ಒಟ್ಟು 1685 ಕಡೆಗಳಲ್ಲಿ , 106 ದಾಸರು , 1252 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರುತಿರು ಹೇ ಮನುಜ ಪ ಕ್ಲೇಶಪಾಶಂಗಳ ಹರಿದು ವಿಲಾಸದಿಶ್ರೀಶನ ನುತಿಗಳ ಪೊಗಳುತ ಮನದೊಳುಅ ಘಾಸಿ ಮಾಡಿದ ಪಾಪಕಾಶಿಗೆ ಹೋದರೆ ಹೋದೀತೆಶ್ರೀಶನ ಭಕುತರ ದೂಷಿಸಿದಾ ಫಲಕಾಸು ಕೊಟ್ಟರೆ ಬಿಟ್ಟೀತೆಭಾಷೆಯ ಕೊಟ್ಟು ನಿರಾಶೆಯ ಗೈದ ಫಲಕ್ಲೇಶಗೊಳಿಸದೆ ಇದ್ದೀತೆಭೂಸುರಸ್ವವ ಹ್ರಾಸ ಮಾಡಿದ ಫಲಏಸೇಸು ಜನುಮಕು ಬಿಟ್ಟೀತೆ 1 ಜೀನನ ವಶದೊಳು ನಾನಾ ದ್ರವ್ಯವಿರೆದಾನಧರ್ಮಕೆ ಮನಸಾದೀತೆಹೀನ ಮನುಜನಿಗೆ ಜ್ಞಾನವ ಬೋಧಿಸೆಹೀನ ವಿಷಯ ಅಳಿದ್ಹೋದೀತೆಮಾನಿನಿ ಮನಸದು ನಿಧಾನವಿರದಿರೆಮಾನಾಭಿಮಾನಗಳುಳಿದೀತೆಭಾನುಪ್ರಕಾಶನ ಭಜನೆಯ ಮಾಡದಹೀನಗೆ ಮುಕುತಿಯು ದೊರಕೀತೆ2 ಸತ್ಯಧರ್ಮಗಳ ನಿತ್ಯವು ಬೋಧಿಸೆತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥವ ವಿಚಿತ್ರದಿ ಪೇಳೆಕತ್ತೆಯ ಚಿತ್ತಕೆ ಹತ್ತೀತೆಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿಮುತ್ತು ಕೊಟ್ಟರೆ ಮಾತನಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆಅರ್ತಿಯ ತೋರದೆ ಇದ್ದೀತೆ 3 ನ್ಯಾಯವ ಬಿಟ್ಟನ್ಯಾಯವ ಪೇಳುವನಾಯಿಗೆ ನರಕವು ತಪ್ಪೀತೆಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆಘಾಯವಾಗದೆ ಬಿಟ್ಟೀತೆತಾಯಿತಂದೆಗಳ ನೋಯಿಸಿದವನಿಗೆಮಾಯದ ಮರಣವು ತಪ್ಪೀತೆಮಾಯಾಜಾಲವ ಕಲಿತ ಮನುಜನಿಗೆಕಾಯ ಕಷ್ಟವು ಬಿಟ್ಟೀತೆ 4 ಸಾಧು ಸಜ್ಜನರ ನೋಯಿಸಿದ ಮಾಯಾವಾದಿಗೆ ನರಕವು ತಪ್ಪೀತೆಬಾಧಿಸಿ ಪರರರ್ಥವ ದೋಚುವವಗೆವ್ಯಾಧಿಯು ಕಾಡದೆ ಬಿಟ್ಟೀತೆಭೇದವೆಣಿಸಿ ಬಲು ಕ್ಷುದ್ರವ ಕಲಿತರೆಮೋದವೆಂದಿಗು ಆದೀತೆಕದ್ದು ಒಡಲ ಪೊರೆವವನ ಮನೆಯೊಳುಇದ್ದದ್ದು ಹೋಗದೆ ಉಳಿದೀತೆ5 ಅಂಗಜ ವಿಷಯಗಳನು ತೊರೆದಾತಗೆಅಂಗನೆಯರ ಸುಖ ಸೊಗಸೀತೆಸಂಗ ದುಃಖಗಳು ಹಿಂಗಿದ ಮನುಜಗೆಶೃಂಗಾರದ ಬಗೆ ರುಚಿಸೀತೆಇಂಗಿತವರಿತ ನಿಸ್ಸಂಗಿ ಶರೀರ ವ-ಜ್ರಾಂಗಿಯಾಗದೆ ತಾನಿದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದಮಂಗಗೆ ಮುಕುತಿಯು ದೊರಕೀತೆ 6 ಕರುಣಾಮೃತದಾಭರಣವ ಧರಿಸಿದಶರಣಗೆ ಸಿರಿಯು ತಪ್ಪೀತೆಕರುಣ ಪಾಶದುರವಣೆ ಹರಿದಾತಗೆಶರಣರ ಕರುಣವು ತಪ್ಪೀತೆಅರಿತು ಶಾಸ್ತ್ರವನಾಚರಿಪ ಯೋಗ್ಯಗೆಗುರು ಉಪದೇಶವು ತಪ್ಪೀತೆವರ ವೇಲಾಪುರದಾದಿಕೇಶವನಸ್ಮರಿಸುವನಿಗೆ ಮೋಕ್ಷ ತಪ್ಪೀತೆ 7
--------------
ಕನಕದಾಸ
ಕೇಶವನೊಲುಮೆಯು ಆಗುವತನಕ ಹರಿ ದಾಸರೊಳಿರು ಮನವೆ ದಾಸರ ಸ್ತುತಿಯನು ಪೊಗಳುತ ಮನದೊಳು ಪ ಕಾಶಿಗೆ ಪೋದರೆ ಪೋದೀತೆ ಲೇಸಾಗದೆ ಸುಮ್ಮನಿದ್ದೀತೆ ಮೋಸವ ಮಾಡದೆ ಬಿಟ್ಟೀತೆ ನಿಜವಲ್ಲದೆ ಪುಸಿಯಾದೀತೆ 1 ಸೊಣಕನ ಮನಸಿಗೆ ಸೊಗಸೀತೆ ಹೀನ ವಿಷಯಗಳು ಬಿಟ್ಟೀತೆ ಮಾನಾಭಿಮಾನವು ಉಳಿದೀತೆ ದೀನಗೆ ಮುಕ್ತಿಯು ದೊರಕೀತೆ 2 ಕತ್ತೆಯ ಮನಸಿಗೆ ಬಂದೀತೆ ತೊತ್ತಿನ ಮನಸಿಗೆ ಬಂದೀತೆ ಅರ್ಥ ತೊರೆಯದೇ ಬಿಟ್ಟೀತೆ ಚಿತ್ರದಿ ಬೊಂಬೆ ವಿಚಿತ್ರದಿ ಬರೆದಿತ್ತ ಮುತ್ತು ಕೊಟ್ಟರೆ ಮಾತಾಡೀತೆ 3 ನಾಯಾಗಿ ಹುಟ್ಟೋದು ಬಿಟ್ಟೀತೆ ಮಾಯಾವಾದಿಗೆ ಮುಕುತಿಯು ದೊರಕೀತೆ ಬಾಯಿಬೊಬ್ಬಿಲಿ ಬೊಗಳುವ ಮನುಜಗೆ ಘಾಯವಾಗದೆ ಬಿಟ್ಟೀತೆ ಕಾಯಕ ಕಷ್ಟ ಬಿಡದಿದ್ದೀತೆ 4 ರ್ವಾದಿಗೆ ಮುಕುತಿಯು ದೊರಕೀತೆ ಗೈದವಗೆ ವ್ಯಾಧಿ ಕಾಡದೆ ಬಿಟ್ಟೀತೆ ಬುದ್ಧಿಹೀನನೆಂಬೋದು ಬಿಟ್ಟೀತೆ ಇದ್ದದ್ದೋಗದೆ ಉಳಿದೀತೆ 5 ಅಂಗನೆಯರ ಬಯಸೀತೆ ಶೃಂಗಾರದ ಬಗೆ ತೋರೀತೆ ಭೃಂಗಗೆ ಮುಕ್ತಿಯು ದೊರಕೀತೆ 6 ಕರುಣಾನನ ಸ್ಮರಣೆವುಳ್ಳರಿಗೆ ಪರಮ ಪದವಿ ಆಗದಿದ್ದೀತೆ ಚರಣ ಸೇವಕನಾಗಿ ಇರು ಕಂಡ್ಯ ಮನವೆ 7
--------------
ಬೇಲೂರು ವೈಕುಂಠದಾಸರು
ಕೇಳಲೊಲ್ಲನೆ ಎನ್ನ ಮಾತನು ರಂಗ ಪ. ಕಾಳೀಮರ್ದನ ಕೃಷ್ಣಗೆ ಹೇಳೆ ಗೋಪ್ಯಮ್ಮ ಬುದ್ಧಿಅ. ಪ.ಬಿಟ್ಟ ಕಣ್ಣನು ಮುಚ್ಚಲೊಲ್ಲನೆ ದೊಡ್ಡ ಬೆಟ್ಟಕ್ಕೆ ಬೆನ್ನೊತ್ತಿ ನಿಂದನೆ ಬಲುಸಿಟ್ಟಲಿ ಕೋರೆ ಹಲ್ಲ ಕಿರಿದನೆ ಈಗಗಟ್ಟಿ ಉಕ್ಕಿನ ಕಂಬವೊಡೆದು ಬಂದನೆ ರಂಗ1 ಮೂರಡಿ ಭೂಮಿ ಬೇಡಿ ಬಂದನೆ ತಾಯ- ಶಿರವ ಕಡಿಯಲಿಕೆ ಕೊಡಲಿ ತಂದನೆನಾರಸೀರೆಯನುಟ್ಟುಕೊಂಡನೆ ಬಲುಚೋರತನÀದಲಿ ಹರವಿಹಾಲ ಕುಡಿದನೆÉ ರಂಗ 2 ಬತ್ತಲೆ ನಾರಿಯರ ಅಪ್ಪಿದ ಹೋಗಿಉತ್ತಮ ಅಶ್ವವ ಹತ್ತಿದಹತ್ತವತಾರವ ತೋರಿದ ದಿಟ್ಟಮೂರ್ತಿ ನಮ್ಮ ಚೆಲುವ ಶ್ರೀ ಹಯದವನ 3
--------------
ವಾದಿರಾಜ
ಕೇಳಿದ್ಯಾ ಕೌತಕವನ್ನು ಕೇಳಿದ್ಯಾಪ ಕೇಳಿದ್ಯಾ ಕೌತಕವನ್ನು ನಾಕೇಳಿದೆ ನಿನಗಿಂತ ಮುನ್ನ ಆಹಾಚಾಳಿಕಾರ ಕೃಷ್ಣ ಪೇಳದೆ ಮಧುರೆಗೆಕೋಳಿ ಕೂಗದ ಮುನ್ನ ನಾಳೆ ಪಯಣವಂತೆಅ.ಪ. ಕರೆಯ ಬಂದಿಹನಂತೆ ಕ್ರೂರ ತಮ್ಮಕಿರಿಯಯ್ಯನಂತೆ ಅಕ್ರೂರ ಪುರಹೊರವಳಯದಿ ಬಿಟ್ಟು ತೇರ ಆಹಾಹಿರಿಯನೆಂದು ಕಾಲಿಗೆರಗಲು ರಾಮಕೃ-ಷ್ಣನ ಠಕ್ಕಿಸಿಕೊಂಡುಮರುಳುಮಾಡಿದ ಬುದ್ಧಿ 1 ಸೋದರ ಮಾವನ ಮನೆಗೆ ಬೆಳ-ಗಾದರೆ ನಾಳಿನ ಉದಯ ಪರ-ಮಾದರವಂತೆ ತ್ವರೆಯ ಅಲ್ಲಿ ತೋರಿದ ಮನಕೆ ನಾರಿಯ ಆಹಾಸಾದಿಮಲ್ಲ ಮೊದಲಾದ ಬಿಲ್ಲಹಬ್ಬಸಾಧಿಸಿಕೊಂಡು ಬರುವೆನೆಂದು ಸುದ್ದಿ 2 ಹುಟ್ಟಿದ ಸ್ಥಳವಂತೆ ಮಧುರೆ ಕಂಸ-ನಟ್ಟುಳಿಗಾರದೆ ಬೆದರಿ ತಂ-ದಿಟ್ಟ ತನ್ನ ತಂದೆ ಚದುರೆ ತೋರಿಕೊಟ್ಟಳು ಭಯವನ್ನು ಬೆದರಿ ಆಹಾಎಷ್ಟು ಹೇಳಲಿ ರಂಗವಿಠಲನು ಮಾವನಭೆಟ್ಟಿಗಾಗಿ ಒಡಂಬಟ್ಟು ಪೋಗುವ ಸುದ್ದಿ3
--------------
ಶ್ರೀಪಾದರಾಜರು
ಕೇಳು ಒಳ್ಳೆವರ ಕೂಡಾ ನಿನ್ನ ಹಿತವ ಪ್ರಾಣೀ | ತಾಳಿ ನರದೇಹದಿಂದ ಮಾಡುವರೇ ಹಾನಿ ಪ ಮುತ್ತಿನಂಥಾ ದಿನವಿದು | ಸಿಕ್ಕದಣ್ಣಾ ಮುಂದ | ಚಿತ್ತ ಸ್ಥಿರವಾ ಮಾಡಿ ಹರಿಯ ನೆನೆಯಬೇಕು ಇಂದ 1 ಬಾಲನಾಗಿ ಕೆಲವು | ದಿನದಿಂದ ಯೌವನದಿ | ಮ್ಯಾಲ ಯೆಚ್ಚರವ ಬಿಟ್ಟು | ಹರಿಗೆ ವಿಮುಖನಾದಿ 2 ಜರೆಯು ಬಂದ ಕಾಲದಲ್ಲಿ | ತನುವು ತನ್ನದಲ್ಲಾ | ಸರಕು ಮನೆಯೊಳಿಲ್ಲಾ 3 ಈಗಳವೆ ಯಚ್ಚರಿತು | ಹರಿಯಾ ಬಲಗೊಂಡು | ಹಿಂಡು 4 ಶರಣು ಹೋಗುವಾ | ಭಾವಭಕ್ತಿಯಲ್ಲಿ ದಾವಪ್ರೇಮಿ | ತಾರಿಸುವಾ ಗುರು ಮಹಿಪತಿಸುತ ಸ್ವಾಮಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳು ಕಲ್ಮಷಹಾರಿ ಕರುಣಾವಾರುಧಿ ಶೌರಿ ತಾಳು ಕ್ಷಮೆಯ ಕೃಪೆದೋರಿ ಕೇಳು ಸಂಸೃತಿ ದುಃಖ ತಾಳಲಾರೆನು ಮಾತ ನಾಲಿಸು ಮಲ್ಲಕಂಸಾರಿ ಪ. ಮೂರೊಂದು ಎಂಬತ್ತು ಲಕ್ಷ ಯೋನಿಗಳನ್ನು ಸಾರಿ ಕಡೆಗೆ ಮಾನುಷ್ಯವನು ಸೇರಿದೆನಿದಿರಲಿ ಷಡ್ವೈರಿ ಗಣವೆನ್ನ ಗಾರು ಮಾಡುವುದನೇನೆಂಬೆ 1 ದೂರಾಪುರದ ಕಾಮ ವಾರುಧಿವಳಗೀಸ ಲಾರದೆ ಬಾಯಬಿಟ್ಟೊರವೆ ಕ್ಷೀರಾಬ್ಧಿಶಯನ ಥಟ್ಟನೆ ಬಂದು ಸಲಹೊ ಮು- ರಾರಿ ನೀನ್ಯಾಕೆನ್ನ ಮರೆವೆ 2 ಬುದ್ಧಿ ಬರುವ ಮೊದಲಿದ್ದ ಪರಿಯು ಮಣ್ಣ ಮುದ್ದೆಯಂತಾಯ್ತನಂತರದಿ ಹದ್ದಿನಂದದಿ ಹಂಗಿನನ್ನವ ಕಾಯುತ್ತ ಇದ್ದೆನು ಪರರ ಮಂದಿರದಿ 3 ಮಧ್ಯವಯಸ್ಸಿನೊಳ್ ಮದನನ ¨ಲೆಯೊಳು ಬಿದ್ದು ಹೊರಳಿ ಬಹು ಬಳಲಿ ಮಧ್ವವಲ್ಲಭ ನಿನ್ನ ಮರೆತೆನು ಮುಂದಾದ- ರುದ್ಧರಿಸೆನ್ನ ಬೇಗದಲಿ 4 ನೇಮವ್ರತಗಳನೊಂದಾದರು ಮಾಡದೆ ಕಾಮಲಾಲಸನಾದೆ ಬರಿದೆ ವ್ಯಾಮೋಹ ಕಡಲಿಗೆ ಕೊನೆಗಾಣೆ ಕಾರುಣ್ಯ ಧಾಮನ ಬಿಡೆ ನಿನ್ನ ಸ್ಮರಣೆ 5 ಸಾಮಜೋದ್ಧಾರ ಸಕಲಸುರವೈರಿ ನಿ- ರ್ನಾಮವತಾರ ಭೂಧಾರ ನಿತ್ಯ ಸವಿದು ಬಾಳುವ ಮುಖ್ಯ ಕಾಮಿತಾರ್ಥವ ನೀಡು ವರದಾ 6 ಸುರಮುನಿ ಪಿತೃಋಣ ಭರವ ನೀಗುವ ಮೂರು ಕಾಲ ಕಳೆದೆ ವರ ದೇವಾಲಯ ಕೂಪಾ ರಾಮಯಜ್ಞಾದಿ ಸ- ತ್ಕರಗಳ ವಾರ್ತೆಯ ತೊರೆದೆ 7 ಗುರು ಹಿರಿಯರ ಸೇವೆ ಮರೆತು ಮನಸಿನಲ್ಲಿ ಸರಿಯಲ್ಲ ಎನಗೆಂದು ತಿಳಿದೆ ಮರಿಯಾದೆ ಗೆಟ್ಟು ಮಾಯಾತಂತು ಬಂಧದೊ- ಳಿರುವೆ ಈ ಪರಿಯಿನ್ನು ಥರವೆ 8 ಲೋಕನಾಯಕ ನಿನ್ನ ಸ್ಮರಣೆ ಒಂದಿದ್ದರೆ ಸಾಕೆಂಬ ಶ್ರುತಿ ಪುರಾಣಗಳು ವಾಕಾನುವಾಕುಗಳು ಸುರಿದ ಸರ್ವಜ್ಞ ಶ್ರೀಕರ ಪಾದದ ಮತವ 9 ಸ್ವೀಕರಿಸುತ ನಿನ್ನ ಸೇವೆ ಮಾಡಲು ಬ್ಯಾರಿ- ನ್ಯಾಕಿನ್ನು ಡಾಂಭಿಕರ ವ್ಯಾಕುಲವ ಬಿಡಿಸಿ ವೆಂಕಟನಾಥ ಕರುಣಿಸ ಬೇಕು ಶ್ರೀವರ ನಿನ್ನ ಪಥವಾ 10
--------------
ತುಪಾಕಿ ವೆಂಕಟರಮಣಾಚಾರ್ಯ
ಕೇಳು ಕಿವಿಗೊಟ್ಟು ನಿನ್ನ ನಿಜಗುಹ್ಯದ ಸುಮಾತ | ಹೇಳುತಿಹ್ಯಾ ನಂದಬೋಧ ತಿಳಿಯಾ ವಿಶ್ವನಾಥ ಧ್ರುವ ನೋಡಿ ನಿನ್ನ ಗೂಡಿನೊಳು ಮಾಡಿಕೊ ಸ್ವಹಿತ ಚಾಡುವಿಡಿದು ನಡೆದು ಹೋಗಿ ಕೂಡಿರೊ ಸುಪಥ ಹಿಡಿಯದೆ ಆಲೇಶದ ಮನೆಯ ನೀ ಪಡಕೊ ಘನ ಅಮೃತ ಬೇಡಿ ಬಯಸಿದರಾಗದು ವಸ್ತು ಹಿಡಕೊಡುವ ಗುರುನಾಥ 1 ಖೂನ ಕಂಡು ಗುರುಪಾದದಲಿ ತನುಮನದಲಿ ನೀಜಡಿಯೊ | ಮೌನಮುಗ್ದದಲಿ ನೀನೆಂದು ಅನುಭವದ ನೀಹಿಡಿಯೊ ನಾನು ನೀನೆಂಬುದು ತಾ ಬಿಟ್ಟರೆ ಸನ್ಮತ ಸುಖನಿಲುಕಡಿಯೊ ಜ್ಞಾನ ದೈವತೆಯಂಬು ಮಾರ್ಗದಲಿ ಅನುಸರಿಸಿ ನೀ ನಡಿಯೋ 2 ಒಂದೆ ಮನದಲಿ ಹೊಂದಿ ನಿಜವುಸಂದಿಸಿಕೊಸ್ವಾನಂದ ಬಂದ ಜನ್ಮವು ಸಾರ್ಥಕ ಮಾಡುದು ಇದು ನಿನಗೆ ಬಲುಚಂದ ಹಿಂದೆ ಮುಂದೆ ತಾ ತುಂಬ್ಯಾನೆ ಮಹಿಪತಿಸ್ವಾಮಿ ಸಚ್ಚಿದಾನಂದ ಹೊಂದಿದವರನುಮಾನವ ಬಿಡಿಸಿ ಛೇದಿಸುವ ಭವಬಂಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳು ಜೀವನವೆ ನೀ ಮಧ್ವಮತವನುಸರಿಸಿ ಶ್ರೀಲೋಲನಂಘ್ರಿಯನು ನೆನೆದು ಸುಖಿಸೊ ಪ. ನರನಾಗಿ ಪುಟ್ಟುವುದು ದುರ್ಲಭವೆಲವೊ ಭೂ- ಸುರಕುಲದಿ ಜನಿಸುವುದು ಬಹು ದುರ್ಲಭ ಪರಮ ಸುಕೃತವದೇನು ಫಲಿಸಿತೊ ನಿನಗೀಗ ದೊರಕಿದೀ ಜನುಮವನು ಸಫಲ ಮಾಡೊ 1 ಅರಘಳಿಗೆ ಮಾತ್ರವೆ ಪೊತ್ತು ಪೋಗಲು ಆಯು ಕೊರತೆಂದು ತಿಳಿ ನಿನ್ನ ಕ್ಲುಪ್ತದೊಳಗೆ ಮರಳುತನದಲಿ ಬರಿದೆ ದಿನಗಳಿಯಬ್ಯಾಡೆಲವೊ ಸ್ಥಿರವಲ್ಲ ಈ ದೇಹ ಸ್ವಪ್ನಸಮವೊ 2 ದುರುಳರೊಡನಾಡಿ ದುರ್ವಿಷಯ ಲಂಪಟನಾಗಿ ನರಕಯಾತನೆಗೆ ಗುರಿಯಾಗದಿರೆಲೊ ಎರಡುದಿನದೋಡ್ಯಾಟ ಇರಬಂದುದಲ್ಲವಿದು ಪರಗತಿಗೆ ಸಾಧನ ಮಾಡಿಕೊಳ್ಳೊ 3 ಹೋಗುತಿವೆ ಹೋಗುತಿವೆ ದಿವಸ ವ್ಯರ್ಥವಾಗಿ ಹೀಗೆ ಮೈಮರೆದಿಹುದು ನಿನಗೊಳ್ಳಿತೆ ಬ್ಯಾಗ ಹರಿಯನು ಭಜಿಸು ಬಾ ಈ ಮಾತಲ್ಲ ನೀ ಹೋಗಿನೋಡಲು ಯಮನ ಬಾಧೆ ಬಿರುಸೊ4 ಏನ ಹೇಳಲಿ ನಿನ್ನ ಮಂದಮತಿಯನು ಹಿಂದೆ ಶ್ವಾನಸೂಕರ ಮೊದಲಾದ ನೀಚ- ಯೋನಿಗಳೊಳಗೆ ಬಂದು ಅಂದದನು ಕ್ರಮಿಸಿದವನು ಆ ನೋವನಾಗಲೆ ಮರೆದಿಯಲ್ಲೊ 5 ಮುನ್ನ ದುಷ್ಕರ್ಮವ ಮಾಡಿದ ಪ್ರಾಣಿಗಳು ಉನ್ನತ ನೀಚ ದೇಹಗಳ ಧರಿಸಿ ಬನ್ನಬಡುತಿಹುದು ನೀ ನೋಡಿ ನೋಡಿ ಮತ್ತೆ ದುರ್ನಡತೆಯನು ಮಾಡಲುದ್ಯೋಗಿಪೆ 6 ಎಂಬತ್ತು ನಾಲ್ಕು ಲಕ್ಷ ಯೋನಿಗಳೊಳಗೆ ಕುಂಭಿಣಿಯೊಳಗೆ ತಿರುತಿರುಗಿ ಪಾಪ ಉಂಬುದನುಚಿತವೆಂದು ಮನ ಹೇಸಿ ವಾಕರಿಸಿ ನಂಬುನಾರಾಯಣನ ಇನ್ನಾದರೂ 7 ಜನನಿಯ ಗರ್ಭವಾಸ ದುಃಖ ಅತಿಶಯವೊ ಜನನ ಮರಣದ ದುಃಖ ಬಲು ಅಧಿಕವೊ ಘನ ನರಕದಾ ದುಃಖ ಪೇಳಲೊಶವಲ್ಲ ನಿನ- ಗಿನಿತಾದರೂ ನಾಚಿಕಿಲ್ಲವೇನೊ 8 ಸಾರಿ ಪೇಳುವೆನೀಗ ಪುಟ್ಟಿ ಬೆಳೆದಳಿವ ಸಂ- ಸಾರ ಸುಖವಲ್ಲ ಮಹ ದುಃಖಪುಂಜ ಘೋರ ಸಂತಾಪಕ್ಕೆ ಕಡೆಮೊದಲಿಲ್ಲವೊ ವಾರಿಜಾಂಬಕನ ಮರೆಯೊಕ್ಕು ಬದುಕೊ 9 ಹಿಂದೆ ಬಹುಜನುಮದಲಿ ಬಂದು ಬಳಲಿದ ಬವಣೆ ಒಂದೊಂದು ನೆನೆಸಿಕೊಳಲತಿ ಕಷ್ಟವೊ ಮುಂದಾದರು ಸರಿ ಎಚ್ಚೆತ್ತು ಬಿಡದೆ ಗೋ- ವಿಂದನ ಪದಾಂಬುಜವ ಧ್ಯಾನ ಮಾಡೊ 10 ಮಾರಿ ಇಲ್ಲಿದೆಯೆಂದು ಕೇಳುತಲಿ ಪೋಗಿ ನೀ ಭೂರಿ ಭಯಕೊಳಗಹದು ನೀತಿಯಲ್ಲ ದೂರ ತಿಳಿದು ನೋಡಿ ದುರ್ಮಾರ್ಗವನು ಜರಿದು ಸೇರಿ ಸಜ್ಜನರ ಸುಪಥವ ಪಡೆಯೊ 11 ನಿನ್ನಯ ಸ್ವರೂಪಕ್ಕೆ ಹೀಗಾಗುವುದೆಂದು ಪುಣ್ಯವನೆ ಗಳಿಸಿಕೊ ಬ್ಯಾಗ ನೀನು ಇನ್ನು ಈ ಧರೆಯಲ್ಲಿ ಬಿಟ್ಟು ಹೋಗುವ ದೇಹ- ವನ್ನು ಪೋಷಿಸಿಕೊಂಡು ಹಿಗ್ಗಬೇಡ 12 ವನಿತೆಸುತರನು ಪೊರೆಯಬೇಕೆಂಬ ಬುದ್ಧಿಯಲಿ ಧನದಾಸೆಯಿಂದಲಗಣಿತ ಪಾಪವ ಕ್ಷಣದೊಳಗೆ ಸಂಪಾದಿಸಿಕೊಂಬೆ ಎಲೊ ಮೂಢ ನಿನಗಿವರು ಕೊನೆಗೆ ಸಂಗಡ ಬರುವರೆ 13 ಕೆಡಬ್ಯಾಡ ವ್ಯರ್ಥಮೋಹಕೆ ಸಿಲುಕಿ ಜವನವರು ಪಿಡಿದೊಯ್ದು ಕಡಿದಿರಿದು ಕೊಲ್ಲುವಾಗ ಬಿಡಿಸುವವರಾರಿಲ್ಲ ಈಗಳೆ ಮುಂದರಿತು ಕಡಲಶಯನನ ಪೊಂದಿ ಮುಕುತಿ ಪಡೆಯೊ 14 ಈಗಲೇನೊ ಇನ್ನು ಕ್ಷಣಕೇನು ಬಪ್ಪುದೊ ನೀ ಗರುತರಿಯದಲೆ ಹಿತ ರಾಗದಲಿ ಸರ್ವವನು ಎನ್ನದೆಂದಾಡದಿರು ನಾಗಾರಿಗಮನನಾಧೀನವೆನ್ನೊ 15 ನೀ ಮಗುಳೆ ಮಹಿಯೊಳಗೆ ಕಂಡುಕಂಡುದ ಬಯಸಿ ಭ್ರಾಮಕರ ನುಡಿಗೇಳಿ ಭ್ರಾಂತಿಗೊಳದೆ ಕಾಮಾದಿಗಳ ತ್ಯಜಿಸಿ ಸತ್ಕರ್ಮವನು ಮಾಡಿ ಶ್ರೀಮನೋ ಹರನಿಗರ್ಪಣೆಯ ಮಾಡೊ16 ಏನುಧಾವತಿಗೊಳಲೇನೇನು ಫಲವಿಲ್ಲ ಮಾನವಜನುಮ ಜೊಳ್ಳು ಮಾಡಬ್ಯಾಡ ಆನಂದತೀರ್ಥರ ಪಾದಕಮಲವ ಪೊಂದಿ ಅಚ- ಲಾನಂದವಿಠಲನ್ನ ನೀನೊಲಿಸಿಕೊ 17
--------------
ಅಚಲಾನಂದದಾಸ
ಕೇಳು ನಾ ಪೇಳ್ವದೊಂದಾ ನಿತ್ಯಾನಂದಾ ಪ. ಕೇಳು ನಾ ಪೇಳ್ವದೊಂದಾ ಕಂಸಾದ್ಯಸುರವೃಂದ ಸೀಳಿ ಶೀಘ್ರಾದಿ ಪರಿಹರಿಸಿದಿ ಪಿತೃ ಬಂಧ ಅ.ಪ. ನಿಗಮ ತತಿಗಳು ನಿಶ್ಯೇಷ ತಿಳಿಯದ ಸುಗುಣವಾರಿಧಿ ಸುಖಬೋಧ ದೇಹ ಸ್ವಗತ ಖೇದೊಝ್ಝಿತ ಸರ್ವ ನಿಯಾಮಕ ಖಗಪತಿವಾಹನ ಕಾಮಿತ ಭಾವನ ಪಾಲನ ಪರಾತ್ಪರ ಸ್ವಗತಿ ನಿಯತಿ ಜ್ಞಾನ ದಾಯಕ ತ್ರಿಗುಣ ವರ್ಜಿತ ತ್ರಿಭುವನೇಶ್ವರ ಮಗುವು ನುಡಿವುದ ಮಾತೆಯಂದದಿ 1 ಮೊದಲಿನ ಭವಗಳ ಹದನ ಒಂದರಿಯೆನು ಪಾದ ಪದುಮಗಳ ಸದರದಿ ಸೇವಿಸಲಧಿಕ ಸಾಧನ ಮಾನು ಷ್ಯದಿ ಬಂದು ವೈಷ್ಣವ ಬುಧರಾ ಸೇವೆಯ ಬಿಟ್ಟು ವಿಧವಿಧ ಮೋಹಾಂಧಕಾರಗ- ಳುದಿಸಲದರೊಳು ಸಿಲುಕಿ ನಿರುಪದಿ ಬಧಿರ ಮೂಕ ಜಡಾಂಧನಾದೆನು ಸದಯ ಇನ್ನಾದರೂ ಕಟಾಕ್ಷದಿ 2 ತಾಪತ್ರಯೋನ್ಮೂಲನೇಶಾ ಕೌಸ್ತುಭಭೂಷ ಸುಜನ ಗಣೈಕ ಪೋಷಾ ಈಪರಿಯೊಳಗೆನ್ನ ಜರಿವದುಚಿತವೇನೊ ಕಾಪುರುಷರ ಸಂಗ ಕಡಿದು ಕರುಣವಿಟ್ಟು ಶ್ರೀ ಪಯೋಜ ಭವೇಂದ್ರ ವಂದ್ಯ ಪ್ರ- ದೀಪ ಸತ್ಸಿದ್ಧಾಂತ ತಿಳಿಸಿ ಪ- ದೇ ಪದೇ ಕಾಪಾಡು ವೆಂಕಟ ಭೂಪ ನೀ ಗತಿಯೆಂದು ನಂಬಿದೆ ಕೇಳು 3
--------------
ತುಪಾಕಿ ವೆಂಕಟರಮಣಾಚಾರ್ಯ
ಕೇಳು ಶ್ರೀನಿವಾಸ ಕಷ್ಟವ ತಾಳಲಾರೆ ಶ್ರೀಶ ಕಂಜಜೇಶ ಪ. ಮಾತ ಕೇಳದಿರುವ ಮನ ಬಹು ಕಾತರಗೊಂಡಿರುವ ರೀತಿಯಿಂದ ಬಹು ಸೋತೆನು ಷಡ್ರಿಪು ಜಾತ ಬಂಧಿಸಿರುವ 1 ಕಟ್ಟಿ ಸಹಿಸಲಾರೆ ಮೊದಲ ವಿಠಲ ನೀ ಕೈಬಿಟ್ಟರೆ ಮಾಜದು ಅಟ್ಟಹಾಸ ತೋರೆ 2 ಉದಯ ಮೊದಲುಗೊಂಡು ನಾನಾ ವಿಧದಲಿ ಭ್ರಮೆಗೊಂಡು ಸದಯ ನಿನ್ನ ಪಾದಾಬ್ಜ ನೆನೆಯದೆ ಚದುರೆಯ ಮನಗೊಂಡು 3 ನಿತ್ಯ ಕರ್ಮವೆಲ್ಲ ಕಂಬಳಿ ಬುತ್ತಿಯಾಯಿತಲ್ಲ ಕತ್ತರಿಸಿ ಬ್ರಹ್ಮೆತ್ತಿಯನ್ನು ಪುರು- ಸಿರಿನಲ್ಲ 4 ತಲ್ಲಣಗೊಳಿಸುವುದು ತುದಿಮೋದ- ಲಿಲ್ಲದೆ ದಣಿಸುವುದು ನಿಲ್ಲೆ ನಡೆಯ ಮಲಗೆಲ್ಯು ಬಿಡದು ದೂ- ರೆಲ್ಲು ಪೇಳಗೊಡದು 5 ಮೆಲ್ಲ ಮೆಲ್ಲನೆದ್ದು ನೀ ಮನ ದಲ್ಲಿ ಸೇರುತ್ತಿದ್ದು ನಿಲ್ಲಲು ತೀರಿತಲ್ಲದೆ ಲೋಕ ದೊಳಿಲ್ಲ ಬೇರೆ ಮದ್ದು 6 ನಿತ್ಯ ನಿನ್ನ ಮುಂದೆ ಸೇವಾ ವೃತ್ತಿ ಮಾಳ್ಪದೊಂದೆ ಎತ್ತಾರಕವೆಂದಾಶ್ರಯಿಸದೆ ಮೇ- ಲೊತ್ತಿ ಬೇಗ ತಂದೆ 7 ಭೃತ್ಯರ ಬಿಡನೆಂದು ಶ್ರುತಿ ಶಿರ ವೃತ್ತಿ ವಚನವೆಂದು ಸತ್ಯವೆಂದು ನಂಬಿದ ನೀನರಿಯೆಯ ಔತ್ತರೆಯ ಬಂಧು 8 ವಿಜಯಸೂತನಿಂದ ಪಾದವ ಭಜಿಸಿದ ಮ್ಯಾಲೆನ್ನ ನಿಜ ಜನದೊಳು ಸೇರಿಸುವುದು ಚಿತ ಸಾಮಜ ವರದನೆ ಮುನ್ನ 9 ಭವ ಪರಿಪಾಲ ಪಾಲಿಸು ವ್ರಜ ಯುವತಿ ಲೋಲಾ ಪಾದ ಪಂ- ಕಜ ಕೊಡು ಗೋಪಾಲ 10
--------------
ತುಪಾಕಿ ವೆಂಕಟರಮಣಾಚಾರ್ಯ
ಕೇಳೆ ನಂದನ ಕಾಂತೆ ಹೇಳೆ ಮಗಗೆ ಬುದ್ದಿ ಬಾಲೆಯರನು ಇರಗೊಡನೆ ದಮ್ಮಯ್ಯ ಪ ಕುತ್ತಿಗೆಯೊಳಗಣ ಮುತ್ತಿನ ಸರಗಳ ಕಿತ್ತು ಹರಿದು ಚೆಲ್ಲಿ ಪೋದ ದಮ್ಮಯ್ಯ 1 ಕಟ್ಟಿದ ಕರುಗಳ ಬಿಟ್ಟು ಒಲೆಯ ಮೇಲೆ ಇಟ್ಟ ಪಾಲ್ಗಳನೆಲ್ಲ ಕುಡಿದ ಗೋಪಮ್ಮ 2 ಪಿಕ್ಕದೊಳಿಹ ಬೆಣ್ಣೆ ಚೊಕ್ಕನೆಲ್ಲವ ಮೆದ್ದು ಮರ್ಕಟಗಳಿಗಷ್ಟನಿತ್ತ ದಮ್ಮಯ್ಯ 3 ಬೇಡವೆಂದರೆ ಛಲಗೇಡಿ ಹಿಡಿದು ಎನ್ನ ನೋಡಿ ಮೋಸವ ಮಾಡಿ ಹೋದ ದಮ್ಮಯ್ಯ 4 ಮರುತಾತ್ಮಜ ಕೋಣೆ ಲಕ್ಷ್ಮೀರಮಣಗೊಮ್ಮೆ ನಾರಿ ನೀ ಬುದ್ದಿಯ ಹೇಳೆ ದಮ್ಮಯ್ಯ 5
--------------
ಕವಿ ಪರಮದೇವದಾಸರು
ಕೇಳೋನಂದ ಇದು ಏನು ಚೆಂದ ಹಾಲಿನ್ಹರವಿಯ ಒಡೆದೋಡಿ ಬಂದು ಬಾಲರನು ಕೂಡ್ಯಾಡಿ ಗೋವಿಂದ ಬವಣೆಬಡಿಸುವ ಬಲುಬಗೆಯಿಂದ ಪ ಕಣ್ಣ ತೆರೆದು ಉದಕದೊಳಾಡುವನು ಸಣ್ಣ ಮೋರೆಯ ಮಾಡಿ ಬಗ್ಗುವನು ಮಣ್ಣಕೆದರುತ ಕ್ರೋಡಾಗಿ ತಾನು ಚಿನ್ನಸುರ ಎಲ್ಲೆ ಕರುಳ್ಹಾರ್ಹಾಕುವನು 1 ತಿರುಕನಂದದಿ ಬೇಡಿಕೊಂಬುವನೊ ಗುರುತದಾರದರಿಯ ತಾಯ್ಹಂತಕನು ದೊರೆತನವ ಬಿಟ್ಟಡವಿಲಿರುವವನು ಶರತಮಾಡಿ ಮಾತುಳನ ಕೊಲ್ಲುವನು 2 ಬËದ್ಧರೂಪದಿ ಲಜ್ಜೆಗೆಡಿಸುವನು ಎದ್ದು ತುರುಗನೇರ್ಯೋಡಿ ಪೋಗುವನು ಕದ್ದು ಬೆಣ್ಣೆಯ ಮೆಲ್ಲುವ ತಾನು ಮುದ್ದು ಭೀಮೇಶಕೃಷ್ಣ ಎಲ್ಲಿಹನು 3
--------------
ಹರಪನಹಳ್ಳಿಭೀಮವ್ವ
ಕೈಯ ಬಿಡುವರೇ ಕೃಷ್ಣ ಕೈಯ ಬಿಡುವರೇ ಪ ಹೇಯ ವಿಷಯದಲ್ಲೆ ಇರಿಸಿ ಜೀಯ ನಿನ್ನ ವಿಷಯ ಮರೆಸಿ ಭವ ಸಮುದ್ರ ಅ.ಪ ಬಿಂಬ ನೀನು ಸಿದ್ಧಪ್ರತಿಬಿಂಬ ನಾನು ಸಿಧ್ದವಿರಲು ತುಂಬಿ ಪರಿವ ನದಿಯ ಮಧ್ಯೆ ಅಂಬಿಗನೆ ತ್ಯಜಸಿದಂತೆ 1 ಕಲಿಯ ಕಾಟ ವಿಷಯ ದಾಟಗೆಲುವ ಶಕ್ತಿ ಎನಗೆ ಉಂಟೆ ಒಲಿಯದಿರಲು ನೀನೆ ದಯದಿ ಸುಲಭದೇವ ನೆನಿಸಿ ಹೀಗೆ 2 ತಾಯಿ ಬಿಡುವಳೇನು ಶಿಶುವ ಮಾಯೆ ಸುಳಿಯಲ್ಲಿರಲು ಸಹಾಯ ಮಾಡದೇನೆ ಬದಿಗ 3 ಶಿಷ್ಟನಲ್ಲ ದುಷ್ಟಕರ್ಮ ಭ್ರಷ್ಟನೆಂಬ ಮಾತು ಮೂಟೆ ಕಟ್ಟಿಪೇಳು ಬಿಟ್ಟು ನಿನ್ನ ಎಷ್ಟು ಕರ್ಮಮಾಡಲಾಪೆ 4 ಹಿಂದಿನವರು ತಾವೆ ಮುಂದೆ ಬಂದರೇನೊ ಬಿಟ್ಟು ನಿನ್ನ ಒಂದು ತೃಣವು ಚಲಿಸದಲ್ಲ ತಂದೆ ಮನವ ಮಾಡದಿರಲು 5 ನಾನು ಎಂದು ಹೀನನಾದೆ ನೀನು ಸ್ವಾಮಿ ನಾನು ಭೃತ್ಯ ಶ್ರೀನಿವಾಸ ಶರಣು ಶರಣು ಜ್ಞಾನವಿತ್ತು ಕಾಯೊ ಮುಂದೆ 6 ನಿನ್ನ ನಂಬಿ ಇರುವೆ “ಶ್ರೀ ಕೃಷ್ಣವಿಠಲ” ಸತ್ಯಸತ್ಯ ಅನ್ಯರನ್ನು ಕಾಣೆನಪ್ಪ ನಿನ್ನ ಚಿತ್ತ ನನ್ನ ಭಾಗ್ಯ 7
--------------
ಕೃಷ್ಣವಿಠಲದಾಸರು
ಕೈವಲ್ಯ ಇದೇವೆ ದೇವಾಲ್ಯ ತ್ರಾಹಿ ತ್ರಾಹಿ ತ್ರಾಹಿ ಎಂದು ನೋಡಿಮನದ ವೈಶಾಲ್ಯ ಧ್ರುವ ಮಹಾಮಹಿಮೆ ದೋರುವ ಇದೆ ದೇವದ್ವಾರ ಸೋಹ್ಯದೋರಿ ಕುಡುತಿಹ ಪುಣ್ಯ ಸಹಕಾರ ಬಾಹ್ಯಾಂತ್ರ ಭಾಸುತಿಹ ಸದ್ಗುರು ಸಹಕಾರ ದೇಹ ಅಭಿಮಾನ ಬಿಟ್ಟು ಮಾಡಿ ಜಯ ಜಯಕಾರ 1 ಮಾರ್ಗ ಸುಪಥವಿದೆ ನೋಡಿ ಸಾಕ್ಷಾತ್ಕಾರ ವರ್ಗ ಷಡ್ವೆರಿಗಳ ಮಾಡಿ ಬ್ಯಾಗೆ ದೂರ ದೀರ್ಘದಂಡ ಹಾಕಿ ಗುರುವಿಗೆ ನಮಸ್ಕಾರ ಸ್ವರ್ಗ ಸುಖಗೊಳ್ಳಲಿಕೆ ಇದೇವೆ ಸಹಕಾರ 2 ಸ್ವರ್ಗ ಭೂಕೈಲಾಸ ವೈಕುಂಠವಿದೆ ನೋಡೆವೈ ಪಾದ ಪದ್ಮಕೂಡಿ ಯೋಗ ಇದೆ ಸುಗಮ ಸಾಧನವ ಮಾಡಿ ಸುಙÁ್ಞನ ಸೂರೆಗೊಂಡು ಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೈವಲ್ಯ ಪಡೆವರು ಜನರು - ಹರಿ ಪ ಮೂರ್ತಿ ಶ್ರೀ ಚೆನ್ನಕೇಶವನ ಮನದೊಳಗಿಟ್ಟು ಅ ಹಗೆ ಮಾಡಬೇಡಕುಲದಲ್ಲಿ ಜನಿಸಿ ಕುಚೋದ್ಯ ಮಾಡಲುಬೇಡನಲಿದು ಹರಿಯ ಪೊಗಳದ ನಾಲಗೆಯು ಬೇಡ 1 ಮಂದಮತಿಗಳ ಕೂಡ ಮಹಕಥೆಯ ನುಡಿಬೇಡಯತಿಯಾದ ಮೇಲೆ ಸತಿಸುತರಾಸೆ ಬೇಡ..................................................................ಹಿತ ತಪ್ಪಿ ನಡೆವಂಥ ಹೆಂಡತಿಯು ಬೇಡ 2 ಕೆಟ್ಟು ಹೋದವರನ್ನು ತಿರುಗಿ ಕರೆತರಬೇಡಮುಟ್ಟಾದ ಮೇಲೆ ಮೋಹಿಸಿ ಕೂಡಬೇಡಭ್ರಷ್ಟನಾಡಿದನೆಂದು ಸಿಟ್ಟಿನಲಿ ನುಡಿಬೇಡಕಷ್ಟದೆಸೆಯೊಳು ಧೈರ್ಯ ಬಿಟ್ಟು ಕೆಡಬೇಡ 3 ಜಂಭ ಬೇಡ 4 ತೀರ್ಥ ಯಾತ್ರೆಗೆ ಪೋಗಿ ತಿರುತಿರುಗಿ ಬಳಲಿ ಕೃ-ತಾರ್ಥನಾದೆನು ಎಂಬ ಘನತೆ ಬೇಡಪಾರ್ಥಸಾರಥಿ ಕಾಗಿನೆಲೆಯಾದಿಕೇಶವನಸಾರ್ಥಕದಿ ಭಜಿಸಿ ಸುಖಿಯಾಗು ಮನುಜ 5
--------------
ಕನಕದಾಸ