ಒಟ್ಟು 5363 ಕಡೆಗಳಲ್ಲಿ , 130 ದಾಸರು , 3529 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಂಜಯಮಂಗಳಂ ಪ.ನಿಗಮವ ತಂದಾ ಮತ್ಸ್ಯನಿಗೆನಗವ ಬೆನ್ನಲಿ ಪೊತ್ತ ಕೂರ್ಮನಿಗೆ ||ಜಗವನುದ್ಧರಿಸಿದ ವರಹಾವತಾರಗೆಮಗುವನು ಕಾಯ್ದ ಮುದ್ದು ನರಸಿಂಹಗೆ 1ಭೂಮಿಯ ದಾನವ ಬೇಡಿದಗೆಆ ಮಹಾಕ್ಷತ್ರಿಯರ ಗೆಲಿದವಗೆ ||ರಾಮಚಂದ್ರನಾದ ಸ್ವಾಮಿಗೆ ಸತ್ಯಭಾಮೆಯರಸ ಗೋಪಾಲಕೃಷ್ಣಗೆ 2ಬತ್ತಲೆ ನಿಂತಿಹ ಬುದ್ಧನಿಗೆಉತ್ತಮ ಹಯವೇರಿದ ಕಲ್ಕಿಗೆ |ಹತ್ತವತಾರದಿ ಭಕ್ತರ ಸಲಹುವಸತ್ಯ ಶ್ರೀ ಪುರಂದರವಿಠಲನಿಗೆ 3
--------------
ಪುರಂದರದಾಸರು
ಮಂಗಳಾತ್ರಿಪುರಸುಂದರಿಗೆ | ಮಂಗಳಾ ಶಾಕಂಬರಿಗೆಮಂಗಳಾ ಬಾದಾಮಿ ಬನಶಂಕರಿಗೆ ಜಯತು ಹಾಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಭೂಧರಭೂಷಿಗೆ ಜಯತು |ಭೂಧರವೈರಿಗೆ ಜಯತು |ಭೂಧರವೈರಿವಾಹನನ ಸಂಹರಳಿಗೆ ||ಜಯ1ಹರಿಮಿತ್ರಿ ಲೋಚನೆ ಜಗತ್ | ಹರಿಗಾತ್ರ ಸೂಚನೀ ಜಯ ||ಹರಿಪುತ್ರ ಕೋಟಿ ಲಾವಣ್ಯ ಸುಲೋಚನೆ || ಜಯ2ಪಾಹಿಪರಾತ್ ಪರೇ ||ಜಯ||ಪಾಹಿಪರಮಪರೆ | ಜಯ |ಪಾಹಿಪರಮಪರಮೇಶ್ವರೀ ಪುರಹರೀ ||ಜಯ||ತ್ರಾಹಿತ್ರಾಹಿತ್ರ್ಯಂಬಕೇ | ಜಯ |ತ್ರಾಹಿತ್ರೈಲೋಕ್ಯಾಂಬಿಕೆ | ಜಯ |ತ್ರಾಹಿತ್ರಾಹಿತ್ರಿಪುರಿ ಶ್ರೀ ಮೂಕಾಂಬಿಕೆ ಜಯತು3ಕುಲಸ್ವಾಮೀ ಸ್ವಾಮಿನೀ | ಜಯ |ಕುಲ ಕೋಟಿಯೇ ಕಲ್ಯಾಣೀ | ಜಯ |ಕುಲರಹಿತ ಕುಲೀ ಶಾಂಕರೀಶಂಕರ ರಾಣೀ ಜಯತು4
--------------
ಜಕ್ಕಪ್ಪಯ್ಯನವರು
ಮಂಗಳಾನನ ರಂಗ ಕರುಣಾಪಾಂಗವೆಂಬ ಪತಂಗದಿಂದಘತುಂಗತಿಮಿರವಿಭಂಗ ಭಕ್ತರ ಇಂಗಿತವನೀವುದುಪ.ಮಾರನ ಮನೋಹರ ಮದ ಅಂಧಕಾರ ಕವಿಯಲು ಕ್ರೂರವಿಷಯವಿಕಾರ ಭವವೆಂಬಪಾರಾಂಬುಧಿಯೊಳು ದಾರಿದೊಡಕಿದೆ ನಾಆರೆನಾರದತಾತಕರುಣಾಳುತೋರಿ ನಿನ್ನಯಚಾರುಮೂರುತಿಯಘೋರಕಲುಷವಿದೂರಮಾಡುಮಂದರಧರಮುಕುಂದ1ಪ್ರಿಯ ಮನಮುನಿಗೇಹಮಲೆತಇಂದ್ರಿಯಗಳಿಗೆ ಸಹಾಯವಾಗಿದೆಹೇಯವಿಲ್ಲದ ನಾಯಿಮನವೆನ್ನ ನೋಯನೋಯಿಸುತಿದೆಕಾಯಬೇಕೆಲೆಜೀಯಕರಿಮಕರಿಯ ಬಾಧೆಗೆ ಬಾಯಿ ತೆರೆಯೆ ಪೊರೆಯಬೇಕೆಂದು ಕೆಲದೆ ಎಸೆದಿರಲು ತಾಯಿಪಿತನಾರೆಂದು 2ಮನ್ಮಥಪಿತಚಿನ್ಮಯಾತ್ಮಕಮುನ್ನಸಂಚಿತಘನ್ನಕರ್ಮವುಬೆನ್ನ ಬಿಡದು ದುರ್ಜನ್ನ ಸಂಗದಿ ಖಿನ್ನನಾದೆ ನಾಉನ್ನತಗುಣಪೂರ್ಣಎಂದೆಂದುನಿನ್ನ ದಾಸರನ್ನು ಕೂಡಿಸುಪನ್ನಗಾದ್ರಿ ಪ್ರಸನ್ನವೆಂಕಟರನ್ನ ಜಗಜೀವನ್ನ 3
--------------
ಪ್ರಸನ್ನವೆಂಕಟದಾಸರು
ಮಂಗಳಾರತಿಯ ತಂದೆತ್ತಿರೆ ಹೇಮಾಂಗನೆಯರು ವೆಂಕಟಪತಿಗೆ ಪ.ಪೊಂಗಿಂಡಿಯುದಕ ಕಂಗಳಿಗೊತ್ತಿ ಪೊಸಬಗೆರಂಗು ಮಾಣಿಕದಕ್ಷತೆಯನಿಟ್ಟುಪೊಂಗಂಕಣ ಪೊಳೆವಿನ ಪ್ರಭೆಯಲಿ ಮರಿಭೃಂಗಕುಂತಳೆಯರೆಡಬಲದಿ 1ಅನುದಿನಮಂಗಳ ಮನಸಿಜನಯ್ಯಗೆವನಮಾಲಿ ಕೌಸ್ತುಭಹಾರನಿಗೆಘನಮಹಿಮೆಯ ಜಗ( ದ?) ವರಿಗೆ ತೋರುವನಿಗೆಮುನಿ ಸನಕಾದಿ ವಂದಿತ ಪಾದಗೆ 2ವಿಕ್ರಮಕೆ ಎದುರಾರಿಲ್ಲವೆಂದುಬಲಿಚಕ್ರನು ಸುರರ ಬಾಧಿಸುತಿರಲುಶಕ್ರನ ಪೊರೆದವನುಕ್ಕ ತಗ್ಗಿಸಿ ತ್ರಿವಿಕ್ರಮನೆನಿಸಿದ ದೇವನಿಗೆ 3ವ್ರಜದ ಗೋಪಾಂಗನೆಯರ ಮನೋಹರಗೆಭುಜಗಶಾಯಿ ಭಕ್ತ ಭಯದೂರಗೆನಿಜ ಭಕ್ತ ಪಾರ್ಥರ ಪಥಿಕರಿಸಿದವನಿಗೆಗಜವನುದ್ಧರಿಸಿದ ದನುಜಾರಿಗೆ 4ಕಡುಮೂರ್ಖ ಸೀತಾಕೃತಿಯನೊಯ್ದಸುರನಬಿಡದೆ ಮರ್ದಿಸಿದ ಶ್ರೀ ರಘುಪತಿಗೆಸಡಗರದಲಿ ಶೇಷಾದ್ರಿಲಿ ನಿಂತ ಎನ್ನೊಡೆಯ ಪ್ರಸನ್ನವೆಂಕಟಪತಿಗೆ 5
--------------
ಪ್ರಸನ್ನವೆಂಕಟದಾಸರು
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನಖಗಕುಲರನ್ನ ಮನೋರಮಣಮನೋರಮಣ ಕಾಂತ ಶ್ರೀರಾಮನಅಗಲದಿರು ಕಾಣೆ ಮರಿಯಾನೆ ಶೋಭಾನೆ 1ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ-ಕೃತ್ಯಕೆಲ್ಲಕ್ಕನುಸರಿಸಿಅನುಸರಿಸಿ ನಡೆ ನೀ ಮಗಳೆಹಿತವಾಗಿ ಬಾಳು ಪತಿಯೊಳು ಶೋಭಾನೆ 2ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆಗಂಡನುಣ್ಣದ ಮೊದಲು ನೀಮೊದಲು ನೀನುಣ್ಣದಿರುಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ 3ಮುಗುಳು ನಗೆಯ ಬೀರು ಜಗಳವ ಮಾಡದಿರುಜಗದೊಳು ಕೀರ್ತಿಯುತಳಾಗುಯುತಳಾಗು ಬಂಧುಗಳಲಿ ನೀಹಗೆಯ ಮಾಡದಿರು ಕೃಪೆದೋರು ಶೋಭಾನೆ 4ವೃದ್ಧ ಮಾವನಪಾದಹೊದ್ದಿ ಸೇವೆಯಮಾಡುಸುದ್ಧ ಭಾವದೊಳು ನಡೆ ಮಗಳೆನಡೆ ಮಗಳೆ ನಿತ್ಯಸುಮಂಗಲೆಮುದ್ದಾಗು ಬಂಧು ಬಳಗಕ್ಕೆ ಶೋಭಾನೆ 5ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರುಪ್ರತ್ಯೊಬ್ಬಳೆ ಸ್ಥಳದಿ ನಿಲದಿರುನಿಲದಿರು ನೀರಜಗಂಧಿಸತ್ಯ ವಚನವನೆ ಸವಿಮಾಡು ಶೋಭಾನೆ 6ಮೈದುನರನ್ನು ತನ್ನ ಮಕ್ಕಳೆಂಬಂತೆನೋಡುಸಾಧುಭಾವದದಲಿ ನಡೆ ಮಗಳೆನಡೆ ಮಗಳೆ ಪಂಕ್ತಿಯಲಿಭೇದ ಮಾಡದಿರು ಕೃಪೆದೋರು ಶೋಭಾನೆ 7ಕಂಡರೆ ಶಿಷ್ಟರ ದಂಡ ನಮಸ್ಕರಿಸುಹಿಂಡುದಾಸಿಯರ ದಣಿಸದಿರುದಣಿಸದಿರು ಉತ್ತಮಳೆಂದು ಭೂ-ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ 8ಚಂಡಿತನವ ನಿನ್ನ ಗಂಡನೊಳ್ಮಾಡದಿರುಗಂಡಸರ ಮುಂದೆ ಸುಳಿಯದಿರುಸುಳಿಯದಿರು ಸಂತತ ಸೌಖ್ಯ-ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ 9ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆಸುರತಸಮಯದಿ ವೇಶ್ಯಾ ತರುಣಿಯಳತರುಣಿಯಳ ತೆರದಿ ರಾಮನ ಸತಿಯಂ-ತೆ ಮಾಡವ್ವ ಸುಖಂ ಜೀವಾ ಶೋಭಾನೆ 10ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವುಕುಕ್ಷಿಈರೇಳು ಜಗವನ್ನುಜಗವನ್ನು ನಮ್ಮನ್ನು ಸರ್ವರರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ 11
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಂಜುಳ ವೇಣುಗಾನವ ಮಾಡಿ ಮೋಹಿಪ ಜಗವಕಂಜಜನಯ್ಯ ಮುರಾರಿ ಕಾಮಿನಿಯರಿಗುಪಕಾರಿ ಪ.ಯಮುನೆಯ ಪುಲಿನದಿ ಯದುಕುಲ ಚಂದ್ರ ಹೊಂದೆರಮಣೀರ್ವಕ್ಷ ಮಧ್ಯದಿ ರಾಜಿಸುತ ಕುಲಾಂಬುಧಿ 1ಪೂರ್ಣ ಪೀಯೂಷಕರನು ಪೂರ್ವಾಚಲಕೆ ಸಾರ್ದನುಪೂರ್ಣಾನಂದ ಮುಕುಂದ ಪವನ ಸಂಚಾರದಿಂದ 2ಕುಂದನೀಲೋತ್ಪಲ ಜಾಜಿಕಮಲಮಲ್ಲಿಗೆ ಜುಜಿ( ?)ಮಂದಾರಪುನ್ನಾಗಭುಜಮೂಲದಿ ಗೋಪಾಲರಾಜ3ಕುಸುಮಾಕರಕುಂಜದಿ ಕುಶಲಕ್ರೀಡಿತನಾದಿಸುಸಪ್ತ ಸ್ವರದಿಂದ ಸುಖದಾನಂದ ಮುಕುಂದ 4ಕತ್ತಲೆವಿರಿ ಸಂಪಿಗೆಕಮಲಮೊಲ್ಲೆ ಮಲ್ಲಿಗೆಸುತ್ತಿದ ಎಳೆಪಲ್ಲವ ಮಾರನಂತಹ ಚೆಲುವ 5ಮುತ್ತಿನ ಚೊಲ್ಲೆಯಲ್ಲಿಯ ಮುಂಗುರುಳಲ್ಲಿ ವಲಯಕಸ್ತೂರಿ ತಿಲಕ ಒಪ್ಪೆ ಕವಿದಡರ್ವದ್ವೀರೇಫೆ 6ಕಡೆಗಣ್ಣಿನ ನೋಟದಿ ಕುಡಿಹುಬ್ಬಿನ ಮಾಟದಿಮಡದೇರ್ಗೆ ಮಾರಶರ ಮೂಡಿಸುತತಿ ಸುಂದರ 7ಮುಗುಳುನಗೆಮೊಗದ ಮಣಿಕುಂಡಲ ಕರ್ಣದಯುಗ ಕರ್ಣಾಕರ್ಣಿಕರಾಯತ ನಟ ನರಾಕಾರ 8ವನಮಾಲೆವೈಜಯಂತಿಶ್ರೀವತ್ಸಕೌಸ್ತುಭಕಾಂತಿಮಿನುಗುವಾಮೋದ ಗಂಧಮುಡಿ ತೋರೋ ಶ್ರೀ ಗೋವಿಂದ 9ಹಾರಕೇಯೂರ ಕಂಕಣ ಹೊಳೆವ ಮಧ್ಯಒಡ್ಯಾಣಚಾರುಪೀತಾಂಬರೋತ್ತರಿ ಚೀರದಿಂದೆಸೆವಹರಿ10ವಾಮಬಾಹುವಿಲೊಪ್ಪುವ ವೇಣುವಿನ ಘನರವಬ್ರಹ್ಮ ಗಂಧರ್ವರ ಗಾನ ಬಗೆಗೆ ಮೀರುವ ದೇವ 11ಸುಲಲಿತಂದುಗೆ ಗೆಜ್ಜೆ ಸಂದ್ರೇಖೆ ಶೋಭಿತಹೆಜ್ಜೆಕೆಲದ ಗೋಪಾಂಗನೇರ ಕಾಮಧೇನು ಸಾರೋತ್ತರ 12ಧರೆಗೆರಗಿದ ಜಡೆ ಸಲೆ ಕಾಳಿಂದಿ ಮೇಲಾಡೆ ಸಕಳ ಪಕ್ಷಿಮೃಗವು ಸಂಚರಿಸದೆ ನಿಂದವು 13ಜಡಂಗಳು ಚೇತರಿಸೆ ಜನದ ಚೇಷ್ಟೆ ಥಂಬಿಸೆಕಡುರಸತುಂಬಿತುಳುಕಲಜಭವಾಂಡೊಲಿಯಲು14ವೃಕ್ಷಗಳ ಶೃಂಗಾರಿಯ ವತ್ಸಗಳಾವದೊರೆಯಈಕ್ಷಿಸಿ ತೃಣ ಮೆಲ್ಲದೆಯಿದ್ದವು ಗೀತಕೇಳುತ 15ನೀರಸ ತರುಫಲಾಗೆ ನಿತ್ಯಪ್ರಜÕತೆಗೆನೀರದಗೆ ಸ್ವರಗೈಯೆ ನಿಗಮನಯ್ಯ ಮರೆಯ 16ಮಂಗಳಮೇಘಘರ್ಜನೆ ಮಾಡಿದವು ಮೆಲ್ಲಮೆಲ್ಲನೆರಂಗನ ಮೇಲಮೃತ ಧಾರೆಯವಿತ್ತವರ್ಥಿಯಿಂದ 17ನಂದವ್ರಜದ ವನವು ನಂದನ ಚೈತ್ಯಾಧಿಕವುನಂದಸೂನುವಿನ ಗೀತ ನಾದ ವೇದಾನಂತಾನಂತ 18ಕಮಲಜ ಭವೇಂದ್ರಾದಿಕರು ಭ್ರಾಂತಿಯನೈದಿದರುಅಮರಜನ ನಾರೇರು ಅಂಗಜವಶವಾದರು 19ಗೋಷ್ಠದ ಗೊಲ್ಲ ಗೋಪೇರ ಗೋವರ್ಧನ ಗೋಪಾಲರದೃಷ್ಟಕೆ ಸುರಮುನಿ ಗಂಧರ್ವರು ಪೊಗಳಿದರಾಗ 20ಸುರಭ್ಯಾಗಾರದಿ ಕೃಷ್ಣ ಸಂಚರಿಸಲು ಸರ್ವೇಷ್ಠಪೂರಣವಪ್ಪಿತುಧರೆಪರಮಮಂಗಳ ಸಾರಿ21ಸುರರುಸುಖ ಸಂಭೃತ ಶರಧಿಯೊಳೋಲಾಡುತಸಿರಿಮಂಗಳವ ಹೇಳಿ ಸುರಿದರರಳ ಮಳೆ22ಪ್ರಸನ್ನತರ ಚರಿತ ಪ್ರಸನ್ನಾವ್ಯಾಕೃತಗಾತ್ರಪ್ರಸನ್ನಪೂರ್ಣ ಪ್ರಜೆÕೀಷ್ಠ ಪ್ರಸನ್ನವೆಂಕಟಕೃಷ್ಣ 23
--------------
ಪ್ರಸನ್ನವೆಂಕಟದಾಸರು
ಮಂದಗಮನೆ, ಇವನಾರೆ ಪೇಳಮ್ಮ |ಮಂದರಧರಗೋವಿಂದ ಕಾಣಮ್ಮಪಕೆಂದಳಿದನಖಶಶಿಬಿಂಬ ಪಾದಪದ್ಮ |ಅಂದುಗೆಯಿಟ್ಟವನಾರು ಪೇಳಮ್ಮ ||ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ |ನಂದನ ಕಂದ ಮುಕುಂದ ಕಾಣಮ್ಮ 1ಉಡುಗೆ ಪೀತಾಂಬರ ನಡುವೀಣೆ ಉಡುದಾರ |ಕಡಗ-ಕಂಕಣವಿಟ್ಟವನಾರಮ್ಮ ||ಮಡದಿ ಕೇಳ್ ಸಕಲಲೋಕಂಗಳ ಕುಕ್ಷಿಯೊಳ್ |ಒಡನೆ ತೋರಿದ ಜಗದೊಡೆಯ ಕಾಣಮ್ಮ 2ನೀರದನೀಲದಂತೆಸೆವ ವಕ್ಷದಿ ಕೇ-|ಯೂರ-ಹಾರಗಳನಿಟ್ಟವನಾರಮ್ಮ ||ನೀರೆ ಕೇಳು ನಿರ್ಜರರಾದವರಿಗೆ |ಪ್ರೇರಿಸಿ ಫಲವಿತ್ತು ದಾರಿ ಕಾಣಮ್ಮ 3ಶಂಖ ಚಕ್ರವ, ಗದೆ-ಪದ್ಮ ಕೈಯೊಳಗಿಟ್ಟ-|ಲಂಕೃತನಹನೀತನಾರಮ್ಮ ||ಪಂಕಜಮುಖಿಶ್ರೀಭೂದೇವಿಯರರಸನು |ಶಂಕೆಇಲ್ಲದೆ ಗೋಪೀತನಯ ಕಾಣಮ್ಮ4ಕಂಬುಕಂಧರಕರ್ಣಾಲಂಬಿತಕುಂಡಲ|ಅಂಬುಜಮುಖದವನಾರೆ ಪೇಳಮ್ಮ ||ರಂಭೆ ಕೇಳೀತ ಪುರಂದರವಿಠಲ |ನಂಬಿದ ಭಕ್ತಕುಟುಂಬಿ ಕೇಳಮ್ಮ 5
--------------
ಪುರಂದರದಾಸರು
ಮನವೆ ಚಂಚಲ ಮತಿಯ ಬಿಡು - ನಮ್ಮ |ವನಜನಾಭನ ಪಾದಭಜನೆಯಮಾಡುಪ.ಬಡಮನುಜಗೆ ಬಾಯಬಿಡುವ ದೈನ್ಯದಲವನ |ಅಡಿಗಳಿಗೆರಗಲು ಕೊಡುವನೇನೊ ||ಕಡಲಶಯನ ಜಗದೊಡೆಯನ ನೆನೆಯಕ್ಕೆ - |ಪಿಡಿದು ತಾ ಸಲಹುವ ಬಿಡದಲೆಅನುಗಾಲ1ಬಲ್ಲಿದ ಭಕುತರ ಬಲ್ಲವ ಬಹುಸಿರಿ |ಯುಳ್ಳ ಕರುಣಿ ಲಕ್ಷ್ಮೀನಲ್ಲನಿರೆ ||ಕ್ಷುಲ್ಲಕರನು ಕಾಯಸಲ್ಲದೆಂದೆಂದಿಗುನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ 2ಮುಗಿಲು ಮೇಲದೆಗಡೆ ಅಗಣಿತವಾದಾಪ - |ತ್ತುಗಳು ಬಂದಡರಲು ನಗುತಲಿರು ||ಜಗದಧೀಶನ ಮಹಿಮೆಗೆ ನಮೋ ನಮೋ ಎಂದು |ಪೊಗಳುತ ಬಾಳು ನೀ ಅಘಗಳ ಗಣಿಸದೆ 3ಆವಾವ ಕಾಲಕೆ ದೇವನಿಚ್ಛೆಯಿಂದ |ಆವಾವುದು ಬರೆ ನಿಜಸುಖವೆನ್ನು ||ಶ್ರೀವರ ಅನಾದಿಜೀವರ ಕ್ಲಪ್ತದಂತೆ |ಈವನು ನಿಜಸ್ವಭಾವ ಬಿಡದೆನಿತ್ಯ4ಕೇಶವಾಚ್ಯುತ ಶ್ರೀನಿವಾಸ ಮುರಾರೇ |ದೋಷರಹಿತ ದೀನ ಪೋಷಕನೆನ್ನು ||ಮೋಸಗೊಳಿಪ ಭವಪಾಶವ ಖಂಡಿಪ |ಶ್ರೀಶ ಪುರಂದರವಿಠಲನು ಜಗಕಿರೆ 5
--------------
ಪುರಂದರದಾಸರು
ಮನೆಯೊಳಗಾಡೊ ಗೋವಿಂದ-ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ಪನೊಸಲಿಗೆ ತಿಲಕವನಿಡುವೆ-ಅಚ್ಚ-|ಹೊಸಬೆಣೆಯಿಕ್ಕಿ ಕಜ್ಜಾಯವ ಕೊಡುವೆ ||ಹಸನಾಧಾಭರಣಗಳಿಡುವೆ-ಚಿಕ್ಕ-|ಹಸುಳೆ ನಿನ್ನನು ನೋಡಿ ಸಂತೋಷಪಡುವೆ 1ಅಣ್ಣಯ್ಯ ಬಲರಾಮಸಹಿತ-ನೀ-|ನಿನ್ನೆಲ್ಲಿಯಾದರೂ ಆಡುವುದು ವಿಹಿತ ||ಹೆಣ್ಣುಗಳೇಕೋ ಸಂಗಾತ-ರಂಗ |ಬಿನ್ನಪಪರಿಪಾಲಿಸೊ ಜಗನ್ನಾಥ2ಜಾರನೆನಿಸಿಕೊಳಲೇಕೆ-ರಂಗ-|ಚೋರನೆನಿಸಿಕೊಂಬ ದೂರು ನಿನಗೇಕೆ ||ವಾರಿಜಾಕ್ಷಿಯರ ಕೂಡಲೇಕೆ-ನಮ್ಮ-|ಪುರಂದರವಿಠಲರಾಯ ಎಚ್ಚರಿಕೆ 3
--------------
ಪುರಂದರದಾಸರು
ಮನ್ನಾರು ಕೃಷ್ಣಗೆ ಮಂಗಳ ಜಗವಮನ್ನಿಸಿದೊಡೆಯಗೆಮಂಗಳ ಪ.ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆಕಮ್ಮಗೋಲನಯ್ಯಗೆ ಮಂಗಳ ||ಧರ್ಮಸಂರಕ್ಷಗೆ ದಾನವ ಶಿಕ್ಷಗೆನಮ್ಮ ರಕ್ಷಕನಿಗೆ ಮಂಗಳ 1ತುರುಗಳ ಕಾಯ್ದಗೆ ಕರುಣಾಕರನಿಗೆಗಿರಿಯನೆತ್ತಿದನಿಗೆ ಮಂಗಳ ||ಪುರದ ತಿಮ್ಮಪ್ಪಗೆ ವಾರಿಜನಾಭಗೆಹರಿರ್ವೋತ್ತಮನಿಗೆ ಮಂಗಳ 2ದೇವಕಿ ದೇವಿಯ ತನಯಗೆ ಮಂಗಳದೇವ ತಿಮ್ಮಪ್ಪಗೆ ಮಂಗಳ ||ಮಾವನ ಕೊಂದು ಮಲ್ಲರ ಮಡುಹಿದಪುರಂದರವಿಠಲಗೆ ಮಂಗಳ 3
--------------
ಪುರಂದರದಾಸರು
ಮರತೆ ಮರತೆ ಬಗಳ ಮಹಾಮಂತ್ರವಸುರತರುವಿಗೆ ತರುವಾದ ಬ್ರಹ್ಮಾಸ್ತ್ರವಪಭುಗುಭುಗಿಸಿ ಭುವನಗಳನ್ನೆಲ್ಲಾ ಪಾಲಿಪ ಮಂತ್ರಧಗಧಗಿಸಿ ಝಗ ಝಗಿಸಿ ನಿಗಿ ನಿಗಿವ ಮಂತ್ರಜಗದೊಡೆಯರಾದವರಿಗೆ ಒಡೆಯಳ ಮಂತ್ರತಗತಗನೆ ಶತಕೋಟಿರವಿಸೂಸುವ ಮಂತ್ರ1ಸರಸಿಜಾಸನ ತಾನೆ ಜಪಿಸುತಿಹ ಮಂತ್ರಹರಿಹರರುಅನವರತಸ್ಮರಿಸುವಾ ಮಂತ್ರಸುರಪ ಇಂದ್ರಾಗ್ನಿಗಳಿಗಭಯ ನೀಡಿಹ ಮಂತ್ರದುರುಳರಿಪು ವನಗಳಿಗೆದಾವಾಗ್ನಿಮಂತ್ರ2ಹರಿಯ ಸಮಭಾಗ್ಯ ಕೋ ಎಂದು ಕೊಡುವ ಮಂತ್ರಹರಗೆ ಸರಿಯಾದ ಸತ್ವವನೀವ ಮಂತ್ರಗುರುಚಿದಾನಂದ ತಾನಾದ ಬಗಳ ಮಹಾ ಮಂತ್ರಪರಬ್ರಹ್ಮ ಸತ್ಯ ಬ್ರಹ್ಮಾಸ್ತ್ರ ಮಂತ್ರ3
--------------
ಚಿದಾನಂದ ಅವಧೂತರು
ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಪ.ಒಂಟಿ ಕೊಂಬಿನ ಪಕ್ಷಿ ಒಳಗೆ ಕರುಳಿಲ್ಲಗಂಟಲು ಮೂರುಂಟು ಮೂಗು ಇಲ್ಲಕುಂಟು ಮನುಜನಂತೆ ಕುಳಿತಿಹುದು ಮನೆಯೊಳಗೆಎಂಟು ಹತ್ತರ ಭಕ್ಷ ಭಕ್ಷಿಸುವುದು 1ನಡುವೆ ತಲಿಯೆಂಬುವದು ನಡು ನೆತ್ತಿಯಲಿ ಬಾಯಿಕಡು ಸ್ವರಗಳಿಂದ ಗಾನ ಮಾಡ್ವದುಅಡವಿಯಲಿ ಹುಟ್ಟುವುದು ಅಂಗವೆರಡಾಗುವುದುಬಡತನ ಬಂದರೆ ಬಹಳ ರಕ್ಷಿಪುದು 2ಕಂಜ ವದನೆಯರ ಕರದಲ್ಲಿ ನಲಿದಾಡುವುದುಎಂಜಲನುಣಿಸುವುದು ಮೂರ್ಜಗಕೆರಂಜಿಪಶಿಖಾಮಣಿ ಸಿಂಹಾಸನದ ಮೇಲಿಪ್ಪಸಂಜೀವ ಪಿತ ಪುರಂದರವಿಠಲನೇ ಬಲ್ಲ * 3
--------------
ಪುರಂದರದಾಸರು
ಮರವನೇರಿ ಮಡುವದು ಮುಂದಾ ಶ್ರೀ ಕೃಷ್ಣ ಕಾಳಿಶಿರವನೇರಿ ತಾಂಡವವಾಡಿದಾಸ್ಮರಿಸಲವನ ತರುಣಿಯರಿಗೆ ವರವ ಪ್ರಾಣವಿರಿಸಿ ಕೊಟ್ಟುಶಿರದಿಚರಣಗುರುತನಿರಿಸಿ ಪೊರೆದ ಕಾಳಿಂಗನನು ಕೃಷ್ಣ 1ರಜತಗಿರಿಗೆ ಸದೃಶವೆನಿಸಿದ ಶ್ರೀಕೃಷ್ಣ ಯಮ-ಳಾರ್ಜುನವೆಂಬ ಮರವ ಕೆಡಹಿದಅಜಗರನ ನಿಜ ಉರಕೆ ಬಿಜಯಂಗೈದು ಸುಜನೋದ್ಭಾರಿಭಜಿಸೆ ಗೋವ್ರಜವ ಕಾಯ್ದ ಅಜಗರನ ಸೀಳಿ ಕೃಷ್ಣ 2ಚಂದ್ರಮುಖಿಯರುಡುವ ಶೀರೆಯ ಶ್ರೀಕೃಷ್ಣನು ಮರದಿಬಂಧಿಸಿಟ್ಟು ಮಾನಗಳೆವೆಯಾನಂದನನ್ನು ಬಂದು ತುಡುಕಿದಂದು ಫಣಿಯ ಹೊಂದಿಸಿದೆನಂದಗೋಪಿ ಕಂದ ಗೋವಿಂದದಾಸವಂದ್ಯ 3
--------------
ಗೋವಿಂದದಾಸ
ಮರುತ ದೇವರ ಹೊಂದಿರೋ ಮೂಜಗದ |ಗುರುಮರುತ ದೇವರ ಹೊಂದಿರೋ ಪಮರುತ ದೇವರ ಹೊಂದಿದವರ ಪಾಪವು ಪೋಗಿ |ಹರಿಮಂದಿರವನೈದುವದಕೆ ಸಂದೇಹವಿಲ್ಲ ||ಅ. ಪ||ದಶರಥ ಸುತನಂಗನೆಯ ಕದ್ದೊಯ್ದಿರಲಾಗಿ |ದಶಕವಾನರಸ್ತೋಮರವಿಜನಾಜ್ಞಾ ||ದೇಶದಿಂದೆಲ್ಲರಾಶೆ ಭಯದಲಡಗಿ ರಕ್ಷಿಸೋ |ಶ್ವಸನಾ ಯೆನಲು ಪೋಗಿ ಶೀಘ ್ರವಾರ್ತೆಯ 1ಕುರುಜನುಪಟಳಕೆ ಪಾರ್ಥಾರಳಲಿವನ|ಚರಿಸಲುತವಕಬೀಳದೆ ಪ್ರಾಂತಕ್ಕೆ ||ದುರುಳರ ಸದೆದು ಭೂಭಾರವ ಕಳೆದು ಸಹೋದ- |ರರ ಪ್ರೀತಿಪಡಿಸಿ ಕೃಷ್ಣನ ದಯೆ ಪಡೆದ 2ಗುಣಪೂರ್ಣಅನಘಶ್ರೀ ಪ್ರಾಣೇಶ ವಿಠಲನ ನಿ- |ರ್ಗುಣನೆಂದು ಅಸುರರು ದುರ್ಮತ ಸ್ಥಾಪಿಸೆ ||ಘನಶಾಸ್ತ್ರ ವಿರಚಿಸಿ ಐಕ್ಯವ ಬಿಡಿಸಿ ಸ |ಜ್ಜನರ ಪೊರೆವ ಶ್ರೀ ಆನಂದ ಮುನಿಪರೆಂಬ 3
--------------
ಪ್ರಾಣೇಶದಾಸರು
ಮರುಳಾಟವ್ಯಾಕೆ ಮನುಜಗೆ ಮರುಳಾಟವ್ಯಾಕೆಹರಿಭಕ್ತನಲ್ಲದವಗೆ ಹಲವಂಗವ್ಯಾಕೆ ಪ.ಮೃತ್ತಿಕಾಶೌಚವಿಲ್ಲದೆ ಮತ್ತೆ ಸ್ನಾನ ಜಪವ್ಯಾಕೆಹತ್ತು ಕಟ್ಟದವಗೆ ಅಗ್ನಿಹೋತ್ರವ್ಯಾತಕೆತೊತ್ತುಬಡಕಗೆ ಬಹು ತತ್ವವಿಚಾರವ್ಯಾಕೆಕರ್ತಕೃಷ್ಣನ್ನೊಪ್ಪದ ವಿದ್ವತ್ತವ್ಯಾತಕೆ1ಹಸಿವೆತೃಷೆತಾಳದವಗೆಹುಸಿವೈರಾಗ್ಯವ್ಯಾತಕೆವಿಷಮ ಚಿತ್ತಗೆ ಪರರ ಕುಶಲ ಬಯಕ್ಯಾಕೆದಶ ಜಪ ಮಾಡಲಾರ ಮುಸುಕಿನ ಡಂಬವ್ಯಾಕೆಕುಶಶಾಯಿಗರ್ಪಿಸದ ಅಶನವ್ಯಾತಕೆ 2ಮೂಲಮಂತ್ರವರಿಯದ ಮೇಲೆ ದೇವಾರ್ಚನೆ ಯಾಕೆಸಾಲಿಗ್ರಾಮವಿಲ್ಲದ ತೀರ್ಥವ್ಯಾತಕೆಸೂಳೆಗಾರಗೆ ತುಳಸಿಮಾಲೆ ಶೃಂಗಾರವ್ಯಾಕೆಮೇಲೆ ಮೇಲೆ ಹರಿಯೆನ್ನದ ನಾಲಿಗ್ಯಾತಕೆ 3ಊಧ್ರ್ವಪುಂಡ್ರಿಲ್ಲದಾಸ್ಯ ತಿದ್ದಿನೋಡಬೇಕ್ಯಾಕೆಶುದ್ಧ ಸಾತ್ವಿಕವಲ್ಲದ ಬುದ್ಧಿ ಯಾತಕೆಕದ್ದು ಹೊಟ್ಟೆ ಹೊರೆವವಗೆ ಸಿದ್ಧ ಶೀಲವೃತ್ತಿಯಾತಕೆಮಧ್ವ ಮತವÀ ಬಿಟ್ಟಿತರ ಪದ್ಧತ್ಯಾತಕೆ 4ಕಂಡ ನಾರೇರಿಚ್ಛೈಸುವ ಲೆಂಡಗೆ ಪುರಾಣವ್ಯಾಕೆಭಂಡು ಮಾತಿನ ಕವಿತ್ವ ಪಾಂಡಿತ್ಯಾತಕೆಕುಂಡಲಿಪ್ರಸನ್ವೆಂಕಟ ಮಂಡಲೇಶನ ಶ್ರೀಪಾದಪುಂಡರೀಕಬಿಟ್ಟವನ ವಿತಂಡವ್ಯಾತಕೆ5
--------------
ಪ್ರಸನ್ನವೆಂಕಟದಾಸರು