’ ಸತ್ಯವಂತನಾಗಿ ಹೇಳುವಿ 9 ಕಾಕು ಹೆಣ್ಣು ನಿನಗೆ ಥರವೆ ಓಯನ್ನ ಪ್ರಾಣಸಖಿ ಕಣ್ಣಿಲೆ ನೋಡದೆ ಕರಿಯೆ 10 ಪರಮ ಪರುಷನುಳ್ಳವರು ಪರಮಪುರುಷನ ಪಡೆವಂಥ ದೂರನಡಿಯೆ ಇಲ್ಲಿ ಎನಯ್ಯ 11 ಇನ್ನು ಸ್ವಲ್ಪ ನಿನಗೆ ತಿಳಿಯದೆ ಓಯನ್ನ ಪ್ರಾಣಸಖಿ ಸಾಗಿ ಬಂದು ನೋಡೆ ಬೇಗನೆ 12 ಏನು ಆಶ್ವರ್ಯವು ನಿನಗೆ ನಡಿಯಯ್ಯಾ 13 ಇನ್ನು ನಿನಗೆ ಇನ್ನಾದರೆ ಮನಸಿಗೆ ತಾರ 14 ನಿನಗೆ ಅರುವು ಇರಲು ಸೋಗು ಮಾಡಿನಡಿಯಯ್ಯಾ 15 ತಿಳಿಸುವೆನು ಮನಸು ಇಟ್ಟು ಮನ್ನಿಸೆನ್ನನು ಓಯನ್ನ ಪ್ರಾಣಸಖಿ ಮಾಡಬೇಡ ಹೀಗೆಯನ್ನನು 16 ಮರ್ಮವು ತಿಳಿಯದೆ 'ಒಹೆನ್ನೆವಿಠಲ’ ಮೋಸಮಾಡ ಬಂದಿ ನಡಿಯಯ್ಯಾ 17 ಹೇಳಿ ಎಲ್ಲರು ಹಿಗ್ಗುವ ವೇಳ್ಯೆದಿ 'ಓ ಯನ್ನ ಪ್ರಾಣಸಖಿಕೇಳಿದ ಮಾತನು ಹೇಳುವೆ 18 ಬಂದು ವಾಸವಾಗಿ ಹೇಸದೆ ಏನೆಂದು ಬಂದೆ 19 ಮಾನ ಪತಿಯೆಂಬ ಮಾರ್ಯದೆ ಓಯನ್ನ ಪ್ರಾಣಸಖಿ ಮನಸಿನಲ್ಲಿ ಏನು ಇಲ್ಲವು 20 ಮುನಿವಳಗೇ ಮಾನಪತಿ ಪುರುಷನೇನಯ್ಯಾ 21 ಮಾಡಿಕೊಳ್ಳದವನಿಗೆ ಧೈರ್ಯ ವಿಲ್ಲವೆ 22 ಅಂಜಿಕೆ ಏನಯ್ಯಾ 'ಓಹೆನ್ನೆ ವಿಠಲ’ ಧೈರ್ಯವು ಯಾಕೆ ನಿನಗಯ್ಯ 23 ಬಂದು ಇಷ್ಟು ತಡ ನಿನ್ನ ಗಂಡನೆನಾನು24
--------------
ಹೆನ್ನೆರಂಗದಾಸರು
ಕೃಷ್ಣ ರುಕ್ಮಿಣಿ ವಿವಾಹದೈದು ದಿನದಲ್ಲಿ ಅರ್ಥಿ(ಯಿಂ)ಂದೋಕುಳಿಯನಾಡಿ ಕುಂಕುಮ ಗಂಧ ಬುಕ್ಕಿ ್ಹಟ್ಟಲೂ(ಲುರು?) ಟಣಿಯ ಮಾಡಿ ಆರತಿನೆತ್ತಿ ಮುತ್ತೈದೇರು ಪಾಡಿ ವೀಳ್ಯಗಳ ನೀಡಿ ಸರ್ಪಶಯನನು ತನ್ನ ಸತಿಯ ಎತ್ತಿ ಬರುವೋ ಕಾಲದಲ್ಲಿ ಚಿಕ್ಕ ಸುಭದ್ರೆ ತಾ ಬಾಗಿಲು ಕಟ್ಟಿ ತಾ ನಗುತ ನುಡಿದಳು 1 ಪಟ್ಟದರಸಿಕೂಡ ಮತ್ತೆಲ್ಲಿ ಪಯಣ ಈ ವಾರ್ತೆ ಹೇಳುವುದೆನಗೆ ಕೇಳುವೆ ಕೊಟ್ಟು ಎನಮನ ಕಾಮಿತಾರ್ಥವ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 2 ನಾರಿಮಣಿಯೆ ನವರತ್ನದ ಹೆರಳು ಬಂ- ಗಾರ ರಾಗಟೆಯು ಗೊಂಡ್ಯ ಕಂಕಣ ವಂಕಿ ದ್ವಾರಾ ಹರಡಿಯು ಚೆಂದ ಒಪ್ಪುವ ಗೆಜ್ಜೆ ನಾಗಮುರಿಗೆಯು ಕಾಲ ಪೈಜಣ ಗೆಜ್ಜೆ ರುಳಿ ವೈಡೂರ್ಯದ್ವೊಡ್ಯಾಣವನೆ ಮಾಣಿಕ್ಯದ್ವಾಲೆ ಮೋಹನ್ಮಾಲೆ ಕೊಡುವೆನು ಕದವ ಬಿಡು ತಂಗಿ ಕೋಮಲಾಂಗಿ 3 ಪಚ್ಚಮಾಣಿಕದ ಗೊಂಡ್ಯಗಳು ಬಾಜುಬಂದು ರತ್ನಹ್ಹೆರಳುಬಂಗಾರ ಕಂಕಣವಂಕಿ ಹಸ್ತಕಡಗವು ದ್ವಾರ್ಯ ಪುತ್ಥಳಿ ಏಕಾವಳಿಯ ಸರ ಚಿಂತಾಕು ಸರಿಗೆ ತೆತ್ತಿಸಿಯರಚಂದ್ರರಾಗಟೆÉ ಮತ್ತೆ ಎನಗಮ್ಮಯ್ಯಕೊಡುವಳು ಅರ್ಥಿಯಿಂದೀಗೆನ್ನ- ಮನೋರಥ ದಂiÀiಮಾಡಣ್ಣಯ್ಯ ಶ್ರೀಕೃಷ್ಣಯ್ಯ 4 ಹರದಿ ನಿನಗೆ ಹವಳದ ಕಾಲ್ವಜ್ರದ ಮಂಚ ಜರದ ಸುಪ್ಪತ್ತಿಗೆಯು ಹಾಸಿಕೆ ಲೋಡು ವರಪೀಠ ವಸನಂಗಳು ಚ- ಪ್ಪರ ಮಂಚಕ್ಕೊಲೆವೋ ಮುತ್ತಿನ ಗೊಂಚಲು ರವಿಪೋ- ಲ್ವ ರಥವು ಕರಿತುರಗ ಕರೆವೆಮ್ಮೆ ಗೋವ್ಗಳು ತರತರದ ಛತ್ತರಿಗೆ ಚಾಮರ ಜರತಾರಂಚಿನ ಸೀರೆ ಕೊಡುವೆನು ಕದವ ಬಿಡು ತಂಗಿ ಕೋಮಲಾಂಗಿ 5 ಪನ್ನಂಗಶಯನ ಕೇಳೆನ್ನ ಗಲ್ಲದಲೊಪ್ಪೋ ಸಣ್ಣ ಮುತ್ತಿನ ಗೊಂಚಲು ದ್ರಾಕ್ಷಿಯ ಬಳ್ಳಿ ಹೊನ್ನಾ ್ವಲೆ ಸರಪಳಿಯು ಹೊಸ ಪ್ರೀತಿಯಲಿನ್ನು ನಾ ಬೇಡಿದ್ದು ಕೊಡುವನು ಮನ್ಮಥನ ಪಿತ ಎನ್ನ ಮನೋರಥ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 6 ಮುದ್ದು ಸುಭದ್ರ ಮೇಲಾದ ಜೊತೆಯ ಮುತ್ತು ವÀಜ್ರ ಕೆಂಪನು ಕೆತ್ತಿಸಿ ಕೊಡುವೆನೀಗ ತಿದ್ದಿ ಮಾಡಿದ ಮೂಗುತಿ ಪಾರ್ಥನ ರಥಕಿದ್ದು ಆಗುವೆ ಸಾರಥಿ ನಡೆಸುವೆನು ಕೀರ್ತಿ ಉಗ್ರಸೇನಗೆ ಹೇಳಿ ಇದರೊಳ- ಗರ್ಧ ರಾಜ್ಯವ ಕೊಡಿಸಿ ನಾ ನಿನ್ನುದ್ದ ಹಣ ಬಿಡು ತಂಗಿ ಕೋಮಲಾಂಗಿ 7 ಅಚ್ಚುತ ಬಲರಾಮರೆಂಬೊ ಎನಗೆ ಜೋಡು ಹೆಚ್ಚಿನ ಭುಜಗಳಿನ್ನು ಯಶೋದ ದೇವಕ್ಕಿ ರೋಹಿಣೀದೇವೇರು ಇರಲು ತಂದೆ ಶ್ರೇಷ್ಠನಾದ್ವಸುದೇವನು ನೀ ಕೊಡುವುದೇನು ಮುತ್ಯನಾಗಿದ್ದುಗ್ರಸೇನನು ಮತ್ತೆ ನಾ ಬೇಡಿದರೆ ಈ ಕ್ಷಣ ಕೊಟ್ಟು ಬಿಡನೇ- ನಧರ್À ರಾಜ್ಯವ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 8 ಎಷ್ಟು ಹೇಳಿದರು ಸನ್ಮತವಿಲ್ಲೆ ಸುಭದ್ರೆ ಮತ್ತೇನು ಕೊಡಲೆ ನಾನು ಮನಕೆ ಬೇಕಾದಿಷ್ಟವ ಬೇಡೆ ನೀನು ಭಾರ ಎಷ್ಟು ತಡೆಯಲಾರೆನೆ ನೀನು ಕೈಬಿಟ್ಟು ಬಿಡುವೆನು ಬೆಟ್ಟವನು ಕಿರು ಬೆಟ್ಟಿಲಿಂದೆ ಎತ್ತಿನಿಂತಿದ್ದೇಳು ದಿವಸ ಕದವ ಬಿಡು ತಂಗಿ ಕೋಮಲಾಂಗಿ 9 ಪಕ್ಷಿವಾಹನ ನಿನ್ನ ಚೊಚ್ಚಲಮಗಳ ಎನ್ನಚ್ಛದ ಅಭಿಮನ್ಯುಗೆ ಮಾಡುವುದು ಅ- ಪೇಕ್ಷವಾಗೇದೆ ಎನಗೆ ಬೇಡುವೆನು ನಿಶ್ಚಯ ಮಾಡಿ ಜನರೊಳಗೆ ಕೊಡು ಕೀರ್ತಿ ನಿನಗೆ ಪಟ್ಟದರಸಿಯ ಸಹಿತ ನೀ ಒಡಂಬಟ್ಟು ಎನಗ್ವಚನವನೆ ಪಾಲಿಸು ಕಟ್ಟಿದ್ಹಾದಿಯ ಬಿಟ್ಟು ಪೋಗುವೆ ದಯಮಾಡಣ್ಣಯ್ಯ ನೀ ಕೃಷ್ಣಯ್ಯ 10 ತರವಲ್ಲೆ ರುಕ್ಮಣಿ ಬೀಗತನವ ಭಾಳ ಪರಿ- ಯಾಲೋಚನೆ ಮಾಡು ರುಕುಮನ ಗಡ್ಡ ಶಿರ ಪಟ್ಟಿ ಪನ್ನಿ ನೋಡು ದೊರೆ ಶಿಶುಪಾಲ ವರನವಸ್ಥೆಯ ಕೊಂಡಾಡು ಧೈರ್ಯವನೆ ಮಾಡು ಬರೆದು ಓಲೆಯ ಕಳಿಸಿ ಎನ್ನ ಕರೆಸಿ ಬೆನ್ನ ್ಹತ್ತೋಡಿಬಂದ ಬಿರುದನರಿಯೇ ನ್ವರ ಶುಭಾಂಗಿನಿ ಕದವ ಬಿಡು ತಂಗಿ ಕೋಮಲಾಂಗಿ 11 ಕೃಷ್ಣ ಸುಭದ್ರೆ ಮಾತುಗಳ ರುಕ್ಮಿಣಿ ಕೇಳಿ ಮತ್ಯಾತಕೆನ್ನ ದೂರು ಯತಿಗಳ ಬೆನ್ನ ್ಹತ್ತಿ ಹೋದವರು ದಾರು ಕೃತ್ಯವ ನಡೆಸಿದರೆನ್ನ ನಾದಿನೇರು ಚಿತ್ರಾಂಗಿಯೇರು ಹಸ್ತಿನಾವತಿ ಅರಸು ಧರ್ಮರು ಹೆಚ್ಚಿನ್ಹಿರಿ ಯಣ್ಣಯ್ಯ ಭೀಮನು ಪಾರ್ಥಸುತ ಎನ್ನ ಸೋದರಳಿಯಗೆ ಕೊಟ್ಟೇನು ತೌರುಮನಿಗ್ಹೆಣ್ಣು 12 ರಂಗ ಸುಭದ್ರೆ ಮಾತಿಗೆ ಬಪ್ಪಿ ್ವ್ವಳ್ಯವ ಕೊಟ್ಟು ಚಂದ್ರಗಾವಿಯ ಕುಪ್ಪಸ ಜರದ ಪೀ- ತಾಂಬ್ರದುಡುಗೊರೆ ಕೊಡುತ ಮುತ್ತಿನ ಹಾರ ತಂದು ಕೊರಳಿಗೆ ಹಾಕುತ ರುಕ್ಮಿಣಿಯ ಸಹಿತ ಬಂದ ಭೀಮೇಶ ಕೃಷ್ಣ ಪಾರ್ಥನ ರಂಭೆ ಕನ್ಯವಗೆದ್ದಳೆನುತಲಿ ಸಂಭ್ರಮದಿ ದೇವೇಂದ್ರ ಬ್ಯಾಗನೆ ಚೆಂದದÀಲ್ಹೂಮಳೆಯ ಕರೆದರು 13
--------------
ಹರಪನಹಳ್ಳಿಭೀಮವ್ವ
ಕೃಷ್ಣಾರ್ಪಿತವೆಂದು ಕೊಡುಲು ಎ-| ಳ್ಳಷ್ಟಾದರೂ ಮೇರು ಪರ್ವತ ಮೀರುವದು ಪ ಗಣ್ಯವಿಲ್ಲದೆ ಶಿಷ್ಯ ಸಹಿತ ಹರರೂಪ ಮುನಿ ಅ- ರಣ್ಯದಲಿ ಪಾಂಡವರು ಇರಲು ಬಂದು || ಪುಣ್ಯಬೇಕೆಂದೆನಲು ಬಂದು ದಳ ಶಾಖಾ ಕಾ- | ರುಣ್ಯದಲಿ ಹರಿ ಎನಲು ಅಪರಿಮಿತವಾದುದು 1 ಹಸ್ತಿನಾಪುರದಲ್ಲಿ ಸಕಲ ದೇವಾದಿಗಳ | ಮಣಿ ವಿದುರನ ಮನೆಯಲ್ಲಿ || ಹಸ್ತು ಬಂದುದಕೆ ಉಪಾಯವೇನೆಂದೆನಲು | ಹಸ್ತದೊಳು ಪಾಲ್ಗುಡತಿಯೆರಿಯೆ ಮಿಗಿಲಾದುದೊ2 ಅಣು ಮಹತ್ತಾಗಲಿ ಆವಾವ ಕರ್ಮಗಳು | ತೃಣನಾದರರಿತು ಅರಿಯದೆ ಮಾಡಲು || ಕ್ಷಣ ತನ್ನದೆನ್ನದೆ ಅರ್ಪಿತನೆ ನಿಕ್ಷೇಪ | ಗುಣನಿಧಿ ವಿಜಯವಿಠ್ಠಲನ ಪುರದಲ್ಲಿ 3
--------------
ವಿಜಯದಾಸ
ಕೆಟ್ಟು ಹೋಗಬೇಡ ಮನುಜ ಸಾರಿ ಹೇಳುವೆ ಮನವ ಮುಟ್ಟಿ ಭಜಿಸೋ ಹರಿಯ ಶ್ರೀ ಕೃಷ್ಣ ಕಾಯುತಾನೆ ಪ ಆನೆಯಂತೆ ಹರಿವುದೊಂದು ಹೀನ ಮನವ ಹರಿಯಬಿಟ್ಟು ನೀನು ವಿಷಯವನ್ನು ಬಯಸಿ ನಾನಾನರಕದಲ್ಲಿ ಬಿದ್ದು 1 ದಾನ ಧರ್ಮಗಳನು ಬಿಟ್ಟು ಬರಿಯ ತನುವದಂಡಿಸುತ್ತ ಪುಣ್ಯ ತೀರ್ಥಸ್ನಾನಬಿಟ್ಟು ವಿಷ್ಣು ಮೂರ್ತಿಧ್ಯಾನ ತೊರೆದು 2 ಗಂಟು ಗಡಿಗೆ ಇರಲುನಿನಗೆ ನೆಂಟರಿಷ್ಟರೆಂದು ಬಂದು ಪಂಟಿಯನ್ನು ತೆಗೆವರೆಲ್ಲ ಅಂಟಿ ಬೆನ್ನಬರುವರಿಲ್ಲ 3 ಪಂಡಧರನ ದಂಡು ಬಂದು ದಂಡೆಗೆ ದಂಡೆ ಬಿಗಿದು ಕಟ್ಟಿ ಮಕ್ಕಳು ಬರುವನೋ 4 ನಿನ್ನ ನೀನೆ ತಿಳಿದುಕೊಂಡು ಚೆನ್ನಿಗನ ಕೂಟದಲ್ಲಿ ಚಿನ್ಮಯಾತ್ಮಕ ಲಕ್ಷ್ಮೀಪತಿಯ ಮುನ್ನಭಜಿಸೋ ಜನ್ಮವಿಲ್ಲ 5
--------------
ಕವಿ ಪರಮದೇವದಾಸರು
ಕೆಟ್ಟು ಹೋಯಿತು ಪ್ರಜೆಗಳು ಎಲ್ಲಾ ಬಾಯ ಬಿಟ್ಟುಪಾಯವ ಹೇಳುವರಿಲ್ಲ ಪ ಹಲ್ಲ ಬಿಡುವರು ಎಲ್ಲ ತಾಮ್ರಗಳ ಮಾರಿದರೆಲ್ಲ 1 ಚೊಚ್ಚಲಾಕಳು ಎಮ್ಮೆಗಳಿಂದ ಕೋರಡೆಯಿಂದ 2 ಕೊಡುವೆನೆಂಬುವರಿಲ್ಲ ಚಿಕ್ಕ ದೊಡ್ಡವರೆಲ್ಲ 3 ಸರಕಿನ ಮಾರು ಮಾರ್ಗವು ಕೆಟ್ಟು ಮೆಣಸಿನ ಸೆರೆಯ ಮಾರಲಿಕಿಲ್ಲದೆ ಕೆಟ್ಟು ಮತ್ತರ ಮನೆಗದರ ಪ್ರಜೆ ಬಾಯಿಬಿಡುತಿದೆ ಬಾಯನು ಬಿಟ್ಟು 4 ನರಗುರಿಯಾಯ್ತ ಪ್ರಜೆಗಳು ಎಲ್ಲ ದೊರೆಗಳಿಗಳ್ಳೆಷ್ಟು ಕರುಣವಿಲ್ಲ ಹರಿಸೂನು ಕೋಣೆ ಲಕ್ಷ್ಮೀಶನೆ ಬಲ್ಲ 5
--------------
ಕವಿ ಪರಮದೇವದಾಸರು
ಕೇಶವ ಕೇಶವನೆಂದು ನುಡಿಯಲು ಕ್ಲೇಶ ತೊಲಗುವುದು ಮಾಧವ ಮಾಧವನೆಂದು ನುಡಿಯಲು ಮಾದರಿಯಲ್ಲಿದ ಮೋದವ ಪೊಂದುವಿ 1 ಗೋವಿಂದ ಗೋವಿಂದನೆಂದು ನುಡಿಯಲು ಎಂದಿಗೂ ತೋರದ ನಂದವ ಪೊಂದುವಿ ವಾಮನ ವಾಮನನೆಂದು ಪೊಗಳಲು ತಾಮಸವಿಲ್ಲದೆ ಕಾಮಿತ ಪೊಂದುವಿ 2 ಶ್ರೀಧರ ಶ್ರೀಧರನೆಂದು ನುಡಿಯಲು ಈ ಧರೆಯೊಳು ನಿನಗೆ ಖೇದವೆಲ್ಲಿಯದು ಅಚ್ಚುತ ಅಚ್ಚುತನೆಂದು ಪೊಗಳಲು ಉಚ್ಚ ಕುಲದಿ ನೀ ಮೆಚ್ಚಿಗೆ ಪೊಂದುವೆ 3 ನರಹರಿ ನರಹರಿಯೆಂದು ನುಡಿಯಲು ಪರತರ ಸುಖವನು ನಿರುತವು ಪೊಂದುವಿ ಶ್ರೀ ಕೃಷ್ಣನೆಂದು ಪೊಗಳಲು ಕಷ್ಟವಿಲ್ಲದೆ ನೀ ಇಷ್ಟವ ಪೊಂದುವಿ 4 ರಾಘವ ರಾಘವನೆಂದು ಪೊಗಳಲು ನೀಗುವೆ ಸುಲಭದಿ ಅಘಗಳೆಲ್ಲವನು ಭಾರ್ಗವನೆನಲು ಪ್ರಸನ್ನನಾಗಿ ಹರಿ ದುರ್ಗಮ ಮೋಕ್ಷಕೆ ಮಾರ್ಗವ ತೋರುವ 5
--------------
ವಿದ್ಯಾಪ್ರಸನ್ನತೀರ್ಥರು
ಕೇಳಿದಾಗಲೇ ಹೇಳಬಹುದೇನೋ ಬ್ರಹ್ಮಾನುಭವಮಿದು ಪ ಹಾಳುವಾದವಲಾ ವಿಚಾರಿಸಲೇಳು ವ್ಯಸನಕೆ ಸಿಲ್ಕಿ ಕುಣಿಯುವ ಅ.ಪ ಖೂಳ ಕಪಟರಿಗೆಂತು ಅನುಭವಶಾಲಿಗಾಗಿಹ ಪರತರಾನ್ವಯ ಸುಳ್ಳಮಳ್ಳರಿಗಾಗದಹುದಣ್ಣ ವೇದಾಂತಸಾರಸ ಮೂಲ ಪ್ರಣವ ವಿಚಾರಕಹುದಣ್ಣ ಯಾರಾದಡಾಗಲೀ ನೀಲಜ್ಯೋತಿಯ ಕಾಣದೆ ಬರಿ ಶೂಲ ಶೀಲಕೆ ಸಿಲ್ಕಿ ಕುಣಿಯುತ ಆಲಿಸೆಂದು ನಮಸ್ಕರಿಸುತಿಹ ಜಾವಿದ್ಯದ ಪೋಲಿ ಜನಗಳು 1 ಪಂಡಿತರಿಗೇನದು ಕಂಡು ತಿಳಿಯಣ್ಣ ದೂರವಿಲ್ಲವು ಅಂಡದೊಳಗಿಹ ಪಿಂಡವೇ ಬ್ರಹ್ಮಾಂಡ ವೇದಾಂತಾರ್ಥ ಸಮ್ಮತಿ ಭಂಡರಿಗೆ ಬಹುಭಾಷೆಗಹುದೇನ ಕುಂಡಲೀಪುರ ತತ್ಪ್ರಯಾಣವು 2 ಓದಿ ವಿಕ್ರಯವನ್ನು ಮಾಡ್ಯಾರು ಓಂಕಾರ ಬೀಜದ ಹಾದಿಯನು ತಾವು ಕಾಣದೋಡ್ಯಾರೊ ರಾ ಜಾಧಿರಾಜರೂ ಕಾವಿ ಜಗಳವ ಕುಂತು ನೋಡ್ಯಾರು ವೇದಾಂತಿಗಳೂ ನಿಜ ಜ್ಞಾನಪುತ್ಥಳಿಯನ್ನು ಕಂಡ್ಯಾರು ಆದಿಮಧ್ಯಾಂತಗಳರಿಯದ ವಾದಿಗಳಿಗೆಂತಕ್ಕು ತತ್ವದ ಬೋಧೆಯೊಳಗಿಹುದು ಆದಿತತ್ವವು 3 ಕವಿಗಳೆಷ್ಟೋ ಕಷ್ಟಪಟ್ಯಾರು ಅವಸಾನಕರಂ ಭವದ ಬಲೆಯೊಳು ಕಟ್ಟಿಕುಟ್ಯಾರು ಆಗಲ್ಲಿ ಸುಜನರು ಜ್ಞಾ ನವೈರಾಗ್ಯವನು ಕೊಟ್ಯಾರು ಶಿವನು ತಾನೆಂತೆಂಬ ಅದ್ವೈತವನು ಆಡಲ್ಕಡಕಲಹುದೇ ಭುವನದೊಳು ಪಂಚಾಕ್ಷರೋ ನಿಜತ್ರಿಣೆಯಸತಿ ಮೋಕ್ಷೆಚ್ಛೆ ಕವಚಂ4 ನಾಗನಗರಿಪುರೀಶ ಕಾಣಣ್ಣ ಆಧ್ಯಾತ್ಮದನುಭವ ಕಾಗಿ ನಿನ್ನೊಳ ಹುಡುಕಬೇಕಣ್ಣ ಹಂಸಾಶ್ರಯದಿ ನಿನ್ನೊ ಳಗಿದೆಲ್ಲವು ಹುಡುಕಿ ನೋಡಣ್ಣ ಭೋಗಿಶಯನ ಶ್ರೀ ತುಲಸೀರಾಮನ ರಾಗವಿರಹಿತನಾಗಿ ಭಜಿಸಿದಡಾಗ ನಿನ್ನೊಳಗಂಕುರಿಪುದ 5
--------------
ಚನ್ನಪಟ್ಟಣದ ಅಹೋಬಲದಾಸರು
ಕೇಳಿರಿ ಕೌತುಕ ಪೇಳುವೆನೀಗ ಶೀಲ ಶ್ರೀ ಗುರುಗಳ ಕರುಣದಲಿ ಪ. ವ್ಯಾಳಶಯನ ರಂಗ ತಾಳಿ ಕರುಣಿಸಿದ ಮೇಲು ಮೇಲು ಭಕ್ತಿಯ ನೀಡುತಲಿ ಅ.ಪ. ಅರಿಯದ ದೇಶದಿ ಅರಿಯದ ಕಾಲದಿ ಅರಿಯದವಸ್ಥೆಯ ಅನುಭವವು ಸಿರಿಯರಸನ ವ್ಯಾಪಾರವಿದಲ್ಲದಡೆ ನರರಿಗೆ ಸಾಧ್ಯವೆ ನಾಡಿನೊಳು 1 ಸಂಭÀ್ರಮದಲಿ ಸಮಾರಂಭವು ಕಲೆತಿರೆ ಬೆಂಬಿಡದಲೆ ರಕ್ಷಿಸುತಿರಲು ಕುಂಭಿಣಿಯೊಳು ಸ್ಥಿರವಾದ ಪದವಿಗೆ ಅಂಬುಜನಾಭನ ಕರುಣವಿದು 2 ಅಗ್ನಿಗಳೆರಡು ಕಲೆತು ಶಾಂತವಾಗಿ ಭಗ್ನವಿಲ್ಲದ ಆನಂದ ತೋರೆ ವಿಘ್ನವಾಗದ ಕಾಲಗಳೊದಗುತ ಮಗ್ನಗೈಸಿತಾನಂದದಲಿ 3 ಚಲಿಸದ ವಸ್ತುಗಳ್ ಚಲಿಸಿತು ಮತ್ತೆ ಚಲನೆಯಿಲ್ಲದೆ ಸುಸ್ಥಿರವಾಯ್ತು ಬಲು ವಿಚಿತ್ರವು ಭೂತಲದೊಳಗಿದು ನಳಿನನಾಭನ ಸಮ್ಮತವು4 ಬಿಂಬನಾಗಿ ಹೃದಂಬರ ಮಧ್ಯದಿ ಸಂಭ್ರಮಗೊಳಿಸೆಲೊ ಶ್ರೀ ವರನೆ ನಿತ್ಯ ಇಂಬುಗೊಟ್ಟು ಕಾಯೊ ಬಿಂಬ ಶ್ರೀ ಗೋಪಾಲಕೃಷ್ಣವಿಠ್ಠಲ 5
--------------
ಅಂಬಾಬಾಯಿ
ಕೇಳು ಜೀವನವೆ ನೀ ಮಧ್ವಮತವನುಸರಿಸಿ ಶ್ರೀಲೋಲನಂಘ್ರಿಯನು ನೆನೆದು ಸುಖಿಸೊ ಪ. ನರನಾಗಿ ಪುಟ್ಟುವುದು ದುರ್ಲಭವೆಲವೊ ಭೂ- ಸುರಕುಲದಿ ಜನಿಸುವುದು ಬಹು ದುರ್ಲಭ ಪರಮ ಸುಕೃತವದೇನು ಫಲಿಸಿತೊ ನಿನಗೀಗ ದೊರಕಿದೀ ಜನುಮವನು ಸಫಲ ಮಾಡೊ 1 ಅರಘಳಿಗೆ ಮಾತ್ರವೆ ಪೊತ್ತು ಪೋಗಲು ಆಯು ಕೊರತೆಂದು ತಿಳಿ ನಿನ್ನ ಕ್ಲುಪ್ತದೊಳಗೆ ಮರಳುತನದಲಿ ಬರಿದೆ ದಿನಗಳಿಯಬ್ಯಾಡೆಲವೊ ಸ್ಥಿರವಲ್ಲ ಈ ದೇಹ ಸ್ವಪ್ನಸಮವೊ 2 ದುರುಳರೊಡನಾಡಿ ದುರ್ವಿಷಯ ಲಂಪಟನಾಗಿ ನರಕಯಾತನೆಗೆ ಗುರಿಯಾಗದಿರೆಲೊ ಎರಡುದಿನದೋಡ್ಯಾಟ ಇರಬಂದುದಲ್ಲವಿದು ಪರಗತಿಗೆ ಸಾಧನ ಮಾಡಿಕೊಳ್ಳೊ 3 ಹೋಗುತಿವೆ ಹೋಗುತಿವೆ ದಿವಸ ವ್ಯರ್ಥವಾಗಿ ಹೀಗೆ ಮೈಮರೆದಿಹುದು ನಿನಗೊಳ್ಳಿತೆ ಬ್ಯಾಗ ಹರಿಯನು ಭಜಿಸು ಬಾ ಈ ಮಾತಲ್ಲ ನೀ ಹೋಗಿನೋಡಲು ಯಮನ ಬಾಧೆ ಬಿರುಸೊ4 ಏನ ಹೇಳಲಿ ನಿನ್ನ ಮಂದಮತಿಯನು ಹಿಂದೆ ಶ್ವಾನಸೂಕರ ಮೊದಲಾದ ನೀಚ- ಯೋನಿಗಳೊಳಗೆ ಬಂದು ಅಂದದನು ಕ್ರಮಿಸಿದವನು ಆ ನೋವನಾಗಲೆ ಮರೆದಿಯಲ್ಲೊ 5 ಮುನ್ನ ದುಷ್ಕರ್ಮವ ಮಾಡಿದ ಪ್ರಾಣಿಗಳು ಉನ್ನತ ನೀಚ ದೇಹಗಳ ಧರಿಸಿ ಬನ್ನಬಡುತಿಹುದು ನೀ ನೋಡಿ ನೋಡಿ ಮತ್ತೆ ದುರ್ನಡತೆಯನು ಮಾಡಲುದ್ಯೋಗಿಪೆ 6 ಎಂಬತ್ತು ನಾಲ್ಕು ಲಕ್ಷ ಯೋನಿಗಳೊಳಗೆ ಕುಂಭಿಣಿಯೊಳಗೆ ತಿರುತಿರುಗಿ ಪಾಪ ಉಂಬುದನುಚಿತವೆಂದು ಮನ ಹೇಸಿ ವಾಕರಿಸಿ ನಂಬುನಾರಾಯಣನ ಇನ್ನಾದರೂ 7 ಜನನಿಯ ಗರ್ಭವಾಸ ದುಃಖ ಅತಿಶಯವೊ ಜನನ ಮರಣದ ದುಃಖ ಬಲು ಅಧಿಕವೊ ಘನ ನರಕದಾ ದುಃಖ ಪೇಳಲೊಶವಲ್ಲ ನಿನ- ಗಿನಿತಾದರೂ ನಾಚಿಕಿಲ್ಲವೇನೊ 8 ಸಾರಿ ಪೇಳುವೆನೀಗ ಪುಟ್ಟಿ ಬೆಳೆದಳಿವ ಸಂ- ಸಾರ ಸುಖವಲ್ಲ ಮಹ ದುಃಖಪುಂಜ ಘೋರ ಸಂತಾಪಕ್ಕೆ ಕಡೆಮೊದಲಿಲ್ಲವೊ ವಾರಿಜಾಂಬಕನ ಮರೆಯೊಕ್ಕು ಬದುಕೊ 9 ಹಿಂದೆ ಬಹುಜನುಮದಲಿ ಬಂದು ಬಳಲಿದ ಬವಣೆ ಒಂದೊಂದು ನೆನೆಸಿಕೊಳಲತಿ ಕಷ್ಟವೊ ಮುಂದಾದರು ಸರಿ ಎಚ್ಚೆತ್ತು ಬಿಡದೆ ಗೋ- ವಿಂದನ ಪದಾಂಬುಜವ ಧ್ಯಾನ ಮಾಡೊ 10 ಮಾರಿ ಇಲ್ಲಿದೆಯೆಂದು ಕೇಳುತಲಿ ಪೋಗಿ ನೀ ಭೂರಿ ಭಯಕೊಳಗಹದು ನೀತಿಯಲ್ಲ ದೂರ ತಿಳಿದು ನೋಡಿ ದುರ್ಮಾರ್ಗವನು ಜರಿದು ಸೇರಿ ಸಜ್ಜನರ ಸುಪಥವ ಪಡೆಯೊ 11 ನಿನ್ನಯ ಸ್ವರೂಪಕ್ಕೆ ಹೀಗಾಗುವುದೆಂದು ಪುಣ್ಯವನೆ ಗಳಿಸಿಕೊ ಬ್ಯಾಗ ನೀನು ಇನ್ನು ಈ ಧರೆಯಲ್ಲಿ ಬಿಟ್ಟು ಹೋಗುವ ದೇಹ- ವನ್ನು ಪೋಷಿಸಿಕೊಂಡು ಹಿಗ್ಗಬೇಡ 12 ವನಿತೆಸುತರನು ಪೊರೆಯಬೇಕೆಂಬ ಬುದ್ಧಿಯಲಿ ಧನದಾಸೆಯಿಂದಲಗಣಿತ ಪಾಪವ ಕ್ಷಣದೊಳಗೆ ಸಂಪಾದಿಸಿಕೊಂಬೆ ಎಲೊ ಮೂಢ ನಿನಗಿವರು ಕೊನೆಗೆ ಸಂಗಡ ಬರುವರೆ 13 ಕೆಡಬ್ಯಾಡ ವ್ಯರ್ಥಮೋಹಕೆ ಸಿಲುಕಿ ಜವನವರು ಪಿಡಿದೊಯ್ದು ಕಡಿದಿರಿದು ಕೊಲ್ಲುವಾಗ ಬಿಡಿಸುವವರಾರಿಲ್ಲ ಈಗಳೆ ಮುಂದರಿತು ಕಡಲಶಯನನ ಪೊಂದಿ ಮುಕುತಿ ಪಡೆಯೊ 14 ಈಗಲೇನೊ ಇನ್ನು ಕ್ಷಣಕೇನು ಬಪ್ಪುದೊ ನೀ ಗರುತರಿಯದಲೆ ಹಿತ ರಾಗದಲಿ ಸರ್ವವನು ಎನ್ನದೆಂದಾಡದಿರು ನಾಗಾರಿಗಮನನಾಧೀನವೆನ್ನೊ 15 ನೀ ಮಗುಳೆ ಮಹಿಯೊಳಗೆ ಕಂಡುಕಂಡುದ ಬಯಸಿ ಭ್ರಾಮಕರ ನುಡಿಗೇಳಿ ಭ್ರಾಂತಿಗೊಳದೆ ಕಾಮಾದಿಗಳ ತ್ಯಜಿಸಿ ಸತ್ಕರ್ಮವನು ಮಾಡಿ ಶ್ರೀಮನೋ ಹರನಿಗರ್ಪಣೆಯ ಮಾಡೊ16 ಏನುಧಾವತಿಗೊಳಲೇನೇನು ಫಲವಿಲ್ಲ ಮಾನವಜನುಮ ಜೊಳ್ಳು ಮಾಡಬ್ಯಾಡ ಆನಂದತೀರ್ಥರ ಪಾದಕಮಲವ ಪೊಂದಿ ಅಚ- ಲಾನಂದವಿಠಲನ್ನ ನೀನೊಲಿಸಿಕೊ 17
--------------
ಅಚಲಾನಂದದಾಸ
ಕೇಳು ಮಗುವೆ ನಾನೆಂಬಿ ಮಾತನುತಾಳು ತವಕದೊಳೆನ್ನ ಗುರುತನು 1 ಅಮರರುಸುರಿದಾ ಅರ್ಥಕೇಳಿದ್ಯಾಕಮಲಜನಿಗವತಾರವಿಲ್ಲದಾಕ್ರಮವಿ ನೋಡಲು ಕಾರ್ಯ ನಿನ್ನೊಳೂಭ್ರಮಿಸಿ ಬರುವದು ಭಾರವೇನಿದು2 ಎಂದು ತ್ರಿಯುಗನೂ ಮಂದಹಾಸಾದಿಂ-ದೆಂದು ನುಡಿಯನೂ ಕೇಳಿ ಪವನನುಇಂದಿರೇಶನೆ ನಿನ್ನಾಜ್ಞೆಮೀರಲೇದೆಂದು ಶಕ್ತನಲೆಂದು ಮಣಿದನೂ 3
--------------
ಇಂದಿರೇಶರು
ಕೇಳೊ ಗೋವಿಂದ ಹೇಳಿದರಂತು ಬಲು ಚಂದ ಇಂದಿರೇಶನ ಗುಣ ಚಂದಿಲ್ಲಚಾರವಿಲ್ಲ ಅಂದರೆಭಾಳ ಬಲುಕೋಪ ಕೇಳೊ ಗೋವಿಂದ ಪ ಭೇರಿ ಬಾರಿಸಿ ಕೇಳುತ ಭೂರಿಜನರ ಕೂಡಿಭೋರೆಂಬೊ ಕಾಳಿ ಹಿಡಿಸುತ ಭೋರೆಂಬೊ ಕಾಳಿ ಹಿಡಿಸುತ ಖಳರ ಸಂಹಾರ ಮಾಡಿದ ಮಧುರೆಯಲಿ ಕೇಳೊ 1 ಹೊರಗಿಂದ ಬಂದಳು ತಿರುಗಲ ತಿಪ್ಪಿಯು ಹೆರವರಿಗುಪಕಾರಿ ಮನೆಗೆ ಮಾರಿ ಹೆರವರಿಗುಪಕಾರಿ ಮನೆಗೆ ಮಾರಿ ಮಕ್ಕಳ ಕೊರಳ ಹಿಚುಕಿ ಕೊಂದಳು2 ತಲೆಹೊೈಕ ಹಿರಿಯವ ಚಿಕ್ಕವ ಚಂಚಲ ಬಹು ಚಾಡಿಕೋರ ಇನ್ನೊಬ್ಬಬಹು ಚಾಡಿಕೋರ ಇನ್ನೊಬ್ಬ ಎನುತಲಿಫಲ್ಗುಣ ನಗುತ ನುಡಿದನು 3 ಸುರತರು ತರುವಾಗ ಇಂದ್ರ ಬಂದಿದ್ದ ಜಗಳಕ್ಕೆÀಇಂದ್ರ ಬಂದಿದ್ದ ಜಗಳಕ್ಕೆ ಆಗನಮ್ಮಕ್ಕನಿಂದ ಮಾನ ಉಳಿದೀತೊ4 ಒಗೆತನ 5 ಬಲು ಪತಿವ್ರತೆಯೆಂದು ಜನರೆಲ್ಲ ಹೊಗಳೋರು ತಲೆಯಲ್ಲಿ ಹೊತ್ತ ಮಹಾದೇವತಲೆಯಲ್ಲಿ ಹೊತ್ತ ಮಹಾದೇವ ಇಂಥವಳ ಬಲುಗುಣವಂತೆ ಎನಬಹುದೆ 6 ಒಗೆತನ ಕೇಳೊ ಗೋವಿಂದ7
--------------
ಗಲಗಲಿಅವ್ವನವರು
ಕೈತುತ್ತ ಹಾಕುವೆ ಬಾರೋ ರಂಗ ಮೈತುಂಬಾ ಒಡವೆಯ ಇಡುವೆನು ಬಾರೋ ಪ ಬೈತಲೆ ಬಾಚಿ ಹೂ ಮುಡಿಸುವೆ ಬಾರೋ ತೈ ತೈ ತೈ ಎಂದು ಕುಣಿದಾಡು ಬಾರೋ ಅ.ಪ ಬಿಸಿ ಬಿಸಿಯನ್ನವ ಮೊಸರಲಿ ಕಲಸಿ ಹಸುವಿನ ಬೆಣ್ಣೆಯ ಅದರ ಮೇಲಿರಿಸಿ ಕೇಸರಿ ಬೆರೆಸಿ ತುಸು ಏಲಕ್ಕಿಯ ಪುಡಿಮಾಡಿರಿಸಿ 1 ಬಸಿರಲ್ಲಿ ಜಗಂಗಳ ತುಂಬಿಹೆನೆಂದು ಹಸಿವಿಲ್ಲವೆನಬೇಡ ಅಸುರರಕೊಂದು ಬಿಸದ ಕಾಳಿಂಗನ ತುಳಿದೆದ್ದುನಿಂದು ಬಸವಳಿದಿರ್ಪೆನೀನಮರರ ಬಂಧು 2 ಹೊಸ ಪೀತಾಂಬರ ಕಟಿಬಂಧವಿಡುವೆ ವಿಸರವ ಪಸರಿಪ ಹೂಗಳ ಮುಡಿವೆ ರಸಸವಿನಾದದ ಕೊಳಲನು ಕುಡುವೆ ನಸುನಗೆ ತೋರೋ ಮಾಂಗಿರಿರಂಗ ನಲಿವೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್