ಒಟ್ಟು 1890 ಕಡೆಗಳಲ್ಲಿ , 106 ದಾಸರು , 1489 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗಾಜನಕಗೆ ಮಂಗಳಾರುತಿಯನೆತ್ತಿ ಮಂಗಳಾಂಗಿಯರು ಸಂಗೀತ ಪಾಡುತ ಪ ಅನಿಮಿಷೇಶನು ಆನಂದಾತ್ಮಾ ಪ್ರಾಕೃತನು ಅನಿಲವಾಸಾನಂತಾನಂತಾನಂತನಂತರೂಪನು 1 ಲಕ್ಷ್ಮೀವಾಸನು ಕುಕ್ಷಿಯೊಳ್ ಬ್ರಹ್ಮಾಂಡಧರನು ಲಕ್ಷಣಗ್ರಜನು ಸುಕ್ಷೇಮದಿಂದಿಡುವ ನಾಮ 2 ಕರುಣಪೂರ್ಣನು ಸ್ಮರಿಪರ ಭವವಿದೂರ ಸರಿಮಿಗಿಲಿಲ್ಲದ ಸಿರಿವಿಠಲ ನಾಮಧೇಯ 3
--------------
ಸಿರಿವತ್ಸಾಂಕಿತರು
ಗಂಗಾನದಿ ಬಾರೆ ಬಾರಮ್ಮ ಜಾನ್ಹವೀದೇವಿಹರಿಭಕುತರ ಕಾಯಿ ಪ ಬಾರೆ ಬಾರೆ ಪುರವೈರಿ ಸಿರಸ್ಥಿತೆಮೂರು ಲೋಕಗಳ ವಾರಣ ಮಾಡುವಿ ಅ.ಪ. ನೀರಜ ಶುಭವಸ್ತ್ರೆಸಾರಸಾಯತ ಸುಂದರ ನೇತ್ರೇಚಾರು ಸುರಗಿ ಮುತ್ತಿನ್ಹಾರ ಕುಂಡಲನೊಸ-ಲ್ಹೀರ ಮಸ್ತಕವಿದು ಸಾರಸಭೂಷೆ 1 ಹರಿಯಾ ಸ್ನಾನೋದಕದಲಿ ನೀನಿರುವಿವರ ವೀಳ್ಯದಲಿರುವಿಹರಿಯಾ ತರುಣಿಯನೆ ನೀ ಪಡೆದಿರುವಿ2
--------------
ಇಂದಿರೇಶರು
ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ ತುಂಗೆ ಕಾರುಣ್ಯ ಪಾಂಗೆ ಅಸಿತಾಂಗೆ ತಿಂಗಳಾನನೆ ಪ ಪರಮೇಷ್ಟಿ ಪಾತ್ರಜಾತೆ ವರುಣನ್ನ ನಿಜದೈಯಿತೆ ಸುರ ಮುನಿಗಣವಿನುತೆ ವರದಾತೆ ಸರ್ವಖ್ಯಾತೆ ತರಣಿಸುತನ ಉದ್ಧರಿಸಿದೆ ಕರುಣದಿ ಧರೆಯೊಳು ನಿನಗೆ ಎ ದುರುಗಾಣೆ ಶರಣಾ 1 ಭಯ ಪಾಪ ತಾಪದೊರೆ ಜಯ ಜಯ ಗುಣಸಾರೇ ತ್ರಯಭುವನ ಉದ್ಧಾರೆ ಆಯುತಾರ್ಕವರ್ನ ನೀರೆ ನಯವ ಭಕುತಿ ಹೃ ದಯದೊಳಗಿತ್ತು ಸಹಾಯ ದಿನ ದಿನ ನಯನ ಶ್ರವಣವೇಣಿ 2 ಘನ್ನ ವಾರಣಾಸಿ ಕಾಸಿವನ ಆನಂದ ನಿವಾಸಿ ಪ್ರಣತ ಜನರಘನಾಶ ಮಣಿಭೂಷೆ ಸೌಖ್ಯರಾಸಿ ಅನನುತ ವಿಜಯವಿಠ್ಠಲನ ಮನಸಿನಲಿ ನೆನೆಸುವ ಸಾಧನ ಕೊಡು ವಿರಜೇ 3
--------------
ವಿಜಯದಾಸ
ಗಂಗೆಯ ಶಿರದಿ ಪೊತ್ತವಗೆಮಂಗಳಪ್ರದಗೆ ಶಂಕರಗೆಪುಂಗವರಾಜವಾಹನಗೆಮಂಗಳಾರತಿಯನೆತ್ತಿರೆ 1 ಪಾಕಾರಿ ಪೂಜಿತಪಾದಗೆಮಾಕಾಂತನೇತ್ರಾರ್ಚಿತಗೆಶ್ರೀಕರಗೇಕೋರುದ್ರಗೆಏಕಾರತಿಯನೆತ್ತಿರೆ 2 ಪಂಚಬಾಣನ ಗೆಲಿದವಗೆ ತ್ರಿಪಂಚನೇತ್ರಗೆ ಪಂಚಮುಖಿಗೆಪಂಚಕೃತ್ಯಾಧೀಶ್ವರಗೇಪಂಚಾರತಿಯನೆತ್ತಿರೆ3 ಕಮಲಸಂಭವನುತಿ ಪಾತ್ರಗೆಕಮಲಾಪ್ತಕೋಪ್ತಕೋಟಿಭಾಸುರಗೆಕಮಲಾಹಿತ ಭೂಷಣಗೆಕಮಲದಾರತಿಯನೆತ್ತಿರೆ 4 ನಾಗೇಂದ್ರಚರ್ಮಾಂಬರಗೆನಾಗೇಂದ್ರ ಹಾರಶೋಭಿತಗೆನಾಗೇಂದ್ರ ಶಯನಸನ್ನುತಗೆನಾಗಾರತಿಯನೆತ್ತಿರೆ 5 ಸರ್ಪಕಂಕಣ ಸದಾಶಿವಗೆಮುಪ್ಪುರವನು ಗೆಲಿದವಗೆಕಪ್ಪು ಗೊರಲಗೆ ಕಾಮದಗೆಕಪ್ಪುರದಾರತಿಯನೆತ್ತಿರೆ 6 ಜಯ ಜಯ ಕೆಳದಿ ಪುರೇಶಜಯ ಜಯ ಶ್ರೀ ಪಾರ್ವತೀಶಜಯ ಜಯ ಶ್ರೀ ರಾಮೇಶ್ವರಜಯವೆಂದಾರತಿಯನೆತ್ತಿರೆ7
--------------
ಕೆಳದಿ ವೆಂಕಣ್ಣ ಕವಿ
ಗಜಮುಖ ಗಣನಾಥಾ | ಬೇಡುವೆಸುಜನರ ಪೊರೆ ಎಂದೂ ಪ ಅಜನಯ್ಯನು ಶ್ರೀರಾಮನು ನಿನ್ನನುಪೂಜಿಸಿ ಪ್ರಥಮದಿ ಜಗಕೆ ತೋರಿದನುಅ.ಪ. ದಶಮುಖ ರಾವಣನು ನಿನ್ನಹಸನಾಗಿ ಪೂಜಿಸದೇ |ವಶನಾದ ಮರಣಕೆ ರಣರಂಗದೊಳುಬಿಸಜ ಸಂಭವವರ ಬಹುವಾಗಿದ್ದರೂ 1 ಯಮಸುತ ಮೊದಲಾಗಿ ನಿನ್ನನಮಿಸಲು ಅಧ್ವರದೀ |ಅಮಮ ಪಾಪಾತ್ಮಕರ ಮಿತರಸವರುತಸ್ವಾಮಿ ಎನಿಸಿದನು ಅಪಾರ ರಾಜ್ಯಕೆ 2 ಗುರುಗೋವಿಂದ ವಿಠಲನಾ | ಕರುಣಭರಣವಮಿತ ಪಡೆದಾ |ವರದಾಯಕ ವಿಘ್ನವ ಕಳೆಯುತಅರವಿದೂರ ಪದರಜವನೆ ಕಾಣಿಸೋ 3
--------------
ಗುರುಗೋವಿಂದವಿಠಲರು
ಗಜಾನನಂ ಲೋಕನುತಂ | ಸ್ಮರಾಮಿ ಗೌರಿಕೃತ ಸುತಂ ಸನ್ನುತ ಭಕ್ತಾಶಯದಂ ಪ ಸನಕಾದಿ ಸ್ತುತಂ ಹಿತಂ | ಶುಭಪ್ರದರತಂ ಮತಂ ಅ.ಪ ಕಲ್ಪಭೂಜಂ ಸಾನುಜಂ | ಪಾಶಧರ ಸಾಮಜಂ ಪ್ರಸನ್ನ ಚತುರ್ಭುಜಂ | ಕಾರ್ತಿಕೇಯ ಮಹಾಗ್ರಜಂ ಪರಶಿವ ಕಾಮಿತ ತನುಜಂ | ಫಣಿಬಂಧಯುತಂ ಸೇವ್ಯ ಮಹಾಗಣೇಶ ಪಿತರಜಂ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗಣಪಾ ನೀ ಪಾಲಿಸೊ ಗಜಮುಖನೆ ವೋ ಪ ತ್ರಿಣಿಯಸತಿ ಗಿರಿಜಾಸುತನೆ ಕೇಳ್ ಮನುಮುನಿ ಸನಕಾದಿ ವಂದಿತ ಅಣಿದು ನೀ ರಕ್ಷಿಸಲು ನಿನಗಿ ನ್ನೆಣೆಯುಗಾಣೆನು ಸರ್ವಸಿದ್ಧಿ ವೋ 1 ವೇದಶಾಸ್ತ್ರ ಪುರಾಣ ವಿದ್ವ ಕ್ಕಾದಿ ರೂಪನೆ ದಿವ್ಯಪ್ರಣನಾ ನಾದರೂಪನೆ ಸರ್ವಮಂಗಳ ಸಾಧು ಶಿಖರನೆ ಸರ್ವಸಿದ್ಧಿ ವೋ 2 ಏಕದಂತನೆ ಷಣ್ಮುಖಾಗ್ರಜ ವಾಕ್ಕು ಶುದ್ಧಿಯೊಳಾಡಿಸೆನ್ನನೂ ಬೇಕು ನಿನ್ನಯ ಕರುಣಯಿತರವು 3 ವಾಸವಾರ್ಚಿತ ಶ್ರೀಗುರು ಹಿರಿ ದಾಸ ತುಲಸೀರಾಮ ನಿನ್ನಯ ದೋಷ ಅಂತಕನಾಮ ಯತಿಗಣ ಪ್ರಾಸು ಹೊಂದಿಸೊ ಯೀಶಪುತ್ರನೇ 4
--------------
ಚನ್ನಪಟ್ಟಣದ ಅಹೋಬಲದಾಸರು
ಗಣೇಶ ಬಾರೋ ಕರುಣವ ಬೀರೋ ಪ ತ್ರಿಗುಣಯ್ಯನ ಸುತ ಮುನಿಜನಹಿತ ಅ.ಪ ಭಗ್ನವೆಗೈಯುತಲಿಶ ತೃಘ್ನಾಗ್ರಜನಣ್ಣನನಿ- ರ್ವಿಘ್ನತೆಯಲಿ ಭಜಿಸುವದಕೆ 1 ಮೂಲಾಧಾರನಿಲಯರಿಪು ಕಾಲಗಿರಿಸುತಾಬಾಲ ಪಾಲಿಸುತಿಹೆ ಕರುಣಾಳೊ 2 ತಾಮಸದಾನವ ಹರಗುರು ರಾಮವಿಠಲನಡಿಗಳನಿ- ಕಾಮಿತ ಫಲಗಳ ಕೊಡುವಡೆ 3
--------------
ಗುರುರಾಮವಿಠಲ
ಗಣೇಶ ಸ್ತುತಿ ಮಂಗಲಂ ಜಯ ಮಂಗಲಂ ಪ ಗಜಮುಖದೆಸೆವೆ ಲಂಬೋದರಗೆ ತ್ರಿಜಗವಂದಿತ ಮೋದಕ ಕರಗೆ ರಜತಾದ್ರಿವಾಸನ ರಮಣಿಯಸುತನಿಗೆ ಭಜಕರ ಪಾಲಿಪ ವಿಜಯನಿಗೆ 1 ಮೂಷಿಕ ತೇಜಿಯನೇರಿದಗೆ ದೇಶದಿ ಕೀರ್ತಿಯ ಬೀರಿದಗೆ ಶೇಷಾಭರಣವೆತ್ತ ಶೂರ್ಪಕರ್ಣನಿಗೆ ವಾಸೆಯಿಂದ ಭಕ್ತರ ಪೋಷಿಪಗೆ ಮಂಗಲಂ 2 ಕಡುಕರುಣದಿ ಜಗವನು ಕಾಯ್ವಾ ಯೆ ನ್ಹೊಡೆಯ ಶ್ರೀ ವಿಘ್ನೇಶ್ವರ ದೇವಾ ಇಡಗುಂಜಿಯೊಳಗಿದು ದೃಢದಿ ಲಕ್ಷ್ಮಣನಿಗೆ ಗಡಣವಿದ್ಯವನಿತ್ತು ನುಡಿಸುವಗೆ ಮಂಗಲಂ 3
--------------
ಭಟಕಳ ಅಪ್ಪಯ್ಯ
ಗಣೇಶಸ್ತುತಿ ಕರುಣಿಸೋ ಗೌರೀಕರಜ ಪ ಕರುಣಾಳು ಕ್ಷಿಪ್ರ ಮನದ ಕಾಯ ಬೇಗದಿ ಅ.ಪ ಕಾಯ ಜಾತ ಅರಿವರ್ಗಗಳಿಗೆ ವಿಘ್ನವ ತ್ವರದಲ್ಲಿ ಇತ್ತು ಶುಭಕೆ ಮಾರ್ಗವ 1 ನರಭಾವದಿಂದ ನಿನ್ನ ಮರೆತರೆ ನೀನು ಎನ್ನನು ಜರಿದರೆ ಪೊರೆವೊರ್ಯಾರೊ ನಿರುತದಿ 2 ಮರುದಂಶ ಮಧ್ವಮುನಿಯ ವರಶಾಸ್ತ್ರ ಪೇಳ್ವ ಬುದ್ಧಿಯ ವರವಿತ್ತು ಬಂದ ವಿಘ್ನವ ಕಳೆಯುತ 3 ವರಪಾಶಪಾಣಿ ಎನ್ನ ದುರಿತಾಶಪಾಶ ಛೇದಿಸಿ ಹರಿ ಭಕ್ತಿ ಪಾಶದಿಂದ ಬಿಗಿಯುತ 4 ಕರಿವಕ್ತ್ರಶಂಕೆ ಎಂಬ ಕರಿಯನ್ನು ಅಂಕುಶದಲಿ ಮುರಿಬಿಂಕ ಶಂಕಿಸದೆ ವಿದ್ಯವ 5 ಸಿರಿ ವಾಣಿ ಚಂಡಿಕಾದ್ಯರು ನಿರುತದಿ ಇದ್ದು ವರವ ಬೀರ್ವರು 6 ನರವಾಹ ವಾಯುಜರಿಗೆ ಸರಿ ಎಂಬೋ ಜ್ಞಾನದಿ ಪಾದ ತೋರಿ ಬೇಗನೆ 7
--------------
ಪ್ರದ್ಯುಮ್ನತೀರ್ಥರು
ಗಣೇಶಸ್ತುತಿ ಗಣಪತಿ ಎನದೋಷ ಬಿಡಿಸುವುದೊ ಶ್ರೀ- ಶಾನತಿ ದಾಸಾ ವೆಂಕಟೇಶವಿಠಲನಾ ಪ ದ್ವಿಪತುಂಡ ಅಪರಾಧ ಎಣಿಸಾದಿರೋ ಪಾಪಾ ಚತುರೀಪಾ ಗಂಗಾಪಾ ಸಜ್ಜನರ 1 ಇಭಮುಖ ಅಭಯವನೀಯುವುದೋ ಕಾಯಾಚಿತ ಮಾಯಮಾಡಯ್ಯ ಪಾಮರಸ 2 ವರಜೇಶಾ ಶಿರಿಮೊಗ ತೋರುವದೊ ಜಿರಹಾಕೃತ ಸ್ನೇಹಾ ನರಸಿಂಹವಿಠ್ಠಲನಾ 3
--------------
ನರಸಿಂಹವಿಠಲರು
ಗಣೇಶಸ್ತುತಿ ಭೂರಿ ಸುಂದರಾಂಗನೆ ಚಾರುಹಾಸ ಪಾಲಿಸೆನ್ನ ನೀರಜಭವ ಮಾಧವನುತ ಪ ಅಜಮುಖಾಮರೇಂದ್ರರು ಭಜಿಸಿ ಸಿದ್ಧಿಗೊಂಬರು ಕಮಲ ವಿಧೃತ ತ್ರಿಜಗವಿನುತ 1 ತ್ರಿಪುರ ದಹನಕಾಲದಿ ರಿಪುದವಾಗ್ನಿ ನಿಮ್ಮನು ಕರುಣಿದೆಯೊ ವಿಭು 2 ಸಾಮಜಾಸೈ ಪಾಲಿಸೆನ್ನ ಕಾಮಿತಗಳ ಕರುಣಿಸುತಲಿ3
--------------
ಬೇಟೆರಾಯ ದೀಕ್ಷಿತರು
ಗಾನಲೋಲನಾದ ಶ್ರೀನಿವಾಸನಾ ಸರ್ವೇಶನಾ ಗಾನದಿಂ ಭಜನೆ ಮಾಡೋ ಜಾನಕೀ ರಮಣನಾ ಪ ಮಲಗಿ ಪಾಡೇ ಮುರಲೀಧರನು ವಲಿದು ಕುಳಿತು ಕೇಳ್ವನೋ ಕುಳಿತು ಪಾಡೇ ನಿಲುವ ನಿಂದರೆ ನಲಿವನೋ ತಾ ವಲಿವನೋ 1 ಬಾಲನಾ ಗೋಪಾಲನಾ ಸುಶೀಲನಾ ಕೃಪಾಲನಾ ನೀಲಮೇಘ ಲಕುಮೀಲೋಲನಾ ವಿಶಾಲನಾ 2 ನಿತ್ಯನಾ ನಿರ್ಲಿಪ್ತನಾ ಪರಮಾತ್ಮ ಸಕಲವ್ಯಾಪ್ತನಾ ಭಕ್ತರಲ್ಲಿ ನಿರುತ ಪ್ರೀತಿಯುಕ್ತನಾ ಸ್ವಶಕ್ತನಾ 3 ಆನಂದನಾ ದಯಾವೃಂದನಾ ಮುಕುಂದನಾ ಚಂದ್ರಕುಲಕೇ ಇಂದ್ರನಾ ಉಪೇಂದ್ರನಾ ಗೋವಿದನಾ 4 ಧೀರನಾ ಗಂಭೀರನಾ ಯದುವೀರನಾ ದಧಿಚೋರನಾ ಮಾರಜನಕ ವರದ ಶ್ರೀ ಹನುಮೇಶ ವಿಠಲರಾಯನಾ 5
--------------
ಹನುಮೇಶವಿಠಲ
ಗಾಳಿಗಿಟ್ಟ ದೀಪಕಾಣಿರೋ ಈ ಸಂಸಾರ ಗಾಳಿಗಿಟ್ಟ ದೀಪಕಾಣಿರೋ ಪ ಗಾಳಿಗಿಟ್ಟ ದೀಪಕಾಣಿರೋ ಬೀಳು ಜಗದ ಬಾಳು ಎಲ್ಲ ನೀಲಶಾಮನ ಪಾದನಂಬಿ ಕಾಲನಾಳಿನ ದಾಳಿ ಗೆಲಿಯಿರೋ ಅ.ಪ ಸೂತ್ರಬೊಂಬೆಯಂತೆ ಕುಣಿಯುವ ಈ ದೇಹವೆಂಬ ತುಂಬಿ ತುಳುಕುವ ಆ ಗಾಳಿ ನಿಮಗೆ ಸೂತ್ರಧಾರಿಯ ಭಜಿಸಿ ಭವದ ಯಾತ್ರೆ ಜಯವ ಪೊಂದಿರಯ್ಯ 1 ಮಾಯೆಯಿಂದ ಕಲ್ಪಿಸಿರುವ ಈ ಮಾಯಕಲ್ಪ ಮಾಯೆಯೊಳಗೆ ಲಯಿಸುತಿರುವ ಆ ಮಾಯಗಾರ ಮಾಯದಾಟ ಆಡುತಿರುವ ತಿಳಿರೋ ನಿಜವ ಮಾಯತುಂಬಿ ಮಾಯಬೆಳಗಿ ಮಾಯಜಗವೆನಿಸಿ ತೋರ್ಪ ಮಾಯಮಹಿಮನ ಮರೆಯಬಿದ್ದು ಮಾಯಮೃತ್ಯು ಗೆಲ್ಲಿರಯ್ಯ 2 ವಿಷಮಕನಸಿನಂತೆ ತೋರುವ ಈ ಇಂದ್ರಜಾಲ ಹಸನಗೆಡಿಸಿ ನಿಮಿಷದಡಗುವ ಈ ಹೇಯ ಮಲ ಅಸಮಸುಖಕೆ ಬೆಂಕಿಹಚ್ಚುವ ಪಾಪಕೊಂಡವ ಅಸಮಜ್ಞಾನದಿಂದ ದಾಂಟಿ ವಸುಧೆಗಧಿಕ ಶ್ರೀರಾಮಪಾದ ಕುಸುಮಕ್ಹೊಂದಿ ನಿರ್ಮಲೆನಿಸಿ ಎಸೆವಮೋಕ್ಷ ಪಡೆಯಿರಯ್ಯ 3
--------------
ರಾಮದಾಸರು
ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ ಮೆರೆದು ಚತುರ ಬೀದಿ ತಿರುಗಿ ಬಪ್ಪುದು ನೋಡೆ ಪ ಸರಸಿಜಭವಾಗ್ರಜರುಳಿದವಾರು ವರ ಸಕಲ ಮನೋಭೀಷ್ಟ ಕೈಕೊಳುತಾ ನೆರೆದು ಸುತ್ತಲು ತಮ್ಮ ಭಕುತಿಯಲಿ ಸೂಸುತ್ತ ಹರುಷ ವಾರಿಧಿಯಾಳು ಮುಳಗಿದಟ್ಟಿಡಿಯಿಂದಾ 1 ಸುತ್ತಲುದರೆ ಬಿಂದುಗಳೊಂದು ಮುತ್ತಿನ ಸೂರ್ಯಪಾನಾ ಪತಾಕೆಗಳು ಬೀ ಸುತ್ತಲಿಪ್ಪದು ಚಾಮರ ಪಂಜುಗಳೆಸೆಯೆ 2 ದಂಡಿಗೆ ತಾಳ ಬೆತ್ತವ ಪಿಡಿದು ನಿಂದು ತಂಡ ತಂಡದಲಿಂದ ಮಹಿಮೆಯನ್ನು ಕೊಂಡಾಡುತ ಮನ ಉಬ್ಬಿ ಮಹೋತ್ಸವದಲ್ಲಿ ತೊಂಡರು ಹರಿದಾಡಿ ಹಾಡಿ ಪಾಡುತಲಿರೆ3 ಪವನ ಗರುಡ ಶೇಷ ಸಿಂಹ ಮಂಟಪ ಮತ್ತೆ ರವಿ ಶಶಿ ತುರಗ ಅಂದಣ ಮಿಕ್ಕಾದ ನವರಾತ್ರಿಯೊಳಗೆಲ್ಲ ವಾಹನನಾದ ಅಂ ದವನಾರು ಬಣ್ಣಿಪರು ಸಕಲ ಭೂಷಿತವಾಗೆ 4 ಚಿನುಮಯ ರೂಪ ವಿಚಿತ್ರ ಮಹಿಮ ದೇವ ನೆನೆದವರ ಹಂಗಿಗೆ ಸಿಲುಕುವಾ ಘನಗಿರಿ ತಿರ್ಮಲ ವಿಜಯವಿಠ್ಠಲರೇಯಾ ದನುಜದಲ್ಲಣನೆಂಬೊ ಬಿರಿದು ಪೊಗಳಿಸುತ್ತ 5
--------------
ವಿಜಯದಾಸ