ಸಾರಿ ಹೇಳಿದೆ ಮೂರು ಬಾರಿ ಮನ
ಬಾರದಿದ್ದವರು ದೂರಿದರೆನ್ನ ದೂರಿಪ
ನರದೇಹವಿದು ನಂಬಬೇಡಿ ಭವ
ಶರಧಿಯ ದಾಟಲುಪಾಯವ ಮಾಡಿ
ಎರವಿನ ತನುವನು ನೋಡಿ ಶ್ರೀ
ಗುರುವಿನ ಚರಣಕ್ಕೆ ಶೆರಗೊಡ್ಡಿ ಬೇಡಿ 1
ಗುರುವಿನಿಂದಧಿಕ ದೈವವಿಲ್ಲಾ ಇದ
ನರಿಯದೆ ಕೆಡುವರು ಪ್ರಾಣಿಗಳೆಲ್ಲಾ
ಅರಿತ ಸುಜ್ಞಾನಿಯೆ ಬಲ್ಲಾ ಉಪ
ಕರಿಸಿ ಪೇಳುವೆನು ಕೇಳಿರೋ ಎನ್ನ ಸೊಲ್ಲಾ 2
ಸರಸಿಜೋದ್ಭವನ ಕೈಮಾಟಾ ಚೆಲ್ವ
ಗಿರಿಜಾರಮಣನ ಸೂತ್ರದ ಗೊಂಬೆಯಾಟಾ
ಬರಿದೆ ವಿಷ್ಣು ಮಾಯಾಕಾಟಾ ಶ್ರೀ
ಗುರುವಿಮಲಾನಂದ ಹೇಳಿದ ಪಾಠಾ 3